ಒಟ್ಟು 7653 ಕಡೆಗಳಲ್ಲಿ , 132 ದಾಸರು , 4671 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಂಗನಾಕುಲ ಶಿರೋಮಣಿ ಶ್ರೀಮಾ |ಶೃಂಗಾರವನಧಿಗರುಡಧ್ವಜೆಮಂಗಳಾದೇವಿ ಹಸೆಗೇಳು ಪಕ್ಷೀರಸಾಗರಕನ್ಯಾವಿಧಿ|ಮಾರಾಂತಕ ಶಕ್ರಕರಾರ್ಚಿತೆ ||ವಾರಿಜಸದನೆ ಸಿರಿದೇವಿ |ಸಿರಿದೇವಿ ತ್ರೈಲೋಕಕೆ ಜನನೀ ರಕ್ಕಸಾರಿ ಹಸೆಗೇಳು 1ಭಾರತಿಪಾರ್ವತಿ ಶಾಮಲ ಮುಖ |ನೂರು ಸುರರರಸಿಯರೆಲ್ಲರು ||ಮೀರಿಧರುಷದಲಿ ಪದಪಾಡಿ | ಹಸೆಯಬರೆದಿಹರೆಲೆ ನಾರಾಯಣನ ರಾಣೀ || ಹಸೆಗೇಳು 2ಋಷಿಗಳು ವೇದ ಪುರಾಣಗಳುಪ |ನಿಷದ್ವಾಕ್ಯಗಳಿಂದ ತುತಿಸುವರು ||ವಸುಧೆಗಾನಂದ ಪಡಿಸಲು |ಶುಭಕುಂದರದನೆಆಸಿತಕುಂತಲೆಯೇ ಹಸೆಗೇಳು 3ಕಡೆಗಣ್ಣಿನ ನೋಟದಿ ಲೋಕವ |ತಡೆಯದೆ ಪುಟ್ಟಿಸಿ ಪಾಲಿಸಿ ಪುನಃ ||ಕೆಡಿಸುವೆ ಸ್ವೇಚ್ಛೆಯಲಿ ವೈದರ್ಭೆ ಸತ್ರಾಜಿತೆಕೃತಿ|ಯೊಡತಿ ಜಯಮಾಯಾ ಹಸೆಗೇಳು 4ಪ್ರಾಣೇಶ ವಿಠಲನೊಳು ದ್ವೇಷಿಪ |ಹೀನರ ಸಂಹರಕೋಸುಗ ಶರ ||ಪಾಣಿಯಾಗಿಹಳೆಶ್ರುತಿವೇದ್ಯೆ | ಶ್ರುತಿವೇದ್ಯೆ ದೇವದೇವಿಕಅಹಿವೇಣಿಶುಕವಾಣಿ | ಹಸೆಗೇಳು 5
--------------
ಪ್ರಾಣೇಶದಾಸರು
ಅಂಜರು ಹರಿಭಟರು ದುರಿತಾರಿಗಂಜರು ಹರಿಭಟರುಮಂಜಿನ ದಂಡೋಡಿಪ ಮೂಡಣವರಕಂಜಸಖನ ಪೋಲ್ವವರು ಪ.ಅಗ್ಗಳಿಕೆಯೈಗಣೆಯನ ಬಲದಲಿಮುಗ್ಗದೆ ಕುಲಿಶೆದೆಯಲ್ಲಿ ವೈರಾಗ್ಯಾಸ್ತ್ರದಿ ಈರೈದಾಳಾಣ್ಮನಕುಗ್ಗಿಸಿ ಸೆರೆ ತರುವವರು 1ಮೂರರಾಯುಧ ಹತಿಭಯಜರಿದುವಾರಣನಾಕೆರಡಿರಿದು ಶೃಂಗಾರದ ರಾಹುತರೆಂಟರ ಸದೆವರುವೀರಹರಿಧ್ವನಿಯವರು2ಎರಡೊಂಬತ್ತು ನಾದಿಕಾಭೇರಿಎರಡು ಕಹಳೆಯ ಚೀರಿಸರಕುಮಾಡಿ ನವಕಲಿ ಸಂಜಿತರುಹರಿಮಂಡಿತ ನವರಥರು3ಒಂದೆ ನಿಷ್ಠೆಯ ರಣಧ್ವಜ ಮೇರೆಗೆಹಿಂದಾಗದೆ ಮುಂದಾಗಿಒಂದಿಪ್ಪತ್ತರಿ ವ್ಯೂಹ ಕೆಡಹುವರುಕುಂದದ ಧೃತಿ ಮತಿಯವರು 4ಹಂಗಿನ ಸ್ವರ್ಗವ ಸೂರ್ಯಾಡುವರುಡಂಗುರ ಹೊಯ್ಯುವ ಮಹಿಮರುರಂಗ ಪ್ರಸನ್ವೆಂಕಟಪತಿ ಭಟರುಮಂಗಳಪದ ಲಂಪಟರು 5
--------------
ಪ್ರಸನ್ನವೆಂಕಟದಾಸರು
ಅಂಜಲೇತಕೆ ಮನವೆ ಅನುಗಾಲವುಕಂಜನಾಭನ ಭಕುತಿ ಕೈಕೊಂಡ ಬಳಿಕ ಪನಾರಾಯಣನೆಂಬ ನಾಲ್ಕು ಅಕ್ಷರದಿಂದಘೋರಪಾಪವನೆಲ್ಲ ಕಳೆಯಬಹುದು ||ಶ್ರೀ ರಾಮನಾಮವೆಂಬ ಸಿಂಗಾಡಿ ತಕ್ಕೊಂಡುವೈರಿಷಡ್ವರ್ಗಗಳ ವಧೆ ಮಾಡಬಹುದು 1ಶ್ರೀ ಕೇಶವನೆ ಎಂಬ ಸಿದ್ಧ ಮಂತ್ರಗಳಿಂದಕಾಕುಕರ್ಮಗಳನ್ನು ಕಳೆಯಬಹುದು ||ವೈಕುಂಠಪತಿ ಎಂಬ ವಜ್ರವನೆ ತಕ್ಕೊಂಡುನೂಕಿ ಯಮಬಂಟರನು ನುಗ್ಗು ಮಾಡಲುಬಹುದು 2ಹರಿವಾಸುದೇವನೆಂಬ ಅಮೃತಪಾನಗಳಿಂದಮರಣ ಜನನಗಳೆರಡ ಜಯಿಸಬಹುದು ||ಅರಿತರೆ ಮನದೊಳಗೆ ಪುರಂದರವಿಠಲನಸರಸ ಸದ್ಗತಿಯನ್ನು ಸವಿಗಾಣಬಹುದು 3
--------------
ಪುರಂದರದಾಸರು
ಅಂಜಾನೆತನಯಧ | ನಂಜಾಯನಗ್ರಜ ||ಕಂಜಾಕ್ಷ ಶ್ರೀ ಮಧ್ವ | ಸಂಜಯವಂತಾ 1ಮಾರುತಿ ನಿನ್ನಯ | ಕೀರುತಿ ಜಗದೊಳು ||ಬೀರುತಿದ ಕೊ ನಾ | ಸಾರುತೀ ನೀಗಾ 2ರಾವಣಾನುಜ ಸು | ಗ್ರೀವಾ ವಿಪ್ರಜಾನಂತೆ ||ಭೂವರನಂತೆ ಕಾಯೋ | ದೇವೇಂದ್ರ ಪಾಲಾ3ಪ್ರಸ್ತುತಬಿನ್ನಪ| ವಿಸ್ತರಿಪಕೃತಿಸ ||ಮಸ್ತರೂ ಕೇಳಲಿ | ಆಸ್ಥೀಯಲಿಂದಾ4ಪ್ರಾಣೇಶ ವಿಠ್ಠಲಾ ಪ್ರೀ | ತಾನಾಗಬೇಕೀದಕೆ ||ಹೀನ ವಿಷಯಗಳಾ | ನಾನೊಲ್ಲೆ ದೇವ 5
--------------
ಪ್ರಾಣೇಶದಾಸರು
ಅಂತರಂಗದಲಿ ಹರಿಯ ಕಾಣದವ ತಾ ಹುಟ್ಟುಗುರುಡನೊಸಂತತ ಶ್ರೀ ಕೃಷ್ಣಚರಿತೆ ಕೇಳದವ ಜಡಮತಿಯೆ ಕಿವುಡನೊ ಎಂದೆಂದಿಗೂ ಪ.ಹರುಷದಿಂದಲಿ ಮುರಹರನ ಪೂಜೆಯ ಮಾಡದವನೆ ಕೈ ಮುರಿದವನೊಕುರುವೀರ ಸೂತನ ಮುಂದೆ ಕೃಷ್ಣ ಎಂದುಕುಣಿಯದವನೆ ಕುಂಟನೊ ||ನರಹರಿ ಪಾದೋದಕ ಧರಿಸದ ಶಿರ ನಾಯುಂಡ ಹಂಚು ಕಾಣೊಸುರವರ ಕೃಷ್ಣ ಪ್ರಸಾದವಿಲ್ಲದ ಊಟಸೂಕರಭೋಜನವೋ1ಅಮರೇಶ ಕೃಷ್ಣಗರ್ಪಿತವಲ್ಲದಕರ್ಮ ಅಸತಿಯ ವ್ರತನೇಮವೊರಮೆಯರಸಗೆ ಪ್ರೀತಿಯಿಲ್ಲದ ವಿತ್ತವು ರಂಡೆ ಕೊರಳಸೂತ್ರಕಮಲನಾಭನ ಪೊಗಳದಸಾರ ಸಂಗೀತ ಗಾರ್ದಭರೋದನವೊಮಮತೆಯಿಂದಲಿ ಕೇಶವಗೆ ನಮಸ್ಕಾರ ಮಾಡದವನೆ ಮೃಗವೊ 2ಜರೆ ಹುಟ್ಟು ಮರಣವ ತಡೆವ ಸುದ್ದಿಯ ಬಿಟ್ಟುಸುರೆಯ ಸುರಿಯ ಬೇಡವೊಸುರಧೇನು ಇರಲಾಗಿ ಶ್ವಾನನ ಮೊಲೆಹಾಲಕರೆದು ಕುಡಿಯಬೇಡವೊಕರಿ ರಥ ತುರಗವೇರಲು ಇದ್ದು ಕೆಡಹುವ ಕತ್ತೆ ಏರಲಿಬೇಡವೊಪರಮ ಪುರುಷ ಪುರಂದರವಿಠಲನಿರಲು ನರರ ಭಜಿಸಬೇಡವೊ 3
--------------
ಪುರಂದರದಾಸರು
ಅನುಗಾಲವು ಚಿಂತೆ ಮನುಜಗೆ |ಮನಹೋಗಿ ಮಾಧವನ ಒಡಗೂಡುವನಕ ಪ.ಹೆಂಡಿರಿದ್ದರು ಚಿಂತೆ ಹೆಂಡಿರಿಲ್ಲದ ಚಿಂತೆ |ಕೊಂಡು ಕುರೂಪಿಯಾದರು ಚಿಂತೆಯು ||ತೊಂಡನಾಗಿ ತಿರುಗಿ ತುತ್ತ ತರುವ ಚಿಂತೆ |ಮಂಡೆ ಬೀಳುವ ತನಕ ಚಿಂತೆ ಕಾಣಣ್ಣಾ 1ಬಡವನಾದರು ಚಿಂತೆ ಬಲ್ಲಿದನಾದರು ಚಿಂತೆ |ಕೊಡಧನ ಕೈಯೊಳಿದ್ದರು ಚಿಂತೆಯು |ಬಡವನಾಗಿ ತಿರುಗಿ ತುತ್ತ ತರುವ ಚಿಂತೆ |ಪೊಡವಿಯೊಳಿಲ್ಲದ ಚಿಂತೆ ಕಾಣಣ್ಣಾ 2ಮನೆಯಿದ್ದರೂ ಚಿಂತೆ ಮನೆಯಿಲ್ಲದ ಚಿಂತೆ |ಮನೆ ಭಾರವತಿಯಾದರೂ ಚಿಂತೆಯು |ಮನಸಿಜನಯ್ಯ ಶ್ರೀ ಪುರಂದರವಿಠಲನ |ನೆನೆದರೆ ಚಿಂತೆಯೆ ಇಲ್ಲ ಕಾಣಣ್ಣಾ 3
--------------
ಪುರಂದರದಾಸರು
ಅಂಬಿಗ ನಾ ನಿನ್ನ ನಂಬಿದೆ - ಜಗದಂಬಾರಮಣ ನಿನ್ನ ಹೊಂದಿದೆ ಪತುಂಬಿದ ಹರಿಗೋಲಂಬಿಗ - ಅದಕೊಂಬತ್ತು ಛಿಧ್ರಗಳಂಬಿಗ ||ಸಂಭ್ರಮದಿಂದಲಿಅಂಬಿಗ ಅದರಿಂಬನರಿತು ನಡೆಸಂಬಿಗ 1ಹೊಳೆಯ ಅಬ್ಬರ ನೋಡಂಬಿಗ ಅಲ್ಲಿಸೆಳವು ಬಹಳ ಕಾಣೋಅಂಬಿಗ ||ಸುಳಿಗೊಳಗಾದೆನುಅಂಬಿಗ - ಎನ್ನಸೆಳೆದುಕೊಂಡು ಒಯ್ಯೋಅಂಬಿಗ 2ಹತ್ತು ಬೆಂಬಡಿಗರು ಅಂಬಿಗರು - ಅಲ್ಲಿಒತ್ತಿ ಬರುತಲಿಹರಂಬಿಗಹತ್ತುವರೆತ್ತಲುಅಂಬಿಗ ಎನ್ನಎತ್ತಿಕೊಂಡು ಒಯ್ಯೋಅಂಬಿಗ 3ಆರು ತೆರೆಯ ನೋಡಂಬಿಗ ಸುತ್ತಿಮೀರಿ ಬರುತಲಿವೆಅಂಬಿಗ ||ಆರೆನೆಂತಿಂತುಅಂಬಿಗ ಮುಂದೆದಾರಿಯ ತೋರಿಸುಅಂಬಿಗ 4ಸತ್ಯವೆಂಬುವ ಹುಟ್ಟುಅಂಬಿಗ ಓದುಭಕ್ತಿಯೆಂಬುವ ಪಾತ್ರಅಂಬಿಗ ||ನಿತ್ಯಮುಕ್ತ ನಮ್ಮ ಪುರಂದರವಿಠಲನಮುಕ್ತಿಮಂಟಪಕೆ ಒಯ್ಯೋ 5
--------------
ಪುರಂದರದಾಸರು
ಅಂಬೆಗಾಲಿಕ್ಕುತಲಿ ಬಂದ ಗೋವಿಂದ |ಅಂಬುಜನಾಭ ದಯದಿಂದೆನ್ನ ಮನೆಗೆ ಪಜಲಚರಜಲವಾಸ ಧರಣೀಧರ ಮೃಗರೂಪ |ನೆಲನಳೆದೀರಡಿ ಮಾಡಿ ಬಂದ ||ಕುಲನಾಶಿ ವನವಾಸಿ ನವನೀತಚೋರನಿವ |ಲಲನೆಯರ ವ್ರತಭಂಗ ವಾಹನತುರಂಗ 1ಕಣ್ಣ ಬಿಡುವನು ಮುಖ ತಗ್ಗಿಸಿ ನೆಲವಗಿದು |ಅಣಕಿಸುವ ಬಾಯ್ದೆರೆದು ಬಾಲತನದಿ ||ಪ್ರಾಣಘಾತಕನುಣಲೊಲ್ಲ ಬೆಣ್ಣಿಯ ಮೆಲುವ |ಮಾನವ ಬಿಟ್ಟು ಕುದುರೆಯನೇರಿ ಮೆರೆವ2ನೀರ ಪೊಕ್ಕನು ಗಿರಿಯ ನೆಗಹಿ ಧಾರಿಣಿ ತಂದ |ನರಮೃಗ ಬಲಿಬಂಧ ಕೊರಳಗೊಯ್ಕ ||ಶರಮುರಿದೊರಳೆಳೆದು ಬತ್ತಲೆ ಹಯವನೇರಿ |ಪುರಂದರವಿಠಲ ನಮ್ಮ ಮನೆಗೆ ಹರುಷದಲಿ 3
--------------
ಪುರಂದರದಾಸರು
ಅರ್ಚನೆ ಮಾಡಿರಯ್ಯ ಶ್ರೀ ಭಗವದರ್ಚನೆ ಮಾಡಿರಯ್ಯಅರ್ಚನೆ ಮಾಡುವ ಅರ್ಚಕ ಬುಧರಿಗೆಅರ್ಚಿಪ ಪದದಲ್ಲಿಅಚ್ಯುತದೊರೆವನೆಂದುಪ.ಅಂತರಂಗದ ಶುದ್ಧಿಲಿ ತನ್ನ ಬಾಹ್ಯಂತರ ಪರಿಪೂರ್ಣನಚಿಂತಿಸಿ ಸರ್ವಸ್ವತಂತ್ರ ಶ್ರೀ ಹರಿವೇದತಂತ್ರೋಕ್ತ ಪಥದಿ ನಿರಂತರ ಮರೆಯದೆ 1ಪೃಥುಧ್ರುವ ಅಂಬರೀಶ ಸುಧರ್ಮಜ ದಿತಿಜೋದ್ಭವ ಅಕ್ರೂರಕೃತವರ್ಮ ಸಾತ್ಯಕಿ ಯದುಕುಲ ಸುರಖಷಿಯತಿತತಿ ಅರ್ಚಿಸಿ ಅತಿಧನ್ಯರಾದರೆಂದು 2ಅನಂತಮೂರ್ತಿಯೊಳು ತನಗೊಂದು ಧ್ಯಾನಕ್ಕೆ ತಂದುಕೊಂಡುಆನಂದತೀರ್ಥರ ಸಂತತಿಗಳಿಂದತಾನು ಇಷ್ಟನಾಗಿ ನಾರಾಯಣನಾತ್ಮನೆಂದು 3ಬ್ರಹ್ಮಸ್ತೋತ್ರದಿ ಸಹಸ್ರ ಸನ್ನಾಮಪೂರ್ವಕ ಸ್ತೋತ್ರದಿಶ್ರೀಮತ್ಪಂಚಸೂಕ್ತ ಪಂಚಾಮೃತ ಸ್ನಾನರಮ್ಯಾಯುಧ ಕೌಸ್ತುಭಮಣಿ ಮಾಲೆಯಿಂದ 4ಧ್ಯಾನಾವಾಹನ ಸ್ನಾನ ಸುಪಾದ್ಯಾಚಮನಾಘ್ರ್ಯ ಧೂಪದೀಪ ಪ್ರಸೂನ ತುಳಸಿ ಗಂಧಮೋಘ ನೈವೇದ್ಯದಿಂಮಾನಸಾರ್ಚನೆ ಪ್ರತ್ಯಕ್ಷಾಗಲಿ ಎಂತೆಂದು 5ವೀರಾವರ್ಣದ ಮಧ್ಯದಿ ಶ್ರೀ ಮಧುಕೈಟಭಾಂತಕ ಕೃಷ್ಣನಕೋಟಿಕಾಂಚನ ರತ್ನಾಭರಣವೈಜಯಂತಿಕಿರೀಟಕುಂಡಲದಾಮಹಾರ ನೂಪುರಗಳಿಂದ6ದಿವ್ಯಾಂಬರ ಭೂಷಣ ನವರತುನ ಭವ್ಯ ಮಂಟಪವಸನಅವ್ಯಾಕೃತಾಧ್ಯಕ್ಷ ಶ್ರೀಭೂಮುಕ್ತಾಮುಕ್ತಸೇವ್ಯಮಾನನಾಪಾದ ಮೌಳ್ಯಾಂತ ವೀಕ್ಷಿಸಿ7ಬಹು ನೀರಾಂಜನಗಳಿಂದ ಸದ್ವೇದೋಕ್ತ ಗಹಗಹನ ಸೂತ್ರಂಗಳಿಂದಅಹಿವರಶಯನಜ ಭವಾಹಿಪ ವಿಪ್ರವಂದ್ಯಮಹಿಮನನಂತನೆಂತೆಂದು ಪರವಶದಿಂದ 8ತಾಳದಂಡಿಗೆ ಜಾಗಟೆ ಶಂಖ ಮದ್ದಳೆ ಕಂಸಾಳೆಭೇರಿಆಲಾಬುತಂಬೂರಿಭಾಗವತಗಾನಮೇಳೈಸಿ ತುತೂರಿ ವಾಜಂತ್ರಿ ಘೋಷದಿಂದ 9ಅಲವಬೋಧರು ಪೇಳಿದ ಪೂಜಾವಿಧಿಗಳ ಪ್ರದಕ್ಷಿಣೆ ಪ್ರಮಾಣಲಲಿತ ಗೀತ ನೃತ್ಯ ಬಲು ಪ್ರೇಮದಲಿ ಮಾಡಿಹೊಳೆವ ಬಿಂಬಾತ್ಮನ ಕಾಂಬ ಲವಲವಿಕೆಯಿಂದ 10ಆತ್ಮ ಕರ್ತೃತ್ವನೀಗಿಸರ್ವಾಂತರಾತ್ಮ ಪರಮಾತ್ಮನೆಂದುಆತ್ಮ ಮತ್ತೆ ಜಾÕನಾತ್ಮ ಪ್ರೇರಕ ಪ್ರೇರ್ಯಾತ್ಮ ನಿವೇದನ ಭಕ್ತಿ ನವಕಗಳಿಂದ 11ಸರ್ವೇಂದ್ರಿಯ ಮನಸ್ಥ ಮುಖ್ಯಪ್ರಾಣನೋರ್ವ ನಿಯಂತ್ರಹರಿಸರ್ವ ಪ್ರೇರಕನೆಂಬೊ ವಿಜ್ಞಾನಮಾರ್ಗದಿಸರ್ವಕಾಲದಲಿ ಸರ್ವಸಮರ್ಪಣೆಯೆಂದು 12ಮಂದಜನರು ಭಕ್ತಿಲಿ ದೂರ್ವನೀರಿಂದೆ ಪೂಜೆಯ ಮಾಡಲುತಂದೆ ಪ್ರಸನ್ವೆಂಕಟಕೃಷ್ಣ ಕಾರುಣ್ಯಸಿಂಧುಪ್ರಸನ್ನಾತ್ಮಬಂಧು ಮುಕ್ತಿಯನೀವ13
--------------
ಪ್ರಸನ್ನವೆಂಕಟದಾಸರು
