ಒಟ್ಟು 15952 ಕಡೆಗಳಲ್ಲಿ , 137 ದಾಸರು , 7176 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಯಾರಿಗೆ ಯಾರು | ಯಾರಿಗು ಯಾರು ಯಾರಿಲ್ಲಾ | ಯಾರಿಲ್ಲ ಪ ನಾರಾಯಣನೊಬ್ಬ | ಸಾರುವ ಸಮಯಕೆ ಬೇರೊಬ್ಬರಿಲ್ಲ ಕಂಡ್ಯಾ ಜೀವವೇ ಅ.ಪ. ತಂದೆ ತಾಯಿ ಸುತ | ಬಂಧು ಬಳಗ ಜನಮಂದಿಯೊಬ್ಬರು ಬರರೊ ||ಸಂದೋಹದಿಂದ ಜೀವ | ನೊಂದು ಪೋಗುವ ವೇಳೆಬಂಧು ಬಳಗ ರೋದನಾ | ಬಲು ರೋದನ 1 ಅಂದಾದರವನ್ಹಿಂದೆ | ಪೋಗೋರೊಬ್ಬರ ಕಾಣೆಸಂದೋಹ ಸುಟ್ಟು ಬರುವರೋ ||ಬಂದು ಮಶಣದಿಂದ | ಮಿಂದು ಮೆಲ್ಲದೆ ಇರುವಮಂದಿಯೊಬ್ಬರ ಕಾಣೆನೋ | ಎಲ್ಲು ಕಾಣೆನೊ 2 ಕಾಲ ಕಳೆಯುತ ಬರೆ | ಮೇಲಾದ ದುಃಖ ಮರೆಕಾಲಾ ನಾಮಕ ಲೀಲೆಯೋ ||ವ್ಯಾಳಾ ವ್ಯಾಳಕೆ ಮೆದ್ದು | ಜೋಲು ಮುಖವ ಬಿಟ್ಟುಲೀಲಾ ವಿನೋದ ಮಾಡರೇ | ಅದ ಬಿಡುವರೇ 3 ಪಥ ಸೇರೋ | ಅದ ಸೇರೋ 4 ಬಂದದ್ದು ಹೋದದ್ದು | ಮುಂದೆ ಬರುವುದನುದ್ವಂದ್ವಕರ್ಮಗಳೆಲ್ಲವಾ ||ಸುಂದರ ಗುರು ಗೋ | ವಿಂದ ವಿಠಲ ಪಾದದ್ವಂದ್ವ ಕರ್ಪಿಸೊ ಬಿಡದೇ | ಮರೆಯದೇ 5
--------------
ಗುರುಗೋವಿಂದವಿಠಲರು
ಯಾರಿರಬಹುದೀತ ಗೆಳತೀ ಯಾರಿರಬಹುದೀತ ಪ ಯಾರೆಂದರಿಯದೆ ಪೋಗದೆ ಕೊರತೆ ಯಾರಿರಬಹುದೀತ ಅ.ಪ ಸಾವಿರ ಸಂಖ್ಯೆಯ ಗೋವಳರಿದ್ದರೂ ಯಾವನಿಗೀ ವಿಧ ಠೀವಿಯಿರುವುದೇ ಹಾವಭಾವಗಳ ನೋಡಲು ಈತನ ಗೋವಳ ವೇಷವದಾವ ಕಾರಣವೋ 1 ನಮಗೇತಕೆ ಈತನ ಗೋಜೆಂದರು ಕಮನೀಯನ ನೋಡುತ ನೋಡುತ ಬಲು ಮಮತೆಯು ಮನದಲಿ ಏರುತಲಿರುವುದು ಕಮಲನಯನೆ ನಾ ನಮಿಸುವೆ ಪೇಳೆ 2 ಸರಳನೋ ದುರುಳನೋ ಅರಿಯುವುದೆಂತೇ ಕರೆಯದೆ ಹೋದರೆ ಜರಿಯಲುಬಹುದೇ ಮುರಳಿಯ ನಾದದ ಕರೆ ಬಂದರೆ ನಾ ಬರವೆನೆಂದರು ಹೇ ಸರಸ ಪ್ರಸನ್ನ 3
