ಒಟ್ಟು 1030 ಕಡೆಗಳಲ್ಲಿ , 88 ದಾಸರು , 803 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬಾರಯ್ಯ ತಿಮ್ಮಯ್ಯಾ ತೋರಯ್ಯಾ ಮುಖವನು | ತಾರಯ್ಯಾ ಒಂದು ಚುಂಬನ ಕರುಣ | ಬೀರಯ್ಯಾ ನಮ್ಮ ವಶಕೆ ಪ ಶೋಭಾನೆ || ನಿಲ್ಲು ನಿಲ್ಲೆಲೊ ದೇವಾ | ಎಲ್ಲಿ ಪೋಗುವಾ ನೀನು ಸಲ್ಲದು ನಿನ್ನ ಚೋರಂಗ ಲೀಲಿಗೆ ಪಳ್ಳಿಸೋಕುದೆ ಇಲ್ಲ ಇಲ್ಲದೆ 2 ಹಾರಿಸಿ ವೈದು ಮರನೇರಿ | ಹಾರಿಸಿ ಮರನೇರಿದ ಸಣ್ಣ | ಪೋರ ಬುಧ್ಧಿಗಳ ಬಿಡವಲ್ಲಿ 3 ತುರುಕರಗಳ ಕಾಯ್ದು | ಚರಿಸಿದೆ ಅಡವಿಯ | ಪರಸತಿಯರ ವ್ರತಗಳ | ಪರಸತಿಯರ ವ್ರತಗಳ ಕೆಡಿಸಿದ | ಪರಮಾತ್ಮನಿಗೆ ಎಣೆಯುಂಟೆ 4 ಕೇಸಕ್ಕಿ ತಿರುಮಲ ಲೇಸಯ್ಯಾ ನಿನ್ನ ಗುಣ | ಕಾಸುಕಾಸಿಗೆ ಬಿಡದಲೆ | ಕಾಸುಕಾಸಿಗೆ ಬಿಡದೆ | ಬಡ್ಡಿಕೊಂಬ ಆಶೆಗಾರನು ಬಹು ಸೂರಾಳೊ 5 ಅಣಕವಾಡಲಿ ಬೇಡ ಕೆಣಕಿದರೆ ನಿನ್ನ | ಹೊಣಿಕೆಹಾಕುವೆ ಹಿಡತಂದು ಎನ್ನಯ | ಮನವೆ ನಿನ್ನಯ ಚರಣಕ್ಕೆ ಶೋಭಾನೆ 6 ಬೆಟ್ಟದ ಕೊನೆ ಏರಿ ಎಷ್ಟು ದೂರ ಓಡೀ | ಗಟ್ಯಾಗಿ ನಿನ್ನ ಚರಣದ | ಗಟ್ಯಾಗಿ ನಿನ್ನ ಚರಣದ ಕೊನಿಯ ಉಂ ಗುಷ್ಟ ಕಚ್ಚದಲೆ ಬಿಡೆ ನಾನು 7 ಹಿಂದೆ ಯಾರು ಏನು ತಂದು ಕೊಟ್ಟರೋ ನಿನಗೆ | ಇಂದು ನಾನೇನು ಕೊಡಲಿಲ್ಲವೆಲೋ ತಂದೆ | ಕಣ್ಣಿರದು ನೋಡೊ ಕಮಲಾಕ್ಷ | ಶೋಭಾನೆ 8 ಭಕ್ತನ ನುಡಿಕೇಳಿ ಚಕ್ಕನೆ ಬಿಗಿದಪ್ಪಿ | ತೆಕ್ಕಿಸಿದಾ ವಿಜಯವಿಠ್ಠಲ ಎನ್ನ ಅಕ್ಕರವೆಲ್ಲ ತೀರಿಸಿದಾ | ಶೋಭಾನೆ 9
--------------
ವಿಜಯದಾಸ
ಬಾರಯ್ಯ ಬೇಗ ಶ್ರೀ ಶ್ರೀನಿವಾಸ ಭಕ್ತರ ನುಡಿಗೆ ಪ. ಬಾರೋ ನಿನ್ನ ಮುಖ ತೋರೊ ತ್ವರಿತದಲಿ ಸಾರಸಾಕ್ಷ ನಿನ್ನ ಸಾರಿದೆನಯ್ಯ ಅ.ಪ. ವೈಕುಂಠದಿಂದ ಬಂದೆಯೊ ಗಿರಿಗೆ | ಲಕ್ಷ್ಮಿಯು ತಾ ಪೋಗೆ ಬೇಕಾಗಲಿಲ್ಲವೊ ಅರಮನೆ ನಿನಗೆ | ಮುನಿಗಳ ವರದನಿಗೆ ಬೇಕಾದ್ವೈಭವ ನೀ ಕೈಕೊಳುತ ಸಾಕುತಲಿಪ್ಪೆಯೊ ನೀ ಕರೆದವರನು 1 ಶ್ರೀಸ್ವಾಮಿ ಪುಷ್ಕರಣಿಯ ದಡದಲ್ಲಿ | ನೀ ವಾಸಿಸುತಲ್ಲಿ ಸೇವಾದಿಗಳನು ಬಗೆಬಗೆ ಕೊಳ್ಳುತಲಿ | ಸುಜನರ ಪೊರೆಯುತಲಿ ಈ ವಿಧದಿಂದಲಿ ಭಾವಜನಯ್ಯನೆ ಪಾವಕಸಖನೊಳು ಪಾವನನಾಗಿಹೆ 2 ವರ್ಣಿಸಲರಿಯೆ ನಿನ್ನನು ದೊರೆಯೆ | ಲೋಕದಿ ಅಚ್ಚರಿಯೆ ಘನ್ನ ಸುಮಹಿಮನೆ ಬೇಡುವದರಿಯೆ | ನೀನೆ ಕೈಪಿಡಿಯೆ ಮುನ್ನ ಮಾಡಿದ ಘನ್ನ ಪಾಪಗಳು ಇನ್ನಿರಲಾರವೊ ಮನ್ನಿಸಿ ಪೊರೆಯೊ 3 ಜಗಸೃಷ್ಟಿಯಿಂದ ಜೀವರ ಮಾಳ್ಪೆ | ಜೀವರ ಸೃಷ್ಟಿಪೆ ತ್ರಿಗುಣಾದಿಗಳಿಂದ ತಿರುಗಿಸುತಿರ್ಪೆ | ಕರ್ಮದ ತೆರೆಮಾಳ್ಪೆ ವಿಗಡ ದೇಹದೊಳು ಬಗೆ ಬಗೆ ದೇವರು ತಗಲಿ ನಿನ್ನ ಪದನಗಧರ ಕಾಣರೊ 4 ಕಣ್ಣ ಬಿಟ್ಟಿರುವೆ ಬೆನ್ನೊಳೆ ಬೆಟ್ಟವೆ | ಮಣ್ಣ ತಿನುತಿರುವೆ ಚಿಣ್ಣ ನಿನಗೊಲಿದು ಚಿಣ್ಣನಾಗ್ವೆ | ಬೆನ್ನೊಳು ಪರಶುವೆ ಹಣ್ಣು ಕೊಟ್ಟವಳಿಗೆ ಒಲಿದು ಗೋಪಿಯರ ಕಾಯ್ದು ಬಣ್ಣಗೆಟ್ಟು ಹಯವನ್ನೇರಿದೆ5 ಆಕಾಶರಾಯನ ಮಗಳ ತಂದೆ | ಈ ಗಿರಿಯಲಿ ನೀನೆ ಸಾಕುವ ಬಿರುದು ನಿನ್ನದೆಂದೆ | ನೀ ಕಾಯಲೆಬೇಕೆಂದೆ ನೂಕಿ ಎನ್ನ ಭವತಾಪನೀಗಲೆ ಶ್ರೀಕಳತ್ರ ನಿನ್ನ ಭಕ್ತರೊಳಿಡಿಸೊ 6 ಅಪಾರಮಹಿಮ ಅದ್ಭುತಚರಿತ | ಶೇಷಾದ್ರಿಯೊಳ್ ನಿರುತ ವ್ಯಾಪಾರ ಮಾಡುತ ಗುಪ್ತದೊಳಿರುತ | ನಿಜ ಭಕ್ತಗೆ ಕಾಣುತ್ತ ಪರಿ ಅದ್ಭುತ ಚರಿತೆಯ ತೋರುವ ಗೋಪಾಲಕೃಷ್ಣ ವಿಠ್ಠಲನೆ ನೀ ಕಾಯೊ 7
