ಒಟ್ಟು 7530 ಕಡೆಗಳಲ್ಲಿ , 133 ದಾಸರು , 4766 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎಂದಿಗೆ ಬಿಡಿಸುವೆದಂದುಗಗೋವಿಂದ ದಣಿಸುತಿದೆದಂದುಗಪ.ಸುಳ್ಳನಾಡಿಸುತಿದೆದಂದುಗನೇಮಗಳ್ಳನ ಮಾಡಿತುದಂದುಗಎಲ್ಲೆಂಜಲುಣಿಸಿತುದಂದುಗಕೈವಲ್ಯವ ಮರೆಸಿತುದಂದುಗ1ಹರಿಸೇವೆ ಬಿಡಿಸಿತುದಂದುಗಗುರುಹಿರಿಯರನ್ವಂಚಿಪದಂದುಗಸರಕುಮಾಡಿತು ಎನ್ನದಂದುಗಯಮಪುರದಾರಿವಿಡಿಸ್ಯದೆದಂದುಗ2ನೀಚಗಂಚಿಸುತಿದೆದಂದುಗಕ್ಷುದ್ರಯಾಚನೆವಿಡಿಸ್ಯ್ಕದೆದಂದುಗಆಚಾರ ಚರಿಸಿತುದಂದುಗದುಷ್ಟ್ಯೋಚನೆ ತ್ಯಜಿಸದುದಂದುಗ3ಕಾಂಚನದಾಸೇಲಿದಂದುಗಕೆಟ್ಟಹಂಚಿಗ್ಹಲ್ದೆರೆಸಿತುದಂದುಗಪಂಚಗಂಗೆಯ ಬಿಟ್ಟುದಂದುಗಜೊಂಡುಬೆಂಬಿಲಿ ಮೀಯಿಸಿತುದಂದುಗ4ನಿನ್ನೊಲುಮ್ಯೊದರಿದಂದುಗಕಾಡಿಎನ್ನಾಳೋದುಂಟೇನೊದಂದುಗಪ್ರಸನ್ವೆಂಕಟೇಶ ನಾಮಜಿಹ್ವೆಪೂರ್ಣಗಲ್ಲಾದ್ಯಂತದಂದುಗ5
--------------
ಪ್ರಸನ್ನವೆಂಕಟದಾಸರು
ಎಂದಿಗೆಂದಿಗೆ ತೀರದು ನಮ್ಮಪ್ಪನ ಮಹಿಮಿನ್ನೆಂದಿಗೆಂದಿಗೂ ತೀರದು ಪ.ಎಂದೆಂದಂದದಿ ಸಂಧಿಸಿ ಪೊಂದಿದಾಇಂದಿರೆಸುಂದರೆ ಬಂದಾನೆಂದೆಂತೆಂದಳುವೃಂದಾರಕಾರವಿಂದಜಾಹೀಂದ್ರರು ನಿಂದರೂತಂದೆ ಮುಕುಂದ ಆನಂದನಂದನ ಮಹಿಮೆ 1ನಿಗಮಗಳು ಗುರುತ ಪೊಗಳಲು ಮಿಗೆ ತಪಸಿಗಳೆಣಿಕೆಗೆ ಮೈಯಗೊಡದೆ ನಗುವನಖಗಧ್ವಜ ಮೃಗಮುಖ ತ್ರಿಗೇಹ್ಯ ಪನ್ನಗಶಾಯಿಅಘದೂರ ಸುಗುಣಗಣನ ಮಹಿಮೆ 2ಉನ್ನತಕುನ್ನತ ಇನ್ನಣುಗಿನ್ನಣುಘನ್ನಕೆ ಘನ್ನ ಜಗನ್ನುತ ಸನ್ನಿದತನ್ನವನೆನ್ನಲು ಮನ್ನಿಪ ಚಿನ್ಮಯಚೆನ್ನ ಪ್ರಸನ್ವೆಂಕಟನಾಥನ ಮಹಿಮೆ 3
