ಒಟ್ಟು 7252 ಕಡೆಗಳಲ್ಲಿ , 131 ದಾಸರು , 4420 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಯಾತಕೆ ಕೃಪೆಮಾಡದೆ ಯಿರುತಿಹೆ ಸಿರಿಯೇಪೀತಾಂಬರಧರ ತರುಣಿಯೆ ಪಪಾತಕಹಾರಿಣಿ ಭಾವಜನನೀಭಕ್ತ ಕುಟುಂಬಿನಿಭವಭಯ ನಾಶಿನಿ 1ದಾರಿದ್ರ್ಯಾಂಬುಧಿ ತರುಣೋಪಾಯವುತೋರಿಸು ರಘುಕುಲದೊರೆ ಸುಪ್ರಿಯಳೆ 2ರತ್ನಾಭರಣಯುಕ್ತ ಸುಗಾತ್ರೇರತ್ನಾಕರಸುತೇ ರಾಜೀವಾಲಯೇ 3ಹೇಮಭೂಧರ ಸ್ವಾಮಿನಿ ತುಲಸೀರಾಮದಾಸ ಸುಕ್ಷೇಮವು ನಿನ್ನದು 4
--------------
ತುಳಸೀರಾಮದಾಸರು
ಯಾತರ ಗರವು ಹೇಳೆ ಮಾತಿನ ಜಾಣಿಪ್ರೀತಿಲೆ ಕರೆಯದೆ ನೀತಿ ಬಿಟ್ಟೆನೀನು ಪ.ಬಾಲೆ ನಿಮ್ಮರಸರು ಭಾಳಗುಣವಂತರುಕಾಲವಿಹಿತವನು ತಿಳಿದು ಇಂದಿವÀ ರಾಕ್ಷಿಕಾಲವಿಹಿತವ ತಿಳಿದು ರಮಿಸುವಾಗಸಾಲದೆಮಾನವಕಳಕೊಂಡೆ ಇಂದಿವರಾಕ್ಷಿ1ಮಿತ್ರೆ ನಿನ್ನವಗುಣ ಮತ್ತೆ ಐವರು ನೋಡಿಪ್ರತ್ಯೇಕ ಒಬ್ಬೊಬ್ಬ ಮಡದಿಯರ ಇಂದಿವರಾಕ್ಷಿಪ್ರತ್ಯೇಕ ಒಬ್ಬೊಬ್ಬ ಮಡದಿಯರ ಮದುವ್ಯಾಗಿಅರ್ಥಿಲೆ ರಮಿಸಿ ಇರುತಾರೆ ಇಂದಿವರಾಕ್ಷಿ 2ಐವರನ ಠಕ್ಕಿಸಿ ದೈವನÀಂಥವನ ಕೂಡಮೈಮರೆದು ಓಡುವ ಸಮಯದಿ ಇಂದಿವರಾಕ್ಷಿಮೈಮರೆದು ಓಡುವ ಸಮಯದಿ ಭೀಮಸೇನಕೈ ಹಿಡಿದು ಕೆಳಗೆ ಎಳೆದಾನ ಇಂದಿವರಾಕ್ಷಿ 3ಸೂತ್ರನಾಮಕನ ಮಡದಿ ಸ್ತೋತ್ರಕೆ ಹಿಗ್ಗುವಿವ್ರಾತ್ಯನ ಕೂಡ ರಥೆವೇರಿ ಇಂದಿವರಾಕ್ಷಿವ್ರಾತ್ಯನ ಕೂಡ ರಥವೇರಿ ಹೋಗುವಾಗಯಾತರಮಾನತಿಳಕೊ ಇಂದಿವರಾಕ್ಷಿ4ಧಡ ಧಡ ರಥವನು ಹೊಡೆದು ಓಡಿಸುವಾಗಸಿಡಿಲೆರಗಿದಂತೆ ಐವರು ಇಂದಿವರಾಕ್ಷಿಸಿಡಿಲೆರಗಿದಂತೆ ಐವರು ನಿನ್ನಕೈಹಿಡಿದೆಳೆದದ್ದು ಮರೆತೆಯೇನ ಇಂದಿವರಾಕ್ಷಿ 5ವಾಚಾಭಿಮಾನಿಯೆ ಯೋಚಿಸೆ ಮನದೊಳುಆಚೆಲಿದ್ದವರಿಗೆ ಅನುಮಾನ ಇಂದಿವರಾಕ್ಷಿಆಚೆಲಿದ್ದವರಿಗೆ ಅನುಮಾನ ದ್ರೌಪತಿನಾಚಿಕೆ ಎಂದು ಬರಬೇಕ ಇಂದಿವರಾವಕ್ಷಿ 6ಪಾಂಚಾಲಿ ನಿನ್ನವಗುಣಮಿಂಚಿತ ಜಗದೊಳುಹಂಚಿಕೆÉಹಾಕಿದರೆÉ ಹರವಿಲ್ಲಹಂಚಿಕೆ ಹಾಕಿದರೆ ಹರವಿಲ್ಲ ರಮಿಅರಸುಕಿಂಚಿತ್ತುಮಾನಉಳಿಸಿದ ಇಂದಿವರಾಕ್ಷಿ7
