ಒಟ್ಟು 24320 ಕಡೆಗಳಲ್ಲಿ , 137 ದಾಸರು , 9123 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪಾದ ನಿತ್ಯ ನಿತ್ಯ ಸುಖವೇ ಸುಖವು 1ಜ್ಞಾನ ಗಂಗಾ ನದಿಯು ವೈರಾಗ್ಯ ಯಮುನೆಯು ಸದ್ಭಕ್ತಿ ಸರಸ್ವತೀ ಈ ಬಗೆಯ ತ್ರಿವೇಣಿಸಂಗಮವು ಇವರಲ್ಲಿ ಎದ್ದು ಕಾಣುವದು ನಿತ್ಯ 'ಜಯರಾಯರ ನೆರಳಿನಿಂದಲಿ ಸರ್ವದಾ ಅವರಲ್ಲಿ ಇವರವಾಸಗುರುಭಕ್ತಿಯಲಿ ಇವರ ಸರಿ'ುಗಿಲು ಯಾರಿಲ್ಲಭಾಗಣ್ಣದಾಸರಿವರೇ ಅವರು 2ಪಂಢರಾಪುರದ ಶ್ರೀ ಪಾಂಡುರಂಗನು ಇವರ ಭಕ್ತಿಭಾವಕೆ ಮೆಚ್ಚಿದಾಬಹುದಿವಸ ತನ್ನದರುಷನಕೆ ಬರಲಿಲ್ಲೆಂದು ಕಳವಳದಿ ಪಾಂಡುರಂಗಾಕುದುರೆಯನು ಏರಿ ತಾನೆ ಅವರಬಳಿ ಪೋಗಿ 'ಆಲೆ ನಾ'' ಎಂದು ಕರೆದಾಮರುದಿನವೆ ಪಂಢರಿಗೆ ತ್ವರದಿ ಓಡುತ ಹೋಗಿಭೂಪತಿ'ಠ್ಠಲನ ಬಿಗಿದೊಪ್ಪಿಕೊಂಡಾ 3
--------------
ಭೂಪತಿ ವಿಠಲರು
ಪಾದ ಪದುಮವ ನಿತ್ಯದಿ | ಭಜಿಸುವರ ಸತ್ಯಲೋಕೇಶನ ಪೆತ್ತ ಪರಮಾತ್ಮನು | ನಿತ್ಯದಿ ಕರಪಿಡಿವ ತಿಳಿ ಮಾನವಾ ಪ ರವಿಸನ್ನಿಭಾಂಗರು | ಭುವಿ ದಿವಿಜೇಂದ್ರರು | ಕವಿಗಣ ಸನ್ನುತರು | ಭವದೂರರು | ಭುವನದೋಳ್ ಧೃಡಚಿತ್ತದವರಾಗಿ | ತಪದಲ್ಲಿ ಧ್ರುವನಂತೆ ತೋರುವರು ಮಹಾತ್ಮರು1 ಭುಜಗಾಧಿಪನಯಂತೆ ಯೋಗ ಸುಸಾಧಕರು ಭುಜಗ ಭೂಷಣನಂತೆ ವಿಜಯಾನಂದದಿ | ದಿಗ್ವಿಜಯ ಶಾಲಿಗಳಿವರು 2 ನೇಮಪೂರ್ವಕವಾಗಿ | ನಿತ್ಯದಲ್ಲಿ ಶಾಮಸುಂದರ ಸೀತಾ ರಾಮನರ್ಚಿಸುತಲಿ | ಭೂಮಿಯೋಳು ಮೆರೆದಿಹರು ಸುಧೀರರು 3
--------------
ಶಾಮಸುಂದರ ವಿಠಲ
