ಒಟ್ಟು 572 ಕಡೆಗಳಲ್ಲಿ , 70 ದಾಸರು , 484 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(ಕಾರ್ಕಳದ ವೆಂಕಟೇಶನನ್ನು ನೆನೆದು)ಶ್ರೀನಿವಾಸ ನಮೋ ನಮೋ ಶ್ರುತಿಗಾನಲೋಲಪಾಹಿಪ.ಭಾನುಕೋಟಿ ಸಮಾನ ಭಾಸಿತ ದಾನವವಿಪಿನನ-ವೀನದವಾನಲ ದೀನೋದ್ಧಾರ ದಯಾನಿಧೆ ಸುಂದರ ಅ.ಪ.ಶೇಷಗಿರಿಯಿಂದ ಸುಜನಗಳ ಘೋಷದಿ ನಂಬಿದದಾಸಜನರಭಿಲಾಷೆಯನು ಸಂತೋಷದಿ ಕೊಡಲು-ಲ್ಲಾಸದಿಂದ ಪರೇಶ ನಾನಾ ವಿಲಾಸದಿ ನೆಲಸುತಕಾಸುವೀಸದ ಭಾಷೆಯನು ದಿಗ್ದೇಶದಿಂದ ಮಹಾಸುಕೀರ್ತಿಯರಾಸಿಗಳಿಸಿ ಜಗದೀಶ ಪರೇಶ ಮ-ಹೇಶವಿನುತನಿರ್ದೋಷಜಗನ್ಮಯ1ಉತ್ತಮಾಂಗಸುರತ್ನಖಚಿತಕಿರೀಟದ ನಿಜಪದ-ಭಕ್ತಜನಮನವೃತ್ತಿ ಒಲಿಸುವ ಕೂಟದ ಕರುಣೋ-ತ್ಪತ್ತಿ ಸರಸಿಜನೇತ್ರಯುಗ್ಮದ ನೋಟದ ಭೂಷಣ-ಮೊತ್ತದಿಂದಾದಿತ್ಯಕೋಟಿಯನ್ನೆತ್ತಿಂದತೆಸೆವುತ್ತ ಮಂಗಲ-ಮೂರ್ತಿಧರಿಸಿ ಜನರರ್ತಿಯ ಸಲಿಸುವಚಿತ್ತಜಜನಕ ಸರ್ವೋತ್ತಮ ನಿರುಪಮ 2ಪಂಕಜಾಂಬಕ ಶಂಕರಾಪ್ತ ಶುಭಾಕರ ಶ್ರೀವ-ತ್ಸಾಂಕ ಮುಕ್ತಾಲಂಕೃತ ಕರುಣಾಕರ ಭಕ್ತಾ-ತಂಕರಹಿತ ನಿಶ್ಯಂಕ ನಿತ್ಯನಿರಾಕರ ಪ್ರಭುವೆಂಕಟೇಶ ನಿರಾಮಯಾಮರಸಂಕುಲಾರ್ಚಿತ ಶಂಖಚಕ್ರಗ-ದಾಂಕಿತ ದನುಜಭಯಂಕರವರನಿರ-ಹಂಕರ ನಿಜದ ನಿಷ್ಕಳಂಕಚರಿತ್ರ 3ಮಂದರಾಧರ ಮಾಪತೇ ಮುಖಚಂದಿರ ಮೌನಿವೃಂದವಂದ್ಯ ಸುರೇಂದ್ರಪೂಜ್ಯ ಧುರಂಧರ ಮಹಾ-ಸಿಂಧುಶಯನ ಮುಕುಂದಕಂಬುಕಂಧರಶೋಭಿಪಕುಂದರದನ ಕುಚೇಲಪಾಲಾರವಿಂದನಾಭ ಪುರಂದರಾರ್ಚಿತಮಂದಹಾಸ ಮುಚುಕುಂದವರದ ಗೋ-ವಿಂದಸಚ್ಚಿದಾನಂದಉಪೇಂದ್ರ4ಮೂರು ಲೋಕೋದ್ಧಾರಿ ಘನಗಂಭೀರನೆ ವೆಂಕಟಧೀರಕಾರ್ಕಳಸಾರನಗರಾಧಿಕಾರನೆ ಭೂಸುರ-ಭೂರಿವೇದಪುರಾಣಘೋಷಾದಿಹಾರನೆ ಸಂತತಚಾರುಗೌಡಸಾರಸ್ವತಶೃಂಗಾರಋಗ್ವೇದಾಖ್ಯ ಉತ್ತಮದಾರುಣೀಸುರರಿಂದನವರತ ಮಂಗ-ಲಾರತಿಗೊಂಬ ಲಕ್ಷ್ಮೀನಾರಾಯಣಹರಿ5
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
(ಕೇಶವಾಯ ನಮಃ ದಿಂದ ಆರಂಭವಾಗುವ ಆಚಮನ ಸ್ತುತಿ)ಶ್ರೀನಿವಾಸಾಯ ನಮೋ ಪ.ಶ್ರೀನಿವಾಸಾಯ ಶತಭಾನುಪ್ರಕಾಶಾಯಶ್ರೀನಿವಾಸಾಯ ನಿಜ ಭಕ್ತಜನಪೋಷಾಯಶ್ರೀನಿವಾಸಾಯ ಪರಮಾನಂದಘೋಷಾಯ ಅ.ಪ.ದೋಷಗಂಧವಿದೂರ ಕೇಶಿಮುಖದಾನವ ವಿ-ನಾಶವಿಧಿಭವಸುಖನಿವಾಸ ವಾಸುಕಿಶಯನವಾಸವಾದ್ಯಮರಗಣಪೋಷ ಪಾವನವೇಷ ಶ್ರೀಶ ನಿರ್ಗತವಿಶೇಷದಾಸಜನಹೃದಯಾಬ್ಧಿಭೇಶ ಕೌಸ್ತುಭಮಣಿವಿ-ಭೂಷ ಭೂತಾತ್ಮ ಭವಪಾಶಹರ ಪರತರ ದ-ಯಾ ಸಮುದ್ರ ವಿನಿದ್ರ ಭೂಶಯನ ಭೂರಿಪ್ರದಕೇಶವಾಯ ನಮೋನಮಃ 1ಕ್ಷೀರಸಾಗರವಾಸ ಶ್ರೀರಮಾಪ್ರಾಣೇಶಸಾರಭೋಕ್ತøಸ್ವತಂತ್ರ ಚಾರುಷಡ್ಗುಣಭರಿತನಾರದಾದಿಮುನೀಂದ್ರವಾರಸನ್ನುತಪಾದನೀರರುಹದ್ವಂದ್ವನೆವಾರಿಜಾಸನಮುಖ್ಯಸುರರುತಿಳಿಯರು ನಿನ್ನಭೂರಿಮಹಿಮೆಗಳ ಸಾಕಾರವನು ಬಣ್ಣಿಸುವಧೀರನಾವನು ಮಹಾ ವೀರ ವಿಶ್ವಾಧಾರನಾರಾಯಣಾಯ ನಮೋ 2ವೇದವೇದ್ಯನೆ ದುರಿತಶೋಧನೆ ದೈತ್ಯಗಣ-ಛೇದಕನೆ ಸುರಸುಪ್ರಸಾದಕನೆ ಭಕ್ತಜನ-ಮೋದದಾಯಕ ಸ್ವಗತ ಭೇದವರ್ಜಿತಸಮಾನಾಧಿಕ್ಯರಹಿತ ಸತತಆದಿತ್ಯ ಶತಕೋಟಿತೇಜೋವಿರಾಜ ಮಹ-ದಾದಿಕಾರಣ ಮಧುವಿರೋಧಿ ಮಂಗಲಸುಖಾಂ-ಬೋಧಿ ಪದ್ಮಾಲಯವಿನೋದಿ ರಾಧಾರಮಣಮಾಧವಾಯ ನಮೋನಮಃ 3ಇಂದಿರಾಹೃದಯಾಬ್ಧಿ ಚಂದ್ರ ಚಾರ್ವಂಗ ಮುಚು-ಕುಂದಾಪ್ತ ಸರ್ವಶ್ರುತಿವೃಂದಪ್ರತಿಪಾದ್ಯ ಸಾ-ನಂದ ಭರಿತ ಕಾಳಿಂದೀರಮಣ ರಾಮಚಂದ್ರಸನ್ನುತಮಹೇಂದ್ರವಂದಾರುಜನತ್ರಿದಶಮಂದಾರ ಕೋಮಲಿತವೃಂದಾವನವಿಹಾರ ಕಂದರ್ಪಜನಕ ಬಾ-ಳೇಂದುಶೇಖರಸಖ ಸನಂದನಾರ್ಚಿತ ಶ್ರೀಗೋವಿಂದಾಯತುಭ್ಯಂ ನಮಃ 4ಜಿಷ್ಣುರಥಸಾರಥಿ ತ್ರಿವಿಷ್ಟಪಸಭಾಧ್ಯಕ್ಷಮುಷ್ಟಿಕಾಸುರವೈರಿ ಮುನಿಜನಮನೋಹಾರಿಮುಟ್ಟಿ ಭಜಿಪರ ಮನೋಭೀಷ್ಟವ ಸಲ್ಲಿಸುವ ಶ್ರೇಷ್ಠ ಪೂರ್ಣಬ್ರಹ್ಮನೇಭ್ರಷ್ಟಸಂಸಾರದೊಳು ನಷ್ಟ ಬುದ್ಧಿಗಳಿಂಗೆತುಷ್ಟಿಯನು ನೀನಿತ್ತು ಸಲಹೊ ಸಾಮಜವರದಬೆಟ್ಟದೊಡೆಯನೆ ಕೃಪಾದೃಷ್ಟಿಯಿಂದಲಿನೋಡುವಿಷ್ಣವೇತುಭ್ಯಂ ನಮೋ 5ವಿಧಿಭವಾದಿ ಸಮಸ್ತ ತ್ರಿದಶಜನಸುಖದಾತಬುಧಜನಪ್ರಿಯ ಭೂತಭಾವನ ಜಗನ್ನಾಥಪದುಮಾಕ್ಷ ಪಾಂಡವಪ್ರತಿಷ್ಠಾಪನಾಚಾರ್ಯಮದನಕೋಟಿಸ್ವರೂಪವಿದುರನಾಲಯದಲ್ಲಿ ಪಾಲುಂಡ ಬ್ರಹ್ಮಾಂಡ-ಕಧಿಪತಿ ಕಲಿಮಲನಾಶ ಕವಿಜನಮನೋಲ್ಲಾಸವಿಧುಮಂಡಲಸ್ಥ ಸದ್‍ಹೃದಯಪಂಕಜವಾಸಮಧುಸೂದನಾಯ ನಮೋ 6ಅಕ್ರೂರವರದ ಸದತಿಕ್ರಮರ ಗೆಲಿದ ಹಯ-ವಕ್ತ್ರವೈಕುಂಠಾಖ್ಯ ಪುರವಾಸ ಜಗದೀಶಶುಕ್ರ ಶಿಷ್ಯರನೆಲ್ಲ ಪರಿಹರಿಸಿ ಪಾಲಿಸಿದೆ ಶಕ್ರಾದಿಸುರಗಣವನುಚಕ್ರ ಶಂಖ ಗದಾಬ್ಜಧರ ಚತುರ್ಭುಜ ದೇವ-ಚಕ್ರವರ್ತಿಯನಂತಕೀರ್ತಿ ಪಾವನಮೂರ್ತಿನಕ್ರಮದಹರನಾದ ಬ್ರಹ್ಮ ಗಂಗಾಪಿತತ್ರಿವಿಕ್ರಮಾಯ ನಮೋನಮಃ 7ರಾಮಣೀಯಕ ವಪು ನಿರಾಮಯ ನಿರಾಶ್ರಯ ಸು-ದಾಮಸಖ ಪರಿಪೂರ್ಣಕಾಮ ಕೈರವದಳ-ಶ್ಯಾಮ ಕಲ್ಯಾಣ ನಿಸ್ಸೀಮ ಮಹಿಮನೆಸುಜನಸ್ತೋಮಸುರಕಾಮಧೇನುಗೋಮಿನೀಪತಿ ಗೋಗಣಾನ್ವಿತನೆ ಗೋಪೀಲ-ಲಾಮ ಗೋವರ್ಧನೋದ್ಧಾರ ಗೋವಿದಾಂಪತಿ ವಿ-ರಾಮ ವಿಷ್ವಕ್ಸೇನ ವಿಶ್ವತೈಜಸಪ್ರಾಜÕವಾಮನಾಯ ನಮೋನಮಃ8ಆದಿಮಧ್ಯಾಂತವಿರಹಿತ ನಿಖಿಲಸಾರ್ಚಿತ ವಿ-ರಾಧಭಂಜನ ಭವಾಂಬೋಧಿಕುಂಭಜ ಭಜಕ-ರಾದವರನುದ್ಧರಿಪ ಬೋಧರೂಪನೆಚತುಷ್ಟಾದ ಪಾವನಚರಿತನೆಗಾಧಿಜಾಧ್ವರಪಾಲ ಗರುಡಧ್ವಜ ದಯಾಳುನಾದಬಿಂದು ಕಲಾತೀತ ರುಕ್ಮಿಣಿನಾಥಬಾದರಾಯಣನೆ ನಿರುಪಾಧಿ ಮಾಯಾತೀತಶ್ರೀಧರಾಯ ನಮೋನಮಃ 9ಪಾಶಧರನುತ ವೆಂಕಟೇಶ ಸರ್ವೇಂದ್ರಿಯಪ್ರ-ಕಾಶ ಪಾಲಿತನಿಖಿಳಭೂಸುರವ್ರಜ ಮಂದ-ಹಾಸಮುಖ ನವಕುಂದಭಾಸರದನವಿರಾಜದೂಷಣಾದ್ಯ ಸುರಹರನೆಈಶಪತಿಸೇವ್ಯಾಂಬರೀಶನೃಪವರದ ಪರ-ಮೇಶ ಕೋವಳಪೀತವಾಸ ಕರ್ದಮಶುಕಪ-ರಾಶರಾದ್ಯಮಿತಯೋಗೀಶರಕ್ಷಕಹೃಷೀಕೇಶಾಯ ತುಭ್ಯಂ ನಮೋ 10ಶುದ್ಧ ತ್ರಿಗುಣಾತೀತ ತ್ರಿವ್ರತ ತ್ರಿಜಗತ್ಪಾಲಪ್ರದ್ಯುಮ್ನ ಪ್ರಥಮಾಂಗದೊಡೆಯ ಪರಮಾತ್ಮ ಸುರ-ಸಿದ್ಧ ಪೂಜ್ಯ ಪುಂಡರೀಕದಳಾಕ್ಷಬುದ್ಧಬುಧಜನಸುಲಭಮಧ್ವವಲ್ಲಭ ಮಂತ್ರಮೂರ್ತಿ ಕ್ಷೀರಾಬ್ಧಿ ಶ್ವೇತದ್ವೀಪವೈಕುಂಠಮಂದಿರತ್ರಯ ಸಾಧು-ಹೃದ್ಯ ಭಕ್ತದ್ವೇಷಭಿದ್ಯ ನಿತ್ಯಾತ್ಮ ಶ್ರೀಪದ್ಮನಾಭಾಯ ನಮಃ11ಸಾಮಗಾನವಿನೋದ ಸಾಧುಜನಸುಖಬೋಧಕಾಮಿತಾರ್ಥಪ್ರದಾತ ಕಪಿಲಋಷಿ ಪ್ರಖ್ಯಾತವ್ಯೋಮಯಾನವರೂಥ ಓಂಕಾರಭರಿತ ರಘುರಾಮಸಮರಂಗ ಭೀಮನಾಮಧಾರಕರ ಪರಿಣಾಮರೂಪಕ ಸುಜನ-ಕ್ಷೇಮಪ್ರಾಪಕ ನೀಲಜೀಮೂತನಿಭವರ್ಣಭೌಮಪುರುಷೋತ್ತಮ ನಿಯಾಮಕನೆ ರಕ್ಷಿಸೈದಾಮೋದರಾಯ ನಮೋ 12ಶಂಕರಾಂತರ್ಯಾಮಿ ಶಾಙ್ರ್ಗಪಾಣಿ ಶರಣ್ಯವೆಂಕಟಾಚಲಸದಾಲಂಕಾರ ಶೇಷಪರಿ-ಯಂಕ ಪ್ರವಿತತನಿಷ್ಕಳಂಕಚಾರಿತ್ರ ಸುಸಂಕುಲಾರ್ಚಿತ ಪದಯುಗಲಂಕಾಧಿಪತ್ಯವ ವಿಭೀಷಣನಿಗೊಲಿದಿತ್ತಓಂಕಾರನಿಧನ ಸಾಮಕಭಕ್ತರಾನೇಕಸಂಕಟವ ಪರಿಹರಿಪ ಸತ್ಯ ಸಂಕಲ್ಪ ಶ್ರೀಸಂಕರ್ಷಣಾಯ ನಮೋ13ಈ ಸಮಸ್ತ ಜಗತ್ತು ನಿನ್ನುದರದೊಳಗಿಹುದುಈ ಸಕಲಜೀವರೊಳಗಿಹ ನಿತ್ಯನಿರ್ಮುಖ್ಯಸೂಸಿಬಹ ಸಂಸಾರಸಾಗರದಿ ಮುಳುಗಿದೆನುನೀ ಸಲಹೊ ದೇವದೇವಭೂಸಲಿಲಪಾವಕಾಕಾಶಾದಿ ಭೂತಾಧಿ-ವಾಸ ರಾಕ್ಷಸವನಹುತಾಶ ನಾನಾ ರೂಪ-ವೇಷಧಾರಕ ನರಾವೇಶ ಪಾಲಿಸು ಎನ್ನವಾಸುದೇವಾಯ ನಮೋ 14ಅದ್ವಿತೀಯನೆಯಮಿತವಿಕ್ರಮನೆ ಗುಣಕಾಲವಿದ್ಯಾಪ್ರವರ್ತಕನೆ ವಿಶ್ವಾದಿ ಸಾಹಸ್ರಸಿದ್ಧನಾಮ ನರನಾರಾಯಣಪರಾಯಣನೆ ಬುದ್ಧಿಪ್ರೇರಕಪ್ರೇರ್ಯನರುದ್ರರೂಪಪ್ರತಾಪ ಋಗ್ಯಜುಸ್ಸಾಮಶ್ರುತಿ-ವೇದ್ಯ ಬ್ರಹ್ಮಾಂಡಕೋಟಿಗಳ ಸಲೆ-ಬದ್ಧಕಮನೀಯರೂಪಸುತಪದುರಾಪಪ್ರದ್ಯುಮ್ನಾಯ ತುಭ್ಯಂ ನಮಃ 15ಉದ್ಧವಾದಿ ಸಮಸ್ತ ಭಾಗವತಜನಕಮಲ-ಮಧ್ಯಚರರಾಜಹಂಸಾಯ ಮಾನಸದಶ್ರದ್ಧೆಯಂ ಕೊಟ್ಟು ರಕ್ಷಿಸು ಧೊರೆಯೆಶ್ರೀಹರಿಯೆ ವೈದ್ಯನಾಥವಿಧಾತನೆಬದ್ಧನಾದೆನು ಕರ್ಮಪಾಶದಿಂದ ದೊರೆ ಸಿಕ್ಕಿ-ಬಿದ್ದೆ ಕೈಪಿಡಿದೆಬ್ಬಿಸೆನ್ನನೆಲೆದೇವ ಮರೆಹೊದ್ದಿದೆನು ಮೈದೋರು ಚಿನುಮಯಾತ್ಮಕನೆಅನಿರುದ್ಧಾಯ ತುಭ್ಯಂ ನಮಃ 16ಕ್ಷರ ಪುರುಷರೆಲ್ಲ ಬ್ರಹ್ಮಾದಿ ಜೀವರು ರಮಾಕ್ಷರಪುರುಷಳೆನಿಸುವಳು ನೀನೆ ಉತ್ತಮ ಪರುಷಪರತರಾವ್ಯಯಲೋಕಭರಿತಮಂಗಲರಿತ ಗುರುತಮ ಗುಣಧ್ಯಕ್ಷನೆಶರಧಿಸೇತುನಿಬದ್ಧ ಶಬರಿ ಹಣ್ಣನು ಮೆದ್ದಶರಭಂಗಮುನಿಪಾಲ ಶಮಿತದಾನವಜಾಲಧುರವಿಜಯ ವಿಜಯಮೈದುನ ಕೃಷ್ಣ ರಕ್ಷಿಸೈಪುರುಷೋತ್ತಮಾಯನ್ನಮೋ 17ಅಕ್ಷಯಾತ್ಮನೆ ವಿಶ್ವರಕ್ಷಕನೆ ವಿಶ್ವಭುಗ್-ವಿಶ್ವತೋಮುಖ ವಿಶ್ವತೋಬಾಹು ಕರುಣಾಕ-ಟಾಕ್ಷದಿಂ ನೋಡೆನ್ನಮ್ಯಾಲೆದಯಮಾಡು ಶ್ರೀವಕ್ಷಸ್ಥಲನಿವಾಸನೆಲಕ್ಷ್ಮಣಾಗ್ರಜನೆ ಸುವಿಲಕ್ಷಣನೆ ಸುಜ್ಞಾನ-ಮೋಕ್ಷದಾಯಕ ಯಜÕಮೂರ್ತಿ ರೂಪತ್ರಯ ಮ-ಹೋಕ್ಷಧ್ವಜನಂ ಮೋಹಿಸಿದ ಮೋಹಕಲ್ಪಅಧೋಕ್ಷಜಾಯ ನಮೋನಮಃ 18ಕ್ರೂರಕರ್ಮಿ ಹಿರಣ್ಯಕಶಿಪುವಂ ಕೊಂದ ದು-ರ್ವಾರದುರಿತಾಬ್ಧಿಬಾಡಬ ಭಕ್ತವತ್ಸಲ ಮ-ಹಾರವಕುಲಿಶ ಶತಕೋಟಿಸದೃಶನಶಿರಪ್ರಕರಧೀರ ಪ್ರಹ್ಲಾದಾಭಿವರದಭೂರೀಕರರೂಪ ಭೂಮಕೀರ್ತಿಕಲಾಪಸಾರವಜ್ರಸ್ತಂಭದಿಂ ಬಂದ ನಂದ ಸುಕು-ಮಾರಮಾರ್ಕಾಂಡೇಯವರದ ಲೋಕಶರಣ್ಯನಾರಸಿಂಹಾಯ ನಮೋ 19ನಿಶ್ಚಲಾತ್ಮ ನಿರೀಹ ನಿರ್ವಿಕಾರಾನಂತಪ್ರೋಚ್ಛ ಸರ್ವಗ ಸದಾನಂದ ಪರಿಪೂರ್ಣ ತ-ನ್ನಿಚ್ಛೆಯಿಂದಲಿ ಜಗವ ಪಾಲಿಸುವನಿರ್ಮಿಸುವ ಆಶ್ಚರ್ಯಕೃತಸಲೀಲಮುಚ್ಚುಮರೆ ಯಾಕಿನ್ನು ಮುಗಿದು ಬೇಡುವೆ ಕೈಯಸ್ವಚ್ಛತರ ಭಕ್ತಿಭಾಗ್ಯವನಿತ್ತು ಸಲಹೊ ಮಹ-ಕಚ್ಛಪನೆ ಕಾಳೀಯಮರ್ದನಮಹಿತಶ್ರೀಮದಚ್ಯುತಾಯ ನಮೋನಮಃ 20ಚೈದ್ಯಮಥನ ಮನೋಜÕಶುದ್ಧಾತ್ಮ ಸರ್ವಜÕಯುದ್ಧದಲಿ ಸೈಂಧವನ ಶಿರವ ಕೆಡಹಿಸಿ ಜಯವಹೊದ್ದಿಸಿದ ಪಾರ್ಥನಿಂಗೆಇದ್ದು ನೀ ಹೃದಯದೊಳು ತಿದ್ದೆನ್ನ ಮತಿಯ ಸ್ಮರ-ವಿದ್ದ ಮಾನಸವ ಪಾದದ್ವಯದೊಳಿರಿಸೈ ದ-ಯಾದ್ರ್ರಚಿತ್ತ ಸ್ವಭಕ್ತಸಂಸಾರಿ ಕಾಯೆಜನಾರ್ದನಾಯ ನಮೋನಮಃ 21ಮಂದಾಕಿನಿಯ ಪಡೆದ ಮಾತೆಯ ಶಿರವ ಕಡಿದನಂದಗೋಪನ ಕಂದನೆನಿಸಿ ಬಾಲಕತನದಚಂದಮಂ ತೋರಿಸಿದ ಕುಬುಜೆಗಂಧಕೆ ಒಲಿದಸುಂದರೀರಮಣ ಜಯತುತಂದೆತಾಯಿಯು ಸರ್ವ ಜೀವರ್ಗೆ ನೀನೆ ನಿಜ-ವೆಂದು ತಿಳಿಯದೆ ಮಾಯೆಯಿಂದ ಮಮಕರಿಸಿ ಪರ-ನಿಂದಾದಿ ದೋಷಗಳ ಮಾಡಿ ಬಳಲುತ್ತಿಹರ್ಉಪೇಂದ್ರಾಯ ತುಭ್ಯಂ ನಮಃ 22ಸ್ಥಿರಚರಾತ್ಮಕ ಧೇನುಚರ ದೇವಕೀಜಠರ-ಶರಧಿಗುರುರಾಜ ಭಾಸ್ಕರಮಂಡಲಾಂತಸ್ಥಪರಮತೇಜೋಮಯ ಪುರಾಣಪುರುಷೇಶ್ವರನೆದುರಿತದೂರ ಗಭೀರನೆನಿರತಿಶಯನಿಜನಿರ್ವಿಕಲ್ಪ ಕಲ್ಪಾಂತಸಾ-ಗರದಿ ವಟಪತ್ರಪುಟಶಯನ ಪುಣ್ಯಶ್ರವಣಪುರುಷನಾಮಕ ಪುಷ್ಕರಾಕ್ಷ ಶ್ರೀಕರನೆ ಜಯಹರಯೇ ನಮೋನಮಸ್ತೇ 23ವೃಷ್ಟಿಕುಲತಿಲಕ ಸರ್ವೇಷ್ಟದಾಯಕ ನಿಮಿತ-ಶಿಷ್ಟಜನಪರಿಪಾಲ ಶಿವಗೌರೀ ಗಣಪಗುಹ-ಸೃಷ್ಟಿಶಕ್ತಿಯನೀವ ಗೋವರ್ಧನಾಚಲವ ಬೆಟ್ಟಿನಿಂದೆತ್ತಿದ ಮಹಾದುಷ್ಟ ನರಕಾದಿದಾನವರ ಮರ್ದಿಸಿದ ಜಗ-ಜಟ್ಟಿ ಜನಿಮೃತಿಭಯವಿದೂರ ವಿಷಮಯಸರ್ಪ-ಶ್ರೇಷ್ಠನಂ ಘಾತಿಸಿದ ರಾಮಾನುಜನೆಹರೇ ಕೃಷ್ಣಾಯ ತುಭ್ಯಂ ನಮಃ 24ಅಕ್ಷೀಣ ಬಲಶಾಲಿಯಾಂಜನೇಯನಿಗಿತ್ತೆಅಕ್ಷಯದ ಬ್ರಹ್ಮಪದವಿಯ ಲೋಕದೊಳಗ್ಯಾವ-ದಕ್ಷಮರ್ದನ ನಿನಗೆ ಸರ್ವತಂತ್ರಸ್ವತಂತ್ರ ಪಕ್ಷೀಂದ್ರಭುಜವಿರಾಜಸಾಕ್ಷಿಚೈತನ್ಯರೂಪನೆ ಕಮಲನಾಭನೆ ಮು-ಮುಕ್ಷುಜನಧ್ಯಾನಗಮ್ಯನೆ ಗದಾಧರ ದನುಜ-ಶಿಕ್ಷಕ ಪರೀಕ್ಷಕನೆ ಪವನವಾಹನಲಕ್ಷ್ಮೀನಾರಾಯಣಾಯ ನಮೋ25
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
(ಧರ್ಮಸ್ಥಳ ಮಂಜುನಾಥನನ್ನು ನೆನೆದು)ಯಾಕೆನ್ನ ಮೇಲೆ ನಿರ್ದಯ ಶ್ರೀಮಂಜುನಾಥಲೋಕೇಶಮಾಡುನಿರ್ಭಯಪ.ಪಾಕಹಪ್ರಮುಖದಿವೌಕಸಮುನಿಜನಾ-ನೀಕವಂದಿತಪದಕೋಕನದಕೋವಿದಅ.ಪ.ಪಾಪಾತ್ಮಪಾಪಸಂಭವ ನಾನೆಂಬುವದಕಾ-ಕ್ಷೇಪವೇನಿಲ್ಲೋಮಾಧವಶ್ರೀಪರಮೇಶ್ವರ ಕೋಪಕಲುಷಹರತಾಪತ್ರಯಶಮನಾಪದ್ಭಾಂಧವಗೋಪತುರಂಗ ಮಹಾಪುರುಷ ಗಿರೀಶ 1ಸೋಮಸುರ್ಯಾಗ್ನಿಲೋಚನ ಸದ್ಗುಣಪುಣ್ಯ-ನಾಮ ಪಾಪವಿಮೋಚನವ್ಯೋಮಕೇಶಾಚ್ಯುತಪ್ರೇಮ ಮಹಾಮಹಿಮಕಾಮಾರಿ ನಿನ್ನ ನಾ ಮರೆಹೊಕ್ಕೆನುಹೇ ವiಹಾದೇವ ಸೋಮಚೂಡಾಮಣಿ 2ಧರ್ಮಮಾರ್ಗನಿಯಾಮಕ ಸತ್ಯಾತ್ಮ ಪರ-ಬ್ರಹ್ಮ ಸುಜ್ಞಾನದಾಯಕನಿರ್ಮಲನಿತ್ಯಸತ್ಕರ್ಮಪ್ರೇರಕ ಗಜ-ಚರ್ಮಾಂಬರಧರ ದುರ್ಮತಿಪ್ರಹರಭರ್ಮಗರ್ಭಜಭವಾರ್ಣವತಾರಕ3ಕಪ್ಪಕಾಣಿಕೆಗಳನು ತರಿಸುವರ-ಣ್ಣಪ್ಪದೈವವೆ ದೂತನುತಪ್ಪದೆ ಚಂದಯ ಹೆಗ್ಗಡೆಯರ ಮನದೊಳಿಪ್ಪ ದಧಿಮಥನ ತುಪ್ಪದಂತೆಸೆವಕರ್ಪೂರಗೌರ ಸರ್ಪವಿಭೂಷಣ 4ಪೊಡವಿಗಧಿಕವಾಗಿಹ ಕುಡುಮಪುರ-ಕ್ಕೊಡೆಯ ಭಕ್ತಭಯಾಪಹಕಡಲಶಯನ ಲಕ್ಷ್ಮೀನಾರಾಯಣಗತಿ-ಬಿಡೆಯದವನು ನಿನ್ನಡಿಗೆರಗುವೆವರಮೃಡಶಂಕರ ಕೊಡು ಕೊಡು ಮನದಷ್ಟವ 5
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
(ಬಪ್ಪನಾಡಿನ ದೇವಿಯನ್ನು ಕುರಿತು)ದಯಮಾಡೆ ಬಾಗೆ ಶ್ರೀಪಂಚದುರ್ಗೆ ದಯಮಾಡೆ ಬಾಗೆ ಪ.ದಯಮಾಡೆ ಕೇವಲ ಭಯವಿಹ್ವಲನಲ್ಲಿದಯಸಾಗರೆ ಸೌಭಾಗ್ಯಸಂಪದವನ್ನು ಅ.ಪ.ವೇದಾಂತವೇದ್ಯೆ ನಿಖಿಳಜಗದಾದಿವಿನೋದೆಭೂಧರಾತ್ಮಜೆ ಸರ್ವಾಧಾರಶಕ್ತಿ ಕಲಾಧರೆಮಧುರಬಿಂಬಾಧರೆ ನಿನ್ನಯಪಾದವನು ಮರೆಹೊಕ್ಕೆ ಮನಸಿನ ಭೇದವನುಪರಿಹರಿಸಿ ಸರ್ವಾಪ-ರಾಧಗಳ ಕ್ಷಮಿಸಮ್ಮ ಕೈಟಭಸೂದನನ ಸೋದರಿ ಮಹೇಶ್ವರಿ 1ಅಂಬುಜಚರಣೆ ಮಾಧುರ್ಯೋರುರಂಭಾಸಮಾನೆಗಂಭೀರೆ ಮೇರು ನಿತಂಬೆಸಿಂಹಮಧ್ಯೆಲಂಬೋದರಪರಿರಂಭಕರಾಂಬುಜೆಕುಂಭಿಕುಂಭಪಯೋಜೆ ಶೋಭಿಪ ಕಂಬುಕಂಠಿಮುಖೇಂದುಪದ್ಮ ದ-ಳಾಂಬಕಿ ಎನಗಿಂಬುದೋರೆರೋಲಂಬಕುಂತಳೆಶುಂಭಮರ್ದಿನಿ2ಸಿಂಧೂರನಯನೆ ನಿಖಿಲಾಮರವಂದಿತಚರಣೆಸುಂದರಾಂಗಿ ಸುಮಗಂಧಿವಿಬುಧಮುನಿವೃಂದಸೇವಿತೆನಿತ್ಯಾನಂದಪ್ರಕಾಶಿನಿಅಂಧಕಾಸುರವೈರಿಹೃದಯಾನಂದಪಾರಾವಾರಪೂರ್ಣಮಿ-ಚಂದ್ರೆ ಸದ್ಗುಣಸಾಂದ್ರೆಸುರಥನರೇಂದ್ರವರದೆ ಮೃಗೇಂದ್ರವಾಹಿನಿ 3ರಜತಾದ್ರಿವಾಸೆ ಚಂಪಕನಾಸೆ ಸುಜದನೌಘಪೋಷೆನಿಜದಿ ನಿನ್ನಯ ಪಾದಂಬುಜವ ನಂಬಿದೆ ತ್ರಿಜಗವಂದಿತೆಮಹಾಗಜಗೌರಿ ಶಂಕರಿತ್ರಿಜಗಜ್ಜನನಿ ಭಾವನಿ ಪಾರ್ವತಿ ಭುಜಗಭೂಷಣರಾಣಿ ಕಲುಷ-ವ್ರಜವಿದಾರಿ ಮುನೀಂದ್ರ ಮನನೀರಜದಿವಾಕರೆ ಮಾನಿತೋದ್ಧರೆ 4ತಪ್ಪು ಸಹಸ್ರವಿದ್ದರು ಮನದೊಳಿಪ್ಪುದಜಸ್ರಸರ್ಪಶಯನ ಲಕ್ಷ್ಮೀನಾರಾಯಣಪ್ರೀತಿಯಪ್ಪಂತೆ ದಯೆ ಗೈಯೆಜಗದಾದಿಮಾಯೆಕಪ್ಪುಕಂಠನ ರಾಣಿ ವರಕಂದರ್ಪಧಿಕತರೂಪೆ ಸಾಧು ಪ-ದ ಪ್ರಸಾದವ ಪಾಲಿಸೆನ್ನಲಿ ಬಪ್ಪನಾಡಿನ ಭದ್ರದಾಯಕಿ 5
