ಒಟ್ಟು 5751 ಕಡೆಗಳಲ್ಲಿ , 125 ದಾಸರು , 4114 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನೀ ಕರುಣಿಸೊ ವಿಠಲ ನಮ್ಮಸಾಕೊ ಪಂಡರಿ ವಿಠಲ ಪ.ದೋಷಿಗಳೊಳಗೆ ಹಿರಿಯನು ನಾ ನಿರ್ದೋಷಿಗಳರಸನೆ ವಿಠಲಸಾಸಿವೆಯಷ್ಟು ಭಕುತಿಯನರಿಯೆನುಶೇಷಶಯನ ಶ್ರೀ ವಿಠಲ 1ಭವಸಾಗರದೊಳು ಮುಳುಗುವೆ ಸುಮ್ಮನೆಅವಲೋಕಿಸುವರೆ ವಿಠಲನವ ನವ ವಿಷಯಕೆ ಮುಗ್ಗುತಲಿಹ ಮನದವಸರ ಕಾಯೊ ವಿಠಲ 2ತನುಸಂಬಂಧಿಗಳತಿ ಕಾರ್ಯಾರ್ಥಿಗಳ್ಎನಗಾರಿಲ್ಲೊ ವಿಠಲಾಬಿನಗುಮಾನವರನುಸರಣೆಯಲಿದಣಿಸದಿರಯ್ಯ ವಿಠಲ 3ನಿಶಿದಿನಅಶನವಸನಕೆ ಹೆಣಗುವೆಹುಸಿಸಂಗ್ರಹಿಸಿದೆ ವಿಠಲನಿಶಿದ್ಧಗಳಂಜಿಕೆ ಇಲ್ಲವು ನರಕದಗಸಣೆಗೆ ಅಂಜುವೆ ವಿಠಲ 4ಜಾವಕೆ ಮಾಡುವೆ ಸಾವಿರ ತಪ್ಪನುಕಾವದಯಾಂಬುಧಿ ವಿಠಲನಾ ವಡಲ್ಹೊಕ್ಕೆನೊ ಪ್ರಸನ್ವೆಂಕಟಪತಿಜೀವಕೆ ಹೊಣೆ ನೀ ವಿಠಲ 5
--------------
ಪ್ರಸನ್ನವೆಂಕಟದಾಸರು
ನೀ ಕಾಯ್ದರೆ ಕಾಯ್ದಾ ಬಗೆಯಲ್ಲದೆ ಬೇರೆಏಕಮತಿ ಎನ್ನೊಳಿಲ್ಲಶ್ರೀಕಾಂತ ಕರುಣಿ ನೀನಕ್ಲಿಷ್ಟ ಕಾಣಯ್ಯಬೇಕೆಂದು ಸಾಕುತಿಹೆ ಹರಿಯೆ ಪ.ವೇದ ಶಾಸ್ತ್ರ ಪುರಾಣ ಸಾರಾರ್ಥ ತಿಳಿದರಿಯೆಸಾಧನ ಸುಮಾರ್ಗವರಿಯೆಆದರದಿ ಭಕುತಿ ಬಲಿದೊಮ್ಮೆ ಪೂಜಿಸಲರಿಯೆಮಾಧವಮುರಾರಿ ಕೃಷ್ಣಾ ತುಷ್ಟಾ1ಮನ ಮರ್ಕಟವು ತನ್ನ ಮತಿಯಲ್ಲಿ ವಿಷಯ್ಯೆಂಬವನಕೆ ಮೆಚ್ಚಿದೆ ನೋಡಯ್ಯವನಚರತ್ವವನೀಗಿಕ್ಷಣವಾರೆ ತವಚರಣವನಜರಸವುಣ್ಣದಲ್ಲೈ ರಂಗಯ್ಯ 2ಜನುಮ ಜನುಮದ ತಾಯಿ ತಂದೆಗುರುಬಂಧುನನ್ನನು ಗತಿಗಾಣಿಪ ದಾತನೆಎನ್ನಭವತಪ್ಪುಗಳನರಸದಿರು ಅರಸಿದರೆನಿನಗುಚಿತೆ ಪ್ರಸನ್ವೆಂಕಟೇಶ ಶ್ರೀಶ 3
--------------
