ಒಟ್ಟು 1713 ಕಡೆಗಳಲ್ಲಿ , 104 ದಾಸರು , 1194 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ತೊರವಿ ನರಸಿಂಹನ ಸ್ತೋತ್ರ ನರಹರೀ | ಪಾಲಿಸೊ ಎನ್ನ | ನರಹರೀ ಪ ನರಹರೀ | ನಮಿಸೂವೆ ನಿನ್ನ | ಚಾರುಚರಣ ಕಮಲಕ್ಕೆ ಮುನ್ನ | ಅಹತೊರವಿ ಕ್ಷೇತ್ರದಲ್ಲಿ | ಪರಿಪರಿ ಭಕುತರಮೊರೆಯ ಕೇಳ್ಕರುಣದಿ | ವರವ ನೀಡುತಲಿಹ ಅ.ಪ. ಪೂರ್ವ ಸಾಲಿಗ್ರಾಮ ರೂಪ | ದಲ್ಲಿದೂರ್ವಾಸ ಪೂಜಿತ | ರೂಪ | ಇದ್ದುಓರ್ವ ಭಕ್ತನಿಗೆ ಸಲ್ಲಾಪ | ತೇಜಗೈವದ ಕೇಳ್ವದು ಅಪರೂಪ | ಅಹಊರ್ವಿಯೊಳ್ ಚಿಮ್ಮಲಗಿ | ಸರ್ವಾಧಿಕವು ಕ್ಷೇತ್ರಇರ್ವೆ ನಾನಲ್ಲೀಗ | ತರ್ವೋದು ತೊರವೀಗೆ 1 ಸೊಲ್ಲ ಲಾಲಿಸಿ ಗಾಢ ಭಕ್ತ | ಎದ್ದುಚೆಲ್ಲೀದ ವಾರ್ತೆ ಸರ್ವತ್ರ | ಜನರಲ್ಲಸ ಗೊಳದೆ ಮುಂದತ್ತ | ಹಸಿಹುಲ್ಲನು ತೆಂಕದಿಶಿಯಿತ್ತ | ಅಹಚೆಲ್ಲುತ ಪೋಗುತಿರೆ | ಜ್ವಲೀಸಿತದುಚಿಮ್ಮಲ್ಲಿಗಿ ಊರ್ಬಳಿ | ಒಳ್ಳೆ ಕೃಷ್ಣಾತೀರ 2 ಸ್ವಪ್ನ ಸೂಚಿತ ತಾಣ ಬಗೆದು | ನೋಡೆಅಪ್ಪ ನೃಹರಿ ಕಂಡನಂದು | ಭಕ್ತರಪ್ಪಿ ಆನಂದಾಶ್ರು ಬಿಂಧು | ಕೈಚಪ್ಪಾಳೆ ಬಡಿದುಘೇಯೆಂದು | ಆಹಅಪ್ಪಾರ ಮಹಿಮನ | ಗೊಪ್ಪಾದ ಘನಮೂರ್ತಿಉಪ್ಪರಿ ತಂದಿಡುತ | ದರ್ಪದಿ ನಿಂತರು 3 ಶಿರಿ ಹಾಗೂ ಪ್ರಹ್ಲಾದರಾಯ | ಯುಕ್ತಹಿರಣ್ಯಕನ ತನ್ನ ತೊಡೆಯ | ಮೇಲೆಇರಿಸಿ ಉದರ ಸೀಳ್ದ ಬಗೆಯ | ಕೇಳಿಕರುಳನು ಮಾಲೆಯ ಪರಿಯ | ಆಹಧರಿಸುತ್ತ ತೋರ್ದನು | ಹಿರಣ್ಯಕಶಿಪೂಜತರಳ ಭಕ್ತನ ತೆರ | ತರಳನರಿದಿಷ್ಟೆಂದು 4 ಶಿಷ್ಟ ಮತ್ಸ್ಯಾವತಾರ | ಯುಕ್ತಶ್ರೇಷ್ಠ ಪ್ರಭಾವಳಿಹಾರ | ಸುವಿಶಿಷ್ಟದಿ ನರ ಮೃಗಾಕಾರ | ನಾಗಿಅಷ್ಟವು ಭುಜಯುಕ್ತಾಕಾರ | ಆಹಶಿಷ್ಟ ಭಕ್ತರಿಂದ ಕಷ್ಟವಿಲ್ಲದೆ ತೆರಳಿಶ್ರೇಷ್ಠ ತೊರವಿಯಲ್ಲಿ ಇಷ್ಟನಾಗಿ ನಿಂದ 5 ಮುನ್ನಿದ್ದ ನೃಹರಿಯ ಶಿಲೆಯ | ಕೊಂಡುಚೆನ್ನ ತೀರ್ಥದಿ ನರಹರಿಯ | ಇಡಲುಕೃಷ್ಣೆಗೆ ಪೋಗುವ ಪರಿಯ | ಪೇಳೆಘನ್ನ ಮೂರ್ತಿಯ ಒಯ್ದ ಬಗೆಯ | ಆಹ ಇನ್ನು ಮುನ್ನು ಪೇಳ್ವ | ನನ್ನೆಯ ಜನರಿಹರು ಮನ್ನಿಸುತೀವಾರ್ತೆ ಚಿನ್ಮಯನ ಕೊಂಡಾಡಿ 6 ಗುಪ್ತಾವು ಗಂಗಾ ಸನ್ನಿಹಿತ | ತೀರ್ಥಉತ್ತಮ ದಿಂದಭಿಷೇಚಿತ | ನಾಗಿನಿತ್ಯವು ಪವಮಾನ ಸೂಕ್ತ | ಪಂಚಯುಕ್ತವು ಪೂಜಾದಿ ಕೃತ | ಆಹಭಕ್ತಿ ಪೂರ್ವಕವಾದ | ಉತ್ತಮ ಸೇವೆಯನಿತ್ಯ ಕೈಗೊಳ್ಳುತ | ಭಕ್ತರಭೀಷ್ಟದ 7 ಮಾಸ | ಎರಡುಉತ್ಸವ ವೈಭವ ಘೋಷ | ಕೇಳಿ ಕುತ್ಸಿತ ಜನರೊಲ್ಲ ಈಶ | ಅಂತೆ ಸಚ್ಛಾಸ್ತ್ರ ಪ್ರವಚನ ಪೋಷ | ಆಹವತ್ಸಾರಿ ದುರುಳನ | ಕುತ್ಸಿತ ಉದರವವಿಸ್ತ್ರುತ ನಖದಿಂದ | ಕುತ್ತಿದ ಚಿಂತಿಸು 8 ನರಹರಿ ನಾಮಕ ಕವಿಯು | ಇಲ್ಲಿತೊರವಿಯ ನರಹರಿ ಸನಿಯ | ಚೆಲ್ವವರರಾಮ ಕಥೆಯನ್ನು ಬರೆಯು | ಅವ - ಕುವರ ವಾಲ್ಮೀಕಿಯೆ ಮೆರೆಯು | ಆಹತೊರವೆ ರಾಮಾಯಣ | ವಿರಚಿತ ವಾಯ್ತಿಲ್ಲಿಹರಿಯನುಗ್ರಹ ಜಾತ | ವರ ಕವಿತೆ ಉಲ್ಲಾಸ 9 ಹೃದಯ ಗುಹೆಯಲ್ಲಿ ವಾಸ | ಉಪನಿಷದು ಪೇಳ್ವದು ಅಂತೆಲೇಸ | ಬಲುಮುದದಿಂದ ಮಾಳ್ಪದ ವಾಸ | ಅಂಥಬುಧಜನಕಹುದು ಸಂತೋಷ | ಆಹವಿಧವು ಈ ಪರಿಯೆಂದು | ವಿಧಿಸಲು ಜಗತೀಗೆಹದುಳದಿ ತೊರವಿ ಸ | ನ್ನಿಧಿ ಗುಹೆಯೊಳುವಾಸ 10 ವಿಭವ | ದಿಂದಲೀವನು ಮುಕ್ತಿಯ ಸುಖವ | ಈತಕೈವಲ್ಯಾಕಧಿಪತಿ ಇರುವ | ಆಹತಾವಕನಾಗಿ ಗುರು | ಗೋವಿಂದ ವಿಠಲನಭಾವದಿ ನೆನೆವಂಗೆ | ತೀವರ ವರವೀವ11
--------------
ಗುರುಗೋವಿಂದವಿಠಲರು
ತೋರೊ ತೋರೊ ನಿನ್ನ ಚರಣವ ಪ ಸಾರಥಿ ಕೋರಿ ಭಜಿಪೆ ಬೇಗ ಬಾರೊ ಗುರುವರ ಅ.ಪ ವೋ ಮಧ್ವಮುನಿರಾಯ ವಂದಿಪೆ ಜೀಯ 1 ತಾವರೆಗಣ್ಣನದಾಸವರ್ಯನೆ 2 ದಿಟ್ಟ ಶ್ರೀ ಗುರುರಾಮವಿಠ್ಠಲರಾಯನ ಪಟ್ಟದಾನೆಯು ನೀನು ಪಾಲಿಸೆಮ್ಮನು 3
--------------
ಗುರುರಾಮವಿಠಲ
ತ್ತಾತ್ವಿಕವಿವೇಚನೆ ಏಕ ಪಂಚಾಶದ್ವರ್ಣವಾಚ್ಯ ಶ್ರೀಕಳತÀ್ರನೆ ಸರ್ವಶಬ್ದಗೋಚರನಯ್ಯ ಪ ಕಾಯ ಕಾರ್ಯಕಾರಣವನನುಸರಿಸಿ ತ್ರಿಕರಣದೊಳಗಿದ್ದು ಕ್ರಿಯವ ನÀಡೆಸುವ ದೇವಅ.ಪ ಅಜಾನಂದೇಂದ್ರೇಶ ಶಿರ ಮುಖ ನೇತ್ರದೊಳು ನಿಜರೂಪ ಉಗ್ರ ಊರ್ಜ ಕರ್ಣದೊಳು ನಿಜ ಋತುಂಬರ ಋಘನಾಸದಲ್ಲಿ ಲೃಶಾ ಲೃಜ ವರ್ಣವಾಚ್ಯ ಗಂಡ ಸ್ಥಳದಲ್ಲಿಪ್ಪ 1 ಅನಂತಾರ್ಥಗರ್ಭನೆ ನೀ ವಾಚಿಯಲ್ಲಿ 2 ಕಪಿಲ ಖಪತಿ ಗರುಡ ಘರ್ಮ ದಕ್ಷಿಣಭುಜದೊಳ್ ಅಪರಿಚ್ಛಿನ್ನನೇ ನೀನು ಸಂಧಿಗಳಲಿ ಸುಫಲದಾತನೆ ಙಸಾರನಾಮದಲಿದ್ದು ಅಂಗುಲ್ಯಾಗ್ರದಲ್ಲಿ ನೀ ನಿರುತರಲಿ ನೆಲಸಿರ್ಪೆ 3 ಝೂಟಿತಾರ ವರ್ಣವಾಚ್ಯವ ಮಾಡಿ ನಿರುತದಲಿ ವಾಮಭುಜ ಸಂಧಿಗಳಲ್ಲಿರುವೆ ಬೆರಳ ಅಗ್ರದಿ ಞಮನಾಮದಲಿ ನೆಲೆಸಿರುವೆ 4 ಟಂಕ ಠಲಕ ಡರೌಕ ಢರಣಣಾಕ್ಮಕ ನೀ ನಾ ಟಂಕ ರಹಿತ ದಕ್ಷಿಣ ಪಾದದಲ್ಲಿ ಬಿಂಕವಿಲ್ಲದೆ ತಾರ ಥಪತಿ ದಂಡಿ ಧನ್ವೀ ನಮ್ಯನಾಮನೆ ವಾಮಪಾದ ಸಂಧಿಗಳಲ್ಲಿ 5 ಪರಫಲಿ ವರ್ಣವಾಚ್ಯ ದೇಹದಪಾಶ್ರ್ವ ಬಲಿ ಭಗನಾಮ ಪೃಷ್ಟ ಗುಹ್ಯದಲಿ ನಿರುತ ಮನ ವರ್ಣವಾಚ್ಯ ನೆನಿಸಿಹೆ ದೇವ ತುಂದಿ ಸ್ಥಾನದಲಿ ಎಂದೆಂದು ನಿಂದೆ6 ಯಜ್ಞ ಹೃದಯದಿ ರಾಮ ತ್ವಕ್‍ಲಕ್ಷ್ಮೀಪತಿ ರುಧಿರ ಶಾಂತಸಂವಿತ್ ಮಾಂಸದಲ್ಲಿ ಸುಜ್ಞ ಷಡ್ಗುಣ ಮಜ್ಜ ಸಾರತ್ಮ ಅಸ್ತಿಯು ಹಂಸ ಸ್ನಾಯುಳಾಳುಕ ನೀ ಪ್ರಾಣದಲ್ಲಿ 7 ಕ್ಷಕಾರವಾಚ್ಚ ಶ್ರೀ ಲಕ್ಷ್ಮೀ ನರಸಿಂಹ ಕ್ಷರ ಜೀವರಾ ದೇವ ಸರ್ವ ಸ್ಥಳದಲ್ಲಿಪ್ಪ ಶ್ರೀಕರಾರ್ಚಿತ ನಿನ್ನ ವಾಕ್ ಮನೋರೂಪಗಳು ಸಕಲ ಸಚ್ಛಾಸ್ತ್ರಾಗಮಗಳಾಗಿಹವೋ 8 ಸ್ವರವರ್ಣ ಸಂಯುಕ್ತ ಶಬ್ದವಾಕ್ಯದಿ ಸಕಲ ಪುರಾಣಾಗಮದಿ ಶಾಸ್ತ್ರ ಸರ್ವದಿ ನಿತ್ಯ ನಿರುತ ನಿನ್ನನುದಿನದಿ ಪೊಗಳುತಿಹವೋ 9 ಸ್ವಪ್ರಯೋಜನಕಾಗಿ ವರ್ಣ ಭೇದದಿ ವಾಕ್ಯ ಅಪ್ರಕೃತವಾಗೆಷ್ಟೋ ನಾನುಚ್ಚರಿಸಿದೆ ಸ್ವಪ್ರಯೋಜನ ರಹಿತ ಶ್ರೀವೇಂಕಟೇಶ ಶ್ರೀ ಉರಗಾದ್ರಿವಾಸ ವಿಠಲ ಜಗದೀಶ10
--------------
ಉರಗಾದ್ರಿವಾಸವಿಠಲದಾಸರು
ತ್ವರದಿ ಭಜಿಪೆ ನಮ್ಮ ಗುರುಪಾದಾಂಬುಜ ಕೆರಗುತಲನುದಿನ ಭಕುತಿಯಲಿ ಪ ನೆರೆನಂಬಿದವರ ಬಿಡದೆ ಪೊರೆವರೆಂಬ ಉರುತರ ಕೀರ್ತಿಯ ಸ್ಮರಿಸುತಲಿ ಅ.ಪ ಭವ ಬಂಧನದಿ ಬಳಲುವ ಮಂದಿಗಳನು ಉದ್ಧರಿಸುವರ ಮಂದಮತಿಗಳಾದರು ನಿಂದಿಸದಲೆ ಮುಂದಕೆ ಕರೆದಾದರಿಸುವರ ಬಂಧು ಬಳಗ ಸರ್ವಬಾಂಧವರಿವರೆಂದು ಒಂದೆ ಮನದಿ ಸ್ಮರಿಸುವ ಜನರ ಕುಂದುಗಳೆಣಿಸದೆ ಕಂದನ ತೆರದೊಳು ಮುಂದಕೆ ಕರೆದಾದರಿಸುವರ 1 ಗುಪ್ತದಿಂದ ಶ್ರೀಹರಿನಾಮಾಮೃತ ತೃಪ್ತಿಲಿ ಪಾನವ ಮಾಡಿಹರ ನೃತ್ಯಗಾಯನ ಕಲಾನರ್ತನದಿಂ ಪುರು- ಷೋತ್ತಮನನು ಮೆಚ್ಚಿಸುತಿಹರ ಸರ್ಪಶಯನ ಸರ್ವೋತ್ತಮನನು ಸರ್ವತ್ರದಲಿ ಧ್ಯಾನಿಸುತಿಹರ ಮತ್ತರಾದ ಮನುಜರ ಮನವರಿತು ಉ- ನ್ಮತ್ತತೆಯನು ಪರಿಹರಿಸುವರ2 ಕಮಲನಾಭ ವಿಠ್ಠಲನು ಪೂಜಿಸಿ ವಿಮಲಸುಕೀರ್ತಿಯ ಪಡೆದವರ ಶ್ರಮಜೀವಿಗಳಿಗೆ ದಣಿಸದೆ ಮುಂ- ದಣಘನ ಸನ್ಮಾರ್ಗವ ಬೋಧಿಪರ ನವನವ ಲೀಲೆಗಳಿಂದೊಪ್ಪುವ ಹರಿ ಗುಣಗಳನ್ನು ಕೊಂಡಾಡುವರ ನಮಿಸಿಬೇಡುವೆ ಉರುಗಾದ್ರಿವಾಸ ವಿ-ಠ್ಠಲದಾಸರು ಎಂದೆನಿಸುವರ 3
--------------
ನಿಡಗುರುಕಿ ಜೀವೂಬಾಯಿ
ಥಳಕು ಥಳಕು ಹೊಳೆವೋತನ್ನ ಬೆಳಕು ತುಂಬಿಭವನದೊಳು ಝಳಕು ಝಳಕು ಬಂದ ನಮ್ಮಜಾಣರಂಗನ ನೋಡುವ ಬಾರೆ ಅಂಗನೆ ಪ. ನೀಲ ಮಾಣಿಕ ರತ್ನದಿವ್ಯನಿಲವುಗನ್ನಡಿ ಹೊಳೆವ ಮಹಲಗಳ ಇಳಿದು ಬಂದ1 ಕೋಟಿ ಕೋಟಿ ಸೂರ್ಯರಂತೆ ಧಾಟತೋರೋ ಅಂಗಳದಿ ದಾಟಿ ದಾಟಿ ಇಳಿದು ಬಂದ 2 ನೂರು ಸೂರ್ಯರ ಬೆಳಕುತೋರುವಂತೆ ದ್ವಾರಗಳನು ವಾರಿಜಾಕ್ಷ ಇಳಿದು ಬಂದ 3 ಮುತ್ತಿನ ತ್ವಾರಣನವರತ್ನ ಹಂದರ ದಾಟಿಚಿತ್ರ ಚಾವಡಿ ಇಳಿದು ಬಂದ 4 ವಜ್ರ ಮಾಣಿಕವು ಬಹಳ ಸಜ್ಜ ತೊರೋ ಅಂಗಳದಿ ನಿರ್ಜರೋತ್ತಮನು ಬಂದ 5 ಪಚ್ಚದ ಪಾವಟಿಗೆ ರತ್ನಹಚ್ಚಿದ ಹೊಸ್ತಿಲವ ದಾಟಿಅಚ್ಯುತಾನಂತ ಬಂದ 6 ನಾಗಶಯನ ತನ್ನ ಮನೆಯ ಬಾಗಿಲ ಮುಂದೊಪ್ಪುತಿರಲು ಭಾಗವತರ ಮ್ಯಾಳದಿಂದ ಬಂದ7 ರುದ್ರಾದಿಗೊಂದ್ಯನ ಮುಂದೆ ಅಧ್ಯಾನ(ಅಧೀನ) ವೆಂಬುವರು ಕೋಟಿಮುದ್ದು ತೋರೋದಮ್ಮ ಸಭೆಯು 8 ಅಲ್ಲೆ ಅಲ್ಲೆ ನಿಂತ ಜನರು ಚಲ್ವರಮೆ ಅರಸನ ಮ್ಯಾಲೆಮಲ್ಲಿಗೆ ಸೂರ್ಯಾಡೋರೆಷ್ಟ 9
--------------
ಗಲಗಲಿಅವ್ವನವರು
ದಣಿಯಾ ನೋಡಿದೆ ನಿನ್ನಾ ಪ. ಋಜಗಣದೊಡೆಯನೆ ಬಿಡುವಿಲ್ಲದೆ ನಿನ್ನ ಅಡಿಗಳಿಗೆ ವಂದಿಪೆ ಅ.ಪ. ಮಹದ್ವಾರ ಬಾಗಿಲಾದಲ್ಲಿ ಇರುತಿರುವೋರು ಜಯವಿಜಯರಿಲ್ಲಿ ವಾರವಾರಕ್ಕೆ ನಿನ್ನ ಬ್ರಹ್ಮಾದಿ ದ್ವಿಜರು ಹಾರೈಸಿ ಹರುಷದಿ ಪೂಜೆಗೊಂಬೊರೆ 1 ಯಡಬಲದಲ್ಲಿ ನಿನ್ನ ಮಡದಿಯರಿಂದ ಒಡಗೂಡಿ ಸಡಗರದಲ್ಲಿ ಇಂದಿರೇಶ ಗರುಡವಾಹನೆ ರಂಗಾ ಉರಗಾದ್ರಿನಿವಾಸ ಶೇಷಾಚಲವಾಸ ಶ್ರೀ ವೆಂಕಟೇಶಾ 2 ಸೃಷ್ಟ್ಯಾದಷ್ಟ ಕರ್ತಾ ಶ್ರೀವಿಠಲ ನಿನ್ನಾ ಗುಣಯೆಷ್ಟೆಂದು ವರ್ಣಿಪೆನಾ ಅಷ್ಟ ಮಹಿಷಿಯರ ಆಳದ ಮದವೆಷ್ಟೊ ಕಾಳಿಮರ್ದನಕೃಷ್ಣ ಬಲು ಜೋರಾ ದಿಟ್ಟಾ ಆನಂದ ಕೊಟ್ಟಾ3
--------------
ಕಳಸದ ಸುಂದರಮ್ಮ
ದಂಭಕ-ಭಕುತಿಯ-ಮಾಡಬೇಡ ಬರಿ ಡಿಂಭವ ಪೋಷಿಸೆ-ಪಾಡಬೇಡ ಪ ಅಂಬುಜನಾಭವ ಬಿಡಬೇಡ ಒಣ ಜಂಭವ-ಮಾಡುತ-ಕೆಡಬೇಡ ಅ.ಪ. ಕಾಸಿಗೆ ದಾಸನು ಆಗಬೇಡ-ಹರಿದಾಸನು ಆದರೆ ಆಶೆಬೇಡ ದೊರಕದು ತಿಳಿಗಾಢ 1 ಕಂಡಕಂಡೆಡೆ ತಿರಿಬೇಡ-ಯಮದಂಡಕೆ ಬೆದರದೆ ನಡಿಬೇಡ ಕೆಣಕುತ ಕೆಡಬೇಡ 2 ಮುಂಬರೆ ತಿಳಿಮೂಢ ಪರ ಹೆಂಡಿರು ವಿತ್ತವ ನೋಡಬೇಡ 3 ತುಚ್ಛರ ಸೇವೆಯ ಮಾಡಬೇಡ ಮನಸ್ವಚ್ಛತೆ ಪೊಂದದೆ ಇರಬೇಡ ಕೆಚ್ಚೆದೆ ಕಷ್ಟದಿ ಬಿಡಬೇಡದೈವೇಚ್ಛೆಯೆ ಸಕಲಕು ಮರಿಬೇq4 ಆತ್ಮಸ್ತುತಿಯನು ಮಾಡಬೇಡ ಪರಮಾತ್ಮನ ಗುಣಗಳ ಕದಿಬೇಡ ಗಾತ್ರವು ಅಸ್ಥಿರ-ತಿಳಿ-ಬೇಗ-ಜೀವೋತ್ತಮ ನಂಘ್ರಿಯ ಬಿಡಬೇಡ 5 ತಿಳಿಯದೆ ಇರಬೇಡ ಮನವನು ಸೋಲಬೇಡ 6 ಸ್ನೇಹವ ಮಾಡಬೇಡ ಭವ ಕಾಡಿಗೆ ಕಿಚ್ಚಿದು ಸರಿ ಪ್ರೌಢ 7 ನೆಂಟಗೆ ಸಾಲವ ಕೊಡಬೇಡ ಅದು ಗಂಟಿಗೆ ಮೊಸವೆ ತಿಳಿಬೇಗ ಒಂಟಿಲಿ ಊಟವ ಮಾಡಬೇಡ ವೈಕುಂಠಕೆ ಸಾಧನೆ ಬಿಡಬೇಡ 8 ದಾರಿಯು ಮರಿಬೇಡ ಒಲಿಸದೆ ಬಿಡಬೇಡ 9 ಚಿಂತನೆ ತಿಳಿಬೇಗ ಕಡು ಆಲಸ್ಯವ ಮಾಡಬೇಡ ಸಿರಿಬಿಡುವಳು ಆತನ ತಿಳಿಬೇಗ10 ಮಾಧವ ನೊಲಿಮೆಗೆ ಹೆದ್ದಾರಿ ಶೀಘ್ರದಿಪೊಗಾಡು 11 ಸತ್ಯವ ಧರ್ಮವ ಬಿಡಬೇಡ ಈ ಉಕ್ತಿಗಳಾಚೆಗೆ ಹಾಕಬೇಡ ಸತ್ಯವ ಪಠಿಸದೆ ಬಿಡಬೇಡ-ಶ್ರೀ ಸತ್ಯನ ಮತವನು ಪಿಡಿಬೇಗ12 ನಿಜಸುಖ ತಿಳಿಬೇಗ ನಿಷ್ಠಿಯ ಗುರುವಡಿ ಬಿಡಬೇಡ “ಶ್ರೀ ಕೃಷ್ಣವಿಠಲ”ನ ತೊರಿಬೇಡ13
--------------
ಕೃಷ್ಣವಿಠಲದಾಸರು
ದಯ ಮಾಡೊ ಪ್ರೀಯಾ ದಾಸರ ಶುಭೋ-ದಯ ವಿಜಯರಾಯ ಸಾ |ಹಯವಾಗಿ ಒದಗುವೋಭಯ ನಿವಾರಣ ಮಾಡಿ ಪ ಪ್ರಬಲವಾಗಿಹ ಮೋಹ ನಿಬಿಡವಾದದರಿಂದಅಭಯದಾಯಕ ನಿನ್ನ ಶುಭವಾದ ಪಾದಕ್ಕೆಅಭಿವಂದಿಸದಲೆ ಅಲ್ಪರ ಸೇರಿಅಬಲನಾಗುತಲೆ ಪಾಪದ ವನಧಿUಭೀರ ನೋಡದಲೆ ಬಾಳಿದೆ ಯನ್ನಅಭಿಮಾನದೊಡೆಯನೆ ಅಗಡು ಮಾಡದಲೆ 1 ದುರಿತ ಪರಿ ವರಗಳ ಗರೆವ ಕಾರಣ ನಿನ್ನಬಿರಿದು ನಾ ಬಲ್ಲೆ ಎನ್ನಯ ಭಾರಸರಿ ನಿನ್ನದಲ್ಲೆ ಲೌಕೀಕದಪರಿ ಮತ್ತೊಂದೊಲ್ಲೆ ಇಹಪರದಲ್ಲೆ ಪರಮ ಸೌಖ್ಯಕೆ ನಿನ್ನ ಸ್ಮರಣೆ ವಂದಲ್ಲೆ 2 ಪಾಮರ ಜನರಿಗೆ ಸುಮಾರ್ಗಗೋಸುಗಶ್ರೀಮನೋಹರ ನಿನ್ನ ಪ್ರೇಮದಿಂದಲಿ ಸೃಜಿಸಿಭೂಮಿಯೊಳಿಡಲೂ ಹರಿಯ ದಿವ್ಯನಾಮ ನಾ ಬಿಡಲು ದುರ್ವಿಷಯವಕಾಮಿಸಿ ಕೆಡಲೂ | ಸುಮ್ಮನಿರದೆಯಾಮ ಯಾಮಕೆ ನಿನಗೆ ನಾ ಮೊರೆಯಿಡಲೂ 3 ಜಗದಂತರ್ಯಾಮಿಯ ಹಗಲು ಇರುಳು ಬಿಡದೆಸುಗುಣ ಮಾರ್ಗದಲಿದ್ದು ಬಿಗಿಯಾದ ಕವನಕ್ಕೆಬಗೆ ತೋರಿದವನೆ ಹರಿಯ ಕ್ಷಣ ಅಗಲದಿದ್ದವನೆ ಕಾಮದ ಬಲಿಗೆಸಿಗದೆ ನಡೆವವನೆ ಅನುನಯದಿ ಕರವಮುಗಿದು ಬೇಡುವರಲ್ಲಿ ಮುದದಿಂದ ನಲಿವನೆ 4 ಎನ್ನೊಬ್ಬಗಲ್ಲ ಈ ಬಿನ್ನಪ ಕರುಣಾಳೆನಿನ್ನ ಪೊಂದಿದವರ ಮನ್ನಿಸಿ ಸಲಹಯ್ಯಾಬೆನ್ನು ಬಿಡದಲೆ ವ್ಯಾಸ ವಿಠ-ಲನ್ನ ಪಾಡುತಲೆ ಕಾಲವ ಕಳೆವ ಸನ್ಮಾರ್ಗವನೆ ತೋರೋ ತಡಮಾಡದಲೆ 5
--------------
ವ್ಯಾಸವಿಠ್ಠಲರು
ದಯಾನಿಧೆ ಶ್ರೀ ರಾಘವೇಂದ್ರ ಗುರುವೆ ಕಾಮಿತ ಸುರತರುವೆ ಪ ಧರಾತಳದಿ ಸುರತರೂವರೋಪಮ ತ್ವರಾದಿ ಎನ್ನನು ಪೊರೇಯೊ ಗುರುವರ 1 ಗಡಾನೆ ತವ ಪದ ಜಡಾಜ ಯುಗಲದಿ ಧಢಾ ಮನವ ಕೊಡೊ ಒಡೇಯ ಗುರುವರ 2 ಎಷ್ಟೊ ಪೇಳಲೆನ್ನ ಕಷ್ಟಾ ರಾಸಿಗಳನ್ನು ಸುಟ್ಟುಬಿಡೊ ಸರ್ವೋತ್ಕøಷ್ಟಾ - ಮಹಿಮ ಗುರು 3 ಮೋಕ್ಷಾದಾಯಕ ಎನ್ನ ವೀಕ್ಷೀಸಿ ಮನೋಗತಾ - ಪೇಕ್ಷಾವ ಪೂರೈಸೆÀೂ ತ್ರ್ಯಕ್ಷಾದಿಸುರ ಪ್ರೀತ 4 ದಾತಾನೆ ನೀ ಎನ್ನ ಮಾತೂ ಲಾಲಿಸೊ ನಿತ್ಯ ನೀತಾ - ಗುರು ಜಗನ್ನಾಥ ವಿಠಲ ಪ್ರಿಯ 5
--------------
ಗುರುಜಗನ್ನಾಥದಾಸರು
