ಒಟ್ಟು 2492 ಕಡೆಗಳಲ್ಲಿ , 109 ದಾಸರು , 1416 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಜಯಮಂಗಳಂ ಪ ಬುದ್ಧಿಯನಾಳ್ವಂಗೆ ಸಿದ್ಧಿಯನೀವಂಗೆಉದ್ದನ್ನ ಒಡಲಿಂಗೆ ವಿಘ್ನಗಳ ಕೊಲ್ವಂಗೆಶುದ್ಧ ಹಿಮಗಿರಿಯ ಸುತೆಯ ಮುದ್ದಾದ ಕುವರಂಗೆಜಿದ್ದಿನಲಿ ಶಣ್ಮುಖನ ಗೆದ್ದಂಥ ಜಾಣಂಗೆ 1 ಶಂಕರನ ಕುವರನಿಗೆ ಓಂಕಾರ ರೂಪನಿಗೆಸಂಕಷ್ಟನಾಶನಿಗೆ ಅಂಕುಶಾಯುಧ ಧರಗೆಹೂಂಕರಿಪ ಜನಕುಳ್ಳ ಬಿಂಕವನು ತರಿದವಗೆಕಿಂಕರದ ನಿರುತದಲಿ ಕರುಣದಲಿ ಕಾಯ್ವನಿಗೆ 2 ಶುಭಕಾರ್ಯದಲಿ ಮೊದಲು ಪೂಜೆಗೊಂಬಾತನಿಗೆಅಭಯವನು ತೋರ್ಪನಿಗೆ ಇಭವದನ ಗಣಪಗೆಪ್ರಭುವಾಗಿ ಗಣಗಳಿಗೆ ಜಗದೊಳಗೆ ಮೆರೆವವಗೆವಿಭವದಲಿ ಬಿಡುವಿಲ್ಲದೆ ಭಾರತವ ಬರೆದಂಗೆ 3 ಸೂಕ್ಷ್ಮದಲಿ ಪರಿಕಿಸಲು ಸಣ್ಣ ಕಣ್ಣುಳ್ಳವಗೆಕಾಂಕ್ಷೆಗಳ ಕೇಳಲಿಕೆ ಮರದಗಲ ಕಿವಿಯವಗೆತೀಕ್ಷ್ಣತರ ಮತಿವಿಡಿದ ಘನವಾದ ತಲೆಯವಗೆಸುಕ್ಷೇಮ ಲಾಭಗಳ ಭಕ್ತರಿಗೆ ಕೊಡುವವಗೆ 4 ಇಲಿದೇರ ವೀರನಿಗೆ ಸುಲಿದೇಕದಂತನಿಗೆಎಲರುಣಿಯನುಪವೀತ ಮಾಡಿಕೊಂಡವಗೆನೆಲದೊಳಗೆ ಗದಗುಸಿರಿ ವೀರನಾರಾಯಣನನೊಲಿಸಿ ಕೊಡುವಂಥ ಮಂಗಳ ಮೂರುತಿಗೆ 5
--------------
ವೀರನಾರಾಯಣ
ಜಯಮಂಗಳಂ ವೈಕುಂಠನಿಲಯಗೆ ಪ. ಆಮನಸಿಜನಯ್ಯಗೆ ಭುಜಗಭೂಷಣ ಪ್ರಿಯಗೆ ತ್ರಿಜಗತ್ಪತಿ ಪುರುಷೋತ್ತಮಗೆ ಭಜಕರಕ್ಷಕ ಶ್ರೀ ವಿಜಯಸಾರಥಿಗೆ ದ್ವಿಜರಾಜಗಮನ ಅಜಾಮಿಳವರದಗೆ 1 ಆಪನ್ನಿವಾರಣ ಅಪ್ರಮೇಯನಿಗೆ ತಾಪತ್ರಯಹರ ಶ್ರೀಪತಿಗೆ ತಾಪಸವಂದಿತ ಕೋಪವಿರಹಿತ ಗೋಪಾಲಕನಂದನ ಯದುಪತಿಗೇ 2 ಸನಕಾದಿಮುನಿಗಳಿಂದನವರತವು ಪೂಜೆಯನು ಕೈಗೊಂಬ ವನಜಾಕ್ಷಗೆ ಘನಶೇಷಗಿರಿವಾಸ ಚಿನ್ಮಯರೂಪ ಶ್ರೀ ವನಜನಾಭವೇಂಕಟಗೆ ಮಂಗಳಂ ಶ್ರೀ ಲಕ್ಷ್ಮೀಕಾಂತಗೆ3
--------------
ನಂಜನಗೂಡು ತಿರುಮಲಾಂಬಾ
ಜಯಮಂಗಳಂ ಶುಭೋದಯ ಮಂಗಳಂ ಜಯ ಕಕುದ್ಗಿರಿ ಗಂಗಾಧರ ಲಿಂಗಗೆ ಪ ಜಡೆಯುಡುಪತಿಯು ಗಂಗೆಯೊಡಗೂಡ್ದ ಮಸ್ತಕಕೆ ಮಡುಹಿ ಮಾರನ ಭಸಿತದಾಳ್ದ ಪಣೆಗೆ ಪೆಡೆಯೆತ್ತಿ ಗಾನಗೈವಹಿ ಕುಂಡಲಂಗಳಿಗೆ ದೃಢಭಕತರಿಷ್ಟದಾಯಕ ಶಿವನಿಗೆ 1 ಸೋಮಸೂರ್ಯಾಗ್ನಿ ಲೋಚನೆಗೆ ವಿಷದಾಳಿ ಸುರ ಸ್ತೋಮವನು ಕಾಯ್ದ ಶೋಭನ ಕಂಠಕೆ ಭೀಮನಿಗೆ ಭಯಹರಗೆ ಪರಶುಮೃಗ ಹಸ್ತನಿಗೆ ಕಾಮಿತಾರ್ಥದ ವರಾಭಯ ಕರನಿಗೆ 2 ನಾಗಕಂಕಣಧರಗೆ ನಾಗೋತ್ತರೀಯನಿಗೆ ನಾಗಯಜ್ಞೋಪವೀತವ ತಾಳ್ದಗೆ ನಾಗಚರ್ಮಾಂಬರಗೆ ನಗರಾಜ ಚಾಪನಿಗೆ ಗಮನ ಬಾಣಗೆ ಶಿವನಿಗೆ 3 ಗಿರಿಜೆಗರ್ಧಾಂಗವನ್ನಿತ್ತ ಶುಭವಿಗ್ರಹಗೆ ವರ ವೃಷಭವನ್ನೇರಿ ಸಂಚರಿಪಗೆ ಬರೆದುಂಗುಟದಿ ಹೊಳೆದ ಚಕ್ರದಿಂ ದೈತ್ಯಕುಲ ಹರಣ ವರದಾಯಕಗೆ ಸರ್ವೆಶಗೆ 4 ತಿರುಪತಿಯ ವಾಸವನು ದೃಢಗೈದು ಕಕುದ್ಗಿರಿಯ ಪರಮ ಕ್ಷೇತ್ರದಿ ಮಹಿಮೆಗಳ ತೋರ್ಪಗೆ ವರದ ವೆಂಕಟಪತಿಗೆ ಗಂಗಾಧರೇಶ್ವರಗೆ ಶರಣಾಗತರ ಕಾಯ್ವ ಸಾಂಬಶಿವಗೆ 5
--------------
ತಿಮ್ಮಪ್ಪದಾಸರು
ಜಯಮಂಗಳಂ ಶುಭೋದಯ ಮಂಗಳಂ ಭಯಹರಗೆ ತಿರುಪತಿಯ ವೆಂಕಟೇಶ್ವರಗೆ ಪ ಸುರಲೋಕವನು ಪಡೆದ ಶಿರದಮಕುಟದ ಪ್ರಭೆಗೆ ಸ್ಮರಚಾಪವನು ಪೋಲ್ವ ಪುರ್ಬುಗಳ ಚೆಲುವಿಕೆಗೆ ತುಂಬಿ ತುಳುಕುವ ನಯನಗಳಿಗೆ 1 ಕನಕಕುಂಡಲಗಳಿಗೆ ಘನ ನಾಸಿಕದ ಮಣಿಗೆ ಮಿನುಗುತಿಹ ಮುಗುಳುನಗೆಯೊಗುವ ಮುಖಕೆ ಇನಕೋಟಿಪ್ರಭೆಗೆ ಮಿಗಿಲೆನಿಪ ಕೌಸ್ತುಭಮಣಿಗೆ ವನಮಾಲೆಯನು ಧರಿಸಿ ಶೋಭಿಸುವ ಕಂಠಕೆ 2 ಭುಜವೆರಡರಲಿ ಶಂಖಚಕ್ರಗಳನುರೆ ಧರಿಸಿ ಅಜಸುರಾದ್ಯರು ಬಿಡದೆ ಭಜಿಪ ಪದವ ಭಜಿಪರಿಗೆ ಭವಶರಧಿ ಕಟಿಪ್ರಮಾಣವಿದೆಂದು ಅಜಪಿತನು ತೋರುತಿಹ ಕರಚತುಷ್ಟಯಕೆ 3 ಹದಿನಾಲ್ಕು ಲೋಕಕಾಶ್ರಯವಾಗಿ ತೋರುತಿಹ ಪದುಮಭವನನು ಪಡೆದ ನಾಭಿಸಹಿತ ಉದರಮಂಡಲಕೆ ಮತ್ತದರಡಿಯ ಶೋಭಿಸುವ ಹದಿನಾರು ಬಣ್ಣದಪರಂಜಿ ಕಟಿಸೂತ್ರಕೆ 4 ಕಿರಿಘಂಟೆಸರದೊಡನೆ ಹೊಳೆವ ಪೀತಾಂಬರಕೆ ಗರುಡನಂಸದಿ ಮೆರೆವ ಊರುಗಳಿಗೆ ಸುರನದಿಯ ನೆರೆ ಪಡೆದ ಚರಣದುಂಗುಟಗಳಿಗೆತಿರುಪತಿಯ ವೆಂಕಟನ ದಿವ್ಯ ಮೂರುತಿಗೆ 5
--------------
ತಿಮ್ಮಪ್ಪದಾಸರು
ಜಯಮಂಗಳಂ ಶ್ರೀ ರಘುಕುಲಾಬ್ಧಿಚಂದ್ರ ಭವತು ತೇ ಶುಭಮಂಗಳಂ ಶ್ರೀರಘುಕುಲಾಬ್ದಿಚಂದ್ರ ಪ. ಸುರರಿಪುಶಮನ | ಕ್ಷೀರಶರಧಿಶಯನಾ ಕರಿವರನಮನ ಮುರಹರ ಶ್ರೀ | ಸುರವೈರಿಭಯಂಕರ ಮಾವರಶ್ರೀ | ಸರಸಿಜಾಕ್ಷ ಸಾಧುಪಕ್ಷ ದುರಳಶಿಕ್ಷ ಶ್ರೀಕಟಾಕ್ಷ 1 ಹರಣ ಭುವಿರ ಜಾರಮಣ ಭಯಹರ | ಪವನಾತ್ಮಜ ಕವಿಜನಾಳಿಪೂರ್ಣಕಾಮ 2 ದಾಸ ಹೃದಯಾವಾಸ | ದಶಶಿರಧ್ವಂಸ ಶಶಿನಿಭಹಾಸ | ದಶರಥಸುತ | ಶ್ರೀ ವಸುಮತೀಶ ಕುಲವಿಭೂಷ | ಶೇಷಶೈಲ ಶಿಖರಾವಾಸ ಜಯಮಂಗಳಂ3
--------------
ನಂಜನಗೂಡು ತಿರುಮಲಾಂಬಾ
ಜಯಮಂಗಳೆನ್ನಿರೆ ದೇವಗೆ | ಸಂಗೀತದಿಂದಲಿ ಶ್ರೀಶಯನಿಗೆ ಪ ನಾಗವೇಣಿಯರು ನಾರದವರದಗೆ 1 ರಾವಣಾರಿ ರಘುವೀರನಿಗೆ 2 ಸೀಮಂತಿನಿಯರು ಕೋಮಲಾಂಗಗೆ 3
--------------
ಶಾಮಸುಂದರ ವಿಠಲ
