ಒಟ್ಟು 470 ಕಡೆಗಳಲ್ಲಿ , 70 ದಾಸರು , 428 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮರುಳಾಟವ್ಯಾಕೆ ಮನುಜಗೆ ಮರುಳಾಟವ್ಯಾಕೆಹರಿಭಕ್ತನಲ್ಲದವಗೆ ಹಲವಂಗವ್ಯಾಕೆ ಪ.ಮೃತ್ತಿಕಾಶೌಚವಿಲ್ಲದೆ ಮತ್ತೆ ಸ್ನಾನ ಜಪವ್ಯಾಕೆಹತ್ತು ಕಟ್ಟದವಗೆ ಅಗ್ನಿಹೋತ್ರವ್ಯಾತಕೆತೊತ್ತುಬಡಕಗೆ ಬಹು ತತ್ವವಿಚಾರವ್ಯಾಕೆಕರ್ತಕೃಷ್ಣನ್ನೊಪ್ಪದ ವಿದ್ವತ್ತವ್ಯಾತಕೆ1ಹಸಿವೆತೃಷೆತಾಳದವಗೆಹುಸಿವೈರಾಗ್ಯವ್ಯಾತಕೆವಿಷಮ ಚಿತ್ತಗೆ ಪರರ ಕುಶಲ ಬಯಕ್ಯಾಕೆದಶ ಜಪ ಮಾಡಲಾರ ಮುಸುಕಿನ ಡಂಬವ್ಯಾಕೆಕುಶಶಾಯಿಗರ್ಪಿಸದ ಅಶನವ್ಯಾತಕೆ 2ಮೂಲಮಂತ್ರವರಿಯದ ಮೇಲೆ ದೇವಾರ್ಚನೆ ಯಾಕೆಸಾಲಿಗ್ರಾಮವಿಲ್ಲದ ತೀರ್ಥವ್ಯಾತಕೆಸೂಳೆಗಾರಗೆ ತುಳಸಿಮಾಲೆ ಶೃಂಗಾರವ್ಯಾಕೆಮೇಲೆ ಮೇಲೆ ಹರಿಯೆನ್ನದ ನಾಲಿಗ್ಯಾತಕೆ 3ಊಧ್ರ್ವಪುಂಡ್ರಿಲ್ಲದಾಸ್ಯ ತಿದ್ದಿನೋಡಬೇಕ್ಯಾಕೆಶುದ್ಧ ಸಾತ್ವಿಕವಲ್ಲದ ಬುದ್ಧಿ ಯಾತಕೆಕದ್ದು ಹೊಟ್ಟೆ ಹೊರೆವವಗೆ ಸಿದ್ಧ ಶೀಲವೃತ್ತಿಯಾತಕೆಮಧ್ವ ಮತವÀ ಬಿಟ್ಟಿತರ ಪದ್ಧತ್ಯಾತಕೆ 4ಕಂಡ ನಾರೇರಿಚ್ಛೈಸುವ ಲೆಂಡಗೆ ಪುರಾಣವ್ಯಾಕೆಭಂಡು ಮಾತಿನ ಕವಿತ್ವ ಪಾಂಡಿತ್ಯಾತಕೆಕುಂಡಲಿಪ್ರಸನ್ವೆಂಕಟ ಮಂಡಲೇಶನ ಶ್ರೀಪಾದಪುಂಡರೀಕಬಿಟ್ಟವನ ವಿತಂಡವ್ಯಾತಕೆ5
--------------
ಪ್ರಸನ್ನವೆಂಕಟದಾಸರು
ಮುಕ್ಕೋಟ ದ್ವಾದಶಿಯ ದಿವಸ(ಮಾರ್ಗಶಿರ ಶುದ್ಧ ದ್ವಾದಶಿಯ ಉತ್ಸವ)ವ್ರತತಿಯಧಿಪನಂತೆ ನೀರೆ ತೋರ್ಪಅತಿಶಯಾಗಮ ಬಗೆ ಬ್ಯಾರೆ ರತ್ನದ್ಯುತಿಯಾಭರಣವ ಶೃಂಗಾರ ಆಹಾಶ್ರುತಗೊಲಿಸೆನಗೆ ಆಶ್ರಿತ ರಕ್ಷಾರ್ಥಿತನ ಸಂ-ಗತಿಸ್ಮøತಿತತಿಗಳ ಮತಿಗಗೋಚರನಂತೆ1ಲೋಲಲೋಚನನ ನಾಟಕ ಸತ್ಕಥನವಮೇಲಾಗಿ ಜಗದಿ ಶೋಭಿಪ ಶೇಷಾದ್ರಿಯಲಿಬಾಲಾರ್ಕಸದೃಶನೀತನು ಇರ್ಪನಲ್ಲಿನೀಲನಿಭಾಂಗನು ನೆನೆವರ ಪಾಪವಘೋಲುಘಡಿಸಲೆಂದೆನುತಲಿಭಾರ್ಗವಕೋಲಿಂದೆಸಗಿದ ಧರಣಿಗೆ ಬಂದು ಸ-ಲೀಲೆಗಳೆಸಗುವ ಜಾಲವಿದೆಲ್ಲ 2ಸರಸಿಜಗಂಧಿ ಕೇಳ್ ದಿಟದಿ ತನ್ನಅರಮನೆಯಿಂದ ಸದ್ವಿಧದಿ ಈರ್ವ-ರರಸಿಯರ್ ಸಹಿತ ಮಿನಿಯದಿ ಅತಿಭರದಿಂದ ಸೂರ್ಯನುದಯದಿ ಆಹಾಉರುತರ ಹೇಮಪಲ್ಲಂಕಿಯೊಳಡರಿತ್ವರಿತದಿ ಪೋಗುವ ಭರವಿದೆಲ್ಲಿಗೆ ಪೇಳೆ 3ಬದ್ಧನೀ ಪೇಳ್ದ ಮನದ ಶಂಕಾವ್ರಾತತಿದ್ದಿಪೆ ಕೇಳು ಮಾರ್ಗಶಿರ ಮಾಸದೊಳುಶುದ್ಧ ದ್ವಾದಶಿಸೂರ್ಯಉದಯ ಕಾಲದೊಳುಭದ್ರಭವನವನು ಪೊರಟು ವಿನೋದದಿಅದ್ರಿಧರನು ಸಜ್ಜನರೊಡಗೂಡಿ ಉ-ಪದ್ರಿತ ಪಾಪವ ಛಿದ್ರಿಪ ಸ್ನಾನಕೆರೌದ್ರಿತ ರಾಮಸಮುದ್ರದ ಬಳಿಗೆ 4ರಂಭೆ : ಆರರೆ ಆಶ್ಚರ್ಯವಾಯ್ತೆನಗೆ ಅತಿಪರಮಮಹಿಮೆನೆಂದ ಮೇರೆಗೆ ಘನ-ತರ ಸ್ನಾನವೇನಿದು ಕಡೆಗೆ ವೃತದಿರವೋ ಉತ್ಸವವೋ ಪೇಳೆನಗೆ ಆಹಾತರುಣಿ ರನ್ನಳೆ ನಿನ್ನ ಚರಣಕ್ಕೆ ನಮಿಪೆ ಈಪರಿಗಳ ಸಾಂಗದಿಂದರುಹಬೇಕೆನಗಿನ್ನು 5ಸಕಲಾಂತರ್ಯಾತ್ಮನೀತನು ಸತ್ಯಶೀಲೆ-ಪ್ರಕಟ ವ್ರತವಿದಲ್ಲ ಅಂಜನಾದ್ರಿಯಲಿಭಕುತವತ್ಸಲನು ಉತ್ಸವಿಸುವನಲ್ಲಿವಿಕಳಹೃದಯ ನರನಿಕರಕಸಾಧ್ಯವೆಂದ್ಯುಕುತದಿ ಈ ಧರೆಯಲ್ಲಿ ಪ್ರತ್ಯೇಕದಿಅಖಿಳೋತ್ಸವ ಮಸ್ತಕಕಿದುವೆಗ್ಗಳಮುಕುಟೋತ್ಸವವೆಂದೆನುತಲಿ ರಚಿಸುವ 6ರಂಭೆ : ನಳಿನಾಕ್ಷಿ ಲಾಲಿಪುದಿನ್ನು ಸ್ನಾನವೊಲವಿಂದ ಗೈದ ಮೇಲಿವನು ತನ್ನರಮಣಿಯರ್ಸಹಿತಂದಣವನು ಏರಿನಿಲುನಿಲುತ್ಯಾಕೆ ಬರುವನು ಆಹಾಪೊಳಲೊಳಗಿಹ ಜನನಿಳಯದ ದ್ವಾರದಿಕಳಕಳವೇನಿದ ತಿಳುಪೆನಗೀ ಹದ 7ಮಿಂದು ತೋಷದಿ ಅಂದಣವನ್ನೇರಿ ತಾನುಇಂದೀ ಪುರದೊಳಿರ್ಪ ಜನರ ದೋಷಗಳಕುಂದಿಸಲೆಂದವರವರ ದ್ವಾರದೊಳುನಿಂದಿರುತಲ್ಲಿಯದಲ್ಲಿ ಆರತಿಗಳಚಂದದಿ ಕೊಳುತೊಲವಿಂದಕಾಣಿಕೆಜನ-ವೃಂದದಿ ಕೊಡುತಾನಂದ ಸೌಭಾಗ್ಯವಒಂದಕನಂತವ ಹೊಂದಿಸಿ ಕೊಡುವ 8ರಂಭೆ : ಸರಸಿಜಾನನೆ ಮತ್ತೇನಿದನು ತನ್ನಅರಮನೆಯಲ್ಲಿ ಭೂದ್ವಿಜನರನು ಸರ್ವಪುರಜನ ಸಹಿತೊಳಗಿವನು ನಾನಾತರದಿ ಮೆರೆವ ಭೋಜನವನು ಆಹಾ-ಕರಿಸಿ ಆಮೇಲೆ ರಾತ್ರಿಯಲಿ ಸಾಲಿನಲಿ ವಿ-ಸ್ತರದ ಲಾಜದ ರಾಸಿಗಿರದೆ ಪೂಜಿಪುದ್ಯಾಕೆ 9ಗಂಗಾಜನಕತನ್ನ ಗೃಹದಿ ವಿಪ್ರರನುಹಿಂಗದೆ ಕರೆಸಿ ವಿಪ್ರರನೆಲ್ಲ ಬರಿಸಿಸಂಗಾತದಲಿ ಆರೋಗಣೆ ಗೈದು ಮೆರೆಸಿಅಂಗಣದಲಿ ರಾತ್ರೆಯಲಿ ವಿನೋದದಿಕಂಗೊಳಿಸುವ ಉರಿದರಳ ಸಮೂಹಕೆರಂಗಪೂಜೆಯನುತ್ತಂಗವಿಸುವ ನಿಗ-ಮಂಗಳೊಡೆಯನು ವಿಹಂಗಮಾರೂಢ 10ರಂಭೆ : ಅಮಮ ಮತ್ತೇನಿದ ಪೇಳು ಶ್ವೇತ-ಕುಮುದಾಪ್ತ ಠಾವಿನ ವೋಲು ಬಂದುಆದರಿಸಲಿದರ ಮಧ್ಯದೊಳು ತನ್ನರಮಣಿಯರ್ ಸಹಿತ ತೋಷದೊಳು ಆಹಾವಿಮಲವನ್ನೇರಿನ್ನೆಲ್ಲಿಗೈದುವನೆಂಬಾ-ಗಮವ ಪೇಳೆನೆಗೆ ನೀ ನಮಿಪೆ ನಿನ್ನಂಘ್ರಿಯ 11ಶ್ರೀ ರಮಾರಮಣ ಪೂಜೆಯಗೊಂಡಾ ಮೇಲೆಚಾರುಈ ಹೂವಿನ ತೇರನೇರುತಲಿಕೇರಿ ಕೇರಿಯೊಳಾರತಿಗೊಳ್ಳುತಲಿಭೋರಿಡುತಿಹ ವಾದ್ಯಧ್ವನಿ ಘನತರಭೇರಿಮೃದಂಗಾದ್ಯಖಿಳ ವಿನೋದದಿಸ್ವಾರಿಗೆ ತೆರಳುವ ಕ್ರೂರ ನರರ ಆ-ಘೋರಪಾಪ ಜರ್ಝರಿಸಲೆಂದು12ರಂಭೆ : ಅರವಿಂದಾಕ್ಷಿಯೆ ಮತ್ತೇನಿದನು ತನ್ನಅರಮನೆಯಿದಿರು ರಥವನು ತಾನುಭರದೊಳಗಿಳಿದಂದಣವನು ಏರಿಮೆರೆವಾಲಯದ ಸುತ್ತುಗಳನು ಆಹಾತಿರುಗುವನ್ಯಾಕೆ ಭೂದ್ವಿಜರ ಘೋಷದಿ ವಾದ್ಯ-ಭರಿತ ಗಾಯನಭೇರಿಧ್ವನಿಗಳೇನಿದ ಪೇಳೆ13ದುಷ್ಟಮರ್ದನ ರಥವಿಳಿವುತ್ತಲಾಗೇಅಷ್ಟದಿಗ್ಭಾಗದಿ ಗೃಹಸುತ್ತಿನೊಳಗೆಅಷ್ಟಾವಧಾನವ ರಚಿಸುತ್ತ ಕಡೆಗೆಶ್ರೇಷ್ಠನು ರತ್ನಾಸನದಿ ಗ್ರಹದಿಪರಮೇಷ್ಟಜನಕೆ ಸಂತೋಷಾನಂದದಿಸೃಷ್ಟಿಯ ಜನರ ಅನಿಷ್ಟವ ತ್ಯಜಿಸುತಇಷ್ಟವನೀವ ಯಥೇಷ್ಟ ದಯಾಬ್ಧ 14ರಂಭೆ : ಅರಿತೆನಾ ಸ್ವಚ್ಛ ಚಿತ್ತದಲಿ ಇನ್ನುಹರಿಏಕರೂಪನೆನ್ನುತಲಿ ಲಕ್ಷ್ಮೀಕರವೆನಿಸುವ ಕಾರ್ಕಳದಲಿ ಭಾಗ್ಯೋ-ದಯ ದೇವಾಲಯದ ಮಧ್ಯದಲಿ ಆಹಾತ್ವರಿತದಿ ನುತಿಸಿರೊಗುರುನಾರಸಿಂಹ ಶ್ರೀ-ಕರವೆಂಕಟೇಶನ ಚರಣಕಮಲಗಳ15
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಯದುವೀರ ಒದಗೆನ್ನ ನಾಲಿಗೆಗೆಉದಯಾದಿ ಅಸ್ತಾಂತ ಆವಾವಾಗೆ ಪ.ನಿನ್ನ ನಾಮದ ಸ್ಮರಣೆಯೆ ಶುಭಕರ್ಮವುಉನ್ನತ ಸಂಕೀರ್ತನೆ ಶತಕ್ರತುವುಪುಣ್ಯಗಂಗಾಸ್ನಾನದ ಫಲಕಧಿಕವುಘನ್ನ ಜಪದ ಬೀಜವೆÉ ನಾಮವು 1ಬಂಗಾರದಿಳೆಯಳೆದೊಲಿದೀವ ದಾನದಿಹಿಂಗದೆ ಉಭಯಸ್ಯ ಗೋಶತದಿಶೃಂಗಾರ ಕೋಟಿ ಕನ್ಯಾದಾನಕಧಿಕವುಮಂಗಳಮಹಿಮ ಮುಕುಂದನ ನಾಮವು 2ಧರ್ಮಾರ್ಥ ಕಾಮಮೋಕ್ಷಗಳ ಮೂಲವಿದೆಂದುನಿರ್ಮಲಶ್ರುತಿಸಾರುತಾವೆಂದುಮರ್ಮವರಿತು ನಾಮ ನಂಬಿದೆ ಶೇಷಾದ್ರಿಯಹಮ್ರ್ಯನಿಲಯ ಪ್ರಸನ್ವೆಂಕಟಯ್ಯ 3
--------------
ಪ್ರಸನ್ನವೆಂಕಟದಾಸರು
ಯಾವ ಭಯವು ನಮಗೆ |ಶಂಕರ ದೇವನೊಲಿದು ಕಡೆಗೆ ಪಸಾವಧಾನದಿ ಸರ್ವಭಕ್ತ ಜನರಕಾವ|ದೇವ ದೇವೇಶ ಸರ್ವೇಶ ನೀನೊಲಿದರೆ ಅಪದುರಿತದ ಭಯವೇನಲೇ | ಶಂಕರ ನಿನ್ನ |ಸ್ಮರಿಸಲು ದೂರವಲೇ |ಮರಣದ ಭಯವೆನೆ | ಅಂತಕಾಂತಕ ನೀನು ||ಉರಗನ ಭಯವೆನೆ | ಗರಳಕಂಧರನೂ 1ಚೋರರ ಭಯವೇನೂ | ದಧಿಘೃತ |ಚೋರ ನಿನ್ನಯ ಸಖನೂ ||ನಾರೀ ಚೋರನ ದೇವ | ಧೀರಕೈರಾತನೀ |ಘೋರರಕ್ಕಸರೆನೆ | ತ್ರಿಪುರಸಂಹಾರ2ಮೃಗಪಕ್ಷಿ ಭಯವೆನಲೇ |ಸತಿಸುತಸಖ|ಖಗಮೃಗವೇರ್ದರೆಲೇ |ಜಗದೊಡತಿಯು ಲಕ್ಷ್ಮೀ | ಗಗ್ರಜನೆನಿಸಿಹೆ ||ಭಗಪೀಠನು ಧನ | ಮಾನಾಭಿಮಾನಕೇ 3ವಸನಕ್ಕೆ ಚರ್ಮಾಂಬರನೂ |ಸಂಸಾರವೆಂಬ ವ್ಯಸನಕೆ ದಿಗಂಬರನೂ ||ತೃಷೆಗೆ ಗಂಗಾಧರ | ಅಶನಕ್ಕೆ ಬಿಕ್ಷುಕನೀ |ಅಂಗ ಶೃಂಗಾರಕೆ | ಭಸ್ಮಲೇಪನನೂ 4ಪೊಗಳಲಳವೇ ನಿನ್ನಾ | ಮಹೇಶ್ವರ |ಜಗದಿ ಭಕ್ತರ ಸಂಪನ್ನಾ ||ಭೃಗುಲಾಂಛನಧರ ಗೋವಿಂದದಾಸನ |ಹಗಲಿರುಳೆನ್ನದೆಪೊರೆಯೋ ಮಹಾದೇವ 5
--------------
ಗೋವಿಂದದಾಸ
