ಒಟ್ಟು 526 ಕಡೆಗಳಲ್ಲಿ , 88 ದಾಸರು , 417 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶ್ರೀರಾಮಮಂತ್ರ22ಶ್ರೀರಾಮ ಸೀತಾರಮಣ ಮಾಂಪಾಹಿಪಉರು ಜ್ಞಾನ ಸುಖರೂಪ ನಮೋವಾಸುದೇವಅ.ಪಶ್ಯಾಮ ರಮಣೀಯ ಉರು ಆಮ್ನಾಯಕೂ ಅಮಿತರಮೆ ಸೀತಾಯುತ ನಮೋ ಹನುಮಾದಿಸೇವ್ಯವಾಮಹಸ್ತದಿಚಾಪಚಿನ್ಮುದ್ರೆ ಶರಬಲದಿಅಮಿತಾರ್ಕಸೋಮ ಸ್ವಕಾಂತಿ ಶ್ರೀರಾಮ 1ಪರಮೇಶ ಏಕಾತ್ಮಅರದೂರಪರಿಪೂರ್ಣಉರು ಸುಗುಣವಾರಿನಿಧಿ ನೀನೇ ಸ್ವತಂತ್ರಅರವಿಂದಜಾಂಡಾದಿ ಜಗತ್ಸರ್ವ ಕರ್ತಜಸುರರ ಮೊರೆಕೇಳಿದಶರಥನ ಸುತನಾದೆ2ಚತುರ್ವದನ ಸಂಸೇವ್ಯ ಹಯವದನ ಷಡ್ರೂಪಚತುರ್ವಿಂಶಾಕ್ಷರ ಸುಮಂತ್ರ ಪ್ರತಿಪಾದ್ಯತ್ರಾತಪ್ರೇರಕಸ್ವಾಮಿ ರಾಮನೇ ಎಂದರಿತುಸಂಧ್ಯಾಸುಮಂತ್ರ ಋಷಿ ಬಂದು ಪ್ರಾರ್ಥಿಸಿದ 3ಸುದುಪಾಸ್ಯ ನಿನ್ನ ಋಷಿ ಆಶ್ರಮಕೆ ಕರದೊಯ್ಯೆಶ್ರೋತವ್ಯ ಮಂತವ್ಯ ನಿಧಿ ಧ್ಯಾಸಿತವ್ಯಪ್ರತ್ಯಕ್ಷ ಅವತಾರರೂಪ ನೀನೆಂದರಿತುಸಿದ್ಧರು ಭಕ್ತಿಯಿಂದಲಿ ವಂದಿಸಿದರು 4ತತ್ರ ತತ್ರ ಸ್ಥಿತೋ ವಿಷ್ಣುಃ ತತ್ತಚ್ಛಕ್ತಿ ಬೋಧಯನ್ಅಸ್ತ್ರದೇವತೆಗಳೀ ತತ್ವವನು ಅರಿತುಸತ್ತಾದಿದಾತನೇ ಶಾಸ್ತ್ರಸ್ವಾಮಿ ವಿಷ್ಣೋಪ್ರತ್ಯಗಾತ್ಮನೆ ರಾಮ ನಿನಗೆ ನಮಿಸಿದರು 5ಯಜÕಗೆ ಯಜÕಗೆ ವಿಶ್ವಾಮಿತ್ರಗೆ ನಮೋಯಜÕಭುಕ್ ಯಜಮಾನ ಯಜÕ ಯಜೆÕೀಶಇಜ್ಯ ಪೂಜ್ಯಗೆ ಸ್ವಾಮಿ ಮನ್ಮನೋವಾಕ್ಸಂಸ್ಥಯಜÕಸ್ಥಯಜÕ ಮಾಂಪಾಹಿನಮೋ ನಮಸ್ತೆ6ವೇದವತಿತ್ವದಧೀನೆ ಸರ್ವಜಗದಾಧಾರೆಭೂದೇವಿ ಸುಖಪೂರ್ಣೆ ಅಜೆ ನಿತ್ಯಮುಕ್ತೆವೈದೇಹಿ ಜಾನಕಿ ಸೀತಾನಾಮದಿ ತಾನೆಈ ಧರೆಯೊಳ್ ತೋರಿಹಳು