ಜಯರಾಯ ಭವಹರಣ ಪಾಲಿಸೆಮ್ಮ ಪ ಜಯದೇವಿಪ್ರತಿ | ರೂಪ ಗುಣಕ್ರಿಯ ರತಯತಿಯೆ ಅ.ಪ. ಅಮರೇಶ ಸ್ವರ್ಗಪದ ತೃಣಮಾಡಿ ಕ್ಷಿತಿಯಲಿ ಪಾದ ಸೇವೆಗಾಗಿ ಅಮಿತ ಭಾಗ್ಯವಿದೆಂದು ಪಶುವಾಗಿ ನೀನಿಂದು ಕಮಲ ಮಧು ಸೇವಿಸಿದೆ 1 ತೃತಿ ಈಶರೆನಿಸುವ ಅಗ್ನಿ ಗರುಡ ಮಹರುದ್ರ ಪ್ರತಿ ಕ್ಷಣದಿ ಅತಿ ಭಕುತಿ ಭಾರದಿಂದ ನತಿಸಿ ಸೇವಿಪ ಪರಮ ಗುರುಚರಣವಾಶ್ರೈಸಿ ದತಿ ಸುಕೃತನಿಧಿ ನಮ್ಮ ಅತಿದಯದಿ ಈಕ್ಷಿಪುದು 2 ಶ್ರೀ ಭೂಮಿ ದುರ್ಗೇಶನ ಮತ ಮಂಗಳ ಮೂರ್ತಿ ಶೋಭನಾಂತ ಗುಣಕ್ರಿಯ ನಿವಹಗಳನು ಅದ್ಭುತದಿ ಧರಿಸಿಹಾ ಮಧ್ವಕೃತ ಗ್ರಂಥಗಳ ಸದ್ಭಕ್ತಿಯಲಿ ಪೊತ್ತೆ ಸೌಭಾಗ್ಯನಿಧಿ ಗುರುವೆ 3 ಪವಮಾನರಾಯನಾ ಕೃಪೆಯೆಷ್ಟೊ ನಿನ್ನಲ್ಲಿ ಅವನಿಯೊಳು ಸಿದ್ಧಾಂತ ಗ್ರಂಥಗಳ ಟೀಕೆ ಕವಿಶ್ರೇಷ್ಠನಿರಲಾಗಿ ನಿನ್ನಿಂದ ರಚಿಸಿದ ತ್ರಿ ಭುವನ ಮಾನ್ಯನೆ ಧನ್ಯ ಧನ್ಯತೆಲಿ ಪೊರೆ ಎಮ್ಮ 4 ಪಾರ್ಥನಾದಂದು ಶ್ರೀ ಯದುಪತಿಯ ಸಖ್ಯವನು ಪೂರ್ತಿಪೊಂದಿದೆ ಸರ್ವ ಪುರುಷಾರ್ಥವೆಂದು ಸ್ವಾರ್ಥಮತಿಯ ಹರಿಯ ಒಲಿಸಿದಾ ಮಹಾನಿಪುಣ ಪಾದ ಪಾಂಶು ರಕ್ಷಿಸಲೆನ್ನ 5 ದೇವಕೀಸುತ ನಿನ್ನ ಸಖನೆಂದು ಪವಮಾನ ದೇವ ನಿನ್ನಲ್ಲಿ ಮಾಡಿದ ಪರಮ ಪ್ರೀತಿ ಪತಿ ದಾಸ್ಯ ಪೂರ್ಣಪ್ರದ ಆರೂಢ ಕೇವಲಾ ಕೃಪೆ ಮಾಡು ಹರಿದಾಸ ಮಣಿಗುರುವೆ 6 ಭಾರತೀಪತಿಗೊಡೆಯ ಜಯೇಶವಿಠಲನ ವೈರಾಗ್ಯ ಸಿದ್ಧಿಯಲಿ ಏಕಾಂತ ಪೊಂದಿ ಭವ ತರಣ ಸತ್ಪಾತ್ರ ವೃಷ್ಟಿ ಹರಿಗುರುಗಳೊಲಿವಂತೆ 7
--------------
ಜಯೇಶವಿಠಲ
