ಒಟ್ಟು 850 ಕಡೆಗಳಲ್ಲಿ , 94 ದಾಸರು , 708 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಭಾಗ್ಯವಂತನು ಇನ್ನು ಯಾರಯ್ಯ ಪ. ಯೋಗ್ಯ ವೈಷ್ಣವಕುಲದ ಭಾಗವತನಲ್ಲದೆ ಅ.ಪ. ಚತುರನೆನಿಸಿ ಲಕ್ಷ ಮನೆಮನೆ ತಿರುಗಿದೆಚತುರಾನನನಾ ಮಾತು ಅನುಸರಿಸಿದೆಸತು ಚಿತು ಆನಂದ ಆತ್ಮ ಹರಿಸ-ರ್ವೋತ್ತಮನ ದಾಸರದಾಸ ಎಂಬುವನಲ್ಲದೆ 1 ತಾರÀತಮ್ಯ ಪಂಚಭೇದವನೆ ತಿಳಿದು ಶ್ರೀಮಾರುತನ ಮತಗಳೇ ಹಾರೈಸುತಕರ್ಮ ವಂಚನೆಯಿಲ್ಲದನುದಿನದಿ ಮಾಡುತಚರಿಸುತ ಸಂಚಿತಾಗಾಮಿ ಕಳೆವವನಲ್ಲದೆÉ2 ಪತಿತಪಾವನ ಶ್ರೀಹರಿಗುರುಗಳನು ಮೋದದಿಕ್ಷಿತಿಯೊಳಗೆ ಭಜನೆಯೆ ಧನವೆನ್ನುತಅತಿಶಯದಿ ಶೇಷಾದ್ರಿ ಹಯವದನನ್ನ ನೆನೆನೆನೆದುಪ್ರೀತಿಯಿಂದಲಿ ಭಜಿಸುವವನಲ್ಲದೆ 3
--------------
ವಾದಿರಾಜ
ಭಾರತೀ ಭವಹಾರಿಯೆ | ಭಕ್ತರಪ್ರಿಯೆ | ಭಾರತೀ ಭವಹಾರಿಯೇ ಪ ಈರೈದು ಇಂದ್ರಿಯಗಳುಗಾರು | ಮಾಡದಂತೆ ಸಾಕಾರವಾಗಿ ಪಾಲಿಸು ಅ.ಪ. ಮತಿವಂತನ ಮಾಳ್ಪುದು | ಇದಕೆ ನಿನ್ನ | ಪತಿಯ ಈಗಲೆ ಕೇಳ್ವುದು | ಕ್ಷಿತಿಯೊಳು ಹೀನರ ಸ್ತುತಿಸಲರಿಯೆ | ಮು- ಕುತಿ ಮಾರ್ಗವ ತೋರಿ ಭಕುತಿ ಬೇಗ ಒದಗಿಸು 1 ಮಹತ್ತತ್ವದಭಿಮಾನಿ ನೀ | ಕಲಿರಹಿತೆ | ಅಹಿಪತಿ ಅಪ್ಪ ಖಗಪ ಜನನೀ || ಮಹಾಪ್ರಮಾಣು ವ್ಯಾಪುತೆ ಸರ್ವಜೀವರ | ದೇಹದಲಿ ನಿಂದು ಶ್ರೀಹರಿ ಆರಾಧನೆಯ ರಹಸ್ಯವ 2 ಶರಣು ಶರಣು ಗುಣಮಣಿ | ಚಂದ್ರಪ್ರಕಾಶೆ | ಪಾವನಿ ಕಲ್ಯಾಣಿ ತರತಮ್ಯ ಭಾವದಿ || ಅರಿದು ಕೊಂಡಾಡುವ ಚಿಂತೆ ಇರಲಿ | ವಿ- | ಸ್ಮರಣೆಯಾಗದಂತೆ ವಿಜಯವಿಠ್ಠಲನ್ನ ನಿರುತ ಪೊಂದಿಸು 3
--------------
ವಿಜಯದಾಸ