ಪ್ರಸನ್ನವೆಂಕಟದಾಸರು
ನೀ ದಯದಿ ನೋಡಿದರೆ ನಾ ಧನ್ಯ ಶ್ರೀರಂಗನೀ ಮುಖವ ತಿರುವಲು ನಾ ಪರದೇಶಿ ವಿಮಲಾಂಗ ಪವನಜಾಕ್ಷ ನೀ ಕೊಡಲು ಧನವಂತನೆನಿಸಿಹ್ಯದೀಜನರೊಳಗೆ ಘನವಂತನೆನಿಸಿಕೊಂಬೆಅನುಗಾಲ1ಹರಿನಿಮ್ಮ ವರಚರಣಕರುಣವಿರೆ ಧರೆಮೇಲೆದುರುವಾದಿಗಳ ಜೈಸಿ ನಿರುತನೆನಿಪಿಅನವರತ2ವರವೇದಸ್ಮøತಿಶಾಸ್ತ್ರ ಸ್ಥಿರದರಿವು ನಿಜಜ್ಞಾನವರಮುಕ್ತಿ ಲಭ್ಯತವಕರುಣದಿಂ ಶ್ರೀರಾಮ 3
--------------
ರಾಮದಾಸರು
ನೀನೆ ಕರುಣಿ ಗುರುವಾಸದೀನಬಂಧು ಭಕುತಪೋಷ ಪನೆರೆದು ಭಕುತಜನರುಸ್ಮರಿಪ ವರವ ನಡೆಸಿದರುಶನಿತ್ತು ದುರಿತರಾಸಿ ಪರಿಹರಿಸಿಪೊರೆವೆ ಸತತಪರಮಚರಿತ1ಒಪ್ಪಿ ಕಾಸುರುವ್ವಿಬಿಡದೆತಪ್ಪದೆ ಮೂರುಲೋಕದವರಿಂಕಪ್ಪಕೊಳ್ಳುವಿ ಅಸಮಲೀಲಅಪ್ಪ ತಿರುಪತಿತಿಮ್ಮಪ್ಪ2ಮಾರನಯ್ಯ ಮರಣದೂರಮೂರಜಗದ ಸಾರ್ವಭೌಮಧೀರ ಶ್ರೀರಾಮ ನಿಮ್ಮಪಾದವಾರಿಜದಾಸನೆನಿಸು ಎನ್ನ 3
--------------
ರಾಮದಾಸರು
ನೀನೆ ಪಾಲಿಸು ಕರುಣಾವಾರಿಧಿದೀನಜನರಾಧಾರ ಹರಿಯೆ ಪನಿನ್ನಾಧೀನವು ತೋರ್ಪುದೆಲ್ಲಮಾನವನ ಸ್ವಾಧೀನವೇನಿದೆನಿನ್ನ ನೆರಳಲಿ ಮೂರು ಜಗವುಭಿನ್ನವಿಲ್ಲದೆ ಬದುಕಿ ಬಾಳ್ವುದು 1ನಿನ್ನ ಸಹಾಯವಿಲ್ಲದೀಭವವನ್ನು ಗೆಲಿಯುವ ಸಾಧ್ಯದಾರಿಗೆನಿನ್ನ ಕೃಪಾಕಟಾಕ್ಷದಿಂದಲೆಮುನ್ನ ಹಿರಿಯರು ಧನ್ಯರಾದರು 2ಮತ್ರ್ಯಲೋಕಕ್ಕೆಳೆದು ತಂದೆನ್ನಮರ್ತುಬಿಡುವುದುಚಿತವೇನಯ್ಯನಿರ್ತಸುಖವಿತ್ತು ರಕ್ಷಿಸಭವಕರ್ತುಶ್ರೀಗುರು ರಾಮ ಪ್ರಭುವೆ3
--------------
ರಾಮದಾಸರು