--------------
ಪ್ರಸನ್ನವೆಂಕಟದಾಸರು
ಎಂದು ಕಾಂಬುವೆ ಎನ್ನ ಸಲಹುವತಂದೆ ಉಡುಪಿಯ ಜಾಣನಮಂದಹಾಸ ಪ್ರವೀಣನಇಂದಿರಾ ಭೂರಮಣನ ಪ.ಕಡಲ ತಡಿಯೊಳು ಎಸೆವ ರಂಗನಕಡೆಗೋಲ ನೇಣ ಪಿಡಿದನಮೃಡಪುರಂದರಅಜರೊಡೆಯನ ಈರಡಿಗಳಲಿ ಶಿರ ಇಡುವೆ ನಾ 1ದೇವಕಿಯ ಜಠರದಲ್ಲಿ ಬಂದನಆವಪಳ್ಳಿಯಲ್ಲಿ ನಿಂದನಮಾವ ಕಂಸನ ಕೊಂದನಕಾವನಯ್ಯಮುಕುಂದನ2ಪೂರ್ಣಪ್ರಜÕರಿಗೊಲಿದು ದ್ವಾರಕೆಯಮಣ್ಣಿನೊಳು ಪ್ರಕಟಿಸಿದನ ಭವಾರ್ಣವಕೆ ಪ್ಲವನಾದನ ಪ್ರಸನ್ನವೆಂಕಟ ಕೃಷ್ಣನ 3
--------------
ಪ್ರಸನ್ನವೆಂಕಟದಾಸರು
ಎಂದು ಬಹನಮ್ಮ ಯಾದವರರಸನುಎಂದು ಬಹನಮ್ಮ ಪ.ತಂದು ತೋರೆಲೆ ಗಜಗಾಮಿನಿ ಯದುಕುಲ ತಿಲಕನಕಂದುಗೊರಳಗೊಲ್ಲ ಚಂದದಿಎಂದಿಗೆ ಅವ ನಮ್ಮ ಕಾಡುವಇಂದುವದನೆಪೋಗೆ ಬ್ಯಾಗೆ1ಯಾಕೆ ಗೋಕುಲ ನಮಗ್ಯಾಕೆ ವೃಂದಾವನಸಾಕುವರ್ಯಾರಮ್ಮ ನಮ್ಮನುಶ್ರೀಕಾಂತನಿಲ್ಲದೆ ನಿಮಿಷ ಯುಗವಾಯಿತುಪೋಕನಲ್ಲವೆ ಕ್ರೂರ ಅಕ್ರೂರ 2ಮುಡಿಗೆ ಮಲ್ಲಿಗೆಭಾರಕಣ್ಣಿಗೆ ಅಂಜನಭಾರನಡುಮಧ್ಯಕೆ ನಿರಿಭಾರವೆಅಡಿಗೆಅಂದುಗೆಭಾರನುಡಿವ ಕೀರವಉರಜಡಿವಸಮೀರಸಖಿಯೆ ಸಖಿಯೆ3ಬೆಳದಿಂಗಳೆನಗೆ ಬಿಸಿಲಾಗಿ ತೋರುತಲಿದೆ ಬಗೆ ಬಗೆ ಪುಣ್ಯದ ಮಾಲಿಕೆಯುಅಲ್ಲೆ ಪಿಕಗಾನವು ಕಿವಿಗತಿಕಠಿಣವುಒಲ್ಲೆಅಗರುಚಂದನಲೇಪತಾಪ4ಯಾಕೆ ಕಸ್ತೂರಿ ಗಂಧ ನಮಗ್ಯಾಕೆ ಚಂಪಕಮಾಲೆಲೋಕನಾಯಕ ತಾನಿಲ್ಲದೆಶ್ರೀಕಾಂತನಿಲ್ಲದೆ ನಿಮಿಷ್ಯುಗವಾಯಿತು ಕಂಡಿದ ಪ್ರಸನ್ವೆಂಕಟ 5
--------------
ಪ್ರಸನ್ನವೆಂಕಟದಾಸರು
