ಒಟ್ಟು 10452 ಕಡೆಗಳಲ್ಲಿ , 133 ದಾಸರು , 5883 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶೃಂಗಾರವ ನೋಡಿದ್ಯಾ ಎಂಥ ಶೃಂಗಾರವ ನೋಡಿದ್ಯಾ ಪ. ಶಂಖ ಚಕ್ರಾಂಕಿತ ಬಿಂಕುಳ್ಳ ಶ್ರೀವತ್ಸಕುಂಕುಮಾಂಕಿತÀನ ಅರಮನೆ ಶೃಂಗಾರವನೋಡಿದ್ಯಾಅ.ಪ. ರಂಗು ಮಾಣಿಕ ಬಿಗಿದ ಅಂಗಳದೊಳಗಿನ್ನು ಬಂಗಾರದ ಬೆತ್ತಹಿಡಕೊಂಡುಬಂಗಾರದ ಬೆತ್ತಹಿಡಕೊಂಡು ನಿಂತಾರೆ ಮಂಗಳಾಂಗನ ಮನೆ ಮುಂದೆ1 ವ್ಯಾಲಶಯನನ ಮನೆಯೊಳು ಅಂತಸ್ತಿಗೆಜಾಳಿಗೆ ಮುತ್ತು ಜಡದಾವೆಜಾಳಿಗೆ ಮುತ್ತು ಜಡದಾವೆ ಅರಮನೆಸೊಬಗ ಹೇಳಲೊಶÀವಲ್ಲಜನರಿಗೆ2 ಕನಿಯಾದ ಕದಗಳು ಚಿನ್ನದ ಚೌಕಟ್ಟುಸನ್ನಹದಿ ಅರಮನೆಸನ್ನಹದಿ ಅರಮನೆ ಯೊಳಗಿನ್ನುಕನಿಯಾದ ಕದಗಳು ತಿಳಿಯವು3 ಹಲವು ಚಿನ್ನದ ನೆರಳುನೆಲದೊಳು ಬಿದ್ದಿರೆಕೆಲ ಸರೋವರ ಕಮಲವುಕೆಲ ಸರೋವರ ಕಮಲವು ಆದರಿಂದ ಜಲವು ನೆಲವೆಂದು ತಿಳಿಯದು 4 ಅಂತರಂತರದಲ್ಲೆ ಮಂತ್ರಿಗಳು ಕುಳಿತಾರೆ ಕಂತುನಯ್ಯನ ಅರಮನೆಕಂತುನಯ್ಯನ ಅರಮನೆಯೊಳಗೆಅನಂತಪ್ರಜೆ ಬರಲಿ ಬಯಲುಂಟು5 ಮಿಂಚಿನಂತೆ ಹೊಳೆಯೊ ಕೆಂಚೆÉಯರು ಮೈಬಣ್ಣಗೊಂಚಲ ಮುತ್ತು ಅಲುಗೂತಗೊಂಚಲ ಮುತ್ತು ಅಲುಗೂತಸುಳಿದಾಡೊಚಂಚಲಾಕ್ಷಿಯರು ಕಡೆಯಿಲ್ಲ6 ವಜ್ರಮಾಣಿಕ್ಯ ಬಿಗಿದು ಸಜ್ಜಾದ ಆಭರಣವು ಗೆಜ್ಜೆ ಸರಪಳಿಯು ಗಿಲುಕೆಂದು ಗೆಜ್ಜೆ ಸರಪಳಿಯು ಗಿಲುಕೆಂದುರಾಮೇಶನ ಗುಜ್ಜೆಯರು ಹೆಜ್ಜೆ ಇಡುವೋರು7
--------------
ಗಲಗಲಿಅವ್ವನವರು
ಶೃಂಗೇರಿ ಮಂಗಳಂ ಸರಸಿಜೋದ್ಭವನರಸಿಗೆ ಪ ಭಕ್ತರಿಗೆ ತಾನೊಲಿದು ಬಂದು ಪ್ರತ್ಯಕ್ಷಳಾದ ಶಾರದದೇವಿಗೆ 1 ಶಾರದದೇವಿಗೆ 2 ಕೆತ್ತನೆ ಅಡ್ಡಿಕೆ ಮುತ್ತಿನಕಟ್ಟಾಣಿ ಹಸ್ತಕಡಗ ಹರಡಿ ವಂಕಿನಿಟ್ಟು ಕಮಲ ಗಿಣಿ ಪುಸ್ತಕಕಂಠವು ಭಕ್ತರಿಗಭಯವ ತೋರುವ ದೇವಿಗೆ 3 ಅಂದುಗೆ ಇಂದಿರೆರಮಣನಸೊಸೆ ಶಾರದೆಗೆ 4 ಶ್ರೀನಿವಾಸನಪಾದ ತೋರ್ಪ ಶಾರದೆಗೆ 5
--------------
ಯದುಗಿರಿಯಮ್ಮ