--------------
ಗಲಗಲಿಅವ್ವನವರು
ಯಾದವ ನೀ ಬಾ ಯದುಕುಲನಂದನಮಾಧವಮಧುಸೂದನ ಬಾರೋಪಸೋದರ ಮಾವನ ಮಥುರಿಲಿ ಮಡುಹಿದ ಯಶೋದೆಯ ನಂದನ ನೀ ಬಾರೋ ಅ.ಪಕಣಕಾಲಂದುಗೆ ಗಣಗಣಕೆನುತಲಿತನನನವೇಣುನಾದದಲಿ ||ಚಿಣಿಕೋಲು ಚಂಡು ಬುಗುರಿಯನಾಡುತಸಣ್ಣ ಸಣ್ಣ ಗೋವಳರೊಡಗೂಡಿ 1ಶಂಖ ಚಕ್ರವು ತೋಳಲಿ ಹೊಳೆಯುತಬಿಂಕದ ಗೋವಳ ನೀ ಬಾರೋ ಅಕ- ||ಳಂಕ ಮಹಿಮನೆ ಆದಿನಾರಾಯಣಬೇಕೆಂಬ ಭಕ್ತರಿಗೊಲಿಬಾರೋ 2ಖಗವಾಹನನೆ ಬಗೆ ಬಗೆ ರೂಪನೆ |ನಗೆ ಮೊಗದರಸನೆ ನೀ ಬಾರೋ ||ಜಗದೊಳು ನಿನ್ನಯ ಮಹಿಮೆಯ ಪೊಗಳುವೆ |ಪುರಂದರವಿಠಲ ನೀ ಬಾರೋ3
--------------
ಪುರಂದರದಾಸರು
ಯಾರಲಿ ದೂರುವೆನೋ ಗಿರಿಯ ರಾಯಾಯಾರೆನ್ನ ಸಲಹುವರೋ ಪಸಾರಿದ ಭಕ್ತ ಸಂಸಾರಿ ನಿನ್ನಯ ಪದವಾರಿಜವನು ತೋರೋ ಕಾರುಣ್ಯ ನಿಧಿ ಬೇಗ ಅ.ಪಕಷ್ಟಜನ್ಮಕೆ ಬಂದೆನೋ-ಧಾರಿಣಿಯೊಳುದುಷ್ಟರಿಂದಲಿ ನೊಂದೆನೋ ||ನಿಷ್ಠುರ ಬೇಡವೊ ನಿನ್ನ ನಂಬಿದ ಮೇಲೆಸೃಷ್ಟಿಗೊಡೆಯ ಎನ್ನ ಬಿಟ್ಟು ಕಳೆಯಬೇಡ 1ಹಿಂದೆ ಮಾಡಿದ ಕರ್ಮವು ಈ ಭವದೊಳುಮುಂದಾಗಿ ತೋರುತಿದೆ ||ಇಂದೇನುಗತಿಅದರಿಂದ ನೊಂದೆನು ನಾನುಮಂದರಧರಗೋವಿಂದ ನೀನಲ್ಲದೆ2ಹಗಲು ಕತ್ತಲೆ ಸುತ್ತಿದೆ ಕಂಗೆಡಿಸುತಹಗೆಗಳ ನಗಿಸುತಿದೆ ||ಉಗುರಲಿ ಸೀಗೆ ಮುಳ್ಳುಗಳೀಗ ನೆಡುತಿವೆಸೊಗವ ಹಾರಿಸಿ ಎದೆ ದಿಗಿಲುಗೊಳಿಸುತಿದೆ 3ಬಾಡಿದರಳಿಸಸಿಯ ಕಲ್ಲಿನ ಮೇಲೆಈಡಾಗಿ ನಾಟಿದರೆ ||ಬೇಡಿಕೊಂಡರೆತಳಿರುಮೂಡಿ ಬರುವುದುಂಟೆರೂಢಿಗೊಡೆಯ ನೀನು ನೋಡದಿದ್ದ ಮೇಲೆ 4ಹಲವು ಪರಿಯ ಕಷ್ಟವ ನಿನ್ನಯಪಾದಜಲಜದ ಕರುಣದಲಿ ||ಸುಲಿಗೆಗೊಟ್ಟೆನು ನಾನು ಸೂರೆಗಾರರಿಗೆಲ್ಲಒಲವಾಗು ಎನ್ನೊಳು ಪುರಂದರವಿಠಲ 5
--------------
ಪುರಂದರದಾಸರು
