ಒಟ್ಟು 6899 ಕಡೆಗಳಲ್ಲಿ , 128 ದಾಸರು , 4614 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಂಗಳುಹಿಂಗದಿರಲಿ ಎನ್ನ ನಿನ್ನಮಂಗಳಾಂಘ್ರಿ ಸರೋಜಂಗಳಲ್ಲಿ ಕೃಷ್ಣ ಪ.ಕ್ಷಿತಿಯನಳೆದ ಋಷಿಸತಿಯರಘ ಕಳೆದಶ್ರುತಿಸಾರಸ್ತುತಿಗೊಮ್ಮೆಗತಿ ಗೂಢದೊಲಿದಯತಿ ಮುನಿಜನ ದೇವತತಿಗಳ ಮನದಿಪ್ರತಿಕ್ಷಣ ತಟಿತದೀಧಿತಿಯುಳ್ಳ ಪದದಿ 1ಜಗದಘಹರಿಯೆಂಬ ಮಗಳನು ಪಡೆದಮಿಗಿಲಾದ ಕ್ರತುಕರ್ತನಿಗೆ ಒತ್ತಿ ಪೊರೆದಖಗವರಾದನ ಕರಯುಗಳೊಳು ಮೆರೆದವಿಗಡಾಹಿ ಮೌಳಿಯೋಳ್ ಧಿಗಿಲೆಂಬ ಪದದಿ 2ಶ್ರೀ ಚಕ್ಷುಚಕೋರ ಪೂರ್ಣಚಂದ್ರ ನಖದನೀಚಹಿಕೇತುವ ನಾಚಿಸಲೆಸೆದಶ್ರೀಚೆನ್ನ ಪ್ರಸನ್ವೆಂಕಟಾಚಲದೊಳಿದ್ದೆನ್ನಾಚರಣೆಗಕ್ಷಯ ಸೂಚಿಪ ಪದದಿ 3
--------------
ಪ್ರಸನ್ನವೆಂಕಟದಾಸರು
ಕಡಲದಾಟಿದ ಬಲುಧೀರನೆ ಬಂದುಒಡಲ ಹೊಕ್ಕವರಿಗುದಾರನೆ ಪ.ಬಿಡದೆ ಭಕ್ತರ ಕೈಯವಿಡಿದು ರಕ್ಷಿಸುವ ಎನ್ನೊಡೆಯ ಹನುಮರಾಯ ಅಡವಿಯನಿಲಯಅ.ಪ.ದೃಢದಿಂದ ಲಂಕೆಯ ಪೊಕ್ಕನೆ ದೇವಮೃಡನಿಂದ ಪೂಜೆಗೆ ತಕ್ಕನೆಪೊಡವಿಯ ಮಗಳನು ಕಂಡನೆ ಕಿತ್ತುಗಿಡ ವನಗಳ ಫಲ ಉಂಡನೆಅಡಿಗಡಿಗೊದಗಿದ ಕಿಡಿಗೇಡಿ ರಕ್ಕಸರ್ಹೊಡೆದು ಪುರವನೆಲ್ಲ ಕಿಡಿಗಂಜಿಸಿದ ಧೀರ 1ತಡೆಯದೆ ಸುದ್ದಿಯ ತಂದನೆ ಜಗದೊಡೆಯ ರಾಮನ ಮುಂದೆ ನಿಂದನೆಪಿಡಿದೆತ್ತಿ ತರುಗಿರಿ ಪೊತ್ತನೆ ಕಪಿಗಡಣಕ್ಕೆ ಒಬ್ಬನೆ ಕರ್ತನೆಜಡಧಿ ದಾರಿಯಕಟ್ಟಿನಡೆದು ರಾವಣನೆದೆಒಡೆಗುದ್ದಿಕಾಳಗಜಡಿದುಮಾಡಿಸಿದೆ2ಪೆಡಕಿಲಾಸನವಿತ್ತು ದಾತಗೆತುಷ್ಟಿಬಡಿಸಿದೆ ಶ್ರೀರಘುನಾಥಗೆಕಡುವೇಗ ಸಂಜೀವ ಸಲಿಸಿದೆ ನೊಂದುಪುಡಿವಟ್ಟ ಕಟಕವ ನಿಲಿಸಿದೆಬಡವರಾಧಾರಿ ನಿನ್ನಡಿಗೆರಗುವೆ ಲೇಸಕೊಡು ಪ್ರಸನ್ವೆಂಕಟ ಒಡೆಯನನಿಲಯ3
--------------
ಪ್ರಸನ್ನವೆಂಕಟದಾಸರು
ಕಂಡೀರೆ ನೀವೆಲ್ಲರೂ ಶ್ರೀಕೃಷ್ಣನ ಕಂಡೀರೆ ಪಕಂಡೀರೆ ಪಾಂಡುರಂಗನನೂ ಕಳಕೊಂಡಿರೆಪಾಪ ಸರ್ವವನೂ ಅಂಡಜವಾಹನನಾಗಿಸಂಚರಿಸುವಪುಂಡರೀಕಾಕ್ಷಬ್ರಹ್ಮಾಂಡ ನಾಯಕನನ್ನೂ 1ಎಂಟನೆ ಅವತಾರಿಯೆನಿಸಿ ದೇವಕಿ ಎಂಟನೇಗರ್ಭದಿ ಜನಿಸಿ ಎಂಟನೆಮಾಸಶ್ರಾವಣಕೃಷ್ಣಾಷ್ಟಮಿ ದಿನ ನಟ್ಟಿರುಳಿನಲಿಸೃಷ್ಟಿಗಿಳಿದ ಶ್ರೀಕೃಷ್ಣನ 2ಮಧುರಾ ಪಟ್ಟಣದಿ ಮೈದೋರಿ ಬಹುವಿಧವಾಗಿ ಗೋಕುಲದೊಳಗಾದಧಿಘೃತಚೋರಕನೆಂದು ಯಶೋದೆಗೆಪದುಮಾಕ್ಷಿಯರು ಬಂದು ದೂರುವ ಕೃಷ್ಣನ 3ದನುಜೆ ಪೂತನೆಯಸುಗೊಂಡು ತನ್ನಜನನಿಗೋಪಿಗೆ ಬಾಯೊಳ್ ತೋರ್ದ ಬ್ರಹ್ಮಾಂಡವನಜಾಕ್ಷಿಯರ ಕೂಡಿ ಯಮುನಾ ತೀರದೊಳಾಡಿವನಿತೆಯರುಡುವ ಶೀರೆಗಳೊಯ್ದ ಕೃಷ್ಣನೇ 4ಗೋವಳರರಸನೆಂದೆನಿಸಿ ಶಿರಿಗೋವರ್ಧನವೆತ್ತಿಗೋವ್ಗಳ ಮೇಸಿ ಪಾವಕನುಕಾಳಿಮರ್ದನ ಗೈದು ಮಾವ ಕಂಸನ ಗೆಲ್ದಮಧುರೆಯೊಳ್ ಕೃಷ್ಣನಾ 5ದ್ವಾರಕಾಪುರವೊಂದ ರಚಿಸಿ ಬಲವೀರರಾಮನ ದೊರೆರಾಯನೆಂದೆನಿಸಿನಾರಿಯರ್ ಹದಿನಾರು ಸಾವಿರ ವಡಗೂಡಿಮಾರಕೇಳಿಯೊಳ್ ಮುದ್ದು ತೋರುವ ಕೃಷ್ಣನ 6ಶರದ ಸೇತುವಿಗೆ ಮೈಯ್ಯಾಂತ ಉಟ್ಟಶೆರಗೀಗೆ ವರವ ದ್ರೌಪದಿಗೊಲಿದಿತ್ತನರನ ಸಾರಥಿಯಾಗಿ ಕುರುನೃಪರನು ಗೆಲ್ದುಧರೆಯ ಪಟ್ಟವ ಧರ್ಮಜನಿಗಿತ್ತ ಕೃಷ್ಣನೆ 7ದುಷ್ಟ ನಿಗ್ರಹನೆಂಬ ಬಿರುದೂ ಭಕ್ತರಕ್ಷಕನೆಂದು ಮೂರ್ಲೋಕವದೆಂದೂಸೃಷ್ಟಿಯೊಳ್ ನರಜನರು ನಮಿಸಿ ಪೂಜಿಸಲೆಂದುಬಿಟ್ಟರು ದ್ವಾರಕಾಪುರವ ರಾಮಕೃಷ್ಣರು 8ಹಡಗಿನ ಮೇಲೇರಿ ಬಂದೂ ನಮ್ಮಉಡುಪಿಅನಂತೇಶನಿದಿರಾಗಿ ನಿಂದೂಕಡು ಕೃಪೆಯೊಳ್ ಭಕ್ತ ಕನಕನಿಗೊಲಿದವೊಡೆಯ ಗೊೀವಿಂದ ಗೋಪಾಲಕೃಷ್ಣನ 9
--------------
ಗೋವಿಂದದಾಸ
ಕಂಡೀರೇನೆ ಕಂಡೀರೇನೆ ಹಿಂಡುಗೋಪೇರುಪುಂಡರೀಕವರದ ಶ್ರೀ ಪಾಂಡುರಂಗ ಕೃಷ್ಣಯ್ಯನ ಪ.ಒಮ್ಮೆ ನಾನಂಜಿಸಿಕೊಂಡರಮ್ಮೆಯನುಣ್ಣದೆ ಹೋದನಮ್ಮ ರಂಗ ಸುಮ್ಮಾನದಿ ಭೀಮರಥಿಯಲಿದ್ದಾನಂತೆ 1ಎಡಬಲ ನೋಡದಲೆ ನಡೆದ ಕಾರಣವೇನೆಹಡೆದವರ ಮೇಲೆ ತಾ ಕಡುಕೋಪ ಉಚಿತೇನೆ 2ಗೆಜ್ಜೆ ಘಿಲ್ಲು ಒಡ್ಯಾಣದ ಗುಜ್ಜನ ಕಾಣದೆ ಕಣ್ಣಕಜ್ಜಳ ನೀರಾಗುತಿವೆ ದುರ್ಜನಾರಿ ಕೃಷ್ಣಯ್ಯನ 3ತಾಯಿತಂದೇರಗಲಿ ತಾನು ಬಯಲೊಳಗೆಂತಿಹನೆಮಾಯದ ಲೀಲೆಯ ನೋಡ್ವ ಬಯಕೆ ಕೈಗೂಡಲಿಲ್ಲ 4ಆಡುತಾಡುತ ಬತ್ತಲೆ ಓಡಿದ ವಾಜಿಯನೇರಿರೂಢಿಯೊಳ್ಪ್ರಸನ್ವೆಂಕಟ ಒಡೆಯ ವಿಠಲಯ್ಯನ 5
--------------
ಪ್ರಸನ್ನವೆಂಕಟದಾಸರು
ಕಂಡು ಕಂಡು ನೀ ಎನ್ನ ಕೈ ಬಿಡುವರೆ ಕೃಷ್ಣಪುಂಡರೀಕಾಕ್ಷಪುರುಷೋತ್ತಮ ಹರೇಪಬಂಧುಗಳು ಎನಗಿಲ್ಲ ಬದುಕಿನಲಿ ಸುಖವಿಲ್ಲನಿಂದೆಯಲಿ ನೊಂದೆನಯ್ಯನೀರಜಾಕ್ಷ||ತಂದೆ ತಾಯಿಯು ನೀನೇ ಬಂಧು ಬಳಗವು ನೀನೇಎಂದೆಂದಿಗೂ ನಿನ್ನ ನಂಬಿದೆನೊ ಕೃಷ್ಣಾ 1ಕ್ಷಣವೊಂದು ಯುಗವಾಗಿ ತೃಣವು ಪರ್ವತವಾಗಿಎಣಿಸಲಳವಲ್ಲ ಈ ಭವದ ವ್ಯಥೆಯ ||ಸನಕಾದಿ ಮುನಿವಂದ್ಯ ವನಜಸಂಭವನಯ್ಯಫಣಿಶಾಯಿ ಪ್ರಹ್ಲಾದಗೊಲಿದ ನರಹರಿಯೆ 2ಭಕ್ತ ವತ್ಸಲನೆಂಬ ಬಿರುದು ಬೇಕಾದರೆಭಕ್ತರ ಅಧೀನನಾಗಿ ಇರಬೇಡವೆ ||ಮುಕ್ತಿದಾಯಕ ದೇವ ಹೊನ್ನೂರ ಪುರವಾಸಶಕ್ತಪುರಂದರವಿಠಲ ಶ್ರೀ ಕೃಷ್ಣಾ3
