ಒಟ್ಟು 2552 ಕಡೆಗಳಲ್ಲಿ , 114 ದಾಸರು , 1940 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕೂಗಳತಿ ಎಂಬೊ ಸಂಶಯಸಲ್ಲಾಪ ಸಮಚಿತ್ತದಲ್ಲಿ ಇದ್ದು | ಸಮ ವಿಷಮ ತಿಳಿದೆದ್ದು | ಕುಮತ ಮತವನು ವದ್ದು | ಬಲು ಉಬ್ಬೆದ್ದು | ಕಮಲ ಪೀಠನ ಹೊದ್ದು | ಕ್ರಮಣಿ ಯೋಪಾದಿಯಲಿದ್ದು | ತಮಕ್ಕೆ ಹರಿನಾಮ ಮದ್ದು | ಶ್ರಮ ಕಳುಕದವಗೆ1 ಭಾಗವತರ ನೋಡಿ | ವೇಗ ಮನಸನು ಮಾಡಿ | ಬಾಗಿ ಸಿರವನೆ ನೀಡಿ | ನಲಿದು ಪಾಡಿ | ಯೋಗವಾಗದೆ ಕೂಡಿ | ಭೋಗವನು ಈಡಾಡಿ | ತೂಗಿ ಮೈಯಲಾಡಿ ಪುಣ್ಯದನವನಿಗೆ 2 ಹರಿ ಭಕುತಿಯ ಬೇಕು | ನರಹರಿಯ ಸ್ಮರಣೆ ಬೇಕು | ಹರಿಕಥಾ ಬೇಕು | ಹರಿ ಎನಲಿ ಬೇಕು | ಹರಿಯ ಭಜಿಸಲಿ ಬೇಕು | ಹರಿವೊಲಿಮೆ ಇರಬೇಕು | ಹರಿಯಲ್ಲದಿಲ್ಲೆಂದು ಹರಿದು ನುಡಿದವನಿಗೆ 3 ಆಸಿಯನು ಕಳೆದು | ದುರ್ವಾಸನೆ ಹಮ್ಮು ಕಳೆದು | ಕ್ಲೇಶವನು ಅಳಿದು | ತೋಷದಲಿ ಬೆಳೆದು | ದೋಷರಾಶಿಗೆ ಮುಳಿದು | ದೂಷಕರನೆ ಅಳಿದು | ಭೇಷಜವನೆ ಅಳಿದು | ದಾಸರ ಬಳಿಗೆ ಸುಳಿದವಗೆ 4 ಆಚಾರವನು ಪಿಡಿದು | ಸೂಚನೆ ಅರಿತು ನಡೆದು | ವಾಚಗಳ ಮಿತಿ ನುಡಿದು | ನಾಮಗುಡಿದು | ಸಿರಿ ವಿಜಯವಿಠ್ಠಲರೇಯನ | ಯೋಚನಿಂದಲಿ ಬಿಡದೆ | ದಿನವ ಹಾಕುವನಿಗೆ 5
--------------
ವಿಜಯದಾಸ
ಕೂಸಿನಲ್ಲಿ ಬಾಲಕೃಷ್ಣ ಕೇಶವಾರ್ಯ ಪುತ್ರನಲ್ಲಿವಾಸಮಾಡಿ ಸತತ ಮನವ ಪೋಷಿಸೂವನು 1 ತರುಣಿಯಲ್ಲಿ ಮಾಧವವಿರುವ ಶರಣರೊಳಗೆ ವಸುದೇವನರಿತು ತೋಷಿಸುವುದು ಸತತ ಹರುಷದಿಂದಲೀ 2 ವಾಸುದೇವ ಖಗವರೇಣ್ಯನು 3 ದಿವಿಜ ನಾರಾಯಣನು ವಸ್ತಿ ಮಾಡಿಹನು4 ಸುರಭಿಯಲ್ಲಿ ವಿಷ್ಣುರೂಪಿ ತುರಗದಲ್ಲಿ ವಾಮನಾತ್ಮಇರುವ ಸಂಕರ್ಷಣಾಖ್ಯ ಚರಮ ಜಾತಿಯಲೀ 5 ನಿತ್ಯ ವೈಶ್ಯ ಪ್ರದ್ಯುಮ್ನಭೃತ್ಯರಲ್ಲಿ ಮಹಿದ್ರಾಸ ಕೃತ್ಯ ನಡೆಸುವಾ 6 ಮಹಿಷಿಯಲ್ಲಿ ಉಪೇಂದ್ರ ಗಜದಲ್ಲಿ ಚಕ್ರಪಾಣಿಬೆಕ್ಕಿನಲ್ಲಿ ವಿಶ್ವರೂಪ ಸತತ ತಿಳಿವುದೂ 7 ಶುನಕ ಭೂತ ಭಾವನಸರ್ವರೊಳಗೆ ಅನಂತರೂಪ ಹರಿ ನಿವಾಸಿಪ 8 ನಿತ್ಯದಲ್ಲಿ ಹರಿಯು ಹೀಗೆ ಚಿತ್ತವಿಟ್ಟು ಲಕ್ಷಣೀಯುವರ್ತಿಸುತಲಿ ಯದುವರೇಣ್ಯನ ಪತ್ನಿಯಾದಳು 9 ಪರಮಪುರುಷನಮಲ ರೂಪ ಸ್ಮರಿಸುತಲೆ ಪೋಷ್ಯರಲ್ಲಿತೊರೆದು ಕರ್ಮಲೇಪ ಶಿರಿಯ ಹೋದುವಾ 10 ನಂದಸುತನ ತಿಳಿದು ಪೋಷ್ಯ ವೃಂದದಲ್ಲಿ ಭೋಗ ನೀಡಿಇಂದಿರೇಶ ನಮಗೆ ಮೋಕ್ಷಾನಂದ ಕೊಡುವನು 11