ಯೋಗಕ್ಕೆ ಸ್ಥಿತಿ ನಾಲ್ಕೇ ಒಡವೆಯೋಗಕ್ಕೆ ಈ ನಾಲ್ಕು ಇಲ್ಲದಿದ್ದರೆ ಅದು ಅಡವಿಪಸುಸುಖ ಬುದ್ಧಿಯ ತಾಳ್ದು ಎಲ್ಲ ವ್ಯವಹಾರ ತಾಳ್ದುಹಸಿವೆ ಎಂಬುದುನೀಗಿಮೌನಕ್ಕೆ ಮನಸಾಗಿಅಸನವಿಕ್ಕಿದರುಂಡು ಸಾತ್ವಿಕವ ಕೈಗೊಂಡುಉಸುರೆ ಪ್ರಥಮ ಸ್ಥಿತಿ ಇದುವೆ ಪಶುಸಿದ್ಧಿ1ಕರ್ಮಂಗಳನ ಸುಟ್ಟುವಿಧಿನಿಷೇಧಗಳ ಬಿಟ್ಟುನಿರ್ಮಳತ್ವವ ತಾಳಿ ಪಾಪ ಪುಣ್ಯವ ದೂಡಿದುರ್ಮತಿ ಸನ್ಮತಿಗಳಿಲ್ಲ ದೋಷ ಭೂಷಣವಿಲ್ಲಧರ್ಮವೆರಡನೆಯ ಸ್ಥಿತಿ ಇದುವೆ ಶಿಶುಸ್ಥಿತಿ2ಅಂತರವೆ ಸಹ್ಯವಾಗಿ ಬ್ರಾಂತ್ಯ ಅಸಹ್ಯವಾಗಿನಿಂತು ಕಣ್ಣು ಮುಚ್ಚಿ ಕುಳಿತು ಮೈಯ ಮರೆಯುತಸಂತತಾನಂದದ ಬೆಳಗ ತೋರುತಿರೆ ನಿತ್ಯಬೆಳಗುಇಂತಿದು ಮೂರನೆಯ ಸ್ಥಿತಿ ಇದುವೆ ತೂಕಡಿಸುವ ಸ್ಥಿತಿ3ಧ್ಯಾನವೆಂಬುದನೀಗಿಧಾರಣೆಯದು ಹೋಗಿಹೀನ ಮೈಲಿಗೆ ತೊಳೆದು ಆತ್ಮ ಜ್ಯೋತಿಯು ಹೊಳೆದುತಾನೆ ಮಲಗಿಹನು ರಾತ್ರೆ ದಿವಗಳ ಕಾಣಇದುವೆ ನಾಲ್ಕನೆಯ ಸ್ಥಿತಿ ಇದುವೆ ನಿದ್ರಾಸ್ಥಿತಿಯು4ಒಂದರಿಂದ ಒಂದರಂತೆ ಇವನು ಸಾಧಿಸಬೇಕುಒಂದಲ್ಲದಿರೆ ನಿರ್ವಿಕಲ್ಪಸಮಾಧಿತಾನಿಲ್ಲಸಂದುಗೊಂದಿನ ಹಾದಿಯಲ್ಲವಿಹಂಗಪಥಬಂಧ ಹರನು ಚಿದಾನಂದನೆ ತಾನಂಹನು5
--------------
ಚಿದಾನಂದ ಅವಧೂತರು
ಯೋಗಿಬಿಟ್ಟರೆ ಬಿಡದು ನಾದವುಯೋಗಿಬಿಟ್ಟರೆ ಬಿಡದು ನಾದವುಕೂಗುತಿಹುದು ಸರ್ವಕಾಲದಿಜಾಗಟೆ ಕೊಳಲು, ತಮ್ಮಟೆಚಂಗು ಕೊಂಬು ತಾಳರವಗಳಿಂದಪಮಲಗೆ ಕುಳಿತರೆ ಕೂಗುತಿಹುದುನಿಲಲು ನಡೆಯೆ ಕೂಗುತಿಹುದುಒಲಿದು ಮಾತುಗಳಿರಲಿಕೆಬಲಿದು ಧುಂಧುಂ ಎಂದು ಭೇರಿಯ ಶಬ್ದರವಗಳಿಂದನಿಲದೆ ಮುರಿದು ಮದವಸುಲಭ ಸುಖವ ಸುರಿಸುತ1ಕಣ್ಣು ಮುಚ್ಚಲು ಕೂಗುತಿಹುದುಕಣ್ಣು ತೆರೆಯೆ ಕೂಗುತಿಹುದುಉಣ್ಣುತಲಿ ತಾನು ಇರಲಿಕೆಘಣ್ಣ ಘಣ್ಣ ಘಣ್ಣಲು ಎಂದು ಘಂಟೆ ಶಬ್ದದ ರವಗಳಿಂದಮಣ್ಣಗೂಡಿಸಿಶೋಕಮೋಹವಪುಣ್ಯರವವ ಬೀರುತ2ಸುಮ್ಮನಿರಲು ಕೂಗುತಿಹುದು ಸುಳಿದಾಡೆ ಕೂಗುತಿಹುದುಬಮ್ಮನೊಮ್ಮೆ ಮರೆತು ಇರಲಿಕೆಘಮ್ಮ ಘಮ್ಮ ಘಮ್ಮ ಎಂದು ಶಂಖ ಶಬ್ದದ ರವಗಳಿಂದಹಮ್ಮುವಾಸನ ಕ್ಷಯವಮಾಡಿನಿರ್ಮಲತ್ವವ ತೋರುತ3ಅರುಣಕಾಲದಿ ಅಸ್ತಕಾಲದಿ ಅವಸ್ಥಾತ್ರಯ ಕಾಲದಿಅರಗಳಿಗೆ ಕ್ಷಣ ಮೂಹೂರ್ತದಿಸರಿಗರಿ ಗಮಪ ಎಂದು ಸ್ವರಮಂಡಲರವಗಳಿಂದತರಿದು ಜನನ ಮರಣವನ್ನುತೇಜಬಿಂದು ಸುರಿವುತ4ಇಂತುನಿತ್ಯಕಾಲದಿ ಬಿಡದೆಸಂತತದಲಿ ಹಾಡಿಪಾಡಿನಿಂತು ಚಾಕರಿಯನೆ ಮಾಡುತಚಿಂತಕರನುತಾ ಚಿದಾನಂದನಾಗಿ ತೋರ್ಪ ಯೋಗಿಯನ್ನುಅಂತ್ಯವಿಲ್ಲದಾನಂದಪಡಿಸಿ ಆಶೀರ್ವಾದವ ಪಡೆಯುತ5
--------------
ಚಿದಾನಂದ ಅವಧೂತರು
ಯೋಗಿಯ ನೋಡಿರೋ ಸದ್ಗುರು ಯೋಗಿಯ ನೋಡಿರೋಯೋಗಿಚಿದಾನಂದಾವಧೂತ ಗುರುದೊರೆಯ ಸದ್ಗುಣ ಚರಿತನಪಆಶಾಪಾಶಗಳೆಂಬುವನೆಲ್ಲವಜರಿದುವಾಸನೆತರಿದುದೋಷದುರ್ಗ ಜನನಾದಿಗಳನು ಬಳಿದು ಸಂಶಯ ತುಳಿದುಕ್ಲೇಶಪಂಚಕ ಕಾಮಕ್ರೋಧವ ಕಡಿದು ಮುಂದಕೆ ನಡೆದುಭಾಸುರತೇಜದಿ ತೋರುವ ಪ್ರಭೆಯನುಕೂಡುವ ತಲೆಯೊಲಿದಾಡುವ1ಬಲಿದಾಧಾರವ ಕುಂಭಕದಿಂದಲಿ ಬಲಿಸಿ ವಾಯುವ ನಿಲಿಸಿನೆಲೆಯನೆ ಹತ್ತಿ ಆ ನೆಲೆಯನೆ ನಿಲುಕುತ ಮತ್ತಾನೆಲೆಯ ಹೊಲಬಲಿ ತೋರುವಭಾಸ್ಕರಕೋಟಿಯ ಮೀರಿಕಳೆಗಳ ತೋರಿ ಥಳಥಳ ಥಳಿಸಿಯೆ ಮೆರೆವಾ ಆತ್ಮನ ನೋಡುವ ಸಂತಸಪಡುವ2ಆರು ಚಕ್ರಗಳಲಿ ತೋರುವ ದಳಗಳನರಿದು ಅದರೊಳು ಬೆರೆತುಭೋರಿಡುತಿಹ ದಶನಾದದ ಬೊಬ್ಬೆಯಕೇಳಿಹರುಷವ ತಾಳಿ ಚಾತುರದಿ ಮೆರೆಯುತಲಿಹ ಜ್ಯೋತಿಯಸಾರಸೇವಿಪ ಶೂರಧಿರ ಚಿದಾನಂದಾವಧೂತಾತ್ಮ ಗುರುವಾ ಎನ್ನನು ಪೊರೆವಾ3
--------------
ಚಿದಾನಂದ ಅವಧೂತರು
ಯೋಗಿಯ ಭಾವವು ಆರಿಗು ತಿಳಿಯದುಯೋಗಿಯೆಂದೆನಿಪುದು ಸುಖವೋ ದುಃಖವೋಪನಾದವ ಸಾಧಿಸಿ ನಾದವ ಭೇದಿಸಿನಾದಾನಂದದಲಿ ಮುಳುಗಿರ್ದುನಾದಾಮೃತವನು ಸವಿಸವಿದುಂಬುವನಾದ ಮೂರುತಿಯವ ನರನೋ ಹರನೋ1ಅಂತರ್ಲಕ್ಷ್ಯ ಬಹಿರ್ಲಕ್ಷ್ಯವನೊಂದನು ತರಿಸಿದೆ ಸಮನಿಸುತಿರ್ದುಸಂತತ ಪೂರ್ಣಾನಂದದಿ ಮುಳುಗಿ ನಿ-ರಂತರ ಸುಖಿಪುದು ಉರಿಯೋ ಸಿರಿಯೋ2ಬಯಲಾಟವ ನೋಡಿ ಬಯಲೆಲ್ಲವ ಮಾಡಿಬಯಲ ಬಗೆಗೆ ತಾ ಓಲಾಡಿಬಯಲಿಗೆ ಬಯಲು ಬಯಲಾಗಿರುತಿಹಬಯಲಾನಂದವು ಭಯವೋ ಜಯವೋ3ಮೂರವಸ್ಥೆಯ ಮೂವರಿಗೊಪ್ಪಿಸಿಬೇರೆ ಸಾಕ್ಷ್ಯಗೆ ತಾನಿರುತಿದ್ದುತೋರುವುದೆಲ್ಲ ತನ್ನತನವೆಂದರಿತುಶೂರನಾಗಿರುವುದು ಗೆಲುವೋ ಒಲವೋ4ಗುರುಕೀಲನೆ ನೋಡಿ ಗುರುವೆಲ್ಲವ ಮಾಡಿಗುರುಲೀಲೆ ಯಂತಿರುತಿದ್ದುಗುರುಚಿದಾನಂದ ಮೂರುತಿಯ ಕೂಡಿರುತಿಹಗುರುತರ ತಾನದು ದೊರೆಯೋ ಚರಿಯೋ5
--------------
ಚಿದಾನಂದ ಅವಧೂತರು
ಯೋಗಿಯ ಲಕ್ಷಣವಿದೆಯೋಗಿಯ ಲಕ್ಷಣ ತಿಳಿಯದಡೆ ಇವನಿಂತು ಬಲ್ಲಪಮೌನವೆಂಬುದು ಬಹಳ ಏನೇನೆಂದರು ಕೇಳಕಾನನವೊಂದೇ ಊರು ಒಂದೇ ತಾನೆಂಬುದು ಢಾಳಹೀನವಾದವ ಕೇಳ ತಾನು ಈ ಪರಿಯಲಿಹಯೋಗಿ1ಮಾತಾಡೆ ಮಾತಿಲ್ಲ ಯಾತರ ಗೊಡವೆಯಿಲ್ಲಭೂತ ಹೊಡೆದಂತೆ ಸುಮ್ಮನಿಹನುಭೀತಿಯ ತಾನಿಲ್ಲ ಈ ತೆರದಲಿ ತಾನಿರುತಿಹಯೋಗಿ2ಎದ್ದರೆ ಎದ್ದಿಹ ಬಿದ್ದರೆ ಬಿದ್ದಿಹನಿದ್ದೆಯು ಯಾವಾಗಲು ಕಟ್ಟಿಹುದುಬುದ್ಧಿಯ ಮಾತಿಲ್ಲ ಬುದ್ಧಿಯವರ್ಜಿಸಿಹಇದ್ದು ಈ ತೆರದಿ ತಾನಿದ್ದು ಇರುತಿಹಯೋಗಿ3ಶರೀರದ ಸ್ಮರಣೆಯಿಲ್ಲ ಶ್ರೇಷ್ಠ ಭಾವಗಳಿಲ್ಲಪೋರರ ಕಂಡರೆ ಪೋರರಂತೆಮಾರನ ಬಾಧೆಯಿಲ್ಲ ಮಹಾಕೋಪಗಳಿಲ್ಲಧೀರತನದಲಿಂತು ಇರುತಿಹಯೋಗಿ4ಹೊರಗಿಂತು ತೋರಿಹನು ಹೃದಯದ ಪರಿಯನ್ನುಅರಿವೆನೆಂದರೆ ಅರಿಗಳವಲ್ಲವೋಇರುಳು ಹಗಲು ಚಿದಾನಂದ ಮೂರುತಿಯನುಸ್ಥಿರವೀಗ ತಾನಂದುನಿತ್ಯಬೆರತಿಹನು5
--------------
ಚಿದಾನಂದ ಅವಧೂತರು
ರಕ್ತಾಕ್ಷಿ ಸಂವತ್ಸರ ಸ್ತೋತ್ರ156ಶರಣು ಶರಣು ರಕ್ತಾಕ್ಷಿ ವರ್ಷದ ಸ್ವಾಮಿ ಶ್ರೀ ನರಸಿಂಹನೇಶರಣು ದುರ್ಗಾರಮಣ ಜಗಜ್ಜನ್ಮಾದಿ ಕಾರಣ ಪಾಹಿಮಾಂ ಪಸರಸಿಜಾಸನ ಶಿವ ಶಕ್ರಾದಿ ಸುರಸುವಂದಿತ ಪಾದನೇಶ್ರೀ ರಮಾಯುತನಾಗಿ ನೀ ಸಂವತ್ಸರದ ನಾಯಕರೊಳುಇರುತ ಪ್ರಜೆಗಳ ಯೋಗ ಕ್ಷೇಮವ ವಹಿಸಿಪೊರೆವಿ ದಯಾನಿದೇ 1ರಾಜ ಸೋಮನು ಮಂತ್ರಿ ಭೃಗು ಸೇನಾಧಿಪತಿ ಬೃಹಸ್ಪತಿಪ್ರಜ್ವಲಿಪರ ವಿಸಸ್ಯನಾಯಕಶನಿಯು ಧಾನ್ಯ ಅಧಿಪನುರಾಜರಾಜೇಶ್ವರನೆ ನಿನ್ನ ಆಜÉÕಯಿಂದ ಚರಿಪರು 2ಶರಣು ಭಕ್ತರ ಕಾಯ್ವ ಕರುಣಾವಾರಿವಿಧಿನೀ ಸರ್ವದಾತರಿದು ಪಾಪವ ಪುಣ್ಯ ಒದಗಿಸಿ ಭಕ್ತಿ ಜ್ಞÕನ ಆಯುಷ್ಯಆರೋಗ್ಯವಿತ್ತು ಕಾಯೋಅಜಪಿತಪ್ರಸನ್ನ ಶ್ರೀನಿವಾಸನೇ3
