ಒಟ್ಟು 494 ಕಡೆಗಳಲ್ಲಿ , 79 ದಾಸರು , 466 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸ್ವಾಮಿ ನೃಸಿಂಹ ಸರಸ್ವತಿಗೆ ಮಂಗಳಾ |ಕಾಮಿತ ಕಾಮ ಫಲ ತೃಪ್ತಿಗೆ ಮಂಗಳಾ ಪ ನಿತ್ಯ ನಿರ್ಮಾಯಗೆ ಮಂಗಳಾ |ನಿರ್ವಾಣ ಸುಖ ಯತಿರಾಯಗೆ ಮಂಗಳಾ 1 ಭಕ್ತಜನರ ಕಲ್ಪವೃಕ್ಷಗೆ ಮಂಗಳಾ |ಭಕ್ತಿಯಿಂದ ಭಜಿಸುವ ಮೋಕ್ಷಗೆ ಮಂಗಳ |ಭೀಮಾ ಗಂಧರ್ವಪುರ ವಾಸಗೆ ಮಂಗಳಾ |ಶ್ರೀ ಭೀಮಾಶಂಕರ ಗುರು ಈಶಗೆ ಮಂಗಳಾ 3
--------------
ಭೀಮಾಶಂಕರ
ಸ್ವಾಮಿ ಬಂದನು ಸತ್ಯಭಾಮೆರುಕ್ಮಿಣಿಯರಿಂದ ಕಾಮಿತ ಫಲವ ಕೊಡುತಲೆ ಪ. ವಾಸುದೇವ ತಾಯಿ ದೇವಕಿದೇವಿಎಂಭತ್ತುಕೋಟಿ ಯಾದವರುಎಂಭತ್ತುಕೋಟಿ ಯಾದವರು ಬರುತಾರೆ ತೊಂಭತ್ತು ಮಹಲು ತೆರವಿರಲಿ 1 ಸರ್ಪಶಯನನ ಬದಿಯಲೊಪ್ಪುತ ಬಲರಾಮ ಛsÀಪ್ಪನ್ನ ಕೋಟಿ ದ್ವಿಜರಿಂದ ಛsÀಪ್ಪನ್ನ ಕೋಟಿ ದ್ವಿಜರಿಂದ ಬರುತಾರ ಎಪ್ಪತ್ತು ಮಹಲು ತರವಿರಲಿ 2 ಸೂರ್ಯ ಸೂರ್ಯ ಹೊಳೆವಂತೆ ಗರುಡನೇರಿಅಂಗಳಕ ಬಂದ ನರಹರಿ 3 ನಾಗಶಯನನು ಬಂದ ಬೇಗಆರುತಿ ತಾರೆ ನೂರು ಸೂರ್ಯರ ಬೆಳಕಿಲೆ ನೂರು ಸೂರ್ಯರ ಬೆಳಗೊ ಗರುಡನೇರಿಬಾಗಿಲಿಗೆ ಬಂದ ಯದುಪತಿ4 ಮದಗಜಗಮನೆ ಬ್ಯಾಗ ಕಡಲಾರತಿಯ ತಾರೆ ಚದುರೆ ನೀ ತಾರೆ ಫಲಗಳಚದುರೆ ನೀ ತಾರೆ ಫಲಗಳ ಐವರಿಗೆ ಎದುರಿಗೆ ಬಾರೆಂದು ಕರಿಯಮ್ಮ 5 ಕೃಷ್ಣರಾಯನು ಬಂದ ಬುಕ್ಕಿಟ್ಟು ಸೂರ್ಯಾಡೆಅಷ್ಟ ಸೌಭಾಗ್ಯ ಇವು ನೋಡಅಷ್ಟ ಸೌಭಾಗ್ಯ ಇವು ನೋಡ ಮಾಡಿದ್ದುಎಷ್ಟು ಸುಕೃತವು ಸ್ಮರಿಸಮ್ಮ6 ಮಾಧವ ರಾಮೇಶನ ಉಪಚರಿಸೆ7
--------------
ಗಲಗಲಿಅವ್ವನವರು
