ಒಟ್ಟು 1888 ಕಡೆಗಳಲ್ಲಿ , 109 ದಾಸರು , 1339 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ದಾಸನಾದಮೇಲಿ ನಿನಗಾ ಯಾಸವ್ಯಾಕೊ ಮರುಳೆ ಪ ಮೋಸಪಾಶಗಳ ನಾಶಮಾಡುವಂಥ ದಾಸರ ಪ್ರಾಣ ಲಕುಮೀಶನ ಚರಣಅ.ಪ ಚಿಂತೆಗೈವುದ್ಯಾಕೊ ಹಲವು ಭ್ರಾಂತಿಗಳಿನ್ಯಾಕೊ ಕಂತುಜನಕ ಅಂತರಂಗ ನಿ ಪಾದ 1 ಮಿಡುಕುವುದಿನ್ಯಾಕೊ ನಿನಗೆ ಬಡತನಗೊಡವ್ಯಾಕೊ ಬಡವರ ಭಾಗ್ಯನೆಂದು ದೃಢದಿ ಪಾಡ್ವರ ಬೆಂ ಪಾದ 2 ಹಾರೈಸುವುದ್ಯಾಕೋ ನೀ ಬಲು ಘೋರಬಡುವುದ್ಯಾಕೊ ಬಾರಿಬಾರಿಗೆ ಸೇರಿ ಭಜಿಪರ ಭಾರಹೊತ್ತು ಕಾಯ್ವ ಧೀರ ಶ್ರೀರಾಮಪಾದ 3
--------------
ರಾಮದಾಸರು
ದಾಸರ ಸಖ ಮಾಡಂದೆ ಎನ್ನ ಧ್ಯಾಸದಿರಗಲದೆ ಶ್ರೀಹರಿ ತಂದೆ ಪ ಕನಕರಾಯನು ನಿಜದಾಸ ನಿನ್ನ ಘನತರ ಪ್ರಸನ್ನತೆ ಪಡೆದನುಮೇಷ ಅನುದಿನ ನಿಮ್ಮಯ ಘನಮಹಿಮೆಯನು ತೋರಿ ಮುನಿವ್ಯಾಸರಾಯರ ಮನವ ತಣಿಸಿದಂಥ 1 ಘನ ಸತ್ಯ ಕಬೀರದಾಸ ತನ್ನ ತನುಮನಧನವನ್ನು ನಿನಗರ್ಪಿಸೀತ ವನಿತೆಯನೊತ್ತಿಟ್ಟು ತನುಜಾತನನು ಕೊಂದು ಉಣಿಸಿ ಸಂತರಿಂ ಸುತನ ಪ್ರಾಣವ ಪಡೆದಂಥ 2 ವಾಸನಳಿದು ಪುರಂದಾಸ ತನ್ನ ನಾಶಬುದ್ಧಿಗೆ ನಾಚಿ ನೀಗಿ ಮನದಾಸೆ ಸೋಸಿಲಿಂ ತವಪಾದಧ್ಯಾಸ ಬಲಿಸಿ ಜಗದೀಶ ಹೇಸದೆ ನಿಮ್ಮನು ಗಿಂಡಿಲ್ಹೊಡೆದಂಥ 3 ವರನಾಮದೇವ ನಿಜದಾಸ ತನ್ನ ಪರಮಸಂತರಿಗೆಲ್ಲ ಪಾಲಿಸಿ ಭಾಷ ಸಮ ಗೌಪ್ಯದಿಂ ಪಂಪಾಪುರಿಗೈದಿರಲು ನಿನ್ನ ತಿರುಗಿ ಕರೆದೊಯ್ದು ಇರವ ಪೂರೈಸಿದಂಥ 4 ಬಲ್ಲಿದ ತುಕಾರಾಮದಾಸ ಬಲು ಕ್ಷುಲ್ಲಕರುಪಟಳ ಸಹಿಸಿ ಮನದಕ್ಲೇಶ ಎಲ್ಲವ ನೀಗಿ ಹರಿ ಪುಲ್ಲನಾಭನ ಪಾದ ದಲ್ಲೆ ಮನ ನಿಲ್ಲಿಸಿ ಉಲ್ಲಾಸದಿರುವಂಥ 5 ಬಗೆಯ ತಿಳಿದು ಜಗನ್ನಾಥ ನಿಮ್ಮ ಸುಗುಣದರಿದು ವ್ಯಾಧಿ ಕಳೆದುಕೊಂಡು ಪ್ರಮಥ ನಿಗಮಗೋಚರ ನಿನ್ನ ಬಗೆಬಗೆ ಪೊಗಳುತ ಜಗದಮಾಯವ ಗೆಲಿದು ಸೊಗಸಿನಿಂ ನಲಿವಂಥ 6 ಉದಧಿಜಿಗಿದ ಹನುಮಂತ ಮಹ ಪದುಮಾಕ್ಷಿಯಳ ಕಂಡು ನಮಿಸಿದ ಬಲವಂತ ಸದಮಲಾಂಗಿಗೆ ತನ್ನ ಹೃದಯಸೀಳಿದ್ಹಟದಿಂ ಪಾದ ತೋರಿಸಿದಂಥ 7
--------------
ರಾಮದಾಸರು
ದಾಸರಾಯರಾ ಚರಣಕಮಲ ಭಜಿಸೋ |ದುರ್ವಿಷಯವ ತ್ಯಜಿಸೋ ||ಶ್ರೀಶ ಭಜಕ ಗುರು ಪ್ರಾಣೇಶದಾಸಾರ್ಯ |ಹರಿದಾಸ ವರ್ಯಾ ಪ ಸದ್ವೈಷ್ಣವ ಅಧ್ಯಕ್ಷರೆಂದೆನಿಪರೊ |ಕರ್ಮಠರೆನಿಪರೋ |ಮಧ್ವಮತ ಪ್ರವರ್ತಕರೆನಿಪರೋ |ಜ್ಞಾನಿಗಳೆನಿಪರೊ ||ಪದ್ಧತಿ ಪೂರ್ವಕ ಕವನವ ಪೇಳುವರೊ |ಹರಿ ಪರನೆಂಬುವರೊ |ಶುದ್ಧಾತ್ಮರಿಗತಿ ಪ್ರಿಯರೆಂದೆನಿಸುವರೋ |ಸತ್ಕಥಾಲಾಪರೋ 1 ಕಾಮಕ್ರೋಧ ಮದಮತ್ಸರವನು ಗೆಲಿದೂ |ತಾಮಸರನು ಹಳಿದೂ |ನೇಮದಿಂದ ಯಮನಿಯಮಗಳನು ವಹಿಸೀ |ಇಂದ್ರಿಯಗಳ ಜೈಸೀ |ತಾಮುದದಿಂದಲಿ ಹರಿಗುಣ ಕೀರ್ತನೆಯಾ |ಮಾಡುತ ನರ್ತನೆಯಾ ||ಪ್ರೇಮದಿಂದ ಮಾಡಿ ದೇಶದಲ್ಲಿ ಮೆರೆದಾ |ನಾಮ ಸುಧೆಯನ್ನೆರದಾ 2 ಏಸು ಪೇಳಲಿ ಇವರ ಚರಿತೆಯನ್ನು |ಆ ಪಾರವು ಇನ್ನೂ |ಸೋಸಿನೋಡಲು ಎನಗೆ ವಶವಲ್ಲಾ |ಇದು ಪುಸಿಯೂ ಅಲ್ಲಾ ||ಮೀಸಲ ಮನದಲಿ ತುತಿಸಲು ಸಂತಾಪಾ |ಪೋಪದು ನಿರ್ಲೇಪಾ |ಶ್ರೀಶ ಪ್ರಾಣೇಶ ವಿಠಲ ತಾ ಬಲ್ಲಾ |ವಲಿದಿಹನಲ್ಲಾ 3
--------------
ಶ್ರೀಶಪ್ರಾಣೇಶವಿಠಲರು