ಶೃತಿ ಪ್ರತಿಪಾದ್ಯನೆ | ಕೃತಿದೇವಿ ರಮಣನೆವಿತತ ವಿಶ್ವದಪಾಲ | ಮೃತ ಶಿಶು ಪರಿಪಾಲ ಪ ಮತ್ರ್ಯರ ಬೀಷ್ಟವ | ಸಾರ್ಥಕಗೊಳಿಸುವಪಾರ್ಥ ಸಾರಥಿಯೆ | ಕೀರ್ತಿಸಲರಿಯೆಮೂರ್ತಿಯ ಕಾಣುವ | ವಾರ್ತೆ ಇರಲಿ ದೇವಸೂಕ್ತ ಮೇಯ ಅ | ಸಕ್ತಿ ಪ್ರದಾತಾ ಅ.ಪ. ಪರಿ ಗುಣ ಜಾಲ | ದರಿವನೆ ಕೊಡು ಕೋಲಧರಿಸಿಹೆ ವನಮಾಲಾ | ಶರಣರ ಪಾಲ1 ಪರಿ ಭಕ್ತರನ | ಪೊರೆದ ಮೋಹನ್ನ 2 ಪಟು ಭಟಗಾನಂದ | ಘಟಿಸಲು ಮುಕುಂದಕುಟಿಲ ರಹಿತ ಛಂದ | ಪಟುತರ ವ್ಯಾಪ್ತಿಂದಛಟ ಛಟ ಕಂಬದಿಂದ | ಪುಟ ನೆಗೆಯುತ ಬಂದದಿಟ ಗುರು ಗೋವಿಂದ | ವಿಠಲ ಆನಂದ 3
--------------
ಗುರುಗೋವಿಂದವಿಠಲರು
ಶೇಷ ಗಿರಿಯ ವಾಸಈಶ ಜಗತ್ರಯ ಪೋಷಕ ಸರ್ವೇಶ ಭಾಸುರ ಕೀರ್ತಿ ಶೇಷ ಎನ್ನ ನೀ ಪೋಷಿಸುವುದು ಈಶ ಪ ವಕ್ಷಸ್ಥಳದಲಿ ವಾಸವಾಗಿಹ ಶ್ರೀ ಪರಬ್ರಹ್ಮ ನಾ ಪಕ್ಷಿವಾಹನ ಪರಮಪರುಷ ಅಕ್ಷಯ ಫಲದಾಯಕನಾ ರಕ್ಷಕ ದೀನ ಜನರ ಸರ್ವೋತ್ತಮನ ರಾಜೀವದಳನಯನ ಈಕ್ಷಣದಲೆನ್ನ ನಿನ್ನ ಕುಕ್ಷಿಯೊಳಗೆ ಇಟ್ಟು ರಕ್ಷಿಸೊ ಸಂಪನ್ನ 1 ವೇಣುನಾದ ವಿನೋದನಾದ ಸುಗಾನಲೋಲ ಹರಿಯೆ ದಾನವಾಂತಕ ದಜನುರಕ್ಷಕ ಸುಜ್ಞಾನಿಗಳ ಧೊರಿಯೆ ಮಾನವಾಧಿ ಪ ಮದನವಿಲಾಸ ಮಾಧವ ಮುಕುಂದಾ ನೀನೆ ದಯಮಾಡಿ ಸಲಹೊ ಆನಂದಾ ನಿಜನಿತ್ಯ ಗೋವಿಂದಾ 2 ವಾರಿಧಿ ಬಂಧಿಸಿ ದೈತ್ಯರ ಬಲವನೆಲ್ಲ ಮುರಿದಾ ಬಲವಂತಾ ರಾವಣನ ಭಂಗವ ಬಡಿಸಿ ತಲೆಗಳ ಛೇದಿಸಿದಾ ಸುಲಭದಿ ಅವನನುಜಗೆ ಪಟ್ಟವನಿತ್ತು ಸತಿಯನೆ ತಂದಾ ಜಲಧಿಶಯನ ಅಹೋಬಲ 'ಹೊನ್ನವಿಠ್ಠಲ’ ಚಲುವ ಸದಾನಂದಾ 3
--------------
ಹೆನ್ನೆರಂಗದಾಸರು
ಶೇಷ ಪರ್ಯಂಕ ಶಯನ ವಿಠಲ ಪೊರೆ ಇವಳ ಪ ವಾಸುದೇವನೆ ನಿನ್ನ | ದಾಸಿ ಎಂದೆನಿಸಿ ಭವಪಾಶವನೆ ಕಳೆಯೊ ಸುವಿ | ಶೇಷ ಹರಿಯೇ ಅ.ಪ. ಪತಿಸುತರು ಹಿತರಲ್ಲಿ | ವಿತತವಾಗಿರುವಂಥಅತಿಶಯದ ತವರೂಪ | ಸತತ ಚಿಂತಸುವಾ |ಮತಿಯನೇ ಕರುಣಿಸುತ | ಕೃತ ಕಾರ್ಯಳೆಂದೆನಿಸೊಕ್ಷಿತಿರಮಣ ಭಿನ್ನವಿಪೆ | ಪತಿಕರಿಸೊ ಇದನಾ 1 ಬುದ್ಧಿಯಲಿ ಸನ್ನಿಹಿತ | ವೃದ್ಧಿಗೈಸಿವಳಲ್ಲಿಮಧ್ವಮತ ಸಿದ್ಧಾಂತ | ಪದ್ಧತಿಗಳಾಅಧ್ವರೇಡ್ಯನೆ ಅನಿ | ರುದ್ಧ ಮೂರುತಿ ಹರಿಯೇಕೃದ್ಧಖಳ ಸಂಹಾರಿ | ಪದ್ಮನಾಭಾ 2 ಕೀಚಕಾರಿ ಪ್ರಿಯನೆ | ಮೋಚಕೇಚ್ಛೆಯ ಮಾಡಿಪ್ರಾಚೀನ ಕರ್ಮದಿಂ | ಮೋಚನವ ಗೈಸೋ |ಯಾಚಿಸುವೆನೋ ಸವ್ಯ | ಸಾಚಿಸಖ ನೀನೆಂದುಈಕ್ಷಿಪುದು ಕರುಣ ಕಟಾಕ್ಷದಲಿ ಹರಿಯೇ 3 ಸಾರ ಸುಖಸಾಂದ್ರಾ 4 ಕಾವ ಕರುಣಿಗಳರಸ | ಭಾಮಕರ ಪರಿಪಾಲಾಓವಿತವ ಸಂಸ್ಮರಣೆ | ಸಾರ್ವಕಾಲಿದಲೀಈವುದಿವಳಿಗೆ ಎಂದು | ಭಾವದಲಿ ಭಿನ್ನವಿಪೆಗೋವಿದಾಂ ಪತಿಯೆ ಗುರು | ಗೋವಿಂದ ವಿಠಲಾ 5
--------------
ಗುರುಗೋವಿಂದವಿಠಲರು
ಶೇಷನುತ ಗೋಪ ವಿಠ್ಠಲ | ನೀ ಸಲಹೊ ಇವಳಾ ಪ ವಾಸದೇವನೆ ನಿನ್ನ | ಪ್ರಾರ್ಥಿಸುವೆ ಹರಿಯೇ ಅ.ಪ. ಕನ್ಯೆ ಬಹು ಭಾವುಕಳು | ನಿನ್ನೆಯಿಂ ಪ್ರಾರ್ಥಿಪಳುಘನ್ನ ಹರಿದಾಸ್ಯದಲಿ | ಮುನ್ನಮನವಿರಿಸೀ |ಇನ್ನು ತೈಜಸರೂಪ | ಚೆನ್ನ ಶೇಷನು ಆಗೆಮಾನ್ಯರೂ ಪರಮಗುರೂ | ವನ್ನೆ ಕಂಡಿಹಳೋ 1 ಗುರುತರೂಪಿ ತೈಜಸನು | ವ್ಯಾಸಪೀಠದ ಮುಂದೆಇರುತ ಗುರು ರಾಜರ | ಮಹಿಮೆ ಪೇಳುತಲೀ |ಹರಿಸುತಲಿ ಕನ್ಯೆಗೇ | ಫಲಪುಷ್ಪ ತಾಂಬೂಲದೊರಕಿಸಿಹ ಅದರಿಂದೆ | ಉಪದೇಶವಿತ್ತೇ 2 ಪತಿಸೇವೆ ದೊರಕಿಸುತ | ಕೃತ ಕಾರ್ಯಳೆಂದೆನಿಸೊಹಿತವಹಿತವೆರಡರಲಿ | ರತಿ ಇಡದೆ ಉಂಬಾ |ಮತಿಯನ್ನೇ ಕರುಣಿಸುತಾ | ಮತಿಮತಾಂವರರಂಘ್ರಿಶತಪತ್ರ ಸೇವೆಯಲಿ | ರತಳು ಎಂದೆನಿಸೊ 3 ಭವ | ಸಾಗರದ ಬತ್ತಿಪುದುಮರುತಾಂತರಾತ್ಮ ಹರಿ | ವೇಣುಗೋಪಾಲಾ 4 ಭಾವ ಮೈದುನಗೊಲಿದ | ಶ್ರೀವರನೆ ಮೈದೋರಿಭಾವುಕಳೆ ಪೊರೆಯೆಂದು | ಪ್ರಾರ್ಥಿಸುವೆ ಹರಿಯೇ |ಸಾರ್ವಭೌಮನೆ ಹರಿಯೆ | ಕೋವಿದೋತ್ತಂಸ ಗುರುಗೋವಿಂದ ವಿಠ್ಠಲನೆ | ನೀವೊಲಿಯ ಬೇಕೋ 5
--------------
ಗುರುಗೋವಿಂದವಿಠಲರು