ಅರ್ಥಿವಿನೋದವ ಮಾಡುತಸ್ವಸ್ಥದಲೆ ಕುಳಿತರು ಎಲ್ಲಚಿತ್ತ ಜನೈಯನ ಸಹಿತಾಗಿಸಹಿತಾಗಿ ಶಚಿವಾಣಿಮುತ್ತಿನಾರತಿಯ ಬೆಳಗಿರೆ 1ರಂಗ ರುಕ್ಮಿಣಿ ಭಾಮೆಯರಿಗೆಶೃಂಗಾರದ ಲೈವರಿಗೆಅಂಗನೆÉಸುಭದ್ರೆ ದ್ರೌಪತಿದ್ರೌಪತಿಗೆ ವಾಣಿಯರುಮಂಗಳಾರತಿಯ ಬೆಳಗಿರೆÉ 2ಉಲ್ಹಾಸದಲಿಅಮರರುಚಲ್ವ ರಮಿ ಅರಸಗೆಮಲ್ಲಿಗೆಸೂರ್ಯಾಡಿಐವರುಐವರು ಎನುತಲಿಎಲ್ಲರೂ ಹರುಷ ಬಡುವರು 3
--------------
ಗಲಗಲಿಅವ್ವನವರು
ಅವನೆ ಜೀವಾಂಕಿತ ಪ್ರೇತ ನೋಡಿಭುವಿಗೆ ಭಾರನು ಅವನುಹರಿಹಗೆಯನುಪ.ಹರಿಕಥೆಗೆ ಬೇಸತ್ತು ಹರಟೆಯನೆ ಕೇಳುವವಹರಿಯಗುಣ ಹೊಗಳದೊಣಪಂಟ ಬಡಿವವಹರಿಮರೆದು ಮಲಭಾಂಡವನು ತುಂಬಿಕೊಳುವವಹರಿಭಟರ ನಡೆನುಡಿಗೆ ಸೈರಿಸದವ 1ಹರಿಪ್ರಿಯರ ನೆರೆಗಾರದತ್ತತ್ತ ಜಾರುವವಹರಿಯವರಿಗುಣಿಸದೆ ಧನ ಕಳೆವವಹರಿಯಾತ್ರೆಗಂಜಿ ಬಲವನೆ ಕೊಳುವವಹರಿವ್ರತವ ಬಿಟ್ಟಿತರ ವ್ರತ ಕೊಳುವವ 2ಹರಿಪದಾಂಬುಜವಜರಿದುಹಲವು ನೀರ್ಕುಡಿವವಹರಿಲಾಂಛನಿಲ್ಲದ ಚೆಲುವಿಕೆಯವಹರಿಪ್ರಸನ್ವೆಂಕಟೇಶನ ಪಾದಾಬ್ಜವ ಭಜಿಸಿಹರಿಪರದೈವವೆನ್ನದ್ಹೊಲೆಮನದವ3
--------------
ಪ್ರಸನ್ನವೆಂಕಟದಾಸರು
ಆಕಳ ಕಾಯ್ದ ಗೋಕುಲವಾಸನುಆಕಳ ಕಾಯ್ದ ಗೋಕುಲವಾಸನನೇಕ ಗುಣನಿಧಿನಾಕೇಶವಿನುತಪುರದಲ್ಲಿದ್ದಂಥ ಕೇರಿಯ ಮಕ್ಕಳ ನೆರಹಿ ಯಾದವ ಪರಿವಾರವೆಲ್ಲನಳಿನಕೇತಕಿ ಎಳೆಯ ಮಾವಿನ ತಳಿಲ ವನದ ಒಳಗೆ ರಂಗನುತೊಂಡರೊಡಗೂಡಿಪುಂಡರೀಕಾಕ್ಷಗೋವಿಂದ ಕಾಳಿಯ ದಂಡೆಯಲ್ಲಿರಿಸಿಕಡು ತೃಷದಿ ಆ ಮಡುವಿನುದಕ ಕುಡಿದು ಗೋವುಗಳೆಲ್ಲ ನಡುಗಿ ಬೀಳಲುಹೊಕ್ಕ ಭರದಿ ದೇವಕಿ ಸುತನ ಸಿಕ್ಕಿಸಿಕೊಂಡು ಬಾಲಕೆ ಬಿಗಿಯಲುಇಂದಿರಾಪತಿ ಆನಂದದಿಂದಾಡಲು ಬಂದುಬೊಮ್ಮವಾಯುಉರಗಾಂಗನೆಯರ ಮೊರೆಯ ಲಾಲಿಸಿ ಕರುಣಿ ಅವರಿಗೆ ಗರುಡನ ಭಯಗರಳಭಯದಿ ಧರೆಗೆ ಬಿದ್ದಂಥ ತುರುಗಳಿಗೆಲ್ಲ ಸ್ಮರಣೆ ಬಪ್ಪಂತೆಮಂಗಳ ಮೂರುತಿ ಪೊಂಗೊಳಲೂದುತ್ತ ತಿಂಗಳಿನಂದದಿ
--------------
ಗೋಪಾಲದಾಸರು