ಪಾದ ಮಾನಸಾನಂದಿಸೋ ಶತ ಭಾನುತೇಜನೇ ಪ ಹನ ಚಿತ್ರಭಾನು ದನುಜಾರಿ ಹರಿ ಅ.ಪ ಮಾಡುವೆನಯ್ಯ ಇಂದುವದನಾ ಶ್ರೀ ಪುಲಿಗಿರಿ ಮಂದಿರ ಮಂದರಧರ 1 ದುಷ್ಟಮನುಜರ ಕೂಡಿ ಭ್ರಷ್ಟನಾದೆನು ಇಷ್ಟಫಲ ದಾಯಕ ತ್ರಿವಿಷ್ಟಪಾಧಿಪಾನುಭವ್ಯ ಅಷ್ಟಸಿದ್ಧಿಪ್ರದ ನಿನ್ನ ಗಟ್ಟಿಯಾಗಿ ನಂಬಿದೆನು 2 ಉರಿಹಸ್ತ ಬೇಡಲು ಲೋಕಮೋಹಿನಿಯ ರೂಪು ಸ್ವೀಕರಿಸಿ ಶಿವನಕಾಯ್ದೆ 3 ಕೀರ್ತಿ ನೋಡಿಸೋ ನಿನ್ನಯಮೂರ್ತಿ ಬೇಡಿಸದಿರು ನಿನ್ನ ನಾಡಿನೊಳಗಾಡಿಸೋ ಮುರಾರಿಹರಿ4 ಶುಭ ವೇಷವಿಪುಲ ದುರಿತಗಣ ಶೋಷಣ ಶ್ರೀವರದವಿಠಲ 5
--------------
ಸರಗೂರು ವೆಂಕಟವರದಾರ್ಯರು
ಪಾದ ಸನ್ನುತ ರೂಪಕಾರಣಾನಂತ ಪುಣ್ಯಾ ಸತ್ಪಥಾಚಾರ ಸಜ್ಜನ ಶರಣ್ಯಾ ಕೀರ್ತಿವಿಸ್ತಾರ ಶೋಭಿತವರೇಣ್ಯಾ ನನ್ಯಾ 1ಸಂತತಾನಂದ ಘನ ಸಮಸ್ಯನಿದಾನಚಿಂತಿತಾರ್ಥದ ಶೀಲ ಚಿತ್ತಶುದ್ಧಿಯ ಲೀಲಶಾಂತ ಸದ್ಗುಣ ಭೂಪ ಸುಲಲಿತಾಮೃತ ಭಾಷಕಂತುಮದ ಪರಿಹಾರಕಾ ಆದಿಮಧ್ಯಾಂತ ರಹಿತಾಕಾರಕಾ ಆಶ್ರಿತಸ್ವಾಂತ ಸಂಸ್ಕøತಿ ತಾರಕಾಲೋಕಾ 2ತಾಪಸ ಜನೋತ್ತುಂಗ ತಾರತಮ್ಯ ವಿಭಂಗತಾಪತ್ರಯಾಳಿ ಹರ ದಳಿತ ಲಿಂಗ ಶರೀರಸ್ವಾಪಾದಿ ಕುಲದೂರಸ್ವಾಶ್ರಿತ ಜನೋದ್ಧಾರಧೀಪದಸ್ಫುರಣ ದೀಪ ಗೋಪಾಲತಾಪ ಸಮುದಯವಿಲಾಪ ದೇಶಿಕ ಪರೋಪಕೃತಿ ಕೃತ್ಪ್ರತಾಪಾಲೇಪ 3
--------------
ಗೋಪಾಲಾರ್ಯರು
ಪಾದ ಸರೋಜಯುಗಳವ ನೆರೆ ನಂಬಿದೆ ಜೀಯ್ಯ ಪ ತಿಮಿರ ಕಾನನ ಯತಿವರ್ಯ ಮಹಾಶೌರ್ಯ ಮೇರು ಸಮ ಧೈರ್ಯ ತ್ರಿವಿಧ ಜೀವರಿಗೆ ಆಚಾರ್ಯ ಅ.ಪ ರಾಮದೂತಾನಾಗಿ ಸೀತೆಗುಂಗುರವಿತ್ತೆ ಕಲಿಯುಗದಿ ಭೂಸುರಕುಲದಿ ಪುಟ್ಟಿ ನೀ ಮೆರೆದಿ ಆರ್ತಜನ ಕೃಪಾಶರಧಿ 1 ಅನುಸಂಧಾನ ಪೂರ್ವಕ ಕೊಡು ವಿಜ್ಞಾನ 2 ಮೂರವತಾರದಿ ಶ್ರೀರಾಮ ಕೃಷ್ಣ ವ್ಯಾಸ- ರಾರಾಧಿಸಿ ಗೈದ ಧೀರ ಶಿಖಾಮಣಿ ಭವ ಭಯನಾಶ ಕೊಡುವುದು ಲೇಸಾ ಗುರುರಾಮವಿಠಲನದಾಸ 3