ರಂಗನಾಯಕಸ್ವಾಮಿ ರಾಜೀವಲೋಚನ ಬೆಳಗಾಯಿತೇಳೆನ್ನುತಅಂಗನೆ ಲಕುಮಿ ತಾ ಪತಿಯನೆಬ್ಬಿಸಿದಳುಶೃಂಗಾರದ ನಿದ್ರೆ ಸಾಕೆನ್ನುತಪ.ಪಕ್ಷಿರಾಜನು ಬಂದು ಬಾಗಿಲೊಳಗೆನಿಂದುಅಕ್ಷಿ ತೆರೆದು ಬೇಗ ಈಕ್ಷಿಸೆಂಬ ||ಪಕ್ಷಿಜಾತಿಗಳೆಲ್ಲ ಚಿಲಿಪಿಲಿಗುಟ್ಟುತಸೂಕ್ಷ್ಮದಲಿ ನಿನ್ನನು ಸ್ಮರಿಸುವುವೊ ಕೃಷ್ಣ 1ಸನಕ - ಸನಂದನ - ಸನತ್ಸುಜಾತರು ಬಂದುವಿನಯದಿ ಕೈಮುಗಿದು ಓಲೈಪರು ||ಘನಶುಕ - ಶೌನಕ - ವ್ಯಾಸ ವಾಲ್ಮೀಕರುನೆನೆದು ಕೊಂಡಾಡುವರೊ ಹರಿಯೇ 2ಸುರರು ಕಿನ್ನರರು ಕಿಂಪುರುಷರು ಉರಗರುಪರಿಪರಿಯಲಿ ನಿನ್ನ ಸ್ಮರಿಸುವರು ||ಅರುಣನು ಬಂದುದಯಾಚಲದಲ್ಲಿ ನಿಂದಕಿರಣ ತೋರುವ ಭಾಸ್ಕರನು ಶ್ರೀ ಹರಿಯೇ 3ಪದುಮನಾಭನೆ ನಿನ್ನ ನಾಮಾಮೃತವನುಪದುಮಾಕ್ಷಿಯರು ತಮ್ಮ ಮನೆಯೊಳಗೆ ||ಉದಯದೊಳೆದ್ದು ಸವಿದಾಡುತ ಪಾಡುತದಧಿಯ ಕಡೆವರೇಳು ಮಧುಸೂದನ ಕೃಷ್ಣ 4ಮುರುಮಢನನೆ ನಿನ್ನ ಚರಣದ ಸೇವೆಯಕರುಣಿಸಬೇಕೆಂದು ತರುಣಿಯರು ||ಪರಿಪರಿಯಿಂದಲಿ ಸ್ಮರಿಸಿ ಹಾರೈಪರುಪುರಂದರವಿಠಲ ನೀನೇಳೊ ಹರಿಯೇ 5
--------------
ಪುರಂದರದಾಸರು
ರಾಮ ರಾಮ ರಾಮ ರಾಮ ರಾಮವೆನ್ನಿರೊ |ರಾಮ ರಾಮವೆಂಬ ನಾಮ ಮನದಿ ನೆನೆಯಿರೊ ಪ.ಇಂದ್ರಿಯಂಗಳೆಲ್ಲ ಕೂಡಿ ಬಂದು ತನ್ನ ಮುಸುಕಿದಾಗ |ಸಿಂಧುಸುತಾಪತಿಯ ಧ್ಯಾನ ಅಂದಿಗೆ ಒದಗಲೀಯದು1ಭರದಿ ಯಮನ ಭಟರು ಬಂದು ಹೊರಡು ಎಂದು ಮುಟ್ಟಲು |ಕೊರಳಿಗಾತ್ಮ ಸೇರಿದಾಗ ಹರಿಯ ಧ್ಯಾನ ದೊರೆಯದಯ್ಯ 2ಕಾಸಶ್ವಾಸದಲ್ಲಿ ಸಿಲುಕಿ ದೋಷ ಬಲಿದು ಪೋಗುವಾಗ |ವಾಸುದೇವನೆಂಬ ನಾಮ ವದನದಲ್ಲಿ ಒದಗದಯ್ಯ 3ಶೃಂಗಾರವಾದ ದೇಹ ತಂಗಿಬಿಟ್ಟು ಪೋಗುವಾಗ |ಕಂಗಳಿಗಾತ್ಮಾ ಸೇರಿದಾಗ ರಂಗನ ಧ್ಯಾನ ದೊರಕದಯ್ಯ 4ಕಷ್ಟಜನ್ಮದಲ್ಲಿ ಬಂದು ದುಷ್ಟಕರ್ಮಗಳನು ಮಾಡಿ |ಬಿಟ್ಟು ಹೋಗುವಾಗ ಪುರಂದರವಿಠಲನ ನೆನೆಮನವೆ 5
--------------
ಪುರಂದರದಾಸರು
ಲಿಂಗದೇಹವೆಂಬ ಪವಳಿ ಶೃಂಗರಿಸಿಅಂಗವ ನಿನಗೆ ಕಾಣಿಕೆಯ ನೀಡುವೆ ||ಮಂಗಳಮೂರುತಿಅಂಗನೆಸಹಿತ- ಭುಜಂಗಶಯನ ಎನ್ನ ಕಂಗಳುತ್ವವವೀಯೋ 2ಕಡಗ ಕಿರುಗೆಜ್ಜೆ ಪೆಂಡೆಗಳಿಂದಲೊಪ್ಪುವಉಡುಗೆ ಪೀತಾಂಬರತರಳಕೌಸ್ತುಭ||ಪಿಡಿದ ಶಂಖ ಚಕ್ರ ಕರ್ಣಕುಂಡಲದಿಂದಕಡಲಶಯನ ಎನ್ನ ಹೃದಯದೊಳಗೆ ನಿಲ್ಲೊ 3ಒಡೆಯ ನೀನೆನಗೆ ಅನಾದಿ ಕಾಲದಿಂದಬಡವನು ನಾನಿನ್ನ ದಾಸನಯ್ಯ ||ಕಡುಕರುಣದಿಂದ ದಾಸತ್ವ ನೀಡು ಗ-ರುಡಗಮನನೆ ವೆಂಕಟೇಶ ಎನ್ನ ಮನಕೆ 4ಬರಿಮನೆಯಲ್ಲವು ಪರಿವಾರವು ಉಂಟುಪರಮಪುರುಷ ನಿನ್ನ ರೂಪಗಳುಂಟು ||ಸಿರಿದೇವಿ ಸಹಿತದಿಪುರಂದರವಿಠಲನೆಕರುಣದಿಂದಲಿ ಮನ್ಮಂದಿರದೊಳಗೆ 5
--------------
ಪುರಂದರದಾಸರು
ವಾರಿಜನಾಭನ ಕರುಣವೆ ಸ್ಥಿರ ಸಂಸಾರ್ಯೆರವು ಕೇಳಾತ್ಮಜಾರುತದಾಯು ದೂರದ ಮುಕುತಿಯದಾರಿಯ ಪಾಥೇಯ್ಯೆಲ್ಲಾತ್ಮ ಪ.ಧರ್ಮದ ಸರಕಿಲ್ಲದವನೆಂದು ಬೇಗ್ಯಮಧರ್ಮ ಭಟರು ಬಂದರಲ್ಲೊಚರ್ಮದ ಮನೆ ಬಿಡಿಸಿದರು ಮುಟ್ಟಲು ನೋವಕರ್ಮಯಾತನೆ ಕೊಟ್ಟರಲ್ಲೊಹಮ್ರ್ಯನಿಕೇತನ ವೃತ್ತಿಕ್ಷೇತ್ರವನು ಅಧರ್ಮಿಗಳಗಲಿಪರಲ್ಲೊಮರ್ಮವರಿತು ತ್ರಾಟಿಸುವಾಗ ಶ್ರೀವಿಶ್ವಕರ್ಮನ ಪೂಜೆ ಹೋಯಿತೆಲ್ಲೊ 1ಹೆಡಗೈಯಕಟ್ಟಿಪರಿಘದೊಳು ಬಡಿವಾಗಮಡದಿ ಮಕ್ಕಳ ಸಹಾಯವೆಲ್ಲೊಒಡೆಯ ದಮ್ಮಯ್ಯ ನಮ್ಮಯ್ಯನೆಂದರೆಕಾಲಹಿಡಿದರೆ ಕೊಡಹಿದರಲ್ಲೊಸುಡುವ ಮಳಲು ಹುಡಿ ಕಲ್ಮುಳ್ಳೊಳೆಳೆವಾಗಹಿಡದೇಜಿ ಕೊಂಬುಕಾಳೆಲ್ಲೊಪೊಡವಿಲಿ ಬಂದಾಗ ಹರಿಸೇವೆ ಮಾಡದೆಕಡುಹುಂಟಾದರೆ ತೋರದೆಲ್ಲೊ 2ಕೀವು ರುಧಿರವಿಟ್ಟ ಕುಂಡದಿ ಮುಣುಗುವಾಗ್ಹ್ಯಾವಿನ ಮಾತೇನಾಯಿತಣ್ಣಸಾವುತೀನವ್ವಪ್ಪಾ ಮೊರೆಯ ಕೇಳೆಂದರೆಆವಾಗಬಾಧೆ ಕಾಣಣ್ಣಆವೈವಸ್ವತದಂಡ ಕೊಟ್ಟು ಬೊಗಳೆಂಬಾಗಚಾರ್ವಾಕತನವೆಲ್ಲಣ್ಣಆ ವಾಸುದೇವನ ಭಟಸಂಗ ನಿನಗೀಗ ವೈರ ಆಗೆಲ್ಲಿದಣ್ಣ 3ನಾಲಿಗೊಣಗಿ ನೀರು ಕೂಳೆಂದು ಅಳುವಾಗಹಾಲ ಶಾಲ್ಯೋದನವೆಲ್ಲೊಮ್ಯಾಲೆ ಮ್ಯಾಲ್ವೈತರಣಿ ಸ್ನಾನವ ಮಾಡುವಕಾಲಕೆ ಅಭ್ಯಂಗನವೆಲ್ಲೊಕಾಲನ ದೂತರ್ಗೆ ಕೊಟ್ಟುಳಿವೆನೆಂದರೆಹೂಳಿದ ಧನ ದೂರಾಯಿತಲ್ಲೊಕಾಲಕಾಲಕೆ ದ್ವಿಜಪಂಕ್ತಿಭೋಜನಸುಖವ್ಯಾಳೆ ತಪ್ಪಿತನ್ನವೆಲ್ಲೊ 4ಕಷ್ಟಿಸಿ ಬಳಲುವೆ ಹಾಹಾಯೆಂದಳಲುವೆಇಷ್ಟನೆಂಟರು ಹೋದರೆತ್ತಮುಷ್ಟಿಕುಠಾರಪ್ರಹಾರನೋಡುನಿನ್ನವರಿಷ್ಟತನವು ನಿಂತಿತೆತ್ತಶಿಷ್ಟರ ನೋಡದೆ ಸತ್ಕಾರ ಮಾಡದೆನಿಷ್ಠುರ ನುಡಿದೆ ಪ್ರಮತ್ತಕೃಷ್ಣ ನಮೊ ಎಂದು ಕಡೆಗಾಣಲರಿಯೆ ಎಳ್ಳಷ್ಟು ಪುಣ್ಯವ ಕಾಣೆನೆತ್ತ 5ಕಂಗೆಟ್ಟು ತಕ್ರನ್ನೆ ಕಾಸಿ ಸೀಸ್ಯೆರೆವಾಗಅಂಗಣದ ಪಶು ಬಹುದೂರಕೆಂಗೆಂಡಗಂಭವಪ್ಪಿಸುವರು ನಿನ್ನ ಪರಾಂಗನೆಭೋಗಿಚದುರಅಂಗ ಶೃಂಗಾರದ ಕೊನಬುಗಾರ ನಿನಗ್ಹಿಂಗುವದೆ ಯಮದ್ವಾರಮಂಗಳ ಮಹಿಮ ಮುಕುಂದ ಮುರಾರಿ ಶ್ರೀರಂಗನ ಭಕುತಿವಿದೂರ 6ಸುಟ್ಟರೆ ಹಿಡಿಬೂದಿ ಕೆಟ್ಟರೆ ಕ್ರಿಮಿಕಾಯಇಟ್ಟರಿರದು ವಾಯುವಿರದೆಹುಟ್ಟಿ ಸುಜನ್ಮದಿ ಜಾಣರಾಗದೆಬುಧರಟ್ಟುವರೆ ದಿವಸ ಬರಿದೆಇಟ್ಟಣಿಸಿದ ಭವಗತ ಸುಖದು:ಖವುಂಡುಟ್ಟು ರಾಮನ ಮನವಿರದೆಕಟ್ಟಕಡೆಲಿ ನರಕವನುಂಬೋದುಚಿತಲ್ಲದಿಟ್ಟನಾಗು ಮಾಯೆಯಜರಿದು7ನಿತ್ಯನೈಮಿತ್ಯಕಾಮ್ಯಾದಿ ಸತ್ಕರ್ಮವಮತ್ತೆ ತಿಳಿದು ನಡೆ ಆತ್ಮಹತ್ಯವಸತ್ಯ ಅನ್ಯವಧೂಜನಸಖ್ಯಪರವಿತ್ತದಂಜಿಕೆ ಇರಲ್ಯಾತ್ಮಕರ್ತಮೂರವತಾರಿ ಪೂರ್ಣ ಬೋಧಾಚಾರ್ಯರಭೃತ್ಯನಾಗಿ ಬಾಳೊ ಆತ್ಮಎತ್ತೆತ್ತ ನೋಡಲು ಬೆನ್ನಬಿಡದೆಕಾವಪ್ರತ್ಯಕ್ಷನಾಗಿ ಪರಮಾತ್ಮ 8ಮಂಗಳಾತ್ಮರಿಗೆಅಹರ್ನಿಶಿಶ್ರೀವರಅಂಗಜಜನಕನೆಚ್ಚರಿಕೆಸಂಗಡಿಸಿದ ವಿಷಯಂಗಳಿದ್ದರೇನುತಂಗಳ ಅನ್ನದೋಕರಿಕೆಹಿಂಗದೆ ವರಸಂಗ ಮಾಡಿದರೊಯಿವರುಮಂಗಳಾತ್ಮಕನಿದ್ದ ಪುರಕೆಬಂಗಾರ ಮನೆಯ ಪ್ರಸನ್ವೆಂಕಟೇಶನಡಿಂಗರರಿಗೆ ನರ್ಕಸರ್ಕೆ 9
--------------
ಪ್ರಸನ್ನವೆಂಕಟದಾಸರು
ವಿಠ್ಠಲ ದೇವರುನಮೋಯೆಂಬೆ ನಮೋಯೆಂಬೆನಮ್ಮಯ ವಿಠಲಗೆ ಪಕಾಷ್ಟಹಾರನ ಇಷ್ಟಮಿತ್ರನದಿಟ್ಟಪುತ್ರನ ಮನದಿಷ್ಟವಿತ್ತವಗೆ 1ಉತ್ತರಿತ್ತರಿ ತಮ್ಮ ಕತ್ತಲಮನೆಯೊಳುನೆತ್ತಿಹೊಡೆಸಿದಸ್ತ್ರೀನೆತ್ತಿ ಸಲಹಿದಗೆ2ಮಂಗಲಮುನಿಯಿಂದ ಭಂಗಪಟ್ಟವನಅಂಗಜನಶ್ವ ಶೃಂಗಾರದ್ಹಿಡಿದಗೆ 3ಕುರುಪನನುಜೆಯ ಪರಪತಿಶಿವತರಣಿಯಿದಿರಿನೋಳ್ ತರಿಸಿದ ಮಹಿಮಗೆ 4ಭಕ್ತವತ್ಸಲ ಮುಕ್ತಿದಾಯಕಭಕ್ತರ ಇಷ್ಟವ ಪೂರ್ತಿಪ ಶ್ರೀರಾಮಗೆ 5
--------------
ರಾಮದಾಸರು
ವೃಂದಾವನದೊಳಾಡುವನಾರೆ - ಗೋಪ-|ಚಂದಿರವದನೆ ನೋಡುವ ಬಾರೆ ಪಅರುಣಪಲ್ಲವಪಾದಯುಗಳನೆ ದಿವ್ಯ-|ಮರುಕತ ಮಂಜುಳಾಭರಣನೆ ||ಸಿರಿವರ ಯದುಕುಲ ಸೋಮನೆ ಇಂಥ-|ಪರಿಪೂರ್ಣ ಕಾಮ ನಿಸ್ಸೀಮನೆ 1ಹಾರ-ಹೀರ ಗುಣಧಾರನೆ - ದಿವ್ಯ |ಸಾರಶರೀರ ಶೃಂಗಾರನೆ ||ಆರಿಗಾದರು ಮನೋದೂರನೆ ತನ್ನ-|ಸೇರಿದವರ ಮಾತ ವಿೂರನೆ 2ಮಕರಕುಂಡಲಕಾಂತಿ ಭರಿತನೆ - ದಿವ್ಯ |ಆಕಳಂಕರೂಪ ಲಾವಣ್ಯನೆ ||ಸಕಲರೊಳಗೆ ದೇವನೀತನೆ - ನಮ್ಮ |ಮುಕುತೀಶಪುರಂದರವಿಠಲನೆ3
--------------
ಪುರಂದರದಾಸರು
ವೆಂಕಟರಮಣ ವೇದಾಂತಕೋಟಿವಂದ್ಯಶಂಕರಪ್ರಿಯಪತಿಏಳೆನ್ನುತಪ.ಪಂಕಜಮುಖಿಪದ್ಮಾವತಿ ಸರ್ವಾ-ಲಂಕಾರದ ನಿದ್ದೆ ಸಾಕೆನ್ನುತ ಅ.ಪ.ಮಂಗಲಚರಿತ ಭುಜಂಗಶಯನ ನಿ-ನ್ನಂಗದಾಯಾಸವ ಪರಿಹರಿಸಿಪೊಂಗಲಶದಿ ಉಷ್ಣೋದಕ ಗಂಧ ತೈಲಾ-ಭ್ಯಂಗಮಾಡುವರೇಳು ಶೃಂಗಾರದ ಮೂರ್ತಿ 1ದಧಿಯ ಪೃಥುಕದಲಿ ಹದಗೈದು ಮಧುರದಿಮಧುಸೂದನ ನಿನ್ನ ಪದದ ಮುಂದೆಸದ್ ಹೃದಯರು ತಂದಿಹರು ಸಮರ್ಪಿಸೆಮದಜನಕ ನಿನ್ನ ಓಲೈಸುವರಯ್ಯ 2ಸಣ್ಣಕ್ಕಿಯನು ದಿವ್ಯಾನ್ನ ಪಾಕವ ಮಾಡಿಚೆನ್ನಾದ ಗೋಕ್ಷೀರವನ್ನು ತಂದುಉನ್ನತ ಮಹಿಮನೆ ಉಣ್ಣೆಂದು ಲಲಿತ ಸು-ವರ್ಣಪಾತ್ರೆಯೊಳು ತಂದಿಹರು ಶ್ರೀಹರಿಯೇ 3ವಿಧವಿಧ ಷಡುರಸಭರಿತ ಮನೋಹರಸುಧೆಗೆಯಿಮ್ಮಡಿ ಮಧುರತ್ವದಲಿಮೃದುವಾದ ಉದ್ದಿನ ದೋಸೆಯ ಸವಿಯೆಂದುಪದುಮನಾಭನೆ ನಿನ್ನ ಹಾರೈಸುವರಯ್ಯ 4ಸಕ್ಕರೆಕದಳಿಉತ್ತಮ ಫಲಗಳ ತಂದುರಕ್ಕಸವೈರಿಯೆ ನಿನ್ನ ಮುಂದೆಚೊಕ್ಕಟವಾಗಿಡೆ ಲೆಕ್ಕ ಲೇಖನಗಳಒಕ್ಕಣಿಪರುವಾಸುದೇವನೀನೇಳಯ್ಯ5ಸಾರಹೃದಯ ಗೌಡಸಾರಸ್ವತವಿಪ್ರಭೂರಿವೇದಾದಿ ಮಂತ್ರದ ಘೋಷದಿಶ್ರೀರಮಣನೆ ದಯೆದೋರೆಂದು ಕರ್ಪೂರ-ದಾರತಿಯನು ಪಿಡಿದಿಹರು ಶ್ರೀಹರಿಯೇ 6ಭಾಗವತರು ಬಂದು ಬಾಗಿಲೊಳಗೆನಿಂದುಭೋಗಿಶಯನಶರಣಾದೆನೆಂದುಜಾಗರದಲಿ ಮದ್ದಳ ತಾಳರಭಸದಿರೇಗುಪ್ತಿರಾಗ ಸಂಗೀತ ಪಾಡುವರಯ್ಯ 7ಕರುಣಾಸಾಗರ ನಿನ್ನ ಚರಣದ ಸೇವೆಯಕರುಣಿಸೆಂದೆನುತಾಶ್ರಿತ ಜನರುಕರವಮುಗಿದು ಕಮಲಾಕ್ಷ ನಿನ್ನಯ ಪಾದ-ಸ್ಮರಣೆಗೈಯುತ ನೋಳ್ಪಾತುರದಿಂದ ಹರುಷದಿ 8ನಾನಾ ಜನರು ಬಂದುಕಾಣಿಕೆಕಪ್ಪವಶ್ರೀನಿವಾಸನೆ ನಿನ್ನ ಪದಕೆ ಒಪ್ಪಿದಾನವಾಂತಕ ನಿನ್ನ ದಯವೊಂದೆ ಸಾಕೆಂದುಧ್ಯಾನಮಾಳ್ಪರು ದಯಮಾಡೆಂದು ಹರಿಯೇ 9ನೀನೆ ಗತಿಯೆಂದು ನಿನ್ನ ನಂಬಿಹರು ಲ-ಕ್ಷ್ಮೀನಾರಾಯಣ ಪುರುಷೋತ್ತಮನೆಮಾನದಿ ಭಕ್ತರ ಸಲಹಯ್ಯ ಸಂತತಶ್ರೀನಿವಾಸನೆ ಬೇಗ ಏಳು ಶ್ರೀಹರಿಯೆ 10