--------------
ಪುರಂದರದಾಸರು
ಕಂಡೆ ಕಂಡೆ ಕಂಡೆನಯ್ಯಾ ಕಂಗಳ ದಣಿಯುವ ತನಕಮಂಗಳ ಮೂರುತಿ ಮನ್ನಾರು ಕೃಷ್ಣನ ಪಉಟ್ಟ ಪೀತಾಂಬರ ಕಂಡೆ ತೊಟ್ಟ ವಜ್ರದಂಗಿ ಕಂಡೆದಕ್ಷಿಣದ ದ್ವಾರಕಿ ಮನ್ನಾರು ಕೃಷ್ಣನ 1ಕಡೆವ ಕಡೆಗೋಲ ಕಂಡೆ ನಡುವಿನೊಡ್ಯಾಣ ಕಂಡೆಕಡು ಮುದ್ದು ಮನ್ನಾರು ಕೃಷ್ಣನ ಕಂಡೆ 2ದೇವಕಿ ದೇವಿಯರ ಕಂಡೆ ಗೋಪಿಯರ ಮುದ್ದಾಟ ಕಂಡೆಮಾವ ಕಂಸನ ಮರ್ದನ ಶ್ರೀ ಕೃಷ್ಣನ 3ಆಕಳ ಕಾವುದ ಕಂಡೆ ಗೋಪಾಲಕೃಷ್ಣನ ಕಂಡೆವೈಕುಂಠವಾಸನ ಮನ್ನಾರು ಕೃಷ್ಣನ 4ಶೇಷನ ಹಾಸಿಕೆಯ ಕಂಡೆ ಸಾಸಿರ ನಾಮನ ಕಂಡೆಶ್ರೀಶಪುರಂದರವಿಠಲ ಕೃಷ್ಣರಾಯನ5
--------------
ಪುರಂದರದಾಸರು
ಕಂಡೆ ಕಂಡೆ ಕೈಲಾಸ ನಿಲಯನ |ಕಂಡೆ ಪಾರ್ವತಿಯ ಪ್ರಿಯ ಗಂಡನಾ ||ಕಂಡೆ ಕಂಡೆ ಕಾಲಾಗ್ನಿವಿಲಯನ |ಕಂಡೆ ಸರ್ವರೋದ್ದಂಡನಾ ಪಅಂಗಜಾಂಗವನು | ಭಂಗಗೈದಭವ|ಭಂಗಹರನ ಭಸ್ಮಾಂಗನಾ ||ಮಂಗಳಾಂಗ ಭೂ |ತಂಗೊಳೊಡೆಯ ಸುರ | ಗಂಗಾಧರನ ಮಹಾಲಿಂಗನಾ 1ಶಂಭು ಶಿವನ ಪಾ | ದಾಂಬುಜಯುಗಳವ |ನಂಬಿದೆನಂಬರ ಕೇಶನಾ ||ಡಂಬಹರನ ದಿ | ಗಂಬರ ಮೂರ್ತಿಯ |ಸಾಂಬಚಿದಂಬರವಾಸನಾ 2ಪಂಚ ತುಂಡ ತ್ರಿ | ಪಂಚನೇತ್ರನಾ |ಪಂಚಭೂತಕಧಿನಾಥನಾ ||ಪಂಚಲಿಂಗ ಪಂಚಾಕ್ಷರ ಪ್ರೀಯನ |ಪಂಚಮೂರ್ತಿಯೊಳು ಖ್ಯಾತನಾ 3ನಂದಿಸ್ವಾರಿ ಜಾ | ಲಂಧರಾಂತಕ |ಸುಂದರಾಂಗಶುಭಶೀಲನಾ ||ಅಂಧಕಾರಿ ಗೋವಿಂದನ ದಾಸನ