--------------
ಪ್ರಸನ್ನ ಶ್ರೀನಿವಾಸದಾಸರು
ರಕ್ಷಿ ರಕ್ಷಿ ರಕ್ಷಿಸಯ್ಯ ಚಿದಾನಂದ ಸ್ವಾಮಿರಕ್ಷ ಶಿಕ್ಷ ಕರ್ತನಾದ ದಯದಿಂದಪದಾಸ ನಿಜವಲ್ಲವೆನೆ ಸಾಕ್ಷಿ ಬೇಕೆ ನಿನ್ನದಾಸರ ದಾಸನಾಗಲಿಕೆಏಸುಕಾಲ ಪರೀಕ್ಷೆ ನಿನ್ನ ನೋಡಲಿಕೆ ಎನ್ನಲೇಸುಹೊಲಬುನಿನ್ನನು ಬಿಡದು ಜೋಕೆ1ನಿನ್ನ ನೋಡೆ ನಾನು ಬೇರೆಯಲ್ಲವಯ್ಯಇದು ಮಾಡಿ ಬಂದ ಸುಕೃತವೇಯೆಲ್ಲನಿನ್ನವನ ನೀನೆ ಕೈವಿಡಿದೆಲ್ಲ ಕೇಳುನಿನ್ನೊಳಗೆನ್ನೊಳಗೆ ಭೇದವೇನೂ ಇಲ್ಲ2ಖೂನವಿಲ್ಲದ ಖೂನದಿಂದ ನಿನ್ನ ಕಂಡೆ ನಾಖೂನವಿದ್ದೂ ವಿಲ್ಲದಂತೆ ಬಲಗೊಂಡೆಧ್ಯಾನ ಮೌನವೆಲ್ಲವ ನಾ ಕಳಕೊಂಡೆಧ್ಯಾನವೆಂತು ನಿನ್ನನೆ ಭಜನೆಗೊಂಡೆ3ನಿನ್ನ ಪಾದವ ನಂಬಿಯೆ ಸಂತೋಷನಾದೆ ನಾನಿನ್ನ ಪಾಡಿ ಪೊಗಳಿ ವಿಶೇಷನಾದೆನಿನ್ನ ಲೀಲೆ ನೆನೆದು ನಾನೀಶನಾದೆನಿನ್ನ ನೋಡಿಯೆ ಕಂಡು ಜಗದೀಶನಾದೆ4ಕೋಟಿ ಶತಶಶಿ ಪ್ರಭೆಯ ತಾಳ್ದ ಅಂದವನ್ನುಪಾಟಿಸಿ ಪೊಗಳಬಲ್ಲೆನೆ ಮುಂದಾನೀಟೆನಿಪದೇವಗುರುಚಿದಾನಂದ ನಿನ್ನನೀಟಿನಂತೆ ನಿಲ್ಲಿಸು ಕರುಣದಿಂದ5
--------------
ಚಿದಾನಂದ ಅವಧೂತರು
ರಕ್ಷಿಸು ಶ್ರೀ ಲಕ್ಷ್ಮೀವೆಂಕಟರಮಣ ರಾಕ್ಷಸ ಸಂಹರಣಪಕ್ಷೀಂದ್ರವಾಹನ ವಾಸುಕಿಶಯನ ವಾರಿಜದಳನಯನ ಪ.ತ್ರ್ಯಕ್ಷಾದಿ ವಿಬುಧಪಕ್ಷಪರಾತ್ಪರಸುಕ್ಷೇಮನಿಧಿ ಕೃಪೇಕ್ಷಣದಿಂ ಸದಾ ಅ.ಪ.ವೇದಬಾಹಿರರಾಗಿ ಖಲರು ಬಹು ಬಾಧಿಸುವರುಸಾಧನೆಯೆಲ್ಲ ಕೆಡಿಸುವರು ರಿಪುಗಳಾರ್ವರುಆದಿಮೂರ್ತಿ ತವಪಾದಾಶ್ರಯ ಸು-ಬೋಧಾಮೃತರಸ ಸ್ವಾದುಗೊಳಿಸುತಲಿ 1ಸರ್ವಾಪರಾಧಂಗಳ ನೀ ಕ್ಷಮಿಸು ಸುಜನರನುದ್ಧರಿಸುಪೂರ್ವಾರ್ಜಿತ ಪಾಪಂಗಳ ಪರಿಹರಿಸು ಸದ್ಭಕ್ತಿಯೊಳಿರಿಸುಸರ್ವತ್ರ ವ್ಯಾಪ್ತ ಸಂತಕೃತ ಸ್ತೋತ್ರದುರ್ವಾರದುರಿತದುರ್ಗನಿಗ್ರಹನೆ2ಸತ್ಯಾತ್ಮ ಪಾವನಪಂಕಜನಾಭನೀಲಾಭ್ರದಾಭಸತ್ವಾದಿಗುಣವರ್ಜಿತ ಮಹಾಶೋಭ ಶರಣಾಗತ ಸುಲಭಚಿತ್ತವಾಸ ಶ್ರೀವತ್ಸಾಂಕಿತ ಪರ-ಮಾರ್ಥಬೋಧ ಮಹತ್ತತ್ತ್ವನಿಯಾಮಕ 3ಪವಮಾನಾಂತರ್ಗತ ಪಾಪ ವಿನಾಶ ಪೊರೆಯೊ ಜಗದೀಶಅವಿಕಾರ ಲೀಲಾನಂತವಿಲಾಸ ಶತಸೂರ್ಯ ಪ್ರಕಾಶಕವಿಜನಾನಂದಭವನ ಭವಭಯಾ-ರ್ಣವ ಬಾಡಬಮಾಧವಮಧುಸೂದನ4ಚಿತ್ರಾಖ್ಯಪುರಮಂದಿರ ಸುಖರೂಪ ಯಾದವ ಕುಲದೀಪಕರ್ತಾಕಾರಯಿತ ಸುಗುಣಕಲಾಪಪರಮಪ್ರತಾಪಸುತ್ರಾಣಲಕ್ಷ್ಮೀನಾರಾಯಣಪರವಸ್ತು ಶಾಶ್ವತ ಪವಿತ್ರ ಚರಿತ್ರ 5
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ರಕ್ಷಿಸೆನ್ನ ರಕ್ಷಿಸೆನ್ನನು ಸುರಯಕ್ಷರಕ್ಷಕ ಮಹಾದಕ್ಷ ಯತಿ ಮುನಿ ಪಕ್ಷ ವಿರೂಪಾಕ್ಷಕುಕ್ಷಿಯೊಳು ನೀ ನೆಲಸಿ ಎನ್ನ ಕೃಪೇಕ್ಷಣದಿ ಕೈವಿಡಿದುರಕ್ಷಿಪಅಕ್ಷಯರಾಕ್ಷಸಾಂತಕ ಪಕ್ಷಿವಾಹನ ದೇವಪ್ರಿಯಪವೇದವೇದ್ಯಸುಜನರಕ್ಷ ನಾದಭೇದ್ಯಸಾಧನ ನಾಲ್ಕನು ಸಾಧಿಪ ಸಾಧಕನಾದ ದೇವನೆ ನಿನ್ನ ಪಾದವ ಸ್ತುತಿಪೆನುವೇದ ಸ್ಮøತಿಗಳು ಆದಿಶೇಷನುಸಾಧಿಸುತ ಭೇದಿಸಿಯೆ ನಿನ್ನನುಹಾದಿ ಕಾಣದು ಪೊಗಳ್ವಡೆನಗೆ ಅರಿಯದಾ-ಗಿದೆ ಅನಾದಿ ಮೂರುತಿ1ಹಾರಹೀರ ಫಲಿಸಿದಂಥಾ ಶೂರ ವೀರಸಾರವಿಲ್ಲದ ಸಂಸಾರ ದೂರ ವಿ-ದೂರ ಭಯ ಜರ್ಜರ ಕರುಣಾಕರಸಾರಪೂರಿತಕಾರಣಾತ್ಮಕಮಾರವೈರಿಯೆ ಧೀರ ಜಗದುದ್ಧಾರ ಎನಗೆತೋರಿ ಶಕುತಿಯಸಾರಹೃದಯನೆಗೌರಿ ವಲ್ಲಭನೆ2ಪರಮಪುರುಷ ಪಾರ್ವತೀಪ್ರಿಯಶರಣ ಹೃದಯ ನಿರುತ ಪಾಲಿಪ ಶಂಭುಹರಪಿನಾಕಿಶಿವವರಚಿದಾನಂದಗುರುಅವಧೂತಾತ್ಮ ನಿರುಪಮ ನಿರ್ಮಾಯನಿರವಯ ನಿರುತಪರಮಶಿವ ವಿಶ್ವಹೃದಯಪರತರಾತ್ಮಕಪರಮಮಂಗಳಪರಮಚೈತನ್ಯಾತ್ಮ ವಸ್ತುವೇ3
--------------
ಚಿದಾನಂದ ಅವಧೂತರು