ನಿನ್ನನನುಸರಿಸಿ 7ಸುರಾಜಗಜಇಕ್ಷುಜಲ್ಲೆಯನು ಮುರಿವಂತೆಪರಫಲಿಬಲಿನೀನು ಶಿವಚಾಪ ಮುರಿಯೆಸುರರುನರವರ್ಯರು ಹರುಷದಿಂದಲಿ ನೋಡೆಸಿರಿಸೀತೆ ವರಮಾಲೆ ನಿನಗೆ ಹಾಕಿದಳು8ಶರಭಂಗಶಬರಿ ಜಟಾಯು ಮೊದಲಾದವರವರಭಕ್ತಿಗೆ ಮೆಚ್ಚಿ ಯೋಗ್ಯ ಗತಿಯಿತ್ತೆಮಾರುತಿಗೆ ಪ್ರಿಯರೆಂದು ರವಿಜಗೆ ವಿಭೀಷಣಗೆಕರುಣಿಸಿದೆ ನಿರಪೇಕ್ಷ ನೀ ಪೂರ್ಣಕಾಮ 9ಕ್ರೂರ ಪೌಲಸ್ತ್ಯಾದಿ ರಕ್ಕಸರ ತರಿದು ನೀಧರೆಯಲಿ ಸುಕ್ಷೇಮ ಧರ್ಮ ಸ್ಥಾಪಿಸಿದೆಸರಸಿಜಾಸನ ಲೋಕದಂತಾಯಿತೀ ಲೋಕವರವಿಷ್ಣುಭಕ್ತಿಯು ಸೌಖ್ಯ ಎಲ್ಲೆಲ್ಲೂ 10ಸರಸಿಜಾಸನ ಪಿತ ಪ್ರಸನ್ನ ಶ್ರೀನಿವಾಸನೆಸರಿ ಮಿಗಿಲು ನಿನಗಿಲ್ಲ ಯಾರು ಎಂದೆಲ್ಲೂಸಿರಿಸೀತಾಯುತರಾಮ ಎಂದೂನು ಎಲ್ಲೆಲ್ಲೂಮಾರುತಿ ಸೌಮಿತ್ರಿ ಭರತಾದಿಸೇವ್ಯ11
--------------
ಪ್ರಸನ್ನ ಶ್ರೀನಿವಾಸದಾಸರು
ಶ್ರೀವಾಸುದೇವಕಾಯೊಈ ವಿಷಯ ಬಾಧೆಗಳನೊದೆದು ಕಳೆದೆಮ್ಮ್ಮಯ್ಯನೆ ಪ.ತಂದೆ ತಾಯಿಗಳಿಲ್ಲ ಬಂಧು ಬಳಗಿಲ್ಲಭವದಂದುಗದಿ ಸಿಲುಕಿ ಬಲು ನೊಂದೆನಯ್ಯಇಂದಿರೆರಮಣ ನೀನೆ ತಂದೆ ಬಾಲಕನಕುಂದುನೋಡದೆ ಘಕ್ಕನೆತ್ತಿಕೊಂಡು1ಒಂದು ಘಳಿಗೆಯೊಳೊಮ್ಮೆಹರಿಕೃಷ್ಣ ಮುಕುಂದಎಂದೆನ್ನ ಬಾಯಿಗೆ ಬರಲಿಲ್ಲವೊಮಂದನರರೋಲೈಸಿ ಮಸಿವರ್ಣನಾದೆಸಿರಿಕಂದರ್ಪಜನಕ ಕಡುಪಾಪಿ ನಾನಯ್ಯ 2ವೈಭವಯುತರ ಕಂಡು ವೈಮನಸಿಯಾಗಿ ವೃಥಾಸುಯಿಗರೆದುಗರೆದು ಕಾಲವ ಕಳೆದೆನೊಧೈರ್ಯವಿಡಿದೊಮ್ಮೆ ನಿನ್ನಯ ಮೂರುತಿಯ ಮುಂದೆಮೈಗೆಡಹಿ ನಮಿಸಲೊಲ್ಲದ ಪಾಪಿಯ 3ನೀರ ತಡಿಯಲಿ ಕುಳಿತು ನಾನಾ ಕುವಚನಗಳಪಾರವಿಲ್ಲದೆ ಬೊಗಳಿ ಬೇಸರುವೆನೊಓರಂತೆ ನಿನ್ನ ಕಥೆಕೇಳಿಕರ್ಣಾಮೃತದಸಾರಕೊಳದರ್ಭಕಗೆ ಸ್ಮರಣೆಯನಿತ್ತು4ಘನ್ನ ಪಾತಕಿಯು ನಾನಾದರೇನೊ ದಯಾಪೂರ್ಣನೆಂಬೊ ಬಿರುದು ನಿನ್ನದಲ್ಲೆಮುನ್ನಿನಪರಾಧಗಳ ಕ್ಷಮಿಸಯ್ಯ ತಂದೆ ಪ್ರಸನ್ನ ವೆಂಕಟಾಚಲ ನಿವಾಸ ಕೃಷ್ಣ 5
--------------
ಪ್ರಸನ್ನವೆಂಕಟದಾಸರು
ಸರಿಸರಿದೋಡುತಿವೆಲವತ್ರುಟಿಗಳುತಿರುಗದಲಿಟ್ಟಡಿಯಹರಿಗುರು ಪ್ರೀತಿಯ ದೊರಕಿಸು ಪ್ರಾಣಿಕಿರಿಯರಲ್ಲ್ಲ್ಯಮನವರು ಪ್ರಾಣಿ ಪ.ಪರದಾರ ಪರಸಿರಿ ಪರನಿಂದೆ ನಿರುತದಿಚಿರರತಿ ಬೆರತ್ಯಲ್ಲೊಪರಉಪಕಾರ ದಾರಿಯರಿಯದೆ ಬರಿ ಒಣಗರುವಿನಲಿರುವ್ಯಲ್ಲೊನರಹರಿ ಚರಣವಾದರಿಸದೆ ಸ್ಮರಿಸದೆನರರನುಸರಿಪ್ಯಲ್ಲೊಶರೀರ ಸಿಂಗರಿಸಿ ಸತ್ಕಾರ್ಯಬಾಹಿರನಾಗಿನಿರಯಕೆ ಗುರಿಯಾದ್ಯಲ್ಲೊ ಪ್ರಾಣಿ 1ಸುಖಗಳ ಕಕುಲತೆಗಖಿಳ ಸಾಧಕನಾದೆಭಕುತಿಗಳಿಕೆ ತೊರೆದುಬಕವೃತ್ತಿಯ ಕಲಿತು ಮುಖವ ಮುಸುಕಿದೆ ವಿರಕ್ತಿಸರಕುದೋರೈಲೋಕದ ಮೋಹಕ ಜ್ಞಾನಾಧಿಕನಾದೆ ಅಕಳಂಕಸುಖತೀರ್ಥವಾಕುದೋರೈಸಕಲಕಲೆ ಕಲಿತು ಸ್ತ್ರೀಕದಂಬ ಸಖನಾದೆಮುಕುತಿ ಹೊಂದಿಕೆ ತೋರೈ ಪ್ರಾಣಿ 2ಅಶನದುವ್ರ್ಯಸನಕೆ ನಿಶಿದಿನ ವಶನಾದೆಶ್ರೀಶ ಭೃತ್ಯೆನಿಸಿಕೊಳ್ಳೊಹುಸಿಉಪದೇಶಧ್ಯಾತ್ಮ ವೇಷದೊಳು ಘಾಸಿಯಾದೆದಶವ ವರಿಸಿಕೊಳ್ಳೈವಿಷಯ ಬಯಸಿ ವೃಥ ಮಸಿವರ್ಣೆನಿಸದೆ ನೀನ್ಯಶಸ ಕೂಡಿಸಿಕೊಳ್ಳೈಹಸಿತೃಷೆಗಸಣೆಗೆ ಬೇಸರದೆ ಪ್ರಸನ್ವೆಂಕಟೇಶನ ಒಲಿಸಿಕೊಳ್ಳೈ ಪ್ರಾಣಿ 3
--------------
ಪ್ರಸನ್ನವೆಂಕಟದಾಸರು
ಸಂಸಾರವೆಂಬ ಸಾಗರವನುತ್ತರಿಸುವರೆಕಂಸಾರಿಯೆಂಬ ನಾಮವೊಂದೆ ಸಾಕು ಮರುಳೆ ಪ.ಯತಿಯಾಗಬೇಡ ವೈರಾಗ್ಯವರಿತು ಸಕಲವ್ರತವ ಮಾಡುವೆನೆಂಬ ನೇಮ ಬೇಡ ||ಶ್ರುತಿ - ಸ್ಮøತಿಗಳನರಿತು ನಡೆವೆನೆನಬೇಡ ಶ್ರೀ -ಪತಿಯ ಶ್ರೀನಾಮವೊಂದೆ ಸಾಕು ಮರುಳೆ 1ತನುವ ದಂಡಿಸಿ ತುದಿಯ ಕೋಡುಗಲ್ಲಿನ ಮೇಲೆವನಿತೆಯನು ಬಿಟ್ಟು ತಪವಿರಲು ಬೇಡ ||ಅನುವರಿತು ನೀರೊಳಗೆ ಬಿಡದೆ ಮುಳುಗಲುಬೇಡ |ವನಜಾಕ್ಷ ನಾಮವೊಂದೇ ಸಾಕು ಮರುಳೆ 2ತೀರ್ಥಯಾತ್ರೆಗೆ ನೀನು ತಿರುಗಿ ಝೊಂಪಿಸಿ ಕೃ -ತಾರ್ಥನಾದೆನೆಂಬ ಹೆಮ್ಮೆ ಬೇಡ ||ಧೂರ್ತಭಂಜನ ನಮ್ಮ ಪುರಂದರವಿಠಲ ಸಂ -ಕೀರ್ತಿನೆಯ ಮಾಡಿ ಮೋಕ್ಷವನೈದು ಮರುಳೆ ** 3
--------------
ಪುರಂದರದಾಸರು
ಸಾಧು ಸಾಧುಗಳೆಂದು ಎಂಬರೆ ನಿಮ್ಮನುಸಾಧುಗಳೇ ನೀವು ಸಾಧುಗಳೇಸಾಧುಗಳಾದರೆ ವಂದಿಸೆ ಎಲ್ಲರುಸಾಧುಗಳೇ ನೀವು ಸಾಧುಗಳೇಪನೀಚನು ಮೇಲಕೆ ಹೊಲಸನೆಸದರೂಚಲಿತನಾಗದವ ಸಾಧುಇನ್ನು ಕೃತಾರ್ಥನು ಪಾವನನಾದೆನುಎನ್ನುತಲಿರುವನೆ ಸಾಧು1ತಾಯಿ ಹತ್ಯವ ಮಾಡೆ ತಾನು ಕಣ್ಣಲ್ಲಿನೋಡೆತಳ್ಳಿಹೋಗದಿಹನೆ ಸಾಧುರಾಯ ಸದ್ಗುರು ಲೀಲೆಯಿದೆನ್ನುತಶಾಂತನಾಗಿರೆ ಸಾಧು2ತನ್ನ ಸತಿಯಳು ತನ್ನಯ ಮುಂದೆ ರಮಿಸಲುತಯಾರಾಗಿಹನವ ಸಾಧುಇನ್ನು ನಾ ಪುರುಷಲ್ಲಸ್ತ್ರೀಯು ತಾನಲ್ಲೆಂದುಸುಮ್ಮನಿರುವನೆ ಸಾಧು3ದೇಹವ ಕೊಯಿದು ಕೊಡೆಂದೆನೆದೇಹವ ಕೊಯ್ದಿಕ್ಕುವನೆ ಸಾಧುಮಹಾ ಸದ್ಗುರುನಾಥನು ದೃಢವನೋಡುವೆನೆಂದು ಮನಮಿಸುಕದಿಹನೆ ಸಾಧು4ಎತ್ತೆತ್ತ ಏಕೋ ದೇವನು ಆಗಿನೋಡುವನು ಸಾಧುಸತ್ಯ ಚಿದಾನಂದ ಸಾಕ್ಷಾತ್ಕಾರಾಗಿಹೆಸತ್ಯದಿಂದಿರುತಿಹ ಸಾಧು5
--------------
ಚಿದಾನಂದ ಅವಧೂತರು
