ಒಟ್ಟು 7584 ಕಡೆಗಳಲ್ಲಿ , 131 ದಾಸರು , 4531 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬಂದನಕ್ರೂರ ವ್ರಜಕೆ ಗೋಪೀ ಕಂದನ ಚರಣಾರ |ವಿಂದ ಕಾಂಬುವೆ ನಿಂದಿನ ದಿನ ಸುದಿನೆಂದು ಪಎಷ್ಟು ಜನ್ಮದಸುಕೃತಒದಗೀತೋ ಈ |ದುಷ್ಟನ ಸಂಗದಿಂದ ||ಬಿಟ್ಟು ಇಚ್ಛಾನುಸಾರದಿ ಗೋಕುಲದಮಾರ್ಗ|ಮೆಟ್ಟಿದೆಹರಿದಯೆಯಾದದ್ದು ನೋಡೆಂದು 1ಒಂದೊಂದು ಹೆಜ್ಜೆಗಳ ಬರುತ ಕ್ರಮ- |ದಿಂದ ಯಮುನೆಯ ದಾಟಿ ||ವೃಂದಾವನದ ಭೂಮಿ ಕಾಣುತ ಬಹು ಮುದ- |ದಿಂಧರಿ ಹರಿಯೆಂದು ನಯನೋದ (ಕ)ಸುರಿಸುತ್ತ 2ಇಲ್ಲೆಲ್ಲ ಸಂಚಾರವ ಮಾಡಿಹ ಖಳ- |ದಲ್ಲಣನೆಂದು ಧೂಳೀ- |ಯಲ್ಲ್ಯುರುಳುತ ಪೊಗಳುತ ಶ್ರೀ ಪ್ರಾಣೇಶ ವಿ- |ಠಲಗೆರಗಿ ಕೈ ಮುಗಿದು ನಿಂದ ತುತಿಸುತ 3
--------------
ಪ್ರಾಣೇಶದಾಸರು
ಬಂದನು ಸರದಾರ ಸರದಾರಅಂಧಕರಿಪು ಸುಕುಮಾರ ಪ.ಶರಣಾಗತಜನಸುರಮಂದಾರ ದುರಿತಾರಣ್ಯಕುಠಾರಸುರನರಾದಿತ್ರೈಲೋಕೋದ್ಧಾರ ಗಿರಿಜಾಂಕಾಲಂಕಾರ 1ವಲ್ಲೀದೇವಿಮನೋಹಾರ ಒಲ್ಲದಜನಕತಿದೂರಬಲ್ಲವವೇದವೇದಾಂತದಸಾರಖುಲ್ಲದನುಜ ಸಂಹಾರ2ಸುಕ್ಷೇತ್ರಪಾವಂಜಾಖ್ಯಪುರವರ ಸುಜ್ಞಾನನಿಧಿ ಗಂಭೀರಲಕ್ಷ್ಮೀನಾರಾಯಣನಕಿಂಕರರಕ್ಷಿಸು ನಮಿತಕುಬೇರ3
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಬಂದಿದೆ ದುರಿತಘಸಂಗ ಶ್ರೀರಂಗಮಂದಮತಿಯೆಂದುಪೇಕ್ಷಿಸದುಳುಹೊ ಪ.ಒಲ್ಲೆನೆಂದರೆ ಬಿಡದೀ ಮನ ತಿಳಿದತ್ತೆಕ್ಷುಲ್ಲ ವೃತ್ತಿಯ ಸೇರಿ ಬಿಡಲೊಲ್ಲದುಕಲ್ಲುಗೊಂಡಿದೆ ಪುಣ್ಯಮಾರ್ಗಕ್ಕೆ ಇದರೊಳುಫುಲ್ಲನಾಭನೆ ಆವ ತೆರದಿಂದ ಸಲಹೊ 1ಕೆಂಡವ ಕೊಂಡು ಮಂಡೆಯ ಬಾಚುತಿದೆಪರಹೆಂಡಿರು ವಿತ್ತದಾಸೆಗೆ ತೊಡಕಿಕಂಡರೆ ಸೊಗಸದು ಭಕುತಿ ವೈರಾಗ್ಯವಪುಂಡರೀಕಾಕ್ಷನೆಗತಿನೀನೆ ಬಲ್ಲೆ2ಮೆಲ್ಲ ಮೆಲ್ಲನೆ ದುಷ್ಕರ್ಮವ ಸಾಧಿಸಿಬಲ್ಲಿದಜವನವರ ಬರಮಾಡಿದೆವಲ್ಲಭಪ್ರಸನ್ವೆಂಕಟ ಕೃಷ್ಣನಿಲ್ಲಿಸು ನಿನ್ನ ನಾಮವ ನಾಲಿಗೆಯಲಿ 3
--------------
ಪ್ರಸನ್ನವೆಂಕಟದಾಸರು
ಬಂದು ನಿಂದಿಹ ನೋಡಿ- ಭೂತಳದಿ ವೆಂಕಟಇಂದಿರೆಯನೊಡಗೂಡಿ- ಒಪ್ಪುವ ನಿರಂತರಪೊಂದಿ ಭಜನೆಯ ಮಾಡಿ- ಆನಂದ ಬೇಡಿ ಪವಂದಿಸುತ ಮನೆದೊಳಗೆ ಇವನಡಿ-ದ್ವಂದ್ವ ಭಜಿಸಲು ಬಂದ ಭಯಹರ |ಇಂದುಧರಸುರವೃಂದನುತ ಗೋ-ವಿಂದಘನದಯಾಸಿಂಧು ಶ್ರೀಹರಿ ಅ.ಪದ್ವಾರದೆಡಬಲದಲ್ಲಿ- ಜಯವಿಜಯರಿಬ್ಬರುಸೇರಿ ಸೇವಿಪರಲ್ಲಿ- ಸನಕಾದಿನುತ ಶೃಂ-ಗಾರನಿಧಿ ಅಂಗದಲಿ- ಮುತ್ತಿನಲಿ ಶೋಭಿಪಹಾರ ಹೊಂದಿಹುದಲ್ಲಿ- ವಿಸ್ತಾರದಲ್ಲಿ ||ವಾರವಾರಕೆ ಪೂಜೆಗೊಂಬುವಹಾರ ಮುಕುಟಾಭರಣ ಕುಂಡಲ-ಧಾರಿ ಭುಜ ಕೇಯೂರ ಭೂಷಿತಮಾರಪಿತಗುಣಮೋಹನಾಂಗ ||ಚಾರುಪೀತಾಂಬರ ಕಟಿಯ ಕರ-ವೀರ ಕಲ್ಹಾರಾದಿ ಹೂವಿನಹಾರ ಕೊರಳೊಳು ಎಸೆಯುತಿರೆ ವದ-|ನಾರವಿಂದನು ನಗುತ ನಲಿಯುತ 1ಎಲ್ಲ ಭಕುತರಭೀಷ್ಟ-ಕೊಡುವುದಕೆ ತಾ ಕೈ-ವಲ್ಯ ಸ್ಥಾನವ ಬಿಟ್ಟ- ಶೇಷಾದ್ರಿ ಮಂದಿರದಲ್ಲಿ ಲೋಲುಪ ದಿಟ್ಟ-ಸೌಭಾಗ್ಯನಿಧಿಗೆದುರಿಲ್ಲ ಭುಜಬಲ ಪುಷ್ಪ-ಕಸ್ತೂರಿಯಿಟ್ಟ ||ಚೆಲ್ವ ಪಣೆಯಲಿ ಶೋಭಿಸುವ ಸಿರಿ-ವಲ್ಲಭನಗುಣಪೊಗಳದಿಹ ಜಗ-ಖುಲ್ಲರೆದೆದಲ್ಲಣ ಪರಾಕ್ರಮಮಲ್ಲಮರ್ದನಮಾತುಳಾಂತಕ||ಫಲ್ಗುಣನಸಖಪ್ರಕಟನಾಗಿಹದುರ್ಲಭನು ಅಘದೂರ ಬಹುಮಾಂಗಲ್ಯ ಹೃಯಯವ ಮಾಡಿ ಸೃಷ್ಟಿಗೆಉಲ್ಲಾಸ ಕೊಡುತಲಿ ಚೆಂದದಿಂದಲಿ 2ಪದಕ-ಕೌಸ್ತುಭದಾರ-ಸರಿಗೆಯ ಸುಕಂಧರಸುದರ್ಶನ-ದರಧಾರ-ಸುಂದರ ಮನೋಹರಪದಯುಗದಿ ನೂಪುರ-ಇಟ್ಟಿಹನು ಸನ್ಮುನಿಹೃದಯ ಸ್ಥಿತ ಗಂಭೀರ-ಬಹುದಾನ ಶೂರ ||ವಿಧಿ-ಭವಾದ್ಯರ ಪೊರೆವ ದಾತನುತುದಿ ಮೊದಲು ಮಧ್ಯವು ವಿರಹಿತನುಉದುಭವಾದಿಗಳೀವ ಕರ್ತನುತ್ರಿದಶಪೂಜೀತ ತ್ತಿಭುವನೇಶ ||ಸದುನಲಾಸದಿ ಸ್ವಾಮಿ ತೀರ್ಥದಿಉದುಸುತಿರೆಸಿರಿಮಹಿಳೆ ಸಹಿತದಿಪದುಮನಾಭಪುರಂದರವಿಠಲನುಮುದದಿ ಬ್ರಹ್ಮೋತ್ಸವದಿ ಮೆರೆಯುತ 3
