ಒಟ್ಟು 1297 ಕಡೆಗಳಲ್ಲಿ , 106 ದಾಸರು , 1184 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ದೇವಾ ಬಾರಯ್ಯಾ ವೈಭವದಿ ರಥವನೇರಿ ಸೇವಿಸುವೆನು ಮಧ್ಭಾವದಿ ನೆಲಸೆಂದು ಪಾವನ ಮಣಿಪುರ ಠಾವಿನೊಳಿಹ ಭೂದೇವ ವರ್ಯ ಸಂಶೇವಿತ ಕೇಶವ ಪ ದೇವಗಂಗೆಯಪೆತ್ತ ಪಾವನಗಾತ್ರಧ್ರುವ ಭೂವರೋÀಪಾಸಿತನಾಗಿ ಈ ವಸುಧಿಗೆ ಬಂದು ಪಾವಮಾನ ಶಾಸ್ತ್ರದಿ ಕೋವಿದಯತಿ ವರ ಶ್ರೀ ವಿದ್ಯಾನಿಧಿ ತೀರ್ಥ ಸೇವಿತ ಸಂಸ್ಥಾಪಿತ ಸೇವಕ ಜನ ಸಂಭಾವಿತ ಕಾಮಿತ ವೀವ ಕಾವ ಸದಶಾವತಾರ ನಮೋ ಶ್ರಿವಿರಂಚಿಮುಖ ದೇವನ ಮಿತ ಕಂಚೀವರದನೆ ಪೊರೆ ಶ್ರೀ ವರಕೇಶವ 1 ಕಡು ಶೋಭಿಸುವ ಬಿಳಿಗೊಡೆ ಚಾಮರಾದಿಗಳ ಪಿಡಿದು ಶೇವಿಪ ಜನರೆಡಬಲದಿ ಬರೆ ಸುರರು ಪಂಥsÀವಿಡಿದು ವೇದಪಠಣ ಬಿಡದೆ ಮಾಡುತ ಬರೆ ನುಡಿವ ವಾದ್ಯಗಳಿಂದ ಸಡಗರದಲಿ ದ್ವಿಜಮಡದಿಯರಾರುತಿ ಪಿಡಿದು ಬೆಳಗುತಿರೆ ಕಡು ವೈಭವದಲಿ ಅಡಿಗೆರಗುವೆ ಪಾಲ್ಗಡಲ ಶಯನ ಮೂ- ರಡಿ ರೂಪನೆ ಜಗದೊಡೆಯ ಕೇಶವ 2 ನಂದ ತೀರ್ಥರ ಮತ ಸಿಂಧುವಿಗೆ ಪೂರ್ಣ ಚಂದ್ರರೆನಿಪಯತೀಂದ್ರ ಸತ್ಯ ಪ್ರಮೋದ ರಿಂದ ಪೂಜಿತ ಪದ ದ್ವಂದ್ವ ಮಧ್ಯದೊಳಿಹ ಮಂದಾಕಿನಿಗೆ ಪಿತನೆಂದು ತೋರಿಸಿದಂಥ ಇಂದಿರೆಯರಸನೆ ಮಂದರಧರ ಗೋ ವಿಂದ ಪಾಹಿ ಮುಕುಂದನೆ ಬಾಬಾ- ರೆಂದು ಕರೆವ ದ್ವಿಜ ವೃಂದಮಧ್ಯದಲಿ ಶ್ಯಂದನ ವೇರಿದ ಸುಂದರ ಕೇಶವ 3 ಅಂಬುಜನಾಭನೆ ನಿತಂಬದಿ ಪೊಳೆವ ಪೀ- ತಾಂಬರ ಧೃತ ಶಾತಕುಂಭ ಮಕುಟವದ- ನಾಂಬೋಜವನು ತೋರೋಕುಂಭೀನಸ ಪರಿಯಂಕ ಶಂಭ್ವಾದಿನಮಿತ ನೀಲಾಂಬುಧ ನಿಭಗಾತ್ರ ಕಂಬುಚಕ್ರಸುತ- ದಾಂಬುಜಧರ ಬಲು ಸಂಭ್ರಮದಲಿ ಮುನಿಕುಂಭಜ ಪೂಜಿತ ಕದಂಬ ದುರಿತ ಕಾದಂಬನಿ ಪವನ ಕೃ ಪಾಂಬುಧೆ ಕೇಶವ 4 ಗರುಡ ಮಾರುತರಿಂದ ಪರಶೇವಿತನೆ ಬಾರೊ ಶರಣು ಜನರ ಸುರತರುವೆ ಚನ್ನಕೇಶವ ಧರೆಯೊಳಧಿಕ ಮಣಿಪುರ ಪಂಡಿತಾಗ್ರಣಿ ಸನ್ನುತ ಸರಸಿಜಾಸನ ಪಿತ ಸಿರಿದೇವಿಯು ಈರೆರಡು ರೂಪದಲಿ ಕರದೊಳಗಾರುತಿ ವರಚಾಮರಗಳ ಧರಿಸಿ ಸಿರಿ ' ಕಾರ್ಪರ ನರಹರಿ ' ರೂಪನೆ ಮಾಂ ಪೊರೆವುದು ಕೇಶವ 5
--------------
ಕಾರ್ಪರ ನರಹರಿದಾಸರು
ದೇವಾಧಿದೇವ ನೀನಹುದು ಸಾಕ್ಷಾತ ಭಾವಿಸುವರಾತ್ಮ ಭಜಕರ ಪ್ರಾಣದಾತ ಧ್ರುವ ಸುಜನ ಮನೋಹರ ಮೂಜಗ ಆಧಾರ ಭಜಕ ಭಯಹರ 1 ಕರುಣಸಾಗರ ಪರಮ ಉದಾರ ದುರಿತ ಸಂಹಾರ 2 ಬಾಹ್ಯಂತ್ರಲಿವ್ಹ ಇಹಪರ ಕಾವ ಮಹಿಪತಿಯ ರಕ್ಷಿಸುವ ಶ್ರೀ ದೇವ ದೇವ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ದೇವಿ ಲಕ್ಷಣೆ ಎಮ್ಮ ಸಲಹ ಬೇಕಮ್ಮಭಾವದಲಿ ನೀನಿದ್ದು ಭಾವನಯ್ಯನ ತೋರೀ ಪ ಪಿತನು ಬೃಹತ್ಸೇನ ನಿನಗಾಗಿ ಸ್ವಯಂವರವಹಿತದಿಂದಲೆಸಗುತ್ತ ಲಕ್ಷ್ಯವನೆ ಬಿಗಿದೂ |ಅತಿಶಯದ ಧನುವಿಗೆ ಸಜ್ಜಿಸುತ ಬಾಣವನುಚತುರತೆಲಿ ಭೇದಿಪಗೆ ಸುತೆಯ ಪಣವೆಂದ1 ಮತ್ಸ್ಯ ಯಂತ್ರವಿದಲ್ಲಔಪಚಾರಿಕವೆಲ್ಲ ಸರ್ವವಿಧ ಛನ್ನಾ |ವೈಪರೀತ್ಯದಿ ದ್ವಾರ ಉಪರಿ ಇರುವುದು ಕೇಳಿಕಾಪುರುಷಗಿದು ಕಾಂಬ ಮಾರ್ಗವೇ ಇಲ್ಲ 2 ಸೂತನುತ ಮಾಗಧನು ಕೌತುಕದ ಕೌರವರುಪಾರ್ಥನೂ ಅವನಣ್ಣ ಭೀಮಸೇನಾ |ಆತು ಧನುವನು ಲಕ್ಷ್ಯ ಭೇದಿಸಲೆ ಬೇಕೆಂದುಪೃಥಿವಿಪರು ಮತ್ತಿತರು ಬಂದು