ದಾಸರಾಯಾ ತಂದೇ ಮುದ್ದು ಮೋಹನ | ದಾಸರಾಯ ಪಶೇಷನ ಸಮ ನೀ ದಾಸರ ಪಾಲಿಸೆಭಾಸುರ ಕರಿಗಿರಿ ವಾಸಿಸಿದೆ ನೀ ಅ.ಪ. ಕರಿಗಿರಿ ಗುಹೆಯಲಿ ಎರಡೈದ್ವತ್ಸರವರ ತಪ ಗೈದ ಪರೋಕ್ಷವ ಪಡದೇ 1 ಪಾಪಿಗಳುಸುರುವ ತಾಪದ ವಚನಕೆಕೋಪಿಸದಲೆ ನೀ ಪಾಲಿಸುವೀಯಾ 2 ಇಂದಿಗೆ ಸಂದವು ವಿಂಶದ್ವತ್ಸರಕುಂದದೆ ಸಾಕಿದೆ ಪರಮಾರ್ಥೇಂದುವ 3 ವತ್ಸರ ವದ್ಯ ಸುಫಾಲ್ಗುಣ ಪಂಚಮಿಯಲಿ ಮಾರುತಿಯನು ಸ್ಥಾಪಿಸಿದೇ 4 ಭಾರತೀಶ ಮುಖ್ಯ ಪ್ರಾಣಾಂತರ್ಗತಗುರು ಗೋವಿಂದ ವಿಠ್ಠಲ ಪರನೆಂದು ಸಾರಿದೆ 5
--------------
ಗುರುಗೋವಿಂದವಿಠಲರು
ದಾಸವೃಂದ ಪೋಷಿಸೆನ್ನ ಜೀಯ ಶ್ರೀ ಪ್ರಾಣೇಶದಾಸರಾಯ ಪ ಭೂಸುರ ಸೇವಿತ | ಭಾಸುರ ಮಹಿಮ ಉ ದಾಶೀನ ಮಾಡದೆ | ದೋಷಗಳೆಣಿಸದೆ ಅ.ಪ ಪದುಮಸಂಭವ ಕುಲದಿ ಜನಿಸುತ ವಿದುರಾಗ್ರಜ ಜಗದಿ | ಯದುಪತಿ ಸುಕಥೆಯ ವಿಧ ವಿಧದಿ ಬೋಧಿಸಿ ಮದಡರುದ್ಧರಿಸಿದ | ಸದಮಲ ಹೃದಯ 1 ನತಜನ ಸುರತರುವೆನಿನ್ನನು ತುತಿಸಿಲೆನಗೊಶವೆ | ಸತತದಿ ಸೇವಿಸಿ | ಯತಿ ವರದೇಂದ್ರರ ಹಿತದಲಿ ಪಡೆದ ಪ್ರತಿ ಪ್ರಭಾಕರ 2 ತರತಮ ಭೇದವನು | ಶ್ರೀವರ ಹರಿದಿನ ಮಹಿಮೆಯನು ಸರಳಕನ್ನಡದಿ ವಿರಚಿಸಿ ಕವನವ ನೊರೆದು ಸಜ್ಜನರ ಪೊರೆವ ಮಹಾತ್ಮಾ 3 ವಾತಜಾತ ಸುಮತ ಸಾಗರ ಪೋತನೊಳೀತರ | ಯಾತಕೆ ನಿರ್ದಯ ನೀತವಕದಿ ಸಂಪ್ರೀತಿಯಿಂದೊಲಿದು 4 ಧಾಮರ ಸುವಿಧೇನು ಶಾಮಸುಂದರೆನ | ನಾಮನೆನೆವ ಸುಖ ಯಾಮ ಯಾಮಕೀಪಾಮರಗೀಯುತ 5
--------------
ಶಾಮಸುಂದರ ವಿಠಲ