ಸ್ವಾಮಿತ್ವದವರಿಗೆ ಅಯುಕ್ತವೇ ಯುಕ್ತ |ಶ್ರೀಮನೋರಮನೆ ಪೇಳುವೆ ಕೇಳು ಶಕ್ತ ಪಮಾವನಿಗೇ ಮಾವನಾದೆಯಲೊ ಜನ್ಮಾರಭ್ಯ |ನೀವೊಡಲ ಹೊರದೆ ಚೋರತನ ಮಾಡಿ ||ಕೋವಿದಂಗತಿ ಮೆಚ್ಚು ಜಾರತನ ಮಾಡಿದುದು |ಆ ವನಿತೆ ಮೆದ್ದ ಫಲ ಮೆದ್ದಿ ನಿರ್ದೋಷಿ 1ನರಸೇವೆಯ ಮಾಡಿ ಪೆಸರಾದಿ ಮಾತೆಯ ಕೊಂದೆ |ಧರೆಯೊಳಗೆ ಮಾತುಲನ ಕೊಲ್ಲಬಹುದೇ ||ತಿರುಕಿ ಬೇಡಿಸುವಳರಸರನ ನಿನ್ನಯ ರಾಣಿ |ಪರಿಮಿತಿಯಿಲ್ಲದ ದುರಾಚಾರಿ ನಿನ್ನಯ ಮಗನು 2ಮೈದುನನು ಗುರುದ್ರೋಹಿ ಮೊಮ್ಮಗನು ಬಹು ಚಾಡಿ |ಮೇದಿನಿಯೊಳಗೆ ಹೇಳುತಲೆ ತಿರುಗುವ ||ಶ್ರೀದ ಪ್ರಾಣೇಶ ವಿಠ್ಠಲನೇ ನೀನೇ ದೊರೆ |ಯಾದ ಕಾರಣ ದಕ್ಕಿತಿದು ಇಲ್ಲದರೆ ಸಲ್ಲ 3
--------------
ಪ್ರಾಣೇಶದಾಸರು
ಸ್ವಾಮೀ ರಕ್ಷಿಸು ಸುಬ್ರಹ್ಮಣ್ಯಕಾಮಿತಪ್ರದ ಸುರಸ್ತೋಮಾಗ್ರಗಣ್ಯ ಪ.ಜನ್ಮ ಜನ್ಮಾಂತರದ ಕರ್ಮಾನುಸಾರದಿಂದುರ್ಮತಿಗೆಳಸಿಯಹಮ್ಮಮತೆಯಲಿದುರ್ಮದಾಂಧನಾದೆದುರಿತದೂರವಿರಿಸುನಿರ್ಮಲಜ್ಞಾನೋಪದೇಶವನಿತ್ತೆನ್ನ 1ಪ್ರತ್ಯಗಾತ್ಮನ ನಾಮ ಕೀರ್ತನೆ ಗೈಯುತ್ತಭಕ್ತಿಸೌಭಾಗ್ಯವಿರಕ್ತಿಯ ನೀಡುಭೃತ್ಯವತ್ಸಲ ಭವಭಯಹರ ಗಿರಿಜಾ-ಪುತ್ರನೆ ಪರಮಪವಿತ್ರ ಸುಚರಿತ್ರನೆ 2ಸುರಲೋಕವನುಕಾವಧುರಧೀರ ಪ್ರಭು ನಿನಗೀನರಲೋಕವನು ಕಾವದುರು ಕಷ್ಟವೇನುಪರಿಶುದ್ಧ ಸ್ಥಾನಿಕಧರಣೀಸುರಕುಲ-ಗುರುವೆಂದು ಚರಣಕ್ಕೆ ಶರಣಾಗತನಾದೆ 3ಸಾಕುವಾತನು ನೀನೆ ಸಲಹುವಾತನು ನೀನೆಬೇಕು ಬೇಡೆಂಬುವರ ನಾ ಕಾಣೆ ದೊರೆಯೆಲೋಕೇಶ ಸುಕುಮಾರ ಶೋಕಮೋಹವಿದೂರನೀಕರಿಸದೆಯೆನ್ನ ಸ್ವೀಕಾರ ಮಾಡಯ್ಯ 4ಪೃಥ್ವಿಯೊಳ್ಪಾವಂಜೆ ಕ್ಷೇತ್ರಾಧಿವಾಸನೆಸುತ್ರಾಮಾದಿ ಸುರಮೊತ್ತ ಪೂಜಿತನೆಕರ್ತಲಕ್ಷ್ಮೀನಾರಾಯಣನ ಸಾರೂಪ್ಯನೇದೈತ್ಯದಲ್ಲಣ ವಲ್ಲೀದೇವಿ ಮನೋಹರನೆ 5
