ಒಟ್ಟು 528 ಕಡೆಗಳಲ್ಲಿ , 78 ದಾಸರು , 463 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎಂತಲೊ ನಿನ್ನ ಮಹಿಮೆ ಯಶೋದೆಕಂದ ಪ.ದೇವರದೇವನೆನಿಸಿ ಆ ವೈಕುಂಠವಿರೆನಿತ್ಯಪಾವಿನೊಳು ನಿದ್ರೆಗೈವದಾವ ಚಂದವೊ ಮುಕುಂದ 1ಸರಸಿಜಭವೇಶಾದಿ ಸುರಮುನಿಪೂಜೆಗಿಂದಪಿರಿದು ಸುಖವೆ ವಿದುರನ ಕುಡಿಕೆಪಾಲೌತಣ 2ಪಾಲಗಡಲ ನಿವಾಸ ಮೂಲೋಕದುದರನಾಗಿಬಾಲಕತನದ ಲೀಲೆ ಸಲುವದೆ ನಳಿನಾಕ್ಷ 3ಪಕ್ಷಿವರನೇರಿ ವಾಮ ಲಕ್ಷ್ಮಿಯಿರಲು ಯಜÕಭಿಕ್ಷವ ಬಯಸಿ ನಿನ್ನಕುಕ್ಷಿರಕ್ಷಿಸಿದೆಯಯ್ಯ4ಅನ್ಯಚಿಂತೆಯನು ಬಿಟ್ಟು ನಿನ್ನ ಚಿಂತೇಲಿಹರಜನ್ಮದ ಲತೆಯಹರಿಪ್ರಸನ್ನವೆಂಕಟೇಶ ತಂದೆ5
--------------
ಪ್ರಸನ್ನವೆಂಕಟದಾಸರು
ಎನ್ನ ತಂದೆ ಎನ್ನತಾಯಿ ಎನ್ನ ಬಂಧುವೆ ನೀಇನ್ನಾರೊಡೆಯರಿಲ್ಲ ಕಾಯೊ ಲಕ್ಷ್ಮೀನಲ್ಲ ಪ.ಕರುಣ ನೋಟದಿ ನೋಡಿ ಹೊರಡಿಸಿದ ತಂದೆ ಮಂದರಧರನೆ ಬಸುರೊಳಿಟ್ಟ ತಾಯಿ ನೀನುಧÀರೆಗೆ ಪರಗತಿಗೆ ನೆಲೆಗೊಡುವ ಬಾಂಧವ ನೀನುದುರಿತಕರಿಗಣಕೆ ಸಿಂಹಾಸ್ಯ ನೀನು1ಷÀಟ್ಕರ್ಮ ಸಂಗ್ರಹವ ಮಾಡಿಸುವ ತಂದೆ ನೀದುಷ್ಕರ್ಮ ಖಂಡಿಸುವ ತಾಯಿ ನೀನುಷಟ್ಕೋಣ ಬಲದಿರುವ ತ್ರಿಕೂಟಾದ್ರಿವಾಸ ವಷಟ್ಕಾರಗೈದೆ ಕೌರವ ಕುಲಾರಿಯು ನೀನು 2ಶ್ರುತಿವಿರೋಧಿಗಳ ಮೋಹಿಪ ಸುರರ ತಂದೆ ನೀಅತುಳಧರ್ಮಾತ್ಮಕರ ತಾಯಿ ನೀನುಕ್ಷಿತಿಗೆ ವೈಕುಂಠವೆನಿಪ ಪ್ರಸನ್ವೆಂಕಟ ಬಂಧುಗತಿಗೆ ಗತಿಯಾದಾದಿಪುರುಷ ನಮೋ 3
--------------
ಪ್ರಸನ್ನವೆಂಕಟದಾಸರು
ಎಲ್ಲಿರುವನೋ ರಂಗನೆಂಬ ಸಂಶಯ ಬೇಡ |ಎಲ್ಲಿ ಭಕುತರು ಕರೆದರಲ್ಲಿ ಬಂದೊದಗುವನು ಪ.ತರಳ ಪ್ರಹ್ಲಾದ ಶ್ರೀಹರಿ ವಿಶ್ವಮಯನೆಂದು |ಬರೆದೋದಲವನ ಪಿತ ಕೋಪದಿಂದ ||ಸ್ಥಿರವಾದೊಡೀ ಕಂಬದಲಿ ತೋರು - ತೋರೆನಲು |ಭರದಿ ಬರಲಾಗ ವೈಕುಂಠವಲ್ಲಿಹುದೊ ? 1ಕುರುಪತಿಯು ದ್ರೌಪದಿಯ ಸೀರೆ ಸೆಳೆಯುತಿರೆ |ತರುಣಿ ಹಾ ಕೃಷ್ಣ ಎಂದೊದರೆಕೇಳಿ ||ಭರದಿಂದಲಕ್ಷಯಾಂಬರವೀಯೆ ಹಸ್ತಿನಾ |ಪುರವು ದ್ವಾರಾವತಿಗೆ ಕೂಗಳತೆಯೆ 2ಕರಿರಾಜನನುನೆಗಳು ನುಂಗುತಿರೆ ಭಯದಿಂದ |ಹರಿಯೆ ಕಾಯೆಂದು ಮೊರೆಯಿಡಲುಕೇಳಿ ||ಕರುಣದಿಂ ಬಂಧನವ ಬಿಡಿಸಲಾ ಗಜರಾಜ - |ನಿರುವ ಸರಸಿಗೆ ಅನಂತಾಸನ ಮುಮ್ಮನೆಯೆ 3ಪಾಪಕರ್ಮವ ಮಾಡಿದಜಮಿಳನ ಯಮಭಟರು ||ಕೋಪದಿಂದಲಿ ಸೆಳೆಯೆ ಭೀತಿಯಿಂದ ||ತಾ ಪುತ್ರನನು ಕರೆಯೆಕೇಳಿ ರಕ್ಷಿಸಿಶ್ವೇತ -ದೀಪವೀ ಧರೆಗೆ ಸಮೀಪವಾಗಿಹುದೆ ? 4ಅಣು - ಮಹತ್ತುಗಳಲ್ಲಿ ಪರಿಪೂರ್ಣನೆಂದೆನಿಸಿ |ಎಣೆಯಿಲ್ಲದ ಮಹಾಗುಣಪೂರ್ಣನು ||ಘನಮಹಿಮನಾದ ಶ್ರೀ ಪುರಂದರವಿಠಲನು |ನೆನೆದವರ ಮನದೊಳಗೆ ಇಹನೆಂಬ ಬಿರುದುಂಟು 5
--------------
ಪುರಂದರದಾಸರು
ಒಂದೇ ಕೂಗಳತೆ ಭೂವೈಕುಂಠಸಂದೇಹವಿಲ್ಲವು ಸಾಧು ಸಜ್ಜನರಿಗೆ ಪಅಂಬರೀಷನು ದ್ವಾದಶಿವ್ರತ ಮಾಡಲುಡೊಂಬೆಯ ಮಾಡಿದ ದುರ್ವಾಸನು ||ಕುಂಭಿನೀಪತಿ ಕೃಷ್ಣ ಕಾಯಬೇಕೆನುತಲೆಇಂಬಿಟ್ಟು ಚಕ್ರದಿ ಮುನಿಶಾಪ ಕಳೆದುದು 1ಕರಿರಾಜ ವನದಲಿ ಉಳುಹೆಂದು ಕೂಗಲುತ್ವರಿತದಿಂದಲಿ ಬಂದು ಕಾಯ್ದ ತಾನು ||ಕರುಣ ಸಾಗರ ಕೃಷ್ಣ ಕಾಯಬೇಕೆನುತಲೆತರಳ ಪ್ರಹ್ಲಾದನ ಕಂಬದಿ ಬಂದುದು2ದ್ರುಪದರಾಯನ ಪುತ್ರಿಗಾಪತ್ತು ಬರಲುಕೃಪೆಯಿಂದಲಕ್ಷಯವಿತ್ತನು ||ಕಪಟ ನಾಟಕ ಕೃಷ್ಣಪುರಂದರ ವಿಠಲನಗುಪಿತದಿ ನೆನೆವರ ಹೃದಯವೇ ವೈಕುಂಠ 3
--------------
ಪುರಂದರದಾಸರು
ಓಡಿ ಬಾರಯ್ಯ ವೈಕುಂಠಪತಿ ನಿನ್ನನೋಡುವೆ ಮನದಣಿಯೆ ಪನೋಡಿ ಮುದ್ದಾಡಿ ಮಾತಾಡಿ ಸಂತೋಷದಿಪಾಡಿ ಪೊಗಳುವೆನುಪರಮಪುರುಷಹರಿಅ.ಪಕೆಂದಾವರೆಯಂತೆ ಪಾದಂಗಳೆರಡುಅಂದುಗೆಕಿರಿಗೆಜ್ಜೆ ಘಲುಘಲುರೆನುತ ||ಚೆಂದದಿ ಪೀತಾಂಬರವಲೆದಾಡುತಕುಂದಣದುಡುದಾರ ಝಣ ಝಣ ಝಣಕುತ 1ಕೋಟಿ ಸೂರ್ಯ ಪ್ರಕಾಶಗಳಿಂದಲಿ ಲ-ಲಾಟದಲ್ಲಿ ಇಟ್ಟ ಕಸ್ತುರಿ ತಿಲಕ ||ಕೂಟದ ಗೋಪಾಂಗನೆಯರ ಕೂಡೆಆಟ ಸಾಕು ಬಾರೋ ಅರವಿಂದ ನಯನ 2ಕಿರುತುರುಬಿನ ಮೇಲೆ ಒಲೆವುತಿರುತಿರೆಮುರುಗು ಮಲ್ಲಿಗೆ ಜಾಜಿ ಶ್ರೀತುಳಸೀ ||ಕರದಲಿ ಪಿಡಿದಾ ಪೊಂಗೊಳಲೂದುತತಿರಿತಿಂದು ಬಾಹೋ ಸಡಗರ ಸಾಕೋ 3ಎಣ್ಣೂರಿಗತಿರಸ ಸದಮಲ ದೋಸೆ ಬೆಣ್ಣೆಅಣ್ಣಯ್ಯ ನಿನಗೆ ಕೊಡುವೆನೋ ಬಾರೋ ||ಕಣ್ಣಮುಚ್ಚಿ ಗೋಪಾಂಗನೆಯರ ಕೂಡಿ |ಬೆಣ್ಣೆಯ ಮೆಲುವುದು ಉಚಿತವೆ ಸಾಕೋ 4ಮಂಗಳಾತ್ಮಕ ಮೋಹನಾಕಾರನೆಸಂಗೀತಲೋಲಸದ್ಗುಣ ಶೀಲ ||ಮಂಗಳೆ ಲಕುಮಿಯ ಸಹಿತವಾಗಿ ಬಂದುಕಂಗಳ ಮುಂದಾಡೊಪುರಂದರವಿಠಲ5