ಎಂದು ಹರಿಭಟರು ಕೆಡರು ಇವರಿಗೆ ಮತ್ತೆಂದಿಗಿಲ್ಲೆಡರುತೊಡರುಪ.ಘಟಜನುಕ್ತಿಯಲಿಕರಿಗಟ್ಟಿಯಾಗಿ ಪ್ರಾಣ ಸಂಕಟಬಡಲು ನಕ್ರನ ತುಟಿ ಹರಿದುಹರಿಪೊರೆದ1ಎಣಿಕೆಯಿಲ್ಲದ ಪಾಪ ಎಣಿಸಿ ಬಂದ್ಯಮನವರಹಣಿದು ವಿಪ್ರಜಾಮಿಳನ ವನಜಾಕ್ಷ ಪುರಕೊಯ್ದ 2ಮುನಿ ಕನಲಿ ಅಂಬರೀಷನ ದಣಿಸುತಿರೆ ಚಕ್ರವನು ಕಳುಹಿ ವೈಷ್ಣವಾಗ್ರಣಿಯ ಛಲ ಗೆಲಿಸಿದನು 3ಕಪಟಿ ಕೌರವ ಪಾಂಡುನೃಪಜರನು ಬೆಂಕೊಳಲುಕುಪಿತನಾಗಲೆ ಬಂದು ಕೃಪೆಯಿಂದ ಕಾಯ್ದ ಗಡ 4ಶ್ರೀಪ್ರಸನ್ವೆಂಕಟನ ಶ್ರೀಪದವ ನಂಬಿದರೆಶಾಪ ಪಾಪೋಗ್ರಸಂತಾಪವೇನು ಮಾಡುವುವು 5
--------------
ಪ್ರಸನ್ನವೆಂಕಟದಾಸರು
ಎಂದೆಂದಿಗೂ ನಿನ್ನ ಪಾದವೆ ಗತಿಯೋ ಗೋವಿಂದ ಬಾರೈ ಎನ್ನ ಹೃದಯ ಮಂದಿರಕೆ ಪಮೊದಲಿಲ್ಲಿ ಬರಬಾರದು ನಾ ಬಂದೆತುದಿಮೊದಲಿಲ್ಲದ ಭವದಿಂದ ನೊಂದೆ ||ಇದರಿಂದ ಗೆದ್ದು ಹೋಗುವುದೆಂತು ಮುಂದೆಪದುಮನಾಭನೆ ತಪ್ಪುಕ್ಷಮೆಮಾಡುತಂದೆ1ಹೆಣ್ಣು ಹೊನ್ನು ಮಣ್ಣಿನಾಶೆಗೆ ಬಿದ್ದುಪುಣ್ಯ ಪಾಪಂಗಳ ನಾನರಿತಿದ್ದು ||ಅನ್ಯಾಯವಾಯಿತು ಇದಕೇನು ಮದ್ದುನಿನ್ನ ಧ್ಯಾನವ ಕೊಡು ಹೃದಯದೊಳಿದ್ದು 2ಹಿಂದೆ ನಾ ಮಾಡಿದ ಪಾಪವ ಕಳೆದುಮುಂದೆನ್ನ ಜನ್ಮ ಸಫಲ ಮಾಡಿ ಪೊರೆದು ||ತಂದೆ ಶ್ರೀಪುರಂದರವಿಠಲ ನೀನಿಂದುಬಂದು ಸಲಹೊ ನನ್ನ ಹೃದಯದಿನಿಂದು3
--------------
ಪುರಂದರದಾಸರು
ಎನಗೊಬ್ಬ ದೊರೆ ದೊರಕಿದನು|ಅಜರಾಮರಣನಾದ ಅಪ್ರಾಕೃತನಾದ |ಶಂಖ ಚಕ್ರಾಂಕಿತದ ಸಂಕರುಷಣನಾದ |
--------------
ಪುರಂದರದಾಸರು
