ಒಟ್ಟು 6899 ಕಡೆಗಳಲ್ಲಿ , 128 ದಾಸರು , 4614 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಲಿಂಗವ ಕಟ್ಟುವ ವಿವರವ ಹೇಳುವೆತಲೆವಾಗಿ ಕೇಳಲೆ ಹುಚ್ಚು ಬಡ್ಡಿಲಿಂಗ ಕಟ್ಟಿದೆಯಾದರೆ ಚಿದಾನಂದಲಿಂಗವಾಗುವೆ ಹುಚ್ಚು ಬಡ್ಡಿಪಹೊಟ್ಟೆಯೊಳಗಿರೆ ತಾಯಿಗೆ ಲಿಂಗವಕಟ್ಟುವೆಯೋ ಹುಚ್ಚು ಬಡ್ಡಿಮುಟ್ಟುಮಿಂದಿರೆ ಬಿಂದು ಬೀಳುವಾಗ ಲಿಂಗವಕಟ್ಟಿದೆಯಾ ಹುಚು ಬಡ್ಡಿಕಟ್ಟುವೆ ಯಾರಿಗೆ ಕಟ್ಟಿಕೊಂಬವನಾರುಇಷ್ಟು ಅರಿಯೆ ಹುಚ್ಚು ಬಡ್ಡಿಕಟ್ಟಿದೆಯಾದರೆ ಅಂಗವೆ ನೀನಾಗುನಿಜಲಿಂಗನಹೆ ಹುಚ್ಚು ಬಡ್ಡಿ1ಲಿಂಗ ಹೋಯಿತು ಎಂದು ಪ್ರಾಣವ ಕೊಡುವೆಯೋಲಿಂಗ ಹೋಯಿತೆ ಹುಚ್ಚು ಬಡ್ಡಿಲಿಂಗವು ಹೋದರೆ ನೀನು ಉಳಿವುದೆಂತುಲಿಂಗವು ನೀ ಹುಚ್ಚು ಬಡ್ಡಿಲಿಂಗವ ನೀನೆರಡಾಗಿ ಲಿಂಗವ ಕಟ್ಟಿಹೆಲಿಂಗಾಗಿಯೇ ಹುಚ್ಚು ಬಡ್ಡಿಅಂಗ ಸಜ್ಜೆಯು ಆಗಿ ಲಿಂಗವೇ ನೀನಿರೆಲಿಂಗ ಕಟ್ಟಿದೆ ಹುಚ್ಚು ಬಡ್ಡಿ2ಲಿಂಗವನೆ ಕಟ್ಟಿನಿದ್ರೆಯ ಮಾಡಲುಲಿಂಗವೆಲ್ಲಿತ್ತೋ ಹುಚ್ಚು ಬಡ್ಡಿಲಿಂಗವ ನೀನೀಗ ಲಿಂಗೆಂದು ಪೂಜಿಸನೀನಾರೋ ಎಲೆ ಹುಚ್ಚುಬಡ್ಡಿಲಿಂಗ ಚಿದಾನಂದ ಸದ್ಗುರುವನು ಹೊಂದುಲಿಂಗವ ತಿಳಿವೆ ಹುಚ್ಚು ಬಡ್ಡಿಲಿಂಗವ ತಿಳಿದ ಬಳಿಕ ಲಿಂಗಅಂಗವು ಅಂಗ ಲಿಂಗವು ಹುಚ್ಚು ಬಡ್ಡಿ3
--------------
ಚಿದಾನಂದ ಅವಧೂತರು
ಲಿಂಗವಾದವ ಲಿಂಗನಹನೆಲಿಂಗವಾಗಿ ತಾನಿರೆ ಅಂಗವೆನಿಸಬಲ್ಲನೆಲಿಂಗ ಬೋಧಮತಂಗ ಅಮೃತಗಂಗಮುಕ್ತಿಗೆಅನಂಗದೀಪ್ತಿಯ ತರಂಗರಂಗಲಿಂಗ ಲಿಂಗ ನಿಜ ಸಂಯೋಗಿರಲಿಕೆಲಿಂಗ ಸಹಜ ಅಖಂಡವೇ ತಾನಾದಪಮುತ್ತು ನೀರಿನರಲಿಕೆ ಮುತ್ತು ನೀರಹುದೇಮತ್ತೇ ಆಪರಿ ಆತ್ಮ ಲಿಂಗನಹನೇಮುತ್ತು ಸರ್ವಾಂಗಕ್ಕಿತ್ತು ಕಳೆಯದೊತ್ತೊತ್ತುಭ್ರಾಂತಿ ಹಾರಿತ್ತು ಸುಖವು ಬಂದಿತ್ತು ಇತ್ತುಸುತ್ತಮುತ್ತ ಬರಿ ಬೋಧವೆ ತುಂಬಿವೆಚಿತ್ತ ಸತ್ತು ಚಿನ್ಮಾತ್ರವೆ ತಾನಾದಾ1ಫಲವದು ಫಕ್ವವಾಗೆ ಪಕ್ವವು ಕಾಯಹುದೇತಿಳಿಯೆ ಆಪರಿ ಆತ್ಮ ಲಿಂಗನಹನೇಫಲವು ಫಲವು ಪ್ರಣವದ ಒಲವುಶುಕ್ರರೂ ಹಲವು ತೇಜದ ಬಲವು ಆನಂದ ನಿಲುವು ನಿಲುವುಕಳೆಯೊಳಗೆ ತಾ ಥಳಥಳಿಸುತ ಬಲುಪ್ರಭಾವವಾಗಿಹ ಪರಮನೆ ತಾನಾದ2ದೇವವೃಕ್ಷಾದುದು ಈಗ ಸನಿಯಹುದೇಜೀವಿ ಆಪರಿಆತ್ಮ ಲಿಂಗನಹನೇದೇವ ಭಕ್ತ ಸಂಜೀವ ಜÕಪ್ತಿಯಭಾವಎಲ್ಲ ತುಂಬಿರುವಆವಾಗಈವಈವಜೀವ ಹೋಗಿ ಚಿದಾನಂದನೆ ತಾನಾಗಿಆವಾವ ಕಾಲದಿ ಬ್ರಹ್ಮವೆ ತಾನಾದ3