ಆಗಬಲ್ಲದೆ ಹೀಗಾಗಬಲ್ಲದೆಯೋಗಿಜನವಂದ್ಯನವರಿಗ್ಹೀಗೆ ಯಮನ ಮನೆಯ ಬಾಧೆ ಪ.ಕಾಮನಯ್ಯನರಮನೆಯಪ್ರೇಮದ ದಾಸಿಗೆ ಮಹಾಪಾಮರರಾಕ್ಷಸ ಕ್ರೂರಕಾಮುಕರ ಸಂಯೋಗವಾಗಬಲ್ಲದೆ 1ಸಜ್ಜನರರಸನÀ ಮನೆಯವಜ್ರಪಂಜರದ ಗಿಣಿಯುಮಜ್ಜಿಗೆ ಕಾಣದ ಮುದಿಮಾರ್ಜಾಲನ ಬಾಯಿತುತ್ತಿಗಾಗಬಲ್ಲದೆ 2ರಾಜಾಧಿರಾಜನ ಮನೆಯರಾಜಹಂಸವು ಕುಣಪಭೋಜಕನಾದ ವೃಕನಭೋಜಕನ ಅನುಕೂಲವಾಗಬಲ್ಲದೆ 3ಹರಿಯ ಬೇಂಟೆಯ ಮನೆಯಹರಿಣಗಣಗಳಿಗೆಗಿರಿಯ ಹಳುವದ ಹುಲಿಯಗರಜರದ ಘಸಣೆಯಾಗಬಲ್ಲದೆ 4ಪ್ರಸನ್ನವೆಂಕಟನ ಮನೆಯಕಸಕಡ್ಡಿಯೆಲ್ಲವುವಜ್ರವಿಷಮ ಯಮಬಂಟರೆಂಬಮುಸಲಕೆ ಹುಡಿ ಹಿಟ್ಟು ಆಗಬಲ್ಲದೆ 5
--------------
ಪ್ರಸನ್ನವೆಂಕಟದಾಸರು
ಆಗಮವ ತಮನೊಯ್ಯೆ | ಅವನ ಪಾತಾಳದಲಿ |ತಾಗಿದಲೆವರಿದು ವೇದಾವಳಿಗಳಾ |ಆಗ ತಂದ್ದತ್ತ ಮಚ್ಛಾಮಾರನೆ ವುದಯವಾಗುತಿದೆವುಪ್ಪುವಡಿಸೊ ಪಹರಿಯ ಭಾಗೀರಥಿ ಪಿತನೆ |ಭಾಗವತ ಜನಪ್ರಿಯನೆ |ಯೊಗಧೆಯ ವಪ್ಪುವಡಿಸೊ ಹರಿಯೆ | ಭಾಗೀರಥಿ ಪಿತನೆ 1ದೇವಾಸುರರು ಶಿಂದ್ಧು | ಮಥನದಲಿ ಗಿರಿ ಮುಳುಗೆ |ದೆವಾ ರಾಕ್ಷಿಸುತಾ ಕ್ಷಿಶನ ಉಳಿದೂ |ಆನೊಯಲು ವಾಗಿರಿಯ | ನಂತ ಕೂರ್ಮನೆ ವುದಯವಾಗುತಿದೆವಪ್ಪುವಡಿಸೊ ಹರಿಯೆ 2ಭೂತಳವ ಕಾದ್ದೊಯಿದ | ಹರಂಣ್ಯಕ್ಷನೆಂಬ ನರಪಾತಳದ |ಲೊರಶಿನಿಲಿಶಿದ ಜಗಂಗಳಾ | ಖ್ಯಾತಿ ಪಡೆದ ಪ್ರತಿಮ |ವರಹಾರೂಶಪನೆ ಸುಪ್ರಭಾತದಲಿವುಪ್ಪವಡಿಸೊ ಹರಿಯೇ 3ಭೂದೇವದೆವರನು | ಭಾಜಿಸುವ ಶಿವುವ ಪ್ರಹ್ಲಾದಗಾ | ಗಾಹವನುಕವಲುಗಿಶಿ ಉಗದೆ | ತೂದ ಕರುಳಿನಮಾಲೆ |ಯಪ್ಪನರಶಿಂಹ ಕಾರುಣೋದಯದೊ ವಪ್ಪವಡಿಸೊ ಹರಿಯೆ 4ಬರಿ ಭಕತಿಯಿಂದ ಮೊರಡಿನೆಲನ ಮಾತು ಕೂಡೆ |ನೆಲ ನಭನೆ ನೀರಡಿಯ ಮಾಡಿ ಬೆಳೆದೆ |ನಳಿನ ಜಾಂಡವನೊಡದೆ | ವಾಮನ ತ್ರಿವಿಕ್ರಮನೆಬೆಳಗಾಯಿತುಪ್ಪವಡಿಸೋಹರಿಯೆ 5ಕಾತ್ರ್ತವಿಯ್ರ್ಯಾರ್ಜುನನ ಕಡಿದು