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
(ಬಪ್ಪನಾಡಿನ ಪಂಚದುರ್ಗೆ)ಮಂಗಲಂ ಶ್ರೀಪಂಚದುರ್ಗೆಗೆ ಜಯಮಂಗಲಾರತಿಯೆತ್ತಿ ಶ್ರೀಮಹೇಶ್ವರಿಗೆ ಪ.ಶಂಖಚಕ್ರಶೂಲಾಂಕುಶಪಾಣಿಗೆಶಂಕರನಂಕಾಲಂಕಾರಿಗೆಕುಂಕುಮಬೊಟ್ಟಕಸ್ತೂರಿ ಲಲಾಟೆಗೆಪಂಕಜಗಂಧಿ ಶ್ರೀಪಾರ್ವತಿಗೆ 1ಕೋಕಿಲಗಾನೆಗೆ ಕೋಕಪಯೋಜೆಗೆಶ್ರೀಕಂಠನರ್ಧಾಂಗಿ ಶ್ರೀಗೌರಿಗೆಏಕದಂತನ ಜನನಿಗೆ ಜಗದಂಬೆಗೆಲೋಕನಾಯಕಿ ಶ್ರೀಮಹಾಕಾಳಿಗೆ 2ಕಂಜದಳಾಕ್ಷಿಗೆ ಕಲಧೌತಗಾತ್ರೆಗೆಕುಂಜರಗಮನೆಕಂಧರಜಾತೆಗೆಮಂಜೀರನೂಪುರರಣಿತಪದಾಬ್ಜೆಗೆನಂಜುಂಡನ ಮನಮಂಜುಳೆಗೆ 3ಅಂಗಜರೂಪೆಗೆ ಮಂಗಲದಾತೆಗೆಭೃಂಗಕುಂತಳೆ ಸರ್ವಮಂಗಲೆಗೆಬಂಗಾರಮಕುಟೋತ್ತಮಾಂಗದಿ ಧರಿಸಿದಸಂಗೀತಲೋಲೆಗೆ ಶರ್ವಾಣಿಗೆ 4ರೂಢಿಗಧಿಕ ಬಪ್ಪನಾಡಿಗೊಡತಿಯಾಗಿಮೂಡಿತೋರಿದ ಶ್ರೀಮುಕಾಂಬಿಕೆಗೆಕ್ರೋಡಾವತಾರ ಲಕ್ಷ್ಮೀನಾರಾಯಣ ಸೊಸೆಬೇಡಿದಿಷ್ಟವನೀವ ಸರ್ವೇಶೆಗೆ 5
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
211ಶೃಂಗಾರವಾಗಿದೆ ಸಿರಿರಂಗನ ಮಂಚಅಂಗನೆಮಹಲಕುಮಿಯರಸ ಮಲಗುವ ಮಂಚಪಬಡಿಗ ಮುಟ್ಟದ ಮಂಚ | ಮಡುವಿನೊಳಿಹ ಮಂಚ |ಮೃಡನ ತೋಳಲಿ ನೆಲಸಿಹ ಮಂಚ ||ಹೆಡೆಯುಳ್ಳ ಹೊಸಮಂಚ ಪೊಡವಿ ಹೊತ್ತಿಹ ಮಂಚ |ಕಡಲ ಶಯನ ಶ್ರೀ ರಂಗನ ಮಂಚ 1ಕಣ್ಣು-ಮೂಗಿನ ಮಂಚ ಬೆನ್ನು ಬಾಗಿದ ಮಂಚ |ಹುಣ್ಣಿಮೆಯ ಚಂದ್ರಮನ ಅಡ್ಡಗಟ್ಟುವ ಮಂಚ ||ಬಣ್ಣ ಬಿಳುಪಿನ ಮಂಚ ಹೊನ್ನು ಕಾದಿಹ ಮಂಚ |ಚೆನ್ನಿಗ ಪರೀಕ್ಷೀತನ ಪ್ರಾಣವಕೊಂಡಮಂಚ2ಕಾಲಿಲ್ಲದೋಡುವ ಮಂಚ | ಗಾಳಿ ನುಂಗುವ ಮಂಚ |ನಾಲಗೆಯೆರಡುಳ್ಳ ವಿಷದ ಮಂಚ ||ಏಳು ಹೆಡೆಯ ಮಂಚ | ಮೂಲೋಕದೊಡೆಯನ ಮಂಚ |ಕಾಳಗದಲಿ ಕಿರೀಟಿಯ ಮುಕುಟಕೊಂಡಮಂಚ3ಹಕ್ಕಿಗೆ ಹಗೆಯಾದ ಮಂಚ | ರೊಕ್ಕ ಮುಟ್ಟದ ಮಂಚ |ರಕ್ಕಸರೆದೆದಲ್ಲಣನ ಮಂಚ ||ಸೊಕ್ಕು ಪಿಡಿದ ಮಂಚ | ಘಕ್ಕನೆ ಪೋಗುವ ಮಂಚ |ಲಕ್ಕುಮಿ ರಮಣ ಶ್ರೀ ಹರಿಯ ಮಂಚ 4ಅಂಕುಡೊಂಕಿನ ಮಂಚ | ಅಕಲಂಕ ಮಹಿಮ ಮಂಚ |ಸಂಕರುಕ್ಷಣನೆಂಬ ಸುಖದ ಮಂಚ |ಶಂಕರನ ಕೊರಳಿಗೆ ಪದಕವಾಗಿಹ ಮಂಚ |ವೆಂಕಟಪುರಂದರವಿಠಲ ರಾಯನ ಮಂಚ5
--------------
ಪುರಂದರದಾಸರು
3. ತುಳಸಿರಾಮದಾಸರ ತೆಲಗುಮಿಶ್ರಿತ ಕೀರ್ತನೆಗಳು498ನೀಪಾದ ಭಜನಚೇ ನಾಪಾಪಮತಮಾಯೆನ್ಗೋಪಾಲ ಶ್ರೀ ರಂಗನಾಥಾ ಪರಾಪು ಜೇಯುಟ ನೇಲನಾಪದÀಲನು ದೀರ್ಚುಗೋಪ ವೇಷಖುಡೈನ ಶ್ರೀಪತಿಯೆನುಟಾಯೆ ಅ.ಪಪಿಚ್ಚಿವಾಡನೈ ನೇನೊಚ್ಚಿ ವೇಡಿತಿನಯ್ಯಾಅಚ್ಚುತಾನಂತರೂಪಹೆಚ್ಚೈನ ಮೀಧ್ಯಾನಂಬಿಚ್ಚಾಯಂಚಿನಾನೂವೊಚ್ಚಿ ದಾಸುಡು ವೇಡಿಯಿಚ್ಚಿ ಬ್ರೋವರ ತಂಡ್ರಿ 1ಪಂಕಜಾಕ್ಷ ನಾಪೈ ಪಂತಮೇಲರ ಸಾಮಿಕಿಂಕರುನಿಗನೇಲುಮಾಶಂಕರವಿನುತ ನಾ ಸಂಕಟ ಮುಲು ದೀರ್ಚುಲಂಕಾಧಿಪತಿ ವೈರಿಗುರುಡೆ ತುಲಶಿರಾಮಾ 2
--------------
ತುಳಸೀರಾಮದಾಸರು
ಅಡಗುವದುಘನಅಡಗುವದುತೋರದಡಗದು ದೃಷ್ಟಿಯಲ್ಲಿಪxmಟ veಡಿsioಟಿ='1.0' eಟಿಛಿoಜiಟಿg='%SಔUP-ಇಓಅಔಆIಓಉ%'ಮಡದಿ ಮಕ್ಕಳು ಮನೆಯ ಬಲ್ಲಿತೊಡಕಿದೆ ಮನ್ಮಥನ ಬಲೆಯಲ್ಲಿ1ನಾನೀನೆಂಬಭಿಮಾನದಲಿಸ್ವಾನುಭವದ ಸುಖ ವ್ಯರ್ಥವೇ ಅಲ್ಲಿ2ದೀಪಕ ಶಂಕರನ ಪ್ರಭೆಯಲ್ಲಿದೀಪ ಕೀಟಕ.................3
--------------
ಜಕ್ಕಪ್ಪಯ್ಯನವರು
