ಒಟ್ಟು 720 ಕಡೆಗಳಲ್ಲಿ , 93 ದಾಸರು , 581 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ರಾಜೋಪಚಾರರಾಜೋಪಚಾರರಾಜೀವನೇತ್ರ ನೀನವಧರಿಸು ಬೇಗ ಪಸಾವಿರದ ದಳವುಳ್ಳ ಕಮಲವೊಂದಕೆ ಶಕ್ತಿಸಾವಿರದ ಮೌಕ್ತಿಕದ ಸರಗಳೊಪ್ಪಿಹವುಕಾವಿಹುದು ಸಕಲ ದೇವಾತ್ಮಕದ ಶಾರದೆಯುನಾ ವಹಿಸಿ ತುರಿಯ ಕಲಶದ ಛತ್ರವೆಂದೆಂಬ 1ಆವಗವು ಸತ್ವಾದಿ ಗುಣಗಳಿಂದೊಪ್ಪಿರುವಆವರಣ ವಿಕ್ಷೇಪ ಶಕ್ತಿಯೆಂಬೆರಡುದೇವ ನಿನ್ನುಭಯ ಪಾಶ್ರ್ವದಲೊಲವುತಿಹ ಸರ್ವಭಾವದಿಂದುಭಯ ಚಾಮರವೆರಡರಿಂದ 2ಗಂಧರ್ವ ನಗರದಿಂದೈತಂದ ನಾರಿಯರುಛಂದದಿಂ ನರ್ತಿಸುತಲಿಹರೈವರಿವರುಒಂದಾಗಿ ಬಳಿಕಿವರ ಹೊಂದಿ ಮತ್ತೈವರಿರೆಹಿಂದೆ ನಾಲ್ವರುವೆರಸಿ ನಲಿವ ನರ್ತನವೆಂಬ 3ಪರವೆಂದು ನಾಭಿಯಲಿ ಪಶ್ಯಂತಿ ಹೃದಯದಲಿಸ್ವರವಿಹುದು ಕಂಠದಲಿ ಮಧ್ಯಮಾಖ್ಯೆಯಲಿಸ್ಫುರಿಸಿ ಮುಖಕಮಲದಲಿ ವೇದಶಾಸ್ತ್ರಗಳಾಗಿಮೆರೆವ ವೈಖರಿಯೆಂಬ ಗೀತವಿದ ಕೇಳು 4ತಾಳ ಮರ್ದಳೆ ಘಂಟೆ ಭೇರಿ ಶಂಖಗಳಿಂದಮೇಲಾದ ವೀಣೆ ವೇಣುಗಳ ರವದಿಂದಲಾಲಿಸುವ ಛಿಣಿ ಛಿಣೀ ಛಿಣಿಗಳೆಂಬವರಿಂದನೀಲ ಮೇಘಧ್ವಾನ ದಶನಾದದಿಂದ 5ಪರಿಪರಿಯ ಗತಿಯುಳ್ಳ ಚಿತ್ತವೆಂಬಶ್ವವನುವರ ಸತ್ವ ಗುಣವೆಂಬ ಹಲ್ಲಣವ ಬಿಗಿದುನಿರತ ಪರಮಾತ್ಮನೀಕ್ಷಣದ ಕಡಿವಾಣವನುಪಿರಿದಾಗಿಯಳವಡಿಸಿ ಮುಂದೆ ನಿಂದಿಹುದಾಗಿ 6ಒಲವುತಿಹ ಸುಖ ದುಃಖವೆರಡು ಘಂಟೆಗಳಿಂದನೆಲನ ಸೋಕುವ ಕಾಮ ಸುಂಡಿಲದರಿಂದಫಲ ಚತುಷ್ಟಯ ಪಾದ ಮೇಲು ಮಂಟಪದಿಂದಬಲುಮೆಯಹ ಮೂಲ ಕಾರಣವೆಂಬ ಗಜವು 7ಹಿಂದೆಮುಂದರುವರೊಂದಾಗಿ ವಹಿಸಿರಲದಕೆಹೊಂದಿಸಿದ ಚೌಕಿ ಮನವೆಂಬುದದರಲ್ಲಿಮಂದ ಮೃದು ಬಹು ವಿಷಯ ಸುಖದ ಹಾಸಿಕೆ ಹಾಸಿದಂದಳವಿದನುಭವದ ಕೊಂಬಿನಿಂದೊಪ್ಪಿರುವ 8ಆರು ನೆಲೆಯುಳ್ಳ ರಥವದಕೆ ಶಕ್ತಿಗಳೆಂಬಮೂರು ಕಲಶಗಳಲ್ಲಿ ನಾಲ್ಕು ಸತ್ತಿಗೆಯುಮೂರವಸ್ಥೆಗಳದರ ತುರಿಯವೆಂಬುದೆ ನಾಲ್ಕುಮೂರುಲೋಕವನಾಳ್ವ ಮಹಿಮ ನೀ ಪ್ರತಿಗ್ರಹಿಸು 9ನುಡಿವುದೆಲ್ಲವು ವೇದ ನಡೆವುದೆಲ್ಲವು ಶಾಸ್ತ್ರಬಿಡದೆ ನಿನ್ನಾಜ್ಞೆಯೊಳಗಿರೆ ಪುರಾಣದೃಢವಾಗಿ ನಿನ್ನ ಭಜನೆಯ ಮಾಳ್ಪ ದಿವಸವದುಕಡುಪುಣ್ಯವಾದ ಪಂಚಾಂಗವೆನಿಸುವದು 10ಉದಯದಲಿ ನಿನ್ನ ಸ್ಮರಣೆಯ ಮಾಡೆ ಪುಣ್ಯತಿಥಿಒದಗಿಸುವ ಸತ್ಕರ್ಮ ವಾರವೆನಿಸುವದುಅದರಲ್ಲಿಯನುಭವವೆ ನಕ್ಷತ್ರ ನಿನ್ನಲ್ಲಿಹುದುಗೆ ಜೀವನು ಯೋಗ ಹುದುಗುವದೆ ಕರಣ 11ಸಕಲ ವೇದಂಗಳಲಿ ಪ್ರತಿಪಾದಿಸಿದ ಫಲವುವಿಕಳವಿಲ್ಲದೆ ನಿನ್ನ ನಿಮಿಷ ಧ್ಯಾನಿಸಲುಸಕಲ ತೀರ್ಥಸ್ನಾನ ದಾನ ಜಪ ತಪ ಯಜ್ಞಸಕಲವೂ ಬಹುದೆಂಬ ಸರ್ವೋಪಚಾರ 12ಸುರ ಸಿದ್ಧ ಮುನಿವೃಂದ ನಿರತ ಸೇವಿತ ಚರಣಶರಣಾಗತೋದ್ದರಣ ಶರಧಿಜಾರಮಣತಿರುಪತಿಯ ಸ್ಥಿರವಾಸ ನಿರುಪಮ ಮಹಾಕರುಣಮರೆಯೊಕ್ಕೆ ಸಲಹೆನ್ನ ಪ್ರಾಣ ವೆಂಕಟರಮಣ 13ಓಂ ಜುನೇ ನಮಃ
--------------
ತಿಮ್ಮಪ್ಪದಾಸರು
ರಾಮಚಂದ್ರನೇ ರಘುಕುಲೋತ್ತಮನೇ ಕಾಮಿತ ಫಲದಾಯಕನೇ ಏಳೈ ಬೇಗನೇ ಪ ಜಾನಕಿ ದೇವಿಯು ಪನ್ನೀರ ತುಂಬಿದ ಚಿನ್ನದ ಕಲಶವನು ಧರಿಸಿ ಹರಿ ನಿನ್ನಯ ಸನ್ನಿಧಿಯಲ್ಲೇ ನಿಂತಿಹಳು ಇನ್ನಾದರು ಮುಖವನು ತೊಳೆಯಲೇಳೊ ಅ.ಪ. ದುಷ್ಟ ರಾವಣನ ಕುಟ್ಟಿ ಕೆಡಹಿದ ಸೃಷ್ಟೀಶನೇ ಏಳೋ ಕಷ್ಟಾಗಿರುವುದು ಯುದ್ಧದಿ ನಿನಗೆ ದಯಾಳೋ ಪಟ್ಟವನೇರಲು ಇಟ್ಟಿಹುದು ಮುಹೂರ್ತವ ಇಂದಿನ ದಿನದೊಳು ಕೆಂಪಾಯಿತು ಮೂಡಲೊಳು ಅಷ್ಟೈಶ್ವರ್ಯದಿ ಪಟ್ಟಕ ಸಿಂಗರಿಸಿಟ್ಟು ವಶಿಷ್ಠಾದಿಗಳು ವಿಶಿಷ್ಟರು ನೋಡುತ ಕುಳಿತಿಹರೋ 1
--------------
ಹನುಮೇಶವಿಠಲ
ರಾಮನ ನೋಡ ಬನ್ನಿರೆ ಭಾಮೆಯರೆಲ್ಲ ಪ ರಾಮನ ನೀವು ನೋಡ ಬನ್ನಿರೆ ಕಾಮಿತಾರ್ಥವಬೇಡಿಸುಖಿಸಿರೆ ಸ್ವಾಮಿ ನೀನೆ ಗತಿ ಎಂದರೆ ಕಾಮಿತಾರ್ಥವನೀವ ದೊರೆಯನ ಅ.ಪ ಧೂರ್ತ ರಾವಣನ Wಟ್ಟಿಸಿ ಖ್ಯಾತಿಯಿಂದಲಿ ರಥವನೇರಿ ಸೀತೆಸಹಿತ ಬರುವನಂತೆ 1 ಅಯೋಧಾü್ಯಪುರದಿ ನಿಂದು ಮರೆವ ಸಿಂಹಾಸನವನೇರುತ ಹರುಷದಲಿ ತಾ ಕೂಡುವನಂತೆ 2 ಮಾನನಿಧಿ ಪ್ರಾಣನಾಥವಿಠಲ ಸಾನುರಾಗದಿ ಭಜಿಸುವರಸುರ ಧೇನುವಂದದಿ ಸಲಹುವನು ಮಾನಿನಿಯರು ಮನ್ನಿಸುತ ಬೇಗ 3
--------------