ಕ್ಷತ್ರಿಯ ಕುಮುದು |ಮಾತ್ರ್ತಂಡನಾದೆ ಮಾತೆಯ ಮಾತಿಗೆ ಆತ್ರ್ತಜನಬಂಧುವೆ | ಪರಶುರಾಮನೆ ಬ್ರಾಹ್ಮಿ ಮೂಹೋರ್ತದಲ್ಲಿವುಪ್ಪವಡಿಸೊ ಹರಿಯೆ 6ಪಂಪಾದಿಪನವರದ | ಅಮರಪತಿಯಾದ ಷ್ಕಂಪ್ಪರಾವಣನಗೆಲಿದವನನುಜಗೆ ಸಂತ್ಪಾರಂಪರೆಯಯಿತ್ತರಘುರಾಮದೆಶೆ | ಕೆಂಪಾಯಿತುಪ್ಪ ವಡಿಸೊಹರಿಯೆ 7ಯಿಂದು ರವಿಕುಲಗಳಲಿ | ಜನಿಶಿದಮಜರಾಜ| ಬೃಂದಾರಿಯಾಗಿಭೂಭರವಿಳಿಪಿದೆ | ನಂದನಂದನ ಕೃಷ್ಣ |ಆಂಗಯಗರಗಾಣ ಬಂದವಿದವುಪ್ಪ ವಡಿಸೊ ಹರಿಯೇ 8ತ್ರಿಪುರದಮಕಾರಿಗಳ | ಸತಿಯರಿಗೆವುಪಸತಿಗಳುಪದೆಶಗಳ ತೊಟ್ಟುಭ್ರಮಗೊಳಿಶಿದುತ್ರಿಪುರ ಹತಗಂಬಾದೆ |ತ್ರಿಪುರ ಸಾಧಕ ಜಾದ್ಕ ತಪ ನವಿದೆವುಪ್ಪವಡಿಸೊ ಹರಿಯೆ9ಆಶಿ ಖಾಡವಿಡಿದಾಶ್ವವೇರಿ ಕೋಪದಿ ವಿಷ್ಣು |ಯಶಶಿನಲಿ ಕಲ್ಕ್ಯಾವ | ತಾರನಾದೆ |ಕುಶಿರಿದರಿದಶಸುವೇಪದಶ್ಯೂಗಳಗೆಲಿದೆ | ಬಿಶಿಲಾಯಿತುಪ್ಪವಡಿಸೊ ಹರಿಯೆ 10ಯಿಂದ ಚಂದ್ದ್ರ್ಯಾದಿಗಳ್ ಬ್ರಹ್ಮ ರುದ್ದ್ರಾದಿಗಳುಪೇಂದ್ರಜಯ |ಜಯಯೆನುತ ಬಂದೈಧರೆ | ವೀಂದ್ದ್ರವಾಹನ ಪುರಂದರವಿಠಲಸೌಭಾಗ್ಯ ಸಾಂದ್ದ್ರನಿಧಿ ವುಪ್ಪವಡಿಸೊ ಹರಿಯೆ 11
--------------
ಪುರಂದರದಾಸರು
ಆಗಲಿ ಹರಿಕೃಪೆ ಭಾಗವತರ ಸಂಗನೀಗುವೆ ನಿಮ್ಮ ದುರಿತಗಳಿರ ಪ.ಹರಿನಂಟರೋಲೈಸಿ ಜ್ಞಾನಾಸ್ತ್ರ ಗಳಿಸುವೆಹರಿನಾಮ ವಜ್ರಕವಚ ತೊಡುವೆಹರಿನಿರ್ಮಾಲ್ಯದ ಉತ್ತಮಾಂಗಾಭರಣವಿಟ್ಟುನೆರೆನಿಮ್ಮ ನಾಮ ನಿರ್ನಾಮವ ಮಾಳ್ಪೆ1ಶ್ರೀಲೋಲನಂಘ್ರಿ ಸಮ್ಮದ ಸೈನ್ಯವ ಕೂಡಿತಾಳ ದಂಡಿಗೆ ಗೀತಾಯುಧಗಳಿಂದಕಾಲಕಾಲಕೆ ನಿಮ್ಮ ಮೇಳವ ಮುರಿದಾಡಿಹಾಳು ಮಾಡುವೆ ಕೈಯಲಿಕಡ್ಡಿಕೊಡುವೆ2ಇಕ್ಷುಸ್ವಾದಾದರೆ ಬೇರಸಹಿತ ನೀವುಭಕ್ಷಿಸಬೇಡಿ ಬಾರದೆ ಮರಳಿಪಕ್ಷಿಗಮನ ಪ್ರಸನ್ನವೆಂಕಟೇಶನಪಕ್ಷದವರಹಗೆಹೊಲ್ಲಸಲ್ಲ3
--------------
ಪ್ರಸನ್ನವೆಂಕಟದಾಸರು