ಆ ಸುಖ ಹರಿಮರೆದವಗಯ್ಯದೋಷಾಂಧಃತಮದೊಳಗೇನು ಸುಖ ಪ.ಕಂಠತ ವ್ಯಸನ ಹೊಲಬಿಲ್ಲದೆ ಧರ್ಮಕಂಟಕಶಾಸ್ತ್ರವಿಚಾರಕಗೆಎಂಟುವೃಷಭಹೂಡಿ ಮಹಾಶ್ರಮಿಸಿ ಬರೆದಂಟು ಬೆಳೆದವನಿಗೇನು ಸುಖ 1ಅನಿರುದ್ಧಗಖಿಳವರ್ಪಿಸಿದಾನಲ್ಪಗುಣದೆ ಮತಿ ದೃಢವಿಲ್ಲದ ಮಾನವಗೆಹಣ ವೆಚ್ಚಿಸಿ ರಿಣದೆಗೆದಿಟ್ಟ ಧಾನ್ಯವತೃಣಸಮ ವಿಕ್ರಿಸಲೇನು ಸುಖ 2ಶಂಖಪಾಣಿಯ ನಿಂದಿಸಿ ಕರ್ಮಶಕ್ತಿಯಶಂಕರ ರವಿಗಣೋಪಾಸಕಗೆಸಂಖ್ಯೆ ಇಲ್ಲದ ವಸ್ತು ನಿಶ್ಶೇಷದಿಸುಂಕಕೆ ತೆತ್ತಿದರಾವ ಸುಖ 3ಆಧ್ಯಾತ್ಮಾನುಭವ ಗುರುಕೃಪೆ ಇಲ್ಲದೆವಿದ್ಯೋನ್ಮತ್ತ ದಯಾಶೂನ್ಯಗೆನದ್ಯೋಲ್ಲಂಘಿಸಿ ದಡದಲಿ ನಾವೆ ಮುಳುಗಿದರೆ ಪ್ರಾಣಿಗಳಿಗೇನು ಸುಖ 4ಪ್ರಸನ್ನವೆಂಕಟ ಪದಸರೋರುಹಗಳಪ್ರಸನ್ನೀಕರಿಸದೆ ಸಾಹಸಬಡುವಅಶುಭದನುಜರು ತಪಮಾಡಿ ತುದಿಯಲಿವಿಷಮಗತಿಗ್ಹೋಗಲೇನು ಸುಖ 5
--------------
ಪ್ರಸನ್ನವೆಂಕಟದಾಸರು
ಇಂದುನೋಡಿದೆ ಹರಿಹರನ ದೈತ್ಯ |ವೃಂದಕ ಪ್ರಿಯನ ವರವ ಕೊಡುವನಾ ಪಶಾಮವರ್ಣನ ವಿಷ ಹರನ ಪೂರ್ಣ |ಕಾಮನ ಶಿವನ ಕೇಶವನ ಶಂಕರನ ||ಕಾಮಿನಿಯರ ಮೋಹಿಸಿದನ ಚಂದ್ರ |ವ್ಯೋಮನದಿಯು ಮಸ್ತಕದೊಳೊಪ್ಪುವನ 1ಕರಿಬಾಧೆಯನು ಕಳೆದವನ, ಭಸ್ಮ |ಧರನ ಪೀತಾಂಬರ ನಿಭ ಚರ್ಮಾಂಬರನ ||ಅರಿಧರನ ಶೂಲಕರನ ಲಕ್ಷ್ಮೀ |ವರನ, ಗೌರಿಪನ, ರಕ್ಷಕನ, ಶಿಕ್ಷಕನ 2ಸ್ವಾಮಿ ಪ್ರಾಣೇಶ ವಿಠ್ಠಲನ ರಾಮ |ನಾಮವೇ ತಾರಕವೆಂದು ಪೇಳುವನ ||ಶ್ರೀ ಮಧ್ವ ಮುನಿಗೊಲಿದವನ ಪಾರ್ಥ |ಪ್ರೇಮಕೆ ಮೆಚ್ಚಿ ಬಾಣವನು ಕೊಟ್ಟವನ 3
--------------
ಪ್ರಾಣೇಶದಾಸರು
ಇಲ್ಲದಿಲ್ಲಾಗಿ | ಇಲ್ಲದ್ದೆಲ್ಲ ತಾನಾಗಿ |ತೋರುವದಾಶ್ಚರ್ಯ | ಆಶ್ಚರ್ಯ ||ಸಂಶಯಪಾರಮಾಡಯ್ಯ ||ಶಿಷ್ಯನ ಪ್ರಶ್ನವ ತಿಳಿದು | ಸದ್ಗುರು ಹರ್ಷದಿಪೇಳಿದನೊಲಿದು1xmಟ veಡಿsioಟಿ='1.0' eಟಿಛಿoಜiಟಿg='%SಔUP-ಇಓಅಔಆIಓಉ%'ಸತ್ಯ ಸ್ವರೂಪಾಶ್ರಯಿಸಿ ಅಸತ್ಯವು ಸತ್ಯಂತೆನಿಸಿ ||ಸತ್ಯಕಿರಣವಿಡಿದು ಮೃಗಜಲವಸತ್ಯವೆ ಆಗಿಹುದು ||ದಿಟ ರಜ್ಜುವು ಶಿಂಪಿರುತ || ಆಶ್ರಯಿ ದಿಟವೆನಿಸುವದಹಿ ರಜತಾ|| ಆಶ್ರಯದಾರೋಪೆಂದು | ತೋರುವದು ಸರೂಪದಧ್ಯಾತೆಂ(ನೆಂ)ದೂ || ಅಧ್ಯಾರೋಪಾಪವಾದಾ |ಶಂಕರ ತಾನಿವು ಪುಸಿಯಂದೊರೆದಾ5
--------------
ಜಕ್ಕಪ್ಪಯ್ಯನವರು
ಉತ್ಥಾನ ದ್ವಾದಶಿಯ ದಿವಸ(ಕಾರ್ತೀಕ ಶುದ್ಧ ದ್ವಾದಶಿಯ ಉತ್ಸವ)ರಂಭೆ : ಮಾನಿನೀ ಈತನಾರೆಂದೆನೆಗೆ ಪೇಳೆ ಮಾನಿನೀ ಪ.ಮಾನಿನೀಮಣಿ ಈತನ್ಯಾರೆ ಕರುಣಾನಿಧಿಯಂತಿಹ ನೀರೆ ಹಾ ಹಾಭಾನುಸಹಸ್ರ ಸಮಾನಭಾಷಿತ ಮ-ಹಾನುಭಾವನು ಸುಪ್ರವೀಣನಾಗಿಹ ಕಾಣೆ 1ಭಯಭಕ್ತಿಯಿಂದಾಶ್ರಿತರು ಕಾಣಿ-ಕೆಯನಿತ್ತುನುತಿಸಿಪಾಡಿದರು ನಿರಾ-ಮಯ ನೀನೇ ಗತಿಯೆಂದೆಲ್ಲವರು ಹಾ ಹಾಭಯನಿವಾರಣ ಜಯ ಜಯವೆಂದು ನುತಿಸೆ ನಿ-ರ್ಭಯಹಸ್ತತೋರುತ ದಯಮಾಡಿ ಪೊರಟನೆ2ಭೂರಿವಿಪ್ರರ ವೇದ ಘೋಷದಿಂದಸ್ವಾರಿಗೆ ಪೊರಟ ವಿಲಾಸ ಕೌಸ್ತು-ಭಾರತ್ನ ಹಾರ ಸುಭಾಸ ಹಾ ಹಾಚಾರುಕಿರೀಟಕೇಯೂರಪದಕಮುಕ್ತಾಹಾರಾಲಂಕಾರ ಶೃಂಗಾರನಾಗಿರುವನು 3ಸೀಗುರಿ ಛತ್ರ ಚಾಮರದ ಸಮವಾಗಿ ನಿಂದಿರುವ ತೋರಣದ ರಾಜಭೋಗನಿಶಾನಿಯ ಬಿರುದ ಹಾ ಹಾಮಾಗಧಸೂತ ಮುಖ್ಯಾದಿ ಪಾಠಕರ ಸ-ರಾಗ ಕೈವಾರದಿ ಸಾಗಿ ಬರುವ ಕಾಣೆ 4ಮುಂದಣದಲಿ ಶೋಭಿಸುವ ಜನಸಂದಣಿಗಳ ಮಧ್ಯೆ ಮೆರೆವ ತಾರಾವೃಂದೇಂದುವಂತೆ ಕಾಣಿಸುವ ಹಾಹಾಕುಂದಣಖಚಿತವಾದಂದಣವೇರಿ ಸಾ-ನಂದದಿ ಬರುವನು ಮಂದಹಾಸವ ಬೀರಿ 5ತಾಳ ಮೃದಂಗದ ರವದಿಶ್ರುತಿವಾಲಗಭೇರಿರಭಸದಿ ಜನಜಾಲಕೂಡಿರುವ ಮೋಹರದಿ ಹಾಹಾಸಾಲು ಸಾಲಾಗಿ ಬೊಂಬಾಳ ದೀವಟಿಗೆ ಹಿ-ಲಾಲು ಪ್ರಕಾಶದಿ ಲೋಲನಾಗಿಹ ಕಾಣೆ 6ಊರ್ವಶಿ: ಈತನೆ ಭಾಗ್ಯನಿಧಿ ನೋಡೆ ನೀ ಮುದದಿ ಪ.