--------------
ಅಂಬಾಬಾಯಿ
ಬಾರೆಂದು ಹಸೆಗೆ ಕರೆವೆÀನು ಕ್ಷೀರಾಬ್ಧಿಶಯನನೆ ಸಾರಸನಯನನೇ ಪ. ಕ್ಷೀರಾಬ್ಧಿಜಾವರ ಮೇರುಗಂಭೀರನೆ ನೀರಜಭವಪಿತ ಮಾರಹರಾರ್ಚಿತ ಚಾರುನೀರದಗಾತ್ರ ಪರಮ ಪವಿತ್ರ ಅ.ಪ ಧರಣೀಸುರರ ಮೊರೆಗಳನಾಲಿಸಿ ಧರೆಯೊಳಗವತರಿಸಿ ನರರೂಪಧರಿಸಿ ಧರಣಿಪ ದಶರಥತರಳನೆಂದೆನಿಸಿ ಧರೆಯ ಭಾರವನಿಳಿಸಿ ಕರುಣಿಸು ಮನವೆರಸಿ 1 ಅಸುರೆ ತಾಟಕಿಯ ಅಸುವನಳಿದು ದುಷ್ಟ ನಿಶಿಚರರನು ಸದೆದು ಅನುಜನೊಡಗೊಂಡು ಕುಶಿಕನಂದನನ ಕ್ರತುವನು ತಾ ಕಾಯ್ದು ಅಸಮ ಶೂರನೆನಿಸಿ ಅಮರರ ಮನತಣಿಸಿ 2 ಶಿಲೆಯ ಶಾಪವಕಳೆದು ಲಲನೆಯ ಪೂಜೆಗೊಲಿದು ಬಲುಹಿನಿಂದಲೆ ಬಂದು ಹರಧನು ಮುರಿದು ಲಲನೆ ಜಾನಕಿಯ ನಲವಿನಿಂ ಕೈಪಿಡಿದು ಬಲುಗರ್ವಿತ ಭಾರ್ಗವ ಮದಮುರಿದೆ ಸಲಹೆನ್ನ 3 ಈಶವಿನುತ ಶ್ರೀ ಶೇಷಾಚಲ ನಿಲಯನೆ ದಾಸರಮನದೊಳು ವಾಸವಾಗಿಹನೇ ವಾಸವಾದ್ಯಮರ ಪೋಷಕನೆನಿಸಿಹನೆ ಭಾಸುರವದನನೆ ಶ್ರೀಸತೀಸದನನೆ ನೀಂ ನಲಿದು 4
--------------
ನಂಜನಗೂಡು ತಿರುಮಲಾಂಬಾ
ಬಾರೊ ಭಕ್ತರ ಮನಮಂದಿರಕೆ | ಶ್ರೀ ರಮಣ ಪ್ರಯಾಗವೇಣಿ ಮಾಧವರಾಯಾ ಪ ಅಂಬುಧಿ ಚರನೆ ಬಾರೊ | ಅಂಬುಧಿ ಮಥನ ಬಾರೊ | ಅಂಬುಜಾಕ್ಷಿಯ ತಂದ ರ | ಕ್ತಾಂಬು ಪಾನನೆ ಬಾರೊ | 1 ಅಂಬುಪೆತ್ತವನೆ ಬಾರೊ | ಅಂಬುಧಿ ತೊಲೆಗಿನ | ಅಂಬುಧಿ ಬಂಧನ ಬಾರೊ | ಅಂಬೆ ಕಾಯ್ದವನೆ ಬಾರೊ | 2 ಅಂಬಾರ ಪುರಾಲಯ ನ | ರಾಂಬು ಹಯಗಮನ ಪೀ ತಾಂಬರ ವಿಜಯವಿಠ್ಠಲ | ಎಂಬ ವೆಂಕಟರಾಯ ಬಾರೊ |3
--------------
ವಿಜಯದಾಸ
ಬಾರೊ ಹನುಮ ಬಾರೊ ಭೀಮ ಬಾರೊ ಮಧ್ವಮುನಿಪ ಪ. ಬಾರೊ ರಾಮಕೃಷ್ಣ ವೇದವ್ಯಾಸರ ಪ್ರಿಯ ಭಕ್ತ ಅ.ಪ. ಅಂಜನೇಯ ಸುತನು ಆಗಿ ಸಂಜೀವನ ಗಿರಿಯ ತಂದೆ ಕಂಜಲೋಚನೆಯ ವಾರ್ತೆ ಮಂಜುಭಾಷಣ ರಾಮನಿಗರುಹಿದೆ 1 ಪಾಪಿ ಕೌರವ ಕುಲವ ಕೊಂದು ದ್ರೌಪದಿಯ ಕಾಯ್ದ ಮಹಿಮ ಶ್ರೀಪತಿ ಶ್ರೀ ಕೃಷ್ಣನ ಭಜಿಸಿದ ಭೂಪ ಭೀಮಸೇನ ಬೇಗ 2 ಭೂಸುರ ಜನ್ಮದಲಿ ಬಂದು ಆಸೆಯಿಂದ ಆಶ್ರಮ ಕೊಂಡು ದೋಷಿ ಅನ್ಯಮತವ ಮುರಿದು ಭೂಸುರರ ಕಾಯ್ದ ಮಧ್ವ 3 ಸಕಲ ಸುಜನರ ಸೇವೆ ಕೊಂಡು ಮುಕುತಿಮಾರ್ಗಪ್ರದ ನೀನಾಗಿ ಭಕುತಿಮಾರ್ಗವ ತೋರಿ ಎನ್ನ ಹೃತ್ಕಮಲ ಮಧ್ಯದಲಿ ನಿಲ್ಲೊ 4 ಗೋಪಾಲಕೃಷ್ಣವಿಠ್ಠಲನ ರೂಪ ನೋಡುವ ಕೃಪೆಯ ಮಾಡೊ ಶ್ರೀಪತಿ ಶ್ರೀ ಶ್ರೀನಿವಾಸಗೆ ನೀ ಪ್ರೀತಿಕರನೆಂದು ನಮಿಪೆ 5
--------------
ಅಂಬಾಬಾಯಿ
ಬಾರೋ ವೆಂಕಟೇಶ ಬೇಗ ಬಾರೋ ಎನ್ನ ಮನೆಗೆ ಈಗ ಪ. ಬಾರೋ ಲಕ್ಷ್ಮೀರಮಣ ಶ್ರೀಶಾ ಬಾರೋ ಸರ್ವರ ಹೃದಯವಾಸ ಅ.ಪ. ಸರ್ಪಶಯನಾಗಿ ಬೇಗ ಕ್ಷಿಪ್ರದಿ ಲಕ್ಷ್ಮೀಸಮೇತ ಇರಲೂ ಪಾದ ತೊಳೆದ ದಯಾಳೂ 1 ಕುಂದನೊಂದೆಣಿಸದಂತೆ ಬಂದು ಕಾಯ್ದಜಮಿಳನಿಗೊಲಿದೆ ತಂದೆ ಬಾಧೆಗೆ ತರಳ ಕೂಗೆ ಬಂದೆ ಸ್ತಂಬದಿ ನಾರಸಿಂಹ 2 ಕರಿಯು ಕೂಗೆ ಸಿರಿಗ್ಹೇಳದೆಲೆ ಭರದಿಬಂದು ಕಾಯ್ದ ಹರಿಯೆ ತರುಳೆ ದ್ರೌಪದಿಗಕ್ಷಯವಿತ್ತಾ ಕರುಣವಾರಿದೆ ಶ್ರೀ ಶ್ರೀನಿವಾಸ 3