ದಶಾವತಾರ ನೀರೊಳಗೆ ನಿಂತು ನಡುಗಿ ನಾರುವಂಗೆ ಗಂಬೂರಿಕಸ್ತೂರಿ ಲೇಪನದ ಮದುವೆಭಾರ ನಿನ್ನಲಿ ಪೊಳಲು ಕಲ್ಲು ಕೈ ಮುಸುಡಿದಂಗೆಧೀರ ಶೇಷನ ಶಯನದ ಮದವೋಮೋರೆಯಲ್ಲಿ ಯಲ್ಲಾ ಕೆದರಿ ಬೇರು ಮೆಲುವನಿಗೆಸಾರಷಡ್ರಸನ್ನ ಭೋಜನದ ಮದವೋಕರುಳ ವನಮಾಲೆ ಹಾಕಿದವಂಗೆ ಹಾರಪದಕ ಹಾಕಿದ ಮದವೋಮೂರಡಿಯ ಭೂದಾನ ಬೇಡಿದವನಿಗೆ ಸಾರಿದವಂಗಭೀಷ್ಟಗಳ ಪೂರೈಪ ಮದವೋಧರಣಿ ವಿಪ್ರರಿಗಿತ್ತು ಕುಳಿಪುದಕೆ ಸ್ಥಳವಿಲ್ಲವಗೆ ಭುವನಕೀಳುವ ಮದವೋಊರ ಬಿಟ್ಟು ವನ ಚರಿಸುವಂಗೆ ಮೂರು ಧಾಮದಮನೆಯ ಭೋಗದ ಮದವೋಪುರನಾರಿಯ ಬಯಸಿ ಕೊಂಬುವಂಗೆ ವಾರಿಜಭವ ಸುರರವಂದ್ಯಾನೆ ಮದವೋಘೋರ ತುರಗವನೇರಿ ಹಾರಿಸ್ಯಾಡುವಂಗೆ ವೀರಸಿಂಹಾಸನದಲ್ಲಿಕುಳಿತ ಮದವೋಮೂರು ದಿನ ಅರಸುತನ ಸ್ಥಿರವೆಂದು ನೆಚ್ಚಿ ಸಾರಿದವನ್ನಮರೆವದುಚಿತವೆಬಾರದೆ ತಪ್ಪದು ಹಿಂದಿನ ಭವಣೆ ನಿನಗೆ ದೂರ ವಿಚಾರಿಸಿನೋಡೊ ಕರುಣಾ ನಿಧಿಶ್ರೀರಂಗ ರಾಜಗೋಪಾಲ ವಿಠಲ ನಿನ್ನ ಪಾರಿದವರ ಪೊರೆದು ಕೀರ್ತಿಪಡಿಯೊ
--------------
ರಾಜಗೋಪಾಲದಾಸರು
ದಾಸ ಪಟ್ಟವೋ ಸನ್ಯಾಸ ಪಟ್ಟವೋ ಪ ಆಸೆಯಿಂದ ನೆಲೆಯಾದಿಕೇಶವನ್ನ ನೆನೆಯದವಗೆಅ ಮಂಡೆ ಬೋಳು ಮಾಡಿ ನಾಮದುಂಡೆಯನ್ನು ಬರೆದು ಕೆಡಿಸಿಕಂಡಕಂಡವರನು ಕೂಡಿಭಂಡ ಜನ್ಮ ಹೊರೆಯುವವಗೆ 1 ಅವರಿವರ ಕೈಯ ನೋಡಿ ಹ-ಲವು ಕೆಲವು ಮಾತನಾಡಿ ಹ-ಲವ ಹಂಬಲಿಸಿ ದಿ-ನವ ಕಳೆದು ಉಳಿದು ಬಾಳುವಗೆ 2 ಬೆಂದ ಸಂಸಾರವೆಂಬಬಂಧನದೊಳಗೆ ಸಿಲುಕಿಕೊಂಡುಚೆಂದಾದಿಕೇಶವನ್ನಒಂದು ಬಾರಿ ನೆನೆಯದವಗೆ 3
--------------
ಕನಕದಾಸ
ದಾಸರಾಯ ಪುರಂದರದಾಸರಾಯ ಪ. ಘಾಸಿಗೊಳಿಸದೆ ಇತ್ತು ಕರುಣಿಸಿ ವಾಸುದೇವನ ಕೃಪೆಗೈಸಿರಿ ಅ.ಪ. ದಾಸಕೂಟಕೆ ಮೊದಲನೆ ಗುರು ದೊಷವರ್ಜಿತ ಭಕ್ತರೆನಿಸಿ ಆಶಪಾಶವೆ ತೊರೆದು ಹರಿಯ ದಾಸತನವನು ತೋಷದಲಿ ಕೊಂಡು ಕೇಶವನು ಸರ್ವೋತ್ತಮನು ಎನ್ನುತ ಶ್ರೀಶನ ಗುಣಗಳನೆ ಪೊಗಳುತ ಭೂಸುರರ ರಕ್ಷಿಸುತ ಭಕ್ತರ ಕ್ಲೇಶಗಳೆÉದಂಥ ಗುರುವರ 1 ವೀಣೆ ಕರದಲಿ ಗಾನಮಾಡುತ ಜಾಣತನದಲಿ ಕೃಷ್ಣನೊಲಿಸುತ ಆನಂದದಲಿ ನರ್ತಿಸುತ್ತ ಧ್ಯಾನದಲಿ ಶ್ರೀ ಹರಿಯ ನೋಡುತ ಆನನವ ತೂಗುತ್ತ ವೇದ ವಿ- ಧಾನದಲಿ ಪದಗಳನೆ ರಚಿಸುತ ಮೌನಿವ್ಯಾಸರ ಶಿಕ್ಷೆಯಿಂದಲಿ ದಾನವಾಂತಕ ಹರಿಯನೊಲಿಸಿದ 2 ಪಾಪಿಗಳ ಪಾವನಗೈಸುತ ಶ್ರೀ ಪತಿಯ ಅಂಕಿತವ ನೀಡುತ ಈ ಪರಿಯಲಿ ಮೆರೆದ ಮಹಿಮೆಯ ನಾ ಪೇಳಲಳವಲ್ಲವಿನ್ನು ನಾ ಪಿರಿಯರಿಂ ಕೇಳಿದುದರಿಂ ದೀಪರಿ ನುಡಿದಿರುವೆನಲ್ಲದೆ ಗೋಪಾಲಕೃಷ್ಣವಿಠ್ಠಲನ ರೂಪ ನೋಡುತ ಸುಖಿಸುವಂಥ 3