--------------
ಚಿದಾನಂದ ಅವಧೂತರು
ಲಿಸಂಗವಾಗಲಿ ಸಾಧು ಸಂಗವಾಗಸಂಗದಿಂದ ಲಿಂಗದೇಹ ಭಂಗವಾಗಲಿ ಪ.ಅಚ್ಯುತಾಂಘ್ರಿ ನಿಷ್ಠರಾದ್ಯದೃಚ್ಛಲಾಭ ತುಷ್ಟರಾಧನಿಶ್ಚಯ ಜ್ಞಾನವಂತರಾದ ಅಚ್ಚ ಭಾಗವತರನಿತ್ಯ1ತಂತ್ರಸಾರಅಷ್ಟಮಹಾಮಂತ್ರ ಪರಿಪೂರ್ಣ ಸ್ನೇಹಯಂತ್ರದಿಂದ ಜಗತ್ಸ್ವಾತಂತ್ರ್ರ್ಯನ ಗುರಿ ಮಾಡುವವರ 2ಪಂಚಸಂಸ್ಕಾರ ಭೇದ ಪಂಚಕಯುಕ್ತರಾಗಿ ಪ್ರಪಂಚಸೂತ್ರಪ್ರಸನ್ನವೆಂಕಟ ಪಂಚಬಾಣನಯ್ಯನವರ3
--------------
ಪ್ರಸನ್ನವೆಂಕಟದಾಸರು
ಲೊಳ್ಳ ಕಳ್ಳೊಟ್ಟೆ ಜಂಬಾಳಗಟ್ಟೆ ಸಂಸಾರ ನೋಡಮ್ಮಲೊಳ್ಳ ಕಳ್ಳೊಟ್ಟೆ ಸರಸನಂಬಲುಗತಿಯದು ಲೊಳ್ಳಟ್ಯಮ್ಮಮ್ಮಪಹೆಂಡಿರು ಮಕ್ಕಳು ತಂದೆ ತಾಯಿಗಳುಭಾಗ್ಯವು ಲೊಳ್ಳಟ್ಯಮ್ಮಮ್ಮಚಂಡ ಯಮದೂತರುಮಂಡೆತಿವಿವಾಗಬಿಡಿಸುವರಾರು ಇಲ್ಲಮ್ಮ1ಶ್ರೇಷ್ಠತೆ ಚೆಲುವಿಕೆ ವಸ್ತ್ರವು ಪ್ರಾಯವುಸಿದ್ಧಿಯು ಲೊಳ್ಳಟ್ಯಮ್ಮಮ್ಮದುಷ್ಟಮದೂತರು ದುಬುದುಬು ಬಡಿವಾಗಬಿಡಿಸುವರಾರು ಇಲ್ಲಮ್ಮ2ವಾರೆ ಮುಂಡಾಸವು ಗೀರು ಗಂಧಗಳುಪೋರತನವು ಲೊಳ್ಳಟ್ಯಮ್ಮಮ್ಮಘೋರ್ಯಮದೂತರು ಘರ್ಜಿಸುತ ಒಯ್ವಾಗಬಿಡಿಸುವರಾರು ಇಲ್ಲಮ್ಮ3ಕನಸಿನ ತೆರವಿದು ಸಂಸಾರವೆಂಬುದುಅನುಮಾನವಿದಕಿಲ್ಲಮ್ಮಮ್ಮಕನಸೆಂದು ನಿಶ್ಚೈಸೆ ಕಾಲನು ಬಾರನುಮನದಲಿ ತಿಳಿದುಕೊ ನೀನಮ್ಮ4ತನ್ನನು ಮರೆತು ಸಂಸಾರ ನೆಚ್ಚಲುತಿರುಗುವ ಜನ್ಮವ ನಮ್ಮಮ್ಮಚೆನ್ನ ಚಿದಾನಂದ ಗುರುವೆಂದು ನಂಬಲುಜನ್ಮವ ಕಳೆವುವು ತಿಳಿಯಮ್ಮ5
--------------
ಚಿದಾನಂದ ಅವಧೂತರು
ಲೋಕನೀತಿ379ಇಂದೀಗ ಹರಿದಿನವು ಏಕಾದಶಿಯೆಂದುಶೋಭಿಪ ದಿನವುಪಚಂದಾದಿ ವಿಷ್ಣುಸಾಯುಜ್ಯ ಹೊಂದುವುದಕ್ಕೆಅಂದವಾಗಿಹ ದಿನ ಸಂದೇಹವಿಲ್ಲವುಅ.