ಭಾರತೀಶ ಪ್ರಿಯ | ವಿಠಲ ಪೊರೆ ಇವಳ ಪ ನೆರೆನಂಬಿ ಬಂದಿಹಳ | ಪೊರೆಯೊ ಶ್ರೀಹರಿಯೇ ಅ.ಪ. ದಾಸ ದೀಕ್ಷೆಯ ಜ್ಞಾನ | ಲೇಸು ಪಡೆದವಳಲ್ಲಆಶೆಪಳು ತವದಾಸ್ಯ | ಮೇಶ ಮಧ್ವೇಶಆಶೆ ಮಾತ್ರಕೆ ಒಲಿದು | ಪೋಷಿಸಲಿ ಬೇಕಯ್ಯಹೇ ಸದಾಶಿವ ವಂದ್ಯ | ವಾಸ ವಾನುಜನೆ 1 ಪತಿಸುತರು ಬಾಂಧವರ | ಹಿತದಲ್ಲಿ ಮತಿಯಿತ್ತುಅತುಳ ವಿಭವದಿ ಮೆರೆಸಿ | ಕೀರ್ತಿಕೊಡಿಸೋಕೃತಿ ಪತಿಯೆ ತವಚರಣ | ಸತತ ನೆನೆಯುವ ಭಾಗ್ಯಪಥದಲ್ಲಿ ಇರಿಸಿ ಕೃತ | ಕೃತ್ಯಳೆಂದೆನಿಸೋ 2 ಉದಧಿ ಶಯನಾ |ಹದುಳದಲಿ ಮೂರೆರಡು | ಭೇದ ತರತಮಜ್ಞಾನವದಗಿಸುತ ಪೊರೆ ಇವಳ | ಮಧು ಮಥನ ಹರಿಯೇ 3 ನಿನ್ನ ನಾಮವ ಬಿಟ್ಟು | ಅನ್ಯ ಸಾಧನ ಕಾಣೆಚೆನ್ನ ಈ ಕಲಿಯುಗದಿ | ಅನ್ನಂತ ಮಹಿಮಾಘನ್ನ ದಯವನಧಿ ಆ| ಪನ್ನ ಜನರಕ್ಷಕನೆನಿನ್ನೊಲಿಮೆ ಉಳ್ಳನಕ | ಇನ್ನಾವ ಭಯವೋ 4 ಭಾವಜ್ಞ ನೀನಾಗಿ | ಪಾವಕಳೆ ಸಲಹೋ5
--------------
ಗುರುಗೋವಿಂದವಿಠಲರು
ಭಾವಭಕ್ತಿಗೊಲಿವ ತಾಂ ಶ್ರೀಹರಿ ಕಾವ ಕರುಣದಲಿ ಪರೋಪರಿ ಧ್ರುವ ಕಂದ ಪ್ರಹ್ಲಾದನ ಸದ್ಭಾವಕಾಗಿ ಸಂಧಿಸೊದಗಿ ಬಂದ ನರಸಿಂಹನಾಗಿ ತಂದೆ ತಾಯಿ ಬಂಧು ಸಮಸ್ತವಾಗಿ ಬಂದು ರಕ್ಷಿಸಿದ ಪ್ರತ್ಯಕ್ಷವಾಗಿ 1 ಭಾವದಿಂದ ದ್ರೌಪದಿಗಾಗ್ಯಧ್ಯಕ್ಷ ಠಾವಠಾವಿಲಿ ಕಾಯಿದೆ ಪ್ರತ್ಯಕ್ಷ ಭುವನದೊಳಾಗಿ ಪಾಂಡವಪಕ್ಷ ಜೀವ ಪ್ರಾಣಾಗಿ ಮಾಡಿದ ಸಂರಕ್ಷ 2 ಭಾವದಿಂದಾಗುವ ಭಕ್ತರಾಧೀನ ದೇವೋತ್ತಮದ ಬಿಟ್ಟು ಹಿರಿಯತನ ದಾವದೊಂದೇಕಾಗಿ ತಾಂ ಸಾವಧಾನ ಈವ್ಹಾಭಕ್ತರ ಮನಿಲ್ಯನುದಿನ 3 ಭಾವದಿಂದುದಿಸುವ ಸ್ವಯಂಭಾನು ಭಾವಿಕರಿಗಾಗುವ ಶ್ರಯಧೇನು ಭಾವದಿಂದಾಗುವ ಸಫಲ ತಾನು ಭಾವದಿಂದ ಭಾವ ಪೂರಿಸಿದನು 4 ಭಾವವೆಂಬಂಜನ ಕಣ್ಣಿಲೂಡಿ ಭಾವದಲುಂಬುದನು ಒಡಮೂಡಿ ಭಾವದಿಂದ ಮಹಿಪತಿ ಕೈಯಗೂಡಿ ಜೀವ ಪಾವನ್ನಗೈಸÀುತಿಹ್ಯ ನೋಡಿ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಭಿಕ್ಷಾವ ನೀಡ್ವುದು ತಾಕ್ರ್ಯನ ಮಾತೇ | ಹರಿ ಭಕುತಿ ಎಂಬಭಿಕ್ಷಾವ ನೀಡ್ವುದು ತಾಕ್ರ್ಯನ ಮಾತೇ ಪ ತ್ರ್ಯಕ್ಷಸು ಸನ್ನುತೆ | ಮೋಕ್ಷದ ಶ್ರೀಹರಿಶಿಕ್ಷಿಸುಭಕುತಿಯ | ಪಕ್ಷಿಯ ಮಾತೇ ಅ.