ಒಟ್ಟು 1793 ಕಡೆಗಳಲ್ಲಿ , 78 ದಾಸರು , 1297 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನೋಡೋರು ಕೃಷ್ಣನ ನಾಡಿನ ಪ್ರಜರೆಲ್ಲಮೂಡಲಗಿರಿವಾಸನ ಬೇಡಿದವರಗಳ ನೀಡುವ ದಯದಿಕೊಂಡಾಡುವರು ವೆಂಕಟರಾಯನ ಪ. ಶ್ರೀನಿವಾಸನ ಕೋಟಿ ಆನೆ ಶೃಂಗರಿಸ್ಯಾವ ನಾನಾರತ್ನಗಳಿಂದ ಭಾನು ಕೋಟಿ ತೇಜ ತಾನು ನಿರ್ಮಿಸಿದನು ಏನೆಂಬೆÉನು ಛಂದ 1 ಚಿತ್ರ ವಿಚಿತ್ರದ ಮುತ್ತಿನ ಪಲ್ಲಕ್ಕಿ ರತ್ನ ಮಾಣಿಕ ಹಚ್ಚಿಚಿತ್ತ ಜನೈಯನ ಪ್ರತ್ಯೇಕ ವಿವರಿಸಿ ಅರ್ಥಿಹೇಳುವೆನಂದ2 ಎಂಟು ದಿಕ್ಕಿಗೆ ಒಪ್ಪೊಒಂಟಿ ಸಾಲಗಳು ವೈಕುಂಠಪತಿಯ ಮುಂದೆ ಕಂಠಿ ಚಿತ್ರವÀ ಬರೆಸಿ ಕರುಣಿ ವೆಂಕಟದಿವ್ಯಗಿಲೀಟು ವಸ್ತ್ರಗಳ ಹೊಚ್ಚಿ 3 ಹೇಳಲು ವಶವಲ್ಲ ಕಾಲೊಳುಆಭರಣವ ಭಾಳ ಮುತ್ತಿನ ಕುಚ್ಚುವ್ಯಾಳಾಶಯನನು ಅವರಿಗೆ ಹೇಳಿನೇಮಿಸಿದನು ಆಳುಮಂದಿಯು ಮೆಚ್ಚ4 ವಾಹನ ಸುತ ಸತಿಯರಿಗಿತ್ತು ಅತಿ ಸೇವ್ಯರು ಮೆಚ್ಚಿ5 ಕೆಂಚೆ ಕೃಷ್ಣನ ರಥಕೆ ಗೊಂಚಲ ಮುತ್ತುಗಳೆಷ್ಟಮಿಂಚುವ ಸೂರ್ಯನಂತೆ ಮುಂದೆ ನೊಡುಣು ಬಾರೇಚಂಚಲಾಕ್ಷಿ ಕೇಳೇ ವಿರಂಚಿ ಬೆರಗಾಗೋನಂತೆ6 ಚದುರ ರಾಮೇಶನ ಕುದುರೆ ಸಾಲುಗಳಿಗೆ ಅದ್ಬುತ ರತ್ನಗಳೆ ಮದನಜನಯ್ಯನುಮುದದಿ ನಿರ್ಮಿಸಿದನು ಸುದತೆ ಹೇಳುವೆ ಕೇಳೆ 7
--------------
ಗಲಗಲಿಅವ್ವನವರು
ನೋವುಗಳ ತಾಳಲಾರೆ ನೊಂದುಕೊಂಡು ಇರಲಾರೆ ಕಾವುದಯ್ಯ ವೆಂಕಟೇಶ ಕರುಣದಿಂದೆನ್ನ ಪ ಕಣ್ಣಿಗೆ ಕಾಣದ ನೋವು ಹುಣ್ಣುಗಳಿಲ್ಲದ ನೋವು ಬಣ್ಣವು ಮಾಸಿದ ನೋವು ಬಲುಹಾದ ನೋವು ಎಣ್ಣಿದುಯಿಲ್ಲದ ನೋವು ಎಣಿಕೆಗೊಳ್ಳದ ನೋವು ಬಣ್ಣನೆ ನುಡಿಯ ನೋವು ಬಂದೀತು ನೋವು 1 ದುಷ್ಟರಿಂದ ನೊಂದ ನೋವು ಹೊಟ್ಟೆಯೊಳ್ಹುಟ್ಟಿದ ನೋವು ಕಷ್ಟಗಳ ಬಿಟ್ಟ ನೋವು ಕಡುಹಾದ ನೋವು ಇಷ್ಟರು ಇಲ್ಲದ ನೋವು ಇಂತಾದ ನೋವು 2 ಬಡವನಾಗಿಹ ನೋವು ಒಡೆಯರಿಲ್ಲದ ನೋವು ಕೇಡುಗರ ನುಡಿಯ ನೋವು ಕೆಟ್ಟಿಹ ನೋವು ಪಡೆದ ಕರ್ಮದ ನೋವು ಪಾಪವೆಂಬುದು ನೋವು ಕಡೆಯ ಕಾಲದ ನೋವು ಕಾಳಾಹಿ ನೋವು 3 ವಿದ್ಯೆವಿಲ್ಲದ ನೋವು ಬುದ್ಧಿ ಕೆಟ್ಟಿಹ ನೋವು ಸಿದ್ಧಿಯಿಲ್ಲದ ನೋವು ಸಿಟ್ಟೊಂದು ನೋವು ಇದ್ದುಯಿಲ್ಲದ ನೋವು ಇಚ್ಛೆಗೊಳ್ಳದ ನೋವು ಬದ್ಧವಾಗಿಹ ನೋವು ಬಳಲುವ ನೋವು 4 ಇಂತು ನೋವುಗಳೆನ್ನ ಭ್ರಾಂತಿಯನು ಬಡಿಸುತಿವೆ ಪಂಥ ಬೇಡವೊ ಲಕ್ಷ್ಮಿಕಾಂತಯೆನ್ನಯ ಬಳಿಗೆ ಅಂತರಂಗದಿ ಬಂದು ಚಿಂತಿತಾರ್ಥತವನೀಯೊ ಯಂತ್ರದಾಯಕನಾದ ವರಾಹತಿಮ್ಮಪ್ಪರಾಯ 5
--------------
ವರಹತಿಮ್ಮಪ್ಪ
ಪಂಕಜನಯನ ಪಾವನ್ನ ಸುಖ ಸಂಕೂಲ ಮೂರುತಿ ಲಾಲಿಸು ಚಿನ್ನಾ ವೆಂಕಟ ನಿಲಯಾ ಹಸೆಗೇಳು ಪ ಕಮಲ ಸಂಭವಗಿತ್ತ ಕಮನೀಯ ಕಾಯ ಸುಮನಸ ಜನತೆ ಸುಧೆಯನುಣಿಸಿ ಭೂಮಿ ಚೋರನ ಕೊಂದ ಮುನಿಗಳೊಡೆಯ ವಿಮಲ ಮೂರುತಿ ಹಸೆಗೇಳೋ 1 ನರಹರಿ ರೂಪದಿ ಬಂದು ದೈತ್ಯ ನುರವ ಬಗೆದು ವಟು ರೂಪದಿ ನಿಂದ್ಯೋ ದುರುಳ ರಾಯರನೆಲ್ಲ ಕೊಂದು ಲಂಕಾ ಪುರದಾಧಿಪತಿಯ ಸದೆದ ದಯಸಿಂಧೋ ಕರುಣಾಸಾಗರನೆ ಹಸೆಗೇಳೋ 2 ಯದುಜನೆನಿಸಿ ಎಲ್ಲಾ ಖಳರ ಜಯಿಸಿ ಸುದತೇರ ವ್ರತವ ಕೆಡಿಸಿದತಿ ಧೀರ ಕುದುರೆನೇರಿದ ಮಾಧಾರಾ ನಿನ್ನ ಅದುಭೂತ ಬಲ್ಲಿದಕ್ಕೆಣೆಗಾಣೆನುದಾರಾ ಉದಧಿ ಶಯನನೆ ಹಸೆಗೇಳು 3 ಅಪ್ರತಿಮಲ್ಲ ಅನಂತಾ ಸುಹಜ ನ ಪ್ರೀಯಾ ಸುರಪತಿ ಸಿರಿದೇವಿ ಕಾಂತಾ ಸ್ವ ಪ್ರಕಾಶಿತನೆ ಧೀಮಂತಾ ಅತಿ ಕ್ಷಿಪ್ರದಿ ಭಕ್ತರ ಪೊರೆವತಿ ಶಾಂತಾ ಸುಪ್ರದಾಯಕನೆ ಹಸೆಗೇಳೋ 4 ಪರಮ ಪುರುಷ ಪುಣ್ಯನಾಮಾ ಪರ ಪುರಷೋತ್ತಮ ಪರಿಪೂರ್ಣ ಕಾಮಾ ಶರಣರ ಭವವನ ಧೂಮಾ ಕೇತು ಕರಿಯ ಬಲ್ಲೆನೆ ಕಾಮಿತರ ಕಲ್ಪದ್ರುಮಾ ಕರಿರಾಜವರದಾ ಹಸೆಗೇಳೋ 5 ನಿತ್ಯ ಅತ್ಯಂತ ಮಹಿಮನೆ ಆಪ್ತ ಜನರ ಕ್ಲೇಶ ಕಳೆವ ಸುಕೀರ್ತೀ ಚಿತ್ತಜ ಜನಕ ಹಸೆಗೇಳೋ 6 ಕ್ಷೀರಾಬ್ಧಿವಾಸಾ ಚಿನ್ಮಯನೆ ನಿನ್ನ ಪಾರ ಮಹಿಮೆ ತಿಳಿವವನಿಹನೆ ಮೂರು ಗುಣ ರಹಿತನೆ ದೋಷ ದೂರ ವಿದೂರ ಶಿರಿದೇವಿಯೊಡನೆ ಬಾರಯ್ಯ ಹಸೆಯ ಜಗುಲಿಗೆ7 ವ್ಯಾಳಮರ್ದನನೆ ವಿಗಮನಾ ತ್ರಿ ಶೂಲ ಪಾಣಿಯ ಓಡಿಸಿದ ಖಳನಾ ಸೋಲಿಸಿದಪ್ರತಿಸುಗುಣ ಹೇಮ ಲಲಿತಾಂಗ ಹಸೆಗೇಳೋ 8 ಅಗಣಿತ ಜೌದಾರ್ಯ ಸಾರಾ ನಿನ್ನ ಪೊಗಳ ಬಲ್ಲೆನೆ ಪಾತಕದೂರಾ ನಗರಾಜನುತ ನಿರಾಧಾರ ಭವಾದಿಗಳಿಂದ ವಂದ್ಯನೆ ನವನೀತ ಚೋರ ಜಗನ್ನಾಥ ವಿಠಲ ಹಾಸೆಗೇಳೋ9
--------------
ಜಗನ್ನಾಥದಾಸರು
ಪಂಕಜಾಸನ ವಂದ್ಯ | ವೆಂಕಟಾದ್ರಿ ವಿಠಲ ತವಕಿಂಕತನ ವಿತ್ತವಗೆ | ಸಂಕಟವ ಕಳೆಯೊ ಪ ಮಂಕುಹರಿಸುಜ್ಞಾನ | ದಂಕುರಕೆ ಮನಮಾಡಿಬಿಂಕದಿಂ ಪೊರೆಇವನ | ಅಕಳಂಕ ಮಹಿಮಾ ಅ.ಪ. ಸತ್ಯಶೌಚಾಚಾರ | ಕೃತ್ಯದಲಿ ಮನವಿರಿಸುನಿತ್ಯತವ ಮಹಿಮಗಳ | ಸುತ್ತಿಇರಲಿ ಇವಗೇನಿತ್ಯನೂತನ ಮಹಿಮ | ತತ್ವಗಳ ತಿಳಿಸುತ್ತಭೃತ್ಯವತ್ಸಲ ಕಾಯೋ | ಮೃತ್ಯುಹರದೇವಾ 1 ತತ್ವಾರ್ಥ ತಿರುಳುಗಳೆ | ಚಿತ್ರಿಸುವ ಕಲೆವೃದ್ಧಿವಿಸ್ತರೀಸಿವನಲ್ಲಿ | ನಿಸ್ತುಲಾತ್ಮಕನೇ |ಅರ್ಥಕಾಮಸುರೂಪ | ಪೊತ್ತುಪೊರೆಯುವ ದೇವಾಪ್ರತ್ಯೇಕ ಪ್ರಾರ್ಥನೆಯ | ಕೃತ್ಯವೇಕಿನ್ನು 2 ನಾನು ನನ್ನದು ಎಂಬ | ಹೀನಮತಿಕಳೆದಿನ್ನುನೀನು ನೀನೇ ಎಂಬ | ಜ್ಞಾನಮಹಬರಲೀ |ಪ್ರಾಣ ಪ್ರಾಣನೆ ಜಗ | ತ್ರಾಣನಹುದೆಂಬ ಸುಜ್ಞಾನ ಪಾಲಿಸಿ ಪೊರೆಯೋ | ಮನಿಮಧ್ವ ವರದಾ 3 ಮೀನಾಂಕ ಜನಕಾಮಾನಮೇಯಾನುಭವ | ಸಾನು ಕೂಲಿಸುವಕೋನೇರಿವಾಸ ಕಾರುಣ್ಯ | ತೋರಿವಗೇ4 ಗೋವತ್ಸದನಿ ಕೇಳಿ | ಆವುಧಾನಿಸುವಂತೆನೀವೊಲಿದು ಕಾಪಾಡು | ಬಾವುಕರ ಪಾಲಾ |ಪೂವಿಲ್ಲನಯ್ಯಗುರು | ಗೋವಿಂದ ವಿಠಲತವಪಾವನವ ಪದ ತೋರೆ | ಓವಿ ಪ್ರಾರ್ಥಿಸುವೆ 5