--------------
ಅಂಬಾಬಾಯಿ
ದಾಸರಾಯಾ ಎನ್ನ | ಬೆಂಬಿಡದಲೆ ಕಾಯೋ ಬಹು ಪರಿಯಿಂದ ದಾಸರಾಯಾ ಪ ಈರೇಳು ವರುಷವಾರಂಭಿಸಿ ಪ್ರತಿದಿನ | ದಾಸರಾಯ ಜಾವು ಮೂರುಗಳಲ್ಲಿ ಮುಕುಂದನ ಚರಣವ | ದಾಸರಾಯಾ | ಚಾರು ಮನಾಬ್ಜದಿ ಬಹಿರದಿ ಬಗೆ ಬಗೆ | ದಾಸರಾಯಾ | ಭೂರಿ ಭಕುತಿ ಭರಿತನಾಗಿ | ದಾಸರಯ್ಯಾ1 ಪುಂಗವ ಸುಮತೀಂದ್ರ ರಾಯ ಕರೆದ ನಿನ್ನ | ದಾಸರಾಯಾ | ಸಂಗೀತ ರಸನ ಪಾನಮಾಡಿ ಹರುಷದಿ | ದಾಸರಾಯಾ | ಹರಿ | ಡಿಂಗರೊಳುತ್ತುಂಗನೆನಿಸಿಕೊಂಡೆ ದಾಸರಾಯ 2 ಕುಶಲಗಾನವ ಕೇಳಿ ಗುರುಸತ್ಯ ಪೂರ್ಣರು | ದಾಸರಾಯಾ | ಪರಾ ವಸುನಾಮ ಗಂಧರ್ವನವತಾರ ನೀನೆಂದು | ದಾಸರಾಯಾ | ಪೆಸರಿಟ್ಟರಂದು ವಿದ್ವಜ್ಜನ ಮೆಚ್ಚಲು ದಾಸರಾಯಾ | ಎನ ಗೊಶವಹುದೇ ನಿಮ್ಮ ಮಹಿಮೆ ಕೊಂಡಾಡಲು |ದಾಸರಾಯಾ | 3 ಚರಿಸಿದೆ ಪುಣ್ಯಕ್ಷೇತ್ರಗಳ ಭಕುತಿಯಿಂದ | ದಾಸರಾಯಾ | ಪ್ರತಿ | ವರುಷ ಬಿಡದೆ ಶೇಷಗಿರಿಯವಾಸನ | ದಾಸರಾಯಾ | ಪರಿಯಂತ | ದಾಸರಾಯಾ | ಪರಿ ಚರಿಯವ ಕೈಕೊಂಡು ಪಡೆದೆ ಮಂಗಳಗತಿ ದಾಸರಾಯ 4 ಮುನಿಯು ಉಪೇಂದ್ರರಾಯರು ನಿಮ್ಮ ಚರಿತೆಯ | ದಾಸರಾಯಾಕೇಳಿ ಸಾನುರಾಗದಿ ಸರ್ವ ಮಂತ್ರೋಪದೇಶವ | ದಾಸರಾಯಾ | ಆನುಪೂರ್ವಕಮಾಡಿ ಅತಿ ಸಂತೋಷದಿ | ದಾಸರಾಯಾ | ಕೊಟ್ಟರು ಶ್ರೀ ನರಸಿಂಹ ಪ್ರತಿಮೆ ಸಾಲಿಗ್ರಾಮ | ದಾಸರಾಯಾ | 5 ಕಿಂಕರನೆನಿಸಿ ಪರಂದರದಾಸರೆ | ದಾಸರಾಯಾ | ಅವರಿಂ ದಂಕಿತ ವಹಿಸಿ ನಿಶ್ಯಂಕೆಯಿಂದ ನೀನು ದಾಸರಾಯಾ | ಪೊಂಕವ ಪೊಗಳುತ ಪೊಡವಿಯೊಳು ಚರಿಸಿದೆ | ದಾಸರಾಯಾ|ಭವ ಪಂಕವ ದಾಟ ಪರೇಶನನೈದಿದೆ | ದಾಸರಾಯಾ 6 ಪರಿಯಂತ ಕರ ಒಡ್ಡಲೊಲ್ಲೆನೆಂಬುವ ಛಲ | ದಾಸರಾಯಾ | ನಿನಗೆ ಸಲ್ಲಿತು ನಿಜ ಭಾಗವತರ ಪ್ರಿಯ | ದಾಸರಾಯಾ | ನಿಮ್ಮಾ ಅನುಭವೋಪಾಸನೆ ಏನು ತಿಳಿಯದು ದಾಸರಾಯಾ 7 ಕಮಲ ಧ್ಯಾನ ದಾಸರಾಯಾ | ಸ್ನಾನ ವರ ಮಂತ್ರ ಜಪ ತಪ ವಿಹಿತಾಚರಣೆಗಳು | ದಾಸರಾಯಾ ಪೆರತೊಂದು ಸಾಧನ ಮನ ವಾಕ್ಕಾಯಗಳಲಿ | ದಾಸರಾಯಾ | ನಾನೊಂದರಿಯೆ ದಯಾಬ್ಧಿ ಉದ್ಧರಿಸೆನ್ನ ಭವದಿಂದ ದಾಸರಾಯಾ 8 ನಾರಾಯಣಾತ್ಮಜ ಅನಂತಾರ್ಯರುದರದಿ ದಾಸರಾಯಾ |ಪುಟ್ಟಿ | ನೂರೊಂದು ಕುಲಗಳುದ್ಧಾರ ಮಾಡಿದೆ | ದಾಸರಾಯಾ | ಕಾರುಣ್ಯನಿಧಿ ಜಗನ್ನಾಥವಿಠಲ | ದಾಸರಾಯಾ | ನಿಮ್ಮ ಚಾರು ಚರಿತ್ರೆಯ ತುತಿಸಿ ಪಾವನನಾದೆ | ದಾಸರಾಯಾ 9
--------------