ಎನ್ನ ಪಾಲಿಸು ಪರಮಕಾಯ ರಘುರನ್ನ ರಾಮನ ಪ್ರಿಯ ಗುರುಮಧ್ವರಾಯ ಪ.ಅಂಜನಿ ಆತ್ಮದಲಿ ಬಂದು ರಾಮನಪಾದಕಂಜವಿಡಿದೆ ಕಡಲ ಲಂಘಿಸಿದೆ ಗೋಷ್ಪದದಿಪಂಜು ಬೆಳಗಿದೆ ನಿಶಾಚರನ ಪಟ್ಟಣವಳಿದೆಕಂಜಾಕ್ಷಿಯಳ ತುಷ್ಟಿಗೈದೆ ಗಡಾಸಂಜೀವ ತಂದು ಕಪಿಬಲವ ರಕ್ಷಿಸಿದೆ 1ಕುರುಕುಲಾಧಮನು ಬಲುಸೊಕ್ಕಿ ಸಂಗರಭಟರನೆರಹಿ ಪಾರ್ಥರ ಬಲವ ಗೆಲುವೆನೆಂದವನ ಭರಮುರಿದೆ ಮಹರಥಿಕರೆದೆ ಹರಿದೆ ಅಸಹಾಯ ಶೂರಸರಿಯಾರು ನಿನಗಸಮಧೀರ ಭಾಪುಕರುಣಾಸಾಗರ ಉದಾರ ಅಜಪದದಧಿಕಾರ 2ಏಕವಿಂಶತಿಮಾಯಿ ರಚಿತ ಭಾಷ್ಯವ ಜರಿದೆಶ್ರೀಕಾಂತನ ನಾಮಾಮೃತವ ಭಕ್ತರಿಗೆರೆದೆಭೂಕನಕ ವಧು ವಿಷಯಕಾಂಕ್ಷೆಗಳ ಮೇಲೊದೆದೆಲೋಕಕೊಬ್ಬನೆ ಗುರುವೆ ಮೆರೆದೆ ವಿಶ್ವೇಶ ಪ್ರಸನ್ನವೆಂಕಟೇಶನಂಘ್ರಿವಿಡಿದೆ 3
--------------
ಪ್ರಸನ್ನವೆಂಕಟದಾಸರು
ಎನ್ನ ರಕ್ಷಿಸೊ ನೀನು - ದೇವರ ದೇವ ಪಎನ್ನ ರಕ್ಷಿಸೊ ನೀನು ಯಾದವ ಕುಲಮಣಿಮುನ್ನ ದ್ರೌಪದಿಯಭಿಮಾನ ಕಾಯ್ದ ಕೃಷ್ಣ ಅ.ಪ.ಬಾಲನ ಮೊರೆಯನುಕೇಳಿಕೃಪೆಯಿಂದಪಾಲಿಸಿದೆಯೊ ನರಸಿಂಹ ರೂಪದಿಂದ 1ಪಾಷಾಣಚರಣದಿ ಯೋಷಿದ್ರೂಪವ ಗೈದೆದೋಷ ಸಂಹಾರ ನಿರ್ದೋಷಗುಣಪೂರ್ಣನೆ 2ಇನಕುಲಾಂಬುಧಿ ಚಂದ್ರ ಘನಶುಭಗುಣಸಾಂದ್ರಸನಕಾದಿ ಮುನಿವಂದ್ಯಪುರಂದರವಿಠಲ3
--------------
ಪುರಂದರದಾಸರು
ಎಲೊ ರಮಾಪತಿ ಹಕ್ಕಿಗಳು ಬಾಯಿ ಬಿಡುವಂತೆಬಳಲುವೆವೊ ಈಗ ನಾವೆಲ್ಲ | (ನಾವೆಲ್ಲ) ಈ ಬ್ರಹ್ಮಕುಲದ ಅಭಿಮಾನ ನಿನದಲ್ಲೆ ಪಗೌಡ ಪ್ರಬಲಾಗೆ ತಲೆಗೂಡೆನಿಸಿತೆನಗೆ ನೋಡ ಮನೆಕಡೆಗೆ ಮಡಿವಾಳ | (ಮಡಿವಾಳ) ಮರ ಹಾಳುಮಾಡುವರು ದ್ವಿಜರೆಂಬನು ಜೀಯ 1ಗಡಿಗೆಗಳು ಒಂದನ್ನ ಕೊಡನು ಗ್ರಹಣಗಳು ಹನ್ನೆ-ರಡೂ ಆದರನ್ನಾ ಕುಂಬಾರ | (ಕುಂಬಾರ)ನಿದ ಸ್ಮರಿಸಿಅಡವಿಯೊಳು ಕುಳಿತು ಆ(ಅ ?)