ದಿಟ್ಟ ಮುಖ್ಯಪ್ರಾಣನೆ ಜಗಜಟ್ಟಿ ಬಾ ಸುತ್ರಾಣನೆ ಶ್ರೇಷ್ಠದನುಜಘರಟ್ಟ ಸುಗುಣವಿಶಿಷ್ಟ ಭಕ್ತಶಿಖಾಮಣಿ ಪ. ವಾಯುಪುತ್ರ ವಿಚಿತ್ರ ಬಲಿಸುರರಾಯರಾಯರ ಗಂಡನೆ ಪ್ರೀಯರಾಮಪದಾಬ್ಜಮಧುಕರ ಮಾಯಿಕದನಪ್ರಚಂಡನೆ 1 ಶ್ರೀವರೋತ್ತಮ ಹನುಮ ಭೀಮಕೃಪಾವಲಂಬ ಮಹೋಜನೆ ಪಾವಮಾನಿ ಪರೇಶ ಪದ್ಮಜ ಭಾವಿ ಯತಿಕುಲರಾಜನೆ 2 ಶೂರಾಗ್ರಣಿ ಸುಗುಣಿ ಲಕ್ಷುಮಿನಾರಾಯಣದಾಸನೆ ಭಾರತೀವದನಾರವಿಂದಕೆ ಸೂರ ನಿತ್ಯವಿಲಾಸನೆ 3
--------------
ತುಪಾಕಿ ವೆಂಕಟರಮಣಾಚಾರ್ಯ
ದೀನ ಪರಿವಾರ ಪಾಹಿ ದಾತಾರ ಮಾಂ ದೇಹಿಮೇ ಚರಣಸೇವಾಂ ಪ ಬೃಂದಾವನಶೈಲವಾಸ ಪರಮಕೃಪಾಕರ ಪಾಪನಾಶ ಸುಧೀಂದ್ರ ವಿಭೂಷ ಹೃದಯೋಲ್ಲಾಸ ಅ.ಪ ಸರ್ವೇಶ ವೆಂಕಟೇಶ ಗುರುವರ ಸುಖಧಾಮ ಸುರರಂಜನ ಅಖಿಲ ಬೃಂದಾಳಿಭೀಮ ಶ್ರೀರಾಮ ಪರಿಭಾಷಾ ಮನಿವೇಶ ಜಿತಸೋಮ 1 ಪ್ರಾಣೇಶಸುತ ಭಜನ ಸತತ ವಿರಾಜ ಪರಿ ಪೂರ್ಣದರ್ಶನ ನಿರಂತರದಾಯಕ ಮುನಿಪುಂಗವ ಹರಿಣ ಸಾರಾಂಗ 2 ಮಂಗಳ ಚರಣ ತುರಂಗ ಗಂಗಾಮೃತ ಪೂರ್ಣತೀರ್ಥ [ತುಂಗಾತೀರ ನಿವಾಸಿನೀಂ] ಮಾಂಗಿರಿರಂಗ ಸಂಪ್ರೀತ ಮಾಂ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ದೀನಪಾಲನ ನಾರಿಮಾನರಕ್ಷಣ ಸಿರಿ ಪ್ರಾಣರಮಣ ಹರಿ ನಾರಾಯಣ ಪ ಸೋಮಕಾಸುರಹರ ಕಾಮಿತ ಪರಿಹರ ಭೂಮಿಜೆಜನಕಜಯ ಜನಾರ್ದನ ಸ್ವಾಮಿ ಗೋವಿಂದ ಮೇಘಶ್ಯಾಮ ಮುಕ್ಕುಂದ ಭಕ್ತ ಪ್ರೇಮ ಆನಂದ ಹರಿ ನಾರಾಯಣ 1 ಪಾಷಾಣಪಾವನ ದೋಷನಿವಾರಣ ನಾಶರಹಿತ ಸುಪ್ರಕಾಶನೆ ಶೇಷಶಯನ ಗಿರಿವಾಸ ದಾಸರ ಪ್ರಾಣೇಶ ಕೇಶವ ಹರಿ ನಾರಾಯಣ 2 ವಾರಿಧಿಮಥನ ನಾರದವಂದನ ಕಾರುಣ್ಯನಿಧಿ ಕರುಣಾಂತರ್ಗತ ನಾರಸಿಂಹ ದಿವ್ಯಾಪಾರಮಹಿಮ ಸುರ ಘೋರನಿವಾರ ಹರಿ ನಾರಾಯಣ 3 ಶಾಂತ ಶಾಂತಾಕಾರ ಶಾಂತಜನಾಧಾರ ಶಾಂತಿ ಸದ್ಗುಣಧಾಮ ಶುಕ್ಲಾಂಬರ ಶಾಂತಮೂರುತಿ ಭೂಕಾಂತ ಪರಮವೇ ದಾಂತಾತೀತ ಹರಿ ನಾರಾಯಣ 4 ನಾಥ ಜಾನಕೀಪ್ರಾಣ ಭೂತಳಪಾವನ ದಾಥ ಜಗನ್ನಾಥ ವಿಶ್ವಾಂಬರ ಪಾತಕಹರ ವಿಧಿತಾತನೆ ನಿಜಸುಖ ದಾತ ಶ್ರೀರಾಮ ಹರಿ ನಾರಾಯಣ 5
--------------
ರಾಮದಾಸರು
ದೀನಬಂಧು ನೀ ದಯಾಸಿಂಧು ಪ ಆಪನ್ನ ಜನರನು ಮನ್ನಿಸಿ ಸಲಹಿ ಪ್ರಸನ್ನನಾಗುವೆ 1 ಕಂಜಲೋಚನ ನಿನಗಂಜಲಿ ಮುಗಿಯುವೆ ಕುಂಜರ ವರದ ಭುಜಂಗ ಶಯನ 2 ಘನ್ನಮಹಿಮ ಪ್ರಾಣನಾಥ ವಿಠ್ಠಲರಾಯ ಮನ್ನಿಸಿ ಪ್ರಸನ್ನನಾಗಿ ಎನ್ನಸಲಹೋ ಸ್ವಾಮಿ 3
--------------
ಬಾಗೇಪಲ್ಲಿ ಶೇಷದಾಸರು
ದೀನರಿಗೆಲ್ಲಾ ಬಂಧು ಕೇಶವ ತಂದೆ ದೀನರಿಗೆಲ್ಲಾ ಬಂಧು ಪ ದಾನವಾಂತಕÀ ನಿನ್ನ ನೇಮಾನುಯಾಯಿಗೆ ಮಾನವ ಕೊಟ್ಟು ರಕ್ಷಿಪ ಬಂಧು ನೀನೇ ಅ ದೀನ ದ್ರೌಪದಿ ದೇವಿಗೇ ಅಕ್ಷಯವಿತ್ತು ಮಾನವ ಕಾಯ್ದೆ ನೀನೇ ಪ್ರಾಣವು ಹಾರುವಾಗ ಜಮಿಳ ಸ್ಮರಿಸಲು ಯೇನನ ಸಲಹೆ ಮೋಕ್ಷವನಿತ್ತ ಹರಿಯೇ 1 ದೀನ ದೇವಿಕಿ ದೇವಿಯ ಗರ್ಭದಿ ಬಂದು ದೈನ್ಯಳ ಸಲಹಿತಿದೆಯೋ ಹೀನ ವಾಲ್ಮೀಕನು ನಾಮವ ಭಜಿಸಲು ಹೀನನಿಗೊಲಿದು ಬುದ್ಧಿಯನಿತ್ತ ಹರಿಯೇ 2 ಸನ್ನುತ ನಮಿಸುವಂಥ ದಾಸರಿಗೆಲ್ಲ ಸನ್ನುತ ಸ್ಮರಿಸುವಂಥ ನಿತ್ಯ ಭಜಿಪ ದೀನರಿಗೆಲ್ಲ ಚನ್ನಕೇಶವ ಸ್ವಾಮಿ ಪೊರೆವಂಥ ಬಂಧೂ 3
--------------
ಕರ್ಕಿ ಕೇಶವದಾಸ