--------------
ಸರಸ್ವತಿ ಬಾಯಿ
ಬಾರೋ ಶ್ರೀ ಕೃಷ್ಣವಿಠಲ ಮನ್ಮನ ದೈವ ಪ ಮೆಲ್ಲಮೆಲ್ಲನೆ ಪದ ಪಲ್ಲವ ವಿಡುತಲಿ ಗುಲ್ಲು ಮಾಡದೆ ಭವ ದಲ್ಲಣಗೊಳಿಸು ವಲ್ಲಭ ಸಿರಿಸಹ ನಿಲ್ಲದೆ ಮನೆಯೊಳು ಬಲ್ಲಿದರಿಗೆ ಬಹು ಬಲ್ಲಿದನೆನಿಸಿಹ ಅ.ಪ. ನೆಗೆಯುವ ನಿಲ್ಲುತೆ ಚಿಗರಿಯ ತೆರೆದನು ರಾಗದಿನೋಡುತ ಬಗೆ ಬಗೆ ಹರ್ಷದ ನಗೆಮೊಗಹಾಸದಿ ಬಿಗಿಯುತ ಮನ ಅಗಣಿತ ಗುಣನಿಧಿ 1 ಸಾಗರನಳಿಯನೆ ಸಾಗರಶಯನನೆ ಯಾಗ ಸುಭೋಕ್ತನೆ ಯೊಗಿಗಳರಸನೆ ಬಾಗುವೆ ಚರಣದಿ ಸಾಗುತ ಮನ ಬಡ ಬಡ ನೀಗಿಸಿ ಮಲಮನದಾಗಸಗೀಗಲೆ 2 ಕುಣಿಸುತ ಹುಬ್ಬನು ಉಣಿಸುತ ಭಕ್ತಿಯ ತನುಮನವೆಲ್ಲವ ಮಿನುಗಿಸಿ ಜ್ಞಾನವÀ ಧಣಧಣ ತಾಳಕೆ ಅಭಿನಯಸಹಿತದಿ ಕುಣಿಯುತ ಕುಣಿಸುತ ದಣಿಸದೆ ಕರುಣದಿ 3 ಕರ್ಜಿಸಿ ರಾಮದ ಕಜ್ಜಿಯಮನದಿಂ ಮಜ್ಜನಗೈಸುತ ಭಕ್ತಿಯಕಡಲಲಿ ಗೆಜ್ಜೆಯಕಟ್ಟಿಸಿ ಹೆಜ್ಜೆಹೆಜ್ಜೆಗೆ ಪೂ- ರ್ವಾರ್ಜಿತವೆಲ್ಲವ ಭರ್ಜನೆ ಗೈಸಲು 4 ಇಂದಿರೆಯರಸನೆ ಚಂದ್ರನ ಹಳಿವನೆ ಛಂದಸುವೇದ್ಯನೆ ಬಂಧ ಸುಮೋಚಕ ಬಂಧುವೆ ಸರ್ವರ ಮಂದಜಭವಪಿತ ತಂದೆಯೆ ವಿಶ್ವದ ನಂದವ ನೀಡಲು 5 ವೇದವ ತಂದವ ವೇದನ ಪೊರೆದವ ಭೂಧರ ಪೊತ್ತವ ಮಾಧವನಾದವ ಮೋದವ ತಂದವ ಖೇದವ ತರಿದವ ಮೇದಿನಿ ಪೊರೆದವ ಛೇದಿಸಿ ಬಂದವ 6 ಮೇದಿನಿ ಇತ್ತವ ಮೇದಿನಿಸುತೆಯಳ ಮೋದದಲಾಳ್ದವ ಮೇದಿನಿಸುತಹರ ವೇದವ ಕಾಯ್ದವ ಛೇದಿಸಿ ಕಲಿಗಣ ಹಾದಿಯ ತೊರುವ 7 ನಂದನಂದ ಅರವಿಂದ ನಯನ ಬಹು ಸುಂದರತಮಶ್ರೀ ಮಂದಿರ ಗೋಕುಲ ಚಂದಿರ ಶುಭಗುಣಸಾಂದ್ರ ಮಹೋಜಸ ಇಂದ್ರನ ಹಳಿದ ಮಹೇಂದ್ರ ಪರಾತ್ಪರ8 ಗೋಪಿಕಂದ ಬಹು ಗೋಪಿಕಾಮಸ್ತ್ರೀ ರೂಪಧಾರಿ ನಗಚಾಪವರದ ಶಿವ ಭಂಗ ಹರಣ ನಿ- ರ್ಲೇಪ ದುಃಖ ಸುಖಲಾಪ ಚರಿತ ಭಗ 9 ವಾಸುದೇವ ಸಂತೋಷದಾತ ಗೋಕೇಶವೇದ್ಯ ವಾಗೀಶ ಜನಕ ನಿಜದಾಸಪೋಷ ಖಳ- ದಾತ ಮಹಿ- ದಾಸಪೂರ್ಣವಿಭು 10 ವೈರಿ ಕುರುವಂಶ ಧ್ವಂಸ ನಿಜ ಹಂಸರೂಪ ಯದುವಂಶ ಚಂದ್ರ ನೀ- ಲಾಂಶುಧಾಮ ಗರುಡಂಸಗಮನ ಭವ ದಮನ ದೇವಾಂಶಗಣಪೋಷ 11 ತುಂಬಿರೆಜಯಜಯ ದುಂಧುಭಿನಾದವು ಅಂಬರಸುರಗಣ ವರ್ಷಿಸೆಕುಸುಮವ ಸಂಭ್ರಮದಾರತಿ ಎತ್ತಲ್ ಸ್ತ್ರೀಗಣ ಕಂಬು ಚಕ್ರಾಂಕಿತ ಪಾಣಿಯೆಸರಸರ 12 ಮಂಗಳಮೂರ್ತಿಯೆ ಮಂಗಲ ದಾತನೆ ಅಂಗಜರಿಪುಗಳ ಭಂಗವ ಹರಿಸುತ ತಿಂಗಳು ಬೆಳಕಿನ ತುಂಗ ಸುರೂಪವ ಕಂಗಳು ಮನಸಿನ ಸಂಗದಿ ತೋರುತ13 ಸಾಸಿರ ಶಿರಮುಖ ಸಾಸಿರ ನೇತ್ರನೆ ಸಾಸಿರ ಬಾಹುವೆ ಸಾಸಿರನಾಮಕ ಸಾಸಿರಕೀರ್ತಿನಿರ್ದೋಷ ಸುಖಪೂರ್ಣ ಶ್ವಾಸವಿನುತ ವಿಶ್ವಾಸವ ಬೀರುತ 14 ಜಯಮುನಿ ಹೃದಯಗ ವಾಯು ವಿನಾಯಕ ಜೀಯ ಶ್ರೀ ಕೃಷ್ಣವಿಠಲ ಮಹಾಂತನೆ ಪ್ರೇಮದ ಮನವಳಿದ ಹೇಯದು ನಿನ್ನಯ ಧೇಯವೆ ನಡೆಸುತ ಶ್ರೀ ಯವ ನೀಡಲು 15
--------------
ಕೃಷ್ಣವಿಠಲದಾಸರು
ಬಾಲಕ ಕಂಡೆನು ನಿನ್ನ | ಬಾಲಕ ಪ. ಬಾಲಕ ಕಂಡೆನು ನಿನ್ನಾ | ಮುದ್ದು ಬಾಲ ತೊಡಿಗೆ ಇಟ್ಟರನ್ನಾ | ಆಹ ಕಾಲ ಕಾಲದ ಪೂಜೆ ಮೇಲಾಗಿ ಕೈಕೊಂಡು ಪಾಲಿಪ ಸುಜನರ ಅ.ಪ. ವಸುದೇವ ಕಂದ ಗೋವಿಂದ ವಸುಧಿ ಭಾರವನಿಳುಹೆ ಬಂದಾ | ಪುಟ್ಟ ಹಸುಗಳ ಕಾಯ್ವ ಮುಕುಂದ | ರ ಕ್ಕಸರನೆಲ್ಲರ ತಾನೆ ಕೊಂದಾ | ಆಹಾ ಹಸುಮಕ್ಕಳೊಡಗೂಡಿ ಮೊಸರು ಬೆಣ್ಣೆಯ ತಿಂದು ಶಶಿಮುಖಿಯರಮನಕಸಮ ಸಂತಸವಿತ್ತು 1 ವಿಶ್ವವ್ಯಾಪಕನಾದ ಬಾಲಾ | ಸರ್ವ ವಿಶ್ವ ತನ್ನೊಳಗಿಟ್ಟ ಬಾಲಾ | ಸ ರ್ವೇಶ್ವರನೆನಿಸುವ ಬಾಲಾ | ಬ್ರಹ್ಮ ಈಶ್ವರ ಸುರ ಪರಿಪಾಲಾ | ಆಹ ವಿಶ್ವ ಪ್ರದೀಪಕ ವಿಶ್ವನಾಟಕ ಸರ್ವ ವಿಶ್ವಚೇಷ್ಟಕನಾದ 2 ಸಿರಿಗರಿಯದ ಗುಣನೀತಾ | ಮತ್ತೆ ಸಿರಿಯ ತನ್ನೊಳಗಿಟ್ಟಾತಾ | ಆ ಸಿರಿಯಲ್ಲಿ ತಾನಿರುವಾತಾ | ಸೃಷ್ಟಿ ಸಿರಿಯಿಂದ ಮಾಡಿಸುವಾತಾ | ಆಹ ಸಿರಿಯ ಬಿಟ್ಟಗಲದೆ ಸಿರಿಗೆ ಮೋಹಕನಾಗಿ ಸಿರಿ ಸೇವೆ ಕೈಕೊಂಬ ಸಿರಿಕಾಂತ ಶ್ರೀಕೃಷ್ಣ 3 ಪ್ರಳಯಾಂಬುವಟಪತ್ರ ಶಯನಾ | ಥಳ ಥಳಿಸುವ ಪದತಳ ಅರುಣಾ | ವರ್ಣ ಎಳೆಗೂಸಿನಂತಿಹ ಚಿಣ್ಣಾ | ಆರು ತಿಳಿಯಲಾಗದ ಗುಣಪೂರ್ಣ | ಆಹ ನಳಿನಭವನ ಪೊಕ್ಕಳಲಿ ಪಡದು ತನ್ನ ನಿಲಯ ತೋರಿಸಿ ಕಾಯ್ದ ಚಲುವ ಚನ್ನಿಗ ದೇವ4 ಸತಿ ಪ್ರಾಯ ಕೆಡಿಸದೆ ತನ್ನಾ | ಮೈಯ್ಯೋಳ್ ಸುತರ ಪಡೆದಂಥ ಸಂಪನ್ನಾ | ವೇದ ತತಿಗೆ ಶಿಲ್ಕದ ಸುಗುಣಾರ್ಣ | ಅ ದ್ಭುತ ರೂಪ ಜಗದೇಕ ಘನ್ನಾ | ಆಹ ಜಿತಮಾನಿಗಳಿಗೆ ಹಿತಕೃತಿ ಕಲ್ಪಿಸಿ ಜತನದಿ ಜಗಜೀವತತಿಗಳ ಕಾಯೂವ 5 ಸುರತತಿಗಳನೆ ನಿರ್ಮೀಸಿ | ಅವರೊಳ್ ತರತಮ ಭೇದ ಕಲ್ಪಿಸಿ | ತನ್ನ ವರಪುತ್ರನೋಶಕೆ ವಪ್ಪೀಸಿ | ಸೃಷ್ಟಿ ಗರಸನ್ನ ಮಾಡಿ ನೀ ನಿಲಿಸೀ | ಆಹ ಪರಮೇಷ್ಟಿ ಪದವಿತ್ತು ಸರುವ ಜೀವರ ಶ್ವಾಸಕ್ಕರಸನೆಂದೆನಿಸಿದ 6 ಸರಿ ಇಲ್ಲ ವಾಯುಗೆಂದೆನಿಸೀ | ತತ್ವ ಸುರರಿಗಧೀಶನೆಂದೆನಿಸೀ | ತನ್ನ ಶರಣರ ಕಾಯ್ವನೆಂದೆನಿಸೀ | ಅವ ನಿರುವಲ್ಲಿ ತಾ ಸಿದ್ಧನೆನಿಸೀ | ಆಹ ತರಣಿಜಗೊಲಿಯುತ್ತ ಕುರುಕುಲವಳಿಯುತ್ತ ಪರಮತ ಖಂಡಿಸಿ ಕರೆಯೆ ತನ್ನನು ಬಂದಾ 7 ತ್ರಿವಿಧ ಜೀವರಗತಿದಾತಾ | ನಮ್ಮ ಪವನನಂತರ್ಯಾಮಿ ಈತಾ | ಪದ್ಮ ಭವ ರುದ್ರ ತ್ರಿದಶರ ಪ್ರೀತಾ | ಭಕ್ತ ರವಸರಕೊದಗುವ ದಾತಾ ಪವನಜ ಸತಿಭಕ್ತ ನಿವಹ ತಾಪದಿ ಕೂಗೆ ಭುವಿಯಲ್ಲಿ ಪೊರೆದಂಥ 8 ಶೋಣಿತ ನೀಲ ಕಾಯಾ | ದೇವ ಅಕ್ಲೇಶ ಆನಂದಕಾಯಾ | ಯುಗಕೆ ತಕ್ಕಂಥ ವರ್ಣಸುಕಾರ್ಯ | ಮಾಳ್ಪ ರಕ್ಕಸಾಂತಕ ಕವಿಗೇಯಾ | ಆಹ ಪೊಕ್ಕಳ ನಾಡಿಯೊಳ್ ಸಿಕ್ಕುವ ಜ್ಞಾನಿಗೆ ದಕ್ಕುವ ಸುರರಿಗೆ ಠಕ್ಕಿಪ ದನುಜರ 6 ಸಚ್ಚಿದಾನಂದ ಸ್ವರೂಪ | ಭಕ್ತ ರಿಚ್ಛೆ ಸಲ್ಲಿಸಿ ಕಳೆವ ತಾಪಾ | ಶ್ರೀ ಭವ ಕೂಪಾ | ದಲ್ಲಿ ಮುಚ್ಚಿಡ ತನ್ನನ್ನೆ ಸ್ತುತಿಪಾ | ಆಹ ಅಚ್ಚ ಭಾಗವತರ ಮೆಚ್ಚಿ ಕಾಯುತ ಅಘ ಕೊಚ್ಚಿ ತನ್ನುದರದಿ ಬಚ್ಚಿಟ್ಟು ಕಾಯುವ 10 ವಲ್ಲನು ಸಿರಿಸತಿ ಪೂಜೆ | ಮತ್ತೆ ವಲ್ಲನು ಸುರ ಸ್ತುತಿ ಗೋಜೆ | ತಾ ನೊಲ್ಲನು ಮುನಿಗಳ ಓಜೆ | ಹರಿ ವಲ್ಲನು ಋಷಿಯಾಗವ್ಯಾಜೆ | ಆಹ ಬಲ್ಲಿದ ಭಕುತರ ಸೊಲ್ಲಿಗೊದಗಿ ಬಂದು