--------------
ಪುರಂದರದಾಸರು
ಕಂಡು ಕಂಡೆಂತು ಕೈ ಬಿಡುವೆ ಹರಿಯೆ |ಪುಂಡರೀಕಾಕ್ಷನಿನ್ನ ನಂಬಿದ ಮೇಲೆಪಕ್ಷಣವೊಂದು ಯುಗವಾಗಿ ತೃಣಕಿಂತ ಕಡೆಯಾಗಿ |ಬಣಗುದಾರಿದ್ರ್ಯದಲಿ ಬಲು ನೊಂದೆನಯ್ಯ ||ಫಣಿಶಾಯಿ ಪ್ರಹ್ಲಾದವರದನೇ ನೀನೆನಗೆ |ಹೊಣೆಯಾದ ಮೇಲಿನ್ನು ಮರುಳು ಗೊಳಿಸುವರೆ? 1ಒಂದು ದಿನ ಅತಿಥಿಗಳನುಪಚರಿಸಿದವನಲ್ಲ |ಬೆಂದೊಡಲ ಹೊರೆದು ಬೇಸತ್ತೆನಯ್ಯ ||ಕುಂದು-ಕೊರತೆಯು ಏಕೆ ? ನಿನ್ನ ನಂಬಿದೆ ದಯಾ-|ಸಿಂಧುಗೋವಿಂದನೇ ತಂದೆಯಾದ ಮೇಲೆ2ಬಂಧು ಬಳಗ ಮುನ್ನಿಲ್ಲ ಬದುಕಿನಲ್ಲಿ ಸಖವಿಲ್ಲ |ನಿಂದ ನೆಲ ಮುನಿಯುತಿದೆನೀರಜಾಕ್ಷ||ತಂದೆ-ತಾಯಿಯು ನೀನೆ ಬಂಧು ಬಳಗವು ನೀನೆ |ಕುಂದದೇ ರಕ್ಷಿಸೈ ನಂದನಂದನನೆ 3ಆಶೆಯನು ಬಿಡಲಿಲ್ಲ ಅತಿ ಹರುಷವೆನಗಿಲ್ಲ |ದೇಶದೇಶವ ತಿರುಗಿ ದೆಸೆಗೆಟ್ಟೆನಯ್ಯ ||ವಾಸವಾರ್ಚಿತನಾದ ವೈಕುಂಠನಿಲಯ ಲ-|ಕ್ಷ್ಮೀಶ ನೀಯೆನ್ನ ಕಣ್ಣಾರೆ ಕಂಡ ಮೇಲೆ 4ಭಕುತವತ್ಸಲನೆಂಬ ಬಿರುದು ಹೊತ್ತಿದ ಮೇಲೆ |ಭಕುತರಾಧೀನನಾಗಿರ ಬೇಡವೆ ||ಮುಕುತಿದಾಯಕನೆ ಬೇಲೂರು ಪುರಾಧೀಶ್ವರ |ಸಕಲ ದೇವರದೇವಪುರಂದರವಿಠಲ5
--------------
ಪುರಂದರದಾಸರು
ಕಂಡೆ ಕಂಡೆ ಕಂಡೆನಯ್ಯಾ ಕಂಗಳ ದಣಿಯುವ ತನಕಮಂಗಳ ಮೂರುತಿ ಮನ್ನಾರು ಕೃಷ್ಣನ ಪಉಟ್ಟ ಪೀತಾಂಬರ ಕಂಡೆ ತೊಟ್ಟ ವಜ್ರದಂಗಿ ಕಂಡೆದಕ್ಷಿಣದ ದ್ವಾರಕಿ ಮನ್ನಾರು ಕೃಷ್ಣನ 1ಕಡೆವ ಕಡೆಗೋಲ ಕಂಡೆ ನಡುವಿನೊಡ್ಯಾಣ ಕಂಡೆಕಡು ಮುದ್ದು ಮನ್ನಾರು ಕೃಷ್ಣನ ಕಂಡೆ 2ದೇವಕಿ ದೇವಿಯರ ಕಂಡೆ ಗೋಪಿಯರ ಮುದ್ದಾಟ ಕಂಡೆಮಾವ ಕಂಸನ ಮರ್ದನ ಶ್ರೀ ಕೃಷ್ಣನ 3ಆಕಳ ಕಾವುದ ಕಂಡೆ ಗೋಪಾಲಕೃಷ್ಣನ ಕಂಡೆವೈಕುಂಠವಾಸನ ಮನ್ನಾರು ಕೃಷ್ಣನ 4ಶೇಷನ ಹಾಸಿಕೆಯ ಕಂಡೆ ಸಾಸಿರ ನಾಮನ ಕಂಡೆಶ್ರೀಶಪುರಂದರವಿಠಲ ಕೃಷ್ಣರಾಯನ5
--------------
ಪುರಂದರದಾಸರು
ಕಣ್ಣಾರೆ ಕಂಡೆನಚ್ಯುತನ-ಕಂಚಿಪುಣ್ಯ ಕೋಟಿ ಕರಿರಾಜವರದನ ಪವರಮಣಿ ಮುಕುಟಮಸ್ತಕನ ಸುರ-ವರಸನಕಾದಿ ವಂದಿತ ಪಾದಯುಗನ ||ತರುಣಿ ಲಕ್ಷ್ಮೀ ಮನೋಹರನ-ಪೀತಾಂಬರದುಡಿಗೆಯಲಿ ರಂಜಿಸುವ ವಿಗ್ರಹನ 1ಕಸ್ತೂರಿ ಪೆರೆನೊಸಲವನ ತೋರಮುತ್ತಿನ ಹಾರ ಪದಕವ ಧರಿಸಿದನ ||ಎತ್ತಿದಭಯ ಹಸ್ತದವನ ತನ್ನಭಕ್ತರ ಸ್ತುತಿಗೆ ಹಾರಯಿಸಿ ಹಿಗ್ಗುವನ 2ನೀಲಮೇಘಶ್ಯಾಮಲನ ದೇವಲೋಲಮಕರಕುಂಡಲಧರಿಸಿಹನ ||ಮೂಲೋಕದೊಳಗೆ ಚೆನ್ನಿಗನ ಕಮಲಾಲಯಾಪತಿ ವೈಕುಂಠವಲ್ಲಭನ 3ಭಾನುಕೋಟಿ ತೇಜದವನಭವಕಾನನರಾಶಿಗೆಹವ್ಯವಾಹನನ ||ದಾನವರೆದೆಯ ತಲ್ಲಣನ ಮುನಿಮಾನಸೆಹಂಸನೆಂದೆನಿಸಿ ಮೆರೆವನ4ತುಂಗಚತುರ್ಭುಜದವನಶುಭಮಂಗಳ ರೇಖೆ ಅಂಗಾಲಲೊಪ್ಪುವನ ||ಶೃಂಗಾರ ಹಾರ ಕಂಧರನ ದೇವಗಂಗೆಯ ಪಿತಪುರಂದರವಿಠಲನ5
--------------
ಪುರಂದರದಾಸರು
ಕಮಲನಾಭ ವೆಂಕಟೇಶ ಭಕ್ತ ಕಲ್ಪಭೂರುಹ ಶ್ರೀಕಮಲಪ್ರಾಣೇಶಾಪವಿಮಲ ವೈಕುಂಠಪುರೀಶಾ ಶಿವಕಮಲಸಂಭವನುತ ಕರ್ಬುರನಾಶಾ ಅ.ಪನಿರುಪಮ ಸುಂದರ ಗಾತ್ರಾನಿತ್ಯಪರಿಪೂರ್ಣ ವೈಭವಪರಮಪವಿತ್ರಾಶರನಿಧಿತನಯಕಳತ್ರಾಶೇಷಪರಿಜನಕೃತಘೋರಪಾಪಾಂಧ ಮಿತ್ರಾ1ಸನಕಸನಂದನ ವಿನುತಾಶಶಿದಿನಕರಶತಕೋಟಿ ದಿವ್ಯ ಸುಚರಿತಾಜನನ ಮರಣ ಕ್ಲೇಶರಹಿತ ಶ್ರೀವನಜಸುದರ್ಶನ ವನಮಾಲ ಧರಿತ2ಜಲಜಮಿತ್ರ ವಂಶ ಭೂಷಾ ಕ್ಷಾರಜಲಧಿಬಂಧನ ಪುಣ್ಯಜನ ಪ್ರಾಣ ಶೋಷಾತುಲಸೀ ರಾಮದಾಸ ಪೋಷಾ ಶ್ರೀತುಲಸೀ ಕಾನನಹಿತ ತುಂಬುರ ತೋಷಾ 3
--------------
ತುಳಸೀರಾಮದಾಸರು
ಕ್ಷೀರಸಾಗರದಲೆರಡೀರೈದು ಯೋಜನದ |ಮೇರೆಯಲಿ ವರತ್ರಿಕೂಟಾದ್ರಿ ಶೃಂಗತ್ರಯದಿ |ರಾರಾಜಿಸುವ ತಾಮ್ರ-ರಜತ-ಕಾಂಚನದಿಂದನಾರಾಯಣಾಂಶದಿಂದ ||ಪಾರಿಜಾತಾಂಭೋಜ ಬಕುಳ ಮಲ್ಲಿಗೆ ಜಾಜಿ |ಸೌರಭದಲಶ್ವತ್ಥಪೂಗಪುನ್ನಾಗಜಂ |ಬೀರತರುಗುಲ್ಮಶಾಖಾಮೃಗಗಳೆಸೆವಲ್ಲಿವಾರಣೀಂದ್ರನು ಮೆರೆದನು 2ಆನೆ ಹೆಣ್ಣಾನೆ ಮರಿಯಾನೆಗಳ ಸಹಿತಲ್ಲಿ |ಕಾನನದಿ ತೊಳಲುತ್ತ ಬೇಸಗೆಯ ಬಿಸಿಲಲ್ಲಿ |ತಾನು ನೀರಡಿಸಿ ಬಂದೊಂದು ಸರಸಿಯ ತಟಕೆಪಾನಾಭಿಲಾಷೆಯಿಂದ ||ನಾನಾಪ್ರಕಾರದಿಂ ಜಲಕ್ರೀಡೆಯಾಡುತಿರ |ಲೇನಿದೆತ್ತಣ ರಭಸವೆಂದುಗ್ರಕೋಪದಿಂ |ಒತ್ತಿ ಪಿಡಿದೆಳೆಯುತಿರೆ ಎತ್ತಣದಿನೇನೆನುತ |ಮತ್ತಇಭರಾಜನೌಡೊತ್ತಿ ನೋಡುತ್ತಂಘ್ರಿ |ಎತ್ತಿ ತಂದನು ತಡಿಗೆ ಮತ್ತೆ ನಡುಮಡುವಿನೊಳುಅತ್ತಲೇ ತಿರುಗೆನೆಗಳೆ||ಇತ್ತಂಡದಿಂತು ಕಾದಿದರು ಸಾವಿರ ವರುಷ |ಉತ್ತರಿಸಿತೇನೆಂಬೆ ಮತ್ತಾ ಗಜೇದ್ರಂಗೆ |ಸತ್ತ್ವ ತಗ್ಗಿತು ತನ್ನ ಮನದೊಳಗೆ ಚಿಂತಿಸಿತುಮತ್ತಾರು ಗತಿಯೆನುತಲಿ 4ಬಂದುದಾ ಸಮಯದಲಿ ಹಿಂದೆ ಮಾಡಿದ ಪುಣ್ಯ |ದಿಂದ ದಿವ್ಯಜಾÕನ ಕಣ್ದೆರೆದು ಮನದೊಳರ |ವಿಂದನಾಭಾಚ್ಯುತ ಮುಕುಂದಮಾಧವಕೃಷ್ಣನಿಖಿಲ ಮುನಿವೃಂದವಂದ್ಯ ||ಇಂದಿರಾರಮಣ ಗೋವಿಂದ ಕೇಶವ ಭಕ್ತ |ಬಂಧು ಕರುಣಾಸಿಂಧು ತಂದೆ ನೀ ಗತಿಯೆನಗೆ |ಇಂದುಸಿಲ್ಕಿದೆನು ಬಲು ದಂದುಗದಮಾಯಾಪ್ರ-ಬಂಧಕನೆ ನೆಗಳಿನಿಂದ 5ಪರಮಾತ್ಮ ಪರಮೇಶ ಪರತತ್ತ್ವ ಪರಿಪೂಜ್ಯ |ಪರತರ ಪರಂಜೋತಿಪರಮಪಾವನಮೂರ್ತಿ |ಪರಮೇಷ್ಟಿಪರಬ್ರಹ್ಮಪರಮಪರಮಾಕಾಶ |ಪರಿಪೂರ್ಣ ಪರಮಪುರುಷ ||ನಿರುಪಮ ನಿಜಾನಂದ ನಿರ್ಲಯ ನಿರಾಕಾರ |ನಿರವಧಿಕನಿರ್ಗುಣನಿರಂಜನನಿರಾಧಾರ |ನಿರವದ್ಯನಿಸ್ಸಂಗ ನಿಶ್ಚಿಂತ ನಿಖಿಲೇಶಇರದೆ ನೀ ಸಲಹೆಂದನು 6ಇಂತೆನುತ ಮೂಚ್ರ್ಛೆಯಲಿ ಗುಪ್ತಕಂಠಸ್ವರದ |ಕಾಂತ ನಡುನೀರೊಳಗೆ ತೇಲಿ ಮುಳುಗುತಲಿರೆ ಅ- |ನೆಗಳ ಬಾಯನು ಚಕ್ರದಲಿ ಸೀಳಿ ಕರಿವರದ |ಒಗುವ ಕರಣದಲಿ ಮೈದಡಹಲ್ಕೆ ಗಜಜನ್ಮ |ತೆಗೆದುದಾಕ್ಷಣಕೆ ಮಣಿಮುಕುಟ - ಕುಂಡಲದಿಂದನಗಧರನು ಓಲೈಸಿದ ||ವಿಗಡದೇವಲ ಮುನಿಯ ಶಾಪದಲಿ ದಾರುಣಿಯೊ- |ಳಗೆ ನಕ್ರನಾಗಿ ಹೂಹೂ ಎಂಬ ಗಂಧರ್ವ |ಮಗುಳಿಪುರವನು ಕಂಡು ನಿಜಗತಿಗೆ ಐದಿದಿನುಕಮಲಾಕ್ಷಮಿಗೆ ಮೆರೆದನು 8ಮಣಿಮುಕುಟಕುಂಡಲಪದಕಹಾರ ಕಡಗಕಂ- |ಕಣ ಕೌಸ್ತು ಭೊಜ್ವ ್ಜಲಾಂಗದವೈಜಯಂತಿಭೂ- |ಷಣ ಶಂಖ-ಚಕ್ರ-ಗದೆ-ಪದ್ಮ ಧರಿಸಿಹಹಸ್ತಪಣಿಯ ಕಸ್ತುರಿ ತಿಲಕದಾ ||ಝಣಝಣಿಪ ನೂಪುರದ ದಂತಪಂಕ್ತಿಯ ಕೃಪೇ- |ಕ್ಷಣದ ಸಿರಿಮೊಗದ ಪೀತಾಂಬರದ ಮೂರುತಿಗೆ |ಮಣಿದು ಜಂiÀi ಜಯಜಯಾಎಂಬ ಸುರನರರಸಂ- |ದಣಿಯಿಂದೆಹರಿಮೆರೆದನು 9ಹರಹರಿಎನುತ್ತಂಘ್ರಿಗೆರಗಲಿಭವರನನಾ- |ದರದಿಂದಲೆತ್ತುತಲಿ ಕೇಳ್ಮಗನೆ ನೀನೆನ್ನ |ವಿರಜಶರಪರಿಧಿಯಾ ಸರವನಹಿಪತಿಯನ್ನುಪರಜನ್ಮನೀ ಲಕುಮಿಯ ||ಪರಮೇಷ್ಟಿ-ಭವರ ಮನು-ಮುನಿಗಳನು ಧರಣಿಯನು |ಆವಾವನಿದನುದಯದಲ್ಲೆದ್ದು ಭಕ್ತಿಯಲಿ |ಭಾವಶುದ್ಧಿಯಲಿ ತಾ ಹೇಳಿಕೊಳುವನೊ ಅವನ- |ಘಾವಳಿಯ ಪರಿಹರಿಸಿ ಸುಙ್ಞÕನವೀವೆ ದೇ-ಹಾವಸಾನದಲೆನುತಲಿ ||ಶ್ರೀವಾಸುದೇವನಾಜಾÕನೆಸಿ ಗಜೇಂದ್ರ ಸಹಿ- |ತಾವಿಹಂಗಾಧಿಪನನೇರಿ ವೈಕುಂಠಕ್ಕೆ |ದೇವ ಬಿಜಯಂಗೈದಪುರಂದರವಿಠಲನ
--------------
ಪುರಂದರದಾಸರು
ಜಯದೇವ ಜಯದೇವ ಜಯ ವೆಂಕಟೇಶ |ಭಯಕೃದ್ಭಯನಾಶನ ಶೇಷಾಚಲವಾಸ ||ಜಯ||ಪ<?xmಟ veಡಿsioಟಿ='1.0' eಟಿಛಿoಜiಟಿg='uಣಜಿ-8'?>ಕಲಿಯುಗದಲಿ ಪ್ರತ್ಯಕ್ಷ ಭೂವೈಕುಂಠೆನಿಸಿ |ಸುಲಭವು ತೋರಿದಿ ಭಕ್ತರ ಬಯಕೆ ಪೂರೈಸಿ |ನಳಿನಸಂಭವ ಜನಕ ಸನಕಾದಿ ಪೋಷೀ |ತಿಳಿಯದು ನಿಮ್ಮಯ ಮಹಿಮೆಯು ಸಚ್ಚಿತ್ಸುಖರಾಶೀ1ಹೊಳೆವ ಶಿರದಲಿ ಕಿರೀಟಮಕರಕುಂಡಲವೂ |ಎಳೆ ತುಳಸಿ ವನಮಾಲಿ ಕೊರಳಲಿ ಶೋಭಿತವೂ |ಶ್ರೀವತ್ಸಕೌಸ್ತುಭಮಣಿರತ್ನದ ಜಡವೂ |ಥಳ ಥಳಿಪ ತೇಜಾ ಅಂಜನೀ ತನಯಾ2ಮತ್ಸ್ಯಕೂರ್ಮವರಾಹನರಹರಿ ವಾಮನನೆ |ತುಚ್ಛಮಾಡಿದಿ ಯಮಪುರ ರಾಮ ರಾಘವನೆವತ್ಸಾ ಶಿರಿ ಶಂಕರ ಆತ್ಮಜನೆ || ಜಯ3
--------------
ಜಕ್ಕಪ್ಪಯ್ಯನವರು
ತದಿಗೆಯ ದಿವಸ(ಶೇಷ ದೇವರನ್ನು ಕುರಿತು)ರಂಭೆ :ನ್ಯಾರೆಂಬುದನೆನಗೆ ಪೇಳೆಕ್ರೂರತನದಿ ತಾ ತೋರುವನೀಗ ಮ-ಹೋರಗನೆನ್ನುತ ಕೋರಿಕೆ ಬರುವದು 1ಒಂದೆರಡು ಶಿರವಲ್ಲ ಬಹುಹೊಂದಿಹವು ಸಟೆಯಲ್ಲಕಂಧರದಲಿ ಕಪ್ಪಂದದಿ ತೋರ್ಪವುಚಂದಿರಮುಖಿ ಯಾರೆಂದೆನಗರುಹೆಲೆ 2ಊರ್ವಶಿ : ಕೋಮಲಗಾತ್ರೆ ಮಹಾಮಹಿಮನು ಇವನ-ಸಾಮಾನ್ಯನೆ ಕಾಣೆಭೂಮಿಯ ಪೊತ್ತ ನಿರಾಮಯನಾದಸುಧೀಮನಿವನು ಜಾಣೆ 1ವಾಸುದೇವಗೆ ಈತ ಹಾಸಿಗೆಯವ ನಿ-ರ್ದೋಷನಿವನು ಜಾಣೆಸಾಸಿರಮುಖದ ವಿಲಾಸನಾಗಿಹ ಮಹಾ-ಶೇಷನಿವನು ಕಾಣೆ 2ಅದರಿಂದಲಿ ಕೇಳ್ ತದಿಗೆಯ ದಿವಸದಿಮಧುಸೂದನನಿವನಅಧಿಕಾನಂದದಿ ಒದಗಿಸಿ ಬರುವನುಇದೆಯಿಂದಿನಹದನ3ಎಂದಿನಂತೆ ಪುರಂದರವಂದ್ಯ ಮುಕುಂದಸಾನಂದದಲಿಅಂದಣವೇರಿ ಗೋವಿಂದ ಬರುವನೊಲ-ವಿಂದತಿ ಚಂದದಲಿ 4ಕಂಟಕಗಳು ಎಲ್ಲುಂಟೆಂಬಂತೆ ನೃಪ-ಕಂಠೀರವಗೈದಘಂಟಾನಾದದಿ ಮಂಟಪದೊಳು ವೈ-ಕುಂಠನು ಮಂಡಿಸಿದಾ 5ಕಾಂತಾಮಣಿ ಕೇಳಿಂತೀಪರಿ ಶ್ರೀ-ಕಾಂತ ನತತಂಡಸಂತವಿಸುತ ಮಹಾಂತಮಹಿಮನೇ-ಕಾಂತಸೇವೆಯಗೊಂಡ 6* * *ಪರಶಿವನನ್ನು ಕುರಿತುರಂಭೆ : ಯಾರಮ್ಮಾ ಮಹಾವೀರನಂತಿರುವನುಯಾರಮ್ಮಾ ಇವನ್ಯಾವ ಶೂರ ಯಾವಊರಿಂದ ಬಂದ ಪ್ರವೀರ ಆಹಾಮಾರಜನಕನ ವಿಸ್ತಾರಪೂಜೆಯ ವೇಳ್ಯಧೀರನಂದದಿ ತಾ ವಿಚಾರ ಮಾಡುವನೀತ 1ಕರದಿ ತ್ರಿಶೂಲವ ಧರಿಸಿ ಮತ್ತೆವರಕೃಷ್ಣಾಜಿನವನುಕರಿಸಿಹರಿಚರಣಸನ್ನಿಧಿಗೆ ಸತ್ಕರಿಸಿ ಆಹಾಜರಿಯ ದುಕೂಲವ ನಿರಿದುಟ್ಟುಕೊಂಡು ವಿ-ಸ್ತರವಾದ ತೋಷದಿ ಮೆರದು ನಲಿವ ಕಾಣೆ 2ಊರ್ವಶಿ : ಈತನೀಗ ಕಾಲಭೈರವ ಕೇಳೆಲೆಗೆ ನೀರ ಪ.ಈತನೀಗ ಪೂರ್ವದೊಳಗೆಭೂತನಾಥ ಸೇವೆಯೊಲಿದಓತು ವಿಷ್ಣುಭಕ್ತಿಯಿಂದಪೂತನಾದ ಪುಣ್ಯಪುರುಷ ಅ.ಪ.ಊರು ಇವಗೆ ಮೊದಲು ಗಂಗಾತೀರವಾಯ್ತುವೇಣುತಾ ವಿ-ಚಾರದಿಂದ ಪೊದನೈಉದಾರತನದಿ ರಾಮೇಶ್ವರಕೆಸಾರಗ್ರಹಿತ ಮುಕ್ತಿ ಪಥವನು ಕರುಣದಿಂದತೋರಿಸುವನು ವಿಷ್ಣುವೆಂದೆನುತ ಗಿರಿಯನೇರಿ ಕರುಣ ವಾರಿಧಿಯಪದಾರವಿಂದಸೇವೆಗೈದುಮಾರಪಿತನ ಭಕ್ತಿಯೊಳು ತಾ ಹೇರಿನಲಿವ ಚಾರುಚರಿತ 1ಪರಮಪುರುಷ ಹರುಷದಿಂದೀಪುರಕೆಬರುವಕಾಲದಲ್ಲಿಚರಣವನ್ನು ಬಿಡದೆ ಯಿಲ್ಲಿರುವನೈ ಮಹಾತ್ಮನೀತಸ್ಫುರಿತತೇಜೋಮೂರ್ತಿ ಈತನು ಲೋಕದೊಳಗೆಚರಿಸುವ ತ್ರಿಕಾಲಪ್ರಜÕನು ಇವನ ಗುಣವ-ನರಿವರ್ಯಾರು ಮನುಜಭುಜಂಗರಲಿಮಹತ್‍ಕಾರಣೀಕಪುರುಷನಿವ ಮಹಾ ಬಲಾಢ್ಯಕರುಣವುಳ್ಳ ವಿಷ್ಣುಭಕ್ತ 2ಶ್ರೀನಿವಾಸ ಕರುಣದಿಂಪ್ರಧಾನಿಯೆಂದು ನಡೆಸಿಕೊಡುವಏನಗೈದರೀತ ಮನದಿ ತಾನುತೋಷಪಟ್ಟು ಇರುವಕಾಣಿಕೆಗಳ ತರಿಸಿ ಇರಿಸುವ ಬೇತಾಳಪ್ರೇತನಾನಾ ಉಪದ್ರವಗಳ ಬಿಡಿಸುವ ಧನಿಯ ಆಜೆÕಏನ ದೊರಕಿತದನು ಬೇಗ ತಾನೆಬಂದು ಪೇಳಿ ಜನರಮಾನಿಸುತ ನಿಧಾನಗೊಳಿಸಿಕ್ಷೋಣಿಯೊಳಗೆ ಕೀರ್ತಿಪಟ್ಟ 3