ಪಶರಧಿಮಥಿಸೆ ಸುಧೆಯೂ ಬರಲು ಕಂಡುದುರುಳರೊಯ್ಯಲೂ ಹರಿಯೂಸರ್ವರಿಗುಪವಾಸವೆಂದು ತಾನ್ ಸೆಳೆದನುವರವಿತ್ತ ಮಾಸಕ್ಕೆ ಎರಡೇಕಾದಶಿಯೆಂದೂ1ದಶಮಿ ಒಂದಶನಾಗೈದೂ ಏಕಾದಶಿ ದಿವಸುಪವಾಸವಿರ್ದುಕುಸುಮನಾಭನ ಪೂಜೆಗೈದು ತೀರ್ಥವಗೊಂಡುನಿಶೆಯೊಳ್ ಜಾಗರವಿದ್ದು ಹರಿಕಥೆ ಕೇಳ್ವುದೂ2ವೀಳ್ಯ ಭೋಜನ ಪಾನವೂ ಈ ದಿನರತಿಕೇಳಿನಿದ್ರೆಯು ವಜ್ರ್ಯವೂಖೂಳನಾದರೆ ಯಮನಾಳೊಳ್ ಪಿಡಿದೊಯ್ದುಗೋಳುಗುಡಿಸುವ ಹೇಳಲಸಾಧ್ಯವು3ಅಶನಕ್ಕೆ ಬಿಸಿ ಮಳಲು ತಿನಿಸೀ ವೀಳ್ಯವ್ಯಸನ ಪಾನಕೆ ಉಕ್ಕಂ ತರಸಿ ಬಾಯ್ಗೆರಸಿಮುಳ್ಳು ಹಾಸಿಗೆ ಮೇಲೆ ಮಲಗೆಂದು ಹೊ-ರಳಿಸಿ ಉರಿಕಂಭ ಧರಿಸೆಂಬರ್ಸತಿಪುರುಷರಿಗೆ4ಧ್ರ್ರುವ ಹರಿಶ್ಚಂದ್ರ ಪ್ರಹ್ಲಾದ ತನ್ನಭುವನಕಟ್ಟಳೆಯೊಳ್ ರುಕ್ಮಾಂಗದಭವಹರವ್ರತಗೈದು ಹರಿಪಾದ ಸೇರ್ವರುಭುವನದಿ ಸರ್ವರಿಗ್ಯೋಗ್ಯವೀ ವ್ರತವೂ5ದ್ವಾದಶಿ ವ್ರತವೆಂಬುದು ಶ್ರೇಷ್ಠವು ಬೇಗಸಾಧಿಸಿ ಪಾರಣೆಗೈವುದೂಮೇದಿನಿಯೊಳಂಬರೀಷ ನೀ ವ್ರತಗೈದೂಆದಿಮೂರುತಿ ಗೋವಿಂದನ ಪಾದಸೇರ್ದನೂ6<?xmಟ veಡಿsioಟಿ='1.0' eಟಿಛಿoಜiಟಿg='uಣಜಿ-8'?>
--------------
ಗೋವಿಂದದಾಸ
ಲೋಕಪಾಲಕರು96-1ಪೂರ್ಣ ಸುಗುಣಾಂಬೋಧಿಅನಘಲಕ್ಷ್ಮೀರಮಣಜ್ಞಾನಾದಿನಿಖಿಳಸೌಭಾಗ್ಯದನೆ ಸ್ವಾಮಿಅನವರತಸರ್ವ ದಿಕ್ಪಾಲಕರೊಳಿದ್ದು ನೀಎನ್ನ ರಕ್ಷಿಪ ವಿಭುವೆ ಶರಣು ಮಾಂಪಾಹಿಪಇಂದ್ರಾಗ್ನಿ ಯಮ ನಿಯಯತಿ ವರುಣ ವಾಯುಚಂದ್ರ ನಿಧಿಪತಿ ಈಶಾನಫಣಿಬ್ರಹ್ಮಇಂದಿರಾಪತಿ ಸದಾ ನಿಮ್ಮೊಳು ನಿಂತು ಆನಂದ ಸರ್ವೇಷ್ಟಗಳಈವಸ್ಮರಿಪರಿಗೆ1ವಾಮ ಹಸ್ತದಿ ವಜ್ರಬಲ ಕರವು ಅಭಯದವುಹೇಮವರ್ಣನೆ ಸಹಸ್ರಾಕ್ಷಸುರರಾಜಕಾಮಿತಾರ್ಥವನೀವೆ ಐರಾವತಾರೂಢನಮೋ ಶಚೀಪತಿ ಇಂದ್ರ ಶ್ರೀಶಪ್ರಿಯತರನೆ 2ಹೇಮವರ್ಣಾಂಗನೆ ಸಪ್ತಕರ ಸಪ್ತಾರ್ಚಿನಮೋ ಸ್ವಾಹಾಪತಿ ಅಗ್ನಿ ಮೇಷವಾಹನನೆಕಾಮದನೆ ದುರಿತಹನೆ ಹರಿಣೀಶಪ್ರಿಯಕರನೆನಮೋ ಶ್ರುವಾಶಕ್ತ್ಯಾದಿಧರ ಅಭಯಹಸ್ತ 3ಜ್ಞಾನಸುಖಮಯ ವಿಷ್ಣುಯಜÕನಿಗೆ ಪ್ರಿಯತರನೆಕೃಷ್ಣವರ್ಣನೆ ಲೋಕಕರ್ಮಫಲಪ್ರದನೆದಂಡಧರ ಅಭಯದನೆ ಮಹಿಷವಾಹನ ಯಮನೆಎನ್ನ ಮನ್ನಿಸಿಪೊರೆಇಲಾಪತಿಯೆ ಶರಣು4ಅಸುರರಿಗೆ ಭೀಕರ ಕರಾಲ ವಿರೂಪಾಕ್ಷನೆಅಸಿಧರನೆ ಅಭಯದನೆ ಶರಣು ಮಾಂಪಾಹಿನೃಸಿಂಹಪ್ರಿಯತರನೆ ಕಾಳಿಕಾಪತಿ ಊಧ್ರ್ವಕೇಶ ನಿಋಋತಿನೀಲನರವಾಹ ನಮಸ್ತೆ5ಮೀನ ವಡವಕಮಠಕ್ರೋಡನಿಗೆ ಪ್ರಿಯತರನೆಸ್ವರ್ಣವರ್ಣನೆ ವರುಣ ಪದ್ಮಿನೀರಮಣವನಪತಿಯೆ ಮಕರವಾಹನ ಹವಳಭೂಷಣನೆನಿನಗೆ ನಮೋ ಪಾಶಧರ ಅಭಯದನೆಪಾಹಿ6ನಿಯಮನ ಸುಕರ್ತಾ ಶ್ರೀ ಪುಂಡರೀಕಾಕ್ಷನಿಗೆಪ್ರಿಯತರನೆ ಹರಿಣವಾಹನ ಮೋಹಿನೀಶಶ್ಯಾಮವರ್ಣನೆ ವಾಯು ಜಗತ್ ಪ್ರಾಣರೂಪನೆಕಾಯೆನ್ನ ದಯದಿ ಗದಾಪಾಣಿ ಅಭಯದನೆ 7ಸಾರಾತ್ಮ ಹಯಮುಖ ಧನ್ವಂತರಿ ಪ್ರಿಯತರನೆಸೂರಿಜನ ಚಿಂತ್ಯ ನೀ ಸಿತಕಾಂತಿಕಾಯಪೊರೆಎನ್ನ ಅಭಯದನೆ ರೋಹಿಣೀಪತಿಸೋಮಪುರುಟಭೂಷಣ ಸುಖದ ಕುಮುದಸದ್ಮಸ್ಥ 8ಸೌಭಾಗ್ಯ ಸಾರಾತ್ಮ ಶ್ರೀಯಃಪತಿಗೆ ಪ್ರಿಯತರನೆವಿಪರತ್ನನಿಭ ಯಕ್ಷವೈಶ್ರವಣಪಾಹಿಕುಬೇರ ನಿಧಿಪತಿ ಧನಧಾನ್ಯಾಧಿಪತೇ ನಮೊಸೌಭಾಗ್ಯ ಧನ ಧಾನ್ಯ ಸಮೃದ್ಧಿ ಎನಗೀಯೊ 9ಮನುಜವಾಹ್ಯವು ವರವಿಮಾನದಿ ಕುಳಿತಿಹೆಅನಲಾಕ್ಷಶಂಖಗದಾಧರ ನಮೋಕಿರೀಟಿಎನ್ನ ತಪ್ಪುಗಳನ್ನು ಮನ್ನಿಸಿ ಹರಿಭಕ್ತಿಧನಧಾನ್ಯ ಆರೋಗ್ಯ ಸೌಂದರ್ಯವೀಯೊ 10ನಿರ್ದೋಷಸುಖಮಯ ಜಯೇಶನಿಗೆ ಪ್ರಿಯತರನೆನೀ ದಯದಿ ಸಲಹೆನ್ನ ಈಶಾನಶೂಲಿಸದಾಶಿವನೆ ಭಕ್ತರಿಂ ಅಚ್ಛಿನ್ನ ಸೇವ್ಯನೆಸದಾಅಭಯಎನಗಿತ್ತು ಪೊರೆಯೊ ಗೌರೀಶ11ಆನಂದರೂಪ ಸಂಕರ್ಷಣ ಅನಂತನಿಗೆಅನಂತ ನೀ ಪ್ರಿಯತರನು ಶುಕ್ಲವರ್ಣನಿನ್ನಸತಿವಾರುಣೀಸಮೇತ ಅಭಯದನಾಗಿಎನ್ನಪೊರೆಕೃಷ್ಟಿಧರ ನಮೋ ನೀಲವಾಸ12ಜಗದೀಶ ಭೂರಮಣ ಕೇಶವ ಸುಪ್ರಿಯತಮನೆಜಗದಾದ್ಯ ಬ್ರಹ್ಮ ಸರಸ್ವತೀಸಮೇತಖಡ್ಗಧರ ಅಭಯದನೆ ನಮೋ ರಕ್ತವರ್ಣನೆಮುಗಿದುಕರಶರಣಾದೆಪೊರೆಪಿತಾಮಹನೆ13ಐಶ್ವರ್ಯ ಆಯುಷ್ಯ ನೀತಿ ಜಯ ಅಪಿಪಾಸಪಾವಿತ್ರ್ಯ ಸುಖವಿತ್ತಜ್ಞಾನವಿಜ್ಞಾನಈವೋರು ಇವು ಸರ್ವ ಶ್ರವಣ ಪಠಣವ ಮಾಡೆವಿಶ್ರವ ಕಾಶ್ಯಪ ಲೋಕಪಾಲಕರು ದಯದಿ 14ಇಂದ್ರಾಗ್ನಿ ಯಮ ನಿಋಋತಿ ವರುಣ ಪ್ರವಹಸ್ಥಚಂದ್ರ ವೈಶ್ರವಣ ಈಶಾನ ಅನಂತಸ್ಥಮಂದಜಾಸನಪಿತ ಪ್ರಸನ್ನ ಶ್ರೀನಿವಾಸನುಕುಂದದ ಸೌಭಾಗ್ಯವನುಈವಕರುಣಾಳು15
--------------
ಪ್ರಸನ್ನ ಶ್ರೀನಿವಾಸದಾಸರು