ಸೇರಿದರು 3 ಸಜ್ಜುಗೈಯಲು 5ನುವ ಆರಿಂದಲಾಗದಿರೆಲಜ್ಯೆಯಿಂದಲಿ ಮರಳಿ 5ೀಗುವರೆ ಬಹಳ |ಅರ್ಜುನನು ತಾನೊಬ್ಬ ಲಕ್ಷ್ಯವೀಕ್ಷಣ ಶಕ್ತಅರ್ಜುನಾಗ್ರಜ ಹರಿಗೆ ಅಪರಾಧವೆನೆ ಸರಿದ 4 ನೆರೆದ ಸಭೆಯಲ್ಲಿ ಪುಷ್ಪಹಾರವನೆ ಪಿಡಿಯುತ್ತಬರುತ ವೈಯ್ಯಾರದಲಿ ಶಿರಿ ಕೃಷ್ಣ ಕಂಠದಲ್ಲಿ |ಇರಿಸಿ ಪರಮಾನಂದ ಭರಿತಳಾಗಲು ಹರಿಯುಕರಪಿಡಿದು ಹೊರವಂಟ ತನ್ನ ದ್ವಾರಕಿಗೇ 5 ಪರಿ ಪರಿ ಪುಷ್ಪ ವೃಷ್ಟಿಗಳ ಗರೆಯೇ |ದುರುಳರೆದುರಾಗಿ ಸಂಗರಕೆ ಬರುತಿರಲುಹರಿ ಭೀಮರೆದುರಿಸದೆ ದುರುಳರೋಡಿದರು 6 ಮೋದ ಬಡುವಂಥ |ಧೀವರರ ಮನೋಭೀಷ್ಟ ಪೂರ್ಣವನೆ ಗೈಯ್ಯುವನುದೇವ ಗುರು ಗೋವಿಂದ ವಿಠಲ ಕೃಪೆಯಿಂದ 7
--------------
ಗುರುಗೋವಿಂದವಿಠಲರು
ದೇವೀ ಶ್ರೀ ತುಳಸೀ ದುರಿತೌಘವಿನಾಶಿ ಪ ಶ್ರೀ ವರನಾನಂದಾಶ್ರು ಸುಜಾತೆ ಕೃ ಪಾವ ಲೋಕೆ ಜಗಪಾವನಿ ಜನನಿ ಅ.ಪ ತುಂಗ ಮಂಗಳರೂಪಿಣಿ ಸುಗುಣ ತ ರಂಗೆ ಪರಮ ಕಲ್ಯಾಣಿ ನಿತ್ಯ ಮಂಗಳರೂಪ, ನೃ ಸಿಂಗ ಕರಿಗೀಶನು ಸುಖಪೂರ್ಣನು ಮಂಗಳಕರುಣಾಪಾಂಗದಿ ನಿನ್ನನ ರ್ಧಾಂಗಿಯೆಂದಂಗೀಕರಿಸುತಲೆಮ್ಮಂತ ರಂಗಕೆ ಸಂತಸ ಕಂಗಳಿಗುತ್ಸವ ಹಿಂಗದೆ ತರಲೆಂದು ಭಿನ್ನಪಗೈವೆವು
--------------
ವರಾವಾಣಿರಾಮರಾಯದಾಸರು
ದೇವೀ ಸಲಹೆನ್ನನೂ | ತವ ಬಾಲಕನನೂ | ದೇವೀ ಸಲಹೆನ್ನನೂ ಪ ಕಾವ ನಿಜ ಸುಖವೀವ ಶಕ್ತಿಯೆ | ದೇವ ವಿಶ್ವೇಶ್ವರನ ಸುಪ್ರೀಯೆ ಅ.ಪ ಚಂಡನಾಡುತ ರಕ್ತಬೀಜರ | ಹಿಂಡಿ ರಕ್ತನುಂಡ ಶಂಕರೀ 1 ದುರಿತ ಹರೆ ಆರ್ಯಾ ಕಾತ್ರ್ಯಾಯನಿಯೇ | ಗೌರಿ ಹೈಮಾವತಿ | ಸುರಮುನೀ ಸುತೆ ಸರ್ವಮಂಗಲೆ | ಶರಣು ಶರ್ವಾಣಿಯೆ ರುದ್ರಾಣಿಯೆ 2 ಭವ ಸರ್ವ ಕಾರಣ ಭೂತೆ ಮುನಿ ಸುತೆ | ಸರ್ವ ಸೌಖ್ಯ ಸುಖ ಪ್ರದಾಯಕಿ 3 ಜಗದ್ಭರಿತೆ ಸದ್ಗುಣ | ಶುಭ ತತ್ವಾತೀತೆ ನಿರುಪಮ ಶಕ್ತಿ ದೇವತೆ | ಸೋತೆ ನೀ | ದಾರಿದ್ರ ದುಃಖ ವ್ರಾತವನು ಪರಿಹರಿಸಿ ರಕ್ಷಿಸೆ4 ತಂದೆ ತಾಯೆನ್ನ ಬಂಧು ಬಳಗಗಳೂ | ನಾರಾಯಣಿಯನೀ- | ಹೊಂದಿರುವ ತಾಪತ್ರಯವನಾ | ನಂದದಿಂದಲಿ ಪಾರಗಾಣಿಸಿ | ತಿಂದೆನ್ನನು ಸದಾನಂದನೆನಿಸುತ 5
--------------
ಸದಾನಂದರು
ದೊಲ್ಲಭ ಗುರು ಮಹಿಪತಿಯ ತೋರಮ್ಮ ಪ ಭಂಜನ ಗೆರಗುವ ಅವಸರವಿಲ್ಲಾ | ಕಂಜ ಮೊಗವ ತೊಳಿಯಲುದುಕ ಕಲಶಕಾ | ಲಂಜಿಯೂಳಿಗದವರೆಡೆಯಾಟವಿಲ್ಲ 1 ಗುರುಪೂಜೆಯಲಿ ರೂಪ ಗೋಚರವಿಲ್ಲಾ | ಇದುರಿಗೆ ಎದುರಲಿ ಕುಳಿತು ಕೀರ್ತನೆಯಲಿ | ಬೋಧ ನುಡಿಧ್ವನಿಯಲ್ಲಾ2 ಇಂತು ಹಂಬಲಿಸುವ ಮನವೆಂಬ ಪ್ರಕೃತಿಗೆ | ಅಂತರಂಗದಿ ತನ್ನ ಸುಳುಹನೆ ದೋರಿ | ನಿಂತನು ಎತ್ತ ನೋಡಲು ತಾನೇ ತಾನಾಗಿ | ಭ್ರಾಂತಿ ಬಿಡಿಸಿದನು ನಂದನ ಸ್ವಾಮಿ3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಧಣಿ ನೀನಿರಲು ತಣಿಸಿ ಪರರ ದಣಿವುದುಂಟೆ ಲೋಕದಿ ಪ ಕ್ಷಣ ಕ್ಷಣದಲಿ ಪೊರೆವ ಚಿಂತಾ ಮಣಿ ನೀನಿರೆ ತ್ರಿಭುವನಕೆ ಅ.ಪ ಕರದಲಿರುವ ಮಣಿಯ ಬೆಲೆಯ ನರಿಯದಂಥ ಮೂಢ ಜನರು ಪರರಿಗಿತ್ತು ಹರುಷದಿಂದ ಪುರಿಯ ಕೊಂಬ ತೆರದಲಿ 1 ದುರಿತ ದೂರ ಮಾಡಿ ಸಾರ ಫಲಗಳನ್ನು ಕೊಡುವ ನಾರಸಿಂಗ ಮಂತ್ರವಿರಲು ಭೈರವನನು ಜಪಿಸುವಂತೆ 2 ಪಡೆದ ಜನಕನಲ್ಲದೆನ್ನ ನುಡಿಗೆ ಒಲಿವರುಂಟೆ ಜಗದಿ ಕಡಲಶಯನ ಎನ್ನ ಕರವ ಪಿಡಿಯುತ ಪ್ರಸನ್ನನಾಗೋ 3
--------------
ವಿದ್ಯಾಪ್ರಸನ್ನತೀರ್ಥರು
ಧನ್ಯ ಧನ್ಯವಾಯಿತು ಎನ್ನ ಜನುಮ ತನ್ನಿಂದ ತಾನೊಲಿದ ಘನ ಮಹಿಮ ಎನ್ನೊಳಗೆ ದೋರಿತಾನಂದೊ ಬ್ರಹ್ಮ ಕಣ್ಣಾರೆ ಕಂಡೆನು ಸದ್ಗುರು ಧರ್ಮ 1 ಬ್ರಹ್ಮಸುಖ ಹೊಳೆಯಿತು ಸಾಧುಸಂಗ ಚುಮು ಚುಮು ಕೊಡುತಿದೆಕೊ ಸರ್ವಾಂಗ ಧಿಮಿ ಧಿಮಿಗುಡುತ ತಾಲ ಮೃದಂಗ ಸಮಾರಂಭವಾಯಿತು ಬಾಹ್ಯಂತರಂಗ 2 ಎದುರಿಟ್ಟು ಬಂತು ಪುಣ್ಯ ಪೂರ್ವಾರ್ಜಿತ ಒದಗಿ ಕೈಗೂಡಿತೆನಗೆ ತ್ವರಿತ ಸಾಧಿಸಿತು ಮಹಿಪತಿಯ ಮನೋರಥ ಸದ್ಗುರು ಕೃಪೆಯಾಯಿತು ತಾ ಸದೋದಿತ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಧನ್ಯತೆಯಾಂತೆನಿಂದು ದೇವಿಯಕಂಡು ಮಾನ್ಯತೆ ಪಡೆವೆನೆಂದು ಪ. ಚಿನ್ಮಯರೂಪನ ಚೆನ್ನೆ ಲಕ್ಷ್ಮಿಯ ಸಂ ಪನ್ನ ಮೂರ್ತಿಯ ಕಂಡಿನ್ನೆನಗೆಣೆಯಾರೆನೆ ಅ.ಪ. ನಾಗವೇಣಿಯರೆಲ್ಲರು ಪಾಡುತ ಶಿರ ಬಾಗಿ ವಂದಿಸುತಿರಲು ರಾಗದಿಂ ನಲವೇರೆ ಭೋಗಭಾಗ್ಯವನೀವ ಯೋಗೇಶ್ವರಿಯ ದಯಾಸಾಗರಿಯ ಕಂಡು 1 ಐದೆಯರತಿಮುದದಿ ವೈದೇಹಿಯೆ ಯೆಮ್ಮ ಆದರ್ಶ ಮಹಿಳೆಯೆಂದು ಆದಿಶಕ್ತಿಯೇ ಈ ಶ್ರೀದೇವಿ ನಿಜವೆಂದು ಆದರಿಸುತ್ತಿರಲಾಮೋದವಾಂತುದರಿಂ 2 ಅರಿದಾವುದೆಮಗಿಳೆಯೊಳು ಶೇಷಗಿರೀಶನ ಅರಸಿಯೆಮ್ಮವಳಾದಳು ದುರಿತರೋಗವು ದೂರ ಸರಿದುದು ಮನವಾರ 3
--------------
ನಂಜನಗೂಡು ತಿರುಮಲಾಂಬಾ