--------------
ಇಂದಿರೇಶರು
ಕೃತ ಕೃತ್ಯನಾದೆನಿಂದಿನ ದಿನದೊಳು ಕ್ಷಿತಿಸುತ ವೆಂಕಟರಾಮಾರ್ಯರನ ಕಂಡು ಪ ಭೂಮಂಡಲದೊಳುಳ್ಳ ಸಕಲ ತೀರ್ಥಸ್ನಾನ ಹೇಮಾದ್ರಿ ಮೊದಲಾದ ಕ್ಷೇತ್ರ ಯಾತ್ರೆ ನೇಮ ಜಪತಪ ವ್ರತಾದಿಗಳ ಮಾಡಿದ ಪುಣ್ಯ ಈ ಮಹಾತ್ಮರ ಕಂಡ ಮಾತ್ರ ಸಮನಿಸಿತು 1 ಪರಿಯಂತ ಹರಿಮಹಿಮೆಗಳ ಸನ್ನುತಿಯಲೀ ಶ್ರುತಿಸ್ಮøತಿಗಳಿಂದ ಧನ್ಯರೆಂದೆನಿಸಿ ಮಹಿಯೊಳಗೆ ಪೂರಿತರಾದ ಪುಣ್ಯಚರಿತರ ದಿವ್ಯ ಪಾದವನೆ ನಾ ಕಂಡು 2 ಹೀನ ಜನರೇ ಬಹಳ ಕ್ಷೋಣಿಯ ಮೇಲೆ ಸು ಜ್ಞಾನಿಗಳು ದುರ್ಲಭರು ಕಲಿಯುಗದಲಿ ಆನತೇಷ್ಟಪ್ರದ ಜಗನ್ನಾಥ ವಿಠಲ ತಾನೆ ಕರೆತಂದು ತೋರಿ ಪುನೀತನ ಮಾಡ್ದ 3
--------------
ಜಗನ್ನಾಥದಾಸರು
ಕೃತ್ತಿವಾಸ ಪೂಜ್ಯ ಚರಣೇ | ಮಹತತ್ವಮಾನಿ ಸತಿಯೆ ಸುಗುಣೆ ||ಅ|| ನಿತ್ಯ ನೀಡೆ ಹರಿಯ ಸ್ಮರಣೆ ಅ.ಪ. ವಿಧ್ಯುದ್ವಾಕ್ ದಿಙËಮಾನಿಯೆ | ಹೇದ್ಯುಪೃಥಿವಿ ಭಾರತೀಯೇಪ್ರದ್ಯುಮ್ನ ಕೃತಿಗೆ ಕುಮಾರಿಯೆ | ಬುಧ್ಯಾಭಿಮಾನಿಯೇ ಕಾಯೆವಿದ್ಯುತಿಸ್ಥಿತಿ | ಬುಧ್ಯಾಬ್ದಿಯೆ | ವಿಧ್ಯೇತರ | ಅವಿಧ್ಯೆಯ ಕಳೆಸದ್ಯೋಜನ | ಶ್ರದ್ದಾಂಬಾ | ಮದ್ದೇಹದಿ | ಸಿದ್ಧಿಸು ಹರಿ 1 ಮಂದ ಪತಿ | ಸುಂದರ ಪದ | ಸಂಧಿಸು ಮನ | ಮಂದಿರದಲಿ 2 ಭಿಕ್ಷೆ ನೀಡೆ ತಾಯೇ | ಯುಕುತಿ ಶಾಸ್ತ್ರ ಒಂದನರಿಯೇಸೌಖ್ಯ ತೀರ್ಥ ಮತವನ್ವೊರೆಯೇ ಮುಕುತಿ ಮಾರ್ಗ ತೋರಿ ಪೊರೆಯೇ ||ತೋಕನು ಎನೆ | ಸ್ವೀಕರಿಸುತ | ಲೋಕರುಗಳ | ವಾಕನು ದೂ-ರೀಕರಿಸು ಪ | ರಾಕೆನ್ನುವೆ | ಭೀಕರಭವ | ನೀ ಕರಗಿಸು 3 ಕಡಗ ಕಂಕಣ ದ್ವಾರ ಧಾರೆ | ಜಡಿತ ದುಂಗುರ ದೋಷ ದೂರೆಮುಡಿದ ಮಲ್ಲಿಗೆ ಕುಂಚುಕಧಾರೆ | ಉಡುಗೆ ಬಿಳುಪಿನಂಬರೆ ನೀರೇ || ಒಡ ನಡುವು | ನಿಡಿತೋಳೂ | ತೊಡೆಕದಳೀ | ಬಡುವು ಪರೀ |ಅಡಿಗೆರಗುವೆ | ಪೊಡ ವೀಶನ | ಧೃಡ ಭಕುತಿ | ತಡೆಯದೆ ಕೊಡು4 ಶರಣು ಮುಂದಣ ವಾಣಿ ಕರುಣ | ಗುರು ಗೋವಿಂದ ವಿಠಲ ಚರಣಾ |ಭರಣವೆನಿಪ ಸುಗುಣ ಗಣಾ | ಒರೆದು ಕಳೆಯೆ ಭವದ ಬಂಧನ |ಮಾರಯ್ಯನ | ಆರಾಧನೆ | ಚಾರೀಸದೆ | ಧಾರಾಣಿಗೆಭಾರಾದೆನು | ಕಾರುಣ್ಯವ | ತೋರೂವುದು ಭಾರತಿಯೇ 5