ನೀನೆ ಭಕುತಾಭಿಮಾನಿ ಕರುಣಿ ಪಮರೆಬಿದ್ದ ಭಕುತರ ಪೊರೆಯಲು ತವಸಮಕರುಣಿ ದೇವರ ಕಾಣೆಧರೆಎರಡೇಳರೊಳ್1ಶಿಲೆಯನು ಪೆಣ್ಣೆನಿಸಿ ಕುಲದೊಳು ಕಲೆಸಿದಿಸಲಹಿದಿ ಗಜನ ಮಹ ವಿಲಸಿತಮಹಿಮ ಪ್ರಭು 2ಮೊರೆಯಿಟ್ಟು ಸ್ಮರಿಸುವ ಚರಣದಾಸನ ಆಸೆಕರುಣದಿಂ ಪೂರೈಸು ಪರತರ ಶ್ರೀರಾಮ 3
--------------
ರಾಮದಾಸರು
ನೀನೆಗತಿಕೃಷ್ಣ ಎನಗೆ ನೀನೆಗತಿಕೃಷ್ಣಪ.ನೀನೆ ಗತಿಯೆಂದಾನತನಾಗಿಮಾನಾಪಮಾನವ ನಿನಗೊಪ್ಪಿಸಿದೆಜ್ಞಾನವಿಹೀನನ ಪಾವನ ಮಾಡಿಶ್ರೀನರಹರಿ ಕರುಣಿಸು ನಮ್ಮ್ಮಯ್ಯನೆ 1ತನುವಸ್ಥಿರ ಮನವತಿಚರ ಒದಗಿದಧನ ನಶ್ವರ ನಿನ್ನಯ ಪಾದಾಬ್ಜದನೆನವಿಗೆಯೊಂದನೆ ಕೊಡು ಕಡೆ ಮೊದಲಿಗೆಜನನವಸಾನದ ಬಳ್ಳಿಯ ಕಡಿಯಲು 2ಶರಣಾಗತ ಶರಣರ ಕರವಿಡಿವಬಿರುದಿನ ದೊರೆಗಿನ್ನನುಮಾನ್ಯಾಕೆಪರಮಪತಿತನ ಪೂತನ ಮಾಡ್ಯುದ್ಧರಿಸುವಸಿರಿಪ್ರಸನ್ನವೆಂಕಟಕೃಷ್ಣ3
--------------
ಪ್ರಸನ್ನವೆಂಕಟದಾಸರು
ನೀನೇಯೆಂದು ಮರೆ ಹೊಕ್ಕೆನೋ ರಂಗ |ದೀನ ಜನರ ಪಾಲಿಪ ದಯಾಸಾಗರ ಪಉತ್ತಮ ದ್ವಿಜರು ಮನೆಗೆ ಬರಲು |ಪ್ರತ್ಯುತ್ಥಾನವ ಕೊಡದಲೆ ಉ ||ನ್ಮತ್ತತನದಿ ಬಹು ಪಾಪವ ಗಳಿಸಿದೆ |ಚಿತ್ತಜಜನಕನೆ ದೋಷನಗ ಕುಲಿಶ 1ಪಾತ್ರರ ಸಂಗಡ ಕ್ಷೇತ್ರಗಳ |ಯಾತ್ರೆ ಚರಿಸದೆ ನಿರರ್ಥಕದಿ ||ಗಾತ್ರವ ಬೆಳಸಿದೆ ರುಕ್ಮಿಣೀವರನೆ ವಿ- |ಧಾತೃ ಕರಾರ್ಚಿತ ಕುಂದನೆಣಿಸದಿರು 2ಸ್ನಾನ ಸಂಧ್ಯಾವಂದನೆ ಬಿಟ್ಟು |ಜ್ಞಾನಿಗಳಾದವರನು ಹಳಿವೆನು ||ಧ್ಯಾನಿಪೆ ಸರ್ವದಾ ಪರರ ಕೇಡನು |ಏನೆಂಧೇಳಲಿ ಯನ್ನಯ ಅವಗುಣ 3ಮರೆತಾದರೂ ಹರಿಯೆಂದೊಮ್ಮೆ |ಸ್ಮರಿಸಿದವರ ದುರ್ಗುಣಗಳನು ||ಪೊರೆವನೆಂಬ ನಿನ ಬಿರುದುಕೇಳಿಪದ |ಸರಸಿಜಕೆರಗಿದೆ ಕರುಣಿಸೋ ಮಾಧವ 4ಪುಸಿಯಲ್ಲವೋ ಇದು ಅಜಾಮಿಳ |ಪೆಸರಾಗಿಹ ಪಾಪಿಷ್ಠರೊಳು ||ವಶ ಮೀರಿ ಸುತನ ಕರೆಯಲಾಕ್ಷಣ |ಪೋಷಿಸಿದೆ ತ್ವರದಿ ಶ್ರೀ ಪ್ರಾಣೇಶ ವಿಠ್ಠಲಾ 5