ದುಷ್ಟ ರಕ್ಕಸರನು ಜಯಿಸಿದ ಪರಮವಾಯುಸುತಗೆ ಮಂಗಳಂ ಪ್ರಾಣೇಶಗೆ ಮಂಗಳಂ ಪ ಬೆಟ್ಟ ಪುಚ್ಛದಿ ತಂದಿಟ್ಟು ಸಂಜೀವನ ಕೊಟ್ಟ ಶ್ರೀ ರಾಮನ ಭಕ್ತನಿಗೆ ಮಂಗಳಂ 1 ಸಿಟ್ಟಿಲಿ ದುಶ್ಶಾಸನನ ಹೊಟ್ಟೆ ಬಿಗಿದು ಇಷ್ಟ ಪೂರೈಸಿದ ಕೃಷ್ಣನ ದಾಸಗೆ ಮಂಗಳಂ 2 ಹನುಮೇಶ ವಿಠಲನ ಪ್ರೀತಿಪಾತ್ರನೆಂದೆನಿಸಿದ ಮುನಿವರ ಗುರು ಮಧ್ವರಾಯಗೆ ಮಂಗಳಂ 3
--------------
ಹನುಮೇಶವಿಠಲ
ದೂರಮಾಡು ದೂರಮಾಡು ದುರ್ಜನ ನೆರೆಯ ಸಾರಸಾಕ್ಷನೆ ಬೇಗ ದುಷ್ಟಸಂಗತಿಯ ಪ ಸೇಂದಿ ಸೆರೆ ಕುಡಿದು ಮನಬಂದಂತೆ ಕುಣದಾಡಿ ನಿಂದಿಸಿ ಕಂಡವರಿಂ ತಿಂದು ಲತ್ತೆಯನು ಮಂದಿಯೋಳ್ಮುಖದೋರ್ವ ಹಂದಿಮನುಜರ ದರ್ಶ ನೆಂದೆಂದು ಬೇಡೆನಗೆ ಮಂದರಾದ್ರಿನಿಲಯ 1 ನೂತನದ ಮಾತಾಡಿ ಖ್ಯಾತಿಯಿಂ ತೋರ್ಪಡಿಸಿ ಮಾತುಮಾತಿಗೆ ವಂಚಿಸಾತುರಕೆ ಪರರ ಘಾತಗೈಯುವ ಮಹಪಾತಕರ ಸಂಗ ಮಮ ದಾತ ಜಗನ್ನಾಥ 2 ಧ್ಯಾನದಾಸರ ಕಂಡು ಜ್ಞಾನವಿಲ್ಲದೆ ತುಸು ಹೀನಮಾತುಗಳಾಡಿ ಏನುಕಾಣದಲೆ ಶ್ವಾನನಂದದಿ ಚರಿಪ ಮಾನಹೀನರ ನೆರಳು ಏನಿರಲುಬೇಡ ಮಮಪ್ರಾಣ ಶ್ರೀರಾಮ 3
--------------
ರಾಮದಾಸರು
ದೇವ ಬಂದ ದೇವಕಿ ಕಂದ ಧ್ರುವ ದೇವ ಬಂದ ದೇವತಿಗಳ ಪ್ರಿಯ ಭುವನತ್ರಯಕಾಗಿಹ್ಯಾಶ್ರಯ 1 ಮಾಧವ ಮುರಾರಿ ಸಾಮಜ ವರದ ಸದಾ ಸಹಕಾರಿ 2 ಉರಗ ಶಯನ ಹರಿಕರುಣಾನಂz ಗರಡುವಾಹನ ಗೋಪಾಲ ಗೋವಿಂದ 3 ಸರ್ವಾನಂದ ಶ್ರೀ ಹರಿ ಸಿರಿಲೋಲ ಸಾರ್ವಭೌಮ ಸದಾ ಕೃಪಾಲ 4 ಲೇಸಿಲೆ ಹೊರೆವ ಮಹಿಪತಿ ಪ್ರಾಣೇಶ ಭಾಸ್ಕರ ಕೋಟಿ ಸುತೇಜ ಪ್ರಕಾಶ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ದೇವ ಹನುಮಶೆಟ್ಟ | ರಾಯ ಜಗಜಟ್ಟಿ ಪರಮೇಷ್ಟಿ ಪ ಪಾವನಚರಿತ ಸಂಜೀವನ ಗಿರಿಧರ ಪಾವಮಾನಿ ಕರುಣಾವಲೋಕನದಿ ನೀ ನಲಿಯುತಲಿ ಸದಾವಕಾಲ ತವ ತಾವರೆ ಪದಯುಗ ಸೇವೆಯ ಕರುಣಿಸೊ ಅ.