ಳಬೇಕು 2ಭಕ್ರಿಯೆಂಬುದು ತುಪ್ಪ ಸಕ್ರಿ ಮಾಡಿದ ಬಡಿಗಅಕ್ರೂರ ವರದ ದಯಾಸಿಂಧು | (ದಯಾಸಿಂಧು) ಎಂದು ಈಅಕ್ರಮವ ನಿನಗೇ ಉಸಿರುವೆ3ಕಾಲರಕ್ಷೆಯ ಹೊಲಿಯ ಧಾಳಾಯ ಕೊಡುಯೆಂದುಗೋಳಾಡಿಸುವನು ಅತಿಶೂದ್ರ | (ಅತಿಶೂದ್ರ) ಈ ದುಃಖಕೇಳುವರೇ ಇಲ್ಲೋ ಪರಮಾತ್ಮ 4ಯರಿಬೀಳು ಅದಕೂ ಮತ್ತೇರಿಸುವನೋ ಎಲ್ಲೋ ಎಂ-ದಿರುಳೆಲ್ಲ ನಿದ್ರಿಲ್ಲೋ ಮೇಲ್ಪøತ್ತಿ | (ಮೇಲ್ಪøತ್ತಿ)ಯೆಂಬುವದುಗುರುತಿಲ್ಲಧೋಯ್ತೋ ಗುರುವರ್ಯ 5ಇದ್ದ ಜ್ಞಾತಿಗಳಿಂದೆ ಮುದ್ದ್ಯಾಗಬೇಕೆಂಬಶ್ರದ್ಧೆಯನೇ ಬಿಟ್ಟು ಅವನನ್ನೇ | (ಅವನನ್ನೇ) ಕೊಂಡಾಡಿಹೊದ್ದಿ ದಿನಗಳದೂ ಬದುಕುವರು6ಈ ರೀತಿ ನೋಡಲ್ಕೆ ಮೂರನೆ ಕಾಲವೇಂತೋರುವದೊ ಯಮಗೆ ಪ್ರಾಣೇಶ | (ಪ್ರಾಣೇಶ) ವಿಠಲ ಉ-ದ್ಧಾರ ಮಾಡುವದು ನೀ ಬಲ್ಲೆ7
--------------
ಪ್ರಾಣೇಶದಾಸರು
ಎಲ್ಲರಾಡ್ಯೇನು ಭಾಗವತರಾವೆಂದುಬಲ್ಲವರೆ ಬಲ್ಲರು ಹರಿಯ ಊಳಿಗವ ಪ.ಸಟೆಯನ್ನೀಗಿದ ಭಕ್ತಿ ಮಿಶ್ರವಿಲ್ಲದ ಜ್ಞಾನಜಠರಾನುಕೂಲಕಲ್ಲದ ವಿರಕ್ತಿದಿಟವಾಗಿ ಮಾಡುವ ಮಹಿಮರಿಗಲ್ಲದೆಘಟಿಸದು ಒಣಮಾತಿನ ಕೋವಿದಂಗೆ 1ಡಂಬವಿಲ್ಲದ ದಾನ ಕಳವಳಿಸದ ಪೂಜೆಡೊಂಬಿಯಾಗದ ಜಪಧ್ಯಾನ ಮೌನಕುಂಭಿಣಿಯೊಳು ಮಾನುಭವಗಲ್ಲದೆಭವಸಂಭ್ರಮಕುಬ್ಬುವ ಸುಖಿಪುಂಸಂಗೇನು 2ಹೇಯವಿಲ್ಲದ ಕೀತ್ರ್ನೆ ಹೇವವಿಕ್ಕದವಿದ್ಯೆಬಾಹ್ಯ ತೋರದಹರಿಭೃತ್ಯವೃತ್ತಿದೇಹ ಚಿತ್ತವ ಕದಿಯದ ಧರ್ಮವ್ರತ ಕೃಷ್ಣಸ್ನೇಹಿತಗುಂಟು ಸಂಸಾರಿಗಗಾಧ 3ವಂಚಿಸದ ಬುಧಸೇವೆ ಠೌಳಿಸದ ಮಂತ್ರ ಪ್ರಪಂಚ ಕೂಡದ ತತ್ವ ಚರ್ಚಂಗಳುಮುಂಚುವ ಮುಕುತರಿಗಲ್ಲದೆ ಯಾತನೆಯಸಂಚಕಾರವಿಡಿದ ಸುಖಿ ಪುಂಸಂಗೇನು 4ಯಾಗವ ತಾ ನಿಯೋಗವ ತಾನಾತ್ಯಾಗವ ತಾನಾಗಿಹದು ಸುಲಭಭೋಗವತಿಯ ತಂದೆ ಪ್ರಸನ್ವೆಂಕಟೇಶನಭಾಗವತಾಂಘ್ರಿ ಪರಾಗ ದುರ್ಲಭವು 5
--------------
ಪ್ರಸನ್ನವೆಂಕಟದಾಸರು
ಎಲ್ಲವನು ಬಲ್ಲೆನೆನ್ನುವಿರಲ್ಲಸಲ್ಲದಗುಣಬಿಡಲಿಲ್ಲಪ.ಸೊಲ್ಲಿಗೆ ಶರಣರ ಕಥೆಗಳ ಪೇಳುತಅಲ್ಲದನುಡಿಗಳ ನುಡಿಯುವಿರಲ್ಲಅಪಕಾವಿಯನುಟ್ಟು ತಿರುಗುವಿರಲ್ಲಕಾಮವ ಬಿಡಲಿಲ್ಲನೇಮ - ನಿಷ್ಠೆಗಳ ಮಾಡವಿರಲ್ಲತಾಮಸ ಬಿಡಲಿಲ್ಲತಾವೊಂದರಿಯದೆ ಪರರಲಿ ತಿಳಿಯದೆಕೀವದ ಕುಳಿಯಲಿ ಬೀಳುವಿರಲ್ಲ 1ಗುರುಗಳ ಸೇವೆಯ ಮಾಡಿದಿರಲ್ಲಗುರುತಾಗಲೆ ಇಲ್ಲಪರಿಪರಿ ದೇಶವ ತಿರಿಗಿದಿರಲ್ಲಪೊರೆಯುವರಿನ್ನಿಲ್ಲಅರಿವೊಂದರಿಯದೆಆಗಮ ತಿಳಿಯದೆನರಕಕೂಪದಲಿ ಬೀಳುವಿರಲ್ಲ 2ಬ್ರಹ್ಮಜ್ಞಾನಿಗಳೆನಿಸುವಿರಲ್ಲಹಮ್ಮನು ಬಿಡಲಿಲ್ಲಸುಮ್ಮನೆ ಯಾಗವ ಮಾಡುವಿರಲ್ಲಹೆಮ್ಮೆಯ ಬಿಡಲಿಲ್ಲಗಮ್ಮನೆ ಪುರಂದರವಿಠಲನ ಪಾದಕೆಒಮ್ಮೆಯಾದರು ನೀವೆರಗಲೆ ಇಲ್ಲ 3
--------------
ಪುರಂದರದಾಸರು
ಎಲ್ಲಿಯ ಮಧುರಾಪುರವು | ಎಲ್ಲಿಯ ತಾ ಬಿಲ್ಲು ಹಬ್ಬ |ಎಲ್ಲಿಯ ಸೋದರಮಾವನೆ ಪಎಲ್ಲಿಯ ಮಲ್ಲರಸಂಗ |ಖುಲ್ಲಕಂಸನು ನಮಗೆ |ಎಲ್ಲಿಯ ಜನ್ಮದ ವೈರಿಯೆ-ಸಖಿಯೆ ಅ.