--------------
ಗುರುರಾಮವಿಠಲ
ಪಾದಕ ನಮಿಸುವೆನಾ ಶಿವನಾ | ಪಾದಕ ನಮಿಸುವೆನಾ ಪ ಮುರ ಹರನಾ ಶಂಕರನಾ1 ಅಮಿತ ಗುಣಾಂಬುಧಿ ಅಘಶಮನಾ | ಸುಮನಾವಳಿ ಸುತ - ಗೋಗಮನಾ | ಕುಮನಾ ಸುರ ದಮನಾ ಸುಮಹಿಮನಾ 2 ಗುರು ಮಹಿಪತಿ - ಸುತ ಭಯಹರನಾ | ಕರುಣಾ ನಂದ ದಯಾಗರನಾ | ಅಜ ಶಿರ ಧರನಾ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಪಾದಕ್ಕೆರಗುವೆ ಗುಹಾ ಪ ಮೋದರನ ಸಖ ಶಿವನ ಸುತ ತವ ಅ.ಪ ದುಷ್ಟ ಪದ್ಮನ ಬಾಧೆಯಾ ಸಹಿಸಲಿಕೆ ಕೂಡದೆ ಇಷ್ಟವನು ಪಾಲಿಸಿದ ಗುಹತವ 1 ಜನ್ಮವನು ಧರಿಸುತ್ತಲಧಿಕ ದು- ನಿರ್ಮೂಲನ ಮಾಡಿರುವ ಗುಹ ತವ ಪಾದಕ್ಕೆ|| 2 ರಿಂದ ಬಂದಾ ಶಾಪದಲಿ ತಾನೂ ಬಂದ ಶರಜಗೆ ದಾಸನನುದಿನ 3
--------------
ಬೆಳ್ಳೆ ದಾಸಪ್ಪಯ್ಯ
ಪಾದಂಗಳ ತೋರಿಸೋ ನಾರಾಯಣ ಪಾದಂಗಳ ತೋರಿಸೊ ಪ ಸಾದರ ಭಕುತಿಯ ನಿನ್ನಲಿ ಇರಿಸೋಮೋದದಿ ಭಜಿಪಂತೆ ನನ್ನದು ಪ್ರೇರಿಸೊ ಅ.ಪ. ನಾಗಾದಿ ಕಪ್ಪತ್ತ ಗಿರಿಯನ್ನೆ ಚಿನ್ನವನ್ನಾಗಿಸಿ ಬಿಡಲೆಂದು ಯತ್ನಿಸುತ್ತಿದ್ದನಾಗಾರ್ಜುನನ ನೀಗಲು ಭುವಿಯೊಳುಬೇಗದಿ ಬಂದಿ ವೀರನಾರಾಯಣ 1 ಮೈಯೊಳು ಕವಚವ ಶಿರದಿ ಕಿರೀಟವಕೈಯೊಳು ಚಕ್ರ ಗದಾ ಶಂಖ ಧರಿಸಿರಯ್ಯನೆ ಗದುಗಿನೊಳಿಳಿದು ಆ ದೈತ್ಯನಹೊಯ್ಯಲು ಬಂದ ಶ್ರೀ ವೀರನಾರಾಯಣ 2 ತೋರ ಕನ್ನಡದಲ್ಲಿ ವರ ಕವಿಯಾದ ಕುಮಾರ ವ್ಯಾಸನಿಂದ ಭಾರತ ರಚಿಸಿದಿಧೀರ ಶ್ರೀ ಪುರಂದರದಾಸರು ಕರೆದಿಹಭಾರತಮಲ್ಲ ಶ್ರೀ ವೀರನಾರಾಯಣ 3