ಪ. ಪತಿ ಸಿರಿ | ವಸುದೇವ ಸುತನನಯಶವ ನುಡಿ ಪದ | ಬಿಸಜದಿ ಭಕುತಿಯ 1 ಮೂರ್ತಿ | ಕೇಳ್ವುದು ಶರಣಾರ್ತಿಮಾನಾಭಿಮಾನ ನಿನ್ನದು ಗಾಯತ್ರಿ | ನರಹರಿ ಗುರು ಭಕ್ತಿ ||ಕ್ಷೋಣಿಯೊಳಗೆ ಸ | ತ್ತ್ರಾಣಿ ಭಾರತಿಯೆಮಾಣದೆನಗೆ ಜಗ | ತ್ರಾಣನ ಭಕುತಿಯ 2 ಸತಿ ಕಾಳೀ||ಸಾರತ ಮನು ಗುರು | ಗೋವಿಂದ ವಿಠಲನಚಾರು ಚರಣ ಸ | ದ್ಭಕುತಿಯು ಎಂಬ 3
--------------
ಗುರುಗೋವಿಂದವಿಠಲರು
ಭೂಮಿಸುರರ ಘನ | ಸ್ತೋಮವಂದಿತ ಮಹಾ ಮಹಿಮಾ ಮಹಾಮಹಿಮ ಸಜ್ಜನ - ತತಿ - ಪ್ರೇಮಾ ಪ ಕಾಮಧೇನು ಸುಕಲ್ಪತರು ಚಿಂ - ತಾಮಣಿಯು ತಾನೆನಿಸಿ ಸರ್ವದ ಕಾಮಿತಾರ್ಥವನಿತ್ತು ಮೆರೆವನು ಈ ಮಹಿಯೊಳು ಸಾರ್ವಭೌಮನು ಅ.ಪ ಪ್ರಾಣತನಯ ವಿಷ್ವಕ್ಸೇನ ಶ್ರೀಹರಿ ಶಾಪದಿಂದ ಶಾಪದಿಂದ ಭೂತಳದಲಿ ಬಂದಾ ಮಾಣವಕ ಪ್ರಹ್ಲಾದನೆನಿಸಿ - ಪ್ರಾಣದೇವಾವೇಶ ಶೇಷನು ಕ್ಷೋಣಿಯೊಳು ಶಿರಿವ್ಯಾಸನೆನಿಸೀ ಮಾಣದಲೆ ಗುರುರಾಘವೇಂದ್ರನು 1 ಅಲವಬೋಧರ ಮತ - ಜಲಧಿಚಂದಿರನೆನಿಪನೀತಾ ನೆನಿಪನೀತ ಲೋಕದಿ ಬಹು ಖ್ಯಾತಾ ಲಲಿತ ವೃಂದಾವನದಿ ನಿಂತು ಹಲವು ಭಕುತರಭೀಷ್ಠಕಾರ್ಯವ ಸಲಿಸಿ ಸುಜನರ ಸಲಹೊಗೋಸುಗ ಸುಲಭತರನಾಗಿರುವ ಗುರುವರ 2 ಕಿಟಜಸರಿದ್ವರ - ತಟದಿ ಸಂತತ ತಾನಿರುವ ತಾನಿರುವ ಭಕ್ತರು ಕರೆಯೆ ಬರುವಾ ಧಿಟ ಸುಭಕ್ತರ ಬಿಡದೆ ತಾನು ಪ್ರ - ಕಟನಾಗಿ ಮಹಿಮೆ ತೋರುವ ಧಿಟ ಗುರು ಜಗನ್ನಾಥ ವಿಠಲನ ಭಟಜನಾಗ್ರಣಿ ಎನಿಸಿ ಮೆರೆವ 3
--------------
ಗುರುಜಗನ್ನಾಥದಾಸರು
ಭೂರಮಣ ರಘುರಾಮ ವಿಠ್ಠಲನೆ ನೀನಿವಳಭೂರಿ ಕರುಣದಲಿಂದ ಕಾಪಾಡಬೇಕೊ ಪ ಆರು ಇಲ್ಲವೊ ಗತಿಯು ನಿನ್ಹೊರತು ಶ್ರೀಹರಿಯೆಸಾರಿ ನಿನ್ನಯ ಪಾದವಾರಾಧಿಸುತ್ತಿಹಳಾ ಅ.