ಒಟ್ಟು 531 ಕಡೆಗಳಲ್ಲಿ , 88 ದಾಸರು , 470 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇಕ್ಕಲಾರೆ ಕೈಯಂಜಲು - ಚಿಕ್ಕಮಕ್ಕಳು ಅಳುತಾವೆ ಹೋಗೋ ದಾಸಯ್ಯ ಪ.ಮಡಿಕೆ ತೊಳೆಯುತೇನೆ ಮನೆಯ ಸಾರಿಸುತ್ತೇನೆಒಡೆಯರಿಲ್ಲ ಕಾಣೋ ಹೋಗೋ ದಾಸಯ್ಯತೊಡೆಯ ಮೇಲಣ ಕೂಸು ಮೊಲೆ ಹಾಲನುಣಿಸುತಿದೆನಡೆನಡೆ ಕರಕರೆ ಮಾಡದೆ ದಾಸಯ್ಯ 1ಅಟ್ಟದ ಮೇಲಿನ ಅಕ್ಕಿ ತೆಗೆಯಲಾರೆಹೊಟ್ಟೆನೋವು ಕಾಣು ಹೋಗೋ ದಾಸಯ್ಯಮುಟ್ಟಾಗಿ ಕುಳಿತೇನೆ ಮನೆಯವರಿಲ್ಲವೊಕಟ್ಟುಗ್ರ ಮಾಡದೆ ಹೋಗೋ ದಾಸಯ್ಯ 2ವೀಸದ ಕಾಸಿದ ದವಸವ ತಂದಾರೆಕೂಸಿಗೆ ಸಾಲದು ಹೇಗೋ ದಾಸಯ್ಯಆಸೆ ಮಾಡಲು ದೋಷಕಾರ್ತಿ ಬೇಡ ನಾನುಶೇೀಷಾದ್ರಿ ಪುರಂದರವಿಠಲದಾಸಯ್ಯ 3
--------------
ಪುರಂದರದಾಸರು
ಇದರೆನ್ನಧಿಕ ಸುಖವೊಂದವೊಲ್ಲೆಪದುಮನಾಭನೆ ನಿನ್ನ ಪಾದಯುಗ್ಮವೆ ಸಾಕ್ಷಿ ಪಮಧ್ವ ಮತದೊಳಗೆ ಜನಿಸಿ ದ್ವಾದಶನಾಮ |ಮುದ್ರೆ ಶ್ರೀ ತುಲಸಿ ಅಕ್ಷಮಾಲೆ ಧರಿಸಿ ||ಶುದ್ಧ ಗ್ರಂಥವನೋದಿ ಅದ್ವೈತರನು ಹಳಿದು |ಸದ್ವೈಷ್ಣವನೆಂದೆನ್ನಿಸಿಕೊಂಡರೆ ಸಾಕು 1ಹಿರಿಯರಾದವರಿಗೆ ಬಾಗಿ, ದಾನವ ಮಾಡಿ |ನಿರುತ ಸತ್ಕಥೆಗಳ ಕೇಳುತಲಿ ||ವರಮಂತ್ರ ಜಪಿಸುತ ಪಂಚಯಜÕವ ಮಾಡಿ |ಹರಿದಿನ ವ್ರತವನು ನಡೆಸುತಿಪ್ಪುದೆ ಸಾಕು 2ಪ್ರಾಣೇಶ ವಿಠಲ ನೀನೇ ಸರ್ವೋತ್ತಮ, ಬ್ರಹ್ಮ- |ಪ್ರಾಣಾದಿಗಳು ನಿನ್ನ ದಾಸರೆಂಬ ||ಜ್ಞಾನವೆ ಗಳಿಸಿ ವೈಷ್ಣವರ ಮನೆಯ ಬಾಗಿ - |ಲನು ನಿರುತ ಕಾಯ್ದು ಜೀವಿಸುವದೇ ಸಾಕು 3
--------------
ಪ್ರಾಣೇಶದಾಸರು
ಇವನ ಹಿಡಿದುಕೊಂಡು ಹೋಗಲೊ ಜೋಗಿ |ಇವ ನಮ್ಮ ಮಾತು ಕೇಳದೆ ಪುಂಡನಾದನು ಪಆಡುಲಾಡುತ ಬಂದು ಮಡುವಿನೊಳ್ ಮುಳುಗಿದ |ಬೇಡವೆಂದರೆ ಬೆಟ್ಟ ಬೆನ್ನಲಿ ನೆಗಹಿದ ||ಓಡುತೋಡುತ ಬಂದು ದಾಡೆಯಿಂದ ಸೀಳ್ವ |ನೋಡ ಹೋದರೆ ಕಣ್ಣ ತರೆದಂಜಿಸುವ 1ಹುಲ್ಲಲಿ ಬ್ರಾಹ್ಮಣನ ಕಣ್ಣು ಕುಕ್ಕಿದ ಬುದ್ಧಿ ||ಅಲ್ಲವೆಂದರೆ ಕೊಡಲಿಯ ಪಿಡಿದೆತ್ತಿದ ||ಬಿಲ್ಲನು ಎಡದ ಕೈಯಿಂದಲಿ ಎತ್ತಿದ |ಬಲ್ಲಿದಮಾವನ ಶಿರವನರಿದು ಬಂದ2ಬತ್ತಲೆ ಕುದುರೆಯ ಹತ್ತಬೇಡೆಂದರೆ |ಹತ್ತುವ ಶ್ರೀಕೃಷ್ಣ ಚೆಂದದಿಂದ ||ಭಕ್ತವತ್ಸಲ ನಮ್ಮ ಪುರಂದರವಿಠಲನ |ಅತ್ತ ಹಿಡಿದು ಕೊಂಡು ಹೋಗಯ್ಯ ಜೋಗಿ 3