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಹನುಮ-ಭೀಮ-ಮಧ್ವ60ಕರುಣಿಸೈಹರಿಚರಣಸೇವೆ ನಿರುತಪಪರಿಪರಿಯ ಕ್ಲೇಶಗಳ ಪರಿಹರಿಸುತ ಪೊರೆವದುರಿತದೂರ ಹರಿಯಚರಣಸೇವಕನೆಅ.ಪಕಂಜಾಕ್ಷನ ದಯದಿ ಅಂಜದೆ ನೀರಧಿಯಹಿಂಜರಿಯದೆ ದಾಂಟಿ ಸಂಜೆ ಕಳೆಯೆ ಲಂಕೆರಂಜಿಸುವದು ಕಂಡು ಕಂಜಾಕ್ಷಿಗುಂಗುರ ಪ್ರ-ಭಂಜನನೀಡಿದೆಯೊ ಅಂಜನೆಯತನಯ1ದುರಳ ದೈತ್ಯನಾದ ಜರೆಯ ಸುತನ ಸೀಳಿಹರಿಗರ್ಪಿಸಿ ಸರ್ವವನು ಧರಣಿ ಭಾರನಿಳುಹಿಹರಿಯ ಮನವನರಿತು ಪರಿಪರಿಲಿ ಸೇವಿಸುತಪರಮಭಕ್ತನಾದೆ ಪರಿಸರನೆ ಸಲಹೊ2ಮುದ್ದು ಕೃಷ್ಣನ ಸೇವೆ ಶುದ್ಧಮನದಿ ಮಾಡಿಸದ್ವೈಷ್ಣವರ ಕುಲದ ಪದ್ಧತಿಯನರುಹಿಪದ್ಮನಾಭಕಮಲನಾಭ ವಿಠ್ಠಲನೊಲಿಸಿಸದ್ಗ್ರಂಥಗಳ ರಚಿಸಿ ಉದ್ಧರಿಸಿದೆ ಜಗವ 3
--------------
ನಿಡಗುರುಕಿ ಜೀವೂಬಾಯಿ
ಹರಿಕೃಷ್ಣಾಚ್ಯುತ ಗೋವಿಂದ -ವಾಸುದೇವ |<?xmಟ veಡಿsioಟಿ='1.0' eಟಿಛಿoಜiಟಿg='uಣಜಿ-8'?>ನರಹರಿ ಎನಬಾರದೆ ? ಪ.ಉದಯಕಾಲದಿ ಏಳುತ - ಸಿರಿಯರಸನ |ಒದಗಿ ಸೇವೆಯ ಮಾಡುತ ||ತದನಂತರ ಭೋಜನದಲಿ ಸ್ಮರಿಸುತ |ಮದಗಜಗಮನೆಯೊಳ್ ಸರಸÀವಾಡುತಲೊಮ್ಮೆ 1ಸಿರಿ ಬಂದಡಸಿದಾಗ - ಮೆರೆಯದಿರು |ಹಿರಿ ಹಿರಿ ಹಿಗ್ಗದಿರು ||ನೆರೆ ಬಡತನಕೆ ಜರ್ಜರಿತನಾದೆ ನೀನು ?ಹರಿನಾಮಸ್ಮರಣೆಯ ಮರೆಯದಿರೆಲೊ ಮನುಜ 2ದುಷ್ಟರುಪದ್ರದೊಳಾಗಲಿ - ರಣರಂಗದ |ದಿಟ್ಟ ಸಮರದೊಳಾಗಲಿ ||ಕಟ್ಟಾರಣ್ಯದೊಳು ಹುಲಿಯು ಬಾಧಿಸುತಿರೆ |ಸೃಷ್ಟಿಗೊಡೆಯ ಪುರಂದರವಿಠಲ ಕಾಯ್ವ 3