--------------
ವೀರನಾರಾಯಣ
ಪಾದತೋರೋ ಪದ್ಮಾಕ್ಷ ಬಾರೋ ಪ. ಪಾದಪದ್ಮವ ತೋರೋ ಪದ್ಮಾಕ್ಷ ಬಾರೋ ಆದಿಮಧ್ಯಾಂತ ಸ್ವರೂಪ ಮೈದೋರೋ ಅ.ಪ. ಬಲಿಯನ್ನು ತುಳಿದಂಥ, ಭೂಮಿಯನಳೆದಂಥ ಶಿಲೆಯಾಗಿದ್ದವಳ ಕಲುಷವ ಕಳೆದಂಥ 1 ಶಿಶುರೂಪದಿಂದಲೆ ಶಕಟನ ಒದ್ದಂಥ ಶಶಿಮುಖಿಯಶೋದೆಗೆ ಶಿಶುವೆನಿಸಿ ಮೆರೆದಂಥ 2 ಗೊಲ್ಲರ ಮನೆಮನೆಗೆ ಕಳ್ಳನಂದದಿಪೊಕ್ಕು ನಲ್ಲೆಯರ ಕೈಪಿಡಿಗೆ ನಿಲ್ಲದೋಡುವ ಮುದ್ದು 3 ಕಾಳಿಂಗನ ಫಣೆಯೊಳ್ ಕೋಲಾಹಲದಿ ಕುಣಿದ ಕಾಳಿಂಗನರಸಿಯರಿಗೆ ತಾಲೀ ಭಾಗ್ಯವನಿತ್ತ4 ಕರುತುರುಗಳ ಮರೆಸಿ ದೊರೆ ನಿನ್ನರಸಿದ ಪರಮೇಷ್ಠಿಯೆ ತನ್ನ ಕರದಿಂ ಪೂಜಿಸಿದಂಥ 5 ಮಾವ ಕಂಸನ ಕೊಂದು ತಾಯಿ ದೇವಕಿ ವಸುದೇವಸುತ ವಾಸುದೇವನೆಂದೆನಿಸಿದ 6 ಸಿರಿದೇವಿಯೇ ನಿಜಕರಗಳಿಂದೊತ್ತುವ ಪರಮಪಾವನ ಪದಸರಸೀರುಹ 7 ವರಶೇಷಗಿರಿದೊರೆ ಶರಣರ ಮರೆವರೆ ಶಿರಬಾಗಿ ಬೇಡುವೆ ಭರಿಸೆನ್ನನೆನುವೆ 8
--------------
ನಂಜನಗೂಡು ತಿರುಮಲಾಂಬಾ
ಪಾದದರ್ಶನವೀಯೈ ಜಾನಕೀನಾಥ ಪ ವೇದ ವೇದಾಂತಗಳ ಓದಿದವ ನಾನಲ್ಲ ವಾದ ವಾಕ್ಯಾರ್ಥಗಳ ಭೇದ ಎನಗಿಲ್ಲ ಅ.ಪ ಪಾತಕಂಗಳ ಗೈದು ಭೀತನಾಗಿಹೆನಯ್ಯ ನೀತಿನಿಯಮಗಳಿಂದ ದೂರ ನಾನು ಈತಿ ಬಾಧೆಗಳಿಂದ ನಾ ತಪಿಸುತಿಹೆನಯ್ಯ ಮಾತುಮಾತಿಗೆ ನಿನ್ನ ನಾಮ ಜಪವೀಯೆಂದು 1 ಕೆಸರೊಳಗೆ ಹಾಕುವೆಯೊ ಹೊಸ ಜನುಮವೀಯುವೆಯೊ ಬಿಸಜಾಕ್ಷ ನಿನ್ನ ಮನಬಂದಂತೆ ಮಾಡೊ ಉಸಿರಾಡುವನ್ನೆಗಂ ನಿನ್ನ ಭಜನೆಯ ಗೈಸಿ ರಸ ಕಸಗಳೊಂದೆನಿಸೊ ಮಾಂಗಿರಿಯರಂಗ 2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಪಾದವ ತೊಳೆದು ಪಾವನರಾಗಿಹರುಷದಿ ತಲೆದೂಗಿಪಾದವ ತೊಳೆದು ಪಾವನರಾಗಿಭಾವೆ ವಿನೋದದಿ ಕೃಷ್ಣನಗುತಲಿ ಪ. ಗುಜ್ಜೆಯರ ಕಾಲಿಗೆ ತಕ್ಕ ವಜ್ರಕಲ್ಲನೆಪಿಡಿದುಅರ್ಜುನನÀ ಮಡದಿ ಸುಭದ್ರಾಅರ್ಜುನನÀ ಮಡದಿ ಸುಭದ್ರಾ ಹರುಷದಿಕಂಜನೇತ್ರಿಯರ ಉಪಚರಿಸಿ 1 ಪಾದ ಕಾಲ ತೊಳೆದಳು2 ಮಂದಗಮನೆಯರಿಗೆಲ್ಲ ಗಂಧ ಕಸ್ತೂರಿಯಿಟ್ಟುಅಂದವಾಗಿದ್ದ ಅರಿಷಿಣಅಂದವಾಗಿದ್ದ ಅರಿಷಿಣ ಕುಂಕುಮದಿಂದ ಇಂದುವದನೆಯರ ಉಪಚರಿಸಿ3 ಶ್ರೀದೇವಿಯರಿಗೆ ದಿವ್ಯ ಕ್ಯಾದಿಗೆ ಮಲ್ಲಿಗೆ ಮುಡಿಸಿ ಸುಗಂಧಿ ಕೇಶರ ವೀಳ್ಯವ ಸುಗಂಧಿಕೇಶರ ವೀಳ್ಯ ಅಡಿಕೆ ಕೊಟ್ಟುಮಾಧವನ ಮಡದಿಯರ ಉಪಚರಿಸಿ4 ಪಾದ ತೊಳೆದು ಪಾವನರಾಗಿ5
--------------
ಗಲಗಲಿಅವ್ವನವರು
ಪಾದವ ನುತಿಸುವೆ| ದೇವಿ ಜಯ ಜಯ ಪ ದಾತೆ ಜಯ ಜಯ ಅ.ಪ ರವಿಶಶಿಶೋಭಿತೆ| ಪಾವನಚರಿತೆ || ಕುವಲಯದಳ ಸು| ಶ್ಯಾಮಲೆ ಕೋಮಲೆ 1 ಗಾನವಿಲೋಲೆ| ಘನಗುಣಶೀಲೆ|| ದೀನಜನಾವಳಿ| ಪಾಲಯೆ ಸದಯೆ2 ಭಕ್ತವಶಂಕರೆ| ಭಜಕಸುಖಂಕರೆ|| ಮುಕ್ತಿದಾತೆ ಶಿವ| ಶಕ್ತಿಸ್ವರೂಪೆ 3
--------------
ವೆಂಕಟ್‍ರಾವ್
ಪಾದವನು ನಂಬಿದೆನೊ ಪರಮಪುರುಷಾ ಪಾವನನ ಮಾಡೆನ್ನ ಶ್ರೀರಂಗನಾಥ ಪ ಪಾದ ಪಾದ ಬಲಿಯ ಪಾದ ಪಾದ 1 ಪಾದ ಪಾದ ಪಾದ ಪಾದ 2 ಪಾದ ಪಾದ ಪಾದ 3 ಪಾದ ಪಾದ ಪಾದ ಪಾದ 4 ದುರುಳ ಕಂಸಾಸುರನ ಎದೆಯ ತುಳಿದ ಪಾದ ಮುಚುಕುಂದಗೆ ಮುಕ್ತಿಯನಿತ್ತ ಪಾದ ಕಿಚ್ಚು ಬಳಸಲು ಪರ್ವತವನೆತ್ತಿದ ಪಾದ5 ಶಿಲೆಯಾದ ಆಹಲ್ಯೆಯನು ಕಾಯ್ದ ಪಾದ ಪಾದ ಹರನ ಧನುವನು ಮುರಿದು ಜಾನಕಿಯ ತಂದ ಪಾದ ಪಾದ 6 ಪಾದ ಪಾದ ಸೇತುಬಂಧನ ಮಾಡಿ ಸೀತೆಯನು ತಂದ ಪಾದ ಪಾದ 7 ಪಾದ ಪಾದ ಪಾದ 8 ರಾಜಸೂಯಾಗದಲಿ ಪೂಜೆಗೊಂಡ ಪಾದ ಪಾದ ದಂತವಕ್ರಾದಿಗಳನು ಸೆಳೆದುಕೊಂಡ ಪಾದ ಪಾದ 9 ಕÀುರುಪಾಂಡವರಿಗೆ ಸಂಧಿಗೈತಂದ ಪಾದ ವಿದುರನಾ ಮನೆಯಲ್ಲಿ ಭೋಜನಗೈದ ಪಾದ ಪಾದ ದುರುಳ ದುರ್ಯೋಧನನ ಉರುಳಿಸಿದ ಶ್ರೀಪಾದ 10 ರಣದೊಳಗೆ ಅರ್ಜುನಗೆ ಸಾರಥಿಯಾದ ಪಾದ ದೊರೆ ಧರ್ಮಾದಿಗಳ [ನು] ಒಲಿದ ಪಾದ ಪಾದ ಪಾದ 11 ಪಾದ ಇಕ್ಷ್ವಾಕು ಶ್ರೀರಾಮರಾರಾಧಿಸಿದ ಪಾದ ಧರ್ಮವರ್ಮಾದಿ ಚೋಳೇಂದ್ರ ಪೂಜಿತ ಪಾದ ಪಾದ 12 ತೊಂಡಮಾನ್ ಚಕ್ರವರ್ತಿಗೊಲಿದು ಬಂದ ಪಾದ ಶೇಷಾದ್ರಿಗಿರಿಯಲ್ಲಿ ನೆಲೆಸಿರ್ಪ ಪಾದ ಪಾದ ಪಾದ 13 ಅಜನ ಯಜ್ಞಕುಂಡದೊಳಗುದಿಸಿ ಬಂದ ಪಾದ ಪಾದ ವ್ಯಾಧರೂಪಿನಲ್ಲಿ ನಡೆತಂದ ಶ್ರೀಪಾದ ಪಾದ 14 ಪಾದ ಯಾದವಾಗಿರಿಯಲ್ಲಿ ನೆಲೆಸಿರ್ಪ ಪಾದ ವರಸಂಧಿಗೃಹದಲ್ಲಿ ವಾಸವಾಗಿಹ ಪಾದ ಪಾದ 15 ಕರುಣದಿಂದರ್ಜುನಿಗೆ ಸಾರಥಿಯಾದ ಪಾದ ಕೈರವಿಣೀ ತೀರದಲಿ ನೆಲೆಸಿರ್ಪ ಪಾದಾ ರುಕ್ಮಿಣೀ ಬಲಭದ್ರರೊಡನೆ ಒಪ್ಪಿದ ಪಾದ ಕರುಣ ವೆಂಕಟಕೃಷ್ಣನೆಂಬೊ ಬಿರುದರಳ್ಳ ಪಾದಾ 16
--------------
ಯದುಗಿರಿಯಮ್ಮ
ಪಾದಸೇವೆಯ ಪಾಲಿಸೋ ಪಂಕಜನಾಭ ಪ ಭೂಧರ ವಿಹರಣ ಶ್ರೀಧರ ಹರಿ ನಿನ್ನಪಾದ ಅ.