ಒಟ್ಟು 6899 ಕಡೆಗಳಲ್ಲಿ , 128 ದಾಸರು , 4614 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ರಂಗ ಬಾ ಮೋಹನಾಂಗ ಬಾ ದೇವೋತ್ತುಂಗ ಬಾರೆಂದು ಕರೆದಳುಗೋಪಿಪ.ಚೀರುತ ಬಂದ ಚಿನ್ನ ಹಸಿದನೆಂದುಘೃತಕ್ಷೀರವೆರೆಸಿ ಕೊಟ್ಟರೆ ಒಲ್ಲದೆಚೋರತನಕೆ ಮೆಚ್ಚಿ ಪೋಗುವೆ ನಿನ್ನನುದೂರುತ ನಿರುತ ಬಾಹರು ಗೋವಳೆಯರು 1ತುರುಗಾವೊ ನೆವದಲಿ ಪೋಗಿ ಗೋಪಾಲರಕುರುಳಿಗೆ ತುರದ ಬಾಲಕೆ ಗಂಟಿಕ್ಕಿದÀುರುಳತನಗಳನ್ನು ಮಾಡಿ ಮಾಡಿ ಮತ್ತ್ತೆಅರಿಯದಂತೆ ಬಿಕ್ಕಿ ಬಿರಿಯಬೇಡೆಲೆ ಕಂದ 2ಚೆಲ್ಲೆಗಂಗಳೆಯರ ಶಯನಕೆ ಪೊಂದಿಹನಲ್ಲರ ಬಡಿದೋಡಿ ಬರುತಲಿಹೆಸಲ್ಲದು ನಿನಗಿದು ಬಾಲಕತನದೊಳುಫುಲ್ಲಲೋಚನ ಮುದ್ದು ಗೋಪಾಲಕೃಷ್ಣ 3ಶಕಟ ಪೂತನಿತೃಣಾವರ್ತಮೊದಲಾದಶಕುತ ದನುಜರ ಮರ್ದನ ಕೃಷ್ಣಯ್ಯಭಕುತರ ಬವಣೆಯನಳಿಯದಿದ್ದರೆ ಗಡಸಕಲರುಜಾರಚೋರೆಂದು ಸಾರುವರೊ4ಎನ್ನ ಬೇಡು ನೀ ಮನದಣಿ ನೀಡುವೆಅನ್ಯರ ಮನೆಗೆ ಪೋಗಲಿ ಬೇಡವೊಚಿನ್ಮಯ ಮೂರುತಿ ಪ್ರಸನ್ವೆಂಕಟ ಕೃಷ್ಣನನ್ನಾಣೆ ಮನೆಯ ಬಿಟ್ಟಗಲದಿರೊ 5
--------------
ಪ್ರಸನ್ನವೆಂಕಟದಾಸರು
ರಂಗ ರಂಗ ಎಂಬ ನಾಮವ ನೆನೆವರ |ಸಂಗದೊಳಿರಿಸು ಎನ್ನ ಪಅಂಗದೊಳ್ಲೆವರು ದೆಸೆದಸೆಗೆಳೆಯುವ |ಭಂಗವ ಬಿಡಿಸೊ ಹರಿಯೆ-ಸ್ವಾಮಿ ಅ.ಪಹರೆಕೃಷ್ಣ ಎಂದೆಂಬೆಜಿಹ್ವೆತಾನಿರುತಿರೆ |ಬರಿಯೆ ಮಾತಾಡುವೆ ನಾ ||ಗುರು-ಹಿರಿಯರ ವಂದನೆಗೆ ಕರ-ಶಿರವಿರೆ |ಗುರುವಹಂಕಾರತನ ||ಪರಿಪರಿ ಪುಷ್ಪದಲಿ ಪೂಜಿಸದೆ ಅಚ್ಯುತನ |ಮರೆತಿಹೆ ನಾನನುದಿನ |ಅರಿವ ನೋಡಿದರೆ ಎನ್ನಲಿ ಕಾಣೆನೈ ದೇವ |ಮೊರೆಹೊಕ್ಕೆ ಸಲಹೊ ಎನ್ನ-ಸ್ವಾಮಿ 1ವೇದ ಶಾಸ್ತ್ರ ಪುರಾಣ ನಾಮವ ನೆನೆವರ |ಚೋದ್ಯವ ನಾನರಿಯೆನು ||ಹಾದಿಬೀದಿ ತಿರುಗುವ ಜಾರಸ್ತ್ರೀಯಳ ಕಂಡು-ವಿ-|ನೋದಗಳ ಮಾಡುತಿಹೆನು ||ಮಾಧವಗೋವಿಂದ ಎನ್ನದೆ ಕಾಲನ |ಬಾಧೆಗಳಿಗೊಳಗಾದೆನೊ ||ಈ ಧರೆಯೊಳಗೆನ್ನ ರಕ್ಷಿಸುವವರ ಕಾಣೆ |ಶ್ರೀಧರ ನೀನೆ ಸಲಹೊ-ಸ್ವಾಮಿ 2ಮಡದಿ-ಮಕ್ಕಳಿಗೆಲ್ಲ ಒಡವೆ ಬೇಕೆಂಬುವ |ಕಡುಲೋಭತನವ ಬಿಡಿಸೊ ||ಅಡಿಗೆ ಅಡಿಗೆ ನಾರಾಯಣನೆಂಬ ನಾಮವನು |ನುಡಿವ ನಾಲಗೆಗಿರಿಸೊ ||ಪೊಡವಿಯೊಳುಪುರಂದರವಿಠಲರಾಯನೆ ನಿನ್ನ |ಅಡಿಯದಾಸನೆನಿಸೊ-ಸ್ವಾಮಿ 3
--------------
ಪುರಂದರದಾಸರು
ರಂಗಕೇಳಯ್ಯ ಬೆಳಂದಿಗಳ ಬೆಳಗುವ ವಸ್ತ್ರಕಂಗಳಿಗೆ ಸೂರ್ಯ ಹೊಳೆವಂತೆಶ್ರೀರಂಗ ಕೊಳ್ಳಯ್ಯ ಉಡುಗೊರೆ ಪ.ಏಸೋ ಮಾಣಿಕದ್ವಸ್ತ ಹಸಿರುಪಟ್ಟಾವಳಿವಸುದೇವಗೀಗ ರಥ ತೇಜಿ ಕೊಟ್ಟ 1ಲೆಕ್ಕವಿಲ್ಲದೆ ರತ್ನ ಸಂಖ್ಯವಿಲ್ಲದೆ ವಸ್ತ್ರದೇವಕಿಗೆ ಕೊಟ್ಟಪಟ್ಟಾವಳಿ2ಹಲವು ಮಾಣಿಕದ ವಸ್ತ ಬೆಲೆಯಿಲ್ಲದಷ್ಟು ವಸ್ತ್ರಬಲರಾಮಗೆ ಕೊಟ್ಟ ರಥಗಳ 3ಮುತ್ತು ಮಾಣಿಕದೊಸ್ತ ಮತ್ತೆಪಟ್ಟಾವಳಿಸೀರೆಮಿತ್ರೆ ರೇವತಿಗೆ ದೊರೆ ಕೊಟ್ಟ 4ಸಂಭ್ರಮದಿಭಾನುಮಾನುಸಾಂಬಪ್ರದ್ಯುಮ್ನಗೆಮೇಲೆಂಬೊ ವಸ್ತ್ರಗಳುಪಟ್ಟಾವಳಿಕೊಟ್ಟ5ಸರಸಿಜಾಸನ ಶಿವನ ಅರಸೆಯರಿಗೆ ಮೊದಲಾಗಿಸರಸದೊಸ್ತಗಳು ರಥಕೊಟ್ಟ 6ಇಂದ್ರ ಚಂದ್ರನ ಮಡದಿಯರಿಗೆಬಂದ ಋಷಿಗಳಿಗೆಲ್ಲಚಂದ-ದೆÉೂಸ್ತ್ರಗಳ ದೊರೆ ಕೊಟ್ಟ 7ಪಂಡಿತರು ರಾಯರಿಗೆ ದುಂಡು ಮುತ್ತಿನ ವಸ್ತತಂಡ ತಂಡದಲಿಜವಳಿಯ ದೊರೆ ಕೊಟ್ಟ 8ದಾಸರುದಾಸಿಯರಿಗೆ ಸೋಸಿನ ವಸ್ತ್ರಗಳು ಸೀರೆಕುಪ್ಪಸ ಜರತಾರಿಗಳ ದೊರೆ ಕೊಟ್ಟ 9ಗುಜ್ಜಿಯರ ಮಕ್ಕಳಿಗೆ ಗೆಜ್ಜೆ ಸರಪಳಿ ಅಂಗಿಸಜ್ಜು ತೋರುವ ಅರ¼ಲೆ ಕೊಟ್ಟ 10ಗೊಲ್ಲನಾರಿಯರ ಕುಬ್ಜಿಗೆಲ್ಲ ರಾಮೇಶ ಕೊಟ್ಟಚಲುವ ನಮ್ಮ ಮ್ಯಾಲೆ ಹರುಷಾಗೊ 11
--------------
ಗಲಗಲಿಅವ್ವನವರು
ರಂಗನಹುದೋ ನೀನು ಕನಕಾಚಲರಂಗನಹುದೋ ನೀನುತುಂಗಮಹಿಮ ಕೃ-ಪಾಂಗ ಚೆಲುವ ಮುದ್ದು ರಂಗಲಕ್ಷ್ಮಿಯ ರಮ-ಣಾಂಗ ಜಪಿತಮೂರ್ತಿಪದುರುಳರಕ್ಕಸನು ವೇದ ಕದ್ದೊಯ್ಯೆಮೀನಾಗಿ ತಂದೆಯದನ ಕೂರ್ಮನಾಗಿಗಿರಿಯ ಪೊತ್ತು ಎರೆದೆ ಸುರರಿಗೆ ಅಮೃತವವರಾಹನಾಗಿ ಧರೆಯ ಕದ್ದವನಶಿರವ ಖಂಡಿಸಿ ನೃಕೇಸರಿಯಾಗಿಯೆಕಂಬವನೊಡೆದು ನಿಶಾಚರನ ಸಂಹ-ರಿಸಿದೆ ರಣಧೀರಮಾಧವ1ಪುಟ್ಟ ಮಾನವನಾಗಿ ಬಲಿಯ ದಾನವ ಬೇಡಿಅಷ್ಟು ಬ್ರಹ್ಮಾಂಡವನೆಲ್ಲಈರಡಿಮಾಡಿತುಟ್ಟ ತುದಿಗೆ ಅವನ ಶಿರದ ಮೇ-ಲಿಟ್ಟು ದ್ವಾರವ ಕಾಯ್ದನಾ ಭೂಸುರರಿಗೆಕೊಟ್ಟ ಮೇದಿನಿಯ ದಾನವ ಭಳಿರೆ ಜಗಜಟ್ಟಿ ಪರಶುರಾಮ ಕ್ಷತ್ರಿಯ ಛೇದನ2ದಶರಥನ ಸುತನಾಗಿ ವಸುಧಜೆಯ ಕಳೆದುಅಸಮ ಕಪಿವೀರರ ನೆರಪಿ ಸೇತುವೆಕಟ್ಟಿಅಸದಳ ರಾಕ್ಷಸರ ಇಂದ್ರಜಿತುದಶಶಿರಅತಿಕಾಯರ ಕುಂಭಕರ್ಣಅಸಹಾಯ ರಣಶೂರರ ಛೇದಿಸಿ ಸೀತಾಶಶಿಮುಖಿಯ ಕರೆತಂದ ರಘುರಾಮಕಂಠೀರವ3ದೇವಕೀಸುತನಾಗಿ ಬಾಣನ ಭಂಗಿಸಿಮಾವ ಕಂಸನ ಶಿಶುಪಾಲ ನರಕಾಸುರ ಕೌ-ರವ ವೀರರನು ಕೊಂದು ಪಾಂಡುರಾಜನ ಪುತ್ರ-ರನು ಪಾಲಿಸಿ ಪೃಥವಿ ಪಾವನರಾದರನು ರಕ್ಷಿಸಿ ಬೌ-ದ್ಧಾವತಾರ ತಾನಾಗಿ ವ್ರತ ಭಂಗಿಸಿದೆ ನೀನು4ತೇಜಿಯನೇರಿ ನೇಣನೆ ಹಿಡಿದು ಪಾಪದಬೀಜವನುರುಪಿ ಪುಣ್ಯದ ಬಿತ್ತನುರುಹಿಯೆಸೋಜಿಗಸಹಸ್ರರ ಕನಕಗಿರಿಮೂಜಗದೊಳು ವಿಸ್ತಾರವಾಗಿಹಘನತೇಜೋ ಮೂರುತಿ ಗಂಭೀರ ಸಿದ್ಧ ಪರ್ವತರಾಜ ಸದ್ಗುರು ಚಿದಾನಂದಾವಧೂತ5