ಜಯಶ್ರೀ ರಾಮನ ಜಾನಕಿ ಪ್ರೇಮನ ಅನುದಿನ ಪ ಶುಭ ಕಲ್ಯಾಣನ ಮಾಧವ ಮುಕುಂದನ 1 ವಿಶ್ವ ಪ್ರಕಾಶನಾ --ನಂದದಿ ಹೃದಯ ಗೋವಿಂದನ ಬಿಡದಿನ್ನು 2 ಕಂದರ್ಪ ಜನಕನ ಕರಿರಾಜ ವರದನ ಸಿಂಧುಶಯನ ಹರಿ ಶ್ರೀ ಜಗನ್ನಾಥನ 3 ಸೌಂದರ್ಯ ರೂಪನ ಪುರುಷೋತ್ತಮನ ಕುಂದರದನ ಹರಿ ಕೋಮಲಾಂಗನ 4 ಪರಮ ಪುರುಷನ ಪತಿತಪಾವನನ ನರಹರಿರೂಪನ ನಾರಾಯಣನ 5 ಗರುಡಾರೂಢನ ಕರುಣಾಸಾಗರನ ಉರದಲಿ ಲಕ್ಷ್ಮಿಯ ಧರಿಸಿ ಕೊಂಡಿಹನ 6 ಉರಗಾದ್ರಿ ವಾಸನ ವಸುದೇವಸುತನಾ ಭವಪಾಪ ಸಂಹಾರನ 7 ಶರಣರ ಕಾಯುವನ ಶ್ರೀನಿವಾಸನ ಉರಗಶಯನನ ಹರಿವಾಸುದೇವನಾ 8 ಮಂಗಳಮೂರುತಿ ಮಹಾನುಭಾವನ ಗಂಗೆಯ ಪಡೆದನ ಘನ ಗಂಭೀರನ9 ಶೃಂಗಾರ ಭೂಷಣನ ಸುಗುಣ ಪ್ರತಾಪನ ಅಂಗನೆಯರೆಡ ಬಲದಲಿರುವನ 10 ರಂಗನಾಯಕನ ರಾಜಾಧಿರಾಜನ ಮಂಗಾರಮಣನ ಮಧುಸೂದನನಾ 11 ರಂಗವುಳ್ಳ ಪೀತಾಂಬರ ಧರನಾ ಕಂಬು ಕಂಧರನಾ 12
--------------
ಹೆನ್ನೆರಂಗದಾಸರು
ಜಲಧಿ ಜಾತೆ ಬಾಲೆ ಸಾರಸಾಕ್ಷಿ ಮಂಗಳೆ ಹಾರನೂಪುರಾದಿ ಲೋಲೆ ಬಾರೆ ಕಮಲೆ ನಿರ್ಮಲೆ ಪ ರಾಜ ರಾಜ ಪೂಜಿತಾಂಘ್ರಿ ರಾಜಗೃಹ ನಿವಾಸಿನಿ ರಾಜಕಾಂತಿ ಕೋಮಲಾಂಗಿ ರಜಿಸೌ ಮಹಾತ್ಮಳೆ 1 ಮಂಗಳಾಂಗಿ ಭೃಂಗವೇಣಿ ಅಂಗನಾ ಶಿರೋಮಣಿ ಅಂಗಭವ ಸುಮಾತೆ ಪೊರೆಯೆ ಸಂಗತಾರ್ತಿಹಾರಿಣಿ 2 ದೀನನನ್ನು ನೋಡು ದಯದಿಂ ಸಾನುರಾಗದಿಂದಲಿ ಧೇನುನಗರ ಪಾಲಿನಿ ಶ್ರೀ ಮಾನಿನೀ ಹರಿಪ್ರಿಯೆ 3
--------------
ಬೇಟೆರಾಯ ದೀಕ್ಷಿತರು
ಜಾನಕಿಯು ನಮ್ಮಮ್ಮ ನಮಗೆ ಭಯವೇನು ಪ ಪವಮಾನ ತನಯನು ಪಾಲಿಪ ಗುರುವಯ್ಯಾ ಅ.