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಶ್ಯಾಮಸುಂದರ ಶ್ರೀಮಾಧವಕಾಮಿಸುವಳಾ ಕಾಮಿನಿಯು ಪ.ಭಾಮಾಮಣಿಯು ನಿನ್ನನೀಕ್ಷಿಸದೆಯಾಮಯಾಮಕೆ ತಾಮಸಗೊಂಬಳು ಅ.ಪ.ಚಂದನಾದಿ ಸೌಗಂಧಕುಸುಮ ವಿಷ-ದಂದವೆಣಿಸುವಳು ಚಂದ್ರಮುಖಿಮಂದಾನಿಲ ಮಕರಂದ ಪಾನರಸ-ವೊಂದನೊಲ್ಲಳ ಪ್ರಿಯಸಖಿನಂದನ ಕಂದನೆ ವಂದನೆ ವಲ್ಲಭಗೈವಳು 1ಹಾರ ಹೀರ ಬಂಗಾರ ಭೂಷಣವಭಾರವೆಂದು ಶೃಂಗರಿಸಳುಕೀರಕೀಕಿಪಿಕಚೀರುಸ್ವನ ಶರ-ಧಾರೆಯೆಂದು ತಾ ಸೈರಿಸಳುಕಾರುಣ್ಯವಾರಿಧೆ ಬಾರದೆ ಬಾಯಾರಿರುವಳು 2ಮೀನಧ್ವಜನುರುಬಾಣದುರುಬೆಗೆಕ್ಷೀಣವಾಗಿಹಳು ಮೀನಾಕ್ಷಿಭಾನುತೇಜ ಲಕ್ಷ್ಮೀನಾರಾಯಣಧ್ಯಾನಿಸುವಳು ನಿನ್ನ ಪ್ರಾಣಸಖಿಮಾನಾಭಿಮಾನಾಧೀನವನಿನ್ನೊಳಗಿಟ್ಟಿಹಳು3
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಶ್ರೀ ಪ್ರಸನ್ನ ಶ್ರೀನಿವಾಸದಾಸರ ಶ್ರೀಹರಿ ಪ್ರಾದುರ್ಭಾವಗಳುಪ್ರಸನ್ನ ಶ್ರೀ ಮತ್ಸ್ಯಾವತಾರ4ಲೀಲಾವತಾರನೇ ಪ್ರಳಯಾಬ್ದಿ ಸಂಚರನೇಮಾಲೋಲ ಸುಖಚಿತ್ ತನು ಮತ್ಸ್ಯರೂಪಬಾಲಾರ್ಕ ಕೋಟ್ಯಮಿತ ಜ್ಯೋತಿರ್ಮಯ ಸುಂದರನೇಕಾಲಗುಣದೇಶ ಅಪರಿಚ್ಛಿನ್ನ ಪೂರ್ಣ ಸುಗುಣಾರ್ಣವನೇ ಶರಣು ಪಪ್ರಳಯದಲಿ ಭೂರಾದಿ ಲೋಕಂಗಳುಮುಳಗಿರಲು ಹುಯಗ್ರೀವನಾಮ ದಾನವನುಸೆಳೆದು ವೇದಗಳ ತನ್ನೊಳ್ ಅಡಗಿಸಿದ್ದವನಸೀಳ್ದಿ ನೀ ಬಂದು ವೇದೋದ್ಧರನೇ ಮತ್ಸ್ಯ 1ಗೋವಿಪ್ರಸುರ ಸಾಧು ಜನರ ವೇದಂಗಳ-ಕಾವಸರ್ವೇಶ್ವರನೇ ಪುರುಷಾರ್ಥದಾತಸರ್ವರಿಗೂ ಸುಖವೀವುದು ನಿನ್ನ ಸುಚರಿತ್ರೆಶ್ರೀವರನೇ ಮತ್ಸ್ಯರೂಪಿಯೇ ಶರಣು ಶ್ರೀ ಕೃಷ್ಣ 2ಹಂಸ ಐರಾವತ ತಿತ್ತಿರಾ ಶುಕಗಳುಈ ಪಕ್ಷಿಗಳಲ್ಲಿ ತರತಮ ಉಂಟುಸುಸುಖ ಐಶ್ವರ್ಯೋನ್ನಾಹ ಅದರಂತೇವೇಈ ಸುನುಡಿಗಳ ಪಠನ ಮಾಳ್ಪ ಸುಜನರಿಗೆ 3ಗುರುರ್ಗುರ್ರೋಗುರುಮನುಶುಕಮಧ್ವಾಂತಸ್ಥಪರಮಾತ್ಮಹರಿವಿಷ್ಣೋ ಉದ್ದಾಮಸಾಮಅರದೂರಅನಂತೋರು ನಿಜಶಕ್ತಿ ಪರಿಪೂರ್ಣಉರು ಸುಗುಣ ನಿಧಿಯೇ ಶಫರಿರೂಪ ಮಾಂಪಾಹಿ 4ಸರ್ವೋತ್ತಮನು ನಾರಾಯಣನೇ ಎಂದರಿತುದ್ರವಿಡ ದೇಶಾಧಿಪನು ಸತ್ಯವ್ರತರಾಯಸುವಿವೇಕದಿ ನಿನ್ನ ಕುರಿತು ತಪವಚರಿಸಿದನುಭಾವಶುದ್ಧನು ಸಲೀಲಾಶನ ದೃಢವ್ರತನು5ವಿವಸ್ವಾನ್ ಮಗ ಶ್ರಾದ್ಧದೇವನು ಪ್ರಖ್ಯಾತವೈವಸ್ವತಮನುವೇ ಇಂದಿನ ಮನುವುಪೂರ್ವದಲಿ ಈತನೇ ಸತ್ಯವ್ರತ ಸಾಮ್ರಾಟ್0ಅವನಿಗೆ ನಮೋ ಎಂಬೆ ನಿನ್ನವನೆಂದು 6ರಾಜ ಋಷಿ ಈ ಮಹಾನ್ ಕೃತಮಾಲಾ ನದಿಯಲ್ಲಿನಿಜ ಭಕ್ತಿಯಿಂದ ಜಲತರ್ಪಣವ ಚರಿಸೆಅಂಜಲಿಉದಕದಲಿ ಮುದ್ದು ಮರಿ ಮೀನೊಂದುಸರಿಜ್ಜಲ ಸಹಿತದಿ ಬಂದದ್ದು ಕಂಡ 7ಅರಸ ಕರುಣದಲಿ ಅದನು ನದಿಯಲಿ ಬಿಡಲಿರೆಅರುಹಿತು ತನ್ನ ವೃತ್ತಾಂತವ ಆ ಮೀನುಪರಿಪರಿಯಾಗಿ ತನ್ನ ಸಜಾತೀಯರ ಭಯ ತನಗೆ ಎಂದುನೀರು ಪ್ರವಾಹದಲ್ಲಿ ತನ್ನ ಬಿಡಬೇಡವೆಂದು ಪ್ರಾರ್ಥಿಸಿತು ರಾಜನ್ನ 8ನಾರಾಯಣಾದಿ ಸುಮಂತ್ರಿತ ಅಭಿಯಂತ್ರಿತ ತನ್ನಸ್ಫುರತ್ ಕಲಶ ಕಮಂಡಲು ನೀರಲ್ಲಿ ಮೀನು ಮರಿ ಇಟ್ಟುಕೊಂಡುಆಶ್ರಮಕೆ ಕೃತ ಕೃತ್ಯ ಮನದಿ ರಾಜನು ಬಂದಮರುದಿನ ಉದಯದಲಿ ಕಂಡ ಆಶ್ಚರ್ಯವ 9ಕಮಂಡಲ ಕಲಶ ಪೂರಾವು ಏಕ ರಾತ್ರಿಯಲ್ಲೇವೇಆಮತ್ಸ್ಯಮರಿ ಬೆಳೆದಿದ್ದು ಆಶ್ಚರ್ಯ ಕಂಡಕಮಂಡಲು ಸಾಲದೇ ವಿಸ್ತಾರವಾದ ಸ್ಥಳನಿರ್ಮಾಣ ಮಾಡಿ ನೀರು ತುಂಬಿಸಿ ಅದರೊಳ್ ಮೀನನ್ನ ಬಿಟ್ಟ 10ಉದಕತುಂಬಿದ ಕುಂಟೆ ಸರೋವರವನ್ನುಮತ್ಸ್ಯವು ಪೂರ್ಣ ವ್ಯಾಪಿಸಿದ ಆಶ್ಚರ್ಯಅತಿಶಯ ಲೀಲಾ ವಿನೋದವ ಕಂಡ ರಾಜಉದಧಿಯಲಿ ಬಿಡಲು ನಿಶ್ಚಯಿಸಿ ಕ್ರಮಗೊಂಡ 11ಮಹೋದಧಿಯಲ್ಲಿರುವ ಮಕರಾದಿಗಳು ತನ್ನ ನುಂಗುವನೆಂದುಮಹಾರಾಜನಿಗೆ ಆ ಮೀನು ಹೇಳಿ ತಾನುಆದರೂ ರಾಜನು ಅಷ್ಟರಲ್ಲೇ ಉದಧಿಯೊಳು ಬಿಟ್ಟನುಮೀನನ್ನು ಆಗ ದೊಡ್ಡ ಆಶ್ಚರ್ಯವೊಂದನ್ನ ಕಂಡ ಆಮೀನು ಮತ್ತೂ ದೊಡ್ಡದಾಯಿತು 12ಶತಯೋಜನ ಮಹಾವೀರ್ಯ ಜಲಚರಗಳುಯಾವುದೂ ಕಂಡಿಲ್ಲ ಕೇಳಿಲ್ಲ ಜಗದಿಅತಿ ಅದ್ಭುತ ಮಹಾ ಮೀನರೂಪನು ಸಾಕ್ಷಾತ್ಉದಧಿಶಾಯಿ ಶ್ರೀಮನ್ನಾರಾಯಣ ನೀ ಎಂದ 13ಜೀವರುಗಳಿಗೆ ಅನುಗ್ರಹ ಮಾಡಲಿಕ್ಕೇವೇದೇವ ನೀ ಮತ್ಸ್ಯರೂಪ ಪ್ರಕಟಿಸಿರುವಿಕಾವಕಾರುಣಿಯೇ ಪುರುಷಶ್ರೇಷ್ಠ ಸರ್ವೋತ್ತಮನೇಸರ್ವದಾ ನಮೋ ಜಗಜ್ಜ£್ಮ್ಞಧಿಕರ್ತ14ಶ್ರವಣ ಸಂಸ್ತುತಿಸಿ ಮನನ ಧ್ಯಾನಾದಿಗಳು ಮಾಡಿಶ್ರೀವರನೇ ನಿನ್ನ ಮಹಾತ್ಮ್ಯಾ ಜ್ಞಾನಪೂರ್ವಕ ನಿನ್ನಲ್ಲಿ ಸುಸ್ನೇಹರತನಾದವಿವೇಕಿ ಪ್ರಪನ್ನರ ಸಲಹಿಗತಿಈವಿ15ಯಥಾರ್ಥ ಜ್ಞಾನವ ಭಕ್ತಿಮಾನ್ ರಾಜನು ಸ್ತುತಿಸಲುಮುದದಿಂದ ಇನ್ನೂನು ನಿನ್ನವೃತತಿಜೇಕ್ಷಣ ಜಗತ್ಪತಿಯೇ ನೀನು ಆಮತಿವಂತನಿಗೆ ಪೇಳಿದಿ ಅವತಾರಕಾರ್ಯ 16ಏಳುದಿನವಾಗಲು ಭೂರಾದಿ ಲೋಕಗಳುಪ್ರಳಯಜಲದಲ್ಲಿ ಮುಳುಗಿ ಹೋಗುವವುಒಳ್ಳೇ ಓಷಧಿ ಸರ್ವವೀರ್ಯತರ ಬೀಜ -ಗಳಸಪ್ತಋಷಿ ಸಹ ಕಾದಿರು ಎಂದಿ17ಕಾದುಕೊಂಡು ಇರುವಾಗ ವಿಶಾಲ ನೌಕವು ಒಂದುಶ್ರೀದ ನೀ ಕಳುಹಿಸೆ ಜಲದ ಮೇಲ್ ಬರುವದುಅದರಲಿ ಅರೋಹಿಸಬೇಕು ಬೀಜಗಳಸಪ್ತಋಷಿ ಸಹ ರಾಜ ಎಂದು ಬೋಧಿಸಿದಿ 18ಎಲ್ಲೆಲ್ಲೂ ಪ್ರಳಯಜಲತುಂಬಿತುಳಕಾಡುವುದುಲೋಲ್ಯಾಡುವುದು ನೌಕ ಗಾಳಿರಭಸದಲಿಅಲ್ಲಿ ಸಮೀಪಿಸುವ ಮತ್ಸ್ಯರೂಪನ ನಿನ್ನಹೊಳೆವ ಶೃಂಗದಿ ನಾವೆಯನು ಕಟ್ಟು ಎಂದಿ 19ನಾವೆಯನು ಬಂಧಿಸಲುರಜ್ಜುಸರ್ಪವು ಎಂದುಸುವ್ರತ ರಾಜನಿಗೆ ಉಪಾಯ ಪೇಳಿದಸರ್ವಗುಣ ಪರಿಪೂರ್ಣ ನಿರ್ದೋಷ ಪರಬ್ರಹ್ಮವಿಶ್ವವಿಷ್ಣೋ ಸೃಷ್ಟಾ ಪಾತಾ ರಮೇಶ20ಈ ರೀತಿ ಆ ಮಹಾನ್ ಸತ್ಯವ್ರತರಾಜನಿಗೆಹರಿನೀನು ಬೋಧಿಸಿ ಅಂತರ್ಧಾನವು ಆಗೇಆ ರಾಜಋಷಿ ತಾನು ಮತ್ಸ್ಯರೂಪ ಹೈಷಿಕೇಶಸಿರಿವರನೇ ನಿನ್ನನ್ನೇ ಧ್ಯಾನಿಸುತಲಿದ್ದ 21ಯುಕ್ತ ಕಾಲವು ಬಂತು ಉಕ್ಕಿತು ಸಮುದ್ರವುಸುತ್ತು ಮುತ್ತು ಎಲ್ಲೂ ಪೊಕ್ಕಿತು ಭೂಮಿಯಲಿಅತ್ತ ಇತ್ತ ಇಲ್ಲೂ ಸುತ್ತಿ ಸುಳಿವ ನೀರುಭೀತಿಕರ ನೆನೆಯಲಿಕೆ ನೋಡೆ ಮತ್ತೆಷ್ಟೋ 22ಚಂಡಮಾರುತ ಪ್ರಚಂಡ ಮೇಘವುಕರಿಸೊಂಡಲಂತೆ ಹನಿ ಕಂಡಿಲ್ಲ ಇಂಥಾ ಮಳೆಕಂಡು ನಾವೆಯ ರಾಜಕೊಂಡು ಬೀಜಗಳಕರಕೊಂಡು ಋಷಿಗಳ ಏರಿಕೊಂಡನು ಬೇಗ 23ಕೇಶವನೇ ನಿನ್ನ ಧ್ಯಾನಿಸಲು ಆಗಕೌಶೇಯ ಶೃಂಗಿ ಮಹಾಮತ್ಸ್ಯ ನೀ ಬರಲುಈಶ ನಿನ್ನಯ ಶೃಂಗಕ್ಕೆ ನೌಕವಕಟ್ಟಿಸಂಸ್ತುತಿಸಿದನು ಮಧುಸೂಧನನೇ ನಿನ್ನ 24ಶ್ರೀ ಭಾಗವತಾಷ್ಟಮ ತ್ರಯೋವಿಂಶತ್ ಅಧ್ಯಾಯಶುಭತಯವಿಜ್ಞಾನಬೋಧಕವು ಅದರಸೊಬಗರಿತು ಯೋಗ್ಯರು ಪಠಿಸೆ ಪ್ರೇರಿಸು ಸ್ವಾಮಿಸೌಭಾಗ್ಯಪ್ರದ ಶ್ರೀಶ ಮಾಂಪಾಹಿ 25ಏಕಶೃಂಗಧರ ಸ್ವರ್ಣ ಮತ್ಸ್ಯನಿಗೆ ಸರ್ಪದಿಂಲಕ್ಷ ಯೋಜನೆ ಮೇಲಿನ ವಿಸ್ತಾರದಿ ಬಂಧಿಸಿದಸತ್ಯವ್ರತ ರಾಜನು ಸಂತೋಷದಲಿ ಸ್ತುತಿಸಿದಅನಾದಿಅವಿದ್ಯಾಪೀಡಿತ ಜನ ಸಂರಕ್ಷನ್ನ26ಪರಮಹಂಸನ ಮೂಲ ಗುರೋ ಲಕ್ಷ್ಮೀಹಯವದನಮೇರು ಇತರಾ ದೇವಹೂತಿ - ಸುತ ಶರಣುಘೋರಸಂಸಾರ ಬಂಧಮೋಚಕಹರಿಯೇವರಸುಖಪ್ರದ ಸಂರಕ್ಷಕ ಮಾಂಪಾಹಿ27ಶಕ್ರಾದಿ ಜಗತ್ತಿಗೆಗುರುಗಂಗಾಧರನುಗಂಗಾಧರನಿಗೆಗುರುಪ್ರಾಣ ಪದ್ಮಜರುಪಂಕಜಾಸನ ಪ್ರಾಣರಿಗೆಗುರುರಮೇಶನು ಹರಿಯೇಆಗುರುಮೂಲಗುರು ಪರಮಗುರ್ರೋಗುರುವು28ನಿನ್ನ ಅನುಗ್ರಹ ಹೊಂದಿದರು ನೀ ಪರಮಗುರುಎಂದು ತಿಳಿದುಬದ್ಧಜೀವರ ಮೋಕ್ಷ ಪುರುಷಾರ್ಥಅವಿದ್ಯಾsಜ್ಞಾನ ಕಳೆದು ಪುಟವಿಟ್ಟಸ್ವರ್ಣರಜತಪೋಲ್ ಶುಚಿ ಆಗಿಸುವಿ ದಯದಿ 29ಸರ್ವಲೋಕ ಜನರಿಗೆ ಹಿತಕರ ಸುಹೃತ್ ನೀನೇಪ್ರಯೇಶ್ವರ ಆತ್ಮಾಗುರು ಜ್ಞಾನ ಅಭೀಷ್ಟಸಿದ್ಧಿಯುನೀ ಸುಹೃತ್ ಅಂದರೆ ಪ್ರತ್ಯುಪಕಾರ ಶೂನ್ಯನುಇನ್ನೂ ಬಹು ವಿಧದಿ ಪರಮಸಾಧು ಸ್ತುತಿಗೈದಿ 30ಸರ್ವಲೋಕಕೆ ನೀನೇ ಸುಹೃತ್ ಪ್ರಯೇಶ್ವರನುಶರ್ವಅಜಶಕ್ರಾದಿಗಳ ನಿಯಾಮಕನುಸರ್ವಾದಾನಂದಮಯ ಗುಣನಿಧಿ ಆತ್ಮನುಸರ್ವಾಭೀಷ್ಟಪ್ರದ ಜ್ಞಾನಸಿದ್ಧಿದನು 31ದೇವದೇವೋತ್ತಮನೇ ಆದಿಪೂರುಷ ಶ್ರೀಶವಿಶ್ವೇಶ್ವರ ಮತ್ಸ್ಯರೂಪ ಭಗವಂತನೀ ವಿಹಾರವು ಮಾಡಿ ಪ್ರಳಯಾರ್ಣವದಲಿಕವಿವರ್ಯ ರಾಜನಲಿ ಸುಪ್ರೀತನಾದಿ 32ವೇದ ಉದ್ಧರಿಸಿದಿ ಹಿಂದೆ ಅಸುರನ್ನ ಕೊಂದುಯುಕ್ತ ಕಾಲದಿ ಈಗ ಪ್ರಳಯವು ತೀರೆಸಾಧುವರ್ಯನು ಜ್ಞಾನವಿಜ್ಞಾನ ಕೋವಿದನುಸತ್ಯವ್ರತನಿಗೆ ಮನು ಪದವಿಯನು ಇತ್ತಿ 33ಮತ್ಸ್ಯಾವತಾರ ಸಂಕೀರ್ತನೆ ಮಾಳ್ಪರಿಗೆಸಿಧ್ಧಿ ಆಗುವುದು ಸರ್ವೇಷ್ಟ ಸದ್ಗತಿಯುಎಂದು ಪೇಳಿರುವಿ ಶುಕಪದ್ಮಭವಪತಿ ಶ್ರೀಶಸಾತ್ಯವತಿ ಮೀನ ವೇಧಪಿತ ಪ್ರಸನ್ನ ಶ್ರೀನಿವಾಸ 34- ಇತಿ ಶ್ರೀ ಮತ್ಸ್ಯಾವತಾರ ಸಂಪೂರ್ಣಂ -