--------------
ಪುರಂದರದಾಸರು
ಬದುಕಿದೆನು ಬದುಕಿದೆನು ಭವದುರಿತ ಹಿಂಗಿತುಪದುಮನಾಭನ ಪಾದದೊಲಿಮೆ ಎನಗಾಯಿತು ಪಹರಿಯ ತೀರ್ಥ ಪ್ರಸಾದವು ಎನಗೆ ದೊರೆಕಿತು |ಹರಿಕಥಾಮೃತವೆನ್ನ ಕಿವಿಗೊದಗಿತು ||ಹರಿದಾಸರುಗಳೆನ್ನ ಬಂಧು ಬಳಗವಾದರು |ಹರಿಯ ಶ್ರೀ ಮುದ್ರೆಯೆನಗೆ ಆಭರಣವಾಯ್ತು 1ಮುಕ್ತರಾದರು ಎನ್ನ ನೂರೊಂದು ಕುಲದವರು |ಮುಕ್ತಿ ಮಾರ್ಗಕೆ ಯೋಗ್ಯ ನಾನಾದೆನು ||ಸುಕೃತಿದೇಹಕ್ಕೆನ್ನ ಮನವು ತಾನೆಳಸಿತ್ತು |ಅಕಳಂಕ ಹರಿನಾಮ ದಿವ್ಯಕೊದಗಿತ್ತು 2ಇಂದೆನ್ನ ಸಂತತಿಗೆ ಸಕಲ ಸಂಪದವಾಯ್ತು |ಮುಂದೆನ್ನ ಜನ್ನ ಸಾಫಲ್ಯವಾಯ್ತು ||ತಂದೆ ಶ್ರೀಹರಿಪುರಂದರವಿಠಲ ರಾಯನೇ |ಬಂದೆನ್ನ ಹೃದಯದೊಳು ನೆಲೆಯಾಗಿ ನಿಂತ 3
--------------
ಪುರಂದರದಾಸರು
ಬಂದೆಯಾ ಪರಿಣಾಮದಿ ನಿನ್ನಬಂಧು ಬಳಗವನೆಲ್ಲ ಬಿಟ್ಟು ಸನ್ಮಾರ್ಗದಿ ಪಸಂಚೀತ ಪ್ರಾರಬ್ಧ ಕರ್ಮಂಗಳನೆಲ್ಲಕಿಂಚಿತು ಮಾಡಿ ಸಂಕೋಲೆಯ ಹಾಕಿ ||ಮಿಂಚುವ ಧನ - ಪುತ್ರ ದಾರೇಷಣಂಗಳವಂಚಿಸಿ ಕವಲು ದಾರಿಯ ಬಿಟ್ಟು ಮಾರ್ಗದಿ 1ಕಾಮವ ಖಂಡಿಸಿ ದ್ರೋಹವ ದಂಡಿಸಿನಾಮರೂಪ ಕರ್ಮಂಗಳ ನಿಂದಿಸಿ ||ತಾಮಸಕರ್ಮನಡತೆಯ ತಗ್ಗಿಸಿ ನಿರ್ನಾಮ ಮಾಡಿ ಮದ-ಮತ್ಸರಂಗಳನೀಗಿ2ಅಷ್ಟಭೋಗಂಗಳ ನಷ್ಟಂಗಳ ಮಾಡಿಅಷ್ಟೈಶ್ಚರ್ಯವ ಮಟ್ಟು ಮಾಡಿ ||ಅಷ್ಟ ಪ್ರಕೃತಿಗಳ ಕುಟ್ಟಿ ಕೆಡಕಿ ಬಹಳನಷ್ಟತುಷ್ಟಿಗಳಲ್ಲಿ ದೃಷ್ಟಿಯೇನಿಲ್ಲದೆ 3ಸ್ಥೂಲ ಸೂಕ್ಷ್ಮ ಕಾರಣ ದೇಹಂಗಳನೆಲ್ಲಬೀಳುಗೆಡಹಿ ಪಂಚಭೂತಂಗಳ ||ಪಾಳು ಮಾಡಿ ಪಂಚ ಪಂಚ ಇಂದ್ರಿಯಗಳಕೋಳಕೆ ತಗುಲಿಸಿ ಕೊನಬುಗಾರನಾಗಿ 4ಹೊಳೆವ ಪ್ರಪಂಚದ ಬಲೆಯ ಬೀಸಿ ಸಂಗ-ಡಲೆ ಸಾಗಿ ಬರುತಿಹ ದಾರಿಯೊಳು ||ಒಲಿದು ಮುಕ್ತಿಯನೀವ ಪುರಂದರವಿಠಲನುಬಲವನಿತ್ತುದರಿಂದೆ ನಾನು ನೀನೆನ್ನದೆ 5