--------------
ಚಿದಾನಂದ ಅವಧೂತರು
ರಂಗನಾಯಕಸ್ವಾಮಿ ರಾಜೀವಲೋಚನ ಬೆಳಗಾಯಿತೇಳೆನ್ನುತಅಂಗನೆ ಲಕುಮಿ ತಾ ಪತಿಯನೆಬ್ಬಿಸಿದಳುಶೃಂಗಾರದ ನಿದ್ರೆ ಸಾಕೆನ್ನುತಪ.ಪಕ್ಷಿರಾಜನು ಬಂದು ಬಾಗಿಲೊಳಗೆನಿಂದುಅಕ್ಷಿ ತೆರೆದು ಬೇಗ ಈಕ್ಷಿಸೆಂಬ ||ಪಕ್ಷಿಜಾತಿಗಳೆಲ್ಲ ಚಿಲಿಪಿಲಿಗುಟ್ಟುತಸೂಕ್ಷ್ಮದಲಿ ನಿನ್ನನು ಸ್ಮರಿಸುವುವೊ ಕೃಷ್ಣ 1ಸನಕ - ಸನಂದನ - ಸನತ್ಸುಜಾತರು ಬಂದುವಿನಯದಿ ಕೈಮುಗಿದು ಓಲೈಪರು ||ಘನಶುಕ - ಶೌನಕ - ವ್ಯಾಸ ವಾಲ್ಮೀಕರುನೆನೆದು ಕೊಂಡಾಡುವರೊ ಹರಿಯೇ 2ಸುರರು ಕಿನ್ನರರು ಕಿಂಪುರುಷರು ಉರಗರುಪರಿಪರಿಯಲಿ ನಿನ್ನ ಸ್ಮರಿಸುವರು ||ಅರುಣನು ಬಂದುದಯಾಚಲದಲ್ಲಿ ನಿಂದಕಿರಣ ತೋರುವ ಭಾಸ್ಕರನು ಶ್ರೀ ಹರಿಯೇ 3ಪದುಮನಾಭನೆ ನಿನ್ನ ನಾಮಾಮೃತವನುಪದುಮಾಕ್ಷಿಯರು ತಮ್ಮ ಮನೆಯೊಳಗೆ ||ಉದಯದೊಳೆದ್ದು ಸವಿದಾಡುತ ಪಾಡುತದಧಿಯ ಕಡೆವರೇಳು ಮಧುಸೂದನ ಕೃಷ್ಣ 4ಮುರುಮಢನನೆ ನಿನ್ನ ಚರಣದ ಸೇವೆಯಕರುಣಿಸಬೇಕೆಂದು ತರುಣಿಯರು ||ಪರಿಪರಿಯಿಂದಲಿ ಸ್ಮರಿಸಿ ಹಾರೈಪರುಪುರಂದರವಿಠಲ ನೀನೇಳೊ ಹರಿಯೇ 5
--------------
ಪುರಂದರದಾಸರು
ರಂಗನೊಲಿದ ನಮ್ಮ ಕೃಷ್ಣನೊಲಿದ |ಅಂಗನೆ ದ್ರೌಪದಿಗೆ ಅಕ್ಷಯವಸ್ತ್ರವನಿತ್ತುಪಕರಿಯಪುರದ ನಗರದಲ್ಲಿ ಕೌರವರು ಪಾಂಡವರು |ಧರೆಯನೊಡ್ಡಿ ಲೆತ್ತವಿಡಿದು ಜೂಜನಾಡಲು ||ಪರಮಪಾಪಿ ಶಕುನಿ ತಾನು ಪಾಸಿನೊಳಗೆ ಪೊಕ್ಕಿರಲು |ಧರುಮರಾಯ ಧಾರಿಣಿ - ದ್ರೌಪದಿಯ ಸೋತನು 1ಮುದ್ದುಮೊಗದ ದ್ರೌಪದಿಯ ಮುಂದೆಮಾಡಿ ತನ್ನಿರೆಂದು |ತಿದ್ದಿ ತನ್ನ ಮನ್ನೆಯರಿಗೆ ತಿಳಿಯಹೇಳಿದ ||ಮುದ್ರೆಮನ್ನೆಯರು ಬಂದು ದ್ರೌಪದಿಯ ಮುಂದೆ ನಿಂತು |ಬುದ್ಧಿಯಿಂದಲೆಲ್ಲವನು ಬಿನ್ನಹಮಾಡಲು 2ಅಮ್ಮ ಕೇಳೆ ಅರಸುಗಳು ಅಚ್ಚ ಪಗಡೆ ಪಂಥವಾಡಿ |ಹೆಮ್ಮೆಯಿಂದ ಜೂಜಿಗಿಟ್ಟು ಲೆತ್ತವಾಡಲು ||ಧರ್ಮರಾಯ ಸೋತನೆಂದು ಸತ್ಯವಚನಿ ಕೌರವಂಗೆ |ನಿಮ್ಮ ನಿಜದಿ ಸೇರಿ ಆಗ ಕೊಟ್ಟರೆಂದರು 3ಪಟ್ಟಪದವಿ ಅವರಿಗಾಗಿ ಬಡವರಾಗಿ ಇರುವೆವೆಂದರೆ |ಕಿಟ್ಟ ಪಗಡೆ ಪಂಥ ಜೂಜಿದೆಲ್ಲಿ ಒದಗಿತು ? ||ದುಷ್ಟ ಕೌರವನು ಎನ್ನ ಲಜ್ಜೆ - ನಾಚಿಕೆಯ ಕೊಂಡು |ಭ್ರಷ್ಟ ಮಾಡುವನು ಎಂದು ಬಳಲಿ ದ್ರೌಪದಿ 4ಬಾಗಿ ಬಳುಕಿ ಬೆದರಿ ಬಿಕ್ಕಿ ಕಣ್ಣ ನೀರನುದುರಿಸುತಲಿ |ಮಾಗಿಯ ಕೋಗಿಲೆಯಂತೆಕಾಯ ಒಲೆಯುತ ||ಆಗ ಕೃಷ್ಣನಂಘ್ರಿಗಳನು ಅಂತರಂಗದಲಿ ನೆನೆದು |ಸಾಗಿಸಾಗಿ ಹೆಜ್ಜೆ ಇಡುತ ಸಭೆಗೆ ಬಂದಳು 5ವೀರಕರ್ಣ ಅಶ್ವತ್ಥಾಮ ವಿದುರ ಶಲ್ಯ ಭಗದತ್ತರು |ಕ್ರೂರ ಕೌರವ ದುಃಶಾಸನ ಗುರುಹಿರಿಯರು ||ಸಾರುತಿಪ್ಪ ಭಟರು ಪರಿವಾರ ರಾವುತರ ಕಂಡು |ಧಾರಿಣಿಗೆ ಮುಖವ ಮಾಡಿ ನಾಚಿನಿಂತಳು 6ಚೆಂದದಿಂದ ದುರ್ಯೋಧನ ಚದುರಿ ದ್ರೌಪದಿಯ ಕಂಡು |ಮುಂದರಿಯದೆ ಮುಗುಳುನಗೆಯ ಮಾತನಾಡಿದ ||ಅಂದು ಸ್ವಯಂವರದಲ್ಲಿ ಐವರಿಗೆ ಆದ ಬಾಲೆ |ಇಂದು ಎನ್ನ ಪಟ್ಟದರಸಿಗೊಪ್ಪಿದೆಯೆಂದನು7ಮಲ್ಲಿಗೆಯನು ಮುಡಿಯೆ ನಾರಿ ಮುದ್ದುಮೊಗದ ಒಯ್ಯಾರಿಚೆಲ್ಲೆಗಂಗಳ ದ್ರೌಪದಿಯೇ ಬಾರೆ ಎಂದನು ||ಬಿಲ್ಲು ಎತ್ತಲಾರದವನೆ ಬಂಡಣ ಕಾದದಿದ್ದವನೇ |ಹಲ್ಲುಕೀಳುವರೈವರು ಬೇಡವೆಂದಳು 8ಬಟ್ಟೆಬಡಕರೈವರಿಗೆ ಮಿತ್ರೆಯಾಗುವುದು ಸಲ್ಲ |ಪಟ್ಟಿಮಂಚಕೊಪ್ಪುವಂತ ಬಾರೆ ಎಂದನು ||ಕೆಟ್ಟಮಾತನಾಡದಿರೊ ಕ್ರೋಧದಿಂದ ನೋಡದಿರೊ |ರಟ್ಟೆಕೀಳುವರೈವರು ಬೇಡವೆಂದಳು 9ಅಡವಿತಿರುಕರೈವರಿಗೆ ಮಡದಿಯಾಗುವುದು ಸಲ್ಲ |ತೊಡೆಯ ಮೇಲೆ ಒಪ್ಪುವಂತೆ ಬಾರೆ ಎಂದನು ||ಬೆಡಗುಮಾತನಾಡದಿರೊ ಭೀಮಸೇನನ ಗದೆಯು ನಿನ್ನ |ತೊಡೆಯ ಮೇಲೆ ಒಪ್ಪುವದು ಬೇಡವೆಂದಳು 10ಅಚ್ಚ ಪೊಂಬಣ್ಣದ ಬೊಂಬೆ ಆನೆಯಂತೆ ನಡೆವ ರಂಭೆ |ಅಚ್ಚ ಮುತ್ತಿನಂತೆ ಬಿಂಬೆ ಬಾರೆ ಎಂದನು ||ಹೆಚ್ಚು - ಕುಂದನಾಡದಿರೊ ಪರರ ಹೆಣ್ಣ ನೋಡಿದಿರೊ |ಚುಚ್ಚಿ ಹಾಕುವರೈವರು ಬೇಡವೆಂದಳು 11ಎಷ್ಟುಬಿಂಕ - ಬಡಿವಾರವು ಹೆಣ್ಣ ಬಾಲೆಗಿವಳಿಗೆಂದು |ಸಿಟ್ಟಿನಿಂದ ದುರ್ಯೋಧನ ಸಾರಿ ಕೋಪಿಸಿ ||ಉಟ್ಟ ಸೀರೆ ಸೆಳೆಯಿರಿವಳಉಬ್ಬು ಕೊಬ್ಬು ತಗ್ಗಲೆಂದು |ದೃಷ್ಟಿಯಿಂದ ದುಃಶಾಸಗೆ ಸನ್ನೆ ಮಾಡಿದ 12ದುರುಳ ದುಃಶಾಸನ ಬಂದು ದ್ರೌಪದಿಯ ಮುಂದೆ ನಿಂತು |ಕರವ ಪಿಡಿದು ಸೆರಗಹಿಡಿದು ನಿರಿಯ ಸೆಳೆಯಲು ||ಮರುಳು ಆಗದಿರೋ ನಿನ್ನ ರಕ್ತದೊಳಗೆ ಮುಡಿಯನದ್ದಿ |ಕರುಳ ದಂಡೆಯನ್ನೆ ಮಾಡಿ ಮುಡಿವೆನೆಂದಳು 13ಗುಲ್ಲುಗಂಟಿ ಹೆಣ್ಣೆ ನಿನ್ನ ಕಾಡಿ ಬಳಲಿಸುವೆನು ಎಂದು |ಗಲ್ಲದಲ್ಲಿ ಕೈಯನಿಕ್ಕಿ ನಿರಿಯ ಸೆಳೆಯಲು ||ನಿಲ್ಲೊ ನಿಲ್ಲೊ ಪಾಪಿ ನಿನ್ನ ನಾಲಗೆ ಎರಡಾಗಿ ಸೀಳಿ |ಪಲ್ಲಿನಲ್ಲಿ ಕೇಶ ಹಿಕ್ಕಿಕೊಂಬೆನೆಂದಳು 14ಬೆನ್ನಿನಲಿ ಪೆಟ್ಟನಿಕ್ಕಿ ಭಂಡುಮಾಡುವೆನು ಎಂದು |ಕೆನ್ನೆಯಲಿ ಕೈಯನಿಕ್ಕಿ ನಿರಿಯ ಸೆಳೆಯಲು ||ರನ್ನೆ ವೀರಬೊಬ್ಬೆಯಿಕ್ಕಿ ರಭಸದಿಂದ ಸಾರುತಲಿ |ಪನ್ನಗಶಯನ ಕೃಷ್ಣ ಕೃಷ್ಣ ಕಾಯೊ ಎಂದಳು 15ಮಚ್ಚ ಕೂರ್ಮವರಹ ಕಾಯೊ, ಮುದ್ದು ನಾರಸಿಂಹ ಕಾಯೊ |ಹೆಚ್ಚಿನ ವಾಮನನೆ ಕಾಯೊಭಾರ್ಗವ ಕಾಯೊ ||ಅಚ್ಯುತ ರಾಮಕೃಷ್ಣ ಕಾಯೊ ಬೌದ್ಧ ಕಲ್ಕಿರೂಪ ಕಾಯೊ |ಸಚ್ಚಿದಾನಂದ ಸ್ವಾಮಿ ಕಾಯೊ ಎಂದಳು16ಸಜ್ಜನರ ಪ್ರಿಯನೆ ಕಾಯೊ ಸಾಧುರಕ್ಷಕನೆ ಕಾಯೊ |ನಿರ್ಜರವಂದಿತನೆ ಕಾಯೊ ನರಹರಿ ಕಾಯೊ |ಅರ್ಜುನನ ಸಖನೆ ಕಾಯೊ ಆನತಪಾಲಕನೆ ಕಾಯೊ |ಲಜ್ಜೆ - ನಾಚಿಕೆಯ ಕಾಯೊ ಸ್ವಾಮಿ ಎಂದಳು 17ಸಿಂಧು ಸಾಗರದ ಶಯನ ದ್ರೌಪದಿಯ ಮೊರೆಯಕೇಳಿ |ಅಂದು ಉಟ್ಟ ವಸ್ತ್ರಗಳುಅಕ್ಷಯ ವೆಂದನು||ಒಂದು ಎರಡು ಮೂರು ನಾಲ್ಕು ಕೋಟ್ಯಸಂಖ್ಯ ಸೀರೆಗಳು |ನೊಂದು ಬೆಂದು ದುಃಶಾಸನು ನಾಚಿಕುಳಿತನು 18ನೋಡಿದರು ದ್ರೌಪದಿಯ ಮಾನರಕ್ಷ ಲೀಲೆಗಳನು |ಮಾಡಿದರು ಮಾಧವನ ಮುದ್ದು ಸ್ತೋತ್ರವ ||ಮೂಢ ಕೌರವನ ಕೂಡಮಾನಿನಿ ದ್ರೌಪದಿಯು ಪಂಥ - |ವಾಡಿ ತನ್ನ ಪತಿಗಳೈವರನ್ನು ಗೆಲಿದಳು19ಕೇಶಮುಡಿಗಳನ್ನಕಟ್ಟಿ ಕ್ಯೆಯಕಾಲಮಣ್ಣನೊರಸಿ |ಸಾಸಿರನಾಮದ ಕೃಷ್ಣನು ಸುರರ ಪಾಲಿಪ |ವಾಸಿಯುಳ್ಳ ಕೃಷ್ಣ ಎನ್ನ ವಹಿಸಿ ಮಾನಕಾಯ್ದನೆಂದು | ಸಂತೋಷದಿಂದ ದ್ರೌಪದಿಯು ಮನೆಗೆ ಬಂದಳು 20ಇಂತು ಆ ದ್ರೌಪದಿಯ ಮಾನರಕ್ಷ ಲೀಲೆಗಳನು |ಸಂತತದಲಿ ಹಾಕಿಕೇಳಿ ನಲಿವ ಜನರಿಗೆ |ಸಂತಾನ ಸೌಭಾಗ್ಯ ಸಕಲಭೀಷ್ಟೆಗಳನು ಕೊಡುವ |ಕಂತು ಜನಕ ನಮ್ಮ ಪುರಂದರವಿಠಲನು21
--------------
ಪುರಂದರದಾಸರು
ರಂಗರಾಯರ ಮುಂದೆಇವರಕೊಂಗಬುದ್ಧಿಕೋಲಹೊಯ್ಸಿಹಂಗಿನ ಮುಯ್ಯ ಕಳೆದೆವಇವರ ತಂಗಿಯರಮಾರಿಭಂಗಿಸಿ ನಾವುಪ.ಅಪ್ಪ ಅರಸು ಆಗೊ ಇವರತಪ್ಪಿನ ಮಾತಿಲೆ ಸೋಲಿಸಿನಿಮ್ಮಪ್ಪ ನಿಮ್ಮರಸನೆಂಬೊಚಪ್ಪಾಳೆಯನಿಕ್ಕಿಸಿ ನಾವು 1ಒಡ ಹುಟ್ಟಿದಣ್ಣನ ದ್ರೌಪತಿಒಡಗೂಡುತಲಿ ತಾ ಇಡುವರೆಈ ಆಣೆ ನಮಗೆನುಡಿದ ಆ ನುಡಿಗೆ ನಾಚಿಸಿ ಇವರನು 2ಹುಟ್ಟು ಹೊಂದೊದೆಂಬೋದಿವರಬಿಟ್ಟು ಕಡೆಗೆ ಮಾಡಿಸಿನಾವುಶ್ರೀ ಕೃಷ್ಣನಂಫ್ರಿ ಕಮಲವನ್ನುಎಷ್ಟು ದಯದಿ ತೋರಿಸಿ 3ಅಷ್ಟ ಮದದ ತಮವು ಎಂಬೊಕುಟ್ಟಿ ಹಿಟ್ಟು ಮಾಡಿಸಿ ನಾವುಸಿಟ್ಟು ಕೋಪವೆಂಬೊ ಬಣವಿ ಒಟ್ಟಿಕೆಂಡ ಹೇರಿಸಿ ನಾವು 4ಸತ್ವರಜ ತಮವು ಎಂಬೊಕತ್ತಲೆಯ ಅಡಗಿಸಿ ನಾವುಮತ್ತೆ ಜ್ಞಾನ ಸೂರ್ಯನಪ್ರಶಸ್ತ ಉದಯ ಮಾಡಿಸಿ 5ನೀತಿ ತಪ್ಪಿದ ಬಾಲೆಯರಭೂತ ಹೊರಗೆ ಹೊರಡಿಸಿನಾವುಮಾತ್ರಗಳೆಂಬೊ ಇವರಗಾತ್ರಬಿಟ್ಟು ದೂರ ಇಡಿಸಿ6ಸಂಚಿತಗಾಮಿಯು ಇವರಕಿಂಚಿತುಳಿಯದಲೆ ಹಾರಿಸಿ ನಾವುಪಂಚ ಪಾಂಡವರ ಮಡದಿಪಾಂಚಾಲಿಯ ನಾಚಿಸಿ 7ದಶೇಂದ್ರಿಯಗಳೆಂಬೊ ಕುದುರೆಗಳದಶ ದಿಕ್ಕಿಗೆ ಓಡಿಸಿ ನಾವುಮುಸುಕು ಹಾಕಿದ ಅಂಗವನುಕೊಸರಿ ಕೊಸರಿ ಝೂಡಿಸಿ 8ನಿಂದ್ಯವಾದಪಟಲುವಿದ್ಯೆಚಿಂದಿ ಚಿಂದಿ ಮಾಡಿಸಿ ನಾವುತಂದೆ ರಾಮೇಶನ ಪಾದಕೆತಂದು ಇವರ ಹೊಂದಿಸಿ 9
--------------
ಗಲಗಲಿಅವ್ವನವರು
ರಸಿಕರವರ ಪ್ರಿಯರಸ ಕಾವನು ಭಕ್ತಿಕುಶಲನಿಗಿಹಪರಕುಶಲಾಘ ದೂರ ಪ.ಪಥಮನೆ ವನದಿ ಶ್ರೀಪತಿ ಮಹಿಮೆ ಘೋಷಿಸಿಪ್ರಥಮ ಯಾಮದಿ ಹರಿಪ್ರತಿ ಮುದವೇರಿಸ್ತುತಿಸಿ ತಾರತಮ್ಯದ ಸ್ಥಿತಿ ಸನ್ಮತದೊಳಿದ್ದುಸತಿತನುಜಸೌರಂಭ ಸತತ ಹರಿಯದೆಂಬ1ಹಿತಾಹಿತವರಿದು ವಿಹಿತಹೇತು ಬಲಿದು ವಿರತಿಭಕ್ತಿ ಜ್ಞಾನ ನಿರುತ ಭೇದ ನಿರತನಾಗಿ ಕುಜನವಾರತೆಯ ಕೇಳದಿರುವಚತುರರಸುಕೃತಸಂಚಿತದಿರವೇ ಲೇಸು2ವಿಷಮೀರೈದಿಂದ್ರಿಯ ವಶಮಾಡಿ ಮನೋರಿಯೋಲ್ಸುಸುಖಾವಿಡಿದುಕೊಂಬಾ ಸುಸುಖಾವುಂಬಭೈಷಜ್ಯ ಭವರೋಗ ಭೇಷಜನೆನಿಪ ಜಗಪ್ರಸನ್ನ ವೆಂಕಟೇಶಾಂಘ್ರಿ ಸ್ಪøಶ್ಯನಾದಾರೋಗ್ಯ 3
--------------
ಪ್ರಸನ್ನವೆಂಕಟದಾಸರು
ರಾಘವೇಂದ್ರಾ - ಸದ್ಗುಣಸಾಂದ್ರಾ ಪರಾಘವೇಂದ್ರಾ ಅನು - ರಾಗದಿ ಭಕ್ತರರೋಗವ ಕಳೆದು ಸು - ಭೋಗವ ಸಲಿಸೋ ಅ.ಪಧೀಮಂತರಿಗತಿ - ಕಾಮಿತವೀವೊಶ್ರೀಮಂತನೆ ಎನ - ಕಾಮಿತ ಸಲಿಸೋ 1ಆಪದ್ಬಾಂಧವ - ಕೋಪವ ಮಾಡದೆನೀ ಪಾಲಿಸೋ ಎನ್ನ - ಪಾಪವ ನೋಡದೆ 2ಅನ್ಯನಲ್ಲವೊ - ನಿನ್ನ ಸುಭಕ್ತನುಮನ್ನಿಸಿ ದಯದಿ ನೀ - ಎನ್ನನು ಕಾಯೋ 3ಜನ್ಯನ ಜನಕನು - ಮನ್ನಿಸದಿರಲುಅನ್ಯರು ಕಾಯ್ವರನನ್ಯಪಾಲಕನೇ 4ಈಶನು ನೀನೈ - ದಾಸನು ಎನ್ನನು -ದಾಶಿನ ಮಾಡದೆ - ಪೋಷಿಸಿ ಪೊರೆಯೈ 5ಎಂದಿಗೆ ನಿನ್ನನು - ಪೊಂದುವೆ ಗುರುವರತಂದೆಯೆ ತೋರಿಸೋ - ಮುಂದಿನ ಗತಿಯಾ 6ಪೋತನು ನಾನೈ - ಮಾತನು ಲಾಲಿಸೊನೀತ ಗುರುಜಗನ್ನಾಥ ವಿಠಲ ಪ್ರಿಯ 7
--------------
ಗುರುಜಗನ್ನಾಥದಾಸರು