--------------
ಗೋವಿಂದದಾಸ
ಕಂಡೆನಾ..............ಸಾಸಿರನಾಮದಶೇಷಮಹಿಮ ವೆಂಕಟೇಶನ ಮೂರುತಿಯ ಪ.ಶೇಷಗಿರಿಗೆ ಕೈವಲ್ಯವೆನಿಪ ಸ್ವಾಮಿಪುಷ್ಕರಿಣಿಯವಾಸನಕಂಡೆನಾಅ.ಪ.ವಿಕಸಿತಸರಸಿಜ ಸಮಪದಯುಗಳನಅಖಿಳಜಗದೆರೆಯನನಖಶ್ರೇಣಿಗಳೊಳು ತರತರದಿ ಮೆರೆವಸುಖಮಣಿಗಳ ಕಂಡೆನಾ 1ಗುಲ್ಛಕೆ ನೂಪುರ ಭೂಷಿತ ವರಫಣಿತಲ್ಪನ ಮೂರುತಿಯಒಪ್ಪುವ ದ್ವಿಜದಂತಿಹ ಜಘನ ಕಂದರ್ಪನಯ್ಯನ ಕಂಡೆನಾ 2ಹೊಂಗನ್ನಡಿಗಳ ಹಳಿದೊಪ್ಪುವ ಜಾನುಂಗಳ ಚೆನ್ನಿಗನಬಂಗಾರ ಬಾಳೆಯ ಕಂಬದಂತೆಸೆವ ಬೆಡಂಗಿನ ತೊಡೆಯವನ ಕಂಡೆನಾ 3ಕಟ್ಟಿಹ ಕಟಹವನಿಟ್ಟ ಝಗ ಝಗಿಸುವ ಪೊಂಬಟ್ಟೆಯನುಟ್ಟವನಇಟ್ಟ ಕಿಂಕಿಣಿದಾಮ ಮಧ್ಯತ್ರಿವಳಿ ನಾಭಿಸೃಷ್ಟಿಯುದರದವನ ಕಂಡೆನಾ 4ಉರದಿ ಮೆರೆವ ಸಿರಿವತ್ಸಲಾಂಛನಕೇಯೂರ ಕೌಸ್ತುಭಧರನಸಿರಿತುಲಸಿ ಪದಕಹಾರ ಕಂಬುಕಂದರತಿರುವೆಂಗಳಯ್ಯನ ಕಂಡೆನಾ5ಅರಿಮಥÀನವ ಮಾಳ್ಪರಿ ಶ್ರುತಿಮಯವಾದವರಶಂಖೋಧೃತನವರಾಭಯ ನೀಡುವವರಗದೆಪದುಮದಪರಮಾಂಗನ ಕಂಡೆ ನಾ 6ಅಂಬುಜಮೊಗದೊಳು ಕಾಂತಿಯ ಬೀರುವಲಂಬಿತ ಕುಂಡಲನಪೊಂಬಣ್ಣದ ಸಂಪಿಗೆ ಸಂಪಿಗೆನಾಸಿಕಲುಳಿ ನಾಸಾಪುಟದವನ ಕಂಡೆನಾ 7ಮರಿಕೂರುಮನಂದದಿ ಕದಪುಗಳು ಅಮರುತ ಬಿಂಬಾಧರನಪೆರೆನೊಸಲಿನ ಭ್ರೂಲತೆ ಕಿರುನಗೆ ಕಸ್ತೂರಿ ತಿಲಕಾಂಕಿತನ ಕಂಡೆನಾ 8ಕೋಟಿಇನತೇಜದಮಕುಟವರಕರುಣನೋಟದ ಜಗಪಾಲನಹಾಟಕಗಿರಿಯ ಪ್ರಸನ್ನವೆಂಕಟ ಜಗನ್ನಾಟಕ ಸೂತ್ರಧಾರನ ಕಂಡೆನಾ 9