ಈತನೆ ಈರೇಳು ಲೋಕದದಾತನಾರಾಯಣ ಮಹಾ ಪುರು-ಹೂತ ಮುಖ್ಯಾಮರವಿನುತನಿ-ರ್ಭೀತ ನಿರ್ಗುಣ ಚೇತನಾತ್ಮಕ ಅ.ಪ.ಮೀನ ರೂಪವೆತ್ತಾಮಂದರಪೊತ್ತಭೂನಿತಂಬಿನಿಯ ಪ್ರೀತಮಾನವಮೃಗಾಧಿಪ ತ್ರಿವಿಕ್ರಮದಾನಶಾಲಿ ದಶಾನನಾರಿ ನ-ವೀನ ವೇಣುವಿನೋದ ದೃಢ ನಿ-ರ್ವಾಣ ಪ್ರವುಢ ದಯಾನಿಧಿ ಸಖಿ 1ವಾರಿಜಾಸವಾನವಂದಿತ ಶ್ರೀಪಾದಯುಗ್ಮವತೋರಿಕೊಂಬುವ ಸಂತತಕೇರಿಕೇರಿಯ ಮನೆಗಳಲಿ ದಿ-ವ್ಯಾರತಿಯ ಶೃಂಗಾರ ಭಕ್ತರ-ನಾರತದಿ ಉದ್ಧಾರಗೈಯಲುಸ್ವಾರಿ ಪೊರಟನು ಮಾರಜನಕನು 2ಮುಗುದೆ ನೀ ನೋಡಿದನು ಕಾಣಿಕೆಯ ಕ-ಪ್ಪಗಳ ಕೊಳ್ಳುವನು ತಾನುಬಗೆಬಗೆಯ ಕಟ್ಟೆಯೊಳು ಮಂಡಿಸಿಮಿಗಿಲು ಶರಣಾಗತರ ಮನಸಿನಬಗೆಯನೆಲ್ಲವ ಸಲ್ಲಿಸಿ ಕರುಣಾಳುಗಳ ದೇವನು ಕರುಣಿಸುವ ನೋಡೆ 3ರಂಭೆ : ದೃಢವಾಯಿತೆಲೆ ನಿನ್ನ ನುಡಿಯು ಸುರಗಡಣಓಲಗಕೆ ಇಮ್ಮಡಿಯು ಜನ-ರೊಡಗೂಡಿ ಬರುತಿಹ ನಡೆಯು ಹಾ ಹಾಮೃಡಸರೋಜ ಸುರಗಡಣ ವಂದಿತಕ್ಷೀರಕಡಲ ಶಯನ ಜಗದೊಡೆಯನಹುದು ಕಾಣೆ 1ಮದಗಜಗಮನೆ ನೀ ಪೇಳೆ ದೇವಸದನವ ಪೊರಡುವ ಮೊದಲೇ ಚಂದ-ನದಪಲ್ಲಂಕಿಯ ತಂದು ಮ್ಯಾಲೆ ಹಾ ಹಾಮುದದಿಂದ ಬಾಲಕರೊದಗಿ ಸಂತೋಷದಿಚದುರತನದಿ ಪೋಗುವನು ಪೇಳೆಲೆ ನೀರೆ 2ಊರ್ವಶಿ: ನಾರೀಮಣಿ ನೀ ಕೇಳೆ ಚಕ್ರೋತ್ಸವಶ್ರೀರಮಾಧವನ ಲೀಲೆಘೋರದೈತ್ಯಕುಠಾರ ಲಕ್ಷ್ಮೀನಾರಾಯಣನ ಬಲಕರ ಸರೋಜದಿಸೇರಿ ಕುಳಿತ ಗಂಭೀರ ದಿನಪನಭೂರಿತೇಜದಿ ಮೆರೆವುದದು ತಿಳಿ 1ದೊರೆಯು ಬರುವನು ಎಂದು ಎಲ್ಲರಿಗೆ ಗೋ-ಚರಿಸುವನೊಲಿದುಇಂದುತರ ತರದ ಆರತಿಗಳನು ನೀವ್ಧರಿಸಿ ನಿಂದಿರಿಯೆಂದು ಜನರಿಗೆ-ಚ್ಚರಿಗೆಗೋಸುಗ ಮನದ ಭಯವಪ-ಹರಿಸಿ ಬೇಗದಿ ಪೊರಟು ಬಂದುದುರಂಭೆ :ಸರಸಿಜನಯನೆ ನೀ ಪೇಳೆಸೂರ್ಯಕಿರಣದಂತಿಹುದೆಲೆ ಬಾಲೆ ಸುತ್ತಿಗೆರಕವಾಗಿಹುದು ಸುಶೀಲೆ ಆಹಾಹರಿಯ ವೈಕುಂಠ ನಗರದಂತೆ ಜ್ಯೋತಿ ವಿ-ಸ್ತರವಾಗಿ ಸುತ್ತಿನೊಳ್ ಮೆರೆವುದಿದೇನೆಲೆ 1ಊರ್ವಶಿ : ಸಾದರದಲಿ ನೀ ಕೇಳೆ ಕಾರ್ತಿಕ ಶುದ್ಧದ್ವಾದಶಿಯೊಳಗೆ ಬಾಲೆಮಾಧವನ ಪ್ರೀತ್ಯರ್ಥವಾಗಿ ಶು-ಭೋದಯದಿ ಸಾಲಾಗಿ ದೀಪಾರಾಧನೆಯ ಉತ್ಸಹದ ಮಹಿಮೆಯಸಾದರದಿ ನೀ ನೋಡೆ ಸುಮನದಿ 1ನಿಗಮಾಗಮದ ಘೋಷದಿ ಸಾನಂದ ಸು-ತ್ತುಗಳ ಬರುವ ಮೋದದಿಬಗೆ ಬಗೆಯ ನರ್ತನ ಸಂಗೀತಾದಿಗಳ ಲೋಲೋಪ್ತಿಯ ಮನೋಹರದುಗುಮಿಗೆಯ ಪಲ್ಲಂಕಿಯೊಳು ಕಿರು 2ನಗೆಯ ಸೂಸುತ ನಗಧರನು ಬಹಚಪಲಾಕ್ಷಿ ಕೇಳೆ ಈ ವಸಂತ ಮಂ-ಟಪದಿ ಮಂಡಿಸಿದ ಬೇಗಅಪರಿಮಿತ ಸಂಗೀತ ಗಾನ ಲೋ-ಲುಪನು ಭಕ್ತರ ಮೇಲೆ ಕರುಣದಿಕೃಪೆಯ ಬೀರಿ ನಿರುಪಮ ಮಂಗಲಉಪಯಿತನು ತಾನೆನಿಸಿ ಮೆರೆವನು 3ಪಂಕಜಮುಖಿನೀ ಕೇಳೆ ಇದೆಲ್ಲವುವೆಂಕಟೇಶ್ವರನ ಲೀಲೆಶಂಕರಾಪ್ತನು ಸಕಲ ಭಕ್ತಾತಂಕವನು ಪರಿಹರಿಸಿಕರಚಕ್ರಾಂಕಿತನು ವೃಂದಾವನದಿ ನಿಶ್ಯಂಕದಿಂ ಪೂಜೆಯಗೊಂಡನು 4ಕಂತುಜನಕನಾಮೇಲೆ ಸಾದರದಿ ಗೃ-ಹಾಂತರಗೈದ ಬಾಲೆಚಿಂತಿತಾರ್ಥವನೀವ ಲಕ್ಷ್ಮೀಕಾಂತ ನಾರಾಯಣನು ಭಕುತರತಿಂಥಿಣಿಗೆ ಪ್ರಸಾದವಿತ್ತೇ-ಕಾಂತ ಸೇವೆಗೆ ನಿಂತಮಾಧವ5
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಎಂಥ ಮಹಿಮನುನೋಡುನಮ್ಮಯಲಗೂರದ ಹನುಮಾ |ಸಂತತ ನೆನೆವರ ಚಿಂತಾಮಣಿ ನಿಜ ಶಾಂತಸದಾ ನಿಶ್ಚಿಂತ ಪರಾಕ್ರಮಾಪxmಟ veಡಿsioಟಿ='1.0' eಟಿಛಿoಜiಟಿg='%SಔUP-ಇಓಅಔಆIಓಉ%'ಹುಟ್ಟುತಲಿ ಮಿತ್ರನ ತಿನಬೇಕೆಂದು ಥಟ್ಟನೆ ತಾ ಬಂದು |ಬೆಟ್ಟರಿಯ ಬೆನ್ನನೆ ಬೀಳಬೇಕೆಂದು | ಪುಟ್ಟರಿದಾನೆಂದು |ಮುಟ್ಟಿ ಬರಲುಕವನೆಟ್ಟನೆ ಹೊಯ್ಯಲು |ಧಿಟ್ಟ ಮರಪನೆಂದು ಧಿಟ್ಟನೆ ಧಿಟ್ಟ ಬಂದು1ಅಂಜನಿಯ ಗರ್ಭದಲಿ ತಾ ಬಂದಾ | ಸಂಜೀವನಿ ತಂದಾ |ಕೆಂಜಡಿಯನ ಸ್ವರೂಪನು ಜಗದಾನಂದಾ ಸ್ವಾನಂದ ಕಂದಾ ||ಮಂಜುಳ ಶಬ್ದಪ್ರಭಂಜನಕಪಿ ಜಗರಂಜಿತತೇಜಃ ಪುಂಜ ಸದಯದಾ2ಹರಿಸುತನು ಬ್ರಹ್ಮನೆ ತಾನೆ ಬಂದೂ ಕರವಿಟ್ಟನು ಇಂದೂ |ಪರಿಪರಿಯ ಶಕ್ತಿಯು ನಿನ್ನಲ್ಲಿಂದು ಗುಪ್ತಿರಬೇಕೆಂದು ಸ್ಥಿರಪದ ಕೊಟ್ಟೆ ವಜ್ರಾಂಗವನಿಂದೂ ವರದಾ-ಭಯನಿಟ್ಟು ತನುನಿಧಿ ತಂದೂ3ರವಿತನಯನ ಭೆಟ್ಟಯನು ತಕ್ಕೊಂಡಾ ರಘುರಾಮರ ಕಂಡಾ |ಅವನಂಗುಲಿಯೊಳು ಮುದ್ರಿಯನಿತ್ತಾ ಪ್ರಚಂಡಾಬಹು ಬಾಹೋದ್ದಂಡಾ | ತವಕದಿಅಕ್ಷಯಕುವರನಮರ್ದಿಸಿ ಘವಿ ಘವಿಸುವ ಲಂಕಿಯದಾ ಕೆಂಡಾ4ರಕ್ಕಸರೆಲ್ಲರ ಕುಕ್ಕಿರಿದನು ಅದ್ಭುತಾ ಜಗಕಪಿ ಪ್ರಖ್ಯಾತಾ |ಮಿಕ್ಕರಗಳನೆಲ್ಲ ಪಾಡುವೆ ರಾಮನ ದೂತಾ ಶರಣರ ಸಂಪ್ರೀತಾಉಕ್ಕಿ ಹರುಷದಲಿ ಬೇಗ ಬಾರೊ ಬೇಗ ಬಾರೊನೀಲಮೇಘಶ್ಯಾಮಾ ಭಕ್ತರ ಪಾಲಿಪ ಮುಕ್ತರಮಾಡುವ ಶಂಕರನೀತಾ5
--------------
ಜಕ್ಕಪ್ಪಯ್ಯನವರು
ಎಲೆಮಾನವಹರಿಯ ಸ್ಮರಿಸುಸಲೆ ಕಾವನು ಖರಿಯ ಪ.ಶಂಖಾರಿ ಸಂಧೃತನ ಮತ್ತಾಶಂಖಜನ ಬಲಹೃತನಶಂಕರ ವಿಧಿನÀುತ ಚರಣನುದಾರಾಶಂಕಾವಾರಣ ವಾರಣೋದ್ಧರನ 1ಕಮನೀಯತರ ಗಾತ್ರನಅರುಣಕಮಲಾಯತ ನೇತ್ರನಕಮಲಾವ್ಯಯಪೂತಮುಖ ಚಾರುವಿಲಸಿತಕುಮುದಾಸಿತ ಶರಣ ಕರುಣಾಕರನ 2ಅಗಣಿತಗುಣಗಣ್ಯನಾನಂತಆಗಮನಿಗಮಾದಿ ಪೂರ್ಣನಅಗಧರ ಮಹಿವರ ಪ್ರಸನ್ವೆಂಕಟವರಅಗನಂದನಿಲಯ ಕಲಿಯಕೋಲಾಹಲನ 3
--------------
ಪ್ರಸನ್ನವೆಂಕಟದಾಸರು
ಗಂಗಾಪಿತ ವೆಂಕಟ ಪರ್ವತನಿಲಯಕೌಸಲ್ಯತನಯಾ |ಮಂಗಳವಲ್ಲಭಭವಕರಕರೆಯ ಪರಿಹರಿಪುದು ತ್ವರಿಯಾ |ಅಂಗಜಜನಕನೆ ಸಂಗರಹಿತ ಸತ್ಸಂಗ ಕೃಪಾಬ್ಧಿ ವಿಹಂಗವಾಹನನೇ ಪಸ್ವಾಮಿಲಾಲಿಸುಯನ್ನಯ ಮನದುಸರ ನೀನಲ್ಲದಿತರರ |ಭೂಮಿಯೊಳ್ಕಾಣೆನೋ ಉದ್ಧರಿಸುವರನವನೀತಚೋರ |ಸಾಮಜದ್ರೌಪದಿ ಆ ಮುಚುಕುಂದ ಸುಧಾಮರ ಪೊರೆದ ತ್ರಿಧಾಮ ಮಹಾತ್ಮ 1ವಾಸುಕೀ ಶಯನ ದಯಾ ಸಂಪನ್ನ ನಾರಾಯಣ ನಿನ್ನ |ದಾಸರೊಳಗಾಡಿಸೊ ಸದ್ಗುಣ ಪೂರ್ಣ ಸಾರ್ವರಿಗೆ ಪ್ರಸನ್ನ |ಈಸಲಾರೆ ಈ ಸಂಸಾರಶರಧಿಕೈ ಸೋತಿತೆಲೋ ಪರಾಶರ ತನಯ 2ನಿತ್ಯಾನಂದ ನಿಗಮೋದ್ಧಾರ ಪೂತನೀ ಸಂಹಾರ |ಮೃತ್ಯುಂಜಯಸಖರವಿದರ ಗದಾಧರ ಸುಖಪಾರಾವಾರ|ಭೃತ್ಯವತ್ಸಲ ಸುರೋತ್ತಮ ಪಾರ್ಥನ ತೊತ್ತಿಗನಾದಿ ಸುಸತ್ಯ ಸಂಕಲ್ಪ ಗಂಗಾ3ಮಂದರಾಚಲ ಧರಿಸಿದ ಗೋವಿಂದ ಶ್ರೀ ಯಶೋದಾನಂದ |ನಂದನ ಶ್ರೀ ಕೇಶವ ಮುಕುಂದ ವಾಮನ ಸುಖಸಾಂದ್ರ |ತಂದೆ ಸಲಹೊ ನಿನ್ನ ಬಂಧಕ ಶಕುತಿಯಲಿಂದ ದಣಿಸದೆ ಅರಿಂದಮ ಪ್ರಭುವೇ 4ಅಂತರಂಗವ ಬಲ್ಲ ಮಧುದ್ವೇಷಿ ಯನ್ನಯ ಮನದಾಸೀ |ಅಂತು ಪೂರ್ತಿಸಿ ದುಷ್ಕರ್ಮದ ರಾಶಿ ಉಳಿಸದೆ ಪರಿಹರಿಸಿ |ಸಂತತ ಹೃದಯದಿ ನಿಂತು ಪೊಳೆವುದೋ ಅನಂತ ಮುರಾಂತಕ ಚಿಂತಾರಹಿತನೆ 5ಶಕ್ರವರಪೂಜಿತ ಬಲವಂತ ರುಕ್ಮಣೀಪತಿ ದಂತ |ವಕ್ತ್ರಾರಿ ಬಾಧಿಸದಂತೆಕೃತಾಂತಮಾಳ್ಪುದು ಕೆಡದಂಥ |ಸುಕೃತಪೀಡಿಸೋ ತ್ರಿವಿಕ್ರಮ ಮೂರುತಿ ಶುಕ್ರ ಯುಕ್ತಿ ಹರ ಅಕ್ರೂರ ವರದ 6ಕಂಕಾನುಜ ಮಂದಿರ ಪ್ರಾಣೇಶ ವಿಠಲ ಗೋಕುಲ ಗೋಪಾಲ |ಪಂಕಜಾಸನ ಜನಕ ಶಕಟಕಾಲಜಾಂಬವತೀಲೋಲ|ಶಂಕರಾದ್ಯಮರರ ಕಳಂಕೆಣಿಸದ ಗರುಡಾಂಕಉರಗಪರ್ಯಂಕ ಸುಖಾತ್ಮ 7
--------------
ಪ್ರಾಣೇಶದಾಸರು