--------------
ಪ್ರಾಣೇಶದಾಸರು
ನೀನೊಲಿದರೇನಾಹುದು - ಶ್ರೀಹರಿಯೆ - |ಮುನಿಯೆ ನೀನೆಂತಾಹುದು ಪವಾಲಿಬಲ್ಲಿದ ವಾನರರಿಗೆ - ಶ್ರೀಹರಿಯೆನೀ ಮುನಿದು ಎಚ್ಚವನ ಕೊಂದೆ |ಮೇಲೆ ಕಿಷ್ಕಿಂಧೆಯ ಪುರದ ಸುಗ್ರೀವನವಾಲಿಯ ಪದದಲ್ಲಿಟ್ಟೆ 1ಮೂರು ಲೋಕವನಾಳುವ - ರಾವಣನಊರ ಬೂದಿಯ ಮಾಡಿದೆ |ವಾರಿಧಿಯ ಒಳಗಿಪ್ಪ ಲಂಕೆಯ ವಿಭೀಷಣಗೆಸ್ಥಿರಪಟ್ಟವನು ಕಟ್ಟಿದೆ 2ಪನ್ನಗವನುದ್ಧರಿಸಿದೆ - ಕೌರವರ -ಹನ್ನೊಂದಕ್ಷೋಣಿ ಬಲವ |ಛಿನ್ನಛಿದ್ರವ ಮಾಡಿ ಅವರನ್ನು ಮಡುಹಿದೆಪಾಂಡವರ ಪದವಿಯಲಿಟ್ಟೆ 3ಹಿರಣ್ಯಕನು ಸುತನ ಕೊಲಲು - ಆಗ ನೀಕರುಣದಿಂದೋಡಿ ಬಂದೆ |ಮರಣವೈದಿಸಿ ಪಿತನತರಳ ಪ್ರಹ್ಲಾದನನುಶರಣರೊಳು ಸರಿಮಾಡಿದೆ 4ಭಾಷೆ ಪಾಲಿಪನೆನುತಲಿ - ನಾ ಬಹಳಆಸೆ ಮಾಡುತಲಿ ಬಂದೆ |ಶೇಷಗಿರಿವಾಸ ಪುರಂದರವಿಠಲ ದಾರಿದ್ರ್ಯನಾಶಮಾಡೆನ್ನ ಸಲಹೊ 5
--------------
ಪುರಂದರದಾಸರು
ನೀನೋಡುವುದುಚಿತಲ್ಲೊ ಕೃಷ್ಣಯ್ಯನಾನಾ ದುಃಖವನುಂಡು ದಣಿದೆ ನಮ್ಮಯ್ಯ ಪ.ಮಜ್ಜ ಮಾಂಸರುಧಿರಮಲಮೂತ್ರಮಜ್ಜನಮಾಡುತ ಬಸಿರೊಳಗೆಜರ್ಜರಿತನಾದೆ ಲೆಕ್ಕವಿಲ್ಲದಕೆ ಪಾದಾಬ್ಜವನೆಂದು ತೋರಿಸುವಿಯೊ ರಂಗ 1ಎರವುತಂದಿರುವ ಸಂಸಾರದ ಸುಖದೊಳುಉರಿ ಮೂರು ಬೆರಸಾಡಿ ದಹಿಸುತಿದೆತರಳಯೌವನ ಮುಪ್ಪಿಲ್ಯಾರೊಮ್ಮೆ ಚಿತ್ತವುಸ್ಥಿರವಾಗದಿನ್ನೇನುಗತಿಚಿಂತಿಸೈದೆ2ಯಮಭಂಟರುಪಟಳ ನಿನ್ನವರಾದರೆಕ್ರಮವಲ್ಲ ಆನತ ಜನರ ದಾತಾರಭ್ರಮಿಸಲಾರೆನು ಕರುಣಿಸು ಕರುಣಾಂಬುಧಿರಮೆಯ ರಮಣ ಪ್ರಸನ್ವೆಂಕಟ ಧೀರ 3
--------------
ಪ್ರಸನ್ನವೆಂಕಟದಾಸರು
