ಒಟ್ಟು 1912 ಕಡೆಗಳಲ್ಲಿ , 108 ದಾಸರು , 1327 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ತೂಗಿರೆ ವೇಣು ಗೋಪಾಲನ್ನ ತೂಗಿರೆ ಕನಕಾದ್ರಿ ವೆಂಕಟನಾ ಪ ಬಾಲಾನುಮಲಗ್ಯಾನೆ ತೂಗಿರೇ 1 ಕಮಲಾಕ್ಷಿಯರೆಲ್ಲಾ ತೂಗೀರೇ ಕಟಹಾಲ್ದಮರನೇರಿದವನ್ನಾ 2 ವನಜಾಕ್ಷಿಯಾರೆಲ್ಲಾ ತೂಗೀರಮ್ಮಾ ಪವಮಾನನುತರಾಮಚಂದ್ರನ್ನಾ 3 ವೆಂಕಟವಿಠಲನ್ನ ತೂಗೀರೇ4
--------------
ರಾಧಾಬಾಯಿ
ತೆರಳಿ ಪೋದರಿಂದು ಪರಮ ಪದವನರಸುತ ಪ ಸಿರಿ ಶೇಷದಾಸಾರ್ಯರು ಅ.ಪ. ಸಿರಿಯುಕ್ತ ರಕಾಕ್ಷಿ ವರುಷ ಭಾದ್ರಪದಸಿತ ವರಪೌರ್ಣಿಮಾ ಸಹಿತವಾದ ಕವಿವಾರದಿ ಸರು ನಿಶಿಯೊಳು ಶತತಾರ ನಕ್ಷತ್ರ ಬರುತಿರೆ ನರಹರಿಯ ಚರಣಕಾಂಬ ಕಡು ತವಕದಿಂದ 1 ತಂದೆ ಮುದ್ದುಮೋಹನ ದಾಸವರ್ಯರಿಂದ ಕುಂದುರಹಿತನಾದ ಪ್ರಾಣನಾಥವಿಠಲ- ನೆಂದು ಅಂಕಿತೋಪದೇಶವನು ಕೈಕೊಂಡು ಬಂಧುರವಾದನೇಕ ಪದಗಳನು ರಚಿಸಿ 2 ದಾಸವೃತ್ತಿಯ ಕಂಡು ದೇಶ ದೇಶವ ಸುತ್ತಿ ಕರವ ನೀಡದೆ ಲೇಸು ಮಾಡುತಲಿ ಸಚ್ಛಿಷ್ಯರಿಗೆ ತತ್ತ್ವೋಪ- ದೇಶವನು ಪರಮ ಸಂತೋಷದಿಂದಗೈದು 3 ಆಶಪಾಶವ ತೊರೆದು ಮೀಸಲು ಮನರಾಗಿ ವಾಸುದೇವನ ನಾಮ ಸೋಸಿನಿಂದ ಭಜಿಸಿ ಸಾಸುವೆಯಷ್ಟಾದರಾಯಾಸವನುಪಡದೆ ಈ ಶರೀರ ವಿಶ್ವೇಶನಾಧೀನವೆಂದು 4 ಅಂಗೋಪಾಂಗವ ಮರೆದು ನಿಸ್ಸಂಗಯುತರಾಗಿ ಕಂಗಳನು ಮುಚ್ಚುತ ಭಂಗವಿಲ್ಲದ ಸುಖವ ಹಿಂಗದೆ ಕೊಡುವಂಥ ಮಂಗಳನ ಶ್ರೀ ರಂಗೇಶವಿಠಲನಂತರಂಗದಿ ನೋಡುತ5
--------------
ರಂಗೇಶವಿಠಲದಾಸರು
ತೊರೆದು ಜೀವಿಸಬಹುದೆ ಗುರು ನಿಮ್ಮ ಚರಣವ ಪ. ಬರಿಯ ಮಾತಲ್ಲವಿದು ಜರಿದು ನುಡಿವೆ ಕರಕರೆಗೊಳಿಸದೆ ಕಾಯಬೇಕಿನ್ನು ಗುರು ಅ.ಪ. ಅತಿಶಯ ಮಹಿಮೆಯ ಹಿತದಿಂದ ತೋರಿದ ಪಿತನಂತೆ ಪೊರೆಯುವಚ್ಯುತ ದೂರ ಪದವೀವ ಮತಿವಂತರೆ ನಿಮ್ಮ ಕ್ಷಿತಿಯೊಳಗಲಲಾರೆ1 ನೀತಿಯ ಬೋಧಿಪ ಖ್ಯಾತಿ ಶ್ರೀ ಗುರುಗಳೆ ದೂತರಾದವರನು ಈ ತೆರ ಮಾಳ್ಪರೆ ಪಾತಕರಹಿತರೆ ಪ್ರೀತಿಯ ತೋರಿರಿ2 ಬಂದಿರಿ ಮಮತೆಲಿ ಕಂದರಂದದಿ ತಿಳಿದು ಇಂದಿರೇಶನ ತತ್ವಾವೃಂದಗಳರುಹುತ ಮಂದಿಗಳಿಗೆ ಆನಂದವನೆ ತೋರ್ದಿರಿ 3 ಎಲ್ಲಿ ಭಕ್ತರು ಕರಿಯೆ ಅಲ್ಲಿಗೆ ಬರುವ ಗುರುವೆ ಇಲ್ಲಿ ನಿಮ್ಮ ಹೊರತು ಇಲ್ಲವು ಇನ್ನೊಂದು ಒಲ್ಲೆನು ಈ ಜಗದ ನಿಲ್ಲದ ವಸ್ತುಗಳು 4 ಗೋಪಾಲಕೃಷ್ಣವಿಠ್ಠಲ ತಾ ಪರಿಪರಿ ಲೀಲ ವ್ಯಾಪ್ತ ಶ್ರೀ ಗುರು ಸಹ ಶ್ರೀಪತಿ ಹೃದಯದಿ ತೋರ್ಪಂತೆ ಕೃಪೆ ಮಾಡಿ ಕಾಪಾಡಬೇಕೊ ದೊರಿ 5
--------------
ಅಂಬಾಬಾಯಿ
ತೊಲಗು ನೀ ತೊಲಗಿನ್ನು ಅಭಿಮಾನವೆಅಲೆಬಡಿಸದಿರೆನ್ನನೂ ಹಲವು ಜನರಕಾಲಕೆಳಗೆ ನಿಲ್ಲಿಸಿಯನ್ನ ಹೊಲೆಗೆಲಸವ ಮಾಡಲೆಳಸಿ ನೆಗ್ಗಿದೆಯಲ್ಲ ಪಸತಿಸುತ ಪೋಷಣೆಯು ಮುಖ್ಯವು ಮಾತಾಪಿತೃಗಳಾರಾಧನೆಯು ಬಳಗ ಬಂಧು ತತಿಗಳ ಮನ್ನಣೆಯು ಕುಲ ಜಾತಿ ದೇವತೆಯ ಪೂಜಿಪ ಹಬ್ಬವು ಬಿಡಕೂಡದುವ್ರತ ಉಪವಾಸವಾರತಿಯಕ್ಷತೆಯು ಮುಂಜಿಯುಸುತೆಗೆ ಮದುವೆಯೆಂದು ಮತಿಗೆಡಿಸಿದೆಯಲ್ಲ 1 ಅರೆಘಳಿಗೆಯು ನಿಲ್ಲಲು ವೇಳೆಯ ಕೊಡದೆರಗಿಸಿ 'ಷಯದೊಳು ನಾನಾ ಬಗೆಹರುಬಿಗೆ ಹರುಸಲು ಮನವನೀಕೊರಗಿಸಿ ಕುಣಿಸುತಲು ಒಂದೇ ಕ್ಷಣಹರಿನಾಮ ಸ್ಮರಣೆಗೆ ತೆರಹುದೋರಿಸದಾಯುಹರಿದು ಪೋಗುವ ಹಾಗೆ ಕರಗಿಸಿದುದೆ ಸಾಕು 2ಶ್ರವಣಕೆ ಮನ'ತ್ತೆಯಾ ನಾಮ ಸ್ಮøತಿ ಸ'ಯ ಸೇ'ಸಬಿಟ್ಟೆಯ ಸಜ್ಜನರೊಳೊಂದುವ ದಾರಿಯ [ತೋರಿ]ದೆಯ ಎಂದಾದರು ಶಿವಸೇವೆಗಳ ತಂದೆಯ 'ೀಗಾಗುವ ಹವಣನರಿಯದೆ ಸಂಗವ ಮಾಡಿ ನಿನ್ನೊಳಗ'ವೇಕವನು ಪಡೆದವನಾದೆನಯ್ಯಯ್ಯೊ 3ಕಂಡವರೊಡವೆಯನು ತಂದು ಕರೆದು'ಂಡು ಬಳಗವನ್ನು ಮನ್ನಿಸಿಯವರ್ಕೊಂಡಾಡೆ ಹರುಷವನು ತೋರಿಸಿ ಬಹಭಂಡಾಟನಡತೆಯನು ಕರೆಸಿಯನ್ನಗುಂಡಿಗೆ ನೂಕಿಸೆ ಕಂಡೆ ನಿನ್ನಾಟವಮೊಂಡಮುಂಡೇದೆನ್ನೀ ಕೂಗಕೇಳಿ ಬೇಗ 4ಶ್ರೌತ ಸ್ಮಾರ್ತದ ಬಟ್ಟೆಯ ಹೊಂದುವರೆ ನೀನೋತು ಮಾರ್ಗವ ತೊಟ್ಟೆಯ ಅನ್ಯಾಯದ ರೀತಿಯ ನೀ ಬಿಟ್ಟೆಯ ನರಕಬಪ್ಪ ಭೀತಿಯ ನೀತೊಟ್ಟೆಯ ಯೇನೆನ್ನದೆಲೆಕಾತರಿಸುತ ಕಾಮಕಾತು ಕ್ರೋಧವ ಮಾಡಿಮಾತಿಗಾದರು ಒಮ್ಮೆ ಸೋತವನಾದೆಯ 5ಕಲಹವ ಜನರೊಳಗೆ ಗಂಟಿಕ್ಕಿತುತೊಲಗಿಸಿ ಬಯಲೊಳಗೆ ನಿಲ್ಲಿಸಿಯೆನ್ನಹಲವು ಬಗೆಯ ಮಾತಿಗೆ ಗುರಿಯ ಮಾಡಿಬಳಲಿ ಬಾಡುವ ರೀತಿಗೆ ಕಂಗೆಡಿಸಿದೆಕಾಲದೊಳು ಧನದೊಳು ಬಲದೊಳು ಛಲದೊಳುನೆಲೆಗೊಂಡು ನೀಯೆನ್ನ ಥಳಿಸಿದುದೇ ಸಾಕು 6ಅರಿಯದಾದೆನು ನಿನ್ನನು ಅದರಿನಿಂದಹುರಿದೆ ನೀನೆನ್ನುವನು ಚಿಕ್ಕನಾಗಪುರದೊಳಗಜ್ಞರನು ರಕ್ಷಿಸಲಾಗಿಗುರುವಾಸುದೇವಾರ್ಯನು ನೆಲಸಿಹನುಮರೆಯೊಕ್ಕೆರಗಿ ನಿನ್ನ ಪರಿಯ ಪೇಳಲು ಜ್ಞಾನದುರಿಯೊಳು ದ'ಪನೆಚ್ಚರ ನಿಲಬೇಡಿನ್ನು 7
--------------
ವೆಂಕಟದಾಸರು
ತೋರಬಾರದೆ ನಿಮ್ಮ ಚರಿತೆಯನು ನರರೊಳು ನಗೆಗೀಡು ಮಾಡದ ಹಾಗೆ ಪ. ಕಲ್ಲೊಳು ಕಾಂತೆಯ ಮಾಡಿದವನೆಂ- ದೆಲ್ಲರು ಜಗÀದೊಳು ಪೇಳುವರು ಅಲ್ಲಿ ಮಾಡಿದ ಹಾಗೆ ಇಲ್ಲಿ ತೋರಿಸಿದರೆ ಬಲ್ಲಿದನೆನ್ನೊಡೆಯ ದೊಡ್ಡವನೆಂದು ಸಾರುವೆ 1 ಅಹಹ ಕುಬುಜೆಯಳ ತನುವನ್ನೆತ್ತಿ ಮಹಿಯೊಳು ಯುವತಿಯ ಮಾಡಿದೆಯೆಂಬರು ಬಹು ಪರಾಕ್ರಮವನ್ನು ಈಗ ತೋರಿಸಿದರೆ ಅಹುದೋ ಎನ್ನೊಡೆಯ ದೊಡ್ಡವನೆಂದು ಸಾರುವೆ 2 ನೀನೆ ಗತಿಯೆಂದು ಬಂದ ಭಕ್ತನ ಕ- ಣ್ಣುನವ ತಿದ್ದಿ ನಿಜವ ತೋರಿಸಯ್ಯ ದೀನದಯಾಳು ಹೆಳವನಕಟ್ಟೆ ರಂಗಯ್ಯ ದಾನಿ ಎನ್ನೊಡೆಯ ದೊಡ್ಡವನೆಂದು ಹೊಗಳುವೆ 3
--------------
ಹೆಳವನಕಟ್ಟೆ ಗಿರಿಯಮ್ಮ
ತೋರವ್ವಾ ಗೆಳತಿ ಶ್ರೀರಂಗನ ಭವಭಂಗನಾ| ತೋರೆ ಕೋಮಲಾಂಗನಾ ಪ ಅನಾದಿ ಬಾಂದವನೆನುತಲಿ|ಶೃತಿ ಹೊಗಳಲಿ| ಶರಣನೀಗ ಬಂದಾ| ಶ್ರೀನಿಧಿ ತುಷ್ಟನು ಭಕ್ತಿಲಿ|ಯಂದು ಕೇಳಲಿ| ಮುಂದ ಗಾಣದೆ ನಿಂದಾ1 ಜಗಂಗದಂತರ್ಯಾಮಿಯನಿಸುವ|ಮನೆಮುರಿಲಿಹ| ಕಂಗಳಿಗೆ ದೋರನಮ್ಮಾ| ಮುಗಧಿಯೊಡನೆ ಠಕ್ಕವಳಿಯಾ|ದೋರುವರೇಕೈಯ್ಯಾ| ಬಿರುದಿಗೆ ಛಂದೇನಮ್ಮಾ2 ಹಂಬಲಿಸುತ ಕಾವನೆನೆಯಲುಛಂದಾ|ಸ್ವಾನುಭಾವದಿಂದ| ಡಿಂಬಿನೊಳು ಒಡಮೂಡಿ| ನಂಬಿದವರ ಕಾವಾ ಮಹಿಪತಿ ಸುತಸಾರಥಿ| ಕೊಟ್ಟನಿಂಬವ ಕೂಡೀ3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ತೋರಿಸೊ ತವರೂಪ ತೋಯಜ ನೇತ್ರ ಪ ಮಾರಜನಕ ಕರುಣಾರಸಪೂರ್ಣನೆ ನಾರಾಯಣ ಭವತಾರಕ ಮಮ ಸ್ವಾಮಿ ಅ.