ಪವೃಂದಾವನದೊಳಗಿರುವ ವೃಕ್ಷಜಾತಿಗಳೆಲ್ಲ |ಒಂದೊಂದು ಫಲದಿಂದಲಿ ಸಂದಣಿತವೆ ||ಕುಂದಕುಸುಮದಲಿರುವ ಮಂದಿರದಲಿಚಕೋರ|ಒಂದೊಂದು ಸುಖಭರಿತವೆ ||ಅಂದುಮಾಧವನಮ್ಮ ಹೊಂದಿ ಕರವಿಡಿದ |ನಂದನ ಕಂದನ ಚರಿತವೆ ಸಖಿಯೆ 1ಅಕ್ರೂರ ತಾನೆಲ್ಲ ಅಚ್ಯುತಗೆಎಡೆಮಾಡಿ |ಆ ಕ್ರೂರನೆನಿಸಿದನೆ |ವಕ್ರಮಾರ್ಗವ ಕೂಡಿ ವನಿತೆಯರ ಉಸಿರೆಣಿಸಿ |ಚಕ್ರಧರನಗಲಿಸಿದನೆ ||ಆಕ್ರಮಿಸಿ ಸುರಲೋಕ ಪಾರಿಜಾತವನಂಬು-|ಜಾಕ್ಷಿಗೆ ತಂದಿತ್ತನೆ-ಸಖಿಯೆ 2ನೀರ ಚೆಲ್ಲಾಟದೊಳು ನಿಲಿಸಿ ನಮ್ಮೆಲ್ಲರ |ನಾರಿಯರಿಗೆ ಚಲ್ಲಿದನೆ ||ಮೋರೆ ಮೋರೆ ನೋಡಿ ಅಧರಾಮೃತಗಳ |ಸಾರಿ ಸಾರಿ ಸವಿದುಂಬನೆ ||ದ್ವಾರಕಾಪುರವಾಸ ಪುರಂದರವಿಠಲ |ಸೇರಿ ನಮ್ಮನು ಸಲಹುವನೆ-ಸಖಿಯೆ 3
--------------
ಪುರಂದರದಾಸರು
ಎಲ್ಲಿರುವನೋ ರಂಗನೆಂಬ ಸಂಶಯ ಬೇಡ |ಎಲ್ಲಿ ಭಕುತರು ಕರೆದರಲ್ಲಿ ಬಂದೊದಗುವನು ಪ.ತರಳ ಪ್ರಹ್ಲಾದ ಶ್ರೀಹರಿ ವಿಶ್ವಮಯನೆಂದು |ಬರೆದೋದಲವನ ಪಿತ ಕೋಪದಿಂದ ||ಸ್ಥಿರವಾದೊಡೀ ಕಂಬದಲಿ ತೋರು - ತೋರೆನಲು |ಭರದಿ ಬರಲಾಗ ವೈಕುಂಠವಲ್ಲಿಹುದೊ ? 1ಕುರುಪತಿಯು ದ್ರೌಪದಿಯ ಸೀರೆ ಸೆಳೆಯುತಿರೆ |ತರುಣಿ ಹಾ ಕೃಷ್ಣ ಎಂದೊದರೆಕೇಳಿ ||ಭರದಿಂದಲಕ್ಷಯಾಂಬರವೀಯೆ ಹಸ್ತಿನಾ |ಪುರವು ದ್ವಾರಾವತಿಗೆ ಕೂಗಳತೆಯೆ 2ಕರಿರಾಜನನುನೆಗಳು ನುಂಗುತಿರೆ ಭಯದಿಂದ |ಹರಿಯೆ ಕಾಯೆಂದು ಮೊರೆಯಿಡಲುಕೇಳಿ ||ಕರುಣದಿಂ ಬಂಧನವ ಬಿಡಿಸಲಾ ಗಜರಾಜ - |ನಿರುವ ಸರಸಿಗೆ ಅನಂತಾಸನ ಮುಮ್ಮನೆಯೆ 3ಪಾಪಕರ್ಮವ ಮಾಡಿದಜಮಿಳನ ಯಮಭಟರು ||ಕೋಪದಿಂದಲಿ ಸೆಳೆಯೆ ಭೀತಿಯಿಂದ ||ತಾ ಪುತ್ರನನು ಕರೆಯೆಕೇಳಿ ರಕ್ಷಿಸಿಶ್ವೇತ -ದೀಪವೀ ಧರೆಗೆ ಸಮೀಪವಾಗಿಹುದೆ ? 4ಅಣು - ಮಹತ್ತುಗಳಲ್ಲಿ ಪರಿಪೂರ್ಣನೆಂದೆನಿಸಿ |ಎಣೆಯಿಲ್ಲದ ಮಹಾಗುಣಪೂರ್ಣನು ||ಘನಮಹಿಮನಾದ ಶ್ರೀ ಪುರಂದರವಿಠಲನು |ನೆನೆದವರ ಮನದೊಳಗೆ ಇಹನೆಂಬ ಬಿರುದುಂಟು 5