ಬಾಗೇಪಲ್ಲಿ ಶೇಷದಾಸರು
ರಾಮಾ ನಿನ್ನಯ ದಿವ್ಯ ನಾಮಾ ನೆನೆವೆನು ರಾಮಾ ನಿನ್ನಯ ದಿವ್ಯ ನಾಮಾ ಪ್ರೇಮವ ಕೊಟ್ಟನ್ನಾ ನೇಮದೊಳಿರಿಸೊ ನೀ ಕರುಣದಿ ಪ ಚಿತ್ತ ಶುದ್ಧವ ಮಾಡಿ ಮತ್ತೆ ನಿನ್ನಯ ಪಾದ ನಿತ್ಯದಿ ನೆನೆವಂತೆ ಭಕ್ತಿಯೊಳಿರಿಸೊ ನೀ ಎನ್ನನು 1 ದಶರಥನುದರದಿ ಶಿಶುವಾಗಿ ಜನಿಸಿದೆ ಹೊಸ ಆಭರಣವಿಟ್ಟು ಕುಶಲಮಾತೆಯನು ನೋಡುವ 2 ಛಂದದಿಂದಲಿ ಆನಂದದೊಳಿಹ ರಾಮಾ ಚಂದ್ರನ ಮೊಗ ಅತಿ ಸುಂದರವಾಗಿರುವವನೇ 3 ಬಿಲ್ಲ ಬಾಣವಪಿಡಿದು ಎಲ್ಲಾ ದೈತ್ಯರ ಕೊಂದು ಅಲ್ಲೇ ಕೌಶಿಕಯಾಗ ಎಲ್ಲ ಸಲಹಿದೆ ಧೀರನೇ 4 ವಿಥುಳಾಪುರದಿ ಬಂದು ಅತುಳ ಧನುವ ಮುರಿದು ಸತಿ ಸೀತಾ ಸಹಗೂಡಿ ಪಿತನಾ ಪಟ್ಟಣವನು ಸೇರಿದೆ 5 ಮಾತೆಯ ವರ ಕೇಳಿ ನೀತಿಯಿಂದಲಿ ಅನು ಜಾತನ ಒಡಗೂಡಿ ಖ್ಯಾತಿಯಿಂದಲಿ ಪೋದಂತಹ 6 ಸರಯು ತೀರದಿ ಬಂದು ಪುರದ ಜನರ ಬಿಟ್ಟು ಭರದಿ ನಾವೆಯನೇರಿ ತ್ವರಿತದಿಂ ದಾಟಿ ನೀ ಪೋದೆ 7 ಭಕ್ತಿಯಿಂದಲಿ ಆ ಸಕ್ತ ಭರತನ ಕಂಡು ಯುಕ್ತಿಯಿಂದಲಿ ತೇಜೋಯುಕ್ತಪಾದುಕವನು ಕೊಟ್ಟೆನೀ 8 ಪುಸಿಯತಿಯಾಗಿ ಶೀತೆಯ ಅಸುರ ಕೊಂಡೊಯ್ದನೆಂದು ವ್ಯಸನದಿಂದಲಿ ಪೋಗಿ ಪಕ್ಷಿಯುದ್ಧರಿಸಿದೆ ಘಮ್ಮನೆ 9 ಶಾಂತಮೂರುತಿ ಹನುಮಂತರೆಲ್ಲರು ಕೂಡಿ ಅಂತರದಲಿ ಸೇತು ನಿಂತು ನೋಡುವೆ ನೀ ಛಂದದಿ 10 ಶರಣ ಬಂದ್ವಿಭೀಷಣನ ಕರುಣದಿಂದಲಿ ಕಾಯ್ದೆ ಸ್ಥಿರದಾಪಟ್ಟವಗಟ್ಟಿ ಹರುಷದೋಳ್ ನಿಲಿಸಿದೆ ಅವನನು 11 ವಾನರರೊಡಗೊಂಡು ಸೇನೆ ಸಹಿತಲೇ ದಶಾ ನನ ರಾವಣನಕೊಂದು ಮಾನಿನೀ ಸಹಿತನೀ ಬಂದಿಹೆ 12 ಪುಷ್ಪಕವನೆ ಏರಿ ಅಕಸ್ಮಾತದಲಿ ಬಂದು ಆಕ್ಷಣದಲಿ ಭರತ ರಕ್ಷಣ ಮಾಡಿದ ದೇವನೇ 13 ಪಟ್ಟಣದಲಿ ಮಾಹಾ ಪಟ್ಟವನೇರಿಸಿ ಶಿಷ್ಟ ಅಯೋಧ್ಯೆಯ ಪಟ್ಟಣವಾಳಿದೆ ರಾಮನೆ 14 ಬ್ರಹ್ಮಮೂರುತಿ ರಾಮಾಗಮನ ಚರಣದಿ ಸುಮ್ಮಾನದಲಿ ಶಾಂತಿ ತನ್ಮಯಗೊಳಿಸಾನಂದದಿ 15
--------------
ಶಾಂತಿಬಾಯಿ
ರಾಮಾ ರಾಮಾ ಎಂಬ ನಾಮ ಜಿಹ್ವೆಯೊಳಿರುವನೇಮವನೆ ಸ್ಥಿರನಿಜವ ಮಾಡೋ ರಾಮರಾಮ ದಶರಥರಾಮ ಪಟ್ಟಾಭಿರಾಮ ರಘುರಾಮ ಸೀತಾರಾಮ ರಾಮ(ರಾಮ) ಪ ಬಾಲತನವೆಂಬುದೆಂತು ಲೀಲೆಯಿಂದಲಿ ಸಂತು ಮೇಲೆ ಯೌವನವು ಬಂತೋ ರಾಮಲೋಲಲೋಚನೆಯರ ವಿಶಾಲರತಿಸುಖದೊಳಗೆ ವೋಲಾಡುತಿದ್ದೆನಲ್ಲೋ ರಾಮಕಾಳು ಜರೆ ಮುಸುಕಿ ಕೈಕಾಲು ಕಸದಿಂ ಮುರುಪಿ ನಾಲಿಗೆಯ ಧೃತಿ ತಪ್ಪಿತೋ ರಾಮಕಾಲನವರಿಗೆ ಕರುಣವಿಲ್ಲ ನೀ ಕೈಬಿಟ್ಟ ಮೇಲೆ ರಕ್ಷಿಸುವರಿಲ್ಲಾ ರಾಮ 1 ಹೆತ್ತ ತಾಯಿ ಮೊಲೆವಾಲನುಂಡುದಕೆ ಪಡಿಗೆಟ್ಟೆ ಸಪ್ತಶರನಿಧಿ ಸಾಲದೋ ರಾಮಸತ್ತು ಹುಟ್ಟಿದ ದೇಹದಸ್ಥಿಗುಪಮಿಸೆ ಮೇರುಮಸ್ತಕಕ್ಕತ್ಯಧಿಕವೋ ರಾಮಚಿತ್ರಗುಪ್ತರು ಕರ್ಮಗಳನು ಬರೆಬರೆದು ಬೇಸತ್ತು ಬೆಂಡಾದರಲ್ಲೋ ರಾಮಅತ್ಯಂತ ಕರುಣರಸವೆನ್ನ ಮೇಲೆ ನಿನಗಿರ್ದರೆ ಮುಕ್ತಿಯನು ಕೊಟ್ಟು ಸಲಹೋ ರಾಮ2 ತಂದೆ ತಾಯ್ಗಳು ನೀನೆ ಬಂಧುವರ್ಗವು ನೀನೆ ಮುಂದೆ ರಕ್ಷಿಪನು ನೀನೆ ರಾಮಮುಂದುಗಾಣದೆ ಬಹು ಮದಾಂಧತನದಲಿನಡೆದು ಮಂದಮತಿಯಾಗಿದ್ದೆನೋ ರಾಮಮುಂದಾದರೂ ತಂದೆ ತಾಯಿಯ ಜಠರದಿ ಬಾರದಂದವನು ಮಾಡಿ ಸಲಹೋ ರಾಮಚಂದ್ರಶೇಖರ ಕೆಳದಿ ರಾಮೇಶ್ವರನು ನೀನೆ ಎಂದು ನಾನಿಂದು ತಿಳಿದೆ ರಾಮ 3
--------------
ಕೆಳದಿ ವೆಂಕಣ್ಣ ಕವಿ
ಲಕ್ಷ್ಮಿ ರಮಣಗೆ ಮಾಡಿದಳು ಉರುಟಾಣಿÉ ಪ. ಇಳೆಯೊಳಗತಿಜಾಣೆ ಸುಂದರ ಫಣಿವೇಣಿ ಅ.ಪ. ಕಚ್ಛಪ ಕಿರನೆ ಕೇಸರಿಯಂದದ ಮುಖನೆ ಸ್ವಚ್ಛಮುಖವ ತೋರೈ ಅರಿಸಿನ ಹಚ್ಚುವೆನು 1 ದುರುಳ ಕ್ಷತ್ರಿಯರನ್ನು ಕೊರಳ ತರಿದ ಹರಿಯೆ ಹರುಷದಿಂ ಕೊರಳ ತೋರೈ ಗಂಧವ ಹಚ್ಚುವೆನು 2 ದಶರಥsÀನಲಿ ಜನಿಸಿ ದಶಮುಖನ ಸಂಹರಿಸಿ ಕುಸುಮ ಮುಡಿಸುವೆನು 3 ಹರಿನಾರು ಸಾಸಿರ ಸುದತಿಯರನಾಳಿದನೆ ಪದುಮಕರವ ತೋರೈ ವೀಳ್ಯವ ಕೊಡುವೆನು 4 ವಸನರಹಿತನಾಗಿ ವಸುಧೆಯ ತಿರುಗಿದೆ ಬಿಸಜನಾಭನೆ ನಿನಗೆ [ವಸನ ಉಡಿಸುವೆನು] 5 ವರ ತುರಗವನೇರಿ ಕಲಿಯ ಸಂಹರಿಸುವಿ ಸಿರಿಹಯವದನನೆ ಆರತಿಯೆತ್ತುವೆನು 6
--------------
ವಾದಿರಾಜ