ವಂದನೆ ಮಾಡಿರೈಗುರುವರದೇಂದ್ರರ ಪಾಡಿರೈ ಪಬಂದ ದುರಿತಗಳ ಹಿಂದೆ ಮಾಡಿ ಸುಖ |ತಂದುಕೊಡುವ ದಯಾಸಿಂಧುಯತೀಂದ್ರರ ಅ.ಪ.ಮರುತ ಮತಾಂಬುಧಿ ಸೋಮನೆನಿಪ ವಸುಧೇಂದ್ರ - ಸದ್ಗಣಸಾಂದ್ರ|ಗುರುಗಳಕರಕಮಲದಿ ಜನಿಸಿದ ಸುಕುಮಾರಾ - ಕುಜನ ಕುಠಾರಾ ||ನೆರೆನಂಬಿದ ಭಕುತರನನುದಿನದಲಿ ಪೊರೆವಾ - ದುರಿತವ ತರಿವಾ |ಧರೆಯೊಳು ತ್ಯಾಗದಿ ಕರ್ಣನ ಮರೆಸಿದ ನೋಡಿ - ವರಗಳ ಬೇಡಿ1ಕರಿಹಿಂಡೊಳುಹರಿಹೊಕ್ಕ ತೆರದಿ ವಾದಿಗಳ - ಕೀಳು ಮತಗಳ |ವರಶಾಸ್ತ್ರಗಳಲಿ ಗೆಲಿದು ಸುಬುದ್ಧಿಯ ವರದ - ಜಗದೊಳು ಮೆರೆದ ||ಶರಭಂಗವರದಚರಣಸರಸೀರುಹಭೃಂಗ- ವಿಷಯ ಅಸಂಗ |ಸ್ಮರಣೆಯ ಮಾಡೆ ಪಿಶಾಚ ರೋಗಗಳ ಭಯವೂ - ಮುಟ್ಟದಲಿಹವೂ 2ಸಾನುರಾಗದಲಿ ಶ್ರೀ ರಾಘವೇಂದ್ರರ ಸ್ತೋತ್ರ - ಮಾಳ್ಪ ಸುಪಾತ್ರ |ಜಾನಕಿಪತಿ ಆನಂದದೊಳಿವರಿಗೆ ಒಲಿವ - ಹೃದಯದಿ ಸುಳಿವ ||ದೀನ ದಯಾಳು ಅಪರಿಮಿತ ಮಹಿಮ ಗುಣಾಢ್ಯ - ವಾದದಿ ದಾಢ್ರ್ಯಾ |ಧ್ಯಾನಿಸೆ ಮನದೊಳು ಜ್ಞಾನ ಕೀರ್ತಿ ಸುಖ ಕೊಡುವ - ಅಘಗಳ ಕಡಿವ 3ವಿಷ್ಣುನ ಲೋಕ ಪ್ರವೇಶ ಮಾಡಿದ ಚರಿಯಾ - ಕೇಳಿರಿ ಪರಿಯಾ |ಶಿಷ್ಟ ಜನರು ವಿಶ್ವಾವಸು ನಾಮಕ ಅಬ್ದ - ಆಷಾಢ ಶುದ್ಧ ||ಷಷ್ಠಿಯು ಕುಜವಾಸರ ಉತ್ತರಾ ನಕ್ಷತ್ರಾ -ವರಪುಣ್ಯಕ್ಷೇತ್ರ |ನಟ್ಟ ನಡುವೆ ವೃಂದಾವನ ಮಧ್ಯದೊಳಿರುವಾ - ಸೌಖ್ಯವ ಸುರಿವಾ 4ಆನೆ ಹಂಡೆ ವಸನಗಳು ದ್ರವ್ಯವು ನಾನಾ - ಮಾಡಿದ ದಾನಾ |ಆ ನಗರದಿ ಬಹು ಮಂದಿಯು ಭಕುತಿಯಲಿಂದಾ - ಪೂಜಿಪ ಚಂದ ||ಸೂನುಪಡೆದು ಸುಖ ಪಡುವರು ಸರ್ವರುನಿತ್ಯ- ಈತನು ಸತ್ಯ |ನಾನೆಂತುಸಿರಲಿ ಪ್ರಾಣೇಶ ವಿಠಲನ ದಾಸಾ, ಮುನಿ ಉತ್ತಂಸಾ 5
--------------
ಪ್ರಾಣೇಶದಾಸರು
ವಂದಿಸಿದರ ಕಾವೆ ವರವನೀವೆ ಅಹಿಪವೀಂದ್ರಭವಸುರರಗುರುಮಧ್ವಮುನಿರಾಯಪ.ಒಂದೊಂದುಶ್ರುತಿಸ್ಮøತಿಗೆ ಬಹ್ವಾರ್ಥಗಳ ಪೇಳದೆಒಂದೆರಡು ತತ್ವವಿಸ್ತರವ ಪೇಳಿದೆಒಂದು ಮೂರವತಾರದಲ್ಲಿ ಹರಿಯನೆ ಒಲಿಸಿಒಂದು ನಾಲ್ಕರ ಭೇದ ನಿಜರಿಗರುಹಿದೆಯ 1ಒಂದೈದು ರಿಪುವರ್ಗ ನಿಗ್ರ್ರಹವ ಮಾಡಿಸಿದೆಒಂದಾರು ತ್ರಿಗುಣಿಸಿದ ಮತವ ಮುರಿದೆಒಂದೇಳು ಮದವ ಕಾಲಲಿ ಮೆಟ್ಟಿ ಹರಿಪುರಕೆಒಂದೆಂಟು ಭಕುತಿಪಥ ತೋರ್ದೆ ವೈಷ್ಣವರಿಗೆ 2ಒಂದು ಒಂಬತ್ತು ಹರಿಯವತಾರ ಕಥೆ ರಚಿಸಿಒಂದು ಹತ್ತೇಂದ್ರಿಯದ ಗೆಲವ ಕಳಿಸಿಒಂದು