--------------
ಪುರಂದರದಾಸರು
ಬಂದೆಯಾ ಬಾರೊ ಗೋಪಾಲ ಕೃಷ್ಣಬಂದೆಯಾ ಬಾರೊ ಪ.ಇಲ್ಲಿಯ ಗೊಲ್ಲತೇರೆಲ್ಲರುಬಲ್ಲಿದಕಾಮುಕ ನಲ್ಲೇರುಫುಲ್ಲಲೋಚನ ನಿನ್ನ ಮುದ್ದಿನ ಮೊಗವಮೆಲ್ಲನೆ ಚುಂಬಿಸಿ ಬಿಡರೊ ಮಗುವೆ 1ಚಿಕ್ಕವನೆಂದಾಡಿಸಿ ನಿನ್ನಚಕ್ಕಂದಿಲಿ ಬಾಡಿಸಿ ಚಿನ್ನಸಕ್ಕರೆ ಮಾತಲಿ ಬಿಗಿದಪ್ಪುವರೊಕಕ್ಕಸಕುಚದಂಗನೆ ಗೋಪಿಯರೊ 2ಇರುಳ್ಹಗಲೆನ್ನ ಕಂದನ್ನಮರುಳಿಕ್ಕುವರೆಂದಂಜುವೆ ನಾತರಳನ ಕಾಲಿಂಗೆರಗುವೆ ನೋಡೋತರಳೇರೊಡಗೂಡಾಡಲಿ ಬೇಡೊ 3ನಿಲ್ಲದೆ ನಿನ್ನ ಬರಮಾಡುವರೊಚೆಲ್ವಹ ಹಣ್ಣುಗಳ ನೀಡುವರೊಒಳ್ಳೆ ನಾರೇರನುದಿನ ನಿನ್ನಬುಲ್ಲಿ ಬೆಲ್ಲಕೆ ಮನಸೋತಿಹರಣ್ಣ 4ವಿಗಡೇರ ದೃಷ್ಟ್ಯಾಗಲೆತಗಲಿದವೈ ನಿನ್ನ ಮೈಯಲಿಅಗಲದಿರೆನ್ನ ಪ್ರಸನ್ನವೆಂಕಟನಗಪತಿ ಬಡವರ ಧನವೆ ಕೃಷ್ಣ 5
--------------
ಪ್ರಸನ್ನವೆಂಕಟದಾಸರು
ಬನ್ನಿಗಡ ಸುಜನರೆಲ್ಲ ಪಾವನಕಾಯ ಸುಜನಪ್ರಿಯಪುಣ್ಯ ಸತ್ಯನಾಥಯತಿರನ್ನನ ಪಟ್ಟಣಕಿಂದು ಪ.ಪರಬೊಮ್ಮನೆಂಬುವ ಮನೆದೈವನಾಗಿಹಪರಸುಖವನೀವ ಮರುತದೇವನೆಂಬಾತಪರಮಪದದ ಗುರುವು ಯುಕ್ತಿಯಿಂದ ಕಾಪುರುಷರಗಲಿಸುವಂತೆ ಸತ್ಯನಾಥಪುರಪತಿಗೆ ಬೋಧಿಸುವ ಪರಮವಾರ್ತೆಯ ಕೇಳ 1ನವಭಕುತಿರತುನದಿಂದ ನಿರ್ಮಿತ ಪ್ರಾಕಾರಕೆನವದ್ವೇಷಿಗಳು ದಾಳಿಯಿತ್ತು ಅಂಡಲೆಯಲು ದಾನವಾರಿಯ ನಾಮಾಯುಧವ ಸತ್ಯಾಭಿನವÀÀ ತೀರ್ಥರೆಂಬೊ ಪುತ್ರಗೆ ನೀಡುತಮಾನವ ಹರಿಯೆಂಬಸುರರ ಮಡುಹಿಸುವುದು ನೋಡ 2ಕಾಯಜಚೋರನೆಂಬವ ತಾ ಕಳ್ಳ ಹನ್ನೊಂದರ ಕೂಡಿಕಾಯವೆಂಬ ರಾಜಗೃಹಕೆ ಕನ್ನವಿಕ್ಕುವುದ ಕಂಡುಕಾಯುವ ಜ್ಞಾನೆಂಬ ಭಟನು ಅಟ್ಟಲವನಕೈದು ಚಾಪವ ಸೆಳೆದು ಮಿಕ್ಕು ಚೋರನೀಕಾಯಕಟ್ಟಿಸುವಂಥ ಕರುಣಿಗೆ ನಮಿಸುವ3ಹರಿದಾಸರೆನಿಸುವ ಹಲವು