ಪ. ತಾರತಮ್ಯ ಜ್ಞಾನ ಪಂಚಭೇದವನರುಹಿಪಾರು ಮಾಡೀಭವದ ಪರಿತಾಪವಾನೀರೇರುಹಾನಯನ ಕಾರುಣ್ಯ ಮೂರುತಿಯೆಪ್ರೇರಕನೆ ಜಗಕೆಲ್ಲ ಸರ್ವಾಂತರಾತ್ಮ 1 ಪತಿ ಸೇವೆಯಲಿ ಭಕುತಿ ಅತಿಶಯದಿ ಹರಿ ಭಕುತಿಮತಿಯು ತತ್ವಾರ್ಥಗಳ ಗ್ರಹಿಸುವಲಿ ರತಿಯೂಸತತ ವಿಷಯಾದಿಗಳು ನಶ್ವರವು ಎಂದೆನುತಮತಿಯಿತ್ತು ಇವಳೀಗೆ ಪಾಲಿಪುದು ವೀರಕುತಿ2 ಪ್ರಾಚೀನ ಕರ್ಮಗಳ ಯೋಚಿಸಲು ಎನ್ನಳವೆಕೀಚಕಾರಿ ಪ್ರೀಯ ಮೋಚಕನು ನೀನೇ |ಚಾಚಿ ಶಿರ ನಿನ್ನಡಿಗೆ ಯಾಚಿಸುವೆ ಶ್ರೀಹರಿಯೆಪಾಚ ಕಾಂತರ್ಯಾಮಿ ಕರ್ಮನಾಮಕನೆ 3 ಭವ ಬಂಧ ಕತ್ತರಿಸೊ ಹರಿಯೆ 4 ಕೃತ್ತಿವಾಸನ ತಾತ ಉತ್ತಮೋತ್ತಮ ದೇವಪುತ್ರಮಿತ್ರನು ನೀನೆ ಸರ್ವತ್ರ ಭಾಂಧವನೆ |ಪುತ್ರಿಯನು ಸಲಹೆಂದು ಪ್ರಾರ್ಥಿಸುವೆ ನಿನ್ನಡಿಗೆಆಪ್ತ ಗುರುಗೋವಿಂದ ವಿಠಲ ಮಮ ಸ್ವಾಮೀ 5
--------------
ಗುರುಗೋವಿಂದವಿಠಲರು
ಭ್ರಷ್ಟನಾದೆನಲ್ಲಾ ಶ್ರೀಹರಿ ಪೂಜೆ ಮಾಡಲಿಲ್ಲಾ ಸೃಷ್ಟಿಗೀಶ ಕಡು ಕಷ್ಟವ ತೊಲಗಿಸಿ ಶಿಷ್ಟದಾಗದೊಳು ನಿಷ್ಠೆಯಗೊಳಿಸಿದ ಪ ದುಷ್ಟ ವಿಷಯ ಪಾದೋದಿ ಜಲದಿನಾ [?] ಕಷ್ಟದಿಂದೀಸಿನೆಷ್ಟು ಹೈರಾಣಾದೆ 1 ಸುತ ವ್ಯಾಮೋಹದಿ ಮತಿಯ ಶಿಲುಕಿ ಹರಿ ಪಥವೆಂಬುದನ ಗತಿ ಗಹನಪ್ಪುದು 2 ಶರಣವತ್ಸಲೆಂಬ ಬಿರುದನಾಂತ ಶ್ರೀ ನರಸಿಂಹವಿಠ್ಠಲ ಪೊರೆ ಎನ್ನ ಕರುಣದಿ 3
--------------
ನರಸಿಂಹವಿಠಲರು
ಮಂಗಳ ಜಯ ಜಯ ಮಂಗಳ ತುಳಸಿಗೆ ಮಂಗಳ ಜಯ ಜಯ ರಂಗನಾಯಕಗೆ ಪ ವಾರಿಧಿ ಮಥÀನದಿ ವಾರಿಜನಾಭನ ವಾರಿಜನೇತ್ರನ ವಾರಿಗಳಿಂದ ತೋರಿದ ತುಳಸಿಯು ಸೇರಿದಳೆಲ್ಲ ಶ- ರೀರವ ಪಾವನ ಮಾಡಬೇಕೆನುತ 1 ತುಳಸಿಯ ನಾಮವ ಬೆಳೆಸಿಯೆ ಲೋಕವ ಬಳಸಿಕೊಂಡಿರುವೆನು ಎನುತಲೆ ಬಂದು ಕಳಸಿದ ಮನುಜರ ಉಳಿಸಬೇಕೆನುತಲೆ ಕಳಸದ ತೆರನಂತೆ ಉದಿಸಿದಳು ತುಳಸಿ 2 ಸಾಲಿಗ್ರಾಮವು ಇಲ್ಲದಾತನ ಮನೆಯೊಳು ಕಾಲೂರಿ ನಿಲ್ಲಳು ಹರುಷದೊಳಿವಳು ಪಾಲಿಪ ಹರಿಶಿಲೆಯಿರುವಂಥ ಸ್ಥಳದೊಳು ಓಲಗವಾಗಿಯೆ ತೋರುತ್ತಲಿಹಳು3 ಎಲ್ಲಿಯು ತುಳಸಿಯು ಅಲ್ಲಿಯೆ ಶ್ರೀಹರಿ ವಲ್ಲಭೆ ಸಹವಾಗಿ ಇರುತಿಪ್ಪ ಬಿಡದೆ ಫುಲ್ಲನಾಭನು ಕೃಷ್ಣ ಆಡಿದ ಪರಿಯನು ಗೊಲ್ಲತಿಯರು ಕಂಡು ನಾಚಿ ಹಿಗ್ಗಿದರು 4 ಬಂದಳು ಭಕ್ತರ ಮಂದಿರದೆಡಗೆ ಗೋ- ವಿಂದನ ಕಂಡಿರೆ ಎಂದು ಕೇಳಿದಳು ವೃಂದಾವನದೊಳು ನಿಂದಳು ತುಳಸಿಯು ಚಂದವು ನಿಮ್ಮಯ ಭವನದೊಳೆನುತ 5 ಗೋವಿನ ತುಪ್ಪದಿ ದೀವಿಗೆಯಿರಿಸಿಯೆ ಭಾವ ಶುದ್ಧತ್ವದಿ ಬಲವಂದರವಳು ಕಾವಲು ಪೋಗಿಯೆ ಕರ್ಣದ ಒಳಗಿದ್ದು ಜೀವಿತ ಮುಕ್ತಿಯ ತೋರುವೆನೆನುತ 6 ಸರ್ವತೀರ್ಥಗಳನ್ನು ಮೂಲದಿ ಧರಿಸಿಯೆ ಸರ್ವ ದೇವರ್ಕಳ ಮಧ್ಯದೊಳಿರಿಸಿ ಸರ್ವ ವೇದಂಗಳ ಶಿರದೊಳು ಧರಿಸಿಯೆ ಸರ್ವವ ಕಾಲಗೆ ನಿರ್ವಹಿಸುತಿಹಳು 7 ಅಂಗಳದೊಳಗಿಹ ಮಂಗಳ ಮಹಿಮಗೆ ರಂಗುವಲ್ಲಿಯನಿಕ್ಕಿ ಶೃಂಗಾರವಾಗಿ ಸಾಂಗ್ಯದೊಳಿಹ ಒಂದು ಮಂಗಳ ಬರೆದರೆ ಬಂಗಾರ ಮನೆಯನ್ನು ತೋರುವಳಿವಳು 8 ಮೂಲದ ಮೃತ್ತಿಕೆ ಮೂಲ ಪಣೆಯೊಳಿಟ್ಟು ಕಾಲದಿ ಸ್ನಾನವ ಮಾಡಿದ ನರರು ಭಾಳವಾಗಿಹ ಅಘರಾಶಿಯನೆಲ್ಲವ ಚಾಳಿಸಿ ಕಳೆವರು ಕಾಲನ ಗೆಲಿದು 9 ತನ್ನ ಕಾಷ್ಟವ ತಂದು ಚಿನ್ನದಿ ಸುತ್ತಿಸಿ ಕರ್ಣದಿ ಧರಿಸಿದ ಮನುಜರಿಗೆಲ್ಲ ಉನ್ನತ ಪದವಿಯ ತೋರುವೆನೆನುತಲೆ ಪನ್ನಗಶಯನಗೆ ಪ್ರೀತಿಯಾಗಿಹಳು 10 ಉತ್ತಮವಾಗಿಹ ಕಾರ್ತಿಕ ಮಾಸದಿ ಅರ್ತಿಯಿಂದಲೆ ನಲಿನಲಿಯುತ್ತ ದೇವಿಯ ಕರ್ತನ ಕೀರ್ತನೆ ರಚಿಸುವ ಮನದಿ 11 ಬ್ರಾಹ್ಮಿ ಮುಹೂರ್ತದಿ ಸ್ನಾನ ತರ್ಪಣವನ್ನು ನಿರ್ಮಲ ತೀರದಿ ತಿದ್ದಿಯೆ ಕೊಂಡು ಧರ್ಮಕ್ಕೆ ಯೋಗ್ಯಳ ಪೂಜೆಯ ಮಾಡಲು ಕರ್ಮ ಬಂಧಗಳೆಲ್ಲ ಕಡಿದುಕೊಳುವುದು 12 ಸಾಯಂಕಾಲದಿ ದೀವಿಗೆ ಹಚ್ಚಲು ಮಾಯಗಳೆಲ್ಲವು ಮರುಗಿ ಪೋಗವುವು ದಾಯವಾಗಿಯೆ ಸುರರಾಯನೊಳರ್ಥವ ಬೇವಿನವರು ಕಂಡು ಹೊರಸಾರುತಿಹರು 13 ಸರ್ವದಾನಗಳನ್ನು ಸರ್ವಪೂಜೆಗಳನ್ನು ಸರ್ವರು ಋಷಿ ಪಿತೃ ತರ್ಪಣಗಳನು ಸರ್ವಥಾ ತುಳಸಿಯ ತಪ್ಪಿಸಬೇಡೆಂದು ನಿರ್ವಾಹವಾಗಿಯೆ ಶ್ರುತಿಯು ಪೇಳಿದುದು 14 ಅಂಗದೊಳಗಿಹ ಮಂಗಳ ಮಹಿಮಗೆ ಸಾಂಗ್ಯದೊಳಿದನು