ಲಕ್ಷ್ಮೀಶ ನರಹರಿ ವಿಠ್ಠಲನೆ ಸಲಹೊ ಪ ಪಕ್ಷೀಂದ್ರ ವಾಹನನೆ ಈಕ್ಷಿಸುತ ಕರುಣದಿಂರಕ್ಷಿಸಲಿ ಬೇಕಿವಳ ಲಕ್ಷ್ಮಣಾಗ್ರಜನೇ ಅ.ಪ. ದೀನಜನ ಮಂದಾರ ಜ್ಞಾನದಾಯಕನೆ ಸುರ-ಧೇನು ಭಕ್ತರಿಗೆ ಕಾಮಿತವ ಕೊಡುವಲ್ಲಿ |ನೀನಿವಳಿಗೇ ಮೋಕ್ಷಜ್ಞಾನವನೇ ಪಾಲಿಸುತಸಾನುರಾಗದಿ ಸಲಹೊ ಪ್ರಾಣಾಂತರಾತ್ಮ 1 ಸೃಷ್ಟಿ ಸ್ಥಿತಿ ಸಂಹಾರ ಕರ್ತನೀನೆಂದೆನಿಪೆವೃಷ್ಟಿಕುಲ ಸಂಪನ್ನ ಜಿಷ್ಣು ಸಖ ಹರಿಯೇ |ಕಷ್ಟನಿಷ್ಠೂರಗಳ ಸಹಿಸುವಡೆ ಧೈರ್ಯವನುಕೊಟ್ಟು ಕೈ ಪಿಡಿಯುವುದು ಕೃಷ್ಣ ಮೂರುತಿಯೇ2 ಪತಿಯೆ ಪರದೈವ ವೆಂಬುನ್ನತದ ಮತಿಯಿತ್ತುಹಿತದಿಂದ ಹರಿಗುರು ಸೇವೆಯಲಿ ರತಿಯಸತತ ನಿನ್ನಯ ನಾಮ ಸ್ಮøತಿಯನ್ನೇ ವದಗಿಸುತಕೃತಿಪತಿಯೆ ನೀನಿವಳ ಉದ್ಧರಿಸು ಹರಿಯೇ 3 ತಾರತಮ್ಯ ಜ್ಞಾನ ವೈರಾಗ್ಯ ಭಕುತಿ ಕೊಡುಮೂರೆರಡು ಭೇಧಗಳ ಅರಿವಿತ್ತು ಹರಿಯೇಮಾರಪಿತ ಇವಳ ಹೃದ್ವಾರಿಜದಿ ತವ ರೂಪತೋರುತಲಿ ಸನ್ಮುದವ ಬೀರುವುದು ಹರಿಯೇ 4 ಸರ್ವಾಂತರಾತ್ಮನೆ ಗುರುಡವಾಹನ ದೇವಸರ್ವಜ್ಞ ಸರ್ವೇಶ ಮಮ ಕುಲ ಸ್ವಾಮೀ |ನಿರ್ವಿಘ್ನದಿಂದೆನ್ನ ಪ್ರಾರ್ಥನೆಯ ಪೂರೈಸೊಸರ್ವಸುಂದರ ಗುರು ಗೋವಿಂದ ವಿಠಲಾ 5
--------------
ಗುರುಗೋವಿಂದವಿಠಲರು
ಲಾಲಿ ಆಡಿದ ರಂಗ ಲಾಲಿ ಆಡಿದ ಪ. ಬಾಲೆ ರುಕ್ಮಿಣಿ ದೇವೇರೊಡನೆ ಮೂರು ಲೋಕನಾಳ್ವ ದೊರೆಯುಅ.ಪ. ಸಾಧು ಮಚ್ಚಕಚ್ಚಪರೂಪನಾಗಿ ಭೇದಿಸಿ ತಮನ ಕೊಂದುವೇದವನ್ನು ಮಗನಿಗಿತ್ತು ಭೂದೇವಿಯರೊಡನೆ ಕೃಷ್ಣ 1 ಅಮೃತ ಬಡಿಸಿ ಸತ್ಯಭಾಮೆಯರೊಡನೆ ಕೃಷ್ಣ2 ವರಾಹ ರೂಪನಾಗಿ ಆದಿ ಹಿರಣ್ಯಕನ ಕೊಂದುಮೇದಿನಿಯ ಮೇಲಕೆ ತಂದು ರಾಧೆಯೊಡನೆ ನಗುತ ಕೃಷ್ಣ 3 ಪುಟ್ಟಬಾಲನ ನುಡಿಯ ಕೇಳಿ ಕೆಟ್ಟ ಕಶ್ಯಪನುದರ ಸೀಳಿಅಷ್ಟಮಂಗಳವಾದ್ಯವಾಗಲು ಅಷ್ಟ ಸ್ತ್ರೀಯರೊಡನೆ ಕೃಷ್ಣ 4 ಸುರರು ಲಕುಮಿಯೊಡನೆ ನಗುತ ಕೃಷ್ಣ 5 ಯುದ್ಧದಲಿ ಕೊಡಲಿ ಪಿಡಿದು ಗುದ್ದಿ ಕ್ಷತ್ರೇರ ಶಿರವ ತರಿದುಗೆದ್ದ ಸಿಂಹನೆನಿಸಿಕೊಂಡು ಪದ್ಮಾವತಿಯ ಕೂಡೆ ಕೃಷ್ಣ 6 ಸೇತುಬಂಧನವನ್ನೆ ಮಾಡಿ ಧೂರ್ತರಾವಣನ್ನ ಕೊಂದುಖ್ಯಾತಿಪಡೆದು ಪುರಕೆ ಬಂದು ಸೀತೆಯೊಡನೆ ರಾಮಚಂದ್ರ 7 ಒಂದು ಏಳು