ಚಲ್ವರೂಪದಿ ಹೃದಯದಲ್ಲಿ ನಿಲ್ಲುವ ಕರುಣಿ11 ಅಂಬುದಿಶಯನ ಶ್ರೀಕಾಂತಾ | ಸರ್ವ ಬಿಂಬನಾಗಿಹ ಮಹಶಾಂತ | ತನ್ನ ನಂಬಿದ ಸುಜನರ ಅಂತಾ | ರಂಗ ಅಂಬುಜ ಮಧ್ಯ ಪೊಳೆವಂಥಾ | ಆಹ ಭಂಜನ ಪಶ್ಚಿ- ಮಾಂಬುಧಿ ತಡಿವಾಸ ಶಂಬರಾರೀಪಿತ12 ಸ್ವಪ್ನದಿ ಗೋಪಿಕರ ತಂದು | ಎನ ಗೊಪ್ಪಿಸೆ ತನ್ನ ಕೂಸೆಂದು | ಚಿನ್ನ ದಪ್ಪಾರಭರಣವದೆಂದೂ | ನಾನು ವಪ್ಪದಿರಲು ಎತ್ತೆನೆಂದೂ | ಆಹಾ ತಪ್ಪಿಸಿಕೊಳ್ಳೆ ಮತ್ತೊಪ್ಪಿಸಿ ಪೋದಳು ಅಪ್ಪಿ ಎನ್ನ ತೋಳೊಳೊಪ್ಪಿದ ಶಿಶುರೂಪ 13 ಶ್ರೀ ಮಾಯಾಜಯ ಶಾಂತಿ ರಮಣಾ | ಕೃತಿ ನಾಮಕ ಶಿರಿವರ ಕರುಣಾ | ಪೂರ್ಣ ಹೇಮಾಂಡ ಬಹಿರಾವರ್ಣ | ವ್ಯಾಪ್ತ ಮಾ ಮನೋಹರ ಪ್ರಣವ ವರ್ಣಾ | ಆಹ ಸ್ವಾಮಿ ಸರ್ವೋತ್ತಮ ಧಾಮತ್ರಯದಿ ವಾಸ ಶ್ರೀಮದಾಚಾರ್ಯರ ಪ್ರೇಮ ಮೂರುತಿ ಮುದ್ದು14 ದ್ವಿ ದಳ ಮಧ್ಯದಿ ರಥ ನಿಲಿಸೀ | ಪಾರ್ಥ ನೆದೆಗುಂದೆ ತತ್ವಾರ್ಥ ತಿಳಿಸೀ | ನಿನ್ನ ಅದುಭುತ ರೂಪ ತೋರಿಸೀ | ಸ- ನ್ಮುದವಿತ್ತು ಕುರುಕುಲವರಸಿ | ಆಹ ವಿದುರನ ತಾತ ನಿನ್ನೊಡೆಯ ಬಾಣದಿ ಫಣೆ ಯದುವೀರ ಚಕ್ರ ಹಸ್ತದಿ ಧರಿಸುತ ಬಂದ 15 ನಿತ್ಯನೂತನ ದೇವ ದೇವಾ | ಸರ್ವ ಶಕ್ತ ನಿನ್ಹೊರತಾರು ಕಾವಾ | ಎನ್ನ ಚಿತ್ತದಿ ನೆಲಸು ಪ್ರಭಾವಾ | ಸರ್ವ ಕೃತ್ಯ ನಿನ್ನದೊ ವಿಜಯ ಭಾವಾ | ಆಹಾ ಮುಕ್ತಿ ಪ್ರದಾತನೆ ಮುಕ್ತರಿಗೊಡೆಯನೆ ತತ್ವ ನಿಯಾಮಕ ತತ್ವಾರ್ಥ ತಿಳಿಸೈಯ್ಯಾ 16 ಚರಣತಳಾರುಣ ಪ್ರಭೆಯೂ | ಹತ್ತು ನಖ ಪಂಕ್ತಿಯ ಪರಿಯೂ | ಗೆಜ್ಜೆ ಸರಪಳಿ ಪಾಡಗರುಳಿಯೂ | ಮೇಲೆ ಜರೆಯ ಪೀತಾಂಬರ ನೆರಿಗೆಯೂ | ಆಹ ವರ ಜಾನುಜಂಘೆಯು ಕರಿಸೊಂಡಲಿನ ತೊಡೆ ಸರ ಮಧ್ಯ ಉರುಕಟಿ ಕಿರಿಗೆಜ್ಜೆ ಉಡುದಾರ 17 ಸರಸಿಜೋದ್ಭವ ವರಸೂತ್ರ | ಮೇಲೆ ಮೆರೆವಂಥ ಸಿರಿಯ ಮಂದೀರ | ಹೃದಯ ವರರತ್ನ ಪದಕದ ಹಾರ | ಸ್ವಚ್ಛ ದರ ವರ್ಣ ಪೊಲ್ವ ಕಂಧಾರಾ | ಆಹ ಕರದ್ವಯ ಕಂಕಣುಂಗುರ ತೋಳ ಬಾಪುರಿ ಸುರರಿಗಭಯ ತೋರ್ಪ ಕರಕಮಲದ ಪುಟ್ಟ 18 ಮೊಸರರ್ಧ ಕಡದಿರೆ ಜನನೀ | ಬಂದು ಹಸುಗೂಸು ಮೇಲೆ ಬೇಡೆ ನನ್ನೀ | ಯಿಂದ ಮುಸುಗಿಟ್ಟು ಪಾಲ್ಕುಡಿಯಲು ನೀ | ಒಲೆ ಬಿಸಿ ಹಾಲುಕ್ಕಲು ಪೋಗೆ ಜನನೀ | ಆಹ ಹಸಿವಡಗದ ಕೋಪಕ್ಮಸರ್ಗಡಿಗೆಯ ವಡ- ದೆಸೆವ ಕಡಗೋಲ್ವಡಿದ್ಕೊಸರೋಡಿ ಬಂದ ಹೇ19 ಪದ್ಮ ಮುಖದ ಕಾಂತಿ ಸೊಂಪೂ | ಅಧರ ತಿದ್ದಿ ಮಾಡಿದ ದಂತ ಬಿಳುಪೂ | ತುಂಬಿ ಮುದ್ದು ಸುರಿಸುವ ಗಲ್ಲದಿಂಪೂ | ಕರ್ಣ ಕುಂಡಲ ಕೆಂಪೂ | ಆಹ ಮಧ್ಯ ಮೂಗುತಿ ನಾಸ ಪದ್ಮದಳಾಕ್ಷವು ಸದ್ಭಕ್ತರೇಕ್ಷಣ ಶುದ್ಧಾತ್ಮ ಸುಖಪೂರ್ಣ20 ಕಮಲಸಂಭವ ವಾಯುಚಲನಾ | ಹುಬ್ಬು ವಿಮಲ ಫಣೆ ತಿಲುಕದಹನಾ | ಮೇಲೆ ಭ್ರಮರ ಕುಂತಳ ಕೇಶ ಚನ್ನಾ | ವಜ್ರ ಅಮಿತ ಸುವರ್ಣ ಮುತ್ತೀನಾ | ಆಹ ಕಮನೀಯ ಮಕುಟವು ಸುಮನಸರೊಂದಿತ ಕಮಲ ತುಳಸಿಹಾರ ವಿಮಲಾಂಗ ಸುಂದರ 21 ಅಂತರ ಬಹಿರ ದಿವ್ಯಾಪ್ತಾ | ಸರ್ವ ರಂತರ ಬಲ್ಲ ನೀ ಗುಪ್ತಾ | ಜೀವ ರಂತರಂಗದಿ ವಾಸ ಸುಪ್ತಾ | ದಿಗ ಳಂತಾನೆ ನಡೆಸುವ ಆತ್ತಾ | ಆಹ ಸಂತತ ಚಿಂತಿಪರಂತರಂಗದಿ ನಿಂತು ಕಂತುಪಿತ ಇನಕೋಟಿಕಾಂತಿ ಮೀರಿದ ಪ್ರಭ22 ಎಚ್ಚತ್ತು ಇರುವ ಸರ್ವದಾ | ಕಾಲ ಮುಚ್ಚಿ ಕೊಂಡಿಪ್ಪೊದೆ ಮೋದಾ | ಅಜ ನುಚ್ವಾಸದುತ್ಪತ್ತಿಯಾದ | ಬಾಯ ಪಾದ | ಆಹ ಮುಚ್ಚೆ ಭೂವ್ಯೋಮವು ಹೆಚ್ಚಿನ ಕೋಪವು ಇಚ್ಚಿಪವನವಾಸ ಸ್ವೇಚ್ಛಾ ವಿಹಾರನೇ 23 ಗೊಲ್ಲರೊಡನಾಟ ಬಯಸೀ | ವಸ್ತು ವಲ್ಲದೆ ಪರಸ್ತ್ರೀಯರೊಲಿಸೀ | ಮತ್ತೆ ಚಲ್ವ ಕುದುರೆ ಏರಿ ಚರಿಸೀ | ತಾ ನೆಲ್ಲಿ ನೋಡಲು ಪೂರ್ಣನೆನಿಸೀ | ಆಹ ವಲ್ಲದೆ ದ್ವಾರಕೆ ಇಲ್ಲಿಗೈತಂದು ಮ ತ್ತೆಲ್ಲರ ಕಾಯುವ ಚೆಲ್ವ ಮಧ್ವೇಶ ಶ್ರೀ 24 ಗೋಪಿ ಕಂದನೆ ಮುದ್ದು ಬಾಲಾ | ಚೆಲ್ವ ರೂಪ ಸಜ್ಜನ ಪರಿಪಾಲಾ | ಗುರು ನಿತ್ಯ ನಿರ್ಮಾಲಾ | ದೇವಾ ಗೋಪಾಲಕೃಷ್ಣವಿಠ್ಠಾಲ | ಆಹ ಪರಿ ನಿಂತು ಮ ಕೊಂಡ ಶ್ರೀಪತಿ ಮರುತೇಶ 25
--------------
ಅಂಬಾಬಾಯಿ
ಬಾಲಲೀಲ ಲೋಲ ಕೃಷ್ಣನ|ನೆನೆವೆನಾ| ಬಾಲಲೀಲ ಲೋಲ ಕೃಷ್ಣ ಈ ಲೋಕಾಳಿ ಪಾಲಿಪಾ|ವಿ- ಶಾಲ ಬಾಲ ನೀಲಗಾತ್ರನಾ|ನೆನೆವೆನಾ ಪ ಪಡುಲ ಕರಿಯಕಣ್ಣಲಿಟ್ಟರು|ಒಡನೆ ಕೇಳಿ ಕರ್ತನೃಪನ| ಮಡದಿ ಜನಕನಹಿತ ಸರಿಕನಾ|ವೈರಿಯ ಒಡಲಲುದಿಸಿದಾತ್ಮಭವನ|ಸಡಗರದಿ ಕಿರಿಯ ತಮ್ಮನ ಪಡೆದ ಜನನಿಯಣ್ಣ ಕಂದನಾ||ನೆನೆವನಾ 1 ಮುದದಲಿಂದ ಮಸುಧೆಯನ್ನು|ಎದೆಯಲೊತ್ತಿ ನಡೆವನಿಂದ| ಒದಗಿ ತನ್ನ ಶರೀರ ತೊರೆದನಾ|ತಂದೆಯಾ ವಿದಿತ ಮುತೈಯ್ಯನ ಮಗನ|ಚದುರತಮ್ಮನರಸಿ ಪಡೆದ ಉರದಿ ಮಗಳ ಪ್ರಾಣದರಸನಾ||ನೆನೆವೆನಾ 2 ನೃಪನಬಿಂಕ ಶಿಷ್ಯರಿಂದ|ಅಪಹರಿಸಿದವನ ಮಗನ| ಚಪಲ ಬಾಣ ಬರಲು ಸ್ಥಳವನು|ತಪ್ಪಿಸಿ ವಿಷದ ಹರಿಸಿ ಕಾಯ್ದೆನೈವರ|ನಿಪುಣ ಮಹೀಪತಿನಂದನ| ಕೃಪೆಲಿ ಪೊರೆವ ಉತ್ತುಮೊತ್ಮನಾ||ನೆನೆವೆನಾ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಬಿಡಬೇಡ ರಂಗಯ್ಯ ಬಡವನೂ ಪಿಡಿಕಯ್ಯ ಒಡೆಯ ನಿನ್ನಡಿ ಪಿಡಿದೆ ದಯೆಮಾಡೊ ಜೀಯ ಪ ಕಡಲಣುಗಿಯಣ್ಮನೇ ಕಡೆಹಾಯ್ಸೊ ಕಷ್ಟದಿಂ ಕಡುಮುದದಿ ಕೊಂಡಾಡಿ ಬೇಡುವೆನೊ ದೊರೆಯೆ ಅ.ಪ ಸಪ್ತ ಋಷಿಗಳು ಸತತ ಗುಪ್ತದಿಂ ಧ್ಯಾನಿಸುತ ತೃಪ್ತರಪ್ಪರು ಅಪ್ತ ನಿನ್ನ ನುತಿಸಿ ಅಪ್ಪ ನೀನವರಿಂದೆ ವಿಪ್ರತ್ವವಂ ತೋರಿ ಅಪ್ರತಿಮ ತಾರಕ ಬ್ರಹ್ಮ ಬೋಧಿಸಿದೆ 1 ಉತ್ತರೆಯ ಬಸುರೊಳಗೆ ಬ್ರಹ್ಮಾಸ್ತ್ರ ಬಾಧಿಸಲು ಅತ್ಯಗತ್ಯದಿ ಪ್ರಭುವೆ ಚಕ್ರ ಪಿಡಿದು ಸುತ್ತೆತ್ತಲಾಶಿಶುವ ಸಂರಕ್ಷಣೆಯಗೈದೆ ಉತ್ತಮೋತ್ತಮ ದೈವ ನೀನೆ ಜಗದಯ್ಯ 2 ಅಂಬರೀಷನ ಮೇಲೆ ಜಂಭದಿಂ ಮುನಿ ಮುನಿಯೆ ಕಂಬುಧಾರಿಯೆನೀಂ ಸುನಾಭ ಕಳುಹಿ ಬೆಂಬಿಡದೆ ಸುತ್ತಿಸಲು ಇಂಬಿನಿಂ ಪದಪಡಿಯೆ ಸಂಭ್ರಮದಿ ಕಾಯ್ದಂಥ ಸದ್ಭಕ್ತ ಬಂಧು 3 ಗಜರಾಜನಂ ಸರದಿ ಮೊಸಳೆ ಪೀಡಿಸುತಿರಲು ನಿಜರಥಾಂಗವ ಕಳುಹಿ ನಕ್ರನಂ ಸೀಳಿ ಅಜಪಿತನೆ ನೀನವರ ವಕ್ರ ಹರಿಸುತ ಕಾಯ್ದೆ ತ್ರಿಜಗಾದಿ ನಾಥನೇ ಭಕ್ತಪಾಲ 4 ಶರಣ ರಕ್ಷಣೆಗಾಗಿ ನೀಂ ಸುದರ್ಶನ ಪಿಡಿದೆ ವರದ ವೇಂಕಟರಮಣ ವೈಷ್ಣವೋದ್ಧರಣ ಕರುಣಿ ನನ್ನಪರಾಧವಪರಿಮಿತವಿದೆ ಕ್ಷಮಿಸು ತರಳನಂ ಕಾಪಾಡು ಜಾಜೀಶ ನೋಡು 5
--------------