ಶೇಷವಂದ್ಯ ಹರಿ ವಿಠಲ | ನೀ ಸಲಹೊ ಇವಳಾ ಪ ವಾಸುದೇವನೆ ಕೃಷ್ಣ | ಶ್ರೀಶ ಪುರುಷೋತ್ತಮ ಅ.ಪ. ಸೂಕರ ನೀಚ | ಯೋನಿಗಳಲಿ ಜನಿಸಿಜ್ಞಾನಾನು ಸಂಧಾನ | ಕಾಣದಿದ್ದಾಗ್ಯೂಅನೇಕ ಪೂರ್ವವೆನೆ | ಪುಣ್ಯ ಸಂಚಿತದಿಂದಮಾನವ ಸುಜನ್ಮದೊಳು | ಜನುಮ ಪೊತ್ರಿಹಳೊ 1 ತೈಜಸ ಸೂಚಿ | ವರ ಅಂಕಿತವನಿತ್ತೆಮರುತಾಂತರಾತ್ಮಕನೆ | ಮದ್ಬಿಂಜ ಪೊರೆಯಿವಳಾ 2 ವರಸು ಸೌಭಾಗ್ಯವನೆ | ಪರಿಹರಿಸಿ ದುಷ್ಕರ್ಮನಿರುತ ನಿನ್ನಯ ನಾಮ | ಸ್ಮರಣೆ ಸುಖವಿತ್ತೂಮರುತ ಮತ ತತ್ವಗಳ | ಅರಿವಾಗುವಂತೆಸಗೋಕರಿವರದ ಕಮಲಾಕ್ಷ | ಕಾರುಣ್ಯ ಮಾರ್ತೇ 3 ಪತಿಸುತರು ಹಿತರಲ್ಲಿ | ಕೃತಿರಮಣ ಸುವ್ಯಾಪ್ತಮತಿಇತ್ತು ಪೊರೆ ಇವಳ | ಕ್ಷಿತಿರಮಣ ದೇವಾಮತಿಮತಾಂ ವರರಂಘ್ರಿ | ಹಿತಸೇವೆ ದೊರಕಿಸುತಕೃತ ಕೃತ್ಯಳೆಂದೆನಿಸೊ | ಅತಿ ಚಿತ್ರ ಚರಿತಾ 4 ಕಾವ ಕರುಣಿಯೆ ದೇವ | ಭಾವುಕರ ಪರಿಪಾಲನೀವೊಲಿಯ ದಿನ್ನಿಲ್ಲ | ಆವತ್ರೈ ಜಗದೀನೋವುಸುಖ ದ್ವಂದ್ವಗಳ | ಸಮತೆಯು ಉಂಬಂತೆನಿವೊಲಿಯೊ ದೇವ ಗುರು | ಗೋವಿಂದ ವಿಠಲಾ 5
--------------
ಗುರುಗೋವಿಂದವಿಠಲರು
ಶೇಷಶಯನ ನಿನ್ನ ಪರಮ ಭಾಗವತರ ಸಹವಾಸದೊಳಿರಿಸು ಕಂಡ್ಯ ಎನ್ನನು ಪ ಬೇಸರಿಸದೆ ನಿನ್ನ ಹೃದಯಾಬ್ಜದೊಳಗಿರುವದಾಸರೊಳಿರಿಸು ಕಂಡ್ಯ ಎನ್ನನುಅ ತಂದೆಯೊಡಲನು ಸೀಳಿಸಿದವರೊಳು, ದೇ-ವೇಂದ್ರನ ತಲೆಗೆ ತಂದವರೊಳು, ದು-ರ್ಗಂಧ ಪೆಣ್ಣಿಗೆ ಚಂದನದ ಕಂಪನಿತ್ತಂಥಬಾಂಧವರೊಳಗಿರಿಸು ಕಂಡ್ಯ ಎನ್ನನು 1 ತೋಯಜವೆಂಬ ಪುಷ್ಪದ ಪೆಸರವರೊಳುತಾಯ ಸೊಸೆಗೆ ಮಕ್ಕಳಿತ್ತವರೊಳುಆಯದಿ ದ್ವಾದಶಿ ವ್ರತವ ಸಾಧಿಸಿದಂಥರಾಯರೊಳಿರಿಸು ಕಂಡ್ಯ ಎನ್ನನು2 ಗಿಳಿನಾಯಿ ಪೆಸರಿನವರೊಳು, ಮುಗಿಲಹೊಳೆಯ ಹೊಟ್ಟೆಲಿ ಹುಟ್ಟಿದವರೊಳುಕೆಳದಿಯ ಜರಿದು ಶ್ರೀಹರಿದಿನ ಗೆದ್ದಂಥಹಳಬರೊಳಿರಿಸು ಕಂಡ್ಯ ಎನ್ನನು3 ಅನುದಿನ ಸ್ಥಿರರಾಜ್ಯವಾಳಿದಕಿಂಕರರೊಳಿರಿಸು ಕಂಡ್ಯ ಎನ್ನನು 4 ಕಾಟಿಗೆ ಕಾಸಿಲ್ಲದವರು ರಾಯರ ಪಂಕ್ತಿಊಟವ ಬಯಸಿದಂತೆ ನಾ ಬೇಡಿದೆನಾಟಕಧರ ನೆಲೆಯಾದಿಕೇಶವ, ನಿ-ನ್ನಾಟದೊಳಿರಿಸು ಕಂಡ್ಯ ಎನ್ನನು 5