ಪ. ತನು ಶೋಷಿಸಿ ತಪನವಿಶೇಷವಾಚರಿಸೆ ಶೇಷಪರ್ವತಶಿರೋ ಭೂಷಣವೆನಿಸಿದ ಪಾದಸೇವೆಯ 1 ಬಲು ಬಳಲಿಸಿ ರಾಜ್ಯವ ಛಲದಿಂದಾ ಕ್ರಮಿಸೆ ಪಾದ 2 ಕುಲಸತಿಗೊಲಿದು ನಿರ್ಮಲತಪೋವನಕೆ ಸುಳಿದು ಆ ಲಲನೆಯ ಕಲುಷವಖಂಡಿಸಿ ಲಲನಾರೂಪವನಿತ್ತು ಸಲಹಿದ ಪಾವನ ||ಪಾದಸೇವೆಯ|| 3 ಗರಳ ನರನುತ್ತಮಾಂಗಕ್ಕೆ ಗುರಿಯಾಗಿ ಬರಲು ಚರಣ ದುಂಗುಟದಿಂದ ಧರಣೀತಳವನೂರಿ ನರನ ಶಿರವಕಾಯ್ದ ನರನಾರಾಯಣ ನಿನ್ನ ||ಪಾದ|| 4 ಪಿಡಿದು ಬಾಧೆಗೊಳಿಸೆ ವೇಗದಲಿ ಪುಲಿಗೆ ಮೋಕ್ಷವನಿತ್ತು ಪುಲಿಗಿರಿಯಲಿ ಮುನಿ ಕುಲಜ ಮಾಂಡವ್ಯಗೆ ಒಲಿದ ವರದ ವಿಠಲ ||ನಾರಾಯಣ||5
--------------
ಸರಗೂರು ವೆಂಕಟವರದಾರ್ಯರು
ಪಾದಸೇವೆಯ ಪಾಲಿಸೋ ಪಂಕಜನಾಭ ಪ ಪಾದಸೇವೆಯ ತೋರೋ ವೇದಗೋಚರ ವ್ಯಾಘ್ರ ಭೂಧರ ವಿಹರಣ ಶ್ರೀಧರ ಹರಿ ನಿನ್ನ ಅ.ಪ ಶೇಷವಾಯುಗಳತಿದೋಷವರ್ಜಿಸಿ ತನು ಶೋಷಿಸಿ ತಪನ ವಿಶೇಷವಾಚರಿಸೆ ದೋಷರಹಿತ ಗುಣಭೂಷಾ ಶೇಷನಿಗೊಲಿದು ಶೇಷಪರ್ವತ ಶಿರೋಭೂಷಣನೆನಿಸಿದ 1 ಬಲಿಚಕ್ರವರ್ತಿಯು ಬಲವೈರಿಯನು ಬಲು ಬಳಲಿಸಿ ರಾಜ್ಯವ ಛಲದಿಂದಾಕ್ರಮಿಸೆ ನಲಿದು ವಾಮನನಾಗಿ ಬಲಿಯ ದಾನವ ಬೇಡಿ ನೆಲನ ಈರಡಿ ಮಾಡಿ ಬಲಿಯ ಮೆಟ್ಟಿದ ಧೀರ2 ಪಲಕಾಲ ಶಾಪದಿ ಶಿಲೆಯಾಗಿದ್ದ ಗೌತಮ ಕುಲಸತಿಗೊಲಿದು ನಿರ್ಮಲ ತಪೋವನಕೆ ಸುಳಿದು ಆ ಲಲನೆಯ ಕಲುಷವ ಖಂಡಿಸಿ ಲಲನಾರೂಪವನಿತ್ತು ಸಲಹಿದ ಪಾವನ 3 ತರಣಿತನಯನೆಚ್ಚ ಗರಳಶರವು ಬೇಗ ನರನುತ್ತಮಾಂಗಕೆ ಗುರಿಯಾಗಿ ಬರಲು ಚರಣದುಂಗುಟದಿಂದ ಧರಣೀತಳವನೂರಿ ನರನ ಶಿರವ ಕಾಯ್ದ ನರನಾರಾಯಣ ನಿನ್ನ 4 ಪುಲಿನಾಮದಸುರನು ಛಲದಿ ಮಾಂಡವ್ಯನ ಗಳವಪಿಡಿದು ಬಾಧೆಗೊಳಿಸೆ ವೇಗದಲಿ ಪುಲಿಗೆ ಮೋಕ್ಷವನಿತ್ತು ಪುಲಿಗಿರಿಯಲಿ ಮುನಿ ಕುಲಜ ಮಾಂಡವ್ಯಗೆ ಒಲಿದ ವರದವಿಠಲ ನಾರಾಯಣ5
--------------
ವೆಂಕಟವರದಾರ್ಯರು