--------------
ಪುರಂದರದಾಸರು
ಹರಿಯೆ ಎನಗಾರು ಗತಿಯೊ ನೀನಲ್ಲದೆ ಪ.ಹಿಂದಿನಾಪತ್ತು ಮರೆತೆಇಂದುಮಾಯದಿ ಬೆರೆತೆಒಂದುಗೂಡಿದವುಅಘಮುಂದಿನರುಹಿಲ್ಲ1ಹಗಲು ಅಶನದ ಕೃತ್ಯ ಇರುಳು ನಿದ್ರೆಯ ಮಬ್ಬುವಿಗಡಕಾವನ ತಡೆ ತಗಲು ಬಿತ್ತೊ ರಂಗಾ2ಅತ್ತಿತ್ತ ಸುತ್ತುವನಕ ಹೊತ್ತು ಹೋಯಿತು ಯಮನಮುತ್ತಿಗೆ ಬಿದ್ದಾಗ ಮತ್ತಾರಿಲ್ಲೊ ಸ್ವಾಮಿ 3ಅಜ್ಞಾನೆಂಬಹಿ ಕಚ್ಚಿ ಯಜೆÕೀಶ ನಿನ್ನಂಘ್ರಿಸಂಜÕವಿಲ್ಲದೆ ದು:ಖ ಮಗ್ನನಾದೆನಲ್ಲೊ 4ಶ್ರೀ ಪ್ರಸನ್ವೆಂಕಟೇಶ ತಾಪತ್ರಯವಿನಾಶನೀ ಪಾಲಿಸಯ್ಯ ವಿಶ್ವವ್ಯಾಪಕ ಸ್ವಾಮಿ 5
--------------
ಪ್ರಸನ್ನವೆಂಕಟದಾಸರು
ಹರಿಹರಿಯೆ ಕಡೆಗಾಣೆನೈ ಜನುಮವಭವಕಡಲ ತಡಿಯ ಸೇರಿಸುಮಾಧವಪ.ವಿಷಯಾಸೆ ತೆರೆಗಳಲ್ಲಿ ಗೃಹವೆ ಗ್ರಹವಿಷಮ ಸತಿಸುತ ಗುಲ್ಮವು ವಡವಾಗ್ನಿಹಸಿವುತೃಷೆದಹಿಸಿತೆನ್ನ ಇದರೊಳಾಲಸಿಕೆಸುಳಿಭ್ರಮಣ ಘನ್ನ1ಷಟ್ಚರ್ಯ ಹಡಗದವರು ಬಿಡದೆ ಬೆನ್ನಟ್ಟಿ ಬಡಿದಂಜಿಸುವರು ಮನವಾಯುವಿನಟ್ಟುಳಿಗೆ ನಿಲವಿಲ್ಲವು ಇಂದ್ರಿಯಜಂತುಕಟ್ಟಿಲ್ಲದೆಳೆದೊಯ್ವವು 2ಸಂಸಾರಸಾರಫೇನ ಭುಂಜಿಸಲುಸಂಶಯದ ರೋಗ ನವೀನ ದುರಿತಾಂಬುಹಿಂಸೆ ಮಾಡದೆ ಉಳುಹಿತು ಅಜÕವ್ಯಾಳದಂಶ ಕ್ಷಣಲವಕಾಯಿತು 3ಸುಖವೆ ಬೊಬ್ಬುಳಿ ರಾಶಿಯು ಬಂಧು ಬಳಗಸಖಸ್ನೇಹ ಪಾಶಲತೆಯು ಅಹಿತಾಗಮ ಕಠೋರ ದುಶ್ಯಬ್ದಕೆಸ್ಮøತಿಹೋಗಿಚಕಿತನಹೆ ದೀನಬಂಧು 4ಇಂತು ಬಳಲುವುದ ನೋಡಿ ಸಿರಿಲಕುಮಿಕಾಂತ ನಿರ್ದಯನಾದೆ ನೀ ಪ್ರಸನ್ನವೆಂಕಟಕಾಂತ ಸಂತರ ಕೂಡಿಸೊ ಶ್ರೀ ಮೂರುತಿಅಂತ್ಯಯಾತ್ರೆಗೆ ಉದಯಿಸೊ 5
--------------
ಪ್ರಸನ್ನವೆಂಕಟದಾಸರು