--------------
ಪ್ರಸನ್ನವೆಂಕಟದಾಸರು
ಕಣ್ಣಾರೆ ಕಂಡೆನಚ್ಯುತನ-ಕಂಚಿಪುಣ್ಯ ಕೋಟಿ ಕರಿರಾಜವರದನ ಪವರಮಣಿ ಮುಕುಟಮಸ್ತಕನ ಸುರ-ವರಸನಕಾದಿ ವಂದಿತ ಪಾದಯುಗನ ||ತರುಣಿ ಲಕ್ಷ್ಮೀ ಮನೋಹರನ-ಪೀತಾಂಬರದುಡಿಗೆಯಲಿ ರಂಜಿಸುವ ವಿಗ್ರಹನ 1ಕಸ್ತೂರಿ ಪೆರೆನೊಸಲವನ ತೋರಮುತ್ತಿನ ಹಾರ ಪದಕವ ಧರಿಸಿದನ ||ಎತ್ತಿದಭಯ ಹಸ್ತದವನ ತನ್ನಭಕ್ತರ ಸ್ತುತಿಗೆ ಹಾರಯಿಸಿ ಹಿಗ್ಗುವನ 2ನೀಲಮೇಘಶ್ಯಾಮಲನ ದೇವಲೋಲಮಕರಕುಂಡಲಧರಿಸಿಹನ ||ಮೂಲೋಕದೊಳಗೆ ಚೆನ್ನಿಗನ ಕಮಲಾಲಯಾಪತಿ ವೈಕುಂಠವಲ್ಲಭನ 3ಭಾನುಕೋಟಿ ತೇಜದವನಭವಕಾನನರಾಶಿಗೆಹವ್ಯವಾಹನನ ||ದಾನವರೆದೆಯ ತಲ್ಲಣನ ಮುನಿಮಾನಸೆಹಂಸನೆಂದೆನಿಸಿ ಮೆರೆವನ4ತುಂಗಚತುರ್ಭುಜದವನಶುಭಮಂಗಳ ರೇಖೆ ಅಂಗಾಲಲೊಪ್ಪುವನ ||ಶೃಂಗಾರ ಹಾರ ಕಂಧರನ ದೇವಗಂಗೆಯ ಪಿತಪುರಂದರವಿಠಲನ5
--------------
ಪುರಂದರದಾಸರು
ಕನಕಗಿರಿ ರಂಗನ ಕಾಣದೆ ನಿಲ್ಲಲಾರೆ ನಾಕನಕಾಭರಣನ ತೋರಿಕೊಡೆ ಸೈರಿಸಲಾರೆ ಪ.ಕನಕದಂತೆ ಮೈಯವನ ಕನಕಾಚಲಧರನಕನಕಾಂಬಕನ ಗೆದ್ದಕನಕಕಶ್ಯಪನ ಗೆದ್ದ1ಕನಕಾದ್ರಿಕರಕರ ಕನಕಭೂಮಿತಾರಕನಕಮೃಗ ಸಂಹಾರ ಕನಕಪಕ್ಷಿಸಂಚರ 2ಕನಕಾಂಬರವ ಬಿಟ್ಟ ಕನಕವರ್ಮವ ತೊಟ್ಟಕನಕಗನ್ನಿಕೆಯ ರಮಣಕರ್ತುಪ್ರಸನ್ನವೆಂಕಟನ3
--------------
ಪ್ರಸನ್ನವೆಂಕಟದಾಸರು