ಜಗನ್ನಾಥದಾಸರು
ದಿಗ್ವಿಜಯವಂತೆ ಬಂದಳು ರುಕ್ಮಿಣಿ ದೂತೆ ಶೀಘ್ರದಿಂದ ಕೃಷ್ಣರಾಯ ಮಾರ್ಗನೋಡ್ಯಾನೆಂಬೊ ಭಯದಿ ಪ. ಕೃಷ್ಣರಾಯನ ಬಿಟ್ಟುಎಷ್ಟು ಹೊತ್ತು ಆಯಿತೆಂದುಸಿಟ್ಟು ಬರಧಾಂಗೆ ಸುರರಿಗೆ ಎಷ್ಟು ಸಲುಹಲಿ ಎನುತ 1 ವೀಕ್ಷಿಸಿ ಎನ್ನ ಮಾರಿಯನುಲಕ್ಷ್ಮಿಯರು ಕೋಪಿಸದಿರಲಿಲಕ್ಷ ಕೋಟಿದ್ರವ್ಯ ದಾನಈ ಕ್ಷಣ ಕೊಡುವೆನೆ ಎನುತ2 ಮದನಜನೈಯ್ಯನ ದಯವುಮೊದಲ್ಹಾಂಗೆ ಇದ್ದರೆ ನಾನು ಅದ್ಬುತದ್ರವ್ಯ ದಾನ ಬುಧರಿಗಿತ್ತೇನೆ ಎನುತ3 ವಿತ್ತ ಕೋಟಿ ದಾನವನ್ನು ಮತ್ತೆಕೊಡುವೆನೆ ಎನುತ4 ಇಂದಿರೇಶಗೆ ಅಂಜಿಕೊಂಡುಚಂದ್ರ ಸೂರ್ಯರು ತಿರಗೋರಮ್ಮಚಂದಾದ ನಕ್ಷತ್ರ ಬಂದುಅಂಜಿ ಹೋಗಿವೆ ಎನುತ 5 ಹರಿಗೆ ಅಂಜಿಕೊಂಡು ಶರಧಿಮರ್ಯಾದಿಲೆ ಇರುವೋ ನಮ್ಮದೊರೆಗೆ ಅಂಜಿಕೊಂಡು ವಾಯುತಿರುಗಾಡುವನಮ್ಮ ಎನುತ 6 ಅಗ್ನಿಅಂಜಿ ತನ್ನ ದರ್ಪತಗ್ಗಿಸಿ ಕೊಂಡಿಹ ನಮ್ಮಭಾಗ್ಯದರಸು ಅಂಜಿ ಮಳೆಯುಶೀಘ್ರದಿ ಗರೆಯುವನು ಎನುತ 7 ಹಾಸಿಗ್ಯಾಗುವ ಶೇಷ ಅಂಜಿದಾಸಿ ಆಗುವಳಂಜಿ ಲಕುಮಿದೇಶಕಾಲ ಅಂಜಿ ಒಂದುಲೇಸು ಮೀರ್ಯಾವೆ ಎನುತ 8 ವರಗಿರಿ ವಾಸಗೆ ಅಂಜಿಶೇಷ ಜಗವ ಪೊತ್ತಿಹನಮ್ಮಗರಿಯ ಹರವಿ ಗರುಡ ಅಂಜಿಹರಿಯ ಧರಸಿಹನೆ ಎನುತ9 ಸಂಖ್ಯವಿಲ್ಲದ ಗಜಗಳಂಜಿಫಕ್ಕನೆ ನಿಂತಿಹ ವಮ್ಮದಿಕ್ಪಾಲಕರು ಅಂಜಿ ತಮ್ಮದಿಕ್ಕು ಕಾಯುವರು ಎನುತ 10 ನದ ನದಿಗಳಂಜಿಕೊಂಡು ಒದಗಿಮುಂದಕ್ಕೆ ಹರಿವೋವಮ್ಮಸುದತೆ ವೃಕ್ಷ ಅಂಜಿಪುಷ್ಪಫಲವ ಕೊಡುವೊವೆ ಎನುತ 11 ಕಂತು ನೈಯನ ಅರಸುತನಎಂಥದೆಂದು ಬೆರಗುಬಟ್ಟುನಮ್ಮಂಥಾ ಒಣ ಬಳಗಅಂಜಿಲಿವೋದು ಕಾಂತೆ ಅರುವನೆ ಎನುತ 12 ರಮಿ ಅರಸಗಂಜಿಕೊಂಡು ಬ್ರಮ್ಹ ಸೃಷ್ಟಿ ಮಾಡೋನಮ್ಮಸುಮ್ಮನೆ ಸುರರೆಲ್ಲ ಕೂಡಿದಮ್ಮಯ್ಯ ಎನಲೆಂದು ಹರಿಗೆ13
--------------
ಗಲಗಲಿಅವ್ವನವರು
ದುಃಖವಿಲ್ಲವೋ ಪರಮಾತ್ಮನಿಗೆ ಲಿಂಗದ ದೇಹದದುಃಖವಿಲ್ಲವೋ ಪರಮಾತ್ಮನಿಗೆ ಪ್ರತ್ಯಗಾತ್ಮನಿಗೆದುಃಖವುಂಟೆ ನಿಜ ನಿರ್ಲಿಪ್ತಗೆಮಿಕ್ಕ ಥಳಥಳ ಸಾಕ್ಷಿಬ್ರಹ್ಮಂಗೆಪ ಜಲದೊಳು ಹೊಳೆವ ಇಂದುವಿಂಗೆಜಲದ ಕಂಪವು ಹೊಳೆವುದೇ ಪೂರ್ಣಚಂದ್ರಗೆಆ ಪರಬ್ರಹ್ಮಂಗೆ ಹೊಳೆಯಲು ಲಿಂಗದಿಲಿಂಗದ ಗುಣಗಳು ಕೆಲವನು ತಿಳಿಯಲು ಪುಣ್ಯಾತ್ಮನಹೆ 1 ಪರಿ ಆತ್ಮಂಗೆ ಲಿಂ-ಗಾದಿ ಜನ್ಮವೊಂದುಗುಡೆ ಕಷ್ಟಪಡುವಿಕೆಲಿಂಗವೆ ಅಳಿಯಲು ನಿತ್ಯಾತ್ಮನುತಭಂಗವ ಕಳದೇ ಚಿದಾನಂದ ಬ್ರಹ್ಮನಹನು 2
--------------
ಚಿದಾನಂದ ಅವಧೂತರು