ದೊರೆಗಳುಂಟುಹರದಾರಿಕ್ಕೆಲದಿ ಪಣ್ಯವ ಮಾಡಿ ಸುಧೆüವೀರಿಹರಿತತ್ವ ನಾಣ್ಯದೊಳು ರಾಮನಾಮದಹಿರಿದುಮುದ್ರೆಯನೊರೆದು ಪರಂಪರಹರುಷ ವ್ಯವಸಾಯವುಂಟು ಹಿರಿಯಾಮೃತವುಣ್ಣ 4ಅಭಿನವ ಚಂದ್ರಿಕೆದೋರಿ ಅಭಿಜ್ಞಾನತೆ ಮೆರೆದಅಭೀತ ಮಂಗಳಗಾತ್ರ ಅಮಿತ ಬುಧರಮಿತ್ರಅಭಿಜÕಗುರು ಸತ್ಯನಿಧಿಯ ಸುತ ಸತ್ಯನಾಥಅಭು ಪ್ರಸನ್ವೆಂಕಟೇಶನ ಭಜಕನ ಕವಿತಅಬುಜ ಪರಿಮಳಮಂದಾನಿಲವಿಡಿವಳಿಯಂತೆ 5
--------------
ಪ್ರಸನ್ನವೆಂಕಟದಾಸರು
ಬಯಲಭಾವಿಯ ನೀರಿಗೆ ಬಂದಳೊಬ್ಬಳು ಬಾಲೆ |ಬಾಯಾರಿ ಬಿದ್ದಳು ಕೊಡವೊಡೆಯಿತು ನೀರುರುಳಿತು ಪ.ನೀರಿಲ್ಲದೆ ನೆರಳಿಲ್ಲದೆ ಬೇರಿಲ್ಲದೆ ಸಸಿಹುಟ್ಟಿಹೂವಿಲ್ಲದೆ ಕಾಯಿಲ್ಲದೆ ಅದು ಫಲಕೆ ಬಂದು ||ಕರವಿಲ್ಲದೆ ಕಾಲಿಲ್ಲದೆ ಕೊಯ್ವರಯ್ವರು ಆ ಹಣ್ಣನು |ಮರುಳಾಯಿತು ಮೂವತ್ತು ಸಾವಿರ ಮಂದಿ 1ಕುರುಡ ಕಂಡನು ಸರ್ಪನಡುವಿರುಳು ಬಾಹುದನು |ಮೂಕ ಕಂಡನು ಕನಸ ಕಿವುಡನು ಕೇಳಿದ ||ಇರವು ಹಾರಿತು ಗಗನಕೆ ಮರವು ಮುರಿಯಿತು ನೋಡಿ |ವಿಧಿತನ್ನ ಬೇಟಿಗೆ ಹೋಗುವ ಸಡಗರ ನೋಡಿ2ಕಿಚ್ಚಿನ ಕೊಡದವಳೆ ನೀ ಬಂದೆ ತೋರಣಗಟ್ಟಿ |ರಚ್ಚಿಗೆ ಬಾಹೋರು ನಾಲುವರೊಳಗೆಉಚ್ಚರಿಸಲೂ ಸಲ್ಲ ಕೇಳು ಪುರುಷನ ಸೊಲ್ಲಅಚ್ಚಪುರಂದರವಿಠಲ ತಾನೆ ಬಲ್ಲ 3
--------------
ಪುರಂದರದಾಸರು
ಬರಗಾಲವಲ್ಲವಿದು ಬಳಲದಿರಿಧ್ಯಾನಪ್ರಿಯವು ಆಗೆ ಧನ ಬ್ಯಾರೆ ಪ್ರಿಯನಲ್ಲಅಗ್ಗವಾದಾಗಲಿ ಮುಗ್ಗಿ ಬೆಳುವರೆಮಾರುವಧಾರಣೆಯು ಏರಿ ಇಳುವುದಕೆವರಣ ಆಶ್ರಮಗಳ ಮರಿಯಾದಿಗಳು ತಪ್ಪಿಜ್ಞಾನ ಬರಗಾಲವು ಬಿದ್ದದೆ ಜನಕೆಲ್ಲಪಾಲನೆಯ ಕಾಲವಿದು ಸಂಹಾರ ಕಾಲಲ್ಲಿಹರಿಯ ಮರದಿಪ್ಪುದೆ ಬರಗಾಲ ಬರಗಾಲ
--------------
ಗೋಪಾಲದಾಸರು