--------------
ಪುರಂದರದಾಸರು
ಉದ್ಧಾರ ಮಾಡಿದ ಶ್ರೀರಾಮ ಅಹಲ್ಯಾ | ಉದ್ಧಾರ ಮಾಡಿದ ||ಪದ್ಮಜಾಂಡದೊಳು ಪ್ರಸಿದ್ಧವಾದ ಮಾತಿದು ಪಮುನಿ ಶಾಪದಿಂದಲಿ ವನದಿ ಕಲ್ಲಾಗಿ ಬಲುದಿನ ಚಿಂತಿಸುತಲಿಹ |ವನಿತೆಯ ದಯೆಯಿಂದ1ಮಂದಮತಿ ಮಾಟಕೀ ಇಂದುಮುಖಿಗೆ ಇಂಥಕುಂದುಬಂತಲ್ಲಾ |ಎಂದು ಇಂದ್ರರ ಪ್ರಾರ್ಥಿಸುತಿರೆ2ಮೌನಿ ಮಾತಿಗೆ ಪಾದರೇಣು ಸ್ಪರ್ಶವಿತ್ತು ಮಾನಿನಿಯ ಮಾಡಿದಾ |ಪ್ರಾಣೇಶ ವಿಠಲನು 3
--------------
ಪ್ರಾಣೇಶದಾಸರು
ಊದೊ ಕೊಳಲನು ಕೃಷ್ಣ ಊದೊ ಕೊಳಲನುವೇದ ವೇದ್ಯ ಊದು ಕೊಳಲ ನಾದ ತುಂಬೆ ನಭದಿ ಕೃಷ್ಣ ಪಮದನಜನಕ ಮೋಹನಾಂಗಚದುರೆಯರಿಗೊಲಿದು ವನದಿವಿಧ ವಿಧ ಕ್ರೀಡೆಗಳನಾಡಿಮುದವನಿತ್ತ ಮಧುಸೂದನನೆ 1ಗೋಪಿಕಾ ಸ್ತ್ರೀಯರ ವಾಕ್ಯಶ್ರೀಪತಿಯುಕೇಳಿಮುದದಿತಾಪಕಳೆದುಸುರರುತಲೆಯತೂಗೆ ಹರುಷದಿಂದಕೊಳಲನೂದಿದ ಚಲುವ ಕೊಳಲನೂದಿದ 2ನಾರಿಯರು ನಲಿದು ಬಂದುವಾರಿಧಿಯೊಳು ಸರಸವಾಡೆಮಾರಮಣನು ಸೀರೆಗಳನುಗಾರುಮಾಡಿ ಕದಿವರೇನೊತಾರೊ ವಸನವದುರುಳಕೃಷ್ಣ ತಾರೊ ವಸನವÀ3ಅಂಗನೆಯರೆ ನಿಮ್ಮ ವ್ರತಕೆಭಂಗವಾದ ಕಾರ್ಯವೆಸಗೆವಂದಿಸಿದರೆ ಕೊಡುವೆನೆಂದುರಂಗ ನಲಿದು ನುಡಿದ ಮುದದಿವಸನನೀಡಿದ ರಂಗವಸನನೀಡಿದ4ತರುಳರೆಲ್ಲ ಕೂಡಿಕೊಂಡುಕರುಗಳನ್ನೆ ಪಾಲಿಸುತಿರೆಮರೆಯ ಮಾಡಿ ಕರುಗಳನ್ನುದುರುಳತನವು ತರವೆ ಕೃಷ್ಣತಾರೊ ಕರುಗಳ ಕೃಷ್ಣ ತಾರೊ ಕರುಗಳ 5ಮಾತೆಯರನೆ ಅರಸುತಿರಲುಪ್ರೀತಿಯಿಂದ ಕರುಗಳನ್ನುಜೋಕೆಯಿಂದ ಪಿಡಿದು ತರಲುಯಾತಕೀಪರಿ ನಿಂದಿಸುವದುನೋಡಿ ಕರುಗಳ ನಿಂತಿರುವದು ನೋಡಿ ಕರುಗಳ 6ಗೊಲ್ಲತಿಯರ ಮನೆಯ ಪೊಕ್ಕುಮೆಲ್ಲುತಿರಲು ಬೆಣ್ಣೆ ಮೊಸರುನಲ್ಲೆಯರು ಪಿಡಿದು ಹರಿಯನಿಲ್ಲೊ ನಿಲ್ಲೊ ನಿಲ್ಲೊ ಕೃಷ್ಣಚೋರ ಕೃಷ್ಣನೆ ತೋರೊ ನಿಜವಜಾರಕೃಷ್ಣನೆ7ಚಿಕ್ಕ ಪ್ರಾಯದವರೆಕೇಳಿಸೊಕ್ಕಿನಿಂದ ನುಡಿವರೇನೆಬೆಕ್ಕು ತಿಂದ ತೆರವರಿಯದೆಧಿಃಕರಿಸುವುದುಚಿತವಲ್ಲನುಡಿವರೇನೆಲೆ ನಿಷ್ಠುರ ನುಡಿವರೇನೆಲೆ 8ಮಕ್ಕಳೆಲ್ಲ ಆಡುತಿರಲುಕಕ್ಕು ಬಿಕ್ಕು ಮಾಡಿಅವರದಿಕ್ಕು ದಿಕ್ಕುಗಳಿಗೆ ನಡೆಸಿಠಕ್ಕುತನವು ತರವೆ ಕೃಷ್ಣನಡತೆಯಲ್ಲವೊತುಡುಗಕೃಷ್ಣ ನಡತೆಯಲ್ಲವೊ9ಮಕ್ಕಳಾಡುತಿರಲು ಮಧ್ಯಸರ್ಪವೆರಡು ಕಾದಿ ಬರಲುದಿಕ್ಕು ತೋರದಂತೆ ಭಯದಿದಿಕ್ಕು ದಿಕ್ಕಿಗೆ ಓಡದಿಹರೆದುಡುಕು ನನ್ನದೆ ದೂರುವಿರೆನ್ನ ದುಡುಕು ನನ್ನದೆ 10ಹರಿಯ ಮಾತುಕೇಳಿಮುದದಿಹರುಷದಿಂದ ನಮಿಸಿ ಕೃಷ್ಣಗೆತ್ವರಿತದಿಂದಲಿ ಒಲಿಯೊ ಮುರಳೀ-ಧರನೆ ಹರುಷದಿಂದ ಕೃಷ್ಣನಮಿಸಿ ಬೇಡುವೆವೊ ಕೃಷ್ಣ ಸ್ಮರಿಸಿ ಪಾಡುವೆವೊ 11ಸರಸವಾಡÀುತಿಹಿರಿ ಎನ್ನಸ್ಮರಣೆಯಿಂದ ತನುವ ಮರೆತುಕ್ಷಮಿಪೆ ನಿಮ್ಮ ಗೃಹಕೆ ತೆರಳಿವನಜಮುಖಿಯರೆಲ್ಲರುತೆರಳಿರೆಂದನು ತರುಣಿಯರೆನ್ನ ಸ್ಮರಿಸಿರೆಂದನು 12ಕರುಣದಿಂದ ಸಲಹುತಿಹೆನುದುರಿತವೆಲ್ಲ ತರಿದು ಮುದದಿಕಮಲನಾಭ ವಿಠ್ಠಲನೆಂದುಕುಣಿದು ಪಾಡಿ ವನಿತೆಯರೆನಲಿದು ಪಾಡಿರೆ ನಾರಿಯರೆಲ್ಲ ಕುಣಿದು ಪಾಡಿರೆ 13
--------------
ನಿಡಗುರುಕಿ ಜೀವೂಬಾಯಿ
ಎಂತು ಶೋಭಿಸುತಿಹಳು ಈ ಕನ್ನಿಕೆಸಂತೋಷದಿಂದಲಿಸುರರುಸ್ತುತಿಸುತಿರಲುಪಮಂಧರಗಿರಿ ತಂದು ಸಿಂಧುವಿನೊಳಗಿಟ್ಟುಚಂದದಿಂ ಮಥಿಸಲಮೃತ ಪುಟ್ಟಲುಬಂದು ದಾನವರ ಪಹರಿಸಬೇಕೆನುತಿರಲುನಿಂದರುಸುರರುಮುಂದೋರದೆ ಚಿಂತಿಸೆಇಂದಿರಾಪತಿ ಇವರ ಭಾವವಕಂಡುಮನದಲಿ ಹರುಷಪಡುತಲಿಬಂದು ಅಸುರರ ಸುರರ ಮನ್ನಿಸಿನಿಂದ ಶ್ರೀ ಗೋವಿಂದ ಮುದದಲಿ 1ಸಾಲಾಗಿ ಕುಳಿತಿರಿ ಮೇಲಾದಮೃತವನ್ನುಲೀಲೆಯಿಂದಲಿ ಬಡಿಸುವೆನೆನ್ನಲುಕೇಳಿಅಸುರರು ಹರುಷತಾಳಿ ಸಂಭ್ರಮದಿಂದಸಾಲಾಗಿ ಕುಳಿತು ಆ ವೇಳೆ ನೋಡುತಲಿರಲುಶ್ರೀ ರಮಣ ಕರದಲ್ಲಿ ಕಲಶವÀಲೀಲೆಯಿಂದಲಿ ಪಿಡಿದು ನಿಲ್ಲಲುತಾಳಿ ಹರುಷವ ದಾನವರು ಸÀು-ಮ್ಮಾನದಿಂದಲಿ ನೋಡÀುತಿಹರು 2ಗಂಗೆಯ ಪಡೆದ ಪಾದಗಳ ಶೃಂಗಾರಅಂದಿಗೆ ಕಿರುಗೆಜ್ಹೆ ಸರಪಣಿಯುಚಂದುಳ್ಳ ಬೆರಳುಗಳಿಗೆ ಪಿಲ್ಲಿ ಕಿರುಪಿಲ್ಲಿ ಕಾ-ಲುಂಗರಗಳನಿಟ್ಟು ರಂಭೆಯಂತ್ಹೊಳೆಯಲುಬಂದಿ ಬಾಪುರಿ ಥಳಥಳಿಸುತಲಿಚಂದದನಾಗಮುರಿಗಿ ತಾಯಿತಸುಂದರಹಸ್ತಕಡಗ ಹಾಸರಇಂದಿರಾಕ್ಷಿ ಕೈ ಬಳೆಗಳ್ಹೊಳೆಯುತ 3ಹಲವು ಸೂರ್ಯರ ಕಾಂತಿ ಹೊಳೆವೊ ಪೀತಾಂಬರಸರಿಗೆ ಅಂಚಿನ ಕುಪ್ಪುಸವನೇ ತೊಟ್ಟುನಡುವಿಗೆ ನವರತ್ನ ಬಿಗಿದ ಪಟ್ಟೆಯನಿಟ್ಟುಸಡಗರದಲಿ ಆಣೆಮುತ್ತಿನ ಸರಗಳುಸರಗಿ ಏಕಾವಳಿಯು ವಜ್ರದಪದಕಗಳು ಥಳಕೆಂಬ ಸರಗಳುಕೊರಳ ಗೆಜ್ಜೆಟ್ಟಿಕೆಯು ಕಂಠಿಯುಮುರಳಿಸರ ಕಠ್ಠಾಣಿವಲಿಯುತ 4ಹೊಳೆವೊಗಲ್ಲಕೆ ಥಳಥಳಿಪ ಅರಿಶಿನಹಚ್ಚಿಹೊಳೆವೊ ಮೀನ್ ಬಾವುಲಿ ಕರ್ಣದಲಿಗಿಳಿಗೆಜ್ಜೆ ಚಳತುಂಬು ಬುಗುಡಿ ಬಾವುಲಿ ಚಂದ್ರಮುರುವುಸರಪಳಿಗಳು ಥಳಥಳ ಹೊಳೆಯಲುಆಣಿಮುತ್ತಿನ ಮುಖುರ ಬೇಸರಿಜಾಣೆ ನಾಶಿಕದಲ್ಲಿ ಹೊಳೆವ ಬು-ಲಾಕುನಿಟ್ಟಿ ಬೆಳಕು ಗಲ್ಲದಮೇಲೆ ಥಳಥಳ ಹೊಳೆವ ಕಾಂಚಿಯು 5ಸಣ್ಣ ಬೈತಲೆ ಬಟ್ಟು ಚಂದ್ರ ಸೂರ್ಯರ ನಿಟ್ಟುಹಿಂದೆ ಜಡೆಬಿಲ್ಲೆ ಗೊಂಡ್ಯಗಳನಿಟ್ಟುಚಂದ್ರ ಸೂರ್ಯರ ಪೋಲ್ವ ಚೌರಿ ರಾಗಟಿ ಜಡೆಬಂಗಾರ ಹೊಳೆಯುತ್ತ ಬಡನಡು ಬಳಕುತ್ತಕಂಗಳ ಕಡೆನೋಟದಿಂದಲಿಭಂಗಪಡಿಸುತ ಅಸುರ ಕೋಟಿಯಮಂದಗಮನದಿ ಅಡಿಯನಿಡುತಲಿಬಂದಳಮೃತದ ಕಲಶ ಪಿಡಿಯುತ 6ಕಂಗಳುಮುಚ್ಚಿ ಕುಳಿತಿರಲು ದಾನವ ಪಂಕ್ತಿಮುಂದೆ ಕಾಲ್ಗೆಜ್ಜೆ ಧ್ವನಿಯ ಮಾಡುತಅಂದಿಗೆ ಸರಪಣಿನಾದ ತುಂಬಲು ಭರದಿಸುಂದರಿ ಬಂದಿಹಳೆÀಂದು ದಾನವರೆಲ್ಲಮಂದಹಾಸದಿ ಮೈಮರೆತು ಮತ್ತೊಂದು ತೋರದೆ ಕಳವಳಿಸುತಲಿರೆಇಂದಿರೇಶನು ದೇವೆತೆಗಳಿಗೆಪೊಂದಿಸಿದ ಅಮೃತವನು ಹರುಷದಿ 7ಕಲಕಲಕೂಗುತ ಕಲಹಕೆನ್ನುತ ಬರೆಬಲವು ಸಾಲದೆ ಹಿಂದಿರುಗಲವರುಸುರರುಪುಷ್ಪದ ಮಳೆಕರೆದರು ದೇವನವರಋಷಿಗಳು ನೆರೆದು ಸ್ತುತಿಸಿ ಕೊಂಡಾಡಲುಪರಮಪುರುಷನೆ ಪುಣ್ಯಚರಿತನೆಗರುಡ ಗಮನನೆ ಉರಗಶಯನನೆಸರಸಿಜಾಕ್ಷನೆ ನಮಿಪೆವೆನ್ನುತಸನಕಾದಿಗಳು ಸಂಸ್ತುತಿಸೆ ದೇವನ 8ಪರಶಿವನಿದ ನೋಡಿ ಪರಿಪರಿ ಪ್ರಾರ್ಥಿಸಿತರುಣಿಯ ರೂಪವ ನೋಡಲನುವಾಗಲುಸರಸಿಜಾಕ್ಷನ ಸ್ತ್ರೀರೂಪ ನೋಡುತಲಿ ಮೈಮರೆದು ಕೈಮುಗಿದು ಕೊಂಡಾಡಿ ಸುತ್ತಿಸಿದನುಮರಳಿ ಭಸ್ಮಾಸುರನ ಭಾಧೆಗೆತರಹರಿಸಿ ಮುಂದೋರದಿರುವಸಮಯದಲಿ ಸ್ತ್ರೀರೂಪ ತಾಳುವತ್ವರದಿ ರಕ್ಷಿಸಿ ಪೊರೆದ ದೇವನು 9ಕಮಲಸಂಭವನಯ್ಯಕಮಲಜಾತೆಯ ಪ್ರಿಯಕಮಲಾಕ್ಷಕಂಸಾರಿಕರುಣಾನಿಧೆಶರಣು ಶರಣೆನ್ನುತ ನಭವ ತುಂಬಲು ಸ್ವರಸುರಗಂಧರ್ವರು ಪಾಡಿಪೊಗಳುತಿಹರೊ ದೇವಕನಕಗರ್ಭನ ಪಿತನೆ ರಕ್ಷಿಸುಕಮಲನಾಭ ವಿಠ್ಠಲನೆ ನಮಿಸುವೆಸವಿನಯದಿ ನಿನ್ನ ಸ್ತುತಿಪ ಭಾಗ್ಯವಕರುಣಿಸೆನಗೆ ಶ್ರೀ ಕರುಣಾನಿಧಿಯೆ 10
--------------
ನಿಡಗುರುಕಿ ಜೀವೂಬಾಯಿ
ಎತ್ತಿಕೊಳ್ಳೆ ಗೋಪೀ ರಂಗನ |ರಚ್ಚೆಮಾಧವರಾಯ ನಿಲುವನಲ್ಲ||ಪ||ಕರ್ಣದ ಮಾಗಾಯಿ ಕದಪಲಿ ಹೊಳೆಯುತ |ಎಣ್ಣೆಮಣಿಯ ಕೊರಳಲಿ ಹುಲಿಯುಗುರು ||ಚಿನ್ನದ ಬಾಯೊಳು ಅಮೃತವ ಸುರಿಯುತ್ತ |ಬೆಣ್ಣೆ-ಹಾಲನುಂಬುವೆನೆಂದು ಬಂದ 1ಅಂಬೆಗಾಲಿಕ್ಕುತ ತುಂಬಿಯೊಲ್ ಮೊರೆಯುತ &mಜಚಿsh; |[ಚೆಂದದ] ಅರಳೆಲೆ ನಲಿದಾಡುತ ||ಬಂದು ಸರಳನಂದದಿ ಬಾಯ ಬಿಡುತ ಮು &mಜಚಿsh; |ಕುಂದನು ಮೊಲೆಯನುಂಬುವೆನೆಂದು ಬಂದ 2ಬಿಗಿದ ಪಟ್ಟೆಯಲಿ ಬಾಯ್‍ತಲೆಯು ಹೊಳೆಯುತಿರೆ |ಚಿಗುಟುತ ಎಡದ ಕೈಯಲಿ ಕುಚವ ||ನಗುತ ನಾಚುತ ಗೋಪಿಯ ಮುಖ ನೋಡುತ |ಮಿಗೆ ನಲಿನಲಿದುಂಡ ಪುರಂದರವಿಠಲ 3
--------------
ಪುರಂದರದಾಸರು
ಎಂಥಾ ಚಲುವ ಶ್ರೀಹರಿಭಕ್ತರೋದ್ಧಾರಿಎಂಥಾ ಚಲುವ ಶ್ರೀಹರಿಪಎಂಥಾ ಚಲುವ ಲಕ್ಷ್ಮೀಕಾಂತ ಶ್ರೀಭೂಸಹಿತಚಿಂತಿತಾರ್ಥವ ನೀವ ಕಂತುಪಿತನುಹರಿಅಪಚರಣದಂದುಗೆ ಗೆಜ್ಜೆಯು ಘಲುಘಲುರೆಂದುಮೆರೆವ ಪೈಜನರುಳಿಯು ಜರದ ಪೀತಾಂಬರವುನಡುವಿನ ಚಲ್ಲಣವು ಸಡಗರದಿಂದ ನಿಂತಮದನಗೋಪಾಲನು ಹೃದಯದಿ ಹಾರವುಕೌಸ್ತುಭಹೊಳೆಯಲು ವಿಧವಿಧಪದಕಗಳಿಂದಲಿ ಶೋಭಿಪಅದ್ಭುತ ಮಹಿಮನು ವಿಧಿಭವವಂದ್ಯನುಸದಮಲಕಾಯನು ಸಚ್ಚಿದಾನಂದನು 1ಕರದಿ ಕಂಕಣ ಭೂಷಣ ಕರುಣದಿ ಸುರರಪೊರೆವ ವೈಭವ ಕಾರಣಕರವತೋರುತ ತನ್ನಚರಣಸೇವೆಯ ಮಾಳ್ಪಪರಮಭಕ್ತರನೆಲ್ಲ ತ್ವರದಿ ಪಾಲಿಪೆನೆಂದುಸುರವರ ವಂದ್ಯನು ಪರಿಪರಿವರಗಳಕರದು ನೀಡುವಸಿರಿಕರಿರಾಜವರದನುಸರಸಿಜನಾಭಸನ್ಮಂಗಳ ಮಹಿಮನುಉರಗಗಿರಿಯ ಶ್ರೀವರಶ್ರೀನಿವಾಸನು2ಪಟ್ಟೆನಾಮವು ಘಣೆಯೊಳುಕಸ್ತೂರಿ ತಿಲಕ ಒಪ್ಪುತಿರೆ ವ್ಯೆಭವದೊಳುಸರ್ಪಶಯನ ಸರ್ವೋತ್ತಮ ಸಿರದೊಳುರತ್ನಕಿರೀಟನಿಟ್ಟು ಅತ್ಯಂತ ಶೋಭಿಸಲುಸುತ್ತಲ ಚಾಮರವೆತ್ತಿ ಬೀಸುತಿರೆನರ್ತನ ಗಾಯನ ವಿಸ್ತರಿಸಲು ಪುರು-ಷೋತ್ತಮ ತಾನಿರ್ಲಿಪ್ತನಾಗಿ ಸರ್ವಕರ್ತೃಕಮಲನಾಭವಿಠ್ಠಲ ಸರ್ವೋತ್ತಮ3