--------------
ಕನಕದಾಸ
ಶೇಷಶಯನ ಶ್ರೀಕೃಷ್ಣನಿಗಾರತಿ ಸತಿ ಲಕುಮಿಯು ಮಾಡಿದಳು ಪ ಸಾಸಿರನಾಮನ ಭೂಸುರಪಾಲನ ಸೋಸಿನಿಂದ ಸ್ಮರಿಸುತ ಮನದಿ ಅ.ಪ ಅಂಬುಧಿಯುದುಕದಿ ಆಲದ ಎಲೆ ಮೇಲೆ ಅಂಗುಟವನು ಬಾಯೊಳಗಿಟ್ಟು ತುಂಬಿಗುರುಳ ಮುಖಕಮಲದ ಚಲುವಗೆ ಸಂಭ್ರಮದಲಿ ಮುತ್ತಿನಾರತಿಯ 1 ಮಂದರಧರ ಗೋವಿಂದಗೆಮ್ಮಯ ಕುಂದುಗಳೆಣಿಸದೆ ಸಲಹೆನ್ನುತಾ ವಂದಿಸಿ ಪ್ರಾರ್ಥನೆ ಮಾಡುತ ಬೇಗದಿ ಇಂದಿರೇಶ ಸಲಹೆಂದೆನುತ 2 ಗೋವರ್ಧನವನು ಎತ್ತಿ ಸುಜನರನು ಗೋಗೋಪಾಲರ ಪೊರೆದವಗೆ ಗೋಪತಿ ಕಮಲನಾಭ ವಿಠ್ಠಲನಿಗೆ ಗೋಪಿಯರೊಡನಾಡುವ ಹರಿಗೆ 3
--------------
ನಿಡಗುರುಕಿ ಜೀವೂಬಾಯಿ
ಶೋಕವ್ಯಾತಕೆ ಮನವೆ ನಿನಗೆ ಇನ್ನು ಪ. ಈ ಕುಮಾರಕ ನಿನಗೆ ಗತಿಯ ವಿಧಿಸುವನೇನೊ ಅ.ಪ ಕೃಷ್ಣ ಸೋದರಮಾವ ಮತ್ತೆ ಭೀಮಸೇನ ಜೇಷ್ಠ ಪಿತೃ ಪಾರ್ಥಾದಿ ಮಹಧೀರರು ಇಷ್ಟು ಮಂದಿರಲಾಗಿ ಅಭಿಮನ್ಯು ಪ್ರಾಣವನು ಬಿಟ್ಟು ಹೋಗಲು ಒಬ್ಬರಾದರುಳುಹಿದರೇನೊ 1 ವಸಿಷ್ಠ ಮುನಿಪರಿಗೆ ನೂರುಮಂದಿ ಸುತರು ಅಸಮ ಸಾಸಿಗರು ಮಹ ಶೀಲಜ್ಞರು ಕುಶಲದಿಂದಿರುತಿರ್ದು ಅ-ಕಾಲ ಮೃತ್ಯುವಿನ ವಶರಾಗಿ ಪೋದರು ನೋಡಿ ಅಚ್ಚರಿಯ2 ಇಂಥವರಿಗೀ ರೀತಿ ನಿನಗಾವ ಸ್ವಾತಂತ್ರ್ಯ ಸಂತೋಷವನು ತೊಡೋ ಮನಸಿನಲ್ಲಿ ಕಂತು ಜನಕ ನಮ್ಮ ವಿಜಯವಿಠ್ಠಲನಂಘ್ರಿ ಸ್ವಾಂತದಲ್ಲಿ ನೆನೆನೆನೆದು ಸುಖಿಯಾಗು ಮನವೆ3
--------------
ವಿಜಯದಾಸ
ಶೋಭನಂ ಶ್ರೀ ಶೋಭನಂ ಶ್ರೀಭೂವಲ್ಲಭ ವೆಂಕಟನಾಯಕ ಪಇಲ್ಲದ ಮಾಯೆಯ ನಿರ್ಮಿಸಲು ಉಳ್ಳವ ನೀನದರೊಳಗಿರಲುನಿಲ್ಲದೆ ನಲಿಯುತ ಹಬ್ಬುತ ಹಸರಲು ಯೆಲ್ಲವು ನೀನಾಗಿರುತಿರಲು 1ಯುಕ್ತಿಗಸಾಧ್ಯನು ನೀನಾಗಿ ಭಕ್ತರ ಪಾಲಿಸಬೇಕಾಗಿಶಕ್ತಿಗೊಡೆಯ ರಾಮಕೃಷ್ಣ ನೀನಾಗಿ ಭಕ್ತರ ಪಾಲಿಸಬೇಕಾಗಿ 2ಕರುಣಾರ್ಣವನ ಕಟಾಕ್ಷದಲಿ ಪರಿಪರಿ ಕಾಮವ ಪಡೆಯುತಲಿತಿರುಪತಿ ವೆಂಕಟರಮಣನ ಮನದಲಿ ಸ್ಮರಿಸುತಲಿರೆ ಸಂಪತ್ತಿನಲಿ 3 ಓಂ ಯೋಗಿನೇ ನಮಃ