ಬರಿದೆ ಬಯಸದಿರಿಹಲೋಕಸುಖವೆಂಬ ಬರಗಿನ ಪಾಯಸವ |ಶರಿಧಿಶಯನನ ಬೇಡೊ ಪರಲೋಕಸುಖವೆಂಬಸೇವಗೆ ಪಾಯಸವ ಪ.ಮುಂದರಿಯದೆ ಮಾಳ್ಪ ಮೂಢನೃಪನ ಸೇವೆ ಮುಗ್ಗುರಾಗಿಯ ಹಿಟ್ಟು |ಮಂದಮತಿಯೆ ನೀನನ್ಯರಲಿ ಬಯಸುವ ನೀಚಮಾರ್ಗವ ಬಿಟ್ಟು ||ಕಂದರ್ಪಜನಕನ ಕಿಂಕರನೆಂಬುವ ಕಲಸೋಗರ ಕಟ್ಟು |ಸಂದೇಹಿಸದೆಪರಾತ್ಪರವಸ್ತು ಮುಕುಂದನಂಘ್ರಿಯ ತಟ್ಟು1ಅಗ್ಗದಾಸೆಗೆ ಸಂಗ್ರಹಿಸದಿರಘವೆಂಬ ಅಡಿಗಂಟು ದವಸವನು |ಬಗ್ಗನುಳಿದು ಸಂಪಾದಿಸು ಪರವೆಂಬ ಪುಣ್ಯದ ದವಸವನು ||ಯೋಗ್ಯರನರಿಯದೆ ಏತಕೆ ಬೇಡುವೆ ಸಾಕಾರ ಕೇಶವನು |ಕುಗ್ಗಗೊಡದೆ ಸಂಸಾರವೆಂತೆಂಬುವ ಕೋಟಲೆ ತಪ್ಪಿಸುವನು 2ಸಕ್ಕರಿ ಚಿಲಿಪಾಲು ಘ್ರತ ರಾಜಾನ್ನಕೆ ಸವಿಯೀವಹರಿಕಥೆಯ - ಬಿಟ್ಟು |ಅಕ್ಕರೆಯಿಂದಪೇಕ್ಷಿಸುವರೆ ನೀ ಅಲ್ಪರ ಸಂಗತಿಯ ||ಸೊಕ್ಕೊಳಿತಲ್ಲೆಲೊ ಮದಡು ಜೀವಾತ್ಮನೆ ಸ್ವಾಮಿಕಾರ್ಯಸ್ಥಿತಿಯ |ಗಕ್ಕನಂತು ಸೇರು ಪುರಂದರವಿಠಲನ ಚರಣಕಮಲದ್ವಿತಯ 3
--------------
ಪುರಂದರದಾಸರು
ಬರಿಯ ಮಾತಲಿಲ್ಲ ಶ್ರೀಹರಿಯ ಪ್ರೀತಿರಣ್ಣ ಮಧ್ವಾಚಾರ್ಯರುಪದೇಶವೆ ಮುಕ್ತಿಪುರದೊಳು ಖ್ಯಾತಿರಣ್ಣ ಪ.ರಂಗನ ಪ್ರತಿಮೆಯನು ಬಿಡದೆ ಬಹಿರಂಗದಿ ಪೂಜೆಯ ಮಾಡಿಕಂಗಳುತುಂಬಲು ಮೆಲ್ಲನೆ ಅಂತರಂಗದಿ ಪೀಠದಿ ನೋಡಿಹಿಂಗದೆ ಗುರುಶಿಕ್ಷಾಕ್ರಮದಲಿ ಧ್ಯಾನಂಗತನಾಗ್ಯೊಲಿದಾಡಿಲಂಘಿಸಿ ಜನ್ಮಾಯುಷಗಳ ತುದಿಯಲಿಮಂಗಳ ಬಿಂಬವ ನೋಡದೆ ನೋಡಿ 1ಒಮ್ಮಿಂದೊಮ್ಮೆ ಹೃದಯದದ್ದಕೆಧರ್ಮವ ಜರಿದರೆ ಹೀನನಿರ್ಮಳ ಶೌಚಾಚಮನವೆ ಗಳಿಸಿದಸಮ್ಯಕ್‍ಜ್ಞಾನ ನಿಧಾನತಮ್ಮವಗುಣ ರೋಗಕೆ ಔಷಧವುಕರ್ಮದ ಮೂಲವೆ ಸ್ನಾನಹಮ್ಮಿಲಿ ಸನ್ಮಾರ್ಗಕೆ ಕುಂದಿಡದೆಇಮ್ಮಡಿ ಸಾಧಿಸಿ ನವನವೀನ 2ಸದ್ವ್ವ್ರತ ದೀಕ್ಷೆಯು ಧ್ರುವಪದ ಮುಕ್ತಿಯುಸುದ್ವಾರವ ಬಿಡಬಹುದೆಮಧ್ವೇಶನ ಮಹಿಮೆಯ ಕೇಳದೆ ರಕ್ಷಾಧ್ವರ ಕಥೆ ಕೇಳಬಹುದೆವಿಧ್ವಂಸಿಸುವ ಚೋರರು ಹೇಳ್ಯಾಡುವಸದ್ವಚನದಿ ಸುಖವಾಹುದೆಅದ್ವಯ ಪ್ರಸನ್ವೆÉಂಕಟೇಶನ ಪಾದಕಮಲದ್ವಯ ಬಿಟ್ಟಗೆ ತಮಸಹುದಹುದೆ 3