--------------
ವಿದ್ಯಾಪ್ರಸನ್ನತೀರ್ಥರು
ಯಾರು ಇದ್ದರೇನು ನಿನ್ನ ಪಥಕೆ ಬಾರರೋ ಶ್ರೀಹರಿ ಮುರಾರಿ ಎಂದು ಗತಿಯ ನೋಡಿ ಕೊಂಡಿರೋ ಪ ಹೊನ್ನು ಹಣವು ಚಿನ್ನ ಚಿಗುರು ಬಣ್ಣ ಬಂಗಾರವಿರಲು ಎನ್ನವರು ತನ್ನವರು ಎಂದು ಬರುವರೋ ಅನ್ನಕಿಲ್ಲದಿರಲು ಕೆಟ್ಟು ಅಲ್ಲಿ ಪರಿಕಾಲದಲ್ಲಿ ನಿನ್ನ ಕುಶಲವಾರ್ತೆಗಳನು ಮುನ್ನ ಕೇಳರೋ 1 ಇಂದು ಹಬ್ಬ ಹುಣ್ಣಿಮೆಂದು ಬಂಧು ಬಳಗವೆಲ್ಲನೆರೆದು ತಿಂದು ನಿನ್ನ ಹಿಂದೆ ಮುಂದೆ ತಿರುಗು ತಿಪ್ಪರೋ ಬಂಟ ಬಹಳ ಭಾಗ್ಯವೆಲ್ಲ ಕುಂದಿ ಹೋದ ಕಾಲದಲ್ಲಿ ಮುಂದೆ ಸುಳಿಯರೋ 2 ತುಂಬಿ ಇರಲು ಎಡದೆ ಬಿಡದೆ ನೆಂಟರಿಷ್ಟರೆಂದು ತಿಂಬರೋ ವಡವೆ ವಸ್ತು ನಷ್ಟವಾಗಿ ಬಡತನವು ಬಂದ ಬಳಿಕ ಬಿಡುವ ಕೈಯ ನಿನ್ನ ನೊಂದ ನುಡಿಯ ನುಡಿಸರೋ 3 ಮಡದಿ ಮಕ್ಕಳೆಲ್ಲ ನಿನ್ನ ಒಡನೆ ಹುಟ್ಟಿದವರು ಸಹಿತ ಕಡು ಮಮತೆಯಿಂದಲವರು ನೋಡಿ ನಡೆವರೋ ಉಡಲು ತೊಡಲು ಒಡಲಿಗಿಷ್ಟು ಕಡಿಮೆಯಾಗಿ ಎಂದು ಹೊಡೆದು ಕೊಂಬರೋ 4 ಮೃತ್ಯುನಿನ್ನ ಹತ್ತಿರಿದ್ದು ಹೊತ್ತು ವೇಳೆ ನೋಡುತಿಹುದು ವ್ಯರ್ಥವಾಗಿ ಇವರ ನಂಬಿ ಕತ್ತೆ ಕೆಡದಿರೋ ಸತ್ತು ಹುಟ್ಟಿ ಸಾಯ ಬೇಡಿ ಚಿತ್ತದಲ್ಲಿ ಭೀಮನಕೋಣೆ ಗೊತ್ತಿಲಿದ್ದ ಲಕ್ಷ್ಮೀಪತಿಯ ಒತ್ತಿ ಭಜಿಸಿರೋ 5
--------------
ಕವಿ ಪರಮದೇವದಾಸರು
ಯಾರು ಇಲ್ಲ ಎನಗೆ ನಿನ್ನ ಹೊರತು ವಾರಿಜಾಲಯೆ ತಾಯೆ ಪ ಪಾರತೋರೆ ಈಸಲಾರೆ ಅ.ಪ ಈ ದೇಹದ ತಂದೆ ತಾಯ್ಗಳು ಪೋದರು ಮೊದಲೆ ಆದರಿಸುವರಿನ್ಯಾರು ಕಾದುಕೋ ಕೈಬಿಡದಿರು ಕರುಣದಿ 1 ಪಾರಂಪರ್ಯದಿ ಜೀವರು ನಿನಗೆ ಪುತ್ರರಲ್ಲವೆ ಬಾರಿ ಬಾರಿಗೂ ಮೊರೆಯಿಡುವೆ ಭಕ್ತಾರ್ತಿಹಾರಿಣಿ ರುಕ್ಮಿಣಿ2 ವೆಂಕಟರಮಣನ ರಾಣೀ ವಿಶ್ವಜನನೀ ವಿವಿಧ ರೂಪಿಣಿ 3 ಆನಂದದಾಯಕೆ ನೀನು ಜಾನಕಿದೇವಿ ಕೈಬಿಡದಿರು 4 ಅರಿತು ಅರಿಯದೆ ಮಾಡಿದ ದುರಿತವ ಕಳೆಯಮ್ಮ ಪರದೇಶಿ ಅನಾಥ ನಾನು ಗುರುರಾಮ ವಿಠಲನರ್ಧಾಂಗಿಯೆ5
--------------
ಗುರುರಾಮವಿಠಲ
ಯಾರು ಬಂದರೊನಮ್ಮ ದ್ವಾರಕೆಯೊಳಗಿಂದುಭೋರೆಂಬೊ ಕಾಳಿ ಹಿಡಿಸುತ ರಮಣಿ ಪ. ಮುತ್ತಿನ ತುರಾಯಿಯವರು ಹತ್ತಿವಾಜಿಮ್ಯಾಲೆ ಚಿತ್ತ ಚಲಿಸದಲೆ ಬರತಾರೆಚಿತ್ತ ಚಲಿಸದಲೆ ಬರತಾರೆರುಕ್ಮಿಣಿ ಅಚ್ಯುತನ ನೋಡೊ ಭರದಿಂದ ರಮಣಿ1 ರಥಿಕಾ ರಥಿಕರು ತಮ್ಮ ರಥವ ಮುಂದಕ್ಕೆ ಹಾಕಿ ಅತಿ ವೇಗದಿಂದ ಬರುತಾರೆ ರಮಣಿಅತಿ ವೇಗದಿಂದ ಬರುತಾರೆ ದೇವಕಿಯಸುತ ನಂಘ್ರ್ರಿನೋಡೊ ಭರದಿಂದ ರಮಣಿ2 ನಲ್ಲೆಯರು ಮುತ್ತಿನ ಪಲ್ಲಕ್ಕಿ ಮಂದಕೆ ಹಾಕಿನಿಲ್ಲದಲೆ ಬೇಗ ಬರತಾರೆನಿಲ್ಲದಲೆ ಬೇಗ ಬರತಾರೆ ಲಕ್ಷ್ಮ್ಮಿವಲ್ಲಭನ ನೋಡೊ ಭರದಿಂದ 3 ತೇರಿನ ಬೀದಿಲೆ ಭೋರೆಂಬೊ ರಭಸಿಗೆಊರಜನವೆಲ್ಲ ಬೆರಗಾಗಿಊರಜನವೆಲ್ಲ ಬೆರಗಾಗಿಉಪ್ಪರಗಿ ಏರಿ ನೋಡುವವರು ಕಡೆಯಿಲ್ಲ4 ಬೀಡುಬಿಟ್ಟಿದ್ದ ಬೈಲು ಗಾಡಿ ಏರಿದವರು ಓಡಿಸಿ ಬೇಗ ಬರತಾರೆಓಡಿಸಿ ಬೇಗ ಬರತಾರೆಹರಿಪಾದ ನೋಡಬೇಕೆಂಬ ಭರದಿಂದ5 ಮದ್ದು ಬಾಣಬಿರಸು ರಥಿಣಿರಭಸಿಗೆ ಎದ್ದು ಜನೆರೆಲ್ಲ ಬೆರಗಾಗಿಎದ್ದು ಜನೆರೆಲ್ಲ ಬೆರಗಾಗಿ ಮುಯ್ಯದ ಸುದ್ದಿ ಕೇಳುವರು ಹರುಷದಿ 6 ಮಿತ್ರಿ ತಿಲೋತ್ತಮಾ ಮತ್ತೆಮೇನಕೆಯರುಥೈ ಥೈ ಎಂದು ಕುಣಿಯುತಥೈ ಥೈ ಎಂದು ಕುಣಿಯುತ ಬರುವಾಗಹತ್ತು ದಿಕ್ಕುಗಳು ಬೆಳಗೋವೆ7 ರಂಭೆ ಊರ್ವಸಿಯರು ಸಂಭ್ರಮದಿ ಕುಣಿಯಲುತುಂಬಿತು ನಾದ ಧರೆಯೊಳುತುಂಬಿತು ನಾದ ಧರೆಯೊಳುರುಕ್ಮಿಣಿ ಬಂದವರಾರೆಂದು ಬೆರಗಾಗಿ ರಮಣಿ8 ವಜ್ರ ಹಚ್ಚಿದ ಮನೆಗಳುಜತ್ತು ದೀವಿಗೆಯ ಸೊಬಗಿನ ಜತ್ತು ದೀವಿಗೆಯ ಸೊಬಗಿನ ಮನೆಯೊಳುಮಿತ್ರೆಯರು ನೋಡಿ ಬೆರಗಾಗಿ 9 ಕುಂದಣ ರಚಿಸಿದ ಅಂದಣವನೇರಿಕೊಂಡುಸಂದಣಿಸಿ ಬೇಗ ಬರುತಾರೆಸಂದಣಿಸಿ ಬೇಗ ಬರುತಾರೆ ನಮ್ಮ ಮುಕುಂದನ ಮನೆ ಎದುರಿಗೆ 10 ಧೀರ ಧೀರರು ತಮ್ಮ ತೇರು ವಾಜಿಯ ಇಳಿದುವೀರ ರಾಮೇಶನ ಮನೆ ಮುಂದೆವೀರ ರಾಮೇಶನ ಮನೆ ಮುಂದೆ ಹೇಳಲಿನಾರಿ ಒಬ್ಬಳನ ಕಳುಹೆಂದ ರಮಣಿ 11
--------------
ಗಲಗಲಿಅವ್ವನವರು
ಯಾರು ಬಲ್ಲರು ವೆಂಕಟೇಶ ನಿನ್ನೊಳಿಹ ಚಾರು ಗುಣಶೀಲವೆಂಬ ವಾರಿಧಿಯ ಚಿಪ್ಪಿನೊಳು ಮೊಗೆದು ಬತ್ತಿಸುವಂಥ ವೀರನಾವನು ಜಗದೊಳು ಪ ಹದಿನಾಲ್ಕು ಲೋಕವನ್ನು, ನೀ ನಿನ್ನ ಉದರದೊಳಗಿರಿಸಿಕೊಂಡು ಉದಧಿಮಯವಾಗಿರ್ದ ಕಾಲದೊಳು ನಿನಗೊಂದು ಉದುರಿದೆಲೆಯೊಳು ನಿದ್ರೆಯಂತೆ 1 ಮಾಯೆ ಕಮಲಾಕರದೊಳು, ನಿನ್ನುದರ- ದಾಯತದಿ ತೋರಿ ನಿಲಲು ಮೋಹಿಸಲು ಆ ಕ್ಷಣದಿ ಕಾಯವಾಗಲು ಮೇಲೆ ಬಾಯಿ ನಾಲ್ಕಾಯಿತಂತೆ 2 ಅಲ್ಲಿ ತೋರಿದ ಸೊಲ್ಲನು, ಖಳನೋರ್ವ ನೆಲ್ಲವನು ಸೂರೆಗೊಳಲು ಮಲ್ಲನಾಗಿಯೆ ಜಲದಿ ಘಲ್ಲಿಸಿಯೆ ದೈತ್ಯನನು ಚೆಲ್ವಸಾರವ ಸೆಳೆದೆಯಂತೆ 3 ಅದರ ಆಧಾರದಿಂದ, ಸನಕಾದಿ- ಗುದಯವಾದುದುಯೆಲ್ಲವೂ ಮೊದಲ ಕಾಣದೆ ವೃಕ್ಷವದುರಿ ಬಿದ್ದುದ ನೋಡಿ ತುದಿಯೊಳಗೆ ಕದನವಂತೆ 4 ಒಳ ಹೊರಗೆ ನೀನೊಬ್ಬನೆ, ಹೊಳೆ ಹೊಳೆದು ಸುಳಿವ ಪರಿಯನು ಕಾಣದೆ ಮಲತಾಯಿ ಮಗನೊಳಗೆ ಕಲಹವಿಕ್ಕುವ ತೆರದಿ ಹೊಲಬುದಪ್ಪಿಯೆ ನಡೆವರಂತೆ 5 ಒಂದಿದರಿಂದೆರಡಾದುದು, ಮೂರಾಗಿ ಬಂದು ಇದಿರೊಳು ನಿಂದುದು ಒಂದು ಮಾತಿನೊಳೆರಡು ಸಂದೇಹಗಳ ತೋರಿ ಮಂದ ಬುದ್ಧಿಯ ಕೊಡುವೆಯಂತೆ 6 ಜಡವಾದ ಅಡವಿಯನ್ನು ಸಂಚರಿಸಿ ಒಡಲ ಹೊರೆವುದು ಕಡೆಯೊಳು ಎಡೆಯೊಳೊಪ್ಪಿಸಿ ಕೊಡುವಿಯಂತೆ 7 ನಂಬಿ ಬಂದವರ ನೀನು, ಮನದೊಳಗೆ ಹಂಬಲಿಸಿಕೊಂಡಿರುತಲೆ ಇಂಬಾಗಿ ಇಹಪರದಿ ಉಂಬ ಸಂಭ್ರಮವನ್ನು ಸಂಭವಿಸಿ ತೋರ್ಪೆಯಂತೆ 8 ಭೂಮಿಗೆ ವೈಕುಂಠವೆಂದು, ನಿಂತಿರುವ ಸ್ವಾಮಿಯೆನ್ನೆಡೆಗೆ ಬಂದು ಕ್ಷೇಮವನು ವರಾಹತಿಮ್ಮಪ್ಪ ಕರುಣದಿ ಕಾಮಿತಾರ್ಥವನೀಯೊ ಎಮಗೆ 9
--------------
ವರಹತಿಮ್ಮಪ್ಪ
ಯಾರು ಮೀರಲರಿದು ಬ್ರಹ್ಮ ಬರೆದಲಿಖಿತವ ಪುರಾರಿ ಮಿತ್ರನೊಬ್ಬ ಬಲ್ಲನಿದರ ಕೆಲಸವ ಪ ಎಲ್ಲಿ ದಂಡು ಎಲ್ಲಿ ಗೂಳ್ಯವೆಲ್ಲಿಗಮನವಲ್ಲಿ ವಾಸ ವೆಲ್ಲಿ ಊಟವೆಲ್ಲಿ ಶಯನವು ಎಲ್ಲಿ ನಿದ್ದೆ ಎಲ್ಲಿ ಸುಲಿಗೆ ಎಲ್ಲಿ ಕಡಿತ ವೆಲ್ಲಿ ಮರಣ ವೆಲ್ಲಿ ರುದ್ರಭೂಮಿ ಮೆತ್ತೆಲ್ಲಿ ಜನನವು 1 ಊರದೆಲ್ಲಿ ಮನೆಗಳೆಲ್ಲಿ ನಾರಿ ನೆಂಟರಿಷ್ಟರೆಲ್ಲಿ ಸೇರಿಸಿಟ್ಟ ವಸ್ತು ವಡವೆ ಒಂದು ಕಾಣವು ಭೂರಿ ಪಶುಗಳೆಲ್ಲಿ ಭಯವು ಏರಿ ನೋಳ್ವಗುಡ್ಡ ಸಂ ಚಾರವೆಲ್ಲಿ ಹಸಿವು ತೃಷೆಯು ಹರುಷ ದುಃಖವು 2 ಹಿಂದುಯಿಲ್ಲ ಮುಂದುಯಿಲ್ಲ ಸಿಂಧುತನಕ ತಪರರಿಂದ ಕೆಟ್ಟ ದಿಂದ ಸಲಹುತಿರುವ ಮರುತ ನಂದನ ಕೋಣೆವಾಸ ಲಕ್ಷ್ಮೀರಮಣ ಬಲ್ಲನೋ 3
--------------
ಕವಿ ಪರಮದೇವದಾಸರು