ಶಾಮಶರ್ಮರು
ಬಿಡಬೇಡೆಲೆ ಮನಸೆ ಶ್ರೀಹರಿಪಾದ ಹಿಡಿ ಬಿಗಿಯಲೆ ಮನಸೇ ಪ ಹಿಡಕೋ ಕಡಕಿಂ ಕಡಲಕಡಿದಮರರ ಪಾದ ಅ.ಪ ಅನುದಿನ ಸಿರಿಯರೊತ್ತುವ ಪಾದ ಪರತರ ಭಕುತಿಯಿಂ ಸುರರುಪೂಜಿಪ ಪಾದ ನೆರೆದು ಋಷಿಸ್ತೋಮರರಸಿನಲಿಯುವ ಪಾದ ಪರಮನಾರದ ತುಂಬುರರು ಪಾಡುವ ಪಾದ ಪಾದ 1 ನೀಲಬಣ್ಣದಪಾದ ಪಿಡಿದೆತ್ತಿ ಮೂಲೋಕಾಳುವ ಪಾದ ತಾಳಿ ವಿಲಸಿತರೂಪ ಖೂಳನ ಎದೆಮೆಟ್ಟಿ ಸೀಳಿ ಉದರಮಂ ಬಾಲನ್ನಪ್ಪಿಕೊಂಡು ಪಾಲಿಸಿದಂಥ ಮಹ ಮೇಲಾದಮಿತಪಾದ ಸುಜನ ತಲೆಮೇಲೆ ಹೊತ್ತಪಾದ 2 ಬಲಿಯತುಳಿದಪಾದ ಮುನಿಯಾಗ ಒಲಿದು ಕಾಯ್ದಪಾದ ಶಿಲೆಯನೊದೆದಪಾದ ವನಕೆ ಪೋದಪಾದ ಖಳರಥಳಿಸಿ ಮುನಿಕುಲವ ಸಲಹಿದಪಾದ ಜಲಧಿದಾಂಟಿ ಸ್ಥಿರಪಟ್ಟ ಭಕ್ತನಿಗೆ ಸುಲಭದೊದಗಿಕೊಟ್ಟ ಚೆಲುವ ಸುದಯಪಾದ 3 ಪಾದ ಬಹು ಜರಮರಣ ನಿವಾರ ಪಾದ ತರಳಗೆ ಸ್ಥಿರವರ ಕರುಣದಿತ್ತ ಪಾದ ಭರದಿಗರಡನೇರಿ ಸರಸಿಗಿಳಿದ ಪಾದ ತರುಣಿಮಣಿಯರವ್ರತ ಹರಣಗೈದ ಪಾದ ಸಿರಿ ಪಾದ 4 ಪಾದ ಭಕುತರ ಮೊರೆಯ ಕೇಳ್ವ ಪಾದ ದುರುಳ ಕುರುಪನ ಗರುವಕಂಡ ಬುವಿ ವಿಶ್ವ ಪಾದ ಪರಮ ತುರಗವೇರಿ ಮೆರೆವ ವಿಮಲ ಪಾದ ಪಾದ 5
--------------
ರಾಮದಾಸರು
ಬಿಡಬ್ಯಾಡೆನಗೆ ಹರಿಯೇ ತಡಮಾಡಲ್ಯಾಕೆ ದೊರೆಯೇ ಇಂದು ನಿವಾರನೇ ನೀ ಬಂದು ಪ ಗಜರಾಜ ಪಶುವ ಹಿಂದೆ ಭಜಿಪಾಗ ನೀನೆ ಬಂದೆ ನಿಜವಾಗಿ ನಕ್ರನೊದೆದು ಸುಜನನಾಥ ನೀ ಕರೆದೊಯ್ದು 1 ಪಾಂಚಾಳಿ ಸಭೆಯೊಳಂದು ವಂಚಕ ದುಶ್ಯಾಸನ ಬಂದು ಮುಂಚಿತದಿ ಸೀರೆ ಎಳೆಯೆ ವಾಂಛಿತದಿ ಕಾಯ್ದ ಆ ಪರಿಯೇ 2 ಅಂದಾಗಲೂ ಪುತ್ರನನು ಕರೆದಾಗಲಜಾಮಿಳನು ಭರ ದಿಂದ ಕಾಯ್ದೆ ಅವನಾ ಮರದ್ಯಾತಕೀಗಲೆನ್ನಾ 3 ಈ ಪರಿಯ ಕೀರ್ತಿ ಪಡದು ಕೋಪಿಸಲು ಬ್ಯಾಡ ಮರೆದು ಶ್ರೀ ಪತಿಯೆ ಪದವನೀಯೋ ಉಪರಮೆ ಶಾಂತಿ ಕಾಯೋ4
--------------
ಶಾಂತಿಬಾಯಿ
ಬಿಡಿ ಬಿಡಿ ಸಂದೇಹವನು ಪೊಡವಿ ಮನುಜರೆಲ್ಲಒಡೆಯನೊಬ್ಬನೆ ಜಗಕೆ ರಂಗವಿಠಲ ಪ ಹರಿಹರವಿರಿಂಚರೊಳು ಪರದೈವವಾರೆಂದುಪರಮ ಮುನಿಗಳು ವಿವಾದವನು ಮಾಡೆಸರಸಿಜಾತನ ಸುತನ ಭೃಗುವನಟ್ಟಲು ಪೋದಅರಿದು ಬಹೆನೆಂದು ಪದ್ಮಜನ ಸಭೆಗೆ1 ಮುನಿವರನು ಕಂಡು ಪದ್ಮಜಗೆ ವಂದಿಸದಿರಲುವನಜಭವ ಕೋಪವನು ಮಾಡಿ ಜರಿಯೆಮುನಿ ಪರಮ ತತ್ತ್ವ ಇವನಲ್ಲವೆಂದೆನೆ ಕನಲಿಮನಸಿಜವೈರಿಯ ಲೋಕಕೆ ಪೋದನು 2 ಹರ ಕಂಡು ಭೃಗುಮುನಿ ಬರಲು ತನ್ನನುಜನೆಂದುಭರವಸೆಯಲೆದ್ದು ತಕ್ಕೈಸ ಪÉÇೀಗೆ ಜರಿದು ಹರನನು ಮುಟ್ಟದಿರೆ ಶಂಕರನು ಕನಲಿಕರೆದ ಶೂಲವ ಜಡಿದು ಕೊಲಲುಬಗೆದ 3 ಹರನ ಕೋಪವ ಕಂಡು ಗಿರಿಜೆ ಚರಣವ ಪಿಡಿದುಕರುಣಿ ಮುನಿಯನು ಕಾಯಬÉೀಕೆಂದೆನಲುಮರಣ ಭಯದಿಂದ ನಿರ್ಮುಕ್ತನಾಗಿ ಮುನಿವರನು ಸರಸಿಜನಯ್ಯನಿಪ್ಪ ವೈಕುಂಠಕೆ ಪೋದನು 4 ಅಲ್ಲಿ ಮಹಲಕ್ಷುಮಿಯ ತೊಡೆಯಲ್ಲಿ ಪವಡಿಸಿ ಇರಲುಫುಲ್ಲನಾಭನ ಚರಣದಿಂದಲೊದೆಯೆಮೆಲ್ಲನೆ ಪಾದವ ಪಿಡಿದು ಮುನಿವರಗೆ ಪೊಡಮಟ್ಟುಇಲ್ಲಿ ಬಿಜಯಂಗೈಸಬೇಕೆಂದನು 5 ಪರಮ ಮುನಿ ನಿಮ್ಮ ಪದ ಸೋಂಕಲು ಪಾವನನಾದೆಚರಣರಜ ಪರಮ ಪಾವನ ಸುಲಭವೆಸಿರಿಗೆ ನೆಲೆವನೆಯಾದೆ ಪದಸಂಗದಿಂದಲೆನೆಪರಮ ಹರುಷದಲಿ ಮುನಿತನುವ ಮರೆದ 6 ಪರತತ್ವವನು ಕಂಡು ಬಂದು ಮುನಿವರನಂದುಒರೆಯೆ ಋಷಿವರರಿಗವರವರ ಪರಿಯಅರಿದರಾ ಮುನಿವರರು ಹರಿಯೆ ಪರದೈವವೆಂದುನೆರೆ ತಿಳಿದು ಭಜಿಸಿ ನರಹರಿಯ ಹರಿಯ 7 ಸುರರು ಕಡೆಯೆ ಕಡಲೊಳಗಿರ್ದಮಡದಿ ಮಹಾಲಕ್ಷುಮಿ ಅವತರಿಸಿ ಬರಲುಮೃಡ ಕಮಲಜ ಸುರಮುಖ್ಯರನು ಜರಿದು ಸಿಂಧುವಿನದಡದಲ್ಲಿ ಹರಿಯ ವರಿಸಿದಳು ವರನೆಂದು 8 ಕರಿಪತಿಯ ಸರಸಿಯೊಳು ಮೊಸಳೆ ಪಿಡಿಯಲು ಭರದಿಪರಮ ಪುರುಷ ಜಗತ್ಪತಿಯೆನಲುಗರುಡವಾಹನನಾಗಿ ಹರಿ ಬಂದವನ ಕಾಯ್ದಪರದೈವವಾರು ಜಗದೊಳಗೆ ಪೇಳಾ9 ರಾಜಸೂಯವ ಧರ್ಮಸುತ ಮಾಡೆ ಅವನಗ್ರ-ಪೂಜೆಗರುಹರು ಸುರರೊಳಾರೆಂದೆನಲುಭಾಜನನು ಸದ್ಗುಣನು ಕೃಷ್ಣನೊಬ್ಬನೆಯೆಂದುರಾಜಸಭೆಯಲಿ ದೇವವ್ರತ ನುಡಿದನು 10 ಗಂಗೆ ಈತನ ಪಾದಸಂಗದಿ ಪಾವನವೆನಲುಗಂಗಾಧರನು ಪರಮ ದಾಸನೆನಲುಮಂಗಳಾತ್ಮಕ ವಿಶ್ವಜನ್ಮಾದಿ ಕಾರಣನುರಂಗವಿಠಲರೇಯನ ನೆರೆನಂಬಿರೋ 11
--------------
ಶ್ರೀಪಾದರಾಜರು
ಬೀಗಮುದ್ರೆಗಳಹವು ಬಹು ಬಾಗಿಲುಗಳಾಗಿಸಾಗರಾತ್ಮಜೆಯರಸ ಸುಖದಿ ಪವಡಿಸಲು ಪಪುರದ ಮುಂಭಾಗದಲಿ ಹೊಳೆವ ದ್ವಾರಗಳೈದುಹೊರಗುಭಯಪಾಶ್ರ್ವದಲಿ ಹೊಂದಿರುವವೆರಡುತೆರೆದು ಮುಚ್ಚುತಲಿರುವ ತತ್ಪಶ್ಚಿಮದಲೆರಡುಗುರಿಕಾರರೊಳಸರಿದು ಗೋಪ್ಯರಾಗುವರಿಂತು 1ಮೊದಲ ಜಾವದಲಿವನು ಮುಚ್ಚಿ ಮುದ್ರಿಸುತಿಹರುಹುದುಗಿದೊಳ ದ್ವಾರಗಳ ಹಾಗೆ ತೆರೆದಿಹರುಅದರೊಳರಸೆಡೆಯಾಡಿಯಾ ಭೋಗವನುಭವಿಸಿಕದಲಂತಃಪುರಕೆ ಕಡು ಮುದ್ರಿಸುವರು 2ಅಂತರದೊಳಿಹ ದ್ವಾರವವು ನಾಲ್ಕು ಬಳಿಕಲ್ಲಿಅಂತರಿಸದಧಿಪತಿಗಳವರು ನಾಲುವರುಸಂತತವು ಕಾದಿರುತ ಸರಿವರೊಳಮುಖವಾಗಿನಿಂತು ದೊರೆಯೊಡನಿವರ್ಗೆ ನಿದ್ರೆಯಾಗುವದಿಂತು 3ದ್ವಾರ ನಾಲ್ಕರೊಳೊಂದೆ ದೊಡ್ಡದದರಲಿ ದೊರೆಯುಸೇರಿ ನಿರತವು ತಾನು ಸಂಚರಿಪನಾಗಿಮೂರುಳಿದ ದ್ವಾರಗಳು ಮುಖ್ಯವಹುದಾದಡೆಯುತೋರುವೊಂದು ದ್ವಾರದಲಿ ತಾವೇಕವಾಗಿಹವು 4ಸಣ್ಣ ದ್ವಾರಗಳಿನ್ನು ಸಾವಿರಗಳುಂಟೊಳಗೆಕಣ್ಣಿ ಯೊಂದಿವಕೆಲ್ಲ ಕಟ್ಟಿರುವದದನುಪಿಣ್ಣವಾಗಿಯೆ ದೊರೆಯು ಪಿಡಿದೆಚ್ಚರದೊಳಿದ್ದುಕಣ್ಣಾಗಿ ತಾ ಕಾಯ್ವ ಕೋಟೆುದನೊಳಗಿದ್ದು 5ಯೋಗನಿದ್ರೆಯದೆಂದಡಿದು ಪರಮ ಪುರುಷನಿಗೆರಾಗವಿಲ್ಲದೆ ದೇವರಾಜಿಯಲಿ ನಿಂದುಭೋಗವನ್ನಿವರ್ಗೆಲ್ಲ ಬಹಿರಂಗದೊಳಗಿತ್ತುಭೋಗಾವಸಾನದಲಿ ಬಳಿಕೊಟ್ಟುಗೂಡಿಸಲು 6ಏಕನದ್ವಯನಮಲನೀಶ್ವರನು ಪರದಲ್ಲಿಪ್ರಾಕೃತದ ಪದ್ಧತಿಯ ಪರಿಪಾಲಿಸುತಲುಲೋಕೇಶ ತಿರುಪತಿಯ ಲೋಲ ವೆಂಕಟರಮಣನೀ ಕಳೇಬರದಲಿರಲಿಂದಿರೆಯನೊಳಕೊಂಡು 7ಓಂ ಸರ್ವಗ್ರಹರೂಪಿಣೇ ನಮಃ
--------------
ತಿಮ್ಮಪ್ಪದಾಸರು
ಬೆಳಗಿರೆ ಆರುತಿ ಲಲನೆಯರೆಲ್ಲರು ಬಲಿ ನೃಪತಿಯ ಬಾಗಿಲ ಕಾಯ್ದವಗೇ ಪ ಶಿಲೆಯನು ಪದದಲಿ ಲಲನೆಯ ಮಾಡಿದ ಇಳಿಜಾರಮಣನ ಚಲುವ ಮೂರುತಿಗೆ1 ಪದುಮಾವತಿಯಳ ಮದುವೆ ಯಾದವಗೆ ಸುದತಿಯೆಲ್ಲರು ಮುದದಲಿ ಪಾಡುತ 2 ಕರಿವರ ಕರೆಯಲು ಭರದಿ ಬಂದೊದಗಿದ “ಸಿರಿ ಕಾರ್ಪರ ನರಹರಿ“ ರೂಪನಿಗೆ 3
--------------
ಕಾರ್ಪರ ನರಹರಿದಾಸರು