--------------
ಪ್ರಸನ್ನವೆಂಕಟದಾಸರು
ಬಲಿಯ ದಾನವಬೇಡಿ | ಚೆಲುವಕಾರವಾಗಿದೆ |ನೆಲನಾ ನಿರಡಿಯಾ ಮಾಡಿದಾಡೆ ನಾನಾ|ಲಲಾನೆ ಮಾಡಿಯಾಲಿಟ್ಟುಶಿರಾ ವಾನೊರಾಸೂಕ್ತ | ಮೊಲೆಯಾನೂಡುವಾ ಪುಣ್ಯ ಹೀಗೆಪಡೆದಾಳೋ | ಮಗಾನೆಂದೂ ಪಮಗಾನೆಂದಾಡಿಸುವಾಳು | ಮೊಗಾನೊಡಿನಗೂವಾಳು |ಮಿಗೆ ಹರೂಪದಾಲಿ ಲೊಲಾಡುವಾಳೂ |ಜಗಾದೂರಂಗಾಗಿ | ಮೊಗ ಬಂದು ರಕ್ಷಕ |ಬಿಗಿದಪ್ಪೊ ಪುಂಣ್ಯ ಹೇಗೆ ಪಾಡದಾಳೊ 1ಪಶೂಪಾಲೆಯರೂ | ಬ್ರಂಹ್ಮವನೂ ನೂರಮುನಿಗಳು |ವಸುಧಯ ಮಲುಳಿದಾವರೆಲ್ಲಾರು | ಶಶಿಮೌಖಿಸಾವಿರಾ |ವರಹಾವಿತ್ತವಾನೆಂದೂ | ಕೊಸಾರಾನಿಡುವಾ ಪುಣ್ಯಹೇಗೆ ಪಡದಾಳೊ 2ಸಾಗಾರಾ ಸುತಿಯಾರು |ಭೋಗಿ ಯನಾನಾ |ಯೋಗಾನಿದ್ರೆಯೊಳದ್ಯ ದೇವನಾ |ಆಗಾಮಾ ಶೃತಿಗಾಳು | ಆರಾರೆ ಕಾಣದ ವಾಸ್ತುವ |ಕೂಗಿದಾಳೆ ಪುಂಣ್ಯ ಹೇಗೆ ಪಾಡದಳೋ 3ಕಾಲಲಂದ್ಹುಗೆಕಿಂಕಿಣಿ ಹೊಂನ್ನು ಕಿರೂಗೆಜ್ಜೆ |ಹಾರಾಸಾರದಾ ಕೊರಾಳಾ ಪಾದಾಕಾ | ಬಾಲದೊಡಿಗೆಸಮ್ಮಬಾಲಾನಾಯತ್ತಿಕೊಂಡು | ಹಾಲಾಕೂಡಿಸುವಾ ಪುಂಣ್ಯಹೇಗೆ ಪಾಡಾದಾಳೊ 4ತೋಳಂನಾಡೆಲೊ ಕೃಷ್ಣ ಕೊಳಂನಾಡಿಸುಕಾಲಿ |ಭಾಮೆರೂಕಮಿಣಿ ಬಿಗಿದಪ್ಪುವಾ |ಭಾಮರೂಕೂಮಿಣಿ ಬಿಗಿದಾಪ್ಪುವಾ ನೆಲನಾ ತೊಳಂನಾಡಿಸುವಪುಣ್ಯ ಹೇಗೆ ಪಾಡದಾಳೊ 5ಆನೆಯೊಡೆಲೊ ಕೃಷ್ಣ | ಆನೆಯೊಡೆನೂಲಾಲಿರಾಯರಾಯರೂಗಾಗೆಲಿದಂತ | ರಾಯಾ ರಾಯಾಕೂ ಗಾಲಾ ಪಟ್ಟದಾನೆಯಾಡಿಸುವ ಪುಂಣ್ಯಹೇಗೆ ಪಡದಾಳೋ 6
--------------
ಪುರಂದರದಾಸರು
ಬಲ್ಲವನಾದರೆ ಈ ತಳ್ಳಿಬೇಡ |ಅಲ್ಲದಪಥಇದರಾಸೆಯ ಬಿಡು ನೀನುಪ.ಸರ್ಪನ ಪಣೆಯೊಳು ಜೇನು ತುಪ್ಪವ ಕಂಡು |ಅಪ್ಪನೆ ತಾರೆಂದು ಅಳುತಿರಲು ||ತುಪ್ಪದ ಸವಿಯನು ಜನರುಂಡುತೀರಲು |ಮುಪ್ಪಾಗಿ ಇರುವುದ ಕಂಡು ಮೂದಲಿಸುವ 1ನಂಬಿದ ಮನುಜರ ಹಂಬಲ ಮರೆವುದು |ಡೊಂಬಿಯವರು ಕಂಡು ತಡೆಯಲಾಗಿ ||ಕುಂಭದ ರೊಕ್ಕದ ಲಂಚವನಿತ್ತಲ್ಲಿ |ಅಂಬರವನು ಕಂಡು ನಗುತಿಪ್ಪ ಮನುಜನ 2ಅಂಬರವಡಗಿಯೆಕುಂಭಿನಿ ಜಾರಿಯೆ |ನಂಬಿದ ಮನುಜರು ನಡೆವಡೆಯೆ ||ಕುಂಭದ ನೀರನು ಚೆಲ್ಲುತ ಮಗುಳಲ್ಲಿಕಂಬದ ಹಾಗೆಯೆ ನಿಂತಿಹ ನರನು 3ಇಟ್ಟಿಹ ಬಾಗಿಲ ಕಾಣದೆ ತಾ ಬಂದು |ಹೊಟ್ಟೆಯ ಬಗಿದಲ್ಲಿ ಹೊರವಂಟ ವೇಳೆ ||ಕಟ್ಟಿದ್ದು ಕರಗಿಯೆ ಸೆಟ್ಟೆಲೆ ಒಣಗಿಯೆ |ದುಷ್ಟನೊಬ್ಬನು ಬಂದು ನಿಂತಿಹನು 4ಕಡಹದ ಪಲ್ಲಕ್ಕಿ ಬೆಡಗನು ಕಾಣುತ |ಅಡವಿಯಮೃಗ ಬಂದು ಕುಳಿತಿರ್ದುದ ||ಒಡನೆ ಕಟ್ಟಿದ ವಾಹಕರು ಹದಿನಾರು ಮಂದಿ |ಕಡಮೆಯ ಸಂಬಳ ತಡವಿಡುವವರನು 5ಅಕ್ಕಿಯ ರಾಶಿಯು ತೀರಲು ಕೊಳಗವು |ಬೆಕ್ಕಸ ಬೆರಗಾಗಿ ಕುಳಿತಿಪ್ಪದು ||ಬಿಕ್ಕಿದ ಅಕ್ಕಿದ ಹಕ್ಕಿಯು ಹಕ್ಕಿಯೆ |ಗಕ್ಕನೆ ಹಾರವ ಪಕ್ಷಿಯ ನೋಡುತ 6ಇರುತಿರೆ ಗಣಿತದಿರವಿಶಶಿ ಒಂದಾಗಿ |ಧರೆಯೊಳು ಸಾವಿರ ಎಲೆ ಬೀಳ್ವುದು ||ಎರವಿನಾಭರಣವ ಅವರವರೊಯ್ಯಲು |ಪುರಂದರವಿಠಲನ ಮೊರೆಬೀಳು ಕಂಡೆಯ 7
--------------
ಪುರಂದರದಾಸರು
ಬಲ್ಲವರು ಮೊರೆ ಹೋಗುವರೆ ನೀನಾವಬಲ್ಲಿದನೆಂದೆನ್ನನುಪೇಕ್ಷಿಪೆ ರಂಗ ಪ.ಸಲ್ಲದವನು ಸಾಲಗೂಳಿ ನೀ ಎಂದೆನ್ನಕ್ಷುಲ್ಲನ ಮಾಡಿ ನೀಕರಿಸದಿರೊಒಳ್ಳೆ ಸತ್ಯವ್ರತರ ಋಣ ನುಂಗಿ ಸೆರೆಸಿಕ್ಕಿಕಲ್ಹೊತ್ತು ಪುಲ್ಗಚ್ಚಿ ಹಲ್ದೆರೆದೆ ನೀನು 1ಬೇಡಿ ತಿರಿದು ಉಂಬ ಬಡವ ಛೀ ಸಾರೆಂದೀಡಾಡುವುದುಚಿತೆ ನೀ ನೃಪನೊಂಚಿಸಿಬೇಡಿ ಮನೆಯ ಕೊಂಡೆ ನೀರಿನರಸನಲ್ಲಿರೂಢಿಯ ಗೂಡ ಬಿಟ್ಟೋಡಿದೆತುಡುಗ2ನಾ ದೋಷಪೂರ್ಣನೆನುತ ಮನ ಬಲ್ಲದುನೀ ದೋಷದೂರನುಶ್ರುತಿಬಲ್ಲವುಭೂದೋಷಹರ ಪ್ರಸನ್ವೆಂಕಟೇಶ ತಿಳಿಯದೆನಾ ದಾಸನಾದೆ ನಾಮಸ್ವಾದಕ್ಹುಚ್ಚಾದೆ 3
--------------
ಪ್ರಸನ್ನವೆಂಕಟದಾಸರು