ಯಾರೆ ಹುಡುಗಿ ನೀನು ಬಂದವಳಿಲ್ಲಿಯಾರೆ ಹುಡುಗಿ ನೀನು ಪ ಯಾರೆ ಹುಡುಗಿ ನೀನು ಮೂರು ಬಾರಿಲಿ ಬಂದಿನೀರಜಾಂಬಕ ಕರವೀರದವಳೆ ನೀ 1 ಮಾನಿನಿ ಮಣಿಯೆ 2 ಏನು ಪೇಳಿದನಮ್ಮಾ ಅಚ್ಯುತಪ್ರಾಣದೇವನು ನಿಮ್ಮಾಏನು ಸೂಚಿಸಲೆಂದು ನೀನು ಪೇಳಿದರೀಗನಾನು ಶೋಧಿಸುವೆನೆ ದೀನರುದ್ಧಾರಳೇ 3 ಇಂದುಮುಖಿಯೆ ನೀನು ಸುಮ್ಮನೆನಿಂದ ಕಾರಣವೇನುಇಂದಿರೇಶನ ಸಖಿ ಒಂದು ಮಾತಾಡದೆ ನಿನ-ಗೊಂದಿಸುವ ಕರದಿಂದ ಮಹಾಸಕ 4
--------------
ಇಂದಿರೇಶರು
ಯಾರೇನು ಮಾಡುವರೋ ಹರಿಯೇ ಯಾರಿಂದಲೇನಹುದು ಪ ವಾರಿಜಾಂಬಕ ಮಾರಜನಕ ಕೌಸ್ತುಭ ವಕ್ಷ ಶ್ರೀಶಾ ಅ.ಪ. ಅಜ ಈ ಜಗ ಸೃಜಿಸಿದನೆ ಶ್ರೀದೇವಿಯು ನಿಜಗುಣ ನೆಲೆಗಂಡಳೆ ಭುಜಗಭೂಷಣ ಆಯಕರ್ತನಾದರೆ ಭಜಕನಾ ಬಯಕೆ ಬಾಯಬಿಡುವದೆ 1 ಸುರಪ ಸುರರೊಡೆಯನೆ ಧರಣಿ ಈ ಉರಗೇಂದ್ರ ಪೊತ್ತಿದನೆ ದುರುಳನ ಭಯಕೆ ಪುರವ ಬಿಟ್ಟೋಡಿದ ಧರಣಿಯ ದುರುಳನೊಯ್ಯೆ ವರಾಹರೂಪದಿ ತಂದೆ ನೀ ತಂದೆ ಹರಿಯೇ 2 ಶ್ರೀಪತಿ ಸುರತತಿಯ ಸೃಜಿಸಿ ಈಪ್ಸಿತಾರ್ಥಗಳನೆಲ್ಲಾ ಅವರಿಗೆ ಸ್ವಾಪ್ನಜಾಗೃತಿಯಲಿ ಪರಿಪಾಲಿಸೆ ಮಹಾನಿಧಿವಿಠಲ ನೀನಲ್ಲದಿನ್ಯಾರೋ 3
--------------
ಮಹಾನಿಥಿವಿಠಲ
ಯಾರೊಡನುಸುರವೆನೋ ಕಡಲಶಾಯಿ ಬಿಡದೆ ನಿನ್ನನು ಅಡಿಗಡಿಗೆ ಕೊಂಡಾಡುವ ಹುಡಗನ ಮೇಲಿಷ್ಟು ಕರುಣವಿಲ್ಲದರಿಂದ ಪ ಪೊಡವಿಯೊಳಗೆ ಜನಿಸಿರುವರೊಳಗೆ ನಾನೆ ಕಡೆ ಈಗ ಬಸುರಿನೋಳ್ ಪಡೆದ ಮಗನು ತನ್ನ ಮಡದಿ ಮಕ್ಕಳನು ಎನ್ನೊಡನಿತ್ತು ನಾಕಕೆ ನಡೆದನೆನಗೆ ನಡುಮರಣವ ಹೊರಸಿ 1 ಕೆಟ್ಟ ಬದುಕ ಕಾಣಲಾರೆ ಮಾಳ್ಪರೆ ಎನ್ನ ರಟ್ಟೆ ಬಲವು ತಗ್ಗಿ ಹೋಯ್ತು ಮೊಮ್ಮಕ್ಕಳ ಅಟ್ಟುಳಿ ಬರಿಸನ್ನವಸ್ತ್ರಾಭರಣಕೆಂದು ಕುಟ್ಟಿ ಕೊಂಬರು ಎನಗಿದಿರಾಗಿ ಶಿವನೇ 2 ನಾನು ಎಂಬುವರಿಲ್ಲ ಗೃಹಕೃತ್ಯದೊಳಗೆನ್ನ ಮಾನಿನಿಯೊರ್ವಳುಂಟಿದರೊಳು ಸೊಸೆಯಷ್ಟು ಏಕೆಂದ ರೇನು ಸಂಸಾರವಿದನು ಪವಮಾನ ಸುತನ ಕೋಣೆ ಲಕ್ಷ್ಮೀಶ ನಡೆಸು 3
--------------
ಕವಿ ಪರಮದೇವದಾಸರು
ಯಾವ ಊರು ಎನ್ನಲಯ್ಯ ಪ ಈ ಜಗತ್ತಿನೊಳಧಿಕ ಸಂಸಾರವೆಂಬ ಸಾಗರ ನಗರದೊಳು ನೀರಲ್ಲಿ ಇರುಎಂದನು 1 ಹೊಕ್ಕು ಬಾಧಿಸುತಿಹವು ಪೊಕ್ಕು ಸುಲಿಯುತಿಹರು 2 ಬಹುಳುಪದ್ರಿಸುತಿಹರು ಜಳ್ಳಿನೆಂದೆನಯ್ಯ 3 ಇಷ್ಟು ಸಂಕಟ ತಾಳದೆ ಈ ಊರುಬಿಟ್ಟು ಪೋಗುವೆನೆಂದರೆ ಹುರಿನೇಣ ಕಟ್ಟೆ ಬಿಚ್ಚುವರಿಲ್ಲವಯ್ಯ 4 ಸುಟ್ಟು ಹಾರಿದುದೆಷ್ಟಾಯಿತೋ ದೂರಿಟ್ಟು ಸಾಕಾಯಿತೋ 5
--------------
ಕವಿ ಪರಮದೇವದಾಸರು
ಯಾವ ದಾರಿಯೆನಗೇ ಮುರಾರಿಯಿ- ನ್ನಾವ ಗತಿಯು ತನಗೇ | ದೇವರ ದೇವನೆ ನೀ ವಂಚಿಸಿದರೆ | ಕಾವರೊಬ್ಬರನು ಕಾಣೆ ನಾ ದಿಟವಿದು ಪ ವಾಸುಕಿಶಯನನೆ 1 ಮೋಕ್ಷವಿತ್ತೆನ್ನನು | ರಕ್ಷಿಸದಿರ್ದಡೆ 2 ಕಂದನ ಸಲಹೆನ್ನ | ತಂದೆ ಸದಾನಂದ 3
--------------
ಸದಾನಂದರು
ಯಾವ ಪಾಪಿಯ ದೃಷ್ಟಿ ತಾಕೀತೋ ಗೋಪಾಲಕೃಷ್ಣಗೆ ಪ. ಪಾಲು ಮೊಸರು ವೊಂದನಾದರು ಯಾವ ಕಾರಣದಿ ಕುಡಿಯಲೊಲ್ಲೆ ಪೇಳೋ ಯೆನಗೆ ಬಾಲಾ ಭೂಪಾಲ ಗುಣಶೀಲಾ 1 ದಾವಪುಣ್ಯವತಿಯ ಕಣ್ಣು ಹತ್ತಿತೋ ನೆಲುವಿಗಿಟ್ಟ ಬೆಣ್ಣೆಯ ಮುಟ್ಟುವುದಿಲ್ಲಾ ಬಟ್ಟಲಲ್ಲಿಡುವೆವೋ 2 ಕಪ್ಪವಾದರು ಇಡುವೇನು ಬಾ ಅಪ್ಪ ವೇಣುಗೋಪಾಲಾ ತುಪ್ಪ ಸಕ್ಕರಿ ನೀಡುವೆನು ಚಪ್ಪರಿಸು ನೋಡುವೆನು ಕಾಳಿಮರ್ಧನಕೃಷ್ಣಗೆ 3
--------------
ಕಳಸದ ಸುಂದರಮ್ಮ