ಎಂಟುಸಾವಿರ ಇಂದುಮುಖಿಯರನ್ನು ಕೂಡಿಮಂದಮಾರುತ ಚಂದ್ರ ಬರಲು ನಂದಗೋಕುಲದ ದೊರೆಯು 8 ಅಂಬರವ ತೊರೆದು ದಿಗಂಬರÀ ವೇಷವನ್ನೆ ಧರಿಸಿಮಂಗಳಾಂಗ ಮಾರಜನಕ ರಂಗನಾಯಕಿಯೊಡನೆ ಕೃಷ್ಣ9 ಅಚ್ಚಮುತ್ತಿನಾಭರಣವಿಟ್ಟು ಲಕ್ಷವಿಲ್ಲದೆ ಹಯವನೇರಿಭಕುತರಿಗೆ ಅಭಯಕೊಡುತ ಭಕ್ತವತ್ಸಲ ಹಯವದನ 10
--------------
ವಾದಿರಾಜ
ಲಾಲಿತ್ರಿ ಗುಣಗಾತ್ರ ಲಕ್ಷ್ಮಿಕಳತ್ರಾ ಲಾಲೀ ಪ ನೀರೊಳಗೆ ಮನೆಯು ಮಾಡಿಓಡ್ಯಾಡೀ | ಕೋರೆಯನೆ ಮಸೆದು ಭೂಮಿಗೆ ಕಡೆದಾಡೀ ಮೋರೆಯನು ಮುಚ್ಚಿಕೈಕಾಲು ತೂಗ್ಯಾಡೀ ಘೋರ ರೂಪವ ಧರಿಸಿ ಬಲಿದಾನವನೆ ಬೇಡೀ 1 ಕೊಡಲಿಯನು ಪಿಡಿದು ಮಾತೆಯ ಶಿರವನೇ ಒಡೆದೂ ಮಡದಿಗೋಸ್ಕರ ದಶಶಿರನ ಶಿರವತರಿದೂ ತುಡುಗ ತನದಿ ಮೊಸರು ಗಡಿಗೆಗಳ ಒಡೆದೂ ಮಡದಿಯರ ವ್ರತಭಂಗ ಮಾಡಿದೆಯೊ ಪಿಡಿದೂ 2 ಹಯವನೇರಿದ ಹರಿಯು ಬಹುಜನರ ಪೊರೆಯೇ ಚೆಲುವ ಮೂರುತಿ ತೊಟ್ಟಿಲೊಳು ಮುದ್ದು ಸುರಿಯೇ ಪರಮ ಪುರುಷ ಸದ್ಭಕ್ತರ ಸಿರಿಯೇ ಪವಡಿಸೋ ನರಸಿಂಹ ವಿಠಲಾ ಧೊರಿಯೇ ಲಾಲೀ 3
--------------
ಓರಬಾಯಿ ಲಕ್ಷ್ಮೀದೇವಮ್ಮ
ಲಿಂಗಾ ಅಂಗಜಹ - ಮಂಗಳ | ಗಂಗಾಧರ ಕಾಯೊತುಂಗಾ ಘರಣ್ಯ ಅನಳಾ ಪ ತಿಂಗಳ ಧರ ಹರ | ಅಂಗಜ ಪಿತ ಸಖಮಂಗಳಾಂಗ ಕೃ | ಪಾಂಗ ದಯಾಳೊಅ.ಪ. ಭವ | ಭೀಮ ಮಹಾಘನಕೋಮಲಾಂಗಿ ತವ | ವಾಮಾಂಗನೆಗೆಆ ಮಹ ಮಂತ್ರವ | ರಾಮತಾರಕವನೇಮದಿ ಪೇಳ್ದ ಸು | ತ್ರಾಮ ವಂದಿತನೆ 1 ಭುಜಗ ಭೂಷಣನೆಸುಜನ ಸುರದ್ರುಮ | ಗಜವರದ ಪ್ರಿಯನಿಜಪತಿ ಪವನನ | ಭಜಿಸಿ ಬಹು ವಿಧದಿಅಜಗರ ಪದವಿಯ | ನಿಜವಾಗಿ ಪಡದೆ 2 ಭೂತೇಶ | ಭಸುಮ ಭೂಷವರ ವ್ಯೋಮಕೇಶ ಉಗ್ರೇಶ ||ಶರಣರ ತೋಷ | ವಿಶ್ವೇಶ | ಕಾಶಿ ಪುರೀಶಸರಿತ್ಕಪಿಲ ತಟದಿ ವಾಸ ||ವರ ಗೌರೀವರ | ಪರಮ ದಯಾನಿಧೆಚರಣಾಂಬುಜಗಳಿ | ಗೆರಗಿ ಬೇಡುವೆನೊಗುರು ಗೋವಿಂದ ವಿಠಲನ | ಚರಣ ನೀರೇರುಹನಿರುತ ಸ್ಮರಿಸುವಂಥ | ವರ ಮತಿ ಪಾಲಿಸು 3
--------------
ಗುರುಗೋವಿಂದವಿಠಲರು