ನುತಿಪ ಸುಜನರಿಗೆ ದೊರೆವೋನು ಕರುಣಿ ಪಕ್ಷಿತಿಯೊಳಗೆಮಣಿಮಂತಮೊದಲಾದತುಳ ಮಹಿಮನ ಸತತ ಸ್ಮರಿಸುವೆ ಅ.ಪತನುಜಸಂಭವ ದೇವಿಕಾಯನೋಡಿದನುಜಕೌರವರ ಕೊಂದನು ಭೀಮರಾಯಅಣುಗನೆನಿಸುತ ಘನದಿ ಮೆರೆದನು 1ರಾವಣಿಹಂತಕ ಹನುಮನೆನಿಸಿದೇವರೆಂತೆಂಬೊ ಸಂಕರನನಿರ್ಧೂಮದೇವಿ ಮೊರೆಯನುಕೇಳಿಕುರುಗಳಶೈವ ಶಾಸ್ತ್ರವ ಮುರಿದ ಮಧ್ವನು 2ನಗವೈರಿಮಗನಿಗೆ ನಿರುತ ಸಂತ್ರಾಣನಿಗಮವಾಕ್ಯದಿ ನಗುತ ಪೇಳಿದ 3
--------------
ಗುರುಜಗನ್ನಾಥದಾಸರು
ನೆಚ್ಚಿಕೆಯಿಲ್ಲದ ದೇಹ ನಂಬಬೇಡಿರೊ ಗಡಅಚ್ಯುತಾನಂತನ ಪಾದದಿಂಬು ಬೇಡಿರೊ ಪ.ದಿನಪನುದಯದಲೆದ್ದು ನಿತ್ಯಕರ್ಮವಜರಿದುದೀನ ವೃತ್ತಿಯಲಿ ಧನವನೊದಗಿಸಿದಿರೊವಿನಯವಿಲ್ಲದೆ ವೈವಸ್ವತನ ಭಟರೊಯ್ವಾಗಮನಸಿನ ಹವಣು ಸಂಗಡ ಬಾಹದೆ 1ಅರಿಯಾರು ವರ್ಗಾಳಿಗೊಳಗಾಗಿ ಸತಿಸುತರಪರಕಿಂದಧಿಕರೆಂದು ಬಗೆವರೇನೊಕರುಣವಿಲ್ಲದೆ ಯಾತನೆಗೆ ಪೊಗಿಸಿ ಬಡಿವಾಗತರುಣಿ ಸಂಪದವಾಗ ಸಹಾಯವಾಹದೆ 2ಮುನ್ನೇಸು ಜನ್ಮಗಳ ವೃಥಾ ಕಳೆದೆಯಲ್ಲದೆ ಪ್ರಸನ್ನವೆಂಕಟನ ಪದವಿಡಿಯಲಿಲ್ಲಚೆನ್ನಾಗಿ ಮರುತಮತವಿಡಿದು ನಡೆದರೆ ನಿಮ್ಮಮನ್ನಿಸಿ ಗತಿಗೊಡದಿಹನೆ ರಂಗ ನೋಡಿ 3
--------------
ಪ್ರಸನ್ನವೆಂಕಟದಾಸರು
ನೆನೆ ಮನವೆ ದಾನವಾರಿಯಹಿತಕಾರಿಯಾಶ್ರಿತ ದೊರೆಯ ಪ.ಹೀನ ಪಾಪಾಖ್ಯ ವಿಪಿನದಾವಕೃಶಾನುಸನಾತನ ನಾರಾಯಣ ಶ್ರೀನಾಥನ 1ಘೋರನಿರಯವಿದೂರ ಕರುಣಾಪಾರವಾರಿಜಾಸನ ವಂದ್ಯ ಸುರಶ್ರೇಷ್ಠನ 2ತನ್ನವರಿಗೆ ಪ್ರಸನ್ನವೆಂಕಟಕೃಷ್ಣಮನ್ಯ ಸದ್ಭಕ್ತರಪಾವನ್ನನಾಮನ3
--------------
ಪ್ರಸನ್ನವೆಂಕಟದಾಸರು
ನೆನೆಯಿರೊ ಭಕುತ ಜನರು-ಅನುದಿನವೂನೆನೆಯಿರೊ ಭಕುತ ಜನರುಗಳು ಪಘನಮಹಿಮನ ಸೇವೆಯ ಮಾಡಿದರಾಮನದಲಿ ನೆನೆದ ಅಭೀಷ್ಟವೀವ ಹನುಮಂತ ಅ.ಪಒಂದು ಯುಗದಿ ಹನುಮಂತಾವತಾರನಾಗಿಬಂದು ನೆರೆದಯೋಧ್ಯಾಪುರಕಾ ||ಬಂದ ಧೀರನ ನೋಡಿ ಸುಜನರೆಲ್ಲ-ನಂದದಿಂದಲಿ ಪಾಡಿ 1ವಾಯು ಕುಮಾರಕ ದ್ವಾಪರದಲಿ ಭೀಮ-ರಾಯನೆಂದೆನಿಸಿದ ಕೌರವ ಬಲದಿ ||ನಾಯಕನಾಗಿ ಬಂದ ದುಃಶಾಸನ-ಕಾಯವಳಿದು ನಿಂದ 2ಕಾಯಜಪಿತನ ಮುಂದೆ ಕೌರವರ ತಂದು ರಾಜ-ಸೂಯಯಾಗವ ಮಾಡಿದ ಬಲವಂತ ||ರಾಯರಾಯರ ಧೀರ-ಹನುಮಂತ-ಪ್ರಿಯ ಜನ ಮಂದಾರ 3ಗುರುಮಧ್ವಮುನಿಯಾಗಿ ಹರಿಗತಿಪ್ರಿಯನಾಗಿ-ಕರುಣಾಕರನಾಗಿ ಶರಣರ ಪೊರೆವ ||ಮೆರೆವ ಶ್ರೀ ಹನುಮಂತನ-ದೇವನ ಸ್ಮರಿಸಿರೊ ಗುಣವಂತನ 4ಲಂಕಾಪಟ್ಟಣದ ಸಮೀಪ ಸಮುದ್ರ ದಾಟಿಪಂಕಜನಾಭಶ್ರೀ ಪುರಂದರವಿಠಲನಲೆಂಕ ರಾವಣನ ಗೆದ್ದ-ಈ ಹನುಮಂತ-ಪಂಕಜಮುಖಿಯ ಕಂಡ 5
--------------
ಪುರಂದರದಾಸರು
ನೋಡಬಾರದೆ ಕೃಷ್ಣಾ ಕರುಣದಿನೋಡಬಾರದೆ ಕೃಷ್ಣಹಾಡಿ ಹರಸಿ ನಿನ್ನನೆ ಹೊಗಳುವಪರಿಮಾಡಬಾರದೆ ಹರಿಯೆ ಪ.ಹಾನಿ ಹಿತಗಳನರಿಯೆ ಸುಜ್ಞಾನ ಭಕುತಿಗಳರಿಯೆದೀನ ದೇಶಿಗನುದ್ಧರಿಸೆಲೆ ದೇವಸಾನುರಾಗದಿ ದೇವ 1ಏಸುಜನ್ಮದಿ ಬಂದೆ ನಾಘಾಸಿಯಾದೆನೊ ತಂದೆದಾಸರೊಳು ಆವಕಾಲಭಿಲಾಷೆಯುಳ್ಳ ಶ್ರೀಲೋಲ 2ಏನು ಹೇಳಲಿ ಮನವು ನಿನ್ನಧ್ಯಾನಕೊದಗದು ಕ್ಷಣವುತಾನೆ ಹರಿದಡೆ ಕೇಡು ಅದರಿಂದಪ್ರಾಣನಾಥ ಮುಕುಂದ 3ಕುಂಬಳವು ಕೈಗತ್ತಿ ಕರಾಂಬುಜಕೆ ನಿನಗಿತ್ತೆನಂಬಿದವಗಿನ್ನೇನಾರೆ ಮಾಡಯ್ಯಅಂಬುಜಜ ಸ್ಮರರಯ್ಯ 4ಕಿಂಕರೌಘದೊಳಿಡೊ ನಿಶ್ಶಂಕನೆ ದಯಮಾಡೊಪಂಕಜಾಕ್ಷ ಮುರಾರಿ ಪ್ರಸನ್ನವೆಂಕಟಾದ್ರಿಪಾವನ್ನ5
--------------
ಪ್ರಸನ್ನವೆಂಕಟದಾಸರು