ಹುಚ್ಚು ಮುಂಡೆ ನೀನಾಗಬೇಡ ಹೇಳುವೆ ಕೇಳುಹುಚ್ಚು ಮುಂಡೆ ಹುಚ್ಚು ಮುಂಡೆಯು ಅಲ್ಲಬ್ರಹ್ಮವೇ ನೀನಾಗಿಹೆ ಹುಚ್ಚು ಮುಂಡೆಪಸರ್ವದೇಹಕೆ ನರದೇಹವು ಉತ್ತಮ ಹುಚ್ಚು ಮುಂಡೆಇರುವ ದೇಹದಿ ನಿನ್ನ ಸಾರ್ಥಕ ಮಾಡಿಕೋ ಹುಚ್ಚು ಮುಂಡೆಉರ್ವಿಪ್ರಪಂಚವು ಸತ್ಯವೆಂದು ಎನಬೇಡ ಹುಚ್ಚು ಮುಂಡೆತೋರುವುದಿಂದ್ರಜಾಲದ ತೆರದಿ ಸ್ವರ್ಗ ಮತ್ರ್ಯವುಹುಚ್ಚು ಮುಂಡೆ1ಸತಿಸುತರನು ನೀನು ನಂಬಿ ಕೆಡಬೇಡ ಹುಚ್ಚು ಮುಂಡೆಸತಿಯೆಷ್ಟು ಸುತರೆಷ್ಟು ಆದರು ನಿನಗೆ ಹುಚ್ಚು ಮುಂಡೆಮಿತಿಯಿಲ್ಲದ ದೇಹವಾದವು ನಿನಗೆ ಹುಚ್ಚು ಮುಂಡೆಮತಿಗೆಟ್ಟು ಮರೆತು ಜನ್ಮವನಂತವ ತಿರುಗುವರೆ2ಸ್ವಪ್ನದ ಸುಖದಂತೆ ಸಂಸಾರವಿದು ಮೃಷೆ ಹುಚ್ಚು ಮುಂಡೆಇರುವೆನಾಚಂದ್ರಾರ್ಕವೆಂದು ಎಂಬೆಯೋ ಹುಚ್ಚು ಮುಂಡೆಅಪ್ಪಯ್ಯ ಹೋದನು ಮುತ್ತಯ್ಯ ಹೋದನು ಈ ಪರಿಯಿಂದೆ ಹುಚ್ಚು ಮುಂಡೆಮುಪ್ಪಾದೆ ಇಂತು ಭವದ ಸುಳಿಯಲಿ ಬಿದ್ದು ಹುಚ್ಚು ಮುಂಡೆ3ಕಾರ್ಯೋಪಾಧಿ ಯಿಂದ ಹುಚ್ಚು ಮುಂಡೆ ನೀನಾದೆ ಹುಚ್ಚುಮುಂಡೆಕಾರ್ಯಕಾರಣ ಉಪಾಧಿಯು ನಿನಗಿಲ್ಲವು ಹುಚ್ಚು ಮುಂಡೆಕಾರ್ಯಗುಣಗಳಿಂದ ನಿನ್ನ ತಿಳಿವುದು ಕಷ್ಟ ಹುಚ್ಚು ಮುಂಡೆಕಾರಣ ಗುಣದಲ್ಲಿ ತಿಳಿಯೆ ತಿಳಿಸುವೆ ನಿನ್ನ ಹುಚ್ಚು ಮುಂಡೆ4ಹೊಂದು ಸದ್ಗುರುಪಾದ ತಿಳಿ ನಿನ್ನ ಬ್ರಹ್ಮೆಂದು ಹುಚ್ಚು ಮುಂಡೆನಿಂದುನಾಶಿಕಗೊನೆಯ ನೋಡಿ ದೃಷ್ಟಿಯಿಡು ಹುಚ್ಚು ಮುಂಡೆಚಂದ್ರರು ಶತಕೋಟಿ ಬೆಳಗುವರು ತಾವಲ್ಲಿ ಹುಚ್ಚು ಮುಂಡೆಸುಂದರ ಚಿದಾನಂದನಾಗುವೆ ನಿಜದಲ್ಲಿ ಹುಚ್ಚು ಮುಂಡೆ5
--------------
ಚಿದಾನಂದ ಅವಧೂತರು