ಸ್ವಾಮಿಯ ನೆನೆಯೋ ಪಾಮರ ಮನಸೆ ನೀ ತಾಮಸವನು ನೀಗಿ ಪ ಕಾಮಾದಿಗಳ ಜೈಸಾಮಹಿಮ ಸತ್ಯ ಭಾಮೇಶಗತಿಯೆಂದು ನೇಮವಹಿಸಿ ಬಿಡದೆ ನಾಮ ಪೊಗಳುವರ ಕಾಮಿತಗಳನಿತ್ತು ಪ್ರೇಮದಿಂ ಕಾಯ್ವಂಥ 1 ಗೋಪ ಗೋಪತಿ ನಮಿತ ಗೋಪಿಯ ಪ್ರಿಯಬಾಲ ಪಾಪನಿವಾರಣ ಆ ಪರಬ್ರಹ್ಮನ ಶ್ರೀಪಾದ ಪೊಗಳಲು ತಾಪತ್ರಯಂಗಳ ಲೋಪಮಾಡುವಂಥ 2 ಪರಮ ಶ್ರೀಗುರು ಎಂದು ಪರಮಾತ್ಮ ಶ್ರೀರಾಮ ಚರಣಸಾನ್ನಿಧ್ಯಕ್ಹೊಂದು ನರಕಯಾತನೆ ಗೆಲಿಸಿ ಬರುತಿರ್ಪ ಕಷ್ಟಗಳ ಪರಿಹರಿಸಿ ಕರಪಿಡಿದು ಕರುಣದಿ ಸಲಹುವ 3
--------------
ರಾಮದಾಸರು
ಸ್ವಾಮೀ ರಕ್ಷಿಸು ಸುಬ್ರಹ್ಮಣ್ಯ ಕಾಮಿತಪ್ರದ ಸುರಸ್ತೋಮಾಗ್ರಗಣ್ಯಪ. ಜನ್ಮ ಜನ್ಮಾಂತರದ ಕರ್ಮಾನುಸಾರದಿಂ ದುರ್ಮತಿಗೆಳಸಿಯಹಮ್ಮಮತೆಯಲಿ ದುರಿತ ದೂರವಿರಿಸು ನಿರ್ಮಲಜ್ಞಾನೋಪದೇಶವನಿತ್ತೆನ್ನ1 ಪ್ರತ್ಯಗಾತ್ಮನ ನಾಮ ಕೀರ್ತನೆ ಗೈಯುತ್ತ ಭಕ್ತಿಸೌಭಾಗ್ಯವಿರಕ್ತಿಯ ನೀಡು ಭೃತ್ಯವತ್ಸಲ ಭವಭಯಹರ ಗಿರಿಜಾ- ಪುತ್ರನೆ ಪರಮಪವಿತ್ರ ಸುಚರಿತ್ರನೆ2 ಸುರಲೋಕವನು ಕಾವ ಧುರಧೀರ ಪ್ರಭು ನಿನಗೀ ನರಲೋಕವನು ಕಾವದುರು ಕಷ್ಟವೇನು ಪರಿಶುದ್ಧ ಸ್ಥಾನಿಕಧರಣೀಸುರಕುಲ- ಗುರುವೆಂದು ಚರಣಕ್ಕೆ ಶರಣಾಗತನಾದೆ3 ಸಾಕುವಾತನು ನೀನೆ ಸಲಹುವಾತನು ನೀನೆ ಬೇಕು ಬೇಡೆಂಬುವರ ನಾ ಕಾಣೆ ದೊರೆಯೆ ಲೋಕೇಶ ಸುಕುಮಾರ ಶೋಕಮೋಹವಿದೂರ ನೀಕರಿಸದೆಯೆನ್ನ ಸ್ವೀಕಾರ ಮಾಡಯ್ಯ4 ಪೃಥ್ವಿಯೊಳ್ಪಾವಂಜೆ ಕ್ಷೇತ್ರಾಧಿವಾಸನೆ ಸುತ್ರಾಮಾದಿ ಸುರಮೊತ್ತ ಪೂಜಿತನೆ ಕರ್ತ ಲಕ್ಷ್ಮೀನಾರಾಯಣನ ಸಾರೂಪ್ಯನೇ ದೈತ್ಯದಲ್ಲಣ ವಲ್ಲೀದೇವಿ ಮನೋಹರನೆ5
--------------
ತುಪಾಕಿ ವೆಂಕಟರಮಣಾಚಾರ್ಯ