--------------
ನಿಡಗುರುಕಿ ಜೀವೂಬಾಯಿ
ಎನ್ನ ಮನದ ಡೊಂಕ ತಿದ್ದಿ-ಚರಣದಲ್ಲಿ ಸೇರಿಸೋ |ನಿನ್ನ ಸೇವಕನಾದ ಮೇಲೆಇನ್ನು ಸಂಶಯವೇಕೆ ಕೃಷ್ಣ ಪಉದಯವಾದರೆ ಊಟದ ಚಿಂತೆ ಅದರ ಮೇಲೆ ಭೋಗದ ಚಿಂತೆ |ಹದಿನಾಲ್ಕು ಲೋಕಂಗಳನಾಳಬೇಕೆಂಬ ಚಿಂತೆ ||ಇದು ಪುಣ್ಯ ಪಾಪವೆಂದು ಹೃದಯದಲಿ ಭಯವಿಲ್ಲದಲೆ |ಮದ ಮೋಹಿತನಾದೆ ನಿನ್ನ ಪದವ ನಂಬದೆ-ದಯಾಳೊ 1ನೆರೆಮನೆಗಳ ಭಾಗ್ಯವ ನೋಡಿ-ತರಹರಿಸುತ ಅಸೊಯೆಯಿಂದ |ಹರಿಯ ಸ್ಮರಣೆಗೆ ವಿಮುಖನಾದೆ - ನರರಸ್ತುತಿಯ ನಾ ಮಾಡಿದೆ ||ಪರರ ಸತಿಗೆ ಪರರನ್ನಕೆ ತಿರುಗಿ ತಿರುಗಿ ಚಪಲನು ಆದೆ |ಗುರುಹಿರಿಯರ ದೂಷಿಸುತಲಿ ಮರುಳನಾದೆ ದೀನಶರಣ್ಯ 2ಅಗಣಿತಸುಖ ಬಂದರೆ ನಾನು -ಅಗಣಿತದುಃಖಕೆ ಹರಿಯೆನ್ನುವೆನು |ಜಗದೊಳಾವ ಲಾಭವು ಬಂದರು ಧನಿಯು ನಾನೆ ಎಂಬೆ ||ಮಿಗೆ ಹಾನಿಗೆ ಹರಿಯನು ದೂಷಿಸಿನೆಗೆದು ಪತಂಗವು ಕಿಚ್ಚಲಿ ಬೀಳುವ |ಬಗೆ ನಾನಾದೆನುಪುರಂದರವಿಠಲನಖಗರಾಜಸುವಾಹನ ಶ್ರೀ ಕೃಷ್ಣ 3
--------------
ಪುರಂದರದಾಸರು
ಎಲ್ಲಿರುವನೋ ರಂಗನೆಂಬ ಸಂಶಯ ಬೇಡ |ಎಲ್ಲಿ ಭಕುತರು ಕರೆದರಲ್ಲಿ ಬಂದೊದಗುವನು ಪ.ತರಳ ಪ್ರಹ್ಲಾದ ಶ್ರೀಹರಿ ವಿಶ್ವಮಯನೆಂದು |ಬರೆದೋದಲವನ ಪಿತ ಕೋಪದಿಂದ ||ಸ್ಥಿರವಾದೊಡೀ ಕಂಬದಲಿ ತೋರು - ತೋರೆನಲು |ಭರದಿ ಬರಲಾಗ ವೈಕುಂಠವಲ್ಲಿಹುದೊ ? 1ಕುರುಪತಿಯು ದ್ರೌಪದಿಯ ಸೀರೆ ಸೆಳೆಯುತಿರೆ |ತರುಣಿ ಹಾ ಕೃಷ್ಣ ಎಂದೊದರೆಕೇಳಿ ||ಭರದಿಂದಲಕ್ಷಯಾಂಬರವೀಯೆ ಹಸ್ತಿನಾ |ಪುರವು ದ್ವಾರಾವತಿಗೆ ಕೂಗಳತೆಯೆ 2ಕರಿರಾಜನನುನೆಗಳು ನುಂಗುತಿರೆ ಭಯದಿಂದ |ಹರಿಯೆ ಕಾಯೆಂದು ಮೊರೆಯಿಡಲುಕೇಳಿ ||ಕರುಣದಿಂ ಬಂಧನವ ಬಿಡಿಸಲಾ ಗಜರಾಜ - |ನಿರುವ ಸರಸಿಗೆ ಅನಂತಾಸನ ಮುಮ್ಮನೆಯೆ 3ಪಾಪಕರ್ಮವ ಮಾಡಿದಜಮಿಳನ ಯಮಭಟರು ||ಕೋಪದಿಂದಲಿ ಸೆಳೆಯೆ ಭೀತಿಯಿಂದ ||ತಾ ಪುತ್ರನನು ಕರೆಯೆಕೇಳಿ ರಕ್ಷಿಸಿಶ್ವೇತ -ದೀಪವೀ ಧರೆಗೆ ಸಮೀಪವಾಗಿಹುದೆ ? 