--------------
ಗುರುಗೋವಿಂದವಿಠಲರು
ಕೃಪಾಳೊ ಗುರುವರ ಶ್ರೀಪವಮಾನ ಭವಹಾರಿ ಸ್ಮರಹರನುತ ದೀನಜನಮಂದಾರ ಅ.ಪ ಕಾವಕರುಣಿ ಜೀವವರೇಣ್ಯ ವಿನುತ ಜಯಶೀಲಾ ವಿಧಿ ದುರಿತೌಷ ಹಾರಿ 1 ಆದಿಪುರದಿ ಮೆರೆವನಾಥಾ ಸದಯ ಭಕ್ತ ಜನಕೆ ಶುಭದಾತ ಬುಧರಾರಿ ಸಜಾತ ಭ್ರಾತಾ ಸದಯ ಧರ್ಮಾನು ಜಾತಾ 2 ಪ್ರೇಮಶರಧಿ ವಾನರೇಶಾ ಅಮಿತ ಸತ್ವಯತಿ ಮಹಿಮಯತಿರಾಜಾ ರೋರೋಮ ವ್ಯೋಮಕೇಶಾ ಶಾಮಸುಂದರನ ಮೋಹದ ದಾಸಾ 3
--------------
ಶಾಮಸುಂದರ ವಿಠಲ
ಕೃಷ್ಣ ಕೃಷ್ಣ ಕೃಷ್ಣ ಕೃಷ್ಣ ಕೃಷ್ಣ ನಿನ್ನ ನೋಡುವೆ ಪ. ಹಾಡಿ ದಣಿಯುವೆ ಅ.ಪ ಅನುದಿನದಿ ನಿನ್ನ ನಾಮ ನೆನೆಯುವಂತೆ ಜಿಹ್ವೆಯಲ್ಲಿ ನಿತ್ಯ 1 ಹರುಷದಿಂದ ನಿನ್ನ ನಾಮ ಸ್ಮರಿಸುವೆನೋ ದೇವ ದೇವ ಎನ್ನ ಮರಣ ಸಮಯದಲ್ಲಿ ನಿನ್ನ ಸ್ಮರಣೆ ಇತ್ತು ಕಾಯೋ 2 ಮೊದಲಿನಿಂದ ಭಜಿಸಿದೆನಾ ಹೃದಯದಲ್ಲಿ ನೋಯುತಿರುವೆ ಮುದದಿ ಬಂದು ಎನ್ನ ಜಿಹ್ವೆಗೊದಗೊ ಆಗ ಶ್ರೀ ಶ್ರೀನಿವಾಸ 3
--------------
ಸರಸ್ವತಿ ಬಾಯಿ
ಕೃಷ್ಣ ನಿನ್ನ ಸ್ಮರಣೆ ಎನಗೆ ಮರೆಸಬೇಡವೋ ಎನಗೆ ಮರೆಸಬೇಡವೊ ಯನಗೆ ಮರಿರೆಸಬೇಡವೊ ಪ. ಮಂದ ಮತಿಯಳ ಬಂದು ಕಾಯೋ ನೀ ಬಂದು ಕಾಯೋ ನೀ ಮಂದರೋದ್ಧರ ಸಿಂಧುಶಯನ ಇಂದಿರೆ ರಮಣ 1 ಹಗಲು ಇರಳು ನಿನ್ನ ಸ್ಮರಣೆ ಎನೆಗೆ ಮರೆಸ ಬೇಡವೋ ಹಗರಣ ಮಾಡಿಸಿ ಎನಗೆ ನಿನ್ನ ಸ್ಮರಣೆ ಮಾಡಿಸೋ 2 ರಮಾ ವಲ್ಲಭ ವಿಠಲ ನಿನ್ನ ನಾಮ ನಿರಂತರ ನುಡಿಸೋ ಯನೆಗೆ ಸ್ವಾಮಿ ನಿರಂತರ ನುಡಿಸೋ 3
--------------
ಸರಸಾಬಾಯಿ
ಕೃಷ್ಣತಾತ ಮ'ಪತಿರಾಯರ ಭಜಿಸೊಅಭಿಮಾನವ ತ್ಯಜಿಸೊ ಅನುಮಾನವ ತ್ಯಜಿಸೊ ಪರಾಜವೈಭವದ ಭೋಗಗಳನುಭ'ಸಿ ಶ್ರೀ ಹರಿಯ ಸ್ಮರಿಸಿಭೋಗದೊಳಗೆ ತ್ಯಾಗದ ಪಾಠವ ಕಲಿಸಿ ಕೊಡುಗೈದೊರೆಯೆನಿಸಿಯೋಗಬಂದತಕ್ಷಣ ವೈಭವ ತ್ಯಜಿಸಿ ಯೋಗಿಯನಾಶ್ರೈಸಿಯೋಗಾಭ್ಯಾಸದಿ ಬೇಗ ಹರಿಯ ಒಲಿಸಿ ಅವನೊಳು ಮನಬೆರೆಸಿ 1ಹರಿಯಧ್ಯಾನಕನುಕೂಲವಾದ ಮೆಟ್ಟಾ ಹುಡಕುತುತಾಹೊರಟಾವರಕಾಖಂಡಿಕಿ ಕ್ಷೇತ್ರದಿ ಕಾಲಿಟ್ಟಾ 'ಶ್ರಾಂತಿಗೆ ಕುಳಿತಾಅರೆನಿ'ುಷದಿ ಹರಿಧ್ಯಾನದಿ ಮೈಮರೆತಾ ಸಮಾಧಿ ಇಳಿಯುತಾವರೃಮುನಿಗಳು ತಪವಗೈದಮೆಟ್ಟಾ ಎನುತಲಿಯೆ ನಿಂತಾ 2ಹಗಲು ಇರಳು ಹರಿಧ್ಯಾನದಿ ತಾ ಮುಳುಗಿ ಅಲ್ಲಿರುತಿರಲಾಗಿ ನಗೆ ಮುಖದಲಿ ಝಗಝಗ ಕಾಂತಿಯು ಬೆಳಗಿ ಸುತ್ತಲು ಬೆಳಕಾಗಿಜಗದಜನಕೆ ಅದು ಅತಿ ಅಚ್ಚರಿಯಾಗಿ ಯೋಗಿಗೆ ಶಿರಬಾಗಿಬಗೆ ಬಗೆ ಭಕುತರು ಬಂದರು ತಾವಾಗಿ ಮ'ಪತಿಮಹಾಯೋಗಿ 3ಅಷ್ಟಸಿದ್ಧಿಗಳು ನೆಲೆಸಿದವಾಗಲ್ಲಿ ಆಶ್ರಮ ಬಾಗಿಲಲಿಎಷ್ಟು ಭಕುತಿಜನ ಬಂದರು ಸ'ತಲ್ಲಿ ಇಷ್ಟಾರ್ಥ ಕರದಲಿಮೃಷ್ಟಾನ್ನ ಭೋಜನ ಪ್ರತಿದಿನದಲ್ಲಿ ನಡೆುತು ಸಮತೆಯಲಿಇಷ್ಟವಾದ ಆಧ್ಯಾತ್ಮಿಕ ಮಾರ್ಗದಲಿ ಉಪದೇಶ ಪಡೆಯುತಲಿ 4
--------------
ಭೂಪತಿ ವಿಠಲರು
ಕೃಷ್ಣಾರ್ಯರು ಮನವೇ ಲಾಲಿಸಿ ಕೇಳೊ ಬಿನ್ನೈಸುವೆನೊ ನಿನಗೆ ಚೆನ್ನಾಗಿ ವಡೆಯಾನಾ ಪಾದದಲ್ಲಿ ಭಕುತಿಯನ್ನೆ ಮಾಡಿ ಮಮತೆ ವಿಷಯಾದಿ ಅಹಂಕಾರ ಬುದ್ಧಿಯನ್ನೇ ಬೀಸಾಟಿ ದೃಢವಾಗಿ ಧೈರ್ಯದಿಂದ ಇದೇ ಸಾಧನವೆಂದುಗುಪಿತಾದಲ್ಲಿ ಸಂಚರಿಸೆ ಪಾಣಿಯಾ ಪಿಡಿದುತಾ ವಾಣಿ ಅರಸ ನಿರ್ಮಾಣವ ತೋರಿಸುವ ಪ್ರಾಣದೇವರು ಪ್ರಾಣವಪ್ಪಿಸಿ ಸಾಕುವಬಿಡದೆ ಪಂಚಪ್ರಾಣಾತ್ಮಕನಾದ ತಂದೆವರದಗೋಪಾಲವಿಠಲರೇಯಾನ ಭಜಿಸು ಬಿಡದೆ 1 ಇಂದು ಸಾಧನವೆಂದು ತಿಳಿದು ನಿನ್ನಿಂದ ನೀನೇ ಹಿಗ್ಗಿ ಕುಗ್ಗಾದೀರು ಮಗ್ಗುಲೊಳಗಿದ್ದ ಮಧ್ವದ್ವೇಷಿ ಬಂದು ಮದ್ದು ಹಾಕಿ ಮಣಿಸೂವ ಮಧ್ವರಾಯರ ಪಾದಪದ್ಮದಲ್ಲಿ ಬುದ್ಧಿಯನಿಟ್ಟರೆ ಬಾಧೆಯ ತಪ್ಪಿಸಿ ಉದ್ಧರಿಸುವ ಮುದ್ದು ಮುಖದ ತಂದೆವರದಗೋಪಾಲ- ವಿಠಲರೇಯಾನವಲಿಸು ಬಿಡದೆ 2 ಅನಾದಿ ಕಾಲದಿಂದ ನಿಜ ಗುರುರಾಯನು ನಿನ್ನೊಳಿದ್ದು ಜನಿಸಿ ಬಂದ ಸಾಧನ ಬಿಟ್ಟು ಸುಖದುಃಖ ಜಲಮಯ ಸಂಸಾರದೊಳಗೆ ಬಿದ್ದು ಬಾಯ್ಬಿಡುವಿ ಕಂಡ್ಯಾ ಆ ಗುರುರಾಯರ ಮೂರುತಿ ನಿನ್ನೊಳು ನೋಡುತ್ತ ಪಾಡುತ್ತ ಸುಖಿಯಾಗಿ ಸಕಲ ಕರ್ಮಗಳಾಚರಿಸಿ ತದ್ವಾರ ನವನಿಧಿ ರಾಜನ ಚರಣಕ್ಕೆ ಆರೋಪಿಸೆ ಕೈಗೊಂಡು ಹೊಸಹೂವ ಸುಂದರ ಮೂರುತಿ ತಂದೆವರದಗೋಪಾಲವಿಠ್ಠಲರೇಯಾನ ನಿಲ್ಲಿಸೊ ಬಿಡದೇ 3 ಅವರ ಬಳಿಯಲ್ಲಿ ಪೋಗಿ ನೀನೂ ನಿನ್ನದು ಎನ್ನದಿರು ಕಂಡ್ಯಾ ಮುನ್ನ ನಿನಗೆ ಘನ್ನವಾದ ವೈರಾಗ್ಯ ಪುಟ್ಟುವಾದೂ ಇನ್ನು ನೀನು ಮನದಾಶೆ ಎಂಬ ಪಿಶಾಚೀಗೆ ಒಳಗಾಗಿ ಏನಾಹೋದೋ ನಿನ್ನ ಘಾಸಿಯನರಿತು ಕ್ಲೇಶಾಪಾಶಾಗಳಿದ್ಯಾಡಿಪಶುಪತಿಪಿತನ ಪಡೆದ ತಂದೆವರದಗೋಪಾಲವಿಠಲರೇಯಾನ ವಲಿಸೋ ಬಿಡದೆ4 ಸದಾಕಾಲದಲ್ಲಿ ಇವರ ಸ್ಮರಣೆ ಮಾಡಿ ಧ್ಯಾನಕೆ ತಂದು ಯೋಗಾದಿ ನೋಡುವಾದೆ ಮಹಾ ನಿಜವಾದ ಭಕುತಿ ಇವರ ಪಾದಸ್ಮರಣೆ ಮಾಡಾದ ಮನುಜರಿಗೆ ಶ್ರೀಪದ್ಮ ರಮಣಾನು ಸೃಷ್ಟಿಸೂವ ಆ ಮನುಜಗೋಸುಗ ನರಕ ನರಕಾದೊಳಗಿಟ್ಟು ಕುಟ್ಟುವ ಕ್ಷಣ ಬಿಡದೆ ಎಷ್ಟು ಮಾಡಿದರೇನು ಉತ್ತುಮೋತ್ತಮರೆಲ್ಲ ಸೋತ್ತುಮರಾಯರ ದ್ರೋಹಮಾಡಿ ತುತ್ತುತುತ್ತೀಗೆ ಹಾಕಿಸಿಕೊಂಡು ಕುತ್ತೀಗೆ ಕಟ್ಟಿ ನಿತ್ಯಾದಲ್ಲಿ ಸ್ಮರಣೆಯ ಮಾಡಿದರೆ ನೃತ್ಯವಾಗೈಸುವ ಭಕ್ತಾವತ್ಸಲ ತಂದೆವರದಗೋಪಾಲವಿಠಲರೇಯಾನ ನಿಲ್ಲಿಸೋ ಬಿಡದೆ 5 ಜತೆ :ನವವಿಧಭಕುತಿಯನ್ನೇ ಅರಿತು ಗುರುಪೂಜೆ ಮಾಡಲು ತದ್ವಾರಾ ವಲಿದಾ ತಂದೆವರದಗೋಪಾಲವಿಠ್ಠಲಾ 6
--------------
ತಂದೆವರದಗೋಪಾಲವಿಠಲರು
ಕೇಶವ ಚರಣವಭಜಿಪÉ ಭಕ್ತಿಯಲೀ ಪ ಶ್ರೀಹರಿ ಕಥೆಗಳ ಲಾಲಿಸುವೆನು ನಿತ್ಯ ಶ್ರೀಹರಿ ಕೀರ್ತನೆ ಮಾಡುವೆ ನಿತ್ಯ ಶ್ರೀಹರಿ ಸ್ಮರಣೆಯ ಗೈಯುತಿಪ್ಪೆನು ನಿತ್ಯ ನಿತ್ಯ 1 ಶ್ರೀಹರಿ ರೂಪವ ಪೂಜಿಸುವೆನು ನಿತ್ಯ ಶ್ರೀಹರಿ ಚರಣವ ವಂದಿಪೆ ನಿತ್ಯ ಶ್ರೀಹರಿ ದಾಸ್ಯತ್ವ ವಹಿಸುವೆನೂ ನಿತ್ಯ ನಿತ್ಯ 2 ಶ್ರೀಹರಿಗಾತ್ಮವನರ್ಪಿಸುವೆನು ನಿತ್ಯ ಶ್ರೀಹರಿ ಚರಣದೊಳುರುಳುವೆ ನಿತ್ಯ ಭವ ಭಯ ಶ್ರೀಹರಿ ಚನ್ನಕೇಶವನೆ ಗತಿಯೆಂಬೇ 3
--------------
ಕರ್ಕಿ ಕೇಶವದಾಸ
ಕೇಶವನೊಲುಮೆಯು ಆಗುವ ತನಕ ಹರಿದಾಸರೊಳಿರುತಿರು ಹೇ ಮನುಜ ಪ ಕ್ಲೇಶಪಾಶಂಗಳ ಹರಿದು ವಿಲಾಸದಿಶ್ರೀಶನ ನುತಿಗಳ ಪೊಗಳುತ ಮನದೊಳುಅ ಘಾಸಿ ಮಾಡಿದ ಪಾಪಕಾಶಿಗೆ ಹೋದರೆ ಹೋದೀತೆಶ್ರೀಶನ ಭಕುತರ ದೂಷಿಸಿದಾ ಫಲಕಾಸು ಕೊಟ್ಟರೆ ಬಿಟ್ಟೀತೆಭಾಷೆಯ ಕೊಟ್ಟು ನಿರಾಶೆಯ ಗೈದ ಫಲಕ್ಲೇಶಗೊಳಿಸದೆ ಇದ್ದೀತೆಭೂಸುರಸ್ವವ ಹ್ರಾಸ ಮಾಡಿದ ಫಲಏಸೇಸು ಜನುಮಕು ಬಿಟ್ಟೀತೆ 1 ಜೀನನ ವಶದೊಳು ನಾನಾ ದ್ರವ್ಯವಿರೆದಾನಧರ್ಮಕೆ ಮನಸಾದೀತೆಹೀನ ಮನುಜನಿಗೆ ಜ್ಞಾನವ ಬೋಧಿಸೆಹೀನ ವಿಷಯ ಅಳಿದ್ಹೋದೀತೆಮಾನಿನಿ ಮನಸದು ನಿಧಾನವಿರದಿರೆಮಾನಾಭಿಮಾನಗಳುಳಿದೀತೆಭಾನುಪ್ರಕಾಶನ ಭಜನೆಯ ಮಾಡದಹೀನಗೆ ಮುಕುತಿಯು ದೊರಕೀತೆ2 ಸತ್ಯಧರ್ಮಗಳ ನಿತ್ಯವು ಬೋಧಿಸೆತೊತ್ತಿನ ಮನಸಿಗೆ ಸೊಗಸೀತೆತತ್ವದ ಅರ್ಥವ ವಿಚಿತ್ರದಿ ಪೇಳೆಕತ್ತೆಯ ಚಿತ್ತಕೆ ಹತ್ತೀತೆಪುತ್ಥಳಿ ಬೊಂಬೆಯ ಚಿತ್ರದಿ ಬಣ್ಣಿಸಿಮುತ್ತು ಕೊಟ್ಟರೆ ಮಾತನಾಡೀತೆಕತ್ತುರಿ ತಿಲಕವನೊತ್ತಿ ಫಣೆಯೊಳಿಡೆಅರ್ತಿಯ ತೋರದೆ ಇದ್ದೀತೆ 3 ನ್ಯಾಯವ ಬಿಟ್ಟನ್ಯಾಯವ ಪೇಳುವನಾಯಿಗೆ ನರಕವು ತಪ್ಪೀತೆಬಾಯಿ ಕೊಬ್ಬಿನಲಿ ಬಯ್ಯುವ ಮನುಜಗೆಘಾಯವಾಗದೆ ಬಿಟ್ಟೀತೆತಾಯಿತಂದೆಗಳ ನೋಯಿಸಿದವನಿಗೆಮಾಯದ ಮರಣವು ತಪ್ಪೀತೆಮಾಯಾಜಾಲವ ಕಲಿತ ಮನುಜನಿಗೆಕಾಯ ಕಷ್ಟವು ಬಿಟ್ಟೀತೆ 4 ಸಾಧು ಸಜ್ಜನರ ನೋಯಿಸಿದ ಮಾಯಾವಾದಿಗೆ ನರಕವು ತಪ್ಪೀತೆಬಾಧಿಸಿ ಪರರರ್ಥವ ದೋಚುವವಗೆವ್ಯಾಧಿಯು ಕಾಡದೆ ಬಿಟ್ಟೀತೆಭೇದವೆಣಿಸಿ ಬಲು ಕ್ಷುದ್ರವ ಕಲಿತರೆಮೋದವೆಂದಿಗು ಆದೀತೆಕದ್ದು ಒಡಲ ಪೊರೆವವನ ಮನೆಯೊಳುಇದ್ದದ್ದು ಹೋಗದೆ ಉಳಿದೀತೆ5 ಅಂಗಜ ವಿಷಯಗಳನು ತೊರೆದಾತಗೆಅಂಗನೆಯರ ಸುಖ ಸೊಗಸೀತೆಸಂಗ ದುಃಖಗಳು ಹಿಂಗಿದ ಮನುಜಗೆಶೃಂಗಾರದ ಬಗೆ ರುಚಿಸೀತೆಇಂಗಿತವರಿತ ನಿಸ್ಸಂಗಿ ಶರೀರ ವ-ಜ್ರಾಂಗಿಯಾಗದೆ ತಾನಿದ್ದೀತೆಮಂಗಳ ಮಹಿಮನ ಅಂಘ್ರಿಯ ಕಾಣದಮಂಗಗೆ ಮುಕುತಿಯು ದೊರಕೀತೆ 6 ಕರುಣಾಮೃತದಾಭರಣವ ಧರಿಸಿದಶರಣಗೆ ಸಿರಿಯು ತಪ್ಪೀತೆಕರುಣ ಪಾಶದುರವಣೆ ಹರಿದಾತಗೆಶರಣರ ಕರುಣವು ತಪ್ಪೀತೆಅರಿತು ಶಾಸ್ತ್ರವನಾಚರಿಪ ಯೋಗ್ಯಗೆಗುರು ಉಪದೇಶವು ತಪ್ಪೀತೆವರ ವೇಲಾಪುರದಾದಿಕೇಶವನಸ್ಮರಿಸುವನಿಗೆ ಮೋಕ್ಷ ತಪ್ಪೀತೆ 7
--------------
ಕನಕದಾಸ