ಪಠಿಸಿ ಪೇಳಿದರೆ ಗಂಗೆ ಗೋದಾವರಿ ತುಂಗಭದ್ರೆಯ ಮಿಂದು ರಂಗನ ಕ್ಷೇತ್ರವ ನೋಡಿದ ಫಲವು 15 ಅಂಗಳ ತುಳಸಿಯ ದಿನ ದಿನದಿ ತಾವೆದ್ದು ಹಿಂಗದೆ ನೋಳ್ಸ ಶ್ರೀರಂಗನ ಭಕ್ತರಿಗೆ ಬಂಗಾರಗಿರಿವಾಸ ವರಾಹತಿಮ್ಮಪ್ಪನ ಮಂಗಳಮೂರ್ತಿಯ ನೋಡಿದ ಫಲವು 16
--------------
ವರಹತಿಮ್ಮಪ್ಪ
ಮಂಗಳಂ ದಯಾನಿಧೆ ಮಂಗಳಂ ಗುಣನಿಧೆ ಪ ಶ್ರೀ ರಂಜಿತಾಂಗನೆ ಪಾರಂಗ ತಾಖಿಲ ಸುರೇಂದ್ರ ಸುನ್ನುತನೆ 1 ನಿಖಿಲಸುರದಾಮ ಸುಗುಣನೆ2 ನಿರಂಜನ ನಿರ್ಜಿತ ಸುರವೈರಿಹರೆ 3 ಧೇನುಪುರಾಧಿಪ ಸೂನಾಸ್ಯವಂದಿತ ಗಾನವಿನೋದ ಶ್ರೀಹರಿಯೆ 4
--------------
ಬೇಟೆರಾಯ ದೀಕ್ಷಿತರು
ಮಂಗಳಂ ಮಧುಕೈಟ ಭಾರಿಗೇ - ಜಯಮಂಗಳ ಯದುಕುಲಾಂಬುಧಿ ಚಂದ್ರಗೇ ಪ ಗೋಕುಲದೊಳು ಪುಟ್ಟಿ ಗೋಗಣಂಗಳ ಕಾಯ್ದುರಾಕೇಂದು ವದನೇರ ಕೂಡಿದ ಸರಸಿಗೇ 1 ಪಾಲನ ಲಯ | ಒಟ್ಟಾಗಿ ಮಾಳ್ಪಂಥಕೃಷ್ಣೆ ಗಕ್ಷಯಫಲ ಕೊಟ್ಟಂಥ ಹರಿಗೇ2 ಬೃಹತೀ ಸಹಸ್ರನ್ನ ಬಹುವಾಗಿ ಉಂಡಗೇಮಹ ಋಷಿಗ್ವರವಿತ್ತ | ಶ್ರೀ ಉಪೇಂದ್ರಗೆ 3 ಲಕ್ಕುಮಿಯನು ತಾನು | ಲೆಕ್ಕಿಸದಲೆ ವೇಗಪೊಕ್ಕುಳಿಂದಲಿ ಅಜನ | ಪಡೆದ ಶ್ರೀಹರಿಗೇ 4 ಗರುಡ ಗಮನನಾಗಿ | ಕರಿಯ ಕಾಯಲಿ ಬಂದುಹರುಷವ ಪಡಿಸೀದ | ಗುರು ಗೋವಿಂದ ವಿಠಲಗೇ 5
--------------
ಗುರುಗೋವಿಂದವಿಠಲರು
ಮಂಗಳ ಮೂರುತಿ ಅದಿಕೇಶವ ನಾರಾಯಣ ಮಾಧವ ಗೋವಿಂದ ವಿಷ್ಣು ಮಧುಸೂದನ ಧ್ರುವ ನೇಮದಿಂದುದಿಸಿದೆ ವಾಮನ ತ್ರಿವಿಕ್ರಮ ಸಾಮಗಾಯನ ಪ್ರಿಯಾನಂದೋಬ್ರಹ್ಮ ದಾಮೋದರ ಸಂಕರುಷಣಾದೆ ಪುರುಷೋತ್ತಮ ವಾಸುದೇವ ನಮ್ಮ 1 ಸದ್ಗುಣ ಬೀರುವ ಹೃಷೀಕೇಶ ಶ್ರೀಧರ ಪೂರ್ಣ ಪ್ರದ್ಯುಮ್ನ ಅನಿರುದ್ಧಾನಂದ ಗುಣ ಅಚ್ಯುತ ಜನಾರ್ದನ ಸಿದ್ಧ ಸಿದ್ಧಕ ಪ್ರಿಯಾನಂದ ಘನ 2 ಅಧೋಕ್ಷಜ ನೃಸಿಂಹ ಉಪೇಂದ್ರ ಶ್ರೀಹರಿ ಕೃಷ್ಣ ಹೃದಯದಲಿ ಕೊಂಡಾಡುದನುದಿನ ಸದಾ ಪ್ರಸನ್ನ ಮಹಿಪತಿಗೀ ನಾಮ ಗುಣ ಸದೋದಿತಾದನು ಭಾನುಕೋಟಿಪೂರ್ಣ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಮಂಗಳದೇವಿಯರರಸಗೆ ತುಂಗಮಹಿಮ ತ್ರಿವಿಕ್ರಮಗೆ ಅಂಗನೆಯರು ಸಿರಿರಂಗಗಾರತಿಯನೆತ್ತಿದರೆ ಪ. ಶ್ರೀರುಕುಮಿಣಿ ಮೊದಲಾದ ನಾರಿಯರೆಲ್ಲರು ನೆರೆದು ವಾರಿಜದಳಲೋಚನಗಾರತಿಯನೆತ್ತಿದರೆ 1 ಮುತ್ತಿನ ಹರಿವಾಣದಲಿ ರತ್ನದ ಸಾಲ್ಗಳ ನೆರಪಿ ಚಿತ್ತಜನಯ್ಯಗೆ ಮುತ್ತ್ತಿನಾರತಿಯನೆತ್ತಿದÀರೆ 2 ಚಿನ್ನದ ಹರಿವಾಣದಲಿ ರನ್ನದ ಸಾಲ್ಗಳ ನೆರಪಿ ಚೆನ್ನಕೇಶವನಿಗೆ ಚಿನ್ನದಾರತಿಯನೆತ್ತಿದರೆ 3 ಹೃದಯದ ತಮವ ಗೆಲುವಗೆ ಸದುಗತಿಪಥವ ತೋರುವಗೆ ಸುದತಿಯರೆಲ್ಲರು ಮಂಗಳಾರತಿಯನೆತ್ತಿದರೆ 4 ಚಂದದ ಭೂಷಣಮಣಿಯೊಳು ನಂದಾದೀಪಗಳೆಲ್ಲ ಹೊಳೆಯೆ ಒಂದನಂತವ ಮಾಡಿಕೊಂಬಗಾರತಿಯನೆತ್ತಿದರೆ 5 ಕಂದರ್ಪಕೋಟಿಲಾವಣ್ಯಗೆ ಸೌಂದರ್ಯವಾದ ಮೂರುತಿಗೆ ಇಂದುಮುಖಿಯರೆಲ್ಲ ಮಂಗಳಾರತಿಯನೆತ್ತಿದರೆ 6 ಅಗಣಿತ ಗುಣಸಾಗರಗೆ ನಿಗಮವಂದಿತ ವೈಭವಗೆ ಅಘಕುಲದೂರಗೆ ಮಂಗಳಾರತಿಯೆನೆತ್ತಿದರೆ 7 ನಳಿತೋಳ್ಗಳ ನಸುನಗೆಯ ಹೊಳೆವ ಕಡಗ ಕಂಕಣದ ಸುಲಲಿತ ಕಾಂತಿಗೆ ಮಂಗಳಾರತಿಯೆತ್ತಿದರೆ 8 ಶೇಷವಂದಿತಪದಗೆ ಸುರೇಖಾದಿಗಳೊಡೆಯನಿಗೆ ಭಾಸುರಸುರಮಯಪೀಠಗಾರತಿಯನೆತ್ತಿದರೆ9 ಶ್ರೀಸತಿಯಪ್ಪಿಕೊಂಡಿಪ್ಪಗೆ ವಾಸುದೇವಾದಿವಿಗ್ರಹಗೆ ಕೇಶವ ನಾರಾಯಣಗಾರತಿಯನೆತ್ತಿದರೆ 10 ನಿಖಿಳ ಖಳರ ಸೀಳ್ದನಿಗೆ ಅಕುತೋಭಯನಿಗೆ ಮಂಗಳಾರತಿಯನೆತ್ತಿದರೆ 11 ಕೂರ್ಮ ವರಾಹನಿಗೆ ಕುತ್ಸಿತರೊಲ್ಲದ ಹರಿಗೆ ಚಿತ್ಸುಖರೂಪಗೆ ಮಂಗಳಾರತಿಯನೆತ್ತಿದರೆ12 ಶಂಕೆಯಿಲ್ಲದ ಹಯವದನಗೆ ಕಿಂಕರವರದ ಶ್ರೀಹರಿಗೆ ಪಂಕಜಮುಖಿಯರು ಮಂಗಳಾರತಿಯೆತ್ತಿದರೆ 13
--------------
ವಾದಿರಾಜ