ಹನ್ನೊಂದು ಸ್ತೋತ್ರದಿ ಕೃಷ್ಣನ ಮೆಚ್ಚಿಸಿದೆಒಂದು ಹನ್ನೆರಡು ತತ್ವದಾಗ 3ಒಂದು ಹದಿಮೂರು ಭುವನಗಳಲ್ಲಿ ನೀ ವ್ಯಾಪ್ತಒಂದು ಹದಿನಾಲ್ಕು ದ್ವಿಗುಣಿಸಿದ ಮ್ಯಾಲೇಳೊಂದಿದ ಸದ್ಗ್ರಂಥಗಳ ನಿರ್ಮಿಸಿ ಬುಧರಿಗಿತ್ತೆಒಂದು ಹದಿನೈದು ಗುಣದ ಲಕ್ಷಣಾಂಗ 4ಒಂದು ಹದಿನಾರೆಂಟು ತತ್ವ ಸಿದ್ಧಾಂತದಲಿಒಂದು ಹದಿನೇಳು ಪರ್ವಮೋಹಕ ಬಿಡಿಸಿದೆಒಂದು ಮನದಿಂದ ಶಿರಿ ಪ್ರಸನ್ನವೆಂಕಟ ಕೃಷ್ಣನಒಂದೊಂದು ಗುಣಕೆ ಅನಂತ ವ್ಯಾಖ್ಯಾನ 5
--------------
ಪ್ರಸನ್ನವೆಂಕಟದಾಸರು
ವಂದಿಸಿದರೆ ವಂದ್ಯರು ಪೂಜಿತರು ಮುಕುಂದಗೋವಿಂದ ಶ್ರೀಹರಿಯನ್ನುಎಂದೆಂದು ಕುಂದದಾನಂದವೈದಿಸುವಇಂದಿರೆಯರಸ ಭವಬಂಧಮೋಚಕನ ಪ.ಹತ್ತಶ್ವಮೇಧಾವಭೃಥಸ್ನಾನ ಮಾಡಲುಮತ್ರ್ಯರ್ಗೆ ಪುನರ್ಜನ್ಮಗಳಿಲ್ಲವೊಸತ್ಯಭಾಮಾಧವನಿಗೆ ನಿಷ್ಕಾಮದಿ ನಮಿಸಿಮತ್ತೊಮ್ಮೆ ನಮಿಸೆ ಮುಕ್ತಿಗೆ ಸಾಧನ 1ಕೋಟಿಸಹಸ್ರ ತೀರ್ಥಗಳಲಿ ಮಿಂದುಕೋಟಿಸಹಸ್ರ ವ್ರತಗಳಾಚರಿಸೆಕೋಟಿ ಭಾಂತಕಗೆ ನಮಿಸಿದ ಫಲಕೆ ಸರಿ ಪಾಸಟಿಷೋಡಶಕಳೆಯೊಳೊಂದಲ್ಲ2ಹೇಳೆನೆ ಇಂದಾದರು ನಮಿಸಿ ಶ್ರೀಲೋಲಶಾಙ್ರ್ಗಪಾಣಿಯನಸಾಲು ಜನ್ಮದಘವ ಹಾಳುಮಾಡಿ ಮುಕ್ತಿಓಲಗಕೆ ಕರೆವ ವೈಷ್ಣವ ಜನರ 3ಉರಶಿರದೃಷ್ಟಿಲಿ ಮನವಾಚದಲಿಚರಣಕರಗಳಲಿ ಜಾನುಗಳಲಿಧರೆಯಲಿ ಅಷ್ಟಾಂಗಪ್ರಣಾಮ ಮಾಳ್ಪರ್ಗೆಹರಿದು ಹೋಗೆ ಪಾಪವರ ಮುಕ್ತಿಈವ4ಸರುವಾಂಗವ ಧರೆಗೊಂದಿಸಿ ಭಕುತಿಲಿಹೊರಳಾಡಿ ಭೂಮಿಲಿ ಪರವಶದಿಹರಿಗೆ ನಮಿಸಲು ಮೈಗೊರೆದ ಧೂಳಿಯ ಕಣಾಪರಿಮಿತ ಸಹಸ್ರಾಬ್ದ ಪರಮಾಣ ಪದವಕ್ಕು 5ಸಿರಿಅಜಭವೇಂದ್ರಸುರರುಮಹಾಮುನಿನಿಕರನೃಪಮನುಜೋತ್ತಮರೆಲ್ಲಪರಮಭಕುತಿಲಿ ನಮಿಸೆ ಹರಿವಶನಾಗುವಹರಿಜನಕೆ ಮುಕ್ತಿಪಥಕಿದೆ ಪಾಥೇಯ 6ಅರ್ಚಿತ ಕೃಷ್ಣನ ನೋಡುತಾನಂದಾಶ್ರುಹುಚ್ಚನಂತೆ ನಮಿಸಿ ನಗುತ ಸುರಿಸಿಅಚ್ಯುತಾನಂತ ಸದ್ಗುಣನಿಧಿ ಭಕ್ತಪ್ರಿಯನಿಚ್ಚಪ್ರಸನ್ವೆಂಕಟನೆಂದುಚ್ಚರಿಸಿ7
--------------
ಪ್ರಸನ್ನವೆಂಕಟದಾಸರು
ವನದೊಳಗತ್ರಿಯ ಮುನಿವರತರುಣಿಘನಪತಿವ್ರತೆಯೆಂದೆನಿಸಿದಳಾ ರಮಣಿಮನವ ಶೋಧಿಸೆ ಬಂದ ತ್ರಿಮೂರ್ತಿಗಳ ಕಂಡುಅನಸೂಯೆ ತನಯರೆಂದೆನಿಸಿ ತೂಗಿದಳೂ ಜೋ ಜೋ1ಜೋಜೋ ಸತ್ಯಲೋಕೇಶ ಬ್ರಹ್ಮನಿಗೆಜೋಜೋ ಹತ್ತಾವತಾರ ವಿಷ್ಣುವಿಗೆಜೋಜೋಮೃತ್ಯುಂಜಯಮೂರ್ತಿಶಂಕರಗೆಜೋ ಎಂದು ಸ್ತನಪಾನ ಗೈಸಿ ತೂಗಿದಳೂ ಜೋಜೋ2ಸೃಷ್ಟಿಕರ್ತನೆ ಜೋಜೋ ಹಂಸವಾಹನನೆಸೃಷ್ಟಿಪಾಲನೆ ಗರುಡವಾಹನನೆನಿಟಿಲನೇತ್ರನೆ ಜೋಜೋ ನಂದಿವಾಹನನೆಂದುರನ್ನ ತೊಟ್ಟಿಲೊಳಿಟ್ಟು ಪಾಡಿ ತೂಗಿದಳೂ ಜೋಜೋ3ವಾರಿಜಾಸನೆ ಜೋಜೋ ವಾಣೀಶ ಜೋಜೋಸಾರಸಾಕ್ಷನೆ ಜೋಜೋ ಸಿರಿಯರಸ ಜೋಜೋಮಾರವೈರಿಯೆ ಜೋಜೋ ಗೌರೀಶ ಜೋಜೋಮೂರು ಮೂರ್ತಿಯೆ ಜೋಯೆಂದೆನುತತೂಗಿದಳೂ ಜೋಜೋ4ಸುಂದರಮೂರ್ತಿಚತುರಾನನಜೋಜೋಸಿಂಧುಪುರೀಶ ಗೋವಿಂದನೆ ಜೋಜೋಚಂದಿರಧರನೀಲಕಂಧರಜೋಯೆಂದುಚಂದದಿಂದನುಸೂಂiÉು ಪಾಡಿ ತೂಗಿದಳೂ ಜೋಜೋ5xmಟ veಡಿsioಟಿ='1.0' eಟಿಛಿoಜiಟಿg='%SಔUP-ಇಓಅಔಆIಓಉ%'
--------------
ಗೋವಿಂದದಾಸ
ವಲ್ಲೀದೇವಿಯ ವಲ್ಲಭನೆಬಲ್ಲಿದಭಕ್ತರ ಸುಲ್ಲಭನೆಪ.ಸಲ್ಲಲಿತ ಪಾದಪಲ್ಲವ ಭಜಿಸುವ-ರೆಲ್ಲರ ಮನಸಿನೊಳುಲ್ಲಸನೆ ಅ.ಪ.ವೃಂದಾರಕಮುನಿವಂದಿತನೆಕಂದರ್ಪಾಮಿತಸುಂದರನೆಸ್ಕಂದನೆ ಸಚ್ಚಿದಾನಂದನೆ ಪಾರ್ವತೀ-ನಂದನ ಸದ್ಗುಣಮಂದಿರನೆ 1ತಾರಕದೈತ್ಯ ಸಂಹಾರಕನೆಸೇರಿದ ಭಕ್ತೋದ್ಧಾರಕನೆಮಾರಾರಿಯ ಸುಕುಮಾರನೆ ಧೀರನೆಚಾರುಮಯೂರ ತುರಂಗಮನೆ2ಲಕ್ಷುಮಿನಾರಾಯಣ ಪ್ರಿಯನೆರಕ್ಕಸರಿಂಗತಿದುಃಖದನೆಕುಕ್ಕುಟವಜ್ರಾಭಯಶಕ್ತಿಹಸ್ತನೆಪ್ರಖ್ಯಾತ ಪಾವಂಜಾಖ್ಯ ಪುರವರನೆ 3
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ವಸುದೇವ ಸುತಂ ಸನಾತನಂ ವಂದೇ ಕೃಷ್ಣಂ ಜಗದ್ಗುರುಂ ಪನಾರದ ಗಜಪರಿಪಾಲನಂನೀರದಸನ್ನಿಭ ದೇಹಿನಂ1ಶೇಷಕೃಭೃತ್ಶಿಖರಾಲಯಂದೋಷಸಹಿತ ಕುಜನಾಲಯಂ 2ಶಂಖ ಚಕ್ರ ಕರಧಾರಿಣಂಕಿಂಕರಜನ ಭವಹಾರಿಣಂ 3ಅಜಹರಸನ್ನುತಶ್ರೀಧರಂತ್ರಿಜಗದ್ವಂದಿತ ಭೂಧರಂ 4ತುಲಸೀದಾಮದಳಶೋಭಿತಂ | ಶ್ರೀತುಲಸೀರಾಮ ಭವಿ ಸೇವಿತಂ 5
--------------
ತುಳಸೀರಾಮದಾಸರು
ವಾದಿರಾಜಸುರರಾಜತಾನಾದರೆxmಟ veಡಿsioಟಿ='1.0' eಟಿಛಿoಜiಟಿg='%SಔUP-ಇಓಅಔಆIಓಉ%'ಮೇದಿನಿಯೊಳಗಿಹನ್ಯಾಕೆ ? ಪಮೇದಿನಿಸುರರಿಗೆಮೋದಕೊಡೋದಕೆಸ್ವಾದಿಯೊಳಗೆ ನಿಂತಿಹನದಕೇ ಅ.ಪಅಜನ ಪದ ತಾ ಸೇರೋದಕೆ 1ಸುರತತಿಸನ್ನುತಸರಸಿಜಭವ ಪದ-ಪರಿಪರಿ ಮಹಿಮೆಯ ತೋರಿಸಿದ 2ವೀತಭಯನು ತಾನೀತೆರ ಜಗದಿದಾತಗುರುಜಗನ್ನಾಥ ವಿಠಲಗುಣಖ್ಯಾತಿಯ ತಾಮಾಡಿದ 3