ಕಮಲನಾಭ ವೆಂಕಟೇಶ ಭಕ್ತ ಕಲ್ಪಭೂರುಹ ಶ್ರೀಕಮಲಪ್ರಾಣೇಶಾಪವಿಮಲ ವೈಕುಂಠಪುರೀಶಾ ಶಿವಕಮಲಸಂಭವನುತ ಕರ್ಬುರನಾಶಾ ಅ.ಪನಿರುಪಮ ಸುಂದರ ಗಾತ್ರಾನಿತ್ಯಪರಿಪೂರ್ಣ ವೈಭವಪರಮಪವಿತ್ರಾಶರನಿಧಿತನಯಕಳತ್ರಾಶೇಷಪರಿಜನಕೃತಘೋರಪಾಪಾಂಧ ಮಿತ್ರಾ1ಸನಕಸನಂದನ ವಿನುತಾಶಶಿದಿನಕರಶತಕೋಟಿ ದಿವ್ಯ ಸುಚರಿತಾಜನನ ಮರಣ ಕ್ಲೇಶರಹಿತ ಶ್ರೀವನಜಸುದರ್ಶನ ವನಮಾಲ ಧರಿತ2ಜಲಜಮಿತ್ರ ವಂಶ ಭೂಷಾ ಕ್ಷಾರಜಲಧಿಬಂಧನ ಪುಣ್ಯಜನ ಪ್ರಾಣ ಶೋಷಾತುಲಸೀ ರಾಮದಾಸ ಪೋಷಾ ಶ್ರೀತುಲಸೀ ಕಾನನಹಿತ ತುಂಬುರ ತೋಷಾ 3
--------------
ತುಳಸೀರಾಮದಾಸರು
ಕಮಲೇಶ ನಿನ್ನ ವಿಮಲಯುಗಳಪಾದಕಮಲಕೆಅಮರರುಭ್ರಮರಗಳುಪ.ಅತಿಸುವಟು ರೂಪದಿ ವಿತರಣ ಬೇಡಲುಕ್ರತದೆಡೆ ಮೂರಡಿಕ್ಷಿತಿನೋಡೆಅತುಳಚರಿತ ವಸುಮತಿಯನಳೆಯುತಲಿದ್ವಿತಿಯ ಪದಕೆ ಅಬ್ಧಿಸತಿಯ ಪಡೆದ ಪಾದಕೆ 1ಹಲವು ಕಾಲವು ತನ್ನ ನಲ್ಲನ ಶಾಪದಿ ಅಹಲ್ಯೆಯು ತಾನಿಳೆಯಲ್ಲಿ ಕಲ್ಲಾಗಿರಲುಸುಲಭದಿ ಭಕ್ತರ ಸಲಹುವ ಬಿರುದಿಗೆಲಲನೆಯ ಮಾಡಿದ ಸುಲಲಿತ ಪಾದಕೆ 2ಚಿನ್ನತನದೊಳೆ ಉನ್ನತ ಭಕ್ತ ಧ್ರುವನ್ನ ದೃಢಮತಿಯನ್ನೆ ಕಂಡುತನ್ನ ಕರುಣದಿ ಪಾವನ ಪದವಿತ್ತ ಪ್ರಸನ್ನ ವೆಂಕಟೇಶನ ಶ್ರೀಪಾದಕೆ 3
--------------
ಪ್ರಸನ್ನವೆಂಕಟದಾಸರು
ಕರತಾರೆ ಕರತಾರೆ ಶ್ರೀನಿವಾಸನಸುರರರಸ ಸ್ವಾಮಿ ಶ್ರೀ ವೆಂಕಟೇಶನ ಪ.ಬರಹೇಳೆ ಬರಹೇಳೆ ಬೇಗ ಕರಿಗಮನೆ ರಂಗಗೆಸಿರಿರಾಣಿರಮಣ ಘನಾಂಗಗೆಅರಘಳಿಗೆ ಸರಸವಲ್ಲ ಅರಸನಿಲ್ಲದವಳೆ ಸಲ್ಲಸ್ಮರನೆಂಬೊ ಸಿರಿಕಳ್ಳ ಕರುಣ್ಯಿಲ್ಲ 1ಸುಂದರ ಸುಂದರ ಶುಭಮಂದಿರನ್ನ ದಯಾರಸಸುಂದರನ್ನ ವರಕಂಬುಕಂದರನ್ನಚೆಂದಾವರೆಗಣ್ಣವನಸಿಂಧೂರವರದನ್ನ ದೇವೇಂದ್ರಜಿತ ಪಾರಿಜಾತ ತಂದನ್ನ 2ಹೋಯಿತೆ ಹೋಯಿತೆ ಹೊನ್ನಪ್ರಾಯ ಯದುರಾಯ ಬಾರದಾಯಿತೀ ಅವಸ್ಥೆ ಹುಟ್ಟು ಹೊಂದಿಕಾಯಬೇಕೆಂದೊಮ್ಮಿಗೆ ಉದಯವಾದ ಪ್ರಸನ್ವೆಂಕಟರಾಯ ಬಂದ ಫಲಿಸಿತಾನಂದ 3
