ಒಟ್ಟು 558 ಕಡೆಗಳಲ್ಲಿ , 91 ದಾಸರು , 395 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸೈಶಬಾಸ ಗಬರು ದರೋಡೆ ಬರತದಅಬಬ್ಬ ನೋಡಿದರೆ ಆರ್ಭಟಸಬಬ ಐತಿದು ಸಾಧುರ ಪುಣ್ಯಶುಭನುಡಿಯುತದ ಶಕುನದ ಹಕ್ಕಿಪಐದು ಮಂದಿ ನೆಲೆಗಳ್ಳರು ಕೂಡಿಊರ ಆತ್ಮದಲಿ ಸೇರುವರುಐಕ್ಯದಿಂದ ಶ್ರೀ ಗುರುವಿನ ಕೂಡಿಐದು ಮಂದಿ ಬಿಟ್ಟೋಡುವರು1ಎಂಟು ಹತ್ತು ಮಂದಿ ಬಂಟರು ಕೂಡಿಮುತ್ತಿಗೆ ಹಾಕಿ ನಿನ್ನ ಕೆಡಿಸುವರುಸತ್ಯನಾದ ಶ್ರೀ ಗುರುವಿನ ನೆನೆದರೆಹತ್ತು ಮಂದಿ ಬಿಟ್ಟೋಡುವರು2ನೋಡಿ ಬಗೆಯೋ ನಿನ್ನ ಕಾಡವು ಹುಲಿಗಳುಬೇಡಿದ ಪದಾರ್ಥ ದೊರಕುವುದುಕೂಡಿ ಭಜಿಸೊ ಶ್ರೀ ಚಿದಾನಂದನಮೂಲ ಮಂತ್ರಪ್ರಣವದೊರಕುವುದು3
--------------
ಚಿದಾನಂದ ಅವಧೂತರು
ಸೈಸಲಾರೆನೆಗೋಪಿನಿನ್ನ ಮಗನ ಲೂಟಿ |ಏಸೆಂದು ಪೇಳಲಮ್ಮ ||ವಾಸುದೇವನು ಬಂದು ಮೋಸದಿಂದಲಿ ಎನ್ನ |ವಾಸವಸೆಳಕೊಂಡು ಓಡಿ ಪೋದನಮ್ಮಪದೇವರ ಪೆಟ್ಟಿಗೆ ತೆಗೆದು ಸಾಲಿಗ್ರಾಮ |ಸಾವಿರ ನುಂಗುವನೆ ||ಭಾವಜನಯ್ಯಇದೇನೆಂದರೆ ನಿಮ್ಮ |ಕಾಮದೇವರು ನಾನು ಕೇಳಿಕೊ ಎಂಬನೆ 1ಅಗ್ರೋದಕತಂದು ಜಗುಲಿ ಮೇಲಿಟ್ಟರೆ |ವೆಗ್ಗಳದಲಿ ಕುಡಿವ ||ಮಂಗಳ ಮಹಿಮನ ವಿೂಸಲೆಂದರೆ ನಿಮ್ಮ |ಮಂಗಳಮಹಿಮನ ಅಪ್ಪನಾನೆಂಬುವ 2ಅಟ್ಟಡಿಗೆಯನೆಲ್ಲ ಉಚ್ಛಿಷ್ಟವ ಮಾಡಿ |ಅಷ್ಟು ತಾ ಬಳಿದುಂಬನೆ ||ವಿಷ್ಣು ದೇವರ ನೈವೇದ್ಯವೆಂದರೆ ನಿಮ್ಮ |ಇಷ್ಟದೇವರು ತೃಪ್ತನಾದನೆಂತೆಂಬುವ 3ಋತುವಾದ ಬಾಲೆಯರು ಪತಿಯೆಡೆ ಪೋಪಾಗ |ಕೃತಕದಿಂದಡಗಿಹನೆ ||ಮತಿಗೆಟ್ಟ ಪೆಣ್ಣೆ ಸುಂಕವ ಕೊಡು ಎನುತಲಿ |ಪ್ರತಿಯಾಗಿ ಮಾರನ ಸೂರೆಗೊಂಬುವನೆ 4ಅಚ್ಚಪಾಲು-ಮೊಸರುನವನೀತಮಜ್ಜಿಗೆ |ರಚ್ಚೆಮಾಡಿ ಕುಡಿವ ||ಅಚ್ಚ ಪುರಂದರವಿಠಲರಾಯನ |ಇಚ್ಛೆಯಿಂದಲಿ ನಿಮ್ಮ ಮನೆಗೆ ಕರೆದುಕೊಳ್ಳಿ 5
--------------
ಪುರಂದರದಾಸರು
ಸ್ವಾಮಿಪರಾಕುಮಹಾಸ್ವಾಮಿ ಸಜ್ಜನಪ್ರೇಮಿಪ.ಕ್ಷೀರಸಾಗರಶಯನ ನಿವಾಸಾಪಾರಗುಣಗಣಾಶ್ರಯಪಾರಮೇಷ್ಠಿ ಪ್ರಮುಖಾಮರಪೂಜಿತಚಾರುಪದಾಬ್ಜದ್ವಯ ದನು-ಜಾರಿ ಧನಂಜಯಪ್ರಿಯ ಮದವಾರಣಕೃತನಿರ್ಭಯ ನಮ್ಮದೂರನುಲಾಲಿಸುಚಿನ್ಮಯ ಜಯ1ದುಷ್ಟ ನಿಶಾಚರರಟ್ಟುಳಿಘನಕಂಗೆಟ್ಟುದು ಸುರಮುನಿಗಣ ಆಭ್ರಷ್ಟರು ಮಾಡುವ ನಿಷ್ಠುರಕೆ ಮೈಗೊಟ್ಟೆವು ಸಂಕರ್ಷಣ ನಾವಿ-ನ್ನೆಷ್ಟೆಂಬುದು ದುರ್ಗುಣವಶ ಬಿಟ್ಟೆವು ಸುರಪಟ್ಟಣ ನಮ್ಮಕಷ್ಟವು ಪದಕರ್ಪಣ ಪರಾಯಣ 2ಅಂತರಂಗ ಬಹಿರಂಗ ಭ್ರಷ್ಟದನುಸಂತತಿ ಸಂತತಿ ಭಾರಿ ಬಲುಭ್ರಾಂತಿವಿಜ್ಞಾನವಿತಾನಧುರೀಣರ್ಸಂತಾಪಿಪರು ಮುರಾರಿ ನಮ್ಮಸಂತೈಸೈ ಗಿರಿಧಾರಿ ಶ್ರೀಕಾಂತ ಕೃಪಾರ್ಣವಶೌರಿಜಗ-ದಂತ ವಿಹಾರಿ ನಿರಂತ ಪರಂತಪ 3ಚೆನ್ನಕೇಶವ ಚರಾಚರಾತ್ಮ ಚೈತನ್ಯರೂಪ ಶ್ರೀರಂಗ ನಮ್ಮಬಿನ್ನಪಲಾಲಿಸುತ್ರಿಭುವನವನ್ನುಸನ್ನುತಶುಭಾಂಗ ಸ-ರ್ವೋನ್ನತ ಮಹಿಮತರಂಗದುರಿತಾನ್ವಯತಿಮಿರಪತಂಗ ಸುಪ್ರಸನ್ನಸದೋದಿತವಿಹಂಗತುರಂಗ4ನೀಲೇಂದೀವರ ಶ್ಯಾಮಲ ಕೋಮಲಕಾಲನಿಯಾಮಕ ಪ್ರಾಣ ನಿನ್ನೋಲಗ ಸೇವಕರಾಳಿಯೂಳಿಗವ ಕೇಳು ತ್ರಿಲೋಕತ್ರಾಣನತಪಾಲ ಪರೇಶ ಪುರಾಣ ಶ್ರೀಲೋಲ ವಿಗತ ಪರಿಮಾಣ ಹೃದ-ಯಾಲಯಮಣಿ ಲಕ್ಷ್ಮೀನಾರಾಯಣ 5
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಹನುಮ-ಭೀಮ-ಮಧ್ವ60ಕರುಣಿಸೈಹರಿಚರಣಸೇವೆ ನಿರುತಪಪರಿಪರಿಯ ಕ್ಲೇಶಗಳ ಪರಿಹರಿಸುತ ಪೊರೆವದುರಿತದೂರ ಹರಿಯಚರಣಸೇವಕನೆಅ.ಪಕಂಜಾಕ್ಷನ ದಯದಿ ಅಂಜದೆ ನೀರಧಿಯಹಿಂಜರಿಯದೆ ದಾಂಟಿ ಸಂಜೆ ಕಳೆಯೆ ಲಂಕೆರಂಜಿಸುವದು ಕಂಡು ಕಂಜಾಕ್ಷಿಗುಂಗುರ ಪ್ರ-ಭಂಜನನೀಡಿದೆಯೊ ಅಂಜನೆಯತನಯ1ದುರಳ ದೈತ್ಯನಾದ ಜರೆಯ ಸುತನ ಸೀಳಿಹರಿಗರ್ಪಿಸಿ ಸರ್ವವನು ಧರಣಿ ಭಾರನಿಳುಹಿಹರಿಯ ಮನವನರಿತು ಪರಿಪರಿಲಿ ಸೇವಿಸುತಪರಮಭಕ್ತನಾದೆ ಪರಿಸರನೆ ಸಲಹೊ2ಮುದ್ದು ಕೃಷ್ಣನ ಸೇವೆ ಶುದ್ಧಮನದಿ ಮಾಡಿಸದ್ವೈಷ್ಣವರ ಕುಲದ ಪದ್ಧತಿಯನರುಹಿಪದ್ಮನಾಭಕಮಲನಾಭ ವಿಠ್ಠಲನೊಲಿಸಿಸದ್ಗ್ರಂಥಗಳ ರಚಿಸಿ ಉದ್ಧರಿಸಿದೆ ಜಗವ 3
--------------
ನಿಡಗುರುಕಿ ಜೀವೂಬಾಯಿ
ಹರಿಹರಿಯೆನಲಿಕ್ಕೆ ಹೊತ್ತಿಲ್ಲ-ರಂಗಯ್ಯ |ಹರಿಹರಿಯೆನಲಿಕ್ಕೆ ಹೊತ್ತಿಲ್ಲ ಪಧಾರಣೆಯ ಮಾಡುವಾಗ ಪಾರಣೆಯ ಚಿಂತೆ |ದೂರಯಾತ್ರೆ ಮಾಡುವಾಗ ಧಾರಣೆಯ ಚಿಂತೆ 1ನಿತ್ಯಯಾತ್ರೆ ಮಾಡುವಾಗ ಪುತ್ರರ ಮೇಲಿನ ಚಿಂತೆ |ಎತ್ತ ನೋಡಿದರತ್ತ ಉದರದ ಚಿಂತೆ 2ಸ್ನಾನವನ್ನು ಮಾಡುವಾಗಮಾನಿನಿಮೇಲಿನ ಚಿಂತೆದಾನವನ್ನು ಕೊಡುವಾಗಧನದಮೇಲಿನ ಚಿಂತೆ3ದೇವತಾರ್ಚನೆ ಮಾಡುವಾಗ ಸಂಸಾರದ ಚಿಂತೆ-ಅ-|ದಾವಾಗ ನೋಡಿದರು ಪರರ ಕೇಡಿನ ಚಿಂತೆ 4ಗಂಗೆಯ ಮೀಯುವಾಗ ತಂಬಿಗೆ ಮೇಲಿನ ಚಿಂತೆ |ಸಂಗಡ ಬಂದವರೆಲ್ಲ ಹೋಗುವರೆಂಬ ಚಿಂತೆ 5ಡಂಭಕತನಕೆ ಸಿಕ್ಕಿ ಭಂಗವ ಪಡುವೆ ತಂದೆ |ಇಂಬನಿತ್ತು ರಕ್ಷಿಸೈ ಪುರಂದರವಿಠಲನೆ 6
--------------
ಪುರಂದರದಾಸರು