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ತಾರಿಸೊ ಶ್ರೀಹರಿ ತಾರಿಸೊ ಪತಾರಿಸೊ ಭವವ ನಿವಾರಿಸೊ ನಿನ್ನಡಿಯತೋರಿಸೊ ವೈಕುಂಠ ಸೇರಿಸೋ ರಂಗಯ್ಯ ಅ.ಪಪಾಪವಿನಾಶನ ಮಾಡುವಿ ನೀತಾಪಸರನುನಿತ್ಯಸಲಹುವಿ ||ವ್ಯಾಪಿಸಿ ಸರ್ವತ್ರ ನಿನ್ನವರನು ಕಾಯ್ವಶ್ರೀ ಪಾಂಡುರಂಗ ಪರಮಾತ್ಮ ಮುಕುಂದ 1ಹಿರಣ್ಯಕಶಿಪುವನು ಸೀಳಿದೆ ಅವನಕರುಳನು ಕೊರಳೊಳು ಹಾಕಿದೆ ||ದುರಳ ಬುದ್ಧಿಯ ತಳೆದ ದೈತ್ಯಾಧಮನ ಕೊಂದಕರುಣ ದಿಂದಲಿ ಕಂದಗೊಲಿದೆ ಗೋವಿಂದ 2ಅಸುರೆ ಪೂತನಿಯ ಸಂಹರಿಸಿದೆ ನೀಶಶಿಮುಖಿಯಭಿಮಾನ ಕಾಯ್ದೆ ||ಶಿಶುವಾಗಿ ಬಾಲಲೀಲೆಗಳನು ತೋರಿದೆಕುಸುಮನಾಭ ಶ್ರೀಪುರಂದರವಿಠಲ3
--------------
ಪುರಂದರದಾಸರು
ತೋರುತಲೈದಾನೆ ಮುಕ್ತಿಯ ತೋರುತಲೈದಾನೆಸಾರಿ ಶರಣರೆಂದು ಶ್ರೀನಿವಾಸದೇವ ಪ.ಹುಲ್ಲು ಕಲ್ಲಿನ ಪೂಜೆಯ ಮಾಡಿ ಕೆಡದೆಬೆಲ್ಲದಾಸೆಗೆಂಜಲು ತಿನ್ನದೆಸೊಲ್ಲುಸೊಲ್ಲಿಗೆ ಹರಿಸರ್ವೋತ್ತಮನೆಂದುಬಲ್ಲವರು ಭಕ್ತಿಲಿ ಭಜಿಸಿರೆಂದು 1ಭುವಿಯ ವೈಕುಂಠವು ನೋಡಿರಾನತರೆಂದುನವನವ ಉತ್ಸಾಹದೊಳಿಹನುಯುವತಿ ಲಕುಮಿ ಕೂಡ ಸ್ವಾಮಿ ಪುಷ್ಕರಕೂಲಭವನದೊಳಗಿಪ್ಪ ಭಕ್ತ ಚಿಂತಾಮಣಿ 2ನೆಲೆಯೆ ಸಿಕ್ಕದ ಧರ್ಮಕರ್ಮದ ತೊಡರ ಬಿಟ್ಟಲಸದೆ ತನ್ನಂಘ್ರಿಯಾತ್ರೆ ಮಾಡಿಸುಲಭದಿ ಮೋಕ್ಷವ ಗಳಿಸಿಕೊಳ್ಳೆನುತಲಿಕಲಿಯುಗದೊಳಗೆ ಪ್ರಸನ್ನವೆಂಕಟಪತಿ 3
--------------
ಪ್ರಸನ್ನವೆಂಕಟದಾಸರು
ದಣಿಯ ನೋಡಿದೆನೋ ವೆಂಕಟನ ಮನದಣಿಯೆ ನೋಡಿದೆ ಶಿಖಾಮಣಿಯ ನಿರ್ಮಲನ ಪಕೇಸಕ್ಕಿಅನ್ನ ಉಂಬುವನ ದುಡ್ಡುಕಾಸು ಬಿಡದೆ ಹೊನ್ನುಗಳಿಸಿಕೊಂಬುವನ ||ದೋಸೆ ಅನ್ನವ ಮಾರಿಸುವನತನ್ನ ದಾಸರ ಮೇಳದಿ ಕುಣಿದಾಡುತಿಹನ 1ಗಂಟಿನೊಲ್ಲಿಯ ಹೊದ್ದಿಹನ-ಹೊರಹೊಂಟು ಹೋಗಿ ಬೇಟೆಯಾಡುತಲಿಹನ ||ಗಂಟೆ ನಾದಕೆ ಒಲಿಯುವನ ಭೂವೈ-ಕುಂಠವಿದೆಂದು ಹಸ್ತವ ತೋರಿದವನ 2ಬೆಟ್ಟದೊಳಗೆ ಇದುತಿಹನ ಮನಮುಟ್ಟೆ ಭಜಿಪ ಭಕುತರಿಗೊಲಿದವನ ||ಕೊಟ್ಟ ವರವ ತಪ್ಪದವನ ಈಸೃಷ್ಟಿಗಧಿಕಪುರಂದರವಿಠಲನ3
--------------
ಪುರಂದರದಾಸರು