ರಕ್ಷಿಸೆವರ ಮಹಲಕ್ಷ್ಮೀಅಕ್ಷಯಗುಣಪೂರ್ಣೆ ಪಪಕ್ಷಿವಾಹನನ ವಕ್ಷಸ್ಥಳದಿರಕ್ಷಿತಳಾದೆ ಸುಲಕ್ಷಣದೇವಿ ಅ.ಪನಿಗಮವೇದ್ಯನ ಗುಣಗಳ ಪೊಗಳುತಲಿಮಿಗೆ ಸಂತೋಷದಲಿಅಗಣಿತಾಶ್ಚರ್ಯನ ಕೊಂಡಾಡುತಲಿಬಗೆ ಬಗೆ ರೂಪದಲಿಖಗವರವಾಹನನಗಧರನಿಗೆ ಪ-ನ್ನಗ ವೇಣಿಯು ಬಗೆ ಬಗೆಯಿಂದರ್ಚಿಸಿಹಗಲಿರುಳೆಡೆ ಬಿಡದಲೆ ಹರಿಯನು ಬಹುಬಗೆಯಲಿ ಸೇವಿಪಭಾಗ್ಯದ ನಿಧಿಯೆ 1ಇಂದಿರೆಶ್ರೀ ಭೂದುರ್ಗಾಂಬ್ರಣಿಯೇ ಸು-ಗಂಧ ಸುಂದರಿಯೆಇಂದುಶೇಖರ ಮೋಹಿಪ ಮೋಹಿನಿಯಸುಂದರವನೆ ಕಂಡುಚಂದಿರಮುಖ ಮುದದಿಂದಲಿ ಶ್ರೀಗೋ-ವಿಂದನು ತಾಳಿದ ಮೋಹಿನಿ ರೂಪವನೆಂದು ಮನದಿ ಆನಂದ ಪಡಲು ಸುರವೃಂದವ ಸ್ತುತಿಸೆ ಮುಕುಂದನ ರಮಣಿಯೆ 2ಕಮಲಾನನೆಕಮಲಾಲಯೆಕಮಲಾಕ್ಷಿಕಮಲೋದ್ಭವೆ ಕಮಲೆಕಮಲಾಸನಪಿತನ ಸತಿಯೆ ಭಾರ್ಗವಿಯೆಕಮಲಾಂಬಿಕೆ ಪಿಡಿದಿಹಕಮಲಪುಷ್ಪಮಾಲೆಯು ಹರುಷದಿ ಶ್ರೀ-ಕಮಲನಾಭ ವಿಠ್ಠಲಗರ್ಪಿಸುತಲಿಕಮಲಪತ್ರದಳಾಕ್ಷಗೆ ನಮಿಸಿ ಸ್ವ-ರಮಣನ ಕರುಣಕೆ ಪಾತ್ರಳೆ ಸುಂದರಿ 3
--------------
ನಿಡಗುರುಕಿ ಜೀವೂಬಾಯಿ
ರಂಗ ಒಲಿದ ದಾಸರಾಯರ - ಪಾದಯುಗ್ಮಕಂಗಳಿಂದ ನೋಡಿದಾವರÀ - ಪಾಪಂಗಳೆಲ್ಲಹಿಂಗಿಪೋಪವಲ್ಲೊ ಸತ್ವರ - ಏನು ಪೇಳಲೀವರಾ ಪತುಂಗಮಹಿಮೆ ತೋರಿ ಜನಕೆಮಂಗಳಾವ ಕೊಡುವರಿಂಥಾ ಅ.ಪಬ್ಯಾಗವಾಟನಾಮ ಗ್ರಾಮದಿ - ನಾರಸಿಂಹಭಾಗವತಆದಿ ಶಾಸ್ತ್ರಭೋಗಿಶಯನ ಕರುಣದಿಂದಆಗ ಈಗ ಎನದೆ ಸದಾನುರಾಗ ತೋರುವಂಥ 1ಮುದದಿ ದಾಸ್ಯಭಾವದಿಂದಲಿ - ಜಗದಿ ಜನರಹೃದಯಭಾವಪೂರ್ತಿಯಿಂದಲಿ- ಪ್ರೀತಿಗೈದುಪದುಮನಾಭನ ಪ್ರೀತಿಯಿಂದಲಿ - ಗುಣಗಳನ್ನುಭುಧರಮ್ಯಾಳಸಂಗದಿಂದಮುದದಿ ಮನವ ಧರಿಸಿನಿತ್ಯಪದುಮನಾಭನ ಭಜನಿಗೈಯುತ - ತತ್ವಸಾರವದನದಿಂದುಚ್ಭಾರ ಗೈಯುತ - ತೀರ್ಥಯಾತ್ರೆಮುದದಿಕಾಯಧರಿಸಿ ಹರಿಯ ಭಜನೆಗೈದು ಸುಖಿಸಿದಂಥ2ಖ್ಯಾತ ಶುಕ್ಲ ಬಾದ್ರಪದದಿ ನವಮಿ ಜಗ -ನ್ನಾಥ ವಿಠಲಪಾದಪದುಮದಿ ಮನವೆ ಮೊದಲುಭೂತಕಾಶಮಾರ್ಗ ಸಂಗದಿ - ಹೃದಯ ಮಂಡಲಧಾತನಿಂದ ಕೂಡಿ ವಿ -ಧಾತನಾಂಡ ಭೇಧಿಸಿ ಗುರುಜಗ -ನ್ನಾಥ ವಿಠಲಪಾದಪೊಂದಿದಾ - ಈತನಂಥಆತುರಾದಿ ಕೊಡುವ ನಂದನ - ಏನು ಮಹಿಮೆವಾತದೇವನ ನಿಜಾವೇಶದಿಂದ ಯುಕ್ತರಾದ 3
--------------
ಗುರುಜಗನ್ನಾಥದಾಸರು