--------------
ಗುರುಗೋವಿಂದವಿಠಲರು
ಪಂಗು ಪುರವಾಸ ಶ್ರೀ ವೆಂಕಟೇಶ ನಿನ್ನ ಪಂಕಜಂಘ್ರಿಗಳಲ್ಲಿ ಸತತ ಶರಣಾದೆ ಪಂಕಜಾಲಯ ಪತಿಯೆ ಪಂಕಜೋದ್ಭವ ಪಿತ ವೃಷಾಂಕ ಸಂಕ್ರದಾದಿ ಸುಠವಿನುತ ಈಶ ಪ ಏಳು ತಗ್ಗಿದ ಗುಡ್ಡ ದಾಟಿ ನಿನ್ನಯ ಕ್ಷೇತ್ರ ಹೇಳುವರು ಮೊಂಡಿಪಾಳಯ ಎಂದು ಅಲ್ಲಿ ಮಾಲೋಲ ನಿನ್ನಾನುಗ್ರಹದಿ ಕಂಡೆ ನಿನ್ನ ಚೆಲುವ ಲಿಂಗಾಕಾರ ಶ್ರೀ ವೆಂಕಟೇಶ1 ಸರ್ವ ವೈದಿಕ ನಾಮಲಿಂಗಾತ್ಮಕ ಶಬ್ದ ಸರ್ವೋತ್ತಮ ವಿಷ್ಣುವಿಗೇವೇ ಮುಖ್ಯದಲಿ ಅನ್ವಯವು ಎಂಬುದನ್ನು ಸೂಚಿಸುವ ತೆರದಲ್ಲಿ ದಿವ್ಯ ಲಿಂಗರೂಪ ತೋರಿಸುತಿ 2 ಉತ್ಸವ ಮೂರ್ತಿಗಳೋಳ್ ಶ್ರೀ ಭೂ ಸಮೇತನೀ ಜ್ಯೋರ್ತಿಮಯ ಜ್ವಲಿಸುತಿ ಅಪ್ರತಿಮಾಂತಸ್ಥ ವೇಧ ಪಿತ ಶ್ರೀ ಪ್ರಸನ್ನ ಶ್ರೀನಿವಾಸನೇ ನಮೋ ವಿಧಿ ಶೇಷ ದೂರ್ವಾಸ ಇಂದ್ರಾದಿ ವಂದ್ಯ 3
--------------
ಪ್ರಸನ್ನ ಶ್ರೀನಿವಾಸದಾಸರು
ಪಂಚಾಂಗವನು ಪಾದಪದ್ಮಕೊಪ್ಪಿಸುವೆಪಂಚೇದ್ರಿಯಂಗಳನು ಪಾಲಿಸುವ ವಿಭುವೇ ಪಮೂರು ಗುಣಯುಕ್ತದಲಿ ಮೂಡುವಿಂದ್ರಿಯವೈದುಮೂರು ಮಡಿಯೆನೆ ಪಕ್ಷ ಮೊದಲು ಬಹುದುತೋರೆ ಸತ್ಫಲ ಶುಕ್ಲ ತಾಮಸದಿ ಕೃಷ್ಣವದುಈ ರೀತಿುಂ ಪಕ್ಷವೆರಡೆ ತಿಥಿಯಹುದೂ 1ಪ್ರಕೃತಿಯಹಂಕಾರಗಳು ಪಂಚ ಮಹಭೂತಗಳುವಿಕೃತಿುಂದಿವೆಯೇಳು ವಾರಂಗಳುಸುಕೃತ ದುಷ್ಕøತಗಳಿಗೆ ಸದ್ಮವಹ ತತ್ವಗಳುಪ್ರಕೃತಿಗುಣ ಮೂರು ಸಹ ಪೊಳೆವ ತಾರೆಗಳು 2ಈ ತತ್ವ ಕರ್ಮಗಳಿಗೆಡೆಯಾಗೆ ಯೋಗಗಳುವೋತು ತಿರುಗುವ ಕರಣವವು ಮನಗಳುಪ್ರೀತಿುಂ ತಿರುಪತಿಯ ಪತಿ ನೀನು ನಿರ್ಮಿಸಲುಸೋತಿಹವು ವೆಂಕಟನೆ ಸುಖದಿ ಲಾಲಿಸಲು 3ಓಂ ತೃಣೀಕೃತ ತೃಣೇವರ್ತಾಯ ನಮಃ
--------------
ತಿಮ್ಮಪ್ಪದಾಸರು
ಪಂಢರಪುರವಾಸ ಪಾಲಿಸೊ ಶ್ರೀಶ ಪ ಶ್ರೇಷ್ಠ ಭಕ್ತನು ಕೊಟ್ಟ ಇಟ್ಟಿಕಲ್ಲಿನ ಮ್ಯಾಲೆ ಗಟ್ಯಾಗಿ ನಿಂತಿದ್ದ ವಿಠೋಬ ದಯಮಾಡೊ 1 ಪಾಂಡುರಾಯನ ಸುತ ಗಾಂಡೀವರ್ಜುನ ದೂತ ಬಂಡಿ ನಡೆಸಿದಾತ ಪುಂಡರೀಕ್ವರದನೀತ2 ಮುಕುತಿದಾಯಕ ಮುದ್ದು ರುಕುಮಿಯ ರಮಣನೆ ಭಕುತ ವತ್ಸಲಯೆನಗೆ ಸಕಲಾಭೀಷ್ಟವ ನೀಡೊ 3 ಬುಕ್ಕಿ ್ಹಟ್ಟು ತುಳಸಿಮಾಲೆ ಕಟ್ಟಿ ಕೊರಳಿಗೆ ಹಾಕಿ ದಾತ 4 ಲೋಕ ಲೋಕದೊಳಗಿದ್ದಾನೇಕ ಜೀವರನೆಲ್ಲ ಸಾಕಿ ಸಾಕಾಯ್ತೆ ಕರವೇಕೆ ಟೊಂಕದಲ್ಲಿಟ್ಟಿ 5 ಸೃಷ್ಟಿಸ್ಥಿತಿಯು ಜನಸಂರಕ್ಷಣೆ ಮಾಡಿ ನಿನ್ನ ರಟ್ಟೆ ಸೋತವೆ ಟೊಂಕಕಿಟ್ಟು ಕಯ್ಯನು ನಿಂತೆ 6 ಕಂಬದೊಳಗೆ ನಿಂತ ಪುರಂದರದಾಸರು ವಂದನೆಮಾಡೆ ಇವರೆ ನಾರಂದರೆಂದು ನಾ ತಿಳಿದೆ 7 ರುಕ್ಮಿಣಿ ಸತ್ಯಭಾಮೆ ರಾಧೆ ಲಕ್ಷುಮಿಯೇರ ಹತ್ತಿಲೆ ನಿಂತ ನಮ್ಮಪ್ಪ ವೆಂಕಟರಮಣ 8 ಭೀಮರಥಿಯ ಸ್ನಾನ ಸ್ವಾಮಿ ನಿಮ್ಮ ದರುಶನ ಭೀಮೇಶಕೃಷ್ಣನ ಧ್ಯಾನ ಮಾಡುವೋದ್ವೈಕುಂಠಸ್ಥಾನ 9
--------------
ಹರಪನಹಳ್ಳಿಭೀಮವ್ವ
ಪತಿ ವಿಠಲ | ಉದ್ದರಿಸೊ ಇವಳ ಪ ಮೋದದಾಯಕನಾಗಿ | ಶ್ರೀದ ಶ್ರೀಹರಿಯೇ ಅ.ಪ. ದಾಸರಾಯರ ಕರುಣ | ವಾಶ್ರಯಿಸಿ ದಿನದಿನದಿಲೇಸು ಕೊಂಡಾಡುತಲಿ | ಮೇಶ ದಾಸರನೂಭಾಸುರ ಸುಗಾನ ಉ | ಲ್ಲಾಸದಲಿ ಮೈಮರೆದುಕೇಶವನ ಗುಣವನಧಿ | ಈಸುವಂತೆಸಗೋ 1 ವ್ಯಾಜ ಕರುಣೀಮಾಜದಲೆ ವೆಂಕಟನ | ನೈಜ ರೂಪವ ಕಂಡವ್ಯಾಜದಲ್ಲಿಂಕಿತಳು | ವಾಜಿ ಮುಖ ಹರಿಯೇ 2 ವಲ್ಲಭೆಯು ಶ್ರೀ ತುಳಸಿ | ಚೆಲ್ವಶಿಲೆ ಸುತ್ತುತಲಿನಲ್ಲ ಹರಿಪರಿ ಪೂರ್ಣ | ಎಲ್ಲೆಡೆಯಲೆಂಬಾಸೊಲ್ಲನಿವಳಿಗೆ ತೋರಿ | ಸಲ್ಲಿಸಿಹ ಹರಿಸೇವೆಬಲ್ಲವರ ಬಲ್ಲರೋ | ಘುಲ್ಲಕರಿಗಲ್ಲಾ 3 ಹರಿಗುರೂ ಸದ್ಭಕ್ತಿ | ಗುರು ಹಿರಿಯರ ಸೇವೆ ಕರುಣಿಸುತ ಕನ್ಯೆಯನು | ಪೊರೆಯುವುದು ಸತತಗಿರಿಜೆ ದರ್ಶನ ಫಲಕೆ | ಸರುವ ಮಂಗಳವಿತ್ತುನಿರುತ ಸಲಹೆಂದಿವಳ | ಪ್ರಾರ್ಥಿಸುವೆ ಹರಿಯೇ 4 ಮಧ್ವರಾಯರ ಮತದಿ | ಶುದ್ಧ ಬುಧಿಯನಿತ್ತುಮಧ್ವೇಶ ಹರಿಪಾದ | ಹೃದ್ಗುಹದಿಕಾಂಬಅಧ್ಯಾನಲ್ಲಿವಳ | ಬದ್ಧಳನೆ ಮಾಡಿ ಪೊರೆಮಧ್ವಾಂರಾತ್ಮ ಗುರು | ಗೋವಿಂದ ವಿಠಲಾ5
--------------
ಗುರುಗೋವಿಂದವಿಠಲರು
ಪತಿತನ್ನ ಪಾವನ ಮಾಡುವ ರಂಗಾ | ಗತಿಯಿಲ್ಲದವರಿಗೆ ಗತಿಯೇ ನೀನೇ ಗತಿ ಪ ನಿಂದಿರಲು ನೆರಳಿಲ್ಲ ನಿಲ್ಲಲು ನೆಲೆಯಿಲ್ಲ | ತಂದಿ-ತಾಯಿಯೆಂಬೋರು ಮೊದಲೆ ಇಲ್ಲ|| ಒಂದು ಸಂಗತಿ ಇಲ್ಲ ಪಡದಾನಂದನರಿಲ್ಲ | ಬಂದು-ಬಳಗದವರು ಆರಿಲ್ಲ ಹರಿಯೇ 1 ಕುಡಿಯಲು ನೀರಿಲ್ಲ ಕಾಲಿಡಲು ಇಂಬಿಲ್ಲಾ | ಪಿಡಿವೆನೆಂದರೆ ಮೇಲೆ ಕೊಡೆಯಿಲ್ಲ || ಒಡನೆ ಬರುವರಾರಿಲ್ಲ ಸಂಗಡದಿ | ಆಡಿವೆನೆಂದರೆ ವಳ್ಳಿಗಾಯಿತೊ ಹರಿಯೆ 2 ಧೈರ್ಯ ಕೊಡುವವರು ಇಲ್ಲ ದಾತರೊಬ್ಬರಿಲ್ಲ | ಕಾರ್ಯವೆಂದರೆ ಕೇಳಿ ಅರಿವರಿಲ್ಲಾ || ವೀರ್ಯವು ಎನಗಿಲ್ಲ ವಸಿಷ್ಠನು ನಾನಲ್ಲ | ಧೈರ್ಯವು ದು:ಖವು ವೆಗ್ಗಳಿಸಿತೋ ಹರಿಯೆ 3 ತನ್ನವರು ತನಗಿಲ್ಲ ತಾಳು ಎಂಬುವರಿಲ್ಲ | ಸಣ್ಣ ಮನಸ್ಸು ಅಲ್ಲದೇ ಘನವು ಯಿಲ್ಲ || ಕರ್ಮ ಬೆನ್ನ ತೊಲಗಲಿಲ್ಲ | ಇನ್ನು ಜನ್ಮ ವ್ಯರ್ಥವಾಯಿತೊ ಹರಿಯೇ 4 ಪಾದ | ಸಾಕಾರ ಮಾಡಿಕೊಂಬುವರ ಸಂಗಡ || ಶ್ರೀಕಾಂತ ವೆಂಕಟ ವಿಜಯವಿಠ್ಠಲರೇಯ | ನೀ ಕರುಣಸಿದರೆ ಸಕಲಾರ್ಥವಹುದು 5
--------------
ವಿಜಯದಾಸ
ಪದ್ಮನಾಭ ವಾಕು ತಾನೂ ಮೊದಲುನಾದರೂಪದಿ ತೋರಿ ನಾಲ್ಕು ವಿಧದಿಪಾದವೆರಡು ಪರಾ ಪಶ್ಯಂತಿಯೆಂದುಭೇದದಿ ಮಧ್ಯಮ ವೈಖರಿಯೆರಡಿಂ ಪಾದೀ ಸರಿಗಮಪದನಿ ಯದೆನಿಪ 1ಶ್ರುತಿಗಳ ಸಂಜ್ಞೆುಂದ ಸಾರಾವಾದಾ ಸ್ವರದತತಿಯಾಗಿ ಸೋಪಾನವ ತಾನು ಸೇರುತಗತಿುಂದಲೇರುತಿಳಿದು ಗುಣಗಳಿಂದಲೆಸತತವು ಷಡ್ಜಗಳೇಳನು ಸೂಚಿಸಿ ಮತದಲಿ ನಿನ್ನಯ ಮಹಿಮೆಯ ಪೇಳ್ವ 2 Éೂೀಕವೀರೇಳರಲ್ಲಿ ಲೀಲೆುಂದ ನೀನುಸೋಕಿ ಸೋಕದ ಹಾಗೆ ಸಂಚರಿಪುದವಾಕೊಂದೆ ಬಹಳ ಶಬ್ದವೆನಿಸಿಕೊಳುತಏಕನು ತಿರುಪತಿಯೊಡೆಯನನೇಕದಿ ಸಾಕುವ ವೆಂಕಟಸ್ವಾಮಿಯುಯೆನುವಾ 3ಓಂ ಉತ್ತಾಳೋತ್ತಾಳ ಭೇತ್ತ್ರೆ ನಮಃ
--------------
ತಿಮ್ಮಪ್ಪದಾಸರು
ಪನ್ನಗಾಶಯನ ಹರಿ ವೆಂಕಟರಮಣ ಪ ವರ ಧ್ರುವನ ಪೊರೆದಂತೆ ಪ್ರಹ್ಲಾದಗೊಲಿದಂತೆ ಕರಿಯ ಸಲಹಿದಂತೆ ಕರುಣವಿರಲಂತೆ 1 ತರಳೆ ದ್ರೌಪದಿಯ ಅಭಿಮಾನ ಕಾಯ್ದಂತೆ ಧುರದೊಳು ನರನ ಶಿರವ ಉಳುಹಿದಂತೆ 2 ಶೇಷಾದ್ರಿವಾಸ ಜಗದೀಶ ಲಕ್ಷ್ಮೀಶ ಕ್ಲೇಶಪಾಶ ವಿನಾಶ ಜನಪೋಷ ವೇಂಕಟೇಶ 3 ಪರಮ ಮಂಗಳಮೂರ್ತಿ ಪಾವನ ಕೀರ್ತಿ ಧರೆಯ ರಕ್ಷಿಪ ಅರ್ತಿ ದಯವಾಗು ಪೂರ್ತಿ 4 ಮಕರ ಕುಂಡಲಧರ ಮಕುಟ ಕೇಯೂರ ಸಕಲಾಭರಣ ಹಾರ ಸ್ವಾಮಿ ಉದಾರ 5 ತಾಳಲಾರೆನು ನಾನು ಬಹಳ ದಾರಿದ್ರ್ಯ ಕೇಳುವರಿಲ್ಲ ಬಹು ಭವಭಯ ಕ್ಷುದ್ರ 6 ನೋಡಬೇಡೆನ್ನವಗುಣವ ದಮ್ಮಯ್ಯ ಬೇಡಿದಿಷ್ಟವನಿತ್ತು ಒಡಗೂಡಿ ಸಲಹಯ್ಯ 7 ಭಕ್ತಜನ ಸಂಸಾರಿ ಬಹುದುರಿತ ಹಾರಿ ಮುಕ್ತಿದಾಯಕ ದಾರಿ ಮುಂದೆ ನೀ ತೋರಿ8 ವರಾಹತಿಮ್ಮಪ್ಪ ಒಲವಾಗೆನ್ನಪ್ಪ ಸಾರಿದವರ ತಪ್ಪ ಸಲಹೊ ನೀನಪ್ಪ 9
--------------
ವರಹತಿಮ್ಮಪ್ಪ
ಪರಮ ಪುರುಷ ಪರೇಶ ಪಾವನ ಪರಮ ಮುನಿಜನ ಪಾಲನ ಶರಧಿ ಶಯನೆ ವಿಹಂಗವಾಹನ ಶಾರದಾಂಬುಜಲೋಚನಾ 1 ವಿರಿಂಚಿ ವಂದಿತ ವಾಸವಾದಿ ಸುರಾರ್ಚಿತ ವಾಸುಕಿ ಪ್ರಿಯ ಭೂಷಭಾವಿತ ವಾಸರೇಶಕುಲೋದಿತ 2 ಶರಣ ಜನರ ಸೌಖ್ಯವಿತರಣ ಶುಭಗುಣಸಾಗರ ವರದ ಪುಲಿಗಿರಿವಾಸ ವೆಂಕಟ ವರದ ವಿಠಲ ದಯಾಕರ 3
--------------
ಸರಗೂರು ವೆಂಕಟವರದಾರ್ಯರು
ಪರಮ ಲಾಲಿಸು ಪುರಾಣವನು ನೀನುದ್ಧರಿಸಿ ಲೋಕಗಳಾಳ್ವ ಧರ್ಮಸಾರವನು ಪಸ್ಟೃಯ ಕ್ರಮವ ಸೂಚಿಸಲು ಮಾಯೆಯಷ್ಟಪ್ರಕೃತಿಯಾಗಲದು ಸರ್ಗ ಮೊದಲುಅಷ್ಟರಾಧಾರದ ಮೇಲೂ ಭೂತಪುಟ್ಟಿಸಿದ ಭೌತಿಕ ಪ್ರತಿಸರ್ಗವೆನಲು 1ವಿವರಿಸುತಿರೆ ವಂಶಗಳನು ಮತ್ತುವಿವಿಧ ಮನುಗಳಹ ವಿಸ್ತಾರವನ್ನುಅವರ ವಂಶಾವಳಿಗಳನು ಪೇಳಿಧ್ರುವವಾದ ಪುರುಷಾರ್ಥ ದಾರಿದೋರ್ಪುದನು 2ಇಹ ಪರಗಳ ಸುಖದಿರವ ಮೋಕ್ಷಬಹ ಯುಕ್ತಿ ಸಹ ಪೇಳ್ವ ಬಹು ಗ್ರಂಥದೊಲವಅಹುದೆಂದು ತಿರುಪತಿಯಾಳ್ವ ಬಹುಮಹಿಮ ವೆಂಕಟನಾಥ ಮನ್ನಿಸು ದೇವಾ 3 ಓಂ ಯೋಗಿನಾಂ ಪತಯೇ ನಮಃ
--------------
ತಿಮ್ಮಪ್ಪದಾಸರು
ಪರಮಪುರುಷಪರೇಶಪಾವನಪರಮಮುನಿಜನಪಾಲನ ಶರಧಿಶಯನ ವಿಹಂಗವಾಹನ ಶಾರದಾಂಬುಜಲೋಚನ 1 ವಾಸುದೇವ ವಿರಂಚಿವಂದಿತ ವಾಸವಾದಿ ಸುರಾರ್ಚಿತ ವಾಸುಕಿಪ್ರಿಯ ಭೂಷಭಾವಿತ ವಾಸರೇಶಕುಲೋದಿತ 2 ಶರಣಜನರಘಹರಣ ಸೌಖ್ಯವಿತರಣ ಶುಭಸಾಗರ ವರದ ಪುಲಿಗಿರಿವಾಸ ವೆಂಕಟವಿಠಲ ದಯಾಕರ 3
--------------
ವೆಂಕಟವರದಾರ್ಯರು
ಪರಮಾತ್ಮನೇ ಪಾಲಿಸೊ ಬೇಗ ನೀ ಪ ಕರಸುದರ್ಶನನೆ ನೀರಜಾರಿಪ್ರಿಯ ನಾರಸಿಂಹನ್ಯಾರೊ ನಾಗಶಯನ ಬಾರೊ 1 ಅಂತರಾತ್ಮನ್ಯಾರೋ ಇಂತು ಬೇಗ ಬಾರೊ ಕಂತುಜನಕನ್ಯಾರೋ ಕಾಮನಯ್ಯ ಬಾರೊ 2 ಆದಿರೂಪನ್ಯಾರೊ ಅಚ್ಚುತ ನೀ ಬಾರೊ ವಾದಿಭೀಕರನಾದಾ ವೆಂಕಟೇಶನೆಂಬೊ 3 ವಾಸವ ವಿನುತಾ ಹಾಸನದೊಳಿಪ್ಪ ದೇಶಿಕಾ ನೀ ತುಲಶೀರಾಮದಾಸನಾದ 4
--------------
ಚನ್ನಪಟ್ಟಣದ ಅಹೋಬಲದಾಸರು