ರಾಘವೇಂದ್ರಾ ನೀನೆ ಪಾಲಿಸೊಶ್ರಿತಜನ- ಪಾಲಾxmಟ veಡಿsioಟಿ='1.0' eಟಿಛಿoಜiಟಿg='%SಔUP-ಇಓಅಔಆIಓಉ%'ಯೋಗಿಜನಾ - ಲೋಲನೆ ಪಜಾಗುಮಾಡದೆನಿನ್ನಾನು- ರಾಗದಿ ಮನಸಾರಬಾಗಿ ನಮಿಸಿ ಬೇಡಿಕೊಂಬೆ -ಯೋಗಿಕುಲ ಶಿರೋಮಣಿಯೇ ಅ.ಪಅನುಭವ ಮಾಡಿದೆನು |ಘನಮಹಿಮನೆ ನಿನ್ನಘನಸುಖವಿತ್ತ್ತು ಎನ್ನ| ಮನ ಪೂರ್ತಿ ಭಜಿಸುವಂತೆಅನುಪಮ ಙ್ಞÕನ - ಭಕ್ತಿ | ಜನುಮ ಜನುಮದಿ ಇತ್ತು 1ಹೇಸಿ - ಸಂಸಾರದಲ್ಲಿ | ಮೋಸಗೊಂಡು ಅದರ ಸುಖಲೇಶಗಾಣದೆ ಬಹು | ಕ್ಲೇಶಬಡುವೆನಯ್ಯಾ ನಿತ್ಯಾಈಶ ! ಸಂಸಾರ ಮಹ | ಪಾಶಬಿಡಿಸಿ ತವೋ -ಪಾಸನದಲ್ಲಿ ಮನ | ಲೇಸು ಇತ್ತು ನಿತ್ಯಾದಲ್ಲಿ 2ದೃಷ್ಟಿ ಇತ್ತು ಗುರುಜಗನ್ನಾಥ | ವಿಠಲನ್ನ ತೊರಿಸಯ್ಯಾ 3
--------------
ಗುರುಜಗನ್ನಾಥದಾಸರು
ರಾಜರ ನೋಡಿರೈ ಇನತತಿತೇಜರ ಪಾಡಿರೈ ಪಪೂಜಕÀರಾ ಸುರಸನ್ನುತರ ಅ.ಪವರಪಾಷ್ರ್ಣಿದ್ವಯ ಪರದಲಿ ಶೋಭಿಪಜಾನುಗಳೋ ಶಶಿಬಿಂಬಗಳೋ 1ಕಟಿತಟವೋಕೇಸರಿನಡುವೋತುಂಬಿದ ಕರುಣನ ಗುಂಭಸುನಾಭೀ -ತಾವರೆಯೋ ಗಂಗಾಸುಳಿಯೋ 2ಸುಂದರಕುಕ್ಷಿಸುಚಂದನ ಚರ್ಚಿತದಂಡಗಳೋಕರಿಶುಂಡಗಳೋ3ಯತಿಕುಲವರ್ಯನ ಸ್ಮಿತಯುತವಕ್ತ್ರಕ್ಷಿತಿಸುರ ವಂದ್ಯನ ಅತಿ ಸುಂದರ -ನಯನಗಳೋ ನೈದಲಿಯುಗಳೋ 4ಘಣೆಯೋ ಅಕ್ಷತಮಣಿಯೋ 5ಮಂದಿರವೆನಿಸುವ ವೃಂದಾವನಶುಭವೃಂದಾರಕಘನವೃಂದದಿ ರಾಜಿಪದಾತಾಜಗದೊಳು ಖ್ಯಾತಾನೀತಾ ಭಾವಿ ವಿಧಾತಾ 6ಶಿಷ್ಟರ ಸುಮನೋಭೀಷ್ಟದ ಗುರುಜಗ -ನ್ನಾಥವಿಠಲ ದೂತಾ 7
--------------
ಗುರುಜಗನ್ನಾಥದಾಸರು
ರಾಮ ನಾಮಾಮೃತವ ಕೊಂಬವರೆಲ್ಲ |ಪ್ರೇಮದಿಂದಚ್ಯುತ ಪೇಟೆಗೆ ಬನ್ನಿರೆ ಪಒಮ್ಮನವೆರಸಿ ಬನ್ನಿ |ನಿಮ್ಮ ಮನಕೆ ಬಂದಂತಳೆದು ಕೊಳ್ಳಿ ||ರಾಮಟಿಂಕೆಯ ಸಲಿಸಿ ಶ್ರೀ ಕೃಷ್ಣನೆಂಬ |ಧರ್ಮದ ಸಂತೆ ನೆರೆದಿದೆ ಬನ್ನಿ 1ಉಂಟು ನಾಲ್ಕು ಕುದುರೆಗಳು |ಎಂಟಾನೆಯ ಬಿರುಬಲೆಯಲ್ಲಿ ಕಟ್ಟಬಹುದು ||ಸಾಲವರ್ಣದ ಪಟ್ಟಿಯು ಏಳಿರೆ |ಏಳುಲೋಕವು ಬಲ್ಲದು 2ಬೆಲೆಯಿಲ್ಲದ ಮುತ್ತುಂಟು |ಏಳೇಳ್ಪುಟಿಯ ಹೊಳೆವಪರಂಜಿಯ ಚಿನ್ನವುಂಟು ||ಥಳಥಳಿಸುವ ನೀಲಿಯ ಕೊಂಬುವರೆಲ್ಲ |ನಳಿನನಾಭನ ಸನ್ನಿಧಿಗೆ ಬನ್ನಿ 3ಎರಡು ಕಾಶಿಯಲಳೆವ ಕೊಳಗವು |ಪಿರಿದುದೊಂದು ಕಿರಿದೊಂದು ಉಂಟಲ್ಲಿಗೆ ||ಗರಳವವೊರಿಸಲು ರತ್ನವು |ಮರುತಾಶ್ರಯನ ಸನ್ನಿಧಿಗೆ 4ಆರಂಗಡಿಯ ಸುಟ್ಟು |ಸೂರೆಮಾಡಿ ಏಳು ಎಂಟು ಹಟ್ಟಕೊರವನೊ...ದುದು ||ಸಾರಿಸಿ ನವವಿಧ ಶುಚಿಯ ಹೇಳಿದ |ಸರ್ವಾತ್ಮಗೆ ಸೌದೆಯ 5ಸುಂಕಿಗರೈವರಿಗೆ ಹರುಷದಿಂದ |ಪಂಕಜನಾಭನ ಚೀಲ ತೋರಿ ||ಶಂಕೆಯಿಲ್ಲದೆ ನಡೆವ ಅವರನೆಲ್ಲ |ವಂಚಿಸಿ ಎದೆಯ ಟೊಣೆದು ಹೋಗುವಾ 6
--------------
ಪುರಂದರದಾಸರು
ರಾಮ ಮಂತ್ರವ ಜಪಿಸೊ - ಏ ಮನುಜಾ ಶ್ರೀರಾಮ ಮಂತ್ರವ ಜಪಿಸೊ ಪಆ ಮಂತ್ರ ಈ ಮಂತ್ರ ನೆಚ್ಚಿ ಕೆಡಲು ಬೇಡಸೋಮಶೇಖರಗಿದು ಭಜಿಸಿ ಬಾಳುವ ಮಂತ್ರ ಅಪಕುಲಹೀನನಾದರೂ ಕೂಗಿ ಜಪಿಸುವ ಮಂತ್ರಛಲದಿ ಬೀದಿಯೊಳು ಉಚ್ಚರಿಪ ಮಂತ್ರ ||ಹಲವು ಪಾತಕಗಳ ಹಸನಗೆಡಿಸುವ ಮಂತ್ರಸುಲಭದಿಂದಲಿ ಸ್ವರ್ಗ ಸೂರೆಗೊಂಬುವ ಮಂತ್ರ 1ಸನುಮುನಿಗಳಿಗೆಲ್ಲ ಸುಲುಗೆಯಾಗಿಹ ಮಂತ್ರಮನುಮುನಿಗಳಿಗೆಲ್ಲ ಮೌನ ಮಂತ್ರ ||ಹೀನಗುಣಗಳೆಲ್ಲ ಹಿಂಗಿ ಹೋಗುವ ಮಂತ್ರಏನೆಂಬೆ ಧ್ರುವನಿಗೆ ಪಟ್ಟಗಟ್ಟಿದ ಮಂತ್ರ 2ಸಕಲ ವೇದಗಳಿಗೆ ಸಾರವಾಗಿಹ ಮಂತ್ರಮುಕುತಿ ಪಢಕೆ ಇದು ಮೂಲ ಮಂತ್ರ ||ಶಕುತ ಪರಕೆ ಇದು ಬಟ್ಟೆದೋರುವ ಮಂತ್ರಸುಖನಿಧಿ ಪುರಂದರವಿಠಲ ಮಹಾಮಂತ್ರ 3
--------------
ಪುರಂದರದಾಸರು
ರಾಮ ರಾಮ ರಘುನಾಥನೆ ಸುರಸ್ತೋಮತಿಲಕ ವಿಶ್ವಕರ್ತನೆ ದಿವ್ಯಸ್ವಾಮಿ ಪುಷ್ಕರತೀರವಾಸನೆ ನನ್ನಸ್ವಾಮಿವರಾಹವೆಂಕಟೇಶನೆಪ.ಕಾಯೊ ಕಾಯೊ ಮಧುಮರ್ದನಭವಸಾಯಕದೂರ ಜನಾರ್ದನ ಯದುನಾಯಕಧೃತಗೋವರ್ಧನ ನಾರಾಯಣ ನಿಜಜನವರ್ಧನ 1ಹೊಂದಿದಭಟಕಲ್ಪವೃಕ್ಷನೆ ನನ್ನತಂದೆ ತಾಯಿ ವಿಶ್ವಕುಕ್ಷನೆಕ್ಷೀರಸಿಂಧುಮಂದಿರ ಅಧ್ಯಕ್ಷನೆ ನಿನ್ನಿಂದಾರುಗತಿ ಪದುಮಾಕ್ಷನೆ 2ಅಡಿಗಡಿಗೊದಗದ ತಪ್ಪನೆ ಇಕ್ಕಡಿಮಾಡುದೇವ ತಿಮ್ಮಪ್ಪನೆಮಾಯಾಸಡಕ ತಪ್ಪಿಸು ಸುಪ್ರದೀಪನೆನಿತ್ಯಬಿಡದೆ ಕ್ರೀಡಾದ್ರಿಯೊಳಿಪ್ಪನೆ 3ಲೇಶಭಕ್ತಿಗೆ ಮನ ಹಾರಿತು ವಿಷಯಾಸೆಯಟವಿಯನೆ ಸೇರಿತು ಈಹೇಸಿ ಚಂಚಲಚಿತ್ತ ಹೋರಿತು ತವದಾಸರ ಸಂಗಕೆ ಜಾರಿತು 4ಕುಸುಮಶರನಂತ:ತೇಜನೆ ಮಹಮಿಸುನಿವೆಟ್ಟದ ಕಲ್ಪಭೂಜನೆ ಅಜÕನಿಶಾಕುಲ ಉಡುಗಣರಾಜನೆ ಶ್ರೀಪ್ರಸನ್ವೆಂಕಟ ರಾಜಾಧಿರಾಜನೆ 5
--------------
ಪ್ರಸನ್ನವೆಂಕಟದಾಸರು
ರಾಮ ರಾಮ ಸೀತಾರಾಮ ರಘುರಾಮ ಪ.ರಾಮ ರಾಮ ರಘುನಂದನ ತೋಷನಆಮಿಷ ಪಾದಾಂಬುಜ ಪಾವನನಾಮ ವಿಮಲ ಕಮಲಾಯತ ಲೋಚನಭೂಮಿಜಾರಮಣ ಸದಾ ಶುಭಮಹಿಮನೆ 1ದಂಡ ಕುಖರಹರ ವಂದಿತ ಸುಜಟಾಮಂಡಿತಮೌಳಿಮುನೀಂದ್ರ ಕರಾರ್ಚಿತಚಂಡಕುಲೇಶಖಳನಿಶಾಚರದಂಡನವರಕೋದಂಡವಿದಾರಿ2ವಾರಿದಶಾಮ ದಯಾಂಬುಧಿ ಭಕ್ತ ಸಮೀರಜಸೇವ್ಯವಿಭೀಷಣವರದ ಸುಸ್ಮೇರವದನ ಸಾಮ್ರಾಜ್ಯ ಪಾರಾಯಣಭೂರಿಪ್ರಸನ್ವೆಂಕಟ ಕೃಷ್ಣ ನಮೊ3
--------------
ಪ್ರಸನ್ನವೆಂಕಟದಾಸರು