ಲೋಕನೀತಿಯ ಹಾಡುಗಳು ಶ್ರೀನಾಥನ ನಾಮಾಮೃತ ರುಚಿಯೆಲ್ಲ ಪರಮ ಭಕುತಗಲ್ಲದೆ ಪ ಹೀನ ಮನುಜರು ಕೇಳಿ ಹಿರ್ರನೆ ಹಿಗ್ಗಿ ಆನಂದಪಡಬಲ್ಲರೆ ಅ.ಪ. ಕ್ಷೀರ ವಾರಿಯ ಕೂಟ ಮರಾಳ ತಿಳಿವಂತೆನೀರು ಕೋಳಿಯು ಬಲ್ಲುದೆಸಾರಮೇಯನ ಬಾಲ ನಳಿಗೆಯೊಳಿಟ್ಟರೆನೇರವಾಗಬಲ್ಲದೆದಾರು ಪ್ರತಿಮೆಗೆ ಸೀರೆಯನುಡಿಸಲುನಾರಿಯಾಗಬಲ್ಲುದೆಭಾರತಿಪತಿ ಪಾದವರಿಯದ ಮನುಜನುನಾರಾಯಣನ ಬಲ್ಲನೆ1 ಉದರಕ್ಕೆ ಗ್ರಾಸವ ನಡೆಸದ ಮನುಜನುಮದುವೆ ಮಾಡಲು ಬಲ್ಲನೆಸದನಕ್ಕೆ ಜನ ಬರೆ ಕದನವ ತೆಗೆವವಬುಧರು ಎಂಬುದ ಬಲ್ಲನೆವಿಧಿಯಂತೆ ಮಸೆದು ಮತ್ಸರಿಸುವವ ನಮಗೆಹದುಳ ಹಾರೈಸುವನೆಮದವೆಗ್ಗಳಿಸಿ ಮೆರೆವ ಮನುಜ ಹರಿಪದಗಳರ್ಚಿಸಬಲ್ಲನೆ 2 ಕನ್ನಡಿಯೊಳು ರೂಪು ಹೊಳೆದಂತೆ ಹಂಚಿನೊಳ್‍ಇನ್ನು ಕಾಣಿಸಬಲ್ಲುದೆಕಣ್ಣಿಲ್ಲದವನಿಗೆ ಚಿನ್ನವ ತೋರಲುಬಣ್ಣ ಹೇಳಲು ಬಲ್ಲನೆಹೆಣ್ಣಿನ ಮೇಲಿನ ವ್ಯಾಮೋಹ ಬಿಡದವಸಂನ್ಯಾಸಿಯಾಗುವನೆಅನ್ಯ ದೈವಂಗಳ ಭಜಿಸುವ ನರಗೆ ಮೋ-ಹನ್ನ ವಿಠ್ಠಲ ಒಲಿವನೇ 3
--------------
ಮೋಹನದಾಸರು
ಲೋಕೇಶನೆನಿಪ ಶ್ರೀಗುರು ಸಿದ್ಧೇಶ್ವರಗೆ ಪ ನೀ ಕಮಲಮುಖಿ ಆಋವೈರಿಯ ನೇಕ ಮೈಯ್ಯಾಳು ಸುತ್ತಿಕೊಂಡು ವಿ ವೇಕವಿಲ್ಲದೆ ವಿಷವನುಂಡ ಪಿನಾಕಧರÀನಿಗೆ ಸೋಲುವರೆ ನೀ ಜಗವ ಮೋಹಿಪ ಮಾನಿನೀ ಮಣಿಯೇ ಅ.ಪ. ಶಿರದೊಳು ಶಶಿಯ ಕೆಂಜೆಡೆ ಇಹ ಜೋಗಿ ಸ್ಮರನ ದಹಿಸಿ ಭಸ್ಮ ಹಣೆಗಿಟ್ಟ ಯೋಗಿ ಇರುವರೆ ಸ್ಥಳವಿಲ್ಲದಂತೆ ತಾ ಪೋಗಿ ಮೆರೆವ ಸ್ಮಶಾನ ಮಂದಿರಕನುವಾಗಿ ಮರುಲು ಭೂತ ಪಿಶಾಚ ಯಕ್ಷರ ನೆರವಿಯಲಿ ಕುಣಿಕುಣಿದು ಬ್ರಹ್ಮನ ಶಿರವಿಡಿದು ತಿರಿದುಂಬ ಗೊರವಗೆ ಬರಿದೆ ತಿಳಿಯದೆ ಜಗವ ಮೋಹಿಪ ಮಾನಿನೀ ಮಣಿಯೇ 1 ಮಂಡೆಯೋಳ್ ಜಾನ್ಹವಿ ಶಶಿಯನ್ನೆ ಸೂಡಿ ರುಂಡಮಾಲೆಯ ಕೊರಳೊಳಗಿಟ್ಟಪಚಾಡಿ ಕುಂಡಲಿಗಳಾ ಧರಿಸಿರುವನ ನೋಡಿ ಖಂಡ ಪರಶುವೆಂದು ಅವನ ಕೊಂಡಾಡಿ ಧಿಂಡೆಯಾಗಿಹ ಪ್ರಾಯದವಳು ನೀ ನೀನವನನೊಲಿದೆ ಪ್ರ ಚಂಡೆ ಪಾರ್ವತಿ ಜಗವ ಮೋಹಿಪ ಮಾನಿನೀ ಮಣಿಯೇ 2 ಕರದಿ ತ್ರಿಶೂಲ ಧಮರುಗಳ ಧರಿಸಿರುವಾ ಕಂಚರ್ಮಾಂಬಕ ಪುಲಿದೊಗಲುಟ್ಟು ಮೆರೆವಾ ಹಿರಿಯತನಕೆ ವೃಷಭವನೇರಿ ಬರುವಾ ಶಿರಿಯ ಹೊಗಾಡಿ ಫಕೀರನಂತಿರುವಾ ವಿರಚಿಸಿದ ಲೀಲಾವಿನೋದದ ಪರತರ ಶ್ರೀ ಪ್ರಣವರೂಪನ ಗುರುವಿಮಲಾನಂದ ತೊಟ್ಟಿದ ಗುರು ಸಿದ್ಧೇ ಶ್ವರನೆಂದು ತಿಳಿಯದೆ ಜಗವ ಮೋಹಿಪ ಮಾನಿನೀಮಣಿಯೇ 3