--------------
ಪುರಂದರದಾಸರು
ಎಷ್ಟು ಬಡಿವಾರೊ ನಿನ್ನಶ್ರೇಷ್ಠ ಸುಖಪೂರ್ಣ ಫನ್ನಅಷ್ಟ ಗುಣವನುಅತಿಗಳದ್ಯೊ ಯಾದವರನ್ನ ಪ.ಕುಕ್ಷಿಲೋಕನೆ ನಿನಗೆ ರಕ್ಷೆ ಇಟ್ಟಾಳೊಗೋಪಿವಕ್ಷ ಸ್ಥಳದಲ್ಲಿಹ ಲಕುಮಿಯುವಕ್ಷ ಸ್ಥಳದಲ್ಲಿಹ ಲಕುಮಿಯುಬೆರಗಾಗಿ ವೀಕ್ಷಿಸುತಲಿ ನಗತಾಳೊ 1ಅಂಧಕಾರದಿ ಜಲವೃಂದದಿ ದುಡುಕಿಸಿಒಂದೇ ಕೂಸಲ್ಲೊ ಪ್ರಳಯದಿಒಂದೇ ಕೂಸಲ್ಲೊ ಪ್ರಳಯದಿ ರಕ್ಷವತಂದು ಇಟ್ಟವರು ನಿನಗಾರೊ 2ಪುಟ್ಟ ಕೂಸೆಂದು ಸ್ತನ ಕೊಟ್ಟ ನಾರಿಯ ಕೊಂದೆಇಷ್ಟು ಕರುಣೆ ನಿನಗಿಲ್ಲೊಇಷ್ಟು ಕರುಣೆ ನಿನಗಿಲ್ಲೊ ದಯಾಬುದ್ದಿಕೆÀಟ್ಟು ಹೋಯಿತೇನೊ ಪ್ರಳಯದಿ 3ಕೃಷ್ಣ ಕೃಷ್ಣ ಎನುತ ಬಿಟ್ಟಳು ಪ್ರಾಣವದೃಷ್ಟಿಗೆ ಬೀಳೋದು ತಡವೇನೊದೃಷ್ಟಿಗೆ ಬೀಳೋದು ತಡವೇನೊ ನಿನ್ನವ್ಯಾಪ್ತಿ ಕೆಟ್ಟು ಹೋಯಿತೇನೊ ಪ್ರಳಯದಿ 4ಮಂದಮತಿಯರಗಂಡಮುಂದಕ್ಕೆ ಬಿಡಲೊಲ್ಲಇಂದಿರಾ ಪತಿಯೆ ಗತಿಯೆಂದಇಂದಿರಾ ಪತಿಯೆ ಗತಿಯೆಂದ ಭಕ್ತಳಕೊಂದೆಯಲ್ಲೊ ಪಾಪ ಬರಲಿಲ್ಲ 5ಕಡಲಶಾಯಿ ನಿನ್ನ ಬೆಡಗು ಎಷ್ಟು ಹೇಳಲಿಹಿಡ ಹಿಡಿದುಲಾಳಿಕೊಡುವಾಗಹಿಡ ಹಿಡಿದುಲಾಳಿಕೊಡುವಾಗ ಗೊಲ್ಲರಹುಡುಗರಿಗಿಂತ ಕಡೆಯೇನೊ 6ವೀರ ರಾಮೇಶ ನಿನ್ನಚಾರುಗುಣಗಳನೆಲ್ಲಸೂರಿಬಿಟ್ಟೇನೊ ಸುರರಿಗೆಸೂರಿಬಿಟ್ಟೇನೊ ಸುರರಿಗೆ ನಿನಗಿನ್ನುಯಾರೂ ಮನ್ನಿಸದ ಪರಿಯಂತ 7
--------------
ಗಲಗಲಿಅವ್ವನವರು