ಮಂಗಳಾರತಿ ಮಾಡಿರೆ ಮಾರಮಣಗೆ ಪ ಮಂಗಳಾರತಿ ಮಾಡಿ ಗಂಗಾಜನಕನಿಗೆ ಶೃಂಗಾರ ಶೀಲಗೆ ಅಂಗನೆ ಮಣಿಯರುಅ.ಪ ನೀರೊಳಗಾಡಿದವಗೆ ಬೆನ್ನಿಲಿ ಗಿರಿ ಭಾರ ಪೊತ್ತಿಹ ದೇವಗೆ ಮಣ್ಣಿನಲಿದ್ದ ಬೇರುಗಳನೆ ಮೆದ್ದಗೆ ಶ್ರೀಹರಿಗೆ ಮೂರೆರಡರಿಯದ ಪೋರನÀ ಮಾತಿಗೆ ಕ್ರೂರ ದೈತ್ಯನ ಕರುಳ್ಹಾರ ಮಾಡಿದಗೆ 1 ಬಡವ ಬ್ರಾಹ್ಮಣನಾಗುತ ದಾನವ ಬೇಡಿ ಕೊಡಲಿ ಪಿಡಿದ ಭಾರ್ಗವಗೆ ಕೋಡಗಗಳ ಕೂಡಿ ಕಡಲ ಬಂಧಿಸಿ ಮಡದಿಯ ತಂದವಗೆ ಕಡಹಲ್ದ ಮರನೇರಿ ಮಡದೇರಿಗೊಲಿದಗೆ ಬಿಡದೆ ತೇಜಿಯನೇರಿ ಸಡಗರ ತೋರ್ದಗೆ 2 ಪರಮಪುರುಷದೇವನ ಪರಿಪರಿಯಿಂದ ಸ್ಮರಣೆ ಮಾಡುತ ಪಾಡುತ ಸಿರಿಯರಸಗೆ ಸರಸೀಜಾಕ್ಷಿಯರೆಲ್ಲರೂ ಸರಸದಿ ಬಂದು ಪರಾಭವ ನಾಮ ವತ್ಸರದಲಿ ಸುಜನರು ಸಿರಿವರ ಕಮಲನಾಭ ವಿಠ್ಠಲನಿಗೆ 3
--------------
ನಿಡಗುರುಕಿ ಜೀವೂಬಾಯಿ
ಮದನ ಗೋಪಾಲಗೊ ಸುದತಿ ಯಶೋದೆ ನಂದ ಕಂದನಿಗೊ ಪ ಶ್ರೀಶ ಶ್ರೀ ಕೇಶವ ನಾರಾಯಣನಿಗೊ ಮಾಧವ ಗೋವಿಂದ ಹರಿಗೊ ಸಾಸಿರ ನಾಮದ ವಿಷ್ಣು ಮಧುಸೂದನಗೊ ಭೂಸುರ ಪಾಲ ತ್ರಿವಿಕ್ರಮ ವಾಮ£ಗೊ 1 ಮುದ್ದು ಮೂರುತಿ ಶ್ರೀಧರ ಹೃಷಿಕೇಶಗೊ ಪದ್ಮನಾಭ ದಾಮೋದರಗೊ ಶುದ್ಧಮನದಿ ಸಂಕರ್ಷಣ ವಾಸುದೇವಗೊ ಅನಿರುದ್ಧ ಮೂರುತಿಗೊ 2 ಹರುಷದಿ ನಾರಸಿಂಹ ಅಚ್ಚುತಗೊ ಸರಸಿಜನಯನ ಜನಾರ್ದನುಪೇಂದ್ರಗೊ ಸಿರಿ ಹರಿ ಕೃಷ್ಣಗೊ 3 ಶಂಖು ಚಕ್ರ ಗದಾ ಪದ್ಮವು ಧರಿಸಿದ ವೆಂಕಟರಮಣಗೊ ಶ್ರೀಹರಿಗೊ ಪಂಕಜನಯನ ಶ್ರೀರಂಗನಾಥನಿಗೊ ಬಿಂಕದಿ ಪಾಂಡುರಂಗ ವಿಠ್ಠಲಗೊ 4 ಘನಮಹಿಮ ಮನು ಕಂಚಿ ವರದರಾಜನಿಗೊ ಇನಕುಲ ತಿಲಕ ಶ್ರೀರಾಮಚಂದ್ರನಿಗೊ ವನಿತೆಯರೊಡಗೂಡಿ ಮೆರೆವ ಕೃಷ್ಣನಿಗೊ ವನಜಾಕ್ಷ ಪಶ್ಚಿಮ ರಂಗಧಾಮನಿಗೊ 5 ಬಗೆ ಬಗೆ ನಾಮಗಳಿಂದ ಪೂಜೆಯಗೊಂಬ ಅಗಣಿತ ಮಹಿಮಗೊ ಆಶ್ಚರ್ಯಗೊ ಖಗವಾಹನ ಕರಿರಾಜ ವರದಗೊ ನಿತ್ಯ ತೃಪ್ತನಿಗೊ 6 ಶ್ರದ್ಧೆಯಿಂದಲಿ ತನ್ನ ಭಜಿಪ ಭಕ್ತರ ಕಾಯ್ವ ರೌದ್ರಿನಾಮ ಸಂವತ್ಸರದಿ ಮುದ್ದು ಮೂರುತಿ ಕಮಲನಾಭ ವಿಠ್ಠಲನಿಗೆಪದ್ಮಾಕ್ಷಿ ವನಮಾಲೆ ಹಾಕಿದೆಯಾ 7
--------------
ನಿಡಗುರುಕಿ ಜೀವೂಬಾಯಿ