ಪ ವಾನರ ಕುಲನಾಯಕ | ಜಾನಕಿಶೋಕ ನಿವಾರಕ ಕಾನನ ತೃಣಪಾವಕ | ಹೀನ ಕೌರÀವ ನಾಶಕ | ಸನ್ಮಾನಿ ತಿಲಕ ಆನಂದತೀರ್ಥನಾಮಕ | ಕ್ಷೋಣಿಯೊಳಗೆ ಎಣೆ | ಗಾಣಿ ಪಿಡಿದು ಪೊರೆ ಗೀರ್ವಾಣ ವಿನುತ ಜಗತ್ಪ್ರಾಣ ಕಲ್ಯಾಣ ಮೂರುತಿ 1 ಮರುತನಂದನ ಹನುಮ | ಪುರಹರರೋಮ ಪರಮಪುರುಷ ಶ್ರೀ ಭೀಮಾ ಕರುಣಸಾಗರ ಜಿತಕಾಮ | ಸದ್ಗುಣ ಭೌಮ ಪರವಾದಿ ಮತವ ನಿರ್ನಾಮ ಗರಿಸುತ ಪಾಲಕ ಜರಿಜ ವಿನಾಶಕ || ದುರಿತ ವಿಮೋಚಕ ಸುರತರು ಭಾರತಿವರ ಮರಿಯದೆ ಪಾಲಿಸೊ ನಿರುತ ಮಮ ಚರಿತ 2 ಧಿಟ್ಟ ಶಾಮಸುಂದರ ವಿಠಲ ಕುವರ ದುಷ್ಟರಾವಣ ಮದಹರ ಜಿಷ್ಣುಪೂರ್ವಜ ವೃಕೋದರ | ರಣರಂಗಶೂರ ಶಿಷ್ಟ ಜನರುದ್ಧಾರ | ನಿಷ್ಟೆಯಿಂದ ಮನಮುಟ್ಟಿ ನಿನ್ನಪದ ಥಟ್ಟನೆ ಪಾಡುವ ಶ್ರೇಷ್ಠ ಸುಜನರೋಳ್ | ಇಟ್ಟು ಸಲಹೊ ಸದಾ ಸೃಷ್ಟಿಮಂಡಲದಿ | ಪುಟ್ಟಗ್ರಾಮ ಬಲ್ಲಟಿಗಿವಾಸ 3
--------------
ಶಾಮಸುಂದರ ವಿಠಲ
ದೇವ-ದೇವತೆಗಳ ಸ್ತುತಿ ಶ್ರೀ ಲಕ್ಷ್ಮೀ ಸ್ತುತಿ 3 ನೀನನ್ನ ಹೇಳಬಾರದೇನ ತಾಯಿ ನೀನನ್ನ ವಾನರ ವಂದಿತ ಶ್ರೀನಿವಾಸಗೆ ಬುದ್ಧಿ ಪ ಶ್ರೀನಿಧಿ ಪರನೆಂದು ನಂಬಿ ಬಂದ ಬಡ ಪ್ರಾಣಿಯ ಪೊರೆಯೆಂದು ಜಾನಕಿ ದೇವಿಯೆ 1 ಕರ ಪಿಡಿವೆನೆಂಬೊ ಘನಾ ಬಿರುದು ಉಳಿಸಿಕೊ ಎಂದ್ಹರುಷದಿ ಸಿರಿದೇವಿ 2 ಉರಗಶಾಯಿ ಶಿರಿಗೋವಿಂದ ವಿಠಲ ತುರಗಗ್ರೀವ ನರಹರಿಗೆ ತ್ವರಿತದಲಿ 3
--------------
ಅಸ್ಕಿಹಾಳ ಗೋವಿಂದ