--------------
ತಿಮ್ಮಪ್ಪದಾಸರು
ಶೋಭನವೆ ಹರಿ ಶೋಭನವುವೈಭವಾಮಲ ಪಾವನ ಮೂರುತಿಗೆಶೋಭನವೆ ಶೋಭನವು ಪ. ಕುಂಡಲಿ ನಗರದ ರುಕ್ಮಿಣಿ ಸ್ವಯಂವರಗಂಡಕಿ ಕ್ಷೋಣಿಯ ತೀರದಲಿ ಚಂದ್ರಮಂಡಲ ಕ್ಷೋಣಿಜಾತೆ ಪ್ರಭೆದುಂದುಭಿ ಪಾರಿಜಾತ ಎಸೆಯೆ 1 ಕನ್ನಡಿ ಕಲಶವು ಕನಕದುಪ್ಪರಿಗೆ ಸು-ವರ್ಣ ಮಾಣಿಕದ ಗಗನದಲೆಸೆಯೆರನ್ನದ ಕಿಟಕಿ ಉಜ್ವ[ಲ]ಪನ್ನಗಾಸ್ಯಲಿ ಸು-ವರ್ಣ ಮಾಣಿಕದ ತೋರಣವೆ 2 ಪಚ್ಚದ ಪರಿಮಳ ತಳಿರುತೋರಣ ಕಟ್ಟಿನಿ[ಚ್ಚ]ಕಲ್ಯಾಣ ನೀಲವರ್ಣಉ[ಚ್ಚ]ಹವಾಯಿತು ಇರುಳಿನ ಚರಿತ್ರಾಅಚ್ಚುತನೆ ಗಮ್ಮನೆ ಬಾಹುದು 3 ಭೀಷ್ಮಕ ರುಕ್ಮಿಣಿ ಶಿಶುಪಾಲ[ಗೀವೆ]ನೆಂದುಸೇಸೆಯ ತಳೆದು ಧಾರೆನೆರೆಯೆಆ ಸಮಯದಲಿ ದ್ವಾರ[ಕೆ]ಕೃಷ್ಣಗೆಲೇಸಾದ ಓಲೆಯ ಬರೆದಳಾಕೆ 4 ಬರೆದೋಲೆಯ ಕಾಣಿಸಿ ತೆಗೆದೋದಿಪುರೋಹಿತ ಗಗ್ರ್ಯಾಚಾರ್ಯರುನಿರೂಪ ಕೊಡು ನಮಗೆ ನಿಗಮಗೋ- ಚರನು ಗರುಡವಾಹನ ಗಮ್ಮನೆಬಾಹೋನು 5 ಗವರಿಯ ನೋನುವ ಮದುವೆಯ ಸಡಗರಭುವನೇಶ ತಾ ತಡೆದನ್ಯಾಕೆಂದುತಾ ಚಿಂತಿಸಿದಳು ತಾವರೆಗಂಗಳೆಹವಣಿಸಿದಳು ವಿಲಕ್ಷಣಗಾಗಿ6 ಚಂದದಿ ರುಕ್ಮಿಣಿ ಮುತ್ತೈದೆರಿಗೆಲ್ಲಸಂಭ್ರಮದಿಂದ ಬಾಗಿಣ[ಬೀರೆ ಐ]ತಂದು ತಾಳಿಯ ಮಂಗಳಸೂತ್ರ ಮು-ಕುಂದ ಕಟ್ಟಿ ಕಲ್ಯಾಣವಾದ 7 ಅಂಬಿಕೆಗುಡಿಯಲಿ ಚಂದದಿಂದ ಪೂಜೆಯ ಮಾಡಿರಂಗ[ನ] ಕೂಡಿದ ಸಂಭ್ರಮದಿಂದಮಂದಾರಮಾಲೆಯ ಚಂದದಿಂದಲಿ ತಂದುರಂಗನ ಕೊರಳೊಳು ಹಾಕಿದಳು8 ಹಿಂದಿಂದ ಬಹ ರುಕುಮನ ಕಂಡುಭಂಗಿಸಿ ಕರೆದು ಭಂಗವ ಮಾಡಿಹಿಂದಿಂದ ಕರೆದು ಮುಂದಕೆ ಕಟ್ಟಿ ಮು-ಕುಂದ ಹಯವದನ ದ್ವಾರಕೆ ಪೊಕ್ಕ9
--------------
ವಾದಿರಾಜ