--------------
ಪ್ರಸನ್ನವೆಂಕಟದಾಸರು
ಕರವಮುಗಿವೇ ಕಮಲನಯನಕರುಣದಿಂದಲಿ ಪಾಲಿಸೊಕರಿವರದ ಶ್ರೀ ಕಮಲನಾಭಕರೆದು ಎನ್ನನು ಮನ್ನಿಸೊ 1ಸ್ಮರಿಸಲರಿಯೇ ಸಿರಿಯ ರಮಣಪರಮಪಾವನ ಪಾದವಾಸ್ಮರನಜನಕಶರಧಿಶಯನಇರಿಸು ಎನ್ನೊಳು ಮೋಹವಾ 2ಬಂಧು ಬಳಗ ಭಾಗ್ಯ ಭೋಗ್ಯ-ದಿಂದ ಸುಖವ ಕಾಣೆನೇದಂದಶೋಕ ಶಮನನೇ ಗೊೀವಿಂದದಾಸನ ಪ್ರಾಣನೇ 3
--------------
ಗೋವಿಂದದಾಸ
ಕರವೊಡ್ಡಿ ಬೇಡುವೆನು ಕಮಲದಳನೇತ್ರಕರುಣದಲಿ ಸಲಹೆನ್ನ ಕಾಮಹರ ಮಿತ್ರ ಪಕಾಯದಲಿ ಬಲವಿಲ್ಲ ಕಂಗಳಿಗೆ ಸುಖವಿಲ್ಲಕೈಯ್ಯೊಳಗೆ ಹಣವಿಲ್ಲ ಬಾಯಬಲವಿಲ್ಲಕಾಯವಿದು ನೀನಿಟ್ಟ ಮಾಯಪಾಶಕೆ ಸಿಕ್ಕಿಹೇಯವಾದುದು ಸಲಹೋ ಹೇ ಲಕ್ಷ್ಮೀರಮಣ 1ಕಾಲನಾಳುಗಳೆಮ್ಮ ಕಾಲಕೈಗಳಕಟ್ಟಿಕಾಲದಂಡದಿ ಬಡಿದು ಕಾಲನೆಡೆಗೈದೂಕಾಲಮೇಘದ ತೆರದಿ ಕಾಲನಂತೆ ಘರ್ಜಿಸುವಕಾಲದಲಿ ಕಾಯ್ವವರ ಕಾಣೆ ನಾಳಿನಲೀ 2ಕರಿರಾಜನನು ಕಾಯ್ದೆ ಕಂಬದಲಿ ಮೈತೋರ್ದೆಖರ ದೂಷಣ ನಿನ್ನ ಕರದಿ ಶಿರ ವರಿದೀಕರುಣದಿಂದಲಿ ದ್ರೌಪದಿಯ ಸೆರಗಿಗಕ್ಷಯವಿತ್ತೆಕರವಿಡಿದು ಸಲಹೆನ್ನ ಕಲುಶ ಸಂಹಾರಾ 3ಕಂದನಪರಾಧವನು ತಂದೆ ಕ್ಷಮಿಸುವ ತೆರದಿಕಂದುಕುಂದುಗಳೆನ್ನೊಳಿರಲು ನೀ ಕ್ಷಮಿಸಿಕಂದನಂದದಿ ನೋಡಿಕಂದರ್ಪಜನಕನೆಚಂದದಲಿ ಸಲಹೊ ಗೋವಿಂದದಾಸನನೂ 4
--------------
ಗೋವಿಂದದಾಸ