ಯಾವ ಸಂಭ್ರಮವಿದೇ ವಾರಿಜ ವದನೆ ಶ್ರೀವೇಣುಗೋಪಾಲ ಮನೆಗೆ ಬಂದಿಹನೇ ಪ ದೇವ ದೇವನು ನಿನ್ನ ಪೂಜೆಗೊಪ್ಪಿದನೇ ಯಾವ ವಾತ್ಸಲ್ಯವ ನಿನಗೆ ತೋರಿದನೇ ಅ.ಪ ಗಾನ ನೃತ್ಯಗಳಿಂದ ಒಲಿಸಿದೆಯೇನೇ ಜೇನು ಸಕ್ಕರೆ ಬೆಣ್ಣೆಗಳನಿತ್ತೆಯೇನೇ ಸಾನುರಾಗದಿ ಪೂಜೆ ಮಾಡಿದೆಯೇನೇ ನಾನೇನಗೈದರೆ ಅವನೊಲಿಯುವನೇ1 ಪರಿಮಳ ಗಂಧಕೆ ಮೈ ತೋರುವನೇ ಕೊರಳಿಗೆ ಹಾರವ ನೀಡಲೊಪ್ಪುವನೇ ಮುರಳಿಯ ಗಾನವನೊಲಿದು ಕೇಳುವನೇ ಪರಮಪುರುಷ ಬಾರೆಂದರೆ ಬಹನೇ 2 ಕರಗಳ ಮುಗಿದರೆ ಕರುಣಿಪನೇನೇ ಚರಣಕೆ ಮಣಿದರೆ ಒಲಿಯುವನೇನೇ ಪರಿಪರಿ ಹೊಗಳಲು ನಲಿಯುವನೇನೇ ವರದ ಮಾಂಗಿರಿರಂಗ ದಯೆ ತೋರನೇನೇ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಯಾವ ಹೆಸರಿನಿಂದೆ ಕರೆದರೇನುಪಾವನಾತ್ಮನೆ ಬರನೆಸ್ವಾ ಸರ್ವೋತ್ತಮನುಪ ಸಾವಿರ ಹೆಸರುಳ್ಳ ಅವನಿಗೆ ಹೆಸರಿಂದೇನುದೇವನೊಬ್ಬನೆ ಜಗಕೆ ಎಂಬ ನುಡಿ ಸುಳ್ಳೇನುಭಾವಭಕುತಿಗಳಿಂದ ಕರೆದೊಡನೆ ಬರುವನುಠಾವು ಕಾಲಗಳಿಲ್ಲಿ ಆತನಿಗೆ ಬಹಳೇನು 1 ಅಲ್ಲಾ ಎಂದರೆ ಬರುವ ಶಿವನೇ ಎಂದರೂ ಬರುವಾಗೊಲ್ಲ ಕೃಷ್ಣನೆ ಬಾರ ಎಂದರಾತನೆ ಬರುವಅಲ್ಲಿ ಇವ ಇಲ್ಲಿ ಅವ ಎಂದು ಬಡಿದಾಡಿದರೆಖುಲ್ಲರೆಂದರೇನು ಬಲ್ಲವರು ಮರುಳಾ 2 ವಿಧವಿಧ ನುಡಿಗಳಲಿ ಬೇರೆ ಶಬುದಗಳಿರಲುಅದು ಪರಾರ್ಥವೆ ಬೇರೆ ತಾನಾಗುವದೇನುಹದಿನಾರು ಪಥಗಳನೆ ಹಿಡಿದೊಂದು ಹೋದೊಡನೆ ಅದರಿಂದಲಾ ಊರು ಸೇರಿಸುವುದಿಲ್ಲವೇನು 3 ಹೃದಯದಲಿ ನಿಜವಾದ ಭಕುತಿಯನು ಬೇಡುವನುಇದನರಿತು ಪ್ರತಿದಿನದಿ ಭಜಿಸುವರು ಮುನಿಜನರುಗದುಗಿನಲಿ ವಾಸಿಸುವ ಶ್ರೀ ವೀರನಾರಾಯಣನುಮುದದಿಂದ ಸಲಹುವನು ಸಂದೇಹವೇನು 4
--------------
ವೀರನಾರಾಯಣ