ಕೇಶವನೊಲುಮೆಯು ಆಗುವತನಕ ಹರಿ ದಾಸರೊಳಿರು ಮನವೆ ದಾಸರ ಸ್ತುತಿಯನು ಪೊಗಳುತ ಮನದೊಳು ಪ ಕಾಶಿಗೆ ಪೋದರೆ ಪೋದೀತೆ ಲೇಸಾಗದೆ ಸುಮ್ಮನಿದ್ದೀತೆ ಮೋಸವ ಮಾಡದೆ ಬಿಟ್ಟೀತೆ ನಿಜವಲ್ಲದೆ ಪುಸಿಯಾದೀತೆ 1 ಸೊಣಕನ ಮನಸಿಗೆ ಸೊಗಸೀತೆ ಹೀನ ವಿಷಯಗಳು ಬಿಟ್ಟೀತೆ ಮಾನಾಭಿಮಾನವು ಉಳಿದೀತೆ ದೀನಗೆ ಮುಕ್ತಿಯು ದೊರಕೀತೆ 2 ಕತ್ತೆಯ ಮನಸಿಗೆ ಬಂದೀತೆ ತೊತ್ತಿನ ಮನಸಿಗೆ ಬಂದೀತೆ ಅರ್ಥ ತೊರೆಯದೇ ಬಿಟ್ಟೀತೆ ಚಿತ್ರದಿ ಬೊಂಬೆ ವಿಚಿತ್ರದಿ ಬರೆದಿತ್ತ ಮುತ್ತು ಕೊಟ್ಟರೆ ಮಾತಾಡೀತೆ 3 ನಾಯಾಗಿ ಹುಟ್ಟೋದು ಬಿಟ್ಟೀತೆ ಮಾಯಾವಾದಿಗೆ ಮುಕುತಿಯು ದೊರಕೀತೆ ಬಾಯಿಬೊಬ್ಬಿಲಿ ಬೊಗಳುವ ಮನುಜಗೆ ಘಾಯವಾಗದೆ ಬಿಟ್ಟೀತೆ ಕಾಯಕ ಕಷ್ಟ ಬಿಡದಿದ್ದೀತೆ 4 ರ್ವಾದಿಗೆ ಮುಕುತಿಯು ದೊರಕೀತೆ ಗೈದವಗೆ ವ್ಯಾಧಿ ಕಾಡದೆ ಬಿಟ್ಟೀತೆ ಬುದ್ಧಿಹೀನನೆಂಬೋದು ಬಿಟ್ಟೀತೆ ಇದ್ದದ್ದೋಗದೆ ಉಳಿದೀತೆ 5 ಅಂಗನೆಯರ ಬಯಸೀತೆ ಶೃಂಗಾರದ ಬಗೆ ತೋರೀತೆ ಭೃಂಗಗೆ ಮುಕ್ತಿಯು ದೊರಕೀತೆ 6 ಕರುಣಾನನ ಸ್ಮರಣೆವುಳ್ಳರಿಗೆ ಪರಮ ಪದವಿ ಆಗದಿದ್ದೀತೆ ಚರಣ ಸೇವಕನಾಗಿ ಇರು ಕಂಡ್ಯ ಮನವೆ 7
--------------
ಬೇಲೂರು ವೈಕುಂಠದಾಸರು
ಕೇಶವಾಚ್ಯುತ ಮಾಧವಾನಂತ|ಶ್ರೀ ಶಕಮಲದಳೇಕ್ಷಣಾ| ವಾಸುದೇವ ಮುಕುಂದ ಮುರಹರ ಕ್ಲೇಶಹರಣ ಜನಾರ್ಧನಾ|| ವಾಸುಕಿಯ ಪರಿಯಂಕನೆನುತಲಿ|ನೆನೆವನಾವ ನರೋತ್ತಮಾ| ಮೋಸಹೋಗದಿರವರೊಳೆಂದು|ಚರರಿಗ್ಹೇಳಿದನೈಯಮಾ 1 ರಾಮರಾಘವ ರಾಜಶೇಖರ|ರಾವಣಾಸುರಮರ್ದನಾ| ಶಾಮಸುಂದರ ಸಕಲ ಗುಣನಿಧಿ|ಶಬರಿಪೂರಿತ ವಾಸನಾ ಭೂಮಿಜಾಪತಿ ಭೂತನಾಥ|ಪ್ರಿಯನೆಂಬ ನರೋತ್ತಮಾ| ಪ್ರೇಮಿಕನ ನುಡಿಸದಿರಿಯೆಂದು|ಚರರಿಗ್ಹೇಳಿದನೈಯಮಾ 2 ಬಾಲಲೀಲವಿನೋದ ಶ್ರೀ ಗೋಪಾಲ ಗೋಕುಲ ಲಾಲನಾ| ಕಾಲಜಲಧರ ನೀಲಮುರಲೀ ಲೋಲಸುರವರ ಪಾಲನಾ| ಕಾಲಕಾಲನೆ ಕಂಸಹರನನು ತಾವ ನೆನೆವ ನರೋತ್ತುಮಾ| ಕಾಲಿಗೆರಗಿರಿ ಅವರಿಗೆಂದು|ಚರರಿಗ್ಹೇಳಿದನೈಯಮಾ 3 ಮಕರಕುಂಡಲ ಕಿರೀಟ ಕೌಸ್ತುಭ|ಕಟಕಕೇಯೂರ ಭೂಷಣಾ| ಅಖಿಲ ಜಗನುತ ಚರಣಪೀತಾಂಬರನೆ ಶ್ರೀವತ್ಸಲಾಂಭನಾ| ಪ್ರಕಟಿತಾಯುಧ ಶಂಖಚಕ್ರಗದಾಬ್ಜ ನೆನೆವನರೋತ್ತಮಾ| ಸುಖಿಸುವವರನು ತ್ಯಜಿಸಿರೆಂದು ಚರರಿಗ್ಹೇಳಿದನೈಯಮಾ 4 ಶ್ರವಣಪೂಜನೆ ಸ್ಮರಣಕೀರ್ತನೆ ವಂದನೆದಾಸ್ಯದಿ ಸಖ್ಯವಾ| ಬಿಡದನಾವನರೋತ್ತುಮಾ| ಅವನ ಸೀಮೆಯ ಹೋಗದಿರೆಂದು ಚರರಿಗ್ಹೇಳಿದನೈಯಮಾ 5 ಯಾರಮನೆಯಲಿ ತುಲಸಿವೃಂದಾವನದಿ ಶಾಲಿಗ್ರಾಮವು| ಚಾರುದ್ವಾದಶನಾಮ ಹರಿಚಕ್ರಾಂಕಿತದ ಶುಭಕಾಯವು| ಮೀರದಲೆ ಹರಿದಿನದ ವ್ರತದಲಿ ನಡೆವನಾವನರೋತ್ತಮಾ| ದಾರಿ ಮೆಟ್ಟದಿರೆಂದು ತನ್ನಯ ಚರರಿಗ್ಹೇಳಿದನೈಯಮಾ 6 ಸಾಧುಸಂತರು ಬಂದರೆರಗುತ ಪಾದೋದಕದಲಿ ಮೀವನು| ಆದಿನವಯುಗ ವಾದಿಚತುರ್ದಶ ಪರ್ವಕಾಲಗಳೆಂಬನು| ಸಾದರದಿ ಹರಿಪೂಜೆಯಿಂದರ್ಚಿಸುವ ನಾವನರೋತ್ತಮಾ| ಮೋದದಿಂದಲಿ ಬಾಗಿರೆಂದು ಚರರಿಗ್ಹೇಳಿದನೈಯಮಾ 7 ಅಂದು ಹೇಳಿದ ಕಥೆ ರಹಸ್ಯದ ಹರಿಯನಾಮದ ಮಾಲಿಕಾ| ತಂದೆ ಮಹೀಪತಿ ಎನ್ನ ಮುಖದಲಿ ನುಡಿಸಿದನು ಭೋಧಾಷ್ಟಕ| ತಂದು ಮನದಲಿ ಭಕುತಿಯಿಂದಲಿ ನೆನೆವನಾವನರೋತ್ತಮಾ| ಇಂದು ಜೀವನ್ಮುಕ್ತನಮಗಿನ್ನೇನು ಮಾಡುವನೈಯಮಾ 8
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಕೇಶವಾಯೆನ್ನಿರಯ್ಯ ಹಾಗಂದೂ ಪಾಶವ ಕಡಿಯಿರಯ್ಯ ಪ ಕೇಶವ ನಾಮವ ಭಜಿಸುತ್ತಲೀಗ ಆಸÉ ಕ್ಲೇಶಗಳನ್ನು ನೀಗಿರಿ ಬೇಗ ಅ.ಪ. ವರದೂರ್ವಾಪುರದಲ್ಲಿ ನಿರುತನಾಗಿದ್ದು ತಾ ಪರಮ ದಾಸರಿಗೆಲ್ಲ ಹರಿ ಭಾಸವಪ್ಪಾ ಶರಣರ ಪಾಲಕ ಚನ್ನಕೇಶವರಾಯ ಪರಬ್ರಹ್ಮ ರೂಪದಿ ಮೆರೆವ ಗೋಪಾಲ 1 ತರಳ ಪ್ರಲ್ಹಾದ ಕೇಶವನನ್ನು ಸ್ಮರಿಸಲು ದುರುಳ ತಾತನ ಕೊಂದು ಕಂದನ ಪೊರೆದಾ ಸರಳೆ ಪಾಂಚಾಲೆಯು ಸಭೆಯಲ್ಲಿ ಮೊರೆಯಿಡೆ ತರುಣಿಗಕ್ಷಯವಿತ್ತು ಶ್ರೀಹರಿ ಪೊರೆದಾ 2
--------------
ಕರ್ಕಿ ಕೇಶವದಾಸ
ಕೇಸರಿ ಪಕರುಣತೊರಿಸು ಕೇಶವಾ ದುರಿತಪಾಶ ಬಿಡಿಸುವಾಸಿರಿರಾಮಕೋಟಿ ನಾಮವಾ ಸ್ಮರಣೆಕೊಟ್ಟೆ ಮಾಧವಾ 1ಭಯನಿವಾರಣಮಾಡಿಸಿ ಪ್ರಜಗಳೆಲ್ಲರಪೋಸಿಜಯಪ್ರದವಹೊಂದಿಸಿ ಜಗತ್ಕೀರ್ತಿನಿಲ್ಲಿಸಿ2ಸಂಘದಿಂದಧ್ಯಾನವಾ ಸಮರಸಸುಜ್ಞಾನವಾಇಂಗಿತಾರ್ಥಾಚರಣವಾ 'ೀಗೆ ನಿಲ್ಲಿಸು ರಾಘವಾ 3ರಾಮಕೋಟಿಸೇವೆಗೆ ರಮ್ಯಜನರು ಕೂಡಿಕೆ ಸಂಭ್ರÀಮದಿಭಜನ ಮಾಡಲಿಕೆ ಸತ್ಯಾಮೃತವನು ಕೊಡಲಿಕೆ 4ಗುರುವು ತುಲಸಿರಾಮನಾ ಪರಮಕೃಪಾಪಾತ್ರನಾಗಿರುವ ರಂಗಸ್ವಾ'ುದಾಸಾರ್ಚಿತ ಶ್ರೀನಾರಾಯಣ 5
--------------
ಮಳಿಗೆ ರಂಗಸ್ವಾಮಿದಾಸರು