ಹನುಮ ಭೀಮ ಮುನಿಪ ಎನ್ನ ಮನಕೆ ಬಾರೆಲೊ | ಮನಸಿಜ ಹರ ಜನಕ ಭಾವಿ ವನಜಾಸನ ಘನ ಮಹಿಮನೆ ಪ ಜಲಧಿ ಧಾಂಟ ಇಳಿಜಾತೆಗೆ ಸಲಿಸಿ ಮೋದ ಗೊಳಿಸಿದ ಮಹ ಬಲಶಾಲಿಯೆ 1 ಕಂತು ವಿತನೇಕಾಂತ ಭಕುತ ಕುಂತಿ ಜಾತ ದಂತಿಪುರದ ಕಾಂತೆಗೆ ಕೃತಾಂತನಾದ ಶಾಂತೆನೆ ಮಹಂತರೊಡೆಯ 2 ಶಾಮಸುಂದರವಿಠಲ ಜಗಕೆ ಶರಧಿ ಭೂಮಿ ವಿಬುಧ ಸ್ತೋಮನಮಿತ ಕಾಮಿತ ಪ್ರದ 3
--------------
ಶಾಮಸುಂದರ ವಿಠಲ
ಹನುಮಂತ ವಿಠ್ಠಲಾ | ಪೊರೆಯ ಬೇಕಿವಳಾ ಪ ಘನ ಮಹಿಮ ನಿನ್ಹೊರತು | ಅನ್ಯರನು ಕಾಣೇ ಅ.ಪ. ಸ್ವಾಪದಲಿ ಗುರುದರ್ಶ | ಅಂತೆ ಅಂಕಿತ ಪತ್ರತಾ ಪಿಡಿದು ನಿಂತಿಹಳೊ | ಶ್ರೀಪ ಸೀತಾಪತೇ |ಕಾಪಟ್ಯರಹಿತಳನು | ಕೈಪಿಡಿದು ಸಲಹೆಂದುನಾ ಪ್ರಾರ್ಥಿಪೆನೊ ನಿನ್ನಾ | ತಾಪಸ ಸುವಂದ್ಯಾ 1 ಕನ್ಯೆಯಗಭಯದನಾಗಿ | ಮುನ್ನಪತಿ ಸೇವೆಯನುಚೆನ್ನಾಗಿ ದೊರಕಿಸುತ | ಕಾಪಾಡೊ ಹರಿಯೇ |ಅನ್ನಂತ ಮಹಿಮ ಕಾರುಣ್ಯ | ಸಾಗರನೆ ಹರಿನಿನ್ನನೇ ನಂಬಿಹಳೊ | ಭಾವಜ್ಞಮೂರ್ತೇ 2 ಭವ ಶರಧಿ ಸನ್ನುತ ಸ್ವಾಮಿ | ಭೂಮಗುಣ ಧಾಮಾ 3 ಮರುತ ಮತ ತತ್ವಗಳು | ಸ್ಛುರಿಸಲಿವಳಿಗೆ ಹರಿಯೇತರತಮಾತ್ಮಕ ಜ್ಞಾನ | ದರಿವು ವೃದ್ಧಿಸಲೀ |ಹರಿಯ ಸರ್ವೋತ್ತಮತೆ | ಸ್ಥಿರವಾಗಿ ಇವಳೀಗೆಪರಮಸಾಧನ ಮಾರ್ಗ | ಕ್ರಮಿಸುವಂತೆಸಗೋ 4 ಕಾಮಿತಪ್ರದ ದುಷ್ಟ | ಆಮಯವ ಪರಿಹರಿಸಿಈ ಮಹಿಳೆಯುದ್ಧರಿಸೊ | ಸ್ವಾಮಿ ರಾಮಚಂದ್ರಾ |ನಾಮಾಂತ ಇತ್ತುದಕೆ | ಸಾರ್ಥಕವ ಮಾಡೆಂದುಸ್ವಾಮಿ ಗುರು ಗೋವಿಂದ | ವಿಠಲ ಭಿನ್ನವಿಪೆ 5
--------------
ಗುರುಗೋವಿಂದವಿಠಲರು
ಹರಿ ಎನ್ನ ಕೇಳಿದಾ ಮಾತಾ ಶಿರಿಪತಿಯನಾಥಾ ಹರಿ ಎನ್ನ ಕೇಳಿದಾ ಮಾತಾ ಪ ಭೂಮಿಯ ದಾನವಾ ಬೇಡಿದಾ ವಾಮ ಮೂರು ಪಾದಾವಾ ಕಾಮಿತವಿನಿತೆಂದಾಡಿದಾ ಧಾಮುರಾಜ್ಯ ಬ್ಯಾಡೆಂದಾ 1 ವಟುಕೂಟದಿಟವೆಂದು ನಂಬಿದೆ ಕುಟಿಲನಡಿಗೆ ಮರುಳಾದೆ ನಟಿಸುವ ವಾಮನೆಂದಾಡಿದೆ ವಿಠಲರೂಪ ತಿಳಿಯದೆ 2 ಎರಡು ಪಾದದಿ ಭೂಮಿ ಮುಗಿಸಿದಾ ಇರಿಸಲೆಲ್ಲೆ ಮೂರನೆಂದಾ ಧರಿಸೀಗ ಶಿರದೊಳು ಎಂದಾ ನರಸಿಂಹವಿಠಲ ದಾಸಾ 3
--------------
ನರಸಿಂಹವಿಠಲರು
ಹರಿ ನಿನ್ನ ನಾಮದ | ಸ್ಮರಣೆಯ ನಾನು || ನಿರುತವು ಮಾಡುವೆ | ಪೊರೆಯೆನ್ನ ನೀನು ಪ ಶರಣರ ಪೊರೆವ| ಪರಮ ಪಾವನನು | ಕರುಣಾಳು ನಿನ್ನಯ | ಶರಣನಾಗಿಹೆನುಅ.ಪ ಕರಿರಾಜಗಿತ್ತೆ ನೀ | ವರ ಮುಕ್ತಿಪಥವ || ತರಳನಿಗೊಲಿದಿತ್ತೆ | ವರಧ್ರುವಪದವ 1 ಹರಿಯನು ತೋರೆಂದು | ಗರ್ಜಿಸಿ ಜರೆದ|| ದುರುಳನ ಬಗಿಯುತ್ತ| ತರಳನಿಗೊಲಿದ 2 ಕಾಮಿತಾರ್ಥವನಿತ್ತೆ| ಪ್ರೇಮದೊಳನಿಶ 3 ಮರಣದ ಸಮಯದಿ | ಕರೆದಜಾಮಿಳಗೆ|| ಪರಮಪದವನಿತ್ತು | ಕರುಣದಿ ಪೊರೆದ 4 ಅರಿತಾದರು ಮನ| ಕ್ಕರಿಯದೆ ಗೈದ || ದುರಿತಂಗಳಿರೆ ಪರಿ| ಹರಿಸೆಂದು ಸತತ 5 ನೀನಲ್ಲದೆನ್ನನು | ಪೊರೆಯುವರಿಲ್ಲ || ನಿನ್ನ ಸೇವೆಯ ಮಾಡ | ಲರಿಯೆ ನಾನಲ್ಲ6 ಇಹಪರಸುಖವಿತ್ತು | ಮುಕ್ತಿಯನೀವ || ಮಹಿಮನೆಂದರಿತಿಹೆ | ಭಕ್ತಸಂಜೀವ 7
--------------
ವೆಂಕಟ್‍ರಾವ್
ಹರಿಗುರು ಪ್ರಸನ್ನ ವಿಠಲ | ಪೊರೆಯ ಬೇಕಿವಳಾ ಪ ದುರಿತ ರಾಶಿಯ ಕಳೆದು | ಕಾಪಾಡೋ ಇವಳಾ ಅ.ಪ. ಭವ ವಂದ್ಯ | ಕೋಮಲಾಂಗನೆ ದೇವಕಾಮಿತಾರ್ಥದವನಾಗಿ | ಕಾಪಾಡ ಬೇಕೋ 1 ಬೋಧ ತಿಳಿಸುತಲೀಸಾಧನವ ಗೈಸಿ ಸ | ಮ್ಮೋದ ಕೊಡು ಇವಳೀಗೆಹೇ ದಯಾನಿಧಿ ಹರಿಯೇ | ಬಾದರಾಯಣನೇ 2 ಪತಿಸುತರೊಳು ಹರಿಯೇ | ವ್ಯಾಪ್ತಿಯನೆ ತಿಳಿಸುತ್ತಹಿತದಾದ ಸೇವೆಯಲಿ | ರತಳೆನಿಸೊ ಹರಿಯೇಹಿತವಹಿತವೆರಡನ್ನು | ಸಮತೆಯಲಿ ಉಂಬಂಥಮತಿಯ ನೀ ಕರುಣಿಸುತ | ಅತಿಹಿತದಿ ಪೊರೆಯೋ 3 ಭವವನದಿ ನವಪೋತ | ತವದಿವ್ಯಸ್ಮøತಿ ಇತ್ತುಶ್ರವಣ ಸುಖ ವದಗಿಸುತ | ಸಾಧನವ ಗೈಸೋಭುವನ ಪಾವನ ದೇವ | ತವನಾಮ ಜಪಗಳನುಸರ್ವದಾ ಕರುಣಿಸುತ | ಉದ್ಧರಿಸೋ ಇವಳಾ 4 ಪತಿ ಗುರು | ಗೋವಿಂದ ವಿಠಲಾ 5
--------------
ಗುರುಗೋವಿಂದವಿಠಲರು
ಹರಿನಾಮ ಮರೆಯ ಬೇಡಯ್ಯ ಪರಿ ದುರಿತಗಳನ್ನು ಅದು ನೀಗುವುದಯ್ಯಾ ಪ ತರಳಪ್ರಲ್ಹಾದನಿಗೊಲಿದ ನಾಮವುಯಿದು ದುರುಳ ರಕ್ಕಸರನ್ನು ತರಿದ ನಾಮವೋ 1 ನಿರುತದಿ ಭಕ್ತರಿಗೊಲಿವ ನಾಮವುಯಿದು ಸರಸದಿ ಭಜಕರ ಪೊರೆವ ನಾಮವೋ 2 ಭಾಮೆಗಕ್ಷಯವಿತ್ತ ಪರಮನಾಮವುಯಿದು ಪ್ರೇಮದಿ ದಾಸರಿಗೊಲಿವ ನಾಮವೋ 3 ಕಾಮಿತ ವರಗಳನೀವ ನಾಮವುಯಿದು ನಿತ್ಯ ಭಜಿಪ ನಾಮವೋ 4 ದಶರೂಪ ಧರಿಸಿದ ದಿವ್ಯ ನಾಮವುಯಿದು ದಶಕಂಠನನು ಕೊಂದ ಶ್ರೀನಾಮವೋ 5 ಕೇಶವ ರೂಪದಿ ಮೆರೆವ ನಾಮವುಯಿದು ಪಾಶವ ಕಡಿಯುವ ನಿಜ ನಾಮವೋ 6 ವರ ದೂರ್ವಾಪುರದ ಶ್ರೀಹರಿಯ ನಾಮವುಯಿದು ಮರೆಯದೆ ಭಕ್ತರ ಪೊರೆವ ನಾಮವೋ 7 ಸಿರಿ ಚನ್ನಕೇಶವನೆಂಬ ನಾಮವೋ 8
--------------
ಕರ್ಕಿ ಕೇಶವದಾಸ
ಹರಿಯಂದು ಸ್ಮರಿಸುವರ ದುರಿತಪರಿಹಾರವೆಂದು ನೆರೆಪೇಳ್ವ ಶೃತಿ ತಿಳಿದು ಮನವೆ ಕರುಣಾಸಾಗರನಾದ ಕಮಲಾದ್ರಿವಾಸ ನರಹರಿಯಪಾದ ಭಜಿಸುವ ಮನವೆ ಪ ಸುತನ ನಿಂದಗನೆಂದು ಹಿತದಂತ್ಯಕಾಲ ಸಂಘಾತನೆ ಹಿತ ವೇಳ್ವೆ ಕರಿಯಲು ಮನವೆ ಚತುರಾಸ್ಯ ಜನಕ ಮನ್ಮಥಕೋಟಿರೂಪ ಸದ್ಗತಿ ತೋರಿಸಲಹುದೇನು ಮನವೆ 1 ಆ ಮರರೀಮರ ಎಂಬ ಪಾಮರಗೆ ಪಟ್ಟಾಭಿರಾಮ ಭಕ್ತರ ಪ್ರೇಮ ಮನವೆ ಕಾಮಿತಾರ್ಥವನಿತ್ತ ಕಂಜಾಕ್ಷದಯದಿ ಸೀತಾಮನೋಹರ ರಾಮ ಮನವೆ 2 ಕರಿಯು ಮಕರಿಗೆ ಶಿಲ್ಕಿ ನೆರಳುತಲಿ ಪರಮಾತ್ಮ ಪರಬ್ರಹ್ಮನೆಂದು ಸ್ತುತಿಸಿ ಮನವೆ ಗರುಡವಾಹನ ಹೆನ್ನೆಪುರನಿಲಯ ಮರಿಯದಲೆ ಪರಿಪಾಲಿಸಿ ಪೊರೆವ ಮನವೆ 3
--------------
ಹೆನ್ನೆರಂಗದಾಸರು
ಹರೇ ಹರೇ ಕೃಷ್ಣ ಹರೇ ಕೃಷ ಹರೇ ಹರೇ ಹರೇ ಪ ಕೌಸಲ್ಯ ವರವಂಶೋದ್ಭವ ಸುರ ಸಂಸೇವಿತ ಪದರಾಮ ಹರೇ ವಂಶೋದ್ಭವ ಶ್ರೀ ಕೃಷ್ಣಹರೇ 1 ಮುನಿಮಖರಕ್ಷಕ ದನುಜರಶಿಕ್ಷಕÀ ಘಣಿಧರ ಸನ್ನುತರಾಮಹರೇ ಘನವರ್ಣಾಂಗ ಸುಮನಸರೊಡೆಯ ಶ್ರೀ - ವನಜಾಸನ ಪಿತ ಕೃಷ್ಣ ಹರೇ 2 ಶಿಲೆಯ ಪಾದರಜದಲಿ ಸ್ತ್ರೀ ಮಾಡಿದ ಸುಲಲಿತ ಗುಣನಿಧಿ ರಾಮ ಹರೇ ಬಲುವಕ್ರಾಗಿದ್ದ ಬಲೆಯ ಕ್ಷಣದಲಿ ಚಲುವೆಯ ಮಾಡಿದ ಕೃಷ್ಣ ಹರೇ 3 ಹರಧನುಭಂಗಿಸಿ ಹರುಷದಿಜಾನಕಿ ಕರವಪಿಡಿದ ಶ್ರೀರಾಮ ಹರೇ ಸಿರಿ ರುಕ್ಮಿಣಿಯನು ತ್ವರದಲಿ ವರಿಸಿದ ಶರಣರ ಪಾಲಕ ಕೃಷ್ಣ ಹರೇ 4 ಜನಕ ಪೇಳೆ ಲಕ್ಷ್ಮಣ ಸೀತಾ ಸಹ ವನಕೆ ತೆರಳಿದ ರಾಮ ಹರೇ ವನಕೆ ಪೋಗಿ ತನ್ನಣುಗರೊಡನೆ ಗೋ - ವನು ಪಾಲಿಪ ಶ್ರೀ ಕೃಷ್ಣ ಹರೇ5 ತಾಟಕೆ ಖರಮಧು ಕೈಟಭಾರಿಪಾ ಪಾಟವಿ ಸುರಮಖ ರಾಮಹರೇ ಆಟದಿ ಫಣಿಮೇಲ್ ನಾಟ್ಯವನಾಡಿದ ಖೇಟವಾಹ ಶ್ರೀ ಕೃಷ್ಣ ಹರೇ 6 ಚದುರೆ ಶಬರಿಯಿತ್ತ ಬದರಿಯ ಫಲವನು ಮುದದಿ ಸೇವಿಸಿದ ರಾಮ ಹರೇ ವಿದುರನ ಕ್ಷೀರಕೆ ವದಗಿ ಪೋದ ಶ್ರೀ ಪದುಮನಾಭ ಜಯ ಕೃಷ್ಣ ಹರೇ 7 ಸೇವಿತ ಹನುಮ ಸುಗ್ರೀವನ ಸಖಜಗ - ತ್ಪಾವನ ಪರತರ ರಾಮಹರೇ ದೇವ ದೇವ ಶ್ರೀ ಕೃಷ್ಣ ಹರೇ 8 ಗಿರಿಗಳಿಂದ ವರಶರಧಿ ಬಂಧಿಸಿದ ಪರಮ ಸಮರ್ಥ ಶ್ರೀರಾಮ ಹರೇ ಗಿರಿಯ ತನ್ನ ಕಿರಿ ಬೆರಳಿಲೆತ್ತಿ ಗೋ - ಪರನ ಕಾಯ್ದ ಶ್ರೀ ಕೃಷ್ಣ ಹರೇ 9 ಖಂಡಿಸಿದಶಶಿರ ಚಂಡಾಡಿದ ಕೋ - ದಂಡಪಾಣಿ ಶ್ರೀ ರಾಮ ಹರೇ ಪಾಂಡುತನಯರಿಂ ಚಂಡಕೌರವರ ದಿಂಡುಗೆಡಹಿಸಿದ ಕೃಷ್ಣ ಹರೇ 10 ತವಕದಯೋಧ್ಯಾ ಪುರಕೈದಿದ ತ - ನ್ಯುವತಿಯೊಡನೆ ಶ್ರೀ ರಾಮ ಹರೇ ರವಿಸುತ ತನಯಗೆ ಪಟ್ಟವಗಟ್ಟಿದ ಭವತಾರಕ ಶ್ರೀ ಕೃಷ್ಣ ಹರೇ 11 ಭರತನು ಪ್ರಾರ್ಥಿಸಲರಸತ್ವವ ಸ್ವೀ - ಕರಿಸಿದತ್ವರದಲಿ ರಾಮ ಹರೇ ವರಧರ್ಮಾದ್ಯರ ಧರಿಯೊಳು ಮೆರೆಸಿದ ಪರಮಕೃಪಾಕರ ಕೃಷ್ಣ ಹರೇ 12 ಧರೆಯೊಳಜ್ಞಜನರನು ಮೋಹಿಪುದಕೆ ಹರನ ಪೂಜಿಸಿದರಾಮ ಹರೇ ಹರನ ಪ್ರಾರ್ಥಿಸಿವರವನು ಪಡೆದಾ ಚರಿತೆಯಗಾಧವು ಕೃಷ್ಣ ಹರೇ 13 ಅತುಳಮಹಿಮ ಸದ್ಯತಿಗಳ ಹೃದಯದಿ ಸತತ ವಿರಾಜಿಪÀರಾಮಹರೇ ಸಿತವಾಹನ ಸಾರಥಿಯೆನಿಸಿದ ಸುರತತಿ ಪೂಜಿತ ಪದ ಕೃಷ್ಣ ಹರೇ 14 ರಾಮ ರಾಮ ಯಂದ್ನೇಮದಿ ಭಜಿಪರ ಕಾಮಿತ ಫಲದ ಶ್ರೀ ರಾಮಹರೇ ಪ್ರೇಮದಿ ಭಕ್ತರ ಪಾಲಿಪ ಶ್ರೀ ವರ - ದೇಶವಿಠಲ ಶ್ರೀ ಕೃಷ್ಣ ಹರೇ 15
--------------
ವರದೇಶವಿಠಲ
ಹಸೆಗೆ ಬಾರಯ್ಯ ಹದಿನಾಲ್ಕು ಲೋಕದೊಡೆಯ ಪ ಕುಸುಮಾಸ್ತ್ರನೈಯ್ಯ ಕೋರಿ ಪ್ರಾರ್ಥಿಪೆ ಜೀಯಾ ಅ.ಪ ಪಕ್ಷಿಗಮನ ದುಷ್ಟ ರಾಕ್ಷಾಸಾಂತಕ ನೀನು- ಪೇಕ್ಷೆಮಾಡದೆ ನಿರಪೇಕ್ಷ ಸೌಖ್ಯವೀಯಲು 1 ಪದುಮೆಯೊಡನೆ ಹೃದಯಪದುಮ ಪೀಠದಿ ಕುಳಿತು ಸದಮಲ ಜ್ಞಾನ ವದಗಿಸುವದಕೀಗ 2 ಪ್ರೇಮಾದಿ ಸುಜನರಿಗೆ ಕಾಮಿತ ಫಲವೀವ ಸ್ವಾಮಿ ನೀನೆ ಶ್ರೀಗುರುರಾಮ ವಿಠಲ ವಲಿದು 3
--------------
ಗುರುರಾಮವಿಠಲ
ಹಸೆಗೆ ಬಾರೆ ಸುಂದರಿ ಓ ಪ ಬಿಸಜಾಲಯೆ ಜನಕ ಕುಮಾರಿ ಅ.ಪ ಮುತ್ತು ಮಾಣಿಕದ ಪೀಠವಂ ಭಕ್ತಿಯಿಂದ ಅಲಂಕರಿಸಿ ಮಿತ್ರೆಯರೆಲ್ಲರು ಕರೆವರು 1 ಸುತ್ತ ಜ್ಯೋತಿಯು ಬೆಳಗಲು ಮತ್ತೆ ಮೆಲ್ಲಡಿಯಿಡುತಲಿ ಓ ಬಿಸಜಾಲಯೆ 2 ಭೂಮಿಜೆ ಲೋಕಮಾತೆಯೆ ಕಾಮಿತಪ್ರದೆ ಶ್ರೀ ಗುರುರಾಮ ವಿಠಲನರಸಿಯೆ 3
--------------
ಗುರುರಾಮವಿಠಲ
ಹಾನಿಯಾದ ಮೇಲೆ ಏನು ಬೆಂಬಲವಾದರಿನ್ನೇನಿನ್ನೇನು ಮಾನಹೋದ ಮೇಲೆ ದಿನವೆಷ್ಟು ಬಾಳಿದರಿನ್ನೇನಿನ್ನೇನು ಪ ಆಪತ್ತಿಗಿಲ್ಲದ ಆಪ್ತರೆಷ್ಟಿದ್ದರು ಇನ್ನೇನಿನ್ನೇನು ತಾ ಪರರಾಳದವಗ್ಹಣವು ಎಷ್ಟಿರ್ದರಿನ್ನೇನಿನ್ನೇನು ಕೋಪಿಷ್ಠನಾದವ ತಪವೆಷ್ಟು ಗೈಯಲು ಇನ್ನೇನಿನ್ನೇನು ಪಾಪಕ್ಕಂಜದನೀಗಧಿಕಾರರ್ವಿರಿನ್ನೇನಿನ್ನೇನು 1 ವನಿತೆಯ ಸೇರದ ಗಂಡ ಮನೆಯೊಳಿರ್ದರಿನ್ನೇನಿನ್ನೇನು ಒಣಗಲು ಪೈರಿಗೆ ಬಾರದ ಮಳೆ ತಾನಿನ್ನೇನಿನ್ನೇನು ಬನ್ನಬಡುವರ ಕÀಂಡು ಗಹಗಹಿಸಿ ನಕ್ಕರಿನ್ನೇನಿನ್ನೇನು ಮನ್ನಣಿಲ್ಲದ ಸಭೆ ಮಾನ್ಯರು ಪೊಕ್ಕರಿನ್ನೇನಿನ್ನೇನು 2 ಅವಮಾನ ಸಮಯಕ್ಕೆ ಒದಗದ ಗೆಳತನವಿನ್ನೇನಿನ್ನೇನು ಧವ ಸತ್ತ ಯುವತಿಯ ಕುರುಳು ಮಾರಿದರಿನ್ನೇನಿನ್ನೇನು ದಯದಾಕ್ಷಿಣ್ಯಲ್ಲದ ಅರಸನಾಳಿಕಿದ್ದರಿನ್ನೇನಿನ್ನೇನು ದಿವಮಣಿ ತನ್ನಯ ಕಿರಣಂಗಳ್ತೋರದಿರಲಿನ್ನೇನಿನ್ನೇನು 3 ಸತಿ ರೂಪಸ್ಥಳಾದರಿನ್ನೇನಿನ್ನೇನು ರೋಗ ಕಳೆಯದ ವೈದ್ಯರಾನಂಗರಿದ್ದರಿನ್ನೇನಿನ್ನೇನು ಆಗಿಬಾರದವರ ಬಾಗಿಲ ಕಾಯ್ದರಿನ್ನೇನಿನ್ನೇನು ಭೋಗಿವಿಷಕೆ ಗರುಡಮಂತ್ರನುವಾಗಲು ಇನ್ನೇನಿನ್ನೇನು 4 ಪ್ರೇಮದವರೆ ತನ್ನೊಳ್ ತಾಮಸರಾದಿರಿನ್ನೇನಿನ್ನೇನು ನೇಮಿಸಿದ್ಯೆಲ್ಲವು ಇದಿರಾಗಿ ಕೂತಮೇಲಿನ್ನೇನಿನ್ನೇನು ಕಾಮಧೇನುವೆ ಮನದಿ ಕಾಮಿತವೀಯದಿರೆ ಇನ್ನೇನಿನ್ನೇನು ಸ್ವಾಮಿ ಶ್ರೀರಾಮನ ಪ್ರೇಮ ಪಡೆಯದ ನರ ಇನ್ನೇನಿನ್ನೇನು 5
--------------
ರಾಮದಾಸರು