ಪ. ದಶರಥ ನಂದನ ವಸುಮತಿ ರಮಣ ತ್ರಿ ದಶವಂದಿತ ಚರಣ ಪಶುಪತಿಧನುಭೇದನ ವಸುಧಾಸುತೆರಮಣ ಋಷಿಪತ್ನಿ ಶಾಪಹರಣ ಅಸಮಾ ವಲ್ಕಲ ಚೀರವಸನಾ ಭೂಷಣಸ್ವಾಮಿ ಬಿಸಜಾಪ್ತನ ಸುತಗೊಲಿದವನಗ್ರಜ ನಸುವನು ತೊಲಗಿಸಿ ಅಸುನಾಥನ ಸುತ ಗೊಸೆದು ಬಿಸಜಭವ ಪದವಿಯ ಕರುಣಿಸಿ ವಿಷಧಿಯ ಬಂಧಿಸಿದಸಮ ಸಮರ್ಥ 1 ದಿನಮಣಿವಂಶ ಮಸ್ತಕಮಣಿಯೆಂದೆನಿಸಿ ಮುನಿ ಕೌಶಿಕನ ಯಜ್ಞಫಲವಾಗಿ ರಕ್ಷಿಸಿ ಅನಲಾಕ್ಷಧನು ಮುರಿದು ಮುನಿಪತ್ನಿಯನು ಪೊರೆದು ಜನಕಸುತೆಯ ಕರವನು ಪಿಡಿದ ಧೀರ ಜನಕನಾಜ್ಞೆಯಿಂ ವನವ ಪ್ರವೇಶಿಸಿ ಇನಸುತಗೊಲಿಯುತ ಅನಿಲಜನಿಂದಲಿ ಘನಸೇವೆಯ ಕೊಂಡನಿಮಿಷ ವೈರಿಯ ಹನನಗೈದ ಹೇ ಅನುಪಮ ಶೂರ2 ಲೀಲಾಮಾನುಷರೂಪ ಭೂಲಲನಾಧಿಪ ಫಾಲಾಕ್ಷವಿನುತ ವಿಶಾಲಸುಕೀರ್ತಿಯು ತಾ ಆಲಸ್ಯವಿಲ್ಲದೆ ವಿಶಾಲವನವ ಪೊಕ್ಕು ವಾಲಿಯ ಸಂಹರಿಸಿ ಪಾಲಿಸಿ ಸುಗ್ರೀವನ ಲೋಲಲೋಚನೆಯಿಹ ಮೂಲವ ತಿಳಿದು ಬಂ ದ್ಹೇಳಿದ ಪವನಜಗಾಲಿಂಗನವಿತ್ತು ಖೂಳ ದಶಾಸ್ಯನ ಕಾಲನೆಂದೆನಿಸಿದ ಶ್ರೀಲೋಲನೆ ಶ್ರೀ ಕರಿಗಿರೀಶನೆ3
--------------
ವರಾವಾಣಿರಾಮರಾಯದಾಸರು
ತೋರುವನೂ | ದಯ ದೋರುವನೂ|| ಭಕ್ತರಿಗೆ | ದಯ| ದೋರುವನು ಪ ತೋರುತಲವರನು | ಪರಿಪರಿವಿಧದೊಳು ಪೊರೆಯುವನೂ | ಹರಿ | ಮೆರೆಯುವನೂಅ. ಪ ಆದಿಯೊಳಾ| ತಮನೆಂಬಾಸುರನನು || ಭೇದಿಸಿ ವೇದವ ತಂದವನು || ಮೋದದಿ ಗಿರಿಯನು | ಕೂರ್ಮವತಾರದಿ | ಸಾಧಿಸಿ ಬೆನ್ನೊಳು ಪೊತ್ತವನು 1 ಧರಣಿಯ ಕದ್ದೊಯ್ದಸುರನ ಬಗಿಯಲು | ವರಾಹವತಾರವ ತಳೆದವನು|| ನರಮೃಗರೂಪದೊ| ಳುದಿಸುತ ಕಂಬದಿ| ವರ ಪ್ರಹ್ಲಾದನ ಪೊರೆದವನು 2 ಬಲಿಯೊಳು ದಾನವ |ಬೇಡುತ ಮೂರಡಿ| ಯೊಳಗಿಳೆಯನು ತಾನಳೆದವನು|| ಭಾರ್ಗವನೂ ಭೃಗು ಮೊಮ್ಮಗನು| 3 ಶರಣಗೆ ಲಂಕಾ| ಪುರದೊಡೆತನವನು| ಸ್ಥಿರವಾಗಿತ್ತಿಹ ರಾಘವನು|| ತುರುಗಳ ನಿಕರವ ಪೊರೆದವನು 4 ಬೌದ್ದವತಾರವ | ಧರಿಸಿದ ಮಹಿಮನು| ಕಲ್ಕಿಸ್ವರೂಪದಿ ಮೆರೆಯುವನು|| ಶ್ರಧ್ದೆಯೋಳವನನು | ಭಜಿಸಲು ಮುದದಲಿ | ಅಬ್ಧಿವಾಸ ಮೈದೋರುವನು 5 ಮಧುವನದಲಿ ಧ್ರುವ | ತಪವಾಚರಿಸಲು | ಮುದದೊಳು ಧ್ರುವಪದವಿತ್ತವನು | ಸುದತಿಯು ಮೊರೆಯಿಡ | ಲಕ್ಷಯ ಸೀರೆಯ | ಇತ್ತವನೂ ದಯವಿತ್ತವನು6 ಶೇಷಗಿರೀಶನು | ದಾಸರಿಗೊಲಿದವ | ರಾಸೆಯ ಸಲಿಸಿದ | ಶ್ರೀವರನು || ಶೇಷಶಯನ ಹರಿ | ದಾಸದಾಸನೆ | ನ್ನಾಸೆಯನೂ ತಾನೀಯುವನು 7 ಪಂಕಜನಾಭನು | ಪರಮಪವಿತ್ರನು | ಕಿಂಕರಜನಪರಿಪಾಲಕನು || ಶಂಕಚಕ್ರಂಗಳ ಧರಿಸಿದ ಶ್ರೀಪತಿ | ವೆಂಕಟೇಶ ದಯದೋರುವನು 8
--------------
ವೆಂಕಟ್‍ರಾವ್
ತ್ರಾಹಿ ತ್ರಾಹಿ ತ್ರಾಹಿ ಎನ್ನಬೇಕು ಧ್ರುವ ಕಡ್ಡಿಮರೆಯಲ್ಯದ ನೋಡಿರೊ ಗುಡ್ಡ ಗುಡ್ಡಕಾಣಲರಿಯದವನ ಹೆಡ್ಡ ಹೆಡ್ಡನಾದರ ವಸ್ತುಕಾಗೇದಡ್ಡ ಅಡ್ಡಾಗಡ್ಡೇರಿಸಿದ ಶ್ರೀಗುರುದೊಡ್ಡ 1 ಅಡ್ಟಾUಡೆÀ್ಡಂಬುಕ ಅನುಮಾನ ಗುಡ್ಡವೆÀಂಬುವೆ ವಸ್ತು ತಾ ನಿಧಾನ ವಡ್ಡಗೊಂಡಿಹುದು ಕಾಣದ ಮನ ಅಡ್ಡಮರಿ ಬಿಡಿಸುವ ಗುರುಙÁ್ಞನ2 ಕಡ್ಡಿಮರೆಯು ಆಗಿಹ್ಯ ತಾ ಕಾರಣ ಅಡ್ಡ ಬಿದ್ದೆನಯ್ಯ ಗುರುವಿಗೆ ಶರಣ ದೊಡ್ಡ ಸ್ವಾಮಿ ನಮ್ಮ ಸದ್ಗುರು ಕರುಣ ವಡ್ಡುಗಳಿಸಿದ ಮಹಿಪತಿಗೆ ಪೂರ್ಣ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ತ್ರಾಹಿ ತ್ರಾಹಿ ತ್ರಾಹಿ ತ್ರಾಹಿ ಶ್ರೀಗುರುನಾಥ ತ್ರಾಹಿ ತ್ರಾಹಿ ಎಂದವನಪರಾಧ ನೋಡದೆ ನೀ ಕಾಯಿ ಧ್ರುವ ಪತಿತಪಾವನೆಂಬ ಬಿರುದು ನಿನಗೆ ಎಚ್ಚರಿಲ್ಲೆ ಪ್ರತಿದಿನ ಮೊರೆ ಇಡಲಿಕ್ಕೆ ಮತ್ತಿದೆ ಸೋಜಿಗವಲ್ಲೆ ಅತಿ ಸೂಕ್ಷ್ಮ ಸುಪಥವರಿಯಲಿಕ್ಕೆ ನಾ ಏನು ಬಲ್ಲೆ ಹಿತದಾಯಕ ನನ್ನ ದೀನ ದಯಾಳು ನೀನೆವೆ ಅಲ್ಲೆ 1 ತಪ್ಪಿಲ್ಲದೆ ನಿನ್ನ ಮೊರೆಯ ಹೋಗುವರೇನೊ ಏ ಶ್ರೀಪತಿ ಒಪ್ಪಿಸಿಕೊಳ್ಳದಿದ್ದರಹುದೆ ಜಗದೊಳು ನಿನ್ನ ಖ್ಯಾತಿ ಕೃಪೆಯುಳ್ಳ ಸ್ವಾಮಿ ನಿನ್ನದೆ ಸಕಲ ಸಹಕಾರ ಸ್ಥಿತಿ ಅಪರಾಧ ಕ್ಷಮೆ ಮಾಡಿ ಸಲಹಬೇಕೆನ್ನ ಶ್ರೀಗುರುಮೂರ್ತಿ 2 ಅನಾಥ ಬಂಧು ನೀ ಎಂದಾಡುತಿರಲಿ ಅನಾದಿಯಿಂದ ನ್ಯೂನಾರಿಸದೆ ಬಾರÀದೆ ಬಿರುದಿಗೆ ತಾ ಕುಂದು ಅನುದಿನ ಅನುಕೂಲ ಮುನಿಜನರಿಗೆ ನೀ ಬ್ರಹ್ಮಾನಂದ ದೀನ ಮಹಿಪತಿ ಸ್ವಾಮಿ ಭಾನುಕೋಟಿತೇಜ ನೀ ಪ್ರಸಿದ್ಧ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ತ್ರಾಹಿ ಶ್ರೀ ಗುರುನಾಥ ತ್ರಾಹಿ ಸದ್ಗುರುನಾಥ ತ್ರಾಹಿ ಕರುಣಾಳು ಗುರುಮೂರ್ತಿ ಸದೋದಿತ ತ್ರಾಹಿ ಶ್ರೀನಾಥ ಕರುಣಿಸೆನ್ನನು ತ್ರಾಹಿ ತ್ರಾಹಿ ತ್ರಾಹಿ ತ್ರಾಹಿ ದೀನ ನಾಥ ತ್ರಾಹಿ ಗುರು ಮನ್ನಾಥ ಕಾಯೊ ಎನ್ನನು 1 ಹಿಂದೆ ಅನೇಕ ಜನ್ಮವನು ಸೋಸಿ ಬಂದು ನಾನಾ ಹೀನಯೋನಿ ಮುಖದಲಿ ಜನಿಸಿ ಕಂದಿ ಕುಂದಿದೆ ಗರ್ಭಪಾಶದೊಳು ಅಂದಿಗಿಂದಿಗೆ ನಿಮ್ಮ ಕುರುಹು ಕಾಣದೆ ತಿರುಗಿ ಮುಂದಗಾಣದೆ ಕುರುಡನಂತಾದೆ ಧರೆಯೊಳು ಬಂದೆ ಶ್ರೀಗುರು ಪಾದವನ್ನರಿಯದೆ 2 ಇಂದೆನ್ನ ಜನುಮ ಸಾಫಲ್ಯವಾಯಿತಯ್ಯ ಗುರು ಇಂದು ಮುನ್ನಿನ ಪುಣ್ಯ ಉದಯವಾಯಿತು ಎನಗೆ ಇಂದೆನ್ನ ಜೀವ ಪಾವನವಾಯಿತು ಸಂದು ಹರಿಯಿತು ಜನ್ಮ ಮರಣ ಎನಗಿಂದು ತಾ ಮುಂದೆ ಯಮಬಾಧೆ ಗುರಿಯಾಗುವದ್ಹಿಂಗಿತು ತಂದೆ ಶ್ರೀಗುರು ಚರಣದರುಶನದಲಿ 3 ದೇಶಿಗರ ದೇವನಹುದಯ್ಯ ಶ್ರೀಗುರುಮುನಿಯೆ ಅಶೆಪೂರಿತ ಕಲ್ಪವೃಕ್ಷ ಚಿಂತಾಮಣಿಯೆ ವಿಶ್ವ ವ್ಯಾಪಕ ಆತ್ಮ ಹಂಸಮಣಿಯೆ ಈಶ ದೇವೇಶ ಸರ್ವೇಶ ಸದ್ಗುಣಮಣಿಯೆ ವಾಸುದೇವನು ತ್ರೈಲೋಕ್ಯ ತಾರಕಮಣಿಯೆ ಭಾಸಿ ಪಾಲಿಪ ಭವನಾಶ ಮಣಿಯೆ 4 ಕರುಣ ದಯದಿಂದ ನೋಡೆನ್ನ ಶ್ರೀಗುರುರಾಯ ತರಳ ಮಹಿಪತಿ ಪ್ರಾಣೊಪ್ಪಿಸಿಕೊಂಡು ಈ ದೇಹ ಹೊರೆದು ಸಲಹುವದೆನ್ನ ಇಹಪರವನು ಕರದ್ವಯ ಮುಗಿದು ಎರಗುವೆನು ಸಾಷ್ಟಾಂಗದಲಿ ತಾರಿಸುವದೆಂದು ಸ್ತುತಿಸುವೆ ಅಂತರಾತ್ಮದಲಿ ತ್ರಾಹಿ ತ್ರಾಹಿಯೆಂಬೆನು ಮನದಲಿ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ದಡಿಗ ಮಾನವನೆ ಪ ಸೂನು ಹೆಡತಲೆಯಲಿ ನಗುವ ಅ.