ಶೋಭನವೆನ್ನಿರೋ ಶೋಭನ ಬನ್ನಿರೆ ಶೋಭನ ಬನ್ನಿ ಸವ್ಯದಿಂದ ಧ್ರುವ ಶೋಭಾನವೆಂಬೋದು ಸೋಹಂಭಾವಗುಣ ಅಹಂಭಾವಿಗಳು ಅರಿಯವು ಅಹಂಭಾವಿಗಳು ಅರಿಯುವು ಅನಂಗನ ಅಹಂಭ್ರಮೆಯು ವಿಪರೀತ 1 ಶೋಭನವೆನ್ನಿರೇ ಸಿದ್ಧಾಂತನುಭವಿಗಳು ಕಾಮಿ ಕಾಮಣ್ಣನ ಮದುವಿಗೆ ಪ್ರಾಣಿ ಮಾತ್ರಗಳೆಲ್ಲ ಬರಬೇಕು 2 ಶೋಭನವೆನ್ನಿರೇ ಮದೂಣಿಗಾನಂಗಗೆ ಕಾಮಿತದಳಗಿತ್ತಿ ಅರಸಗ ಕಾಮಿತದಳಗಿತ್ತಿ ಅರಸ ಮೋಹನ್ನಗೆ ನೆರೆಯಿತು ಲೋಕ ಧರೆಯೊಳು 3 ಶೋಭನವೆನ್ನಿರೇ ಕಾಮಿ ಕಾಮಣ್ಣಗೆ ಕಾಯದೊಳೀಹ್ಯ ಕರುಣಿಗೆ ಕಾಯದೊಳಿದ್ದು ಮೆರೆವ ಅನಂಗನು ಚರ್ಮದಬೊಂಬಿ ಗುರುತಾಗಿ 4 ಶೋಭನವೆನ್ನಿರೇ ಸಜ್ಜನ ಸಾವಿತ್ರೇರು ಆನಿ ಮೊದಲೆ ಇರುಹು ಕಡಿಗೆಲ್ಲ ಆನಿಮೊದಲೆ ಇರುಹು ಕಡಿಗೆಲ್ಲ ಮಹಿಪತಿ ಶೋಭಾನಯೆಂದ ಸಬೂದಿಂದ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಶೋಭಾನ | ಶೋಭಾನವೆನ್ನಿರೆ ಸುರರಂಗನಿಯರೆಲ್ಲ ಶೋಭಾನವೆನ್ನಿ ಶುಭವೆನ್ನಿ ಪ ಶೃಂಗಾರದ ಗುಣನಿಧಿಯೆ ಬಾ | ಅಂಗಜಜನಕ ಅರವಿಂದದಾಳಾಕ್ಷನೆ ರಂಗಾ ಬಾ || ಭವಭವ ಭಂಗಾ ಬಾ | ದೇವೋತ್ತುಂಗಾ ಬಾ | ಜಗದಂತರಂಗಾ ಬಾ ಹಸೆಯ ಜಗುಲಿಗೆ1 ಪಂಕಜ ಸಂಭವನಯ್ಯ ಬಾ | ಕುಂಕುಮಾಂಕಿತನೆ ಭಕುತ ಕುಮುದ ಮೃಗಾಂಕ ಬಾ || ನಿಷ್ಕಳಂಕಾ ಬಾ ಶಂಖಚಕ್ರಾಂಕ ಬಾ | ಅಹಿಪರಿಯಂಕÀ ಬಾ ಹಸೆಯ ಜಗುಲಿಗೆ 2 ಸಾಮಜರಾಜಾ ವರದಾ ಬಾ | ಸಾಮವಿಲೋಲನೆ ಸದ್ಗುಣ ಶೀಲನೆ ರಾಮಾ ಬಾ || ರಣರಂಗಭೀಮಾ ಬಾ ಹಸೆಯಾ ಜಗುಲಿಗೆ 3 ಅಚ್ಯುತ ಉನ್ನತ ಮಹಿಮನೆ ಯಾದವ ಬಾ | ಘನ್ನ ಮೂರುತಿಯೆ ಸುಪ್ರಸನ್ನಾ ಬಾ ಸಚ್ಚರಿತಾ ಬಾ | ಭಾಗ್ಯ ಸಂಪನ್ನಾ ಬಾ ಜೀವರ ಭಿನ್ನಾ ಬಾ ಹಸೆಯಾ ಜಗುಲಿಗೆ 4 ನಾರಾಯಣ ದಶರೂಪಾ ಬಾ | ಚಾರುಚರಿತಾ ಪ್ರತಾಪ ಬಾ | ಶೌರಿ ಮುರಾರಿಯೆ ನಿಟಿಲ ಕಸ್ತೂರಿಯ ಲೇಪಾ ಬಾ || ನಿತ್ಯ ಸಲ್ಲಾಪಾ ಬಾ ನಮ್ಮ ಸಮೀಪ ಬಾ ಹಸೆಯಾ ಜಗುಲಿಗೆ 5 ವಾಸುದೇವ ಮುಕುಂದಾ ಬಾ | ಸಾಸಿರನಾಮ ಗೋವಿಂದಾ ಬಾ | ಕೇಶವ ಪುರುಷೋತ್ತಮ ನರಸಿಂಹ ಉಪೇಂದ್ರ ಬಾ || ಗೋಪಿಕಂದಾ ಬಾ | ಬಹುಬಲ ವೃಂದಾ ಬಾ | ಅತಿಜವದಿಂದಾ ಬಾ ಹಸೆಯಾ ಜಗುಲಿಗೆ 6 ಪರತತ್ವದಿ ಅತಿ ಚಿಂತಾ ಬಾ | ಪರಬೊಮ್ಮನೆ ಅತಿ ಶಾಂತಾ ಬಾ | ಪರಮಾತ್ಮನೆ ಪರಿಪೂರ್ಣ ವಿಭೂತಿವಂತಾ ಬಾ || ಅಖಿಳ ವೇದಾಂತಾ ಬಾ | ರುಕ್ಮಿಣಿಕಾಂತಾ ಬಾ | ಸದ್ಗುಣವಂತಾ ಬಾ ಹಸೆಯಾ ಜಗುಲಿಗೆ7 ತ್ರಿದಶಗುಣನುತ ವಿಲಾಸಾ ಬಾ | ಮಾಧವ ಶ್ರೀಧರನೆ ಸುನಾಸಾ ಬಾ || ಸಿರಿಮಂದಹಾಸಾ ಬಾ | ಭಕುತ ಉಲ್ಲಾಸಾ ಬಾ | ಶ್ರೀ ಶ್ರೀನಿವಾಸಾ ಬಾ ಹಸೆಯಾ ಜಗುಲಿಗೆ8 ಕೃಷ್ಣವೇಣಿಯ ಪಡೆದವನೆ ಬಾ | ರಥ ಹೊಡೆದವನೆ ಬಾ | ಕೃಷ್ಣೆಯ ಕಷ್ಟವ ನಷ್ಟ ಮಾಡಿದ ಕೃಷ್ಣಾ ಬಾ || ಯದುಕುಲ ಶ್ರೇಷ್ಠ ಬಾ | ಸತತ ಸಂತುಷ್ಟ ಬಾ | ಉಡುಪಿಯ ಕೃಷ್ಣ ಬಾ ಹಸೆಯಾ ಜಗುಲಿಗೆ 9 ಎಲ್ಲರೊಳಗೆ ವ್ಯಾಪಕನೆ ಬಾ ಬಲ್ಲಿದ ದೊರೆಗಳ ಅರಸನೆ ಬಾ | ನಾ ಎಲ್ಲಿ ನೋಡಲು ಪ್ರತಿಗಾಣೆ ನಿನಗೆ ಸಿರಿನಲ್ಲಾ ಬಾ || ಅಪ್ರತಿಮಲ್ಲ ಬಾ ಭಕ್ತವತ್ಸಲಾ ಬಾ | ವಿಜಯವಿಠ್ಠಲ ಬಾ ಹಸೆಯ ಜಗುಲಿಗೆ10
--------------
ವಿಜಯದಾಸ
ಶೋಭಾನವೆನ್ನಿರೆ ಶುಭಕರ ಸಾವಿತ್ರೇರು | ಪ್ರಭುಗುರು ಆತ್ಮಾ ಶ್ರೀರಾಮಗ ಪ ರಾಮರಾವಣ ಕ್ರೋಧನಿಸ್ಸೀಮ ಕುಂಭಕರ್ಣಾದಿ | ತಾಮಸದವರಾ ಮದಮುರಿದು | ತಾಮಸದವರ ಮದಮುರಿದು ಹೃದಯಕ | ಪ್ರೇಮ ಜಯೋತ್ಸವದಿಂದೈ ತಂದಾ 1 ಒಡನೆ ಶಾಂತಿ ಸೀತೆಯಾ ಬಿಡಿಸಿ ತಂದನು ಸೆರೆಯಾ | ದೃಢವಿಭೀಷಣನ ಸ್ಥಾಪಿಸಿದನಾ | ದೃಢವಿಭೀಷಣನ ಸ್ಥಾಪಿಸಿ ಆಶಾಪಾಶ | ಕಡಲ ಮಧ್ಯ ಪೂರದೊಳು ಈಗ 2 ವಿವೇಕ ಹರಿವಾನದಿ ಭಾವದಾರತಿಯೋಳು | ತೀವಿದ ಸಮ್ಯಜ್ಞಾನ ಜ್ಯೋತಿ | ತೀವಿದ ಸಮ್ಯಜ್ಞಾನಜ್ಯೋತಿಯಿಂದ | ದೇವದೇವೇಶಗ ತಿಂದೀಗ 3 ಅರಿಗಳ ಶಿಕ್ಷಿಸು ಶರಣರ ರಕ್ಷಿಸು | ಧರೆಯೊಳುಯೆಂದು ಹರಸುತ | ಧರೆಯೊಳು ಎಂದು ಹರಸುತ ಮುತ್ತಿನ | ಪರಮಶಾಶಯ ನೊಸಲೊಳಿಟ್ಟು 4 ಇಹಪರಸುಖದಾತಾ ಬಾಹ್ಯಾಂತ್ರ ಸದೋದಿತಾ ಮಹಿಪತಿಸುತ ಪ್ರಭು ರಘುನಾಥ | ಮಹಿಪತಿಸುತ ಪ್ರಭು ರಘುನಾಥ ನೆನೆವರ ಸಹಕಾರಿ ನಮ್ಮ ಸದೋದಿತ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು