ಒಟ್ಟು 39871 ಕಡೆಗಳಲ್ಲಿ , 136 ದಾಸರು , 11580 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ದೇವದೇವತೆಗಳ ಸ್ತುತಿ ವೀರನ ನೋಡಿರೈ ನರಮೃಗಾಕಾರನ ಪಾಡಿರೈ ಪ ಕಾರ್ಪರ ಋಷಿ ತಪಕೊಲಿದು ಅಶ್ವತ್ಥದಿ ಮೆರೆವಾ ಭಕುತರ ಪೊರೆವಾ ಅ.ಪ ದುರಿತ ತಿಮಿರಕೆ ಸವಿತ ವ್ರಾತ ಸೇವಿತ ತ್ವರಿತ ಮಧ್ಬಂಧು ಪೊರೆಯೊನೀನೆಂದು ಪ್ರಾರ್ಥಿಸುವರಿಗಭೀಷ್ಟಿಯಗರಿಯಲು ದೇವ ತರುಸ್ವಭಾವ 1 ಉಗ್ರನಾದರು ಭಕುತಾಗ್ರಣಿಗಳಿಗೆ ಅನುಗ್ರ ಒಲಿವನು ಶೀಘ್ರ ವಾಗ್ಧೇವಿಯರ ಸನಾಜ್ಞದಿ ನಮಿಸಿ ಪ್ರಹ್ಲಾದ ಸ್ತುತಿಸಲು ಒಲಿದ ಉಗ್ರವದನ ಶಾಲಿಗ್ರಾಮಗಳ ರೂಪದಲಿ ವೃ- ಭಾರ್ಗವಿ ಪ್ರಕಟನಾಗಿಹನ 2 ತೋರಿಸುವದಕೆ ಅಸುರನ ಮಥಿಸಿ ನೆಲಸಿಕರುಣದಿ ದಿವಿಜರೊಡೆಯನ3 ಪೋಪುದು ವೃಜಿನ ತಿಳಿವದು ಮುನ್ನ ಭಾನು ಕರ್ಕಾಟಸ್ಥಾನದಿ ಬರುವ ಕಾಲದಲಿ ತೀರ್ಥಗಳಲ್ಲಿ ಹೃದಯದಿ ಪೊಳಿವ 4 ತರುವರ ಸಂಸ್ಥಾ ಚರಿತ ತ್ರಿಗುಣಾತೀತ ಪದಯುಗಲ ಬಿಡದನುಗಾಲ ಸಾರಿ ಭಜಿಪರಿಗಪಾರ ಸೌಖ್ಯಗಳ ಗರಿವ ವಿಘ್ನವ ತರಿವ5
--------------
ಕಾರ್ಪರ ನರಹರಿದಾಸರು
ದೇವದೇವನಾ ಭಜಿಸು ಜಾನಕಿ ಪ್ರೇಮನಾ ಬಿಡದೆ ಇನ್ನು ಪ ಇಂದಿರೇಶನಾ ಸಕಲ ವಿಶ್ವನಾಥನಾ ಸುಂದರ ರೂಪನ ಸುಗುಣ ಸುಜನವಂದ್ಯನಾ ಸಿಂಧು ಶಯನನಾ ಚೆಲುವ ಶ್ರೀನಿವಾಸನಾ ಮಂದರಾದ್ರಿಯನೆ ಪೊತ್ತ ಮಹಿಮಾನಂದನ 1 ವಾರಿಜನಾಬನಾ ಘನ ವಾಸುಕಿಶಯನನಾ ನೀರಜ ನಯನನಾ ಕೃಷ್ಣಾ ನಿಗಮಗೋಚರನಾ ನವನೀತ ಚೋರನಾ ಪಾರಮಾರ್ಥಿಕ ಜ್ಞಾನದಲ್ಲಿ ಪ್ರಬಲವಾಗಿ ಮನವು ನಿಲ್ಲಿಸಿ2 ಪನ್ನಗ ಭೂಷಣನಾದ ಪಾರ್ವತೀಶನಾ ಮನ್ನಿಸಿ ಪೊರೆದನ ಮಹಾಮಹಿಮೆಯುಳ್ಳನಾ ಚಿನ್ಮಯ ರೂಪನಾ ಪರಮ ಚಿದ್ವಿಲಾಸನಾ ಹೆನ್ನ ತೀರನಿಲಯ ಸುಪ್ರಸನ್ನ 'ಹೆನ್ನ ವಿಠ್ಠಲ’ ನಾದ 3
--------------
ಹೆನ್ನೆರಂಗದಾಸರು
ದೇವದೇವನೆ ಓವುದೆಮ್ಮನು ಶ್ರೀವಧೂವರನೇ ಸಾವಧಾನದಿ ಭಾವಿಸೈ ವಸುದೇವ ಕುವರನೇ ಪ. ನೀಲಮೇಘಶ್ಯಾಮ ರಮಾಲೋಲ ಪಾಲಿಸೈ ಬಾಲಗೋಕುಲಬಾಲ ಶ್ರೀ ವನಮಾಲ ಪಾಲಿಸೈ 1 ಭೋಗಿಶಯನ ಯೋಗಗಮ್ಯ ಸಾಗರಸ್ಥಿತ ಬಾಗಿ ನಮಿಪೆವು ರಾಗದಿಂ ಪೊರೆ ವಾಗಗೋಚರ 2 ಘಳಿಲನೈತಹುದಿಳೆಯ ರಮಣ ತಳುವ ಬೇಡುವೈ ಎಳೆಯರಾವು ಚಲವನರಿಯೆವು ಒಲವನೆರೆವೆವೈ3 ದೇಶದೇಳ್ಗೆಯೊಳಾಸೆಯಿಂದಿಹ ದಾಸರೆಂದು ನೀಂ ಲೇಸ ಪಾಲಿಸು ಆಶೆ ಸಲ್ಲಿಸು ಶೇಷಗಿರೀಶನೇ4
--------------
ನಂಜನಗೂಡು ತಿರುಮಲಾಂಬಾ
ದೇವದೇವರ ದೇವ ಭಕ್ತ ಸಂಜೀವಿ ಮಹಾನುಭಾವ ಪ ದಶರಥ ಸುಕುಮಾರ ಜಾನಕೀವರ ಧೀರ ಅಸಮ ಸಾಹಸಿ ಕಪಿವೆರಸಿ ಲಂಕೆಯಪೊಕ್ಕ ಅಸುರರ ಕೊಂದ ಶ್ರೀ ರಾಮಾವತಾರ 1 ಯದುಕುಲದೊಳಗುದಿಸಿ ಮಾತುಲಮದ ಮುಖರನ್ನು ವಧಿಸಿ ಪಾಂಡುವರನ್ನೇ ವಹಿಸಿದೆ 2 ಮೃಗ ಪುರದೆಡೆಯೊಳು ನಿಂದು ಸೇವಕÀ ವೆಂಕಟಾಚಲಗೋವಿಂದ 3
--------------
ಕವಿ ಪರಮದೇವದಾಸರು
ದೇವನ ನೆರೆನಂಬಿರೊ ಶ್ರೀವರ ವೇಲಾಪುರಿಯ ಚೆನ್ನಿಗನ ಪ ಕರೆಯರಿಗೊರಳಭವನ ಕೃಪೆಯಿಂದ ದಶಗ್ರೀವ ನೆರೆಭಾಗ್ಯಪಡೆದು ಗರ್ವದೊಳಿರಲು ಅರೆಯಟ್ಟಿ ಶಿರಗಳ ಕುಟ್ಟಿಹಾಕಿ ತನ್ನ ಮೊರೆಹೊಕ್ಕ ವಿಭೀಷಣಗೆ ಪಟ್ಟಗಟ್ಟಿದ 1 ಭಾಗೀರಥಿಯ ತಾಳ್ದ ಮಹೇಶನ ತಲೆ ವಾಗಿಲ ಕಾಯಿಸಿಕೊಂಡಿಹ ಬಾಣನ ತಾಗಿ ತೋಳಕಡಿದ ಸುರನ ಕುಮಾರತಿಗೆ ಭೋಗಿಸುವಂತೆ ತಮ್ಮಗೆ ಕೈವರ್ತಿಸಿ ಕೊಟ್ಟ2 ಲೋಕದೊಳಜಭವಾದಿಗಳಿಂದ ಉಬ್ಬಿದ ಅ- ನೇಕ ರಕ್ಕಸರನೊಟ್ಟಿಗೆ ತಾಹೆನು- ತಾ ಕೊಟ್ಟ ವರವನೆ ಶಿರಮುಟ್ಟಿ ಕೊಂಡಾ ಕರು ಣಾಕರ ವರ ವೇಲಾಪುರಿಯ ಚೆನ್ನಿಗನ 3
--------------
ಬೇಲೂರು ವೈಕುಂಠದಾಸರು
ದೇವನಹುದೊ ದೇವಾಧಿದೇವ ಕಾವಕರುಣ ಶ್ರೀ ವಾಸುದೇವ ಭಾವಿಕರಿಗೆ ಜೀವಕೆ ಜೀವ ಧ್ರುವ ಸಾಮಜಪ್ರಿಯ ಸುರಲೋಕಪಾಲ ಕಾಮಪೂರಿತ ನೀ ಸಿರಿಸಖಲೋಲ ಸಾಮಗಾಯನಪ್ರಿಯ ಸದೋದಿತ ಸ್ವಾಮಿನಹುದೊ ನೀನೆವೆ ಗೋಪಾಲ 1 ಅಕ್ಷಯ ಪದ ಅವಿನಾಶ ಪೂರ್ಣ ಪಕ್ಷಿವಾಹನ ಉರಗಶಯನ ಪಕ್ಷಪಾಂಡವಹುದೊ ಪರಿಪೂರ್ಣ ಲಕ್ಷುಮಿಗೆ ನೀ ಜೀವನಪ್ರಾಣ 2 ದಾತನಹುದೊ ದೀನದಯಾಳ ಶಕ್ತಸಮರ್ಥ ನೀನೆ ಕೃಪಾಲ ಭಕ್ತವತ್ಸಲನಹುದೊ ಮಹಿಪತಿ ಸ್ವಾಮಿ ಪತಿತಪಾವನ ನೀನವೆ ಅಚಲ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ದೇವನಾ ದರುಶನಾ ಜೀವನಾ ಪಾವನಾ ಗುರುವಿನಾ ಪ್ರವಚನಾ ಸಾವಿನಾ ನಾಶನಾ ಪ ಸ್ವಾತ್ಮದ ಜ್ಞಾನೋದಯ ಜಗದಿ ಪೂರ್ಣ ನಿರ್ಭಯ ಬ್ರಹ್ಮಪದದ ತನುಮಯ ತಾನೇ ಶುದ್ಧ ಚಿನುಮಯ 1 ಜ್ಞಾನದ ಪೂರ್ಣಾನುಭವ ನಿರ್ವಿಕಲ್ಪ ಸ್ಥಿತಿಯೆ ಶಿವಾ ದುರುಳ ಭವ ಗುರುವಿತ್ತಾತ್ಮಾನುಭವ 2 ಜೀವನ್ಮುಕುತಿ ಆನಂದ ತಿಳಿಯೆ ನೀನೆ ಮುಕುಂದ ಅರಿತು ನೋಡು ಇದನೆಂದ ಗುರುಶಂಕರನಾ ಕಂದಾ 3
--------------
ಶಂಕರಭಟ್ಟ ಅಗ್ನಿಹೋತ್ರಿ
ದೇವನೀತ ಅವಧೂತ ಜೀವ ಜೀವ ಭಾವಭೋಕ್ತ ಕಾವ ದೈವ ಪ್ರಾಣನಾಥ ದೇವಾಧಿದೇವನೆ ಈತ 1 ಶ್ರೀದೇವ ದೇವ ನಿರ್ವಿಕಲ್ಪ ನಿರಾಕಾರ ನಿರ್ವಿಶೇಹ ನಿರಂತರ ಸರ್ವಸಾಕ್ಷಿ ಸರ್ವಾಧಾರ ಸರ್ವಾತೀತ ಸರ್ವೇಶ್ವರ 2 ಸಾಧುಜನರ ಹೃದಯ ಸದೋದಿತಾನಂದೋದಯ ಆದಿ ಅನಾದಿ ನಿಶ್ಚಯ ಇದೆ ಇದೆ ವಸ್ತುಮಯ 3 ಪತಿತಪಾವನ ಪೂರ್ಣ ಅತಿಶಯಾನಂದಗುಣ ಭಕ್ತಜನರುದ್ಧರÀಣ ಸತತ ಸುಖನಿಧಾನ 4 ಙÁ್ಞನಗಮ್ಯ ಗುಣಾತೀತ ಅನಾಥಬಂಧು ಗುರುನಾಥ ದಾತ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ದೇವರ ದಿವ್ಯಗುಣಗಳ ಪೊಗಳುವದು ಜೀವರಿಗಿದುವೆ ಪ್ರಯೋಜನವು ಪ ಭಾವದಿ ತೋರುವ ವಿಷಯಗಳೆಲ್ಲವು ಭಕ್ತಿಯೊಳರಿತು ಸಮರ್ಪಿಸುತಂ ಅ.ಪ ನಡೆವದು ನುಡಿವದು ಕೊಡುವದು ಬಿಡುವದು ಒಡೆಯ ಹರಿಯ ಪ್ರೇರಣೆಯೆಂದು ದೃಢಮನದಲಿ ತಿಳಿದಾವಾಗಲು ತಾ ಮೃಢ ಸಖನಡಿ ಧ್ಯಾನಕೆ ತಂದು 1 ಅರಿಯದೆ ಪಾಮರರೊರಲುವ ಬೋಧೆಯ ತರತರದಿ ತಿರಸ್ಕರಿಸುತಲೀ ಭವ ಭಯಗಳನೀಡಾಡುತಲಿ 2 ಜನನ ಮರಣ ದೂರ ಪರಾತ್ಪರ ಪಾ- ವನ ಚರಿತ್ರ ಭಾಸುರ ಗಾತ್ರಾ ವನಜನಯನ ಗುರುರಾಮವಿಠಲ ಎಂ- ದನುದಿನ ಭಜಿಸುವನೆ ಪವಿತ್ರ 3
--------------
ಗುರುರಾಮವಿಠಲ
ದೇವರ ದೇವ ನಿನ್ನ ಬಲವಲ್ಲದೆ ಮತ್ತೆ ಆವ ಗ್ರಹಗಳಿಂದಲಿ ಉಂಟು ಎನಗೆ ಪ ಇಂದು ಬಲವೊ ಅರ ಅರ್ಕ ಬಲವು ವಂದನ ಗೈದು ಮಂತ್ರಿ ಬಲವೋ ಎನಗೆ ನಿಂದು ಕೊಂಡಾಡುವದು ಕಾವ್ಯ ಬಲವೊ 1 ಆರಾಧನೆ ಮಾಡುವುದು ಅಂಗಾರಕನ ಬಲವೊ ಸಾರಿ ಪೇಳುವದೆನಗೆ ಸೌಮ್ಯ ಬಲವೊ ಕಾರುಣ್ಯ ಕಡುಸೋನೆ ಎನಗೆ ಶೌರಿಬಲವೊ ಹಾರೈಸಿ ಹಿಗ್ಗುವದು ರಾಹು ಬಲವೊ 2 ಕೇಳುವ ಕಥಾಶ್ರವಣ ಕೇತು ಬಲವೊ ಎನಗೆ ವಾಲಗ ಮಾಡುವದು ತಾರಾಬಲವೊ ಸಿರಿ ವಿಜಯವಿಠ್ಠಲ ನಿನ್ನ ಆಳಾಗಿ ಬಾಳುವದು ಸರ್ವಬಲವು 3
--------------
ವಿಜಯದಾಸ
ದೇವರ ಪೂಜೆಯ ಮಾಡಿರೋ ಮಾಡಿ ಬಿಟ್ಟರು ಬಿಡಿ ಭೂದೇವರ ಪೂಜೆ ಮಿಗಿಲು ಬಿಡಬೇಡ ಪ ಉಂಬೋ ದೇವರ ನೋಡಿ ಕರೆತಂದೊಯ್ಯನೆ ಶಂಭು ಶ್ರೀಹರಿ ಎಂದು ಮನತಂದು ಕರು ಪಾದ ತೊಳೆದು1 ಮಾತನಾಡುವ ದೇವನಿವನೆಂದು ಸಂಪ್ರೀತಿಯಿಂದಲೆ ಈತ ಶಿವನೆಂದು ಜಾತಿ ಶ್ರೀ ಗಂಧ ಪುಷ್ಪವ ತಂದುಮನ ವೊತು ಪೂಜೆಯನು ಮಾಡಿರೋ ಎಂದು 2 ಎಡೆಮಾಡಿ ಷಡುರಸಾನ್ನವ ನಂದು ಉಣ ಬಡಿಸೆ ನಾರಿಯರಟ್ಟುದನುತಂದು ಕಡುಬು ಕಜ್ಜಾಯ ಘೃತವನಂದು ಜಗ ದೊಡೆಯ ನುಂಡನು ಸಾಕು ಬೇಕೆಂದು 3 ಹಸ್ತವ ತೊಳೆದ ಮೇಲ್ವೀಳ್ಯವ ಕೊಟ್ಟು ಮತ್ತೇನಾ ಪೋಪೆನೆಂದರೆ ಪೊಡಮಟ್ಟು ಚಿತ್ತೈಸಿ ಮರಳಿಬರಬೇಕು ದಯವಿಟ್ಟು ಎಂದು 4 ಪ್ರತಿಮೆಗಿಕ್ಕಿದರಲ್ಲೆ ಇಹುದು ಮತ್ತೆ ಕ್ಷತಿಗೆ ಹಾಕಲುಬೇಕು ಬೇಡೆನ್ನಾದಿಹುದು ಅತಿಥಿಗಿಕ್ಕಲು ಸಾಕು ಬೇಕೆನ್ನುತಿಹನು ಲಕ್ಷ್ಮೀ ಪತಿಗಿದು ಪೂಜೆ ಸಂಪೂರ್ಣವಾಗಿ 5
--------------
ಕವಿ ಪರಮದೇವದಾಸರು
ದೇವರಲ್ಲೇ ಸಜ್ಜನವರವನಿ | ಪ ಅಕುಲ ತನ್ನಂತಖಿಳದಿ ನೋಡುತಾ | ಸಕಲರ ಹಿತದಲಿ ಪ್ರಕಟದಿ ಬಾಳುತಾ | ಮಕ ಮಾವುಗಳ ವಿಕಳರಿಯರು 1 ಶಾಂತಿ ಶಮೆದಮೆದಾಂತಿ ತಿತಕ್ಷಾ | ಅಂತರ್ಬಹಿಯವಂತರು ಭಕ್ತಿಯ | ಪಂಥದಿ ನಡೆಯುತ ನಂತನ ಮೂರುತಿ | ಚಿಂತಿಸಿ ಮನ ವಿಶ್ರಾಂತಿಯಲಿಹರು 2 ಅಣುಪರಿ ಸದ್ಗುಣ ಮನುಜನ ಕಂಡರ | ವನಪರ್ವತ ಸಮವೆನೆ ಕೊಂಡಾಡುವ | ತನುಮನ ವಚನದಿ ಘನ ಪುಣ್ಯಾಮೃತ | ಮನಿಗುರು ಮಹಿಪತಿ ತನು ಭವಗಂದಾ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ದೇವರಾಗಬಾರದೇನೆಲೇ ದೆವ್ವಿನಂಥ....... ದೇವರಾಗಬಾರದೇನೆಲೇ ಪ ದೇವರಾಗಬಾರದೇಕೋದೇವನ ಪಾದವನಂಬಿ ಕಾವುಮೀರಿ ಹೋದಮೇಲೆ ಬಾಯಬಿಟ್ಟರೆ ಬರುವುದೇನೆಲೆ ಅ.ಪ ತಂದ ಬುತ್ತಿ ಚೆನ್ನಾಗುಣ್ಣೆಲೆ ನೀನದನು ಒಲ್ಲೆ ನೆಂದರೆ ಬಿಟ್ಟ್ಹೋಗ್ವುದೇನೆಲೆ ಹೇ ಪಾಪಿ ನೀನು ಬಂದಹಾದಿ ನೋಡಿಕೊಳ್ಳೆಲೆ ಮುಂದಿದರಿಯೆಲೆ ಬಿಂದುಮಾತ್ರಸುಖಕೆ ಮೋಹಿಸಿ ಪರ್ವತಾಕಾರ ಪಾಪಹೊತ್ತು ಬಂಧಕ್ಕೀಡಾಗುವುದಿದೇನೆಲೆ 1 ನಾಶನಾಗಿ ಹೋಗುತಾದೆಲೇ ಈ ಜಗವು ಒಂದಿನ ಆಸೆಯೆಂಬ ಕುಳಿ ಧುಮುಕ ಬೇಡೆಲೆ ಮಹನೀತಿವಿಡಿದು ನಾಶವಾಗದಪದವಿ ಗಳಿಸೆಲೇ ಸೋಸಿನೋಡೆಲೆ ಮೋಸಮರವೆಯಿಂ ನಾಶವಾಗದೆ ಹೇಸಿಸಂಸಾರ ನಾಮ ಭಜಿಸಿ 2 ಉಟ್ಟ ಸೀರೆಬಿಟ್ಟು ಹೋಗಿದ್ದ್ಯಂತೆ ಹೇ ಹುಚ್ಚು....... ಎಷ್ಟೋಸಾರಿ ಹುಟ್ಟ್ಹುಟ್ಟಿದರಂತೆ ಈ ಕಾಯಧರಿಸಿ ಬಿಟ್ಟುಹೋಗೇದಸ್ತಿ ಪರ್ವತ್ಹೋಲ್ವಂತೆ ಕೆಟ್ಟು ಬಿದ್ದೈತೆ ದುಷ್ಟಭ್ರಷ್ಟತೆಗಳನ್ನು ಬಿಟ್ಟು ಶಿಷ್ಟಸಂಗಕೆ ಮನವಗೊಟ್ಟು ಸೃಷ್ಟಿ ಗೀರೇಳು ಸೂತ್ರನಾದ ದಿಟ್ಟ ಶ್ರೀರಾಮನಡಿಗೆ ಪೊಂದಿ 3
--------------
ರಾಮದಾಸರು
ದೇವರಾಜ ನುತನೆ ಖಗಪಾ | ಬಲ | ದೇವ ಚರಣ ಮಧುಪ ಪ ಭಾವಜಾರಿ ಸಮನು ಎನಿಪ | ತಾವಕನ್ನ ಸಲಹೊ ಕಾಶ್ಯಪ ಅ.ಪ. ಜಲಧಿ ಗಾರುಡ ಮುಖ ಕಾರುಣ್ಯದಿ | ಹೊರಡೂಡುತ | ಹಾರಿದೆ ವಿ | ಸ್ತಾರಾಮೆಗೆ 1 ಕೂರ್ಮ ದ್ವೇಷದಿಂದಾ | ನೆರೆಹೊರೇಯ ದುಃಖದಿಂದಾ |ಇರಲು ಕಳೆಯೆ ಗರುಡನಿಂದಾ | ವರಮುನಿ ಪೇಳ್ದ ಮುದದಲಿಂದಾ ||ಭಾರಿಲಿ ಇಹ | ಕೂರಮ ಕರ್ಯ | ಹರವ ಮೇಲೆ | ಢೋರದ ತರುಕ್ಹಾರಲದೂ | ದಾರಿತ ವಿ | ಸ್ತಾರದ ಮಹಿ | ಮೋರುಗುಣಿ2 ಅಮೃತ ಕಲಶ ತಂದಾ ||ಕಾರುಣಿ ದಿತಿ | ಜಾರಿಗೆ ಮಾತೆ | ಕಾರಾಗೃಹ | ತಾರಣ ಮುರವೈರಿಯ ವಹ | ತೋರೈ ಹೃ | ದ್ವಾರಿಜದಿ | ಶ್ರೀಹರಿಪದ 3
--------------
ಗುರುಗೋವಿಂದವಿಠಲರು
ದೇವರಿಂದಲಿ ಭಕ್ತಧಿಕನು | ಭಾವ ಭಕುತಿಯಲಿ ಬಲ್ಲಿದನು ಪ ಅವನ ಉದರದಲಿ ಜಗವಿಹುದು | ಅವನ ತನ್ನೆದೆಯಲ್ಲಿ ನಿಲಿಸಿಹನು 1 ದಾವನಿಂದಲಿ ಜಗಹುಟ್ಟುತಲಿಹುದು | ಅವನ ಜನುಮಕಿವ ತಾರಿಸಿದನು 2 ಕಾಳಗದಲಿ ನಿಸ್ಸೀಮನ ದಾವನು | ಸೋಲಿಸಿದವನೆನು ನದಿಸುತನು 3 ಸಾಗರ ಜಲ ಘನ ತುಂಬಿಕೊಂಡಿಹುದು ಮೇಘ ಮುಖದಿ ಬೆಳೆಯಾಗುವದು 4 ಬಾಳಿಗಿಡವು ಸ್ವಾನಂದದಲಿಹುದು | ಬಾಳೆಹಣ್ಣವು ಜನ ನಲಿಸುವುದು 5 ಸಂಗರಹಿತ ಗುರು ಮಹಿಪತಿ ಸ್ವಾಮಿಯ | ಹಂಗಿಗನನು ತನ್ನ ಮಾಡಿದನು 6
--------------
ಕಾಖಂಡಕಿ ಶ್ರೀ ಕೃಷ್ಣದಾಸರು