--------------
ಪ್ರಸನ್ನ ಶ್ರೀನಿವಾಸದಾಸರು
ಶ್ರೀ ಮಂಗಳ ದೇವಿಗೆ ಜಯ ಜಯಶ್ರೀ ಮಂಗಳ ದೇವಿಗೆ ಜಯ ಜಯಸ್ವಾಮಿಗೆ ಜಯ ಸ್ವಾಮಿನಿಗೆ ಜಯ ಜಯವೆಂದು ಪಾಡಿ ಜಾನಕಿರಾಮಗಾರತಿಯ ಬೆಳಗಿರೆ ಪ.ಪದುಮಿಣಿಯರು ಪತಿವ್ರÀ್ರತಾಮಣಿಯರುವಿಧುಬಿಂಬದ ಮುಖಿಯರು ಸಖಿಯರುಪದುಮರಾಗದ ಹರಿವಾಣದಿ ಹರಿವಾಣದಿ ಹರಿಮಣಿದೀಪದಕದÀಡಿನಾರತಿಯ ಬೆಳಗಿರೆ 1ಉಲಿವಂದುಗೆಗಾಲಿನ ಮೇಲಿನಕಲಧೌತದ ಇತ್ತರದುತ್ತರಿಥಳಥಳಿಸುವ ಶಶಿರವಿ ಕೋಟಿಗಳ ಕೋಟಿಗಳಗೆಲುವ ರವಿಕುಲ ತಿಲಕಗಾರತಿಯ ಬೆಳಗಿರೆ 2ಅಂಗದವಲಯಾಂಗುಲಿಮುದ್ರಿಕೆರಂಗುಮಾಣಿಕ ಮುತ್ತಿನ ಸರಬಂಗಾರದ ಮೇಲೆವೈಜಯಂತಿವೈಜಯಂತಿ ಪದಕವು ತುಳಸಿಶೃಂಗಾರಗಾರತಿಯ ಬೆಳಗಿರೆ 3ಇಂದಿರೆಸೀತಾರ್ಪಿತಮಾಲಾಕಂಧರಭುವನಾವಳಿಗಪ್ರತಿಸುಂದರ ಸದ್ಗುಣಸಾಂದ್ರಉಪೇಂದ್ರ ಭೂಮಿಜೆÉೀಂದ್ರÀ ಲಕ್ಷ್ಮಣಾಗ್ರಜ ರಾಮ ಚಂದ್ರಗಾರತಿಯ ಬೆಳಗಿರೆ 4ಕುಂಡಲಮುಕುಟಾಂಕಿತ ಸನ್ಮುಖ ಸುಭ್ರೂಹಿತಮಂಡಲ ಗಂಡದಪುಂಡರೀಕಾಭಾನಯನದ ನಯನದ ಘನಶಾಮಲವರಕೋದಂಡಗಾರತಿಯ ಬೆಳಗಿರೆ 5ಋಷಿಮಖವನು ಈಕ್ಷಿಸಿ ರಕ್ಷಿಸಿವಿಷಕಂಠನ ಧನುವ ಮುರಿಹೊಯಿದು ಮುರಿಹೊಯಿದುತುಷಿಸಿದಗಾರತಿಯ ಬೆಳಗಿರೆ 6ಹನುಮನ ಕಂಠದ ಸನ್ಮಣಿಗೆಪಣೆಗಣ್ಣನ ಶ್ರೀ ಜಪಮಣಿಗೆನೆನೆವರ ಚಿಂತಾಮಣಿ ಸೀತಾಶಿರೋಮಣಿಗೆ ಶಿರೋಮಣಿಗೆಪ್ರಸನ್ನವೆಂಕಟ ವನಜೋದ್ಭವಪಿತಗಾರತಿಯ ಬೆಳಗಿರೆ 7
--------------
ಪ್ರಸನ್ನವೆಂಕಟದಾಸರು
ಶ್ರೀ ವರದೇಂದ್ರವಿಜಯ121ವರದೇಂದ್ರ ತೀರ್ಥಾರ್ಯ ಗುರುವರರ ಪದಯುಗ್ಮ |ಸರಸೀರುಹದಲ್ಲಿ ಸತತ ನಾ ಶರಣಾದೆನು |ವರಸಮೀರಗ ಕೃಷ್ಣ ರಾಮಹಯಮುಖವ್ಯಾಸ |ನರಹರಿ ಪ್ರಿಯರಿವರು ಸಾಧುವರಪ್ರದರು ಪರಂಗನ ಪಾದೋದಕವು ಸುಪವಿತ್ರ ತಮವೆಂದುಗಂಗೆಯನು ಶಿರದ ಮೇಲಿಟ್ಟುಕೊಂಡಿಹ ಶಿವನು |ಲಿಂಗ ಮೂರುತಿ ಶಿವಗೆ ಸುಪೂರ್ಣಮತಿ ಗುರುವುಶಂಕೆಇಲ್ಲ ಬ್ರಹ್ಮಗುರು ಶಿವ ಶಿಷ್ಯಕೇಳಿಕೇನ1ರಜತ ಜಾಂಬೂನವ ತಾಮ್ರವÀನು ಮರಗದವ |ವಜ್ರಮಾಣಿಕ್ಯವನು ತನ್ನ ಗರ್ಭದಲಿ ನಿಲ್ಲಿರಿಸಿ |ದುರ್ಜನರಿಗೆ ಸುಲಭದಿ ಕಾಣಿಸದೆ ಈ ಕ್ಷೇತ್ರ |ರಾಜಿಸುತೆರವಿಸೋಮತಾರೆಗಳ ಜ್ಯೋತಿಯಿಂದ2ರಾಘವ ಯಾದವ ವೇಂಕಟಧಾಮ ಹನುಮ ಭೀಮ |ಈ ಗ್ರಾಮ ರಕ್ಷಣೆ ಮಾಡುತಿರೆ ಶಿವ ಜಪಿಸುವ |ಅಘದೂರ ಗುಣನಿಧಿ ಸಮೀರಗ ಮಹಿದಾಸ - |ನಿಗೆ ಪ್ರಿಯಬೃಹತಿಋಕ್ ಶ್ರೀ ವಿಷ್ಣು ಸಾಸಿರ ನಾಮ3ಈ ರೀತಿ ಬಹಿರ್ ಮುಖರ್ಗೆ ಪ್ರಿಯ ಲಿಂಗಸುಗೂರಲ್ಲಿಸುರವೃಂದದವರು ಮರುದ್ಗಣದವರು ತೋರಿ |ಇರುತಿದ್ದ ಕಾಲದಲಿವಿಜ್ಞಾನಭಕ್ತಿ ಯೋಗೀಶ |ವರದೇಂದ್ರ ತೀರ್ಥ ಗುರುರಾಜ್ವಿಜಯಮಾಡಿದರು4ಜಗನ್ನಾಥದಾಸರಸಖಶಿಷ್ಯರಾಗಿಹ ನಮ್ಮ |ಜಗಖ್ಯಾತ ಪ್ರಾಣೇಶದಾಸರು ಶ್ರೀ ಸ್ವಾಮಿಗಳಿಗೆ |ಸ್ವಾಗತ ವಿನಯ ಪೂರ್ವಕ ನೀಡಲು ಮುದದಿಂದ |ಶ್ರೀಗಳು ತಮ್ಮ ದಿಗ್ವಿಜಯ ತಾತ್ಪರ್ಯ ಹೇಳಿದರು 5ತಮ್ಮದ್ವಿತೀಯಸವನ ಮಧ್ಯ ಬ್ಯಾಗವಟ್ಟಿನರ- |ಸಿಂಹ ದಾಸರ ಯುವ ಆಟೋಪ ವಿದ್ಯಾವಾನ್ ಸುಗುಣಿಶ್ರೀ ಮಾಧ್ವ ಬಾದರಾಯಣಿಪರವಿದ್ಯಾಗ್ರಂಥಗಳ |ತಮ್ಮಲ್ಲಿ ಸಂಯಕ್ ಓದಿ ಈಗಲೂ ಬರುವ ಆಗಾಗ 6ಈ ತಮ್ಮ ಪ್ರಿಯ ಶ್ರೀನಿವಾಸಾಚಾರ್ಯರ ಪ್ರೀತಿ ಪಾತ್ರ |ಸಾತ್ವಿಕ ಶಿಷ್ಯರಲಿ ಶ್ರೀಮಠ ಬಂದದ್ದು ಸರಿಯೇ |ಇಂದಿಲ್ಲಿ ರಾಮ ವೇದವ್ಯಾಸ ಪೂಜೆ ಚರಿಸುವುದು |ಮುಂದಿಲ್ಲಿ ತತ್ತ ್ವವಾದ ಸಜ್ಞಾನ ವೃದ್ಧಿಯಾಗೆಹೇತು7ಪಾದಪೂಜೆ ಸಭ್ಯರಿಂದಲಿಗುರುಮರ್ಯಾದೆಗಳು |ಇಂಥ ಕಾರ್ಯಗಳ ನಿಮಿತ್ತ ವರದೇಂದ್ರ ಗುರುವು |ಮತ್ತು ಪೇಳುವ ಮಾತು ಪೂಜಾನಂತರ ಎನ್ನುತಲೆ |ಬಂದು ನೆರೆದ ಜನರಲಿಗಮನಬೀರಿದರು8ಲಿಂಗಸುಗೂರು ಮತ್ತು ಸುತ್ತ ಮುತ್ತ ಗ್ರಾಮ ಜನರ |ಕಂಗಳಿಗೆ ಹಬ್ಬವು ಮನಸ್ಸಿಗಾನಂದಕರವು |ಭಂಗಾರ ನವರತ್ನ ಮಂಟಪದಿ ಯತಿ ಕೃತ್ ಪೂಜೆ |ಶೃಂಗಾರ ದೀಪಾವಳಿ ತೋರಣ ವಿಪ್ರಜನ ಗುಂಪು 9ಮನೋದಾರ ವಾಕ್ಚತುರ ಶ್ರದ್ಧಾಳು ಭಕ್ತಿ ಭರಿತ |ಪ್ರಾಣೇಶದಾಸಾರ್ಯರ ಸೇವೆ ಮೆಚ್ಚಿದರು ಶ್ರೀಗಳು |ಅನಪೇಕ್ಷರು ಸ್ವಯಂ ತಾನೇ ವದಾನ್ಯರು ಕೇಳ್ದರು |ಮನೆ ಸ್ಥಳ ತಮಗೆ ದಾನಮಾಡೆಂದು ದಾಸರನ್ನ 10ಜ್ಞಾನಿವರ ಪ್ರಾಣೇಶದಾಸರಾಯರು ಎಂಥ ಭಾಗ್ಯ |ಎನ್ನುತ ಅನವಶ್ಯ ಹೆಚ್ಚುಸೊಲ್ಲುವೆಚ್ಚ ಮಾಡದೇ |ದಾನ ಮಾಡಿದರು ರಾಮಕೃಷ್ಣ ವ್ಯಾಸಾರ್ಪಣವೆಂದು |ಕನಿಕರದಿ ಸ್ವೀಕರಿಸಬೇಕೆಂದು ಬೇಡಿದರು 11ಜ್ಞಾನಿಕುಲ ತಿಲಕರು ದೇವ ಸ್ವಭಾವರು ನಮ್ಮ |ಘೃಣಿ ಶ್ರೀ ವರದೇಂದ್ರ ತೀರ್ಥಾರ್ಯಗುರುಮಹಂತರು |ದಾನ ಸ್ವೀಕರಿಸಿ ಬಹ್ವನುಗ್ರಹಿಸಿ ಹೊರಟರು |ಇನ್ನುಳಿದ ತಮ್ಮವಿಜಯಯಾತ್ರೆ ಕ್ಷೇತ್ರಗಳಿಗೆ12`ಶ್ರದ್ಧ ಯಾಧೇಯಂ' ಎಂಬ ಶೃತಿ ಶಾಸನ ಅನುಸಾರ |ಈ ದಾನ ದಾಸರು ಮಾಡಿದ್ದು ಲೋಕ ಕೊಂಡಾಡುತಿದೆ |ಅಂದಿನಾರಭ್ಯ ಲಿಂಗಸುಗೂರು ಪ್ರಾಣೇಶದಾಸರ |ಮಂದಿರ ವ್ಯಾಸದಾಸ ತತ್ತ ್ವವಾದ ಪೋಷಕವಾಯ್ತು 13ಶ್ರೀ ಮಠದ ಆಡಳಿತ ಪಾಠ ಪ್ರವಚನ ಇಂಥ |ತಮ್ಮ ಸ್ಥಾನಾಶ್ರಮ ಕೆಲಸ ಮಾಡುತ ಬಹುದಿನ |ತಮಗೆ ದತ್ತವಾದ ಲಿಂಗಸುಗೂರು ಭೂಮಿಯನ್ನು |ಸುಮ್ಮನೆ ಖಾಲಿಯಾಗಿ ಇಟ್ಟು ಪುಣೆಯಲ್ಲಿಗುರುನಿಂತರು14ನಿಯಮೇನ ಹರಿಪುರ ಯೈದಿ ಪುಣೆ ಮಠದಲ್ಲಿ |ದಿವ್ಯ ವೃಂದಾವನಸ್ಥರಾಗಿ ದಾಸರಿಗೆ ಸ್ವಪ್ನದಿ |ದಯಪಾಲಿಸಿದರು ತುಳಸಿ ವೃಕ್ಷ ಕುರುಹಲ್ಲಿ |ಶ್ರೀಯಃ ಪತಿಯ ಧ್ಯಾನಿಸುತ ಬಂದಿಹೆವು ವಾಸಕ್ಕೆ 15ಶ್ರೀ ಸ್ವಾಮಿಗಳ ಸ್ವಾಪ್ನ ಆಜ್ಞಾನುಸಾರವಾಗಿಯೇ | ವಿಶ್ವಾಸಉಕ್ಕುತ ಪ್ರಾಣೇಶದಾಸರು ವೃಂದಾವನವ |ಹಸನಾಗಿ ನಿರ್ಮಾಣ ಮಾಡಿ ಯೋಗ್ಯದಿನ ವಿಹಿತ |ಸಂಸ್ಕಾರದಿಂದ ಆವಾಹನ ಪ್ರತಿಷ್ಠೆ ಮಾಡಿದರು 16ಮಹಾನ್ ವರದೇಂದ್ರರು ಸ್ವಾಪ್ನ ಸಂದೇಶ ಪ್ರಕಾರವೇ |ಮಹಾನುಗ್ರಹ ಮಾಡಿ ತಾವೇ ಒಂದಂಶದಿ ಕುಳಿತು |ಅಹರಹ ಬಂದು ಸೇವಿಸುವರ್ಗೆ ವಾಂಛಿತವಿತ್ತು |ಸಲಹುತಲಿಹರು ಅದ್ಯಾಪಿ ಲಿಂಗಸುಗೂರಲ್ಲಿ 17ಈ ಪುಣ್ಯಶ್ಲೊಕ ವರದೇಂದ್ರ ತೀರ್ಥರಲಿ ತೀರ್ಥತ್ವ |ಇಪ್ಪುದರಿಂ ಪವಿತ್ರಕರ ಇವರ ಪಾದಸೇವಾ |ಪಾಪಹಾರಿಣಿ ಪುಣ್ಯದಾ ತುಳಸಿಯ ಮೂಲದಲಿ |ಸುಪವಿತ್ರಕರ ಸರ್ವತೀರ್ಥಗಳಿಪ್ಪುದು ಸಿದ್ಧ 18ಉರುಗಾಯ ಧನ್ವಂತರಿಯ ಆನಂದ ಬಾಷ್ಪಬಿಂದು |ಆಪ್ರಾಕೃತವಾದ್ದು ಹಸ್ತಸ್ಥಪ್ರಾಕೃತಪೀಯೂಷದೋಳ್ |ಪ್ರಕ್ಷಿಪ್ತವಾಗಿ ಧರೆಯಲ್ಲಿ ತುಳಸೀ ವೃಕ್ಷವಾಯ್ತು |ಹರಿಕೊಟ್ಟ ವರದಿಂ ವೃಂದಾದೇವಿ ತುಳಸಿಕಟ್ಟೆ19ದೋಷೋಜ್ಜಿತಗುಣಪೂರ್ಣ ಶ್ರೀಹರಿ ತುಳಸೀನಾಮ |ಲಕ್ಷ್ಮೀಸಮೇತ ಆ ವೃಕ್ಷ ಮಧ್ಯದಿ ಅಮೃತಾಂಧಸ್ |ಶ್ರೇಷ್ಠರ ಸಹ ಇರುವಂತೆ ವರದೇಂದ್ರರೋಳ್ ಛಂದಸಾಂ |ವೃಷಭಶ್ರೀಯಕ್ ಸಪರಿವಾರ ಜ್ವಲಿಸುತಿಹನು20ಉತ್ತಮ ಶ್ಲೋಕ ಪರಮೈಶ್ವರ್ಯರೂಪವಿಷ್ಣುವೇಅಧಿ|ಅಂದರೆ ಸರ್ವೋತ್ತಮ ಇಂಥಾ ಗುಣಜ್ಞಾನ ಪುಂಜವು |ವೇದಗಳು ತುಳಸ್ಯಾಗ್ರದಿ ಇರುವಂತೆ ಇವರೋಳ್ |ಮೇಧಾ ಪ್ರೌಢಿಮೆ ಇಹುದು ಮಧ್ವಸ್ಥವ್ಯಾಸಾನುಗ್ರಹ 21ಸುಮನಸವಂದಿತ ತುಳಸೀನಾಮಕ ಲಕ್ಷ್ಮಿಯು |ಸನ್ಮಂತ್ರವು ದ್ವಾದಶಾಕ್ಷರದಿ ಇರುವುದು ಅದು |ನಿರ್ಮಮ ನಿರ್ಮತ್ಸರ ಯೋಗ್ಯ ಅಧಿಕಾರಿಗಳಿಂದ |ರಮಾಮಾಧವ ಪ್ರೀತಿಗೆ ಜಪ್ಯ ಇಹಪರೇಷ್ಟಲಾಭ 22ಬಾದರಾಯಣತಾನೇ ನುಡಿಸಿದೀ ನುಡಿಗಳ್ ಭಕ್ತಿ |-ಯಿಂದೋದಿ ಕೇಳ್ವ್‍ರ್ಗೆ ವರದೇಂದ್ರ ಮಧ್ವಸ್ಥ ಅಜನ - |ಪಿತ `ಶ್ರೀ ಪ್ರಸನ್ನ ಶ್ರೀನಿವಾಸ' ಶ್ರೀಶ ತುಳಸೀಶ |ವಿತ್ತವಿದ್ಯಾಯುರಾರೋಗ್ಯ ಜ್ಞಾನ ಭಕ್ತ್ಯಾದಿಗಳೀವ23 ಪ|| ಇತಿ ಶ್ರೀ ವರದೇಂದ್ರವಿಜಯಸಂಪೂರ್ಣಂ ||
--------------
ಪ್ರಸನ್ನ ಶ್ರೀನಿವಾಸದಾಸರು