ಪ. ಬಾಲನು ನಾನು ಭಾಗ್ಯಶಾಲಿಯೆನುತ ನಿತ್ಯ ಲೀಲ ವಿನೋದವೆಂಬ ಜಾಲದೊಳು ಸಿಲುಕಿ ಕಾಲವ ಕಳೆದು ಮಾಲೋಲನ ಮರೆತಂಥ ಮಾನವ ಪಶುಪಾಲನಾದವ ನಿನಗೆ 1 ತಾಸು ತಾಸಿಗೆ ನೀನು ಲೇಸಾಗಿ ಭುಂಜಿಪೆ ಬೇಸರಿಲ್ಲವೊ ನಿನಗೆ ರಾಸಿ ಭೋಗಗಳಲಿ ಕಾಸುವೀಸವ ಕೊಡೆ ಹರಿದಾಸರಾದವರಿಗೆ ದೋಷಕಾರಿಯೆನಿಸಿದ ಹೇಸಿಕೆ ಮನದವನೆ 2 ಕಡುಪ್ರಿಯರೆಂದೆನಿಸುವ ಮಡದಿ ಮಕ್ಕಳು ಎಂಬ ಬೆಡಗು ತೋರುವ ಮೋಹ ಮಡುವಿನೋಳ್ಬಿದ್ದು ಒಡೆಯ ಶ್ರೀ ರಂಗೇಶವಿಠಲರೇಯನ ಪಾದ ಜಡಜವ ನಂಬದೆ ನೀ ಕೆಡಬೇಡ ಮನುಜ 3
--------------
ರಂಗೇಶವಿಠಲದಾಸರು
ದಯ ಮಾಡೊ ಪ್ರೀಯಾ ದಾಸರ ಶುಭೋ-ದಯ ವಿಜಯರಾಯ ಸಾ |ಹಯವಾಗಿ ಒದಗುವೋಭಯ ನಿವಾರಣ ಮಾಡಿ ಪ ಪ್ರಬಲವಾಗಿಹ ಮೋಹ ನಿಬಿಡವಾದದರಿಂದಅಭಯದಾಯಕ ನಿನ್ನ ಶುಭವಾದ ಪಾದಕ್ಕೆಅಭಿವಂದಿಸದಲೆ ಅಲ್ಪರ ಸೇರಿಅಬಲನಾಗುತಲೆ ಪಾಪದ ವನಧಿUಭೀರ ನೋಡದಲೆ ಬಾಳಿದೆ ಯನ್ನಅಭಿಮಾನದೊಡೆಯನೆ ಅಗಡು ಮಾಡದಲೆ 1 ದುರಿತ ಪರಿ ವರಗಳ ಗರೆವ ಕಾರಣ ನಿನ್ನಬಿರಿದು ನಾ ಬಲ್ಲೆ ಎನ್ನಯ ಭಾರಸರಿ ನಿನ್ನದಲ್ಲೆ ಲೌಕೀಕದಪರಿ ಮತ್ತೊಂದೊಲ್ಲೆ ಇಹಪರದಲ್ಲೆ ಪರಮ ಸೌಖ್ಯಕೆ ನಿನ್ನ ಸ್ಮರಣೆ ವಂದಲ್ಲೆ 2 ಪಾಮರ ಜನರಿಗೆ ಸುಮಾರ್ಗಗೋಸುಗಶ್ರೀಮನೋಹರ ನಿನ್ನ ಪ್ರೇಮದಿಂದಲಿ ಸೃಜಿಸಿಭೂಮಿಯೊಳಿಡಲೂ ಹರಿಯ ದಿವ್ಯನಾಮ ನಾ ಬಿಡಲು ದುರ್ವಿಷಯವಕಾಮಿಸಿ ಕೆಡಲೂ | ಸುಮ್ಮನಿರದೆಯಾಮ ಯಾಮಕೆ ನಿನಗೆ ನಾ ಮೊರೆಯಿಡಲೂ 3 ಜಗದಂತರ್ಯಾಮಿಯ ಹಗಲು ಇರುಳು ಬಿಡದೆಸುಗುಣ ಮಾರ್ಗದಲಿದ್ದು ಬಿಗಿಯಾದ ಕವನಕ್ಕೆಬಗೆ ತೋರಿದವನೆ ಹರಿಯ ಕ್ಷಣ ಅಗಲದಿದ್ದವನೆ ಕಾಮದ ಬಲಿಗೆಸಿಗದೆ ನಡೆವವನೆ ಅನುನಯದಿ ಕರವಮುಗಿದು ಬೇಡುವರಲ್ಲಿ ಮುದದಿಂದ ನಲಿವನೆ 4 ಎನ್ನೊಬ್ಬಗಲ್ಲ ಈ ಬಿನ್ನಪ ಕರುಣಾಳೆನಿನ್ನ ಪೊಂದಿದವರ ಮನ್ನಿಸಿ ಸಲಹಯ್ಯಾಬೆನ್ನು ಬಿಡದಲೆ ವ್ಯಾಸ ವಿಠ-ಲನ್ನ ಪಾಡುತಲೆ ಕಾಲವ ಕಳೆವ ಸನ್ಮಾರ್ಗವನೆ ತೋರೋ ತಡಮಾಡದಲೆ 5
--------------
ವ್ಯಾಸವಿಠ್ಠಲರು
ದಯದಿ ವರಗಳ ನೀಡು ಮಮಸ್ವಾಮಿ ಸರ್ವಂತರ್ಯಾಮಿ ನಯದಿ ಬೇಡುವೆ ಭಕುತಜನ ಪ್ರೇಮಿ ಮಮ ಸರ್ವಸ್ವಾಮಿ ಪ ಸವಿನಯದಿ ಪ್ರಾರ್ಥಿಸುತ ಬೇಡುವೆ ಸುಮನರಸರ ಪ್ರಿಯ ಚಿತ್ಸುಖಪ್ರದ ಅಮಿತ ವಿಕ್ರಮ ಅಪ್ರಮೇಯನೆ ರಮೆಯರಮಣನೆ ರಕ್ಷಿಸೆನ್ನನು ಅ.ಪ ತೀರ್ಥ ಕ್ಷೇತ್ರಗಳನು ಚರಿಸುತಲೆ ಶ್ರೀ ಹರಿಯಗುಣ ಸ- ತ್ಪಾತ್ರರಿಂದನವರತ ತಿಳಿಯುತಲೆ ಶ್ರೋತ್ರಿಯನ ಸಂಗದೊಳು ನಲಿಯುತ್ತಾ ಮನನಲಿದು ನಿನ್ನಯ ಕೀರ್ತನೆಗಳನುದಿÀನದಿ ಕೀರ್ತಿಸುತ ಪಾರ್ಥಸಾರಥೆ ನಿನ್ನ ಪೊಗಳುತ ರಾತ್ರಿ ಹಗಲೆಡಬಿಡದೆ ಸ್ತುತಿಪರ ಗಾತ್ರಮರೆಯುತಲವರ ಸೇವಿಪ ಸಾರ್ಥಕದ ಸೇವೆಯನೆ ನೀಡೈ 1 ಗೋಕುಲಾಪತಿ ಹರಿಯೆ ಗೋವಿಂದ ನೀ ಕಡಿಯೋ ಬಂಧ ನೂಕಿ ಉದ್ಧರಿಸೆನ್ನ ಭವದಿಂದ ಕಾಕುಮತಿಗಳ ಬಿಡಿಸು ದಯದಿಂದ ನೀ ಪೊರೆಯದಿರಲು ಯಾತಕೀ ನರದೇಹ ಮುಕುಂದ ಮಾತುಮಾತಿಗೆ ನಿನ್ನ ಸ್ಮರಿಸದ ಮಾತುಗಳ ಫಲವೇನು ಕೇಶವ ಮದನ ಜನಕ ಮಾಧವ ಮುರಮರ್ದನ ಹರೇ 2 ಕರುಣಿಗಳೊಳು ದೇವನಿನಗೆಣೆಯೆ ದಯ ಮಾಡು ಹರಿಯೆ ಕರಿಯ ಪೊರೆದವನಲ್ಲೆ ನರಹರಿಯೆ ಕರೆಕರೆಯ ಸಂಸಾರ ಇದು ಖರೆಯ ಇದರೊಳಗೆ ಬಳಲಿದೆ ಕರೆದು ರಕ್ಷಿಪುದೆಂದು ಮೊರೆ ಇಡುವೆ ಕಮಲ ಮುಖಿ ಶ್ರೀ ಭೂಮಿ ಸಹಿತದಿ ಕಮಲನಾಭ ವಿಠ್ಠಲನೆ ಭಕುತರÀ ಮಮತೆಯಲಿ ಕೈ ಪಿಡಿದು ಪೊರೆಯುವ ಮನ್ಮಥನ ಪಿತ ಮನ್ನಿಸುತ ಪೊರೆ 3
--------------
ನಿಡಗುರುಕಿ ಜೀವೂಬಾಯಿ
ದಯಮಾಡಿ ಸಲಹಯ್ಯ ಭಯನಿವಾರಣನೆಹಯವದನ ನಿನ್ನ ಚರಣ ನಂಬಿದೆನೊ ಜೀಯ ಪ. ಕ್ಷಣ ಕ್ಷಣಕೆ ನಾ ಮಾಡಿದಂಥ ಪಾಪಂಗÀಳನುಎಣಿಸಲಳವಲ್ಲ ಅಷ್ಟಿಷ್ಟುಯೆಂದುಫಣಿಶಾಯಿ ನೀನೆನ್ನ ಅವಗುಣಗಳೆಣಿಸದೆನೆನಹಿನಾತುರ ಕೊಟ್ಟು ದಾಸನೆಂದೆನಿಸಯ್ಯ 1 ಕಂಡ ಕಂಡ ಕಡೆಗೆ ಪೋಪ ಚಂಚಲ ಮನವುಪಿಂಡ ತಿಂಬಲ್ಲಿ ಬಹು ನಿಷ್ಠ ತಾನುಭಂಡಾಟದವನೆಂದು ಬಯಲಿಗೆ ತಾರಣಕೊಂಡಾಡುವಂತೆ ಭಕುತಿಯ ಕೊಟ್ಟು ಸಲಹಯ್ಯ 2 ಜಾತಿಧರ್ಮವ ಬಿಟ್ಟು ಅಜಾಮಿಳನು ಇರುತಿರಲು ಪ್ರೀತಿಯಿಂದಲಿ ಮುಕುತಿ ಕೊಡಲಿಲ್ಲವೆಖ್ಯಾತಿಯನು ಕೇಳಿ ನಾ ಮೊರೆಹೊಕ್ಕೆ ಸಲಹಯ್ಯವಾತಜನ ಪರಿಪಾಲ ಶ್ರೀರಂಗವಿಠಲ 3
--------------
ಶ್ರೀಪಾದರಾಜರು