ಧನ್ಯಧನ್ಯನೊ ಶ್ರೀ ಗುರುರಾಯಾಧನ್ಯ ಶ್ರೀ ರಾಘವೇಂದ್ರ ಯತಿವರ್ಯಾ ಪ ವೀಣಾಪಾಣಿಯ ಆಣತಿಯಂತೆಮಾಣದೆ ಸನ್ಯಾಸವ ಗ್ರಹಿಸಿದೆವೇಣುಗೋಪಾಲನು ತಪದ ಕಾಣಿಕೆಗೆಕಾಣಿಸಿಕೊಂಡನೆ ಓ ಮಾರಾಯಾ 1 ಕರ ಕಮಲಾಸಂಜಾತನೆಏಸು ಜನ್ಮದ ಸುಕೃತವೊ ಜೀಯಾ 2 ಉನ್ನತ ಗದುಗಿನ ವೀರನಾರಾಯಣಸನ್ನಿಧಿಯೊಳು ನರಸಿಂಹನೆದುರಿನಲಿಸನ್ನಿಹಿತನು ನೀನಾಗಿ ಕುಳಿತೆಯೋಆದರಿಸಿನ್ನು ಸಲಿಸಲು ನಿನ್ನ ಭಕ್ತಿಯಾ 3
--------------
ವೀರನಾರಾಯಣ
ಧನ್ಯನಲ್ಲವೇ ಅವನು ಧನ್ಯನಲ್ಲವೆ ಪ ಪನ್ನಗಾರಿ ಧ್ವಜನ ಮಹಿಮೆಯನ್ನು ಪೊಗಳುತಿರುವ ನರನು ಅ.ಪ. ಅರುಣ ಉದಯದಲ್ಲಿ ಎದ್ದು ದುರಿತದೂರವನ್ನು ಸ್ಮರಿಸಿ ಹರುಷದಿಂದ ಶೌಚ ಕರ್ಮ ಅರಿತು ನಿರುತ ಚರಿಸುವರನು 1 ಸತ್ಯಮತದ ಪದ್ಧತಿಯನು ಚಿತ್ತವಿಟ್ಟು ಆಚರಿಸುತ ಭೃತ್ಯನೆಂದು ಪೇಳಿಕೊಳುವ ನಿತ್ಯ ತೃಪ್ತನಾದವರನು2 ಸಿರಿಯುತ ರಂಗೇಶವಿಠಲ ಸರುವ ದೇವರೊಡೆಯನೆಂದು ಸ್ಥಿರದಿ ನಂಬಿ ಅವನ ಪಾದ ಮರೆಯ ಹೊಕ್ಕ ಜಾಣ ನರನು 3
--------------
ರಂಗೇಶವಿಠಲದಾಸರು
ಧರಣೀ ರಮಣಾ ರಾಮ | ದುರಿತಹರಣ ನಾಮ ಪ ಸುರನಾಯಕವೈರಿ ಭೀಮಾ | ಸರಸೀರುಹನಯನ ರಾಮಾ ಅ.ಪ ಶರಣಜನ ಸಂಸೇವಿತ ಭಾವಿತ 1 ರಕ್ಷ ನಿತ್ಯಪೂರ್ಣಕಟಾಕ್ಷ 2 ರಥಾಂಗ ಮಾಂಗಿರೀಶ ದೇವೋತ್ತುಂಗ3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಧಾಮ ನಿರ್ಮಲನಾಮ ಪ ದುರಿತ ಸಂಹಾರಕ ಸುರವರಪಾಲಕ ವರರಮಾನಾಯಕ 1 ಶ್ರೀತಾಂಬುನಮಕರ ಪ್ರೀತ ಕುಸುಮಧರ 2 ಕಾಮಿತ ಫಲದಾತ ಕೋಮಲಕರಯುತ | ರಾಮದಾಸಾರ್ಚಿತ ಪ್ರೇಮರಸಾನ್ವಿತ ಮಾಂಗಿರೀಶ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಧಾಮ ನಮೋ ಜಿತಾಮಿತ್ರಾಖ್ಯ ಮುನೀಂದ್ರ ನಮೋ 1 ವಿಭುದೇಂದ್ರಕುಮಾರ ಯತೀಂದ್ರ ನಮೋ ವಿಮೋಚಕ ನಮೋ ನಮೋ2 ಪುರುಹೂತ ವ್ರಾತ ವಿನುತತೇ ನಮೋನಮೋ ಜಿತಾಹಿತ ಪಾಲಯಮಾಂ 3 ದುರಿತ ತಿಮಿರ ಕರುಣಾಕರ ನಮೋ ಪರಮ ಸಮರ್ಥನಮೋ 4 ತರು ಸುಸ್ಥಾನಗತ ನಮೋನಮೋ 5 ಪಾತ್ರ ಸುಚರಿತ್ರ ನಮೋ ಮಾಮುದ್ಧರತೆ ನಮೋನಮೋ 6
--------------
ಕಾರ್ಪರ ನರಹರಿದಾಸರು
ಧ್ಯಾನದ ತುತೂರಿ ಹಿಡಿಯೊ ಸಾಗರ ಶಾಯಿಯೆ ಮೂಜಗ ಧಣಿಯೆಂದು ಜಾಗಟೆ ಡÀಣ್ ಡಣ್ ಬಡಿಯೊ ಪ ಅನುದಿನ ಮನಮುಟ್ಟು ನೆನೆಯುವ ಭಕ್ತರ ಮನದೆಣಿಕೆಯನು ನೀಡುವ ಕನಿಕರದಿಂ ಕಾಪಾಡುವ ಜನಕಜೆವಲ್ಲಭ ತನ್ನವರನು ಬಿಟ್ಟು ಕ್ಷಣ ಅಗಲಿರೆನಾ ವನಜನಾಭನೆಂದು 1 ಎಡೆಬಿಡದೊಡತೊಳ ಧೃಢದಿಂ ಭಜಿಪರ ಕಡುದಯಾದೃಷ್ಟಿಯಿಂ ನೋಡುವ ಸಡಗರದವರೋಳಾಡುವ ಮೃಡವಂದಿತ ತನ್ನಡಿಯ ದಾಸರ ಕರಪಿಡಿದು ಬಿಡದೆ ಕಾಯ್ವ ಸಡಗರದೊಡನೆಂದು 2 ನರಹರಿ ಚರಣವ ಪರಿಪರಿ ಸ್ಮರಿಪರ ದುರಿತರಾಸಿ ದೂರ ಮಾಡುವ ಬರುವ ಸಂಕಟ ನಿವಾರಿಸುವ ಜರಾಮರಣ ದೂರಮಾಡಿ ಪರಮ ಪರತರ ಸಿರಿಸೌಭಾಗ್ಯ ಕರುಣಿಪ ಸ್ಥಿರವೆಂದು 3 ಚಿತ್ತಜತಾಪನ ಸಚ್ಚರಿತವನು ನಿತ್ಯ ಬಿಡದೆ ಕೊಂಡಾಡುವರ ಭಕ್ತ ಜನರ ನೋಡಿ ಬಾಗುವರ ಮೃತ್ಯುಬಾಧೆ ಗೆಲಿ ಸತ್ಯಾನಂದವ ನಿತ್ತು ಪೊರೆವ ಹರಿ ಸತ್ಯ ಸತ್ಯವೆಂದು 4 ದೀನರಾಪ್ತನಾದ ಧ್ಯಾನಮೂರುತಿ ತನ್ನ ಧ್ಯಾನಿಸುವರ ಬೆಂಬಲಿಸುವ ಮಾನದಿಂದ ಭವಗೆಲಿಸುವ ಏನು ಬೇಡಲಾನಂದ ದೀಯ್ವನು ಪ್ರಾಣೇಶ ಶ್ರೀರಾಮ ದೇವ ದೇವನೆಂದು 5
--------------
ರಾಮದಾಸರು