4ಅಣು - ಮಹತ್ತುಗಳಲ್ಲಿ ಪರಿಪೂರ್ಣನೆಂದೆನಿಸಿ |ಎಣೆಯಿಲ್ಲದ ಮಹಾಗುಣಪೂರ್ಣನು ||ಘನಮಹಿಮನಾದ ಶ್ರೀ ಪುರಂದರವಿಠಲನು |ನೆನೆದವರ ಮನದೊಳಗೆ ಇಹನೆಂಬ ಬಿರುದುಂಟು 5
--------------
ಪುರಂದರದಾಸರು
ಏಕೆ ಚಿಂತಿಪೆ ಬರಿದೆ ನೀ -ವಿಧಿಬರೆದ - |ವಾಕುತಪ್ಪದು ಪಣೆಯೊಳುಪಹುಟ್ಟುವುದಕೆ ಮೊದಲೆ ತಾಯ್ಮೊಲೆಯೊಳು |ಇಟ್ಟಿದ್ದೆಯೊ ಪಾಲನು ||ತೊಟ್ಟಿಲೊಳಿರುವಾಗಲೆ - ಗಳಿಸಿ ತಂ - |ದಿಟ್ಟು ಕೊಂಡುಣುತಿದ್ದೀಯಾ 1ಉರಗವೃಶ್ಚಿಕಪಾವಕ-ಕರಿಸಿಂಹ |ಅರಸು ಹುಲಿ ಚೋರ ಭಯವು ||ಹರಿಯಾಜೆÕಯಿಂದಲ್ಲದೆ - ಇವು ಏಳು - |ಶರಧಿಪೊಕ್ಕರು ಬಿಡವೊ- ಮರುಳೆ2ಇಂತು ಸುಖ - ದುಃಖದೊಳ್ಸಿಲುಕಿ - ಮರುಗಿ ನೀನು - |ಭ್ರಾಂತನಾಗಿ ಕೆಡಬೇಡವೊ ||ಸಂತೋಷದಿಂದ ಅರ್ಚಿಸಿ - ಭಜಿಸೋ ನೀ - |ಸಂತತಪುರಂದರವಿಠಲನ - ಮರುಳೆ3
--------------
ಪುರಂದರದಾಸರು
ಕಣ್ಣಿನೊಳಗೆ ನೋಡೊ ಹರಿಯ - ಒಳ -ಗಣ್ಣಿನಿಂದಲಿ ನೋಡೊ ಮೂಜಗದೊಡೆಯ ಪ.ಆಧಾರ ಮೊದಲಾದ ಆರು - ಚಕ್ರಶೋಧಿಸಿ ಸುಡಬೇಕು ಈ ಕ್ಷಣ ಮೂರು ||ಸಾಧಿಸಿ ಸುಷಮ್ನ ಏರು ಅಲ್ಲಿಭೇದಿಸಿ ನೀ ಪರಬ್ರಹ್ಮನ ಸೇರು 1ಎವೆಹಾಕದೆ ಮೇಲೆನೋಡು - ಮುಂದೆತವಕದಿಂದಲಿ ವಾಯು ಬಂಧನಮಾಡು ||ಸವಿದು ನಾದವ ಪಾನಮಾಡು - ಅಲ್ಲಿನವವಿಧ ಭಕ್ತಿಯಲಿ ನಲಿನಲಿದಾಡು 2ಅಂಡದೊಳಗೆ ಆಡುತಾನೆ -ಭಾನು -ಮಂಡಲ ನಾರಾಯಣನೆಂಬುವನೆ ||ಕುಂಡಲಿತುದಿಯೊಳಿದ್ದಾನೆ - ಶ್ರೀ ಪು -ರಂದರ ವಿಠಲನು ಪಾಲಿಸುತಾನೆ 3
--------------
ಪುರಂದರದಾಸರು
ಕಣ್ಣು ಮುಚ್ಚೆನ್ನಾ ಆಡಿಸೆಸಣ್ಣವರನ್ನು ಹೊರಗಡಗಿಸೆ ಪಗಟ್ಟಿ ಹುಡುಗರು ಅವರೆಲ್ಲಮಟ್ಟ ಮಾಯಾಗಿ ಹೋದರು ||ಥಟ್ಟನೆದ್ದು ಯನ್ನ ಕೈಯವರಮುಟ್ಟಿಸದಿರೆ ಬಿಡೆ ನಿನ್ನ 1ಪಾಯಿಸ ಹೋಳಿಗೆ ಮಾಡಿಬಾಯಿಗೆ ಕೈದೋರೆಗೋಪಿ||ನಾಯೆರುವಿನೆ ನಿನ್ನ ತಲೆಗೆನೀ ಯೆರಕೊಳ್ಳ ಒಲ್ಲೆನೆನ್ನೆ 2ಅಣ್ಣನ ರಂಬಿಸಿ ಕರೆದುಹಣ್ಣುಗಳವಗೆ ಕೊಡಬೇಡೆ ||ಚಿನ್ನದ ಗೊಂಬೆ ಬಾ ಎಂದುಬಣ್ಣ ಬಣ್ಣದಲೆನ್ನ ಕರೆಯ 3ನೀ ಹಾರ ಮಗನೆಂದುಕೇಳಿಮೇದಿನಿಯೊಳು ನಾ ಹೆಚ್ಚೆನ್ನೆ ||ಹೋದಬಾರಿಹೊಟ್ಟಿಗೆಮಾರಿಹೋದಳೂ ನಿಮ್ಮಮ್ಮನೆನೆ 4ಯನಗೆ ಪಾಪ ನೀನಾಗಿತಿನಲಿಕ್ಕಪ್ಪಚ್ಚಿ ಬೇಡೇ ||ಮಣಿಗುಂಡೆನಗೆ ಕೊಡುಯೆಂದುಮುನಸುಗುಟ್ಟೆನ್ನನು ಕಾಡೇ 5ದೃಷ್ಟಿ ತಾಕಿತು ಮಗಗೆಂದುಕಟ್ಟಿಸೆ ಯಂತ್ರ ಇನ್ನೊಮ್ಮೆ ||ಕೊಟ್ಟು ಅಮ್ಮಿಯ ರಂಬಿಸಿತೊಟ್ಟಿಲೊಳಗಿಟ್ಟು ತೂಗೇ 6ಏನು ಪುಣ್ಯ ಮಾಡಿದೆನೋಕ್ಷೋಣಿಗೆ ಹತಾರ್ಥವಾಗಿ ||ಪ್ರಾಣೇಶ ವಿಠಲನು ನಿನ್ನತಾನೇ ಕೊಟ್ಟನು ಯನಗೆನ್ನ 7
--------------
ಪ್ರಾಣೇಶದಾಸರು
ಕಾಯಲಾರೆನು ಕೃಷ್ಣಕಂಡವರ ಬಾಗಿಲನು |ನಾಯಿ ಕುನ್ನಿಗಳಂತೆ ಪರರ ಪೀಡಿಸುತೆ ಪಉದಯಕಾಲದಲೆದ್ದು ಸಂಧ್ಯಾವಿಧಿಯ ಬಿಟ್ಟು |ಪದುಮನಾಭನ ಪಾದಸ್ಮರಣೆ ಮೊದಲಿಲ್ಲದೆ ||ಮುದದಿ ನಿನ್ನರ್ಚಿಸದೆ ನರರ ಸದವನ ಪೊಕ್ಕು |ಒದಗಿ ಸೇವೆಯ ಮಾಡಿಅವರಬಾಗಿಲನು1ಕಲ್ಲಕರಗಿಸಬಹುದು ಹುರಿಗಡಲೆಯನು ಅರೆದು |ತೈಲವನು ತೆಗೆದಾದರುಣಲು ಬಹುದು ||ಬಲ್ಲಿದವರಾ ಮನಸು ಮೆಚ್ಚಿಸಲರಿಯೆನೈ |ಹಲ್ಲು ಕಿರಿಯುತಲಿ ಹಂಬಲಿಸಿ ಬಾಯ್ಬಿಡುತ 2ಇಂತು ನಾನಾ ಚಿಂತೆಯಲಿ ನಿನ್ನ ನೆನೆಯದೆ |ಭ್ರಾಂತಿಯೆಂತೆಂಬ ಹೆಬ್ಬಲೆಯೊಳು ಸಿಲುಕಿ |ಅಂತ್ಯವ ನಾ ಕಾಣೆ ಆದರಿಸುವರಿಲ್ಲ |ಚಿಂತೆಯ ಬಿಡಿಸಯ್ಯಪುರಂದರವಿಠಲ3
--------------
ಪುರಂದರದಾಸರು
ಕಾಳಿಯಮರ್ದನ ರಂಗಗೆ- ಹೇಳೆ ಗೋಪಮ್ಮ ಬುದ್ಧಿ |ಕೇಳಲೊಲ್ಲನು ಎನ್ನ ಮಾತನು ಪದಿಟ್ಟ ನೀರೊಳು ಕಣ್ಣ ಮುಚ್ಚನೆ-ಹೋಗಿ |ಬೆಟ್ಟಕೆ ಬೆನ್ನಾತು ನಿಂತನೆ ||ಸಿಟ್ಟಿಲಿ ಕೋರೆದಾಡೆ ತಿಂದನೆ-ಅಹ |ಗಟ್ಟಿ ಉಕ್ಕಿನ ಕಂಬ ಒಡೆದು ಬಂದನೆ 1ಮೂರಡಿ ಭೂಮಿಯ ಬೇಡಿದನೆ-ನೃಪರ |ಬೇರನಳಿಯೆ ಕೊಡಲಿ ಪಿಡಿದನೆ ||ನಾರಮಡಿಯನುಟ್ಟು ಬಂದನೆ-ಅಹ |ಚೋರತನದಿ ಪಾಲ್ಬೆಣ್ಣೆಯ ತಿಂದನೆ 2ಬತ್ತಲೆ ನಾರಿಯರನಪ್ಪಿದ-ಹೋಗಿ ||ಉತ್ತಮಾಶ್ವವನು ಹತ್ತಿದ ||ಹತ್ತವತಾರವ ತಾಳಿದ-ನಮ್ಮ |ಭಕ್ತವತ್ಸಲ ಸ್ವಾಮಿ ಪುರಂದರವಿಠಲನು 3
--------------
ಪುರಂದರದಾಸರು