--------------
ಗುರುಜಗನ್ನಾಥದಾಸರು
ವಾಯುದೇವರು152ಎಣೆಗಾಣೆ ಭುವನದಿ ಶ್ರೀರಾಮಚಂದ್ರನ ಪ್ರಿಯವೀರಹನುಮ ಘನಧೀರ ಪ.ಬ್ರಹ್ಮ ಪಿತೃ ಪಾದಕ್ಕೆರಗಿ ಉಮ್ಮಯದಿ ಕೊಂಡಾಜೆÕಸಮನೆಶರಧಿಗೋಷ್ಪದ ಮಾಡಿ ಹೋಗ್ಯಮ್ಮ ಜಾನಕಿಗೆ ಪರಬೊಮ್ಮನುಂಗುರವಿತ್ತುಹಮ್ಮಿನ ನಿಶಾಚರನಿಗುಮ್ಮಳಿಕೆನಿತ್ತೆ 1ಕ್ರೀಡೆಯಿಂ ದಶಶಿರನನೊಡೆವನಾಯದೆ ಶಿಥಿಲಮಾಡುವನಾಗಿನಾ ಮಾತನಾಡಿ ರಮೆಯಚೂಡಾಮಣಿಯ ತಂದು ನೀಡಿ ರಾಘವಗೆ ಸುಖಮಾಡಿಸಿದೆ ಅಪ್ರತಿಮಾರುತಿ ಅತಿಧೀರ 2ಗರುವಿನ ಖಳನ ವನದತರುವಿಟಪಮೂಲಸಹಮುರಿದು ಕರಚರಣದಿ ತಂದಾನೆರದ ರಿಪುರಕ್ಕಸರ ತರಿ ತರಿದು ಮರಲುಂದಿ ರಭಸದಿಂದಸುರಪುರವನುರುಹಿದೆ 3ಕದನಕರ್ಕಶರಿಪುಗಳೆದೆಯೊದೆದು ಕೋಟಿ ಸಿಂಹದ ರಭಸದಿನಲ್ಲಿ ಬಿಸುಟಿ ಉದಧಿಯಲ್ಲಿಸುದುರ್ಲಭಾದ ನಾಕೌಷಧವ ತಂದು ರಣದಿ ಮಲಗಿದ ವೀರರಸುಗಾಯಿದೆ ಅದ್ಭುತ ಮಹಿಮ 4ಸೀತಾಪತಿಯ ಪ್ರೀತಿಯತ್ಯಾದರದಿ ಪಡೆದು ವಿಷಯಾತೀತನಾಗಿ ವಿಧಾತನಾದೆವಾತಜಾತನೆ ನಿಮ್ಮ ಖ್ಯಾತಿಯ ಹೊಗಳಲಳವೆನಾಥ ಪ್ರಸನ್ನವೆಂಕಟ ದಾತನಿಗೆ ದೂತ 5
--------------
ಪ್ರಸನ್ನವೆಂಕಟದಾಸರು
ವಾರಣವದನ ತ್ರೈಲೋಕ್ಯಸುಮೋಹನ ವಾರಣವದನ ಪ.ವಾರಿಜಾಕ್ಷ ವರಗುಣಾಕರವಾರಿಜಾಕ್ಷಿ ವರದಾಯಕಸನ್ನುತನಾರದಾದಿ ಮುನಿವಂದಿತ ಪದಯುಗ ಅ.ಪ.ಸುಂದರಾಂಗ ಸುಕಲಾನ್ವಿತ ನಿಭಚರಣಕಟಿಶೋಭಿತ ವ್ಯಾಳಸ-ಬಂಧನಾಬ್ಧಿ ಶತಕೋಟಿಸದೃಶ ಕಿರಣಚಂದನಾಂಗಾರ್ಚಿತ ಸುಮನೋಹರಮಂದಹಾಸ ಮಹಿಮಾಂಬುಧಿಚಂದಿರ 1ಕಂಬುಗ್ರೀವಕಮನೀಯಕರಾಂಬುರುಹಪಾಶಾಂಕುಶಧರವರಶಂಬರಾರಿಜಿತುತನಯ ಮಧುರಗೇಹಜಂಭಭೇದಿವಂದಿತ ಅತ್ರಿವಂದಿತಲಂಬೋದರ ವಿಘ್ನಾಂಬುಧಿಕುಂಭಜ2ಚಾರುಭಾರ ಕನ್ಯಾಪುರವರನಿಲಯಮೃಕಂಡುಜದ ಮುನಿವರಸಾರಮಂತ್ರಸ್ಥಾಪಿತ ಮಂಗಲ ಕೆರೆಯವರಕಪಿತ್ಥಫಲೋರಸಭುಂಜಿತಧೀರ ಲಕ್ಷ್ಮೀ ನಾರಾಯಣಸಖಸುತ 3
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