--------------
ಭಟಕಳ ಅಪ್ಪಯ್ಯ
ವಂದಿಪೆ ಗುರುವೆ ನೀ ಕಲ್ಪತರುವೇ ಬಂಧನ ಕಳೆಯುವ ಭೋಧಾತ್ಮ ಗುರುವೆ ಅಗಣಿತ ಮಹಿಮಾ ಜಗದಾಧಾರ ಬಗೆಗೆ ನಿಲುಕದಿಹ ಘನನಿರ್ವಿಕಲ್ಪ ಮಾನವ ರೂಪದಿ ಸ್ವಾನುಭವವ ತೋರ್ದ ಮುಕುತಿದಾಯಕನೇ ಪರಮಾತ್ಮ ನೀನೆಂದು ಪರಶೃತಿ ಪೇಳೆ ಸರಿಯಾಗಿ ಬೋಧಿಸಿ ಕರುಣೆದೋರುವನೇ ಜಗವೆಲ್ಲ ಪುಸಿಯೆಂದು ಜಗಕೆಲ್ಲ ಪೇಳುವ ಭಗವಂತ ದಯದೋರಿ ಪೊರೆವುದು ದೇವಾ ಚಿನುಮಯರೂಪನೆ ಸ್ವಾನಂದರೂಪಾ ಮನವು ನಿನ್ನೊಳಗಿರಲಿ ಶಂಕರರೂಪಾ
--------------
ಶಂಕರಭಟ್ಟ ಅಗ್ನಿಹೋತ್ರಿ
ವಂದಿಸುವೆ ಗಣರಾಜ ನೀ ದಯದಿಂದ ಪಾಲಿಸುವುದು ಪ ಸದ್ಗುಣಭರಿತನೇ ದುರ್ಗುಣರಹಿತನೇ ವಿಘ್ನವಿನಾಶಕನೇ ಭಗ್ನಗೈಸೋ ಎನ್ನ ಅವಗುಣಗಳ ನೀ ವಿದ್ಯಾದಾಯಕನೇ 1 ಶ್ರೀಶನಂಘ್ರಿಸರೋಜಭೃಂಗ ಮಹೇಶನ ವರಸುತನೇ ವ್ಯಾಸಕರುಣಾಪಾತ್ರನೇ ಮನದಾಸೆ ಪೂರೈಸುವವನೇ 2 ಪಾಶಪಾಣಿಯೆ ಪ್ರಾರ್ಥಿಸುವೆ ನೀ ಲೇಸು ಕೊಡುವುದಿನ್ನಾ ಶ್ರೀಶ ಶ್ರೀ ಹನುಮೇಶವಿಠಲನ ದಾಸನೇ ಅನುದಿನಾ 3
--------------
ಹನುಮೇಶವಿಠಲ
ವಂದಿಸುವೆ ಗುರುವರಾ ವಂದಿಸುವೆ ಗುರುವರಾವಂದಿಸುವೆ ಗುರುವರಾ ಮಂದಮತಿಯ ಪಾಲಿಸೆಂದು ಪ. ತ್ರಿವಿಧ ಫಲವ ಕೊಡಿಸುವವನೇ 1 ಜಲಧಿ ದಾಟಿಮಾತೆಗುಂಗುರವಿತ್ತು ಪ್ರೇಮ ವಾರ್ತೆಯನ್ನು ಪೇಳಿದವಗೆ 2 ಭೀಮನಾಮದಿಂದ ಕರೆಸಿ ಭೂವಿಯಲ್ಲಿ ಮೆರೆವ ಖಳರಧಾಮವನ್ನೆ ಸೀಳಿ ಸಾರ್ವಭೌಮಕೃಷ್ಣಗರ್ಪಿಸಿದಗೆ 3 ಅದ್ವೈತ ಮತವನ್ನೆಲ್ಲ ಕೆಡಹಿಶುದ್ಧಮತವ ಸ್ಥಾಪಿಸಿದ ಮಧ್ವಮುನಿರಾಯನಿಗೆ 4 ತಂದೆವರದವಿಠಲನ್ನ ಒಂದೆ ಮನದಿ ಜಪಿಸುತಿರುವಇಂದುಶೇಖರಾದಿ ಸುರವೃಂದ ವಂದ್ಯನಾಥವಹಗೆ 5
--------------
ಸಿರಿಗುರುತಂದೆವರದವಿಠಲರು