ಪ ಕಾಲಕಾಲದಿ ತಪ್ಪದೆ | ಭತ್ಯವ ಹಾಕಿ ಬಾಲಲೀಲೆಗಳಾಡಿಸಿ ಮೇಲೆ ತುಡುಗಾಟವಾಡಿದರೆ ಕೆನ್ನೆಯ ಹಿಂಡಿ ಹಾಲ ಕುಡಿಸಿ ಮಕ್ಕಳರ್ಥಿಯ ನೋಡುವ 1 ಇತರ ಮಕ್ಕಳಿಗೆಲ್ಲಾ | ಅವರ ಮಾತಾ ಪಿತರು ವಡವೆಗಳಿಟ್ಟು ಮಿತಿಯಿಲ್ಲದೆ ಬೈದು ಬಲು ಚಿಂತೆಯ ಪಡುವರು 2 ಕಳ್ಳರಿಗೆ ಸಿಕ್ಕದೈಯ್ಯ | ನಮ್ಮೊಡವೆಗಳ್ ಕಳಚುವುದಕೆ ಬಾರದು ಒಳ್ಳೆ ವಸ್ತ್ರವ ಉಡಿಸಿ ಉಚಿತ ತಿಂಡಿಯ ಕೊಡಿಸಿ ಸುಳ್ಳಾಡದಂದದಿ ಸುತ್ತಿಸಿ ನಗುವರು 3 ಓದು ಬರಹವ ಕಲಿಸಿ | ನಮ್ಮನು ಕೆಲವು ಹೊತ್ತು ಆಟಗಳಾಡಿಸಿ ಆದರಿಸುತ ಜನ್ಮ ಜನ್ಮಗಳಲಿ ಬಿಡದೆ ಕಾದು ಕೊಂಡಿರುವರು ಕಡೆಗೂ ನಮ್ಮಗಲರು 4 ಇಂತಹ ನಮ್ಮವರ ಬಿಟ್ಟು | ಬರಿದೇ ಲೋಕ ಸಂತೆಯವರನು ನಂಬುವರೆ ಎಂತಾದರೂ ಗುರುರಾಮ ವಿಠಲನ ನಾಮ ಸ್ವಂತವಾದರೆ ಮುಕ್ತಿ ಸ್ವಾಧೀನವಾಗುವುದು5
--------------
ಗುರುರಾಮವಿಠಲ
ಜಾನಕೀವರತೇ ಜಯ ಮಂಗಳಂ ಪ ಮಾನವಾಧಿಪತೇ ಮಂಗಳಂ ಅ.ಪ ರಾವಣಾನುಜಮಿತ್ರ ರಮಣೀಯ ಸುಚರಿತ್ರ ದೇವಾಧಿದೇವ | ತೇ ಮಂಗಳಂ 1 ಅಪವರ್ಗಪ್ರದ ತೇ ಮಂಗಳಂ 2 ಖರದೂಷಣನಿಹಂತ ಕರಧೃತಶರಚಾಪÀ ಗುರುರಾಮವಿಠಲತೇ ಮಂಗಳಂ 3
--------------
ಗುರುರಾಮವಿಠಲ
ಜಾಂಬುವತಿ ಪ್ರಿಯ ವಿಠಲ | ಅಂಬುಜದಳಾಕ್ಷ ಪ ನಂಬಿ ಬಂದಿಹನ ಮನ | ದಂಬಲವ ಸಲಿಸೋ ಅ.ಪ. ಲೌಕಿಕಾನೇಕದಲಿ | ಸಿಲ್ಕಿ ನೊಂದವನಾಗಿಏಕಾಮೇವಾದ್ವಿತೀಯ | ನೀನೇವೆಯಂಬಾವಾಕು ನುಡಿವಾ ಇವಗೆ | ಪ್ರಾಕ್ಕು ಕರ್ಮವ ಕಳೆದುತೋಕನ್ನ ಸಲಹೆಂದು | ಪ್ರಾರ್ಥಿಸುವೆ ಹರಿಯೇ 1 ನೀಚೋಚ್ಛ ಸುಜ್ಞಾನ | ದಾಸ್ಯಕಿದುವೇ ಮೂಲವಾಚಿಸೋ ಇವನಲ್ಲಿ | ಕೀಚಕಾರಿಪ್ರಿಯಾವಾಚಾಮಗೋಚರನೆ | ಖೇಚರೋತ್ತಮಸವ್ಯಸಾಚಿ ಸಖನೇ ಇವನ | ಕಾಪಾಡೊ ಹರಿಯೇ 2 ಸಂಗೀತ ಲೋಲ ಹರಿ | ಮಂಗಳಾಂಗನೆ ಸಾಧುಸಂಗವನು ಇವಗಿತ್ತು | ಕಾಪಾಡೊ ಹರಿಯೇಇಂಗಿತಜ್ಞನೆ ವಿಷಯ | ನಿಸ್ಸಂಗನೆಂದೆನಿಸಿಸಂಗೀತದಲಿ ತವ ಪ್ರ | ಸಂಗವಿತ್ತು ಕಾಯೋ 3 ಮೂರೆರಡು ಭೇದಗಳ | ತಾರತಮ್ಯ ಜ್ಞಾನವಾರವಾರಕೆ ತಿಳಿಸಿ | ಕಾಪಾಡೊ ಇವನಾಸೂರಿಜನ ಸಂಪ್ರೀಯ | ಸೂರಿಸಂಗವನಿತ್ತುಪಾರುಗೈ ಭವದ ಕೂ | ಪಾರ ಹರಿಯೇ 4 ಗರುಡವಾಹನ ಕೃಷ್ಣ | ಗರುವಗಳ ಪರಿಹರಿಸಿಸರ್ವಾಂತರಾತ್ಮಕನೆ | ಕಾಪಾಡೊ ಹರಿಯೇ |ನಿರವಧಿಕ ಗುಣ ಪೂರ್ಣ | ಸರ್ವೇಷ್ಟ ಪ್ರದನಾಗಿಪೊರೆಯ ಬೇಕಿವನ | ಗುರು ಗೋವಿಂದ ವಿಠಲಾ 5
--------------
ಗುರುಗೋವಿಂದವಿಠಲರು
ಜಾಹ್ನವಿ ಜಗತ್ರಯ ಪಾವನಿ ಪ್ರಣತಕಾಮದೆ ಪದ್ಮಜಾಂಡ ಸಂಭೂತೆ ಪ ಸೃಷ್ಟೀಶ ಪದಜಾತೆ ವಿಶ್ವಮಂಗಳ ಮಹೋ ತ್ಕøಷ್ಟ ತೀರ್ಥಗಳೊಳುತ್ತಮಳೆನಿಸುವೇ ಕಷ್ಟವರ್ಜಿತವೆನಿಪ ತ್ರಿಪಥಗಾಮಿನಿ ದಯಾ ದೃಷ್ಟಿಯಿಂದಲಿ ನೋಡು ಪ್ರತಿದಿನದಿ ಎನ್ನಾ 1 ಕರ್ಮ ಸಾಕ್ಷಿಯೆನಿಸುತಿಹ ಅರ್ಕದೇವನು ಬಂದ ಸಮಯದಲ್ಲಿ ಶರ್ಕರಾಹ್ವರು ಸ್ನಾನಗೈಯೆ ದುರಿತಗಳು ಸಂ ಪರ್ಕವಾಗದ ತೆರದಿ ಸಂತೈಪೆ ದಯದಿ 2 ಕಾರುಣಿಕ ಬಹಿರಾವರಣದಿಂದ ನೀ ಪೊರಟು ವಾರಾಹಿಯೊಡಗೂಡಿ ಭಕ್ತಜನರ ಪ್ರಾರಬ್ಧ ಕರ್ಮಗಳನುಣಿಸಿ ಮುಕ್ತರನ ಮಾಳ್ಪೆ ದೂರಗೈಸುವೆ ಸಂಚಿತಾಗಾಮಿಗಳನೂ 3 ನಂದಿನೀ ನಳಿನಿ ಸುಸೀತಾ ಮಲಾಪಹರ ಳೆಂದ ಮಾತ್ರದಿ ಪುನೀತರನು ಮಾಳ್ಪೆ ಸಂದರುಶನ ಸ್ವರುಶನ ಸ್ನಾನಗಳ ಫಲ ಪು ರಂದರಾರ್ಯರೆ ಬಲ್ಲರಲ್ಪರು ಅರಿಯರು 4 ಮಾತೆ ವಿಜ್ಞಾಪಿಸುವೆ ಬಿನ್ನಪವ ಕೇಳು ಸಂ ಪ್ರೀತಿಯಿಂದಲಿ ಕರುಣಿಸೆನಗೆ ಇದನೆ ಶ್ರೋತವ್ಯ ವಕ್ತವ್ಯ ಮಂತವ್ಯ ಸ್ತವ್ಯ | ಜಗ ನ್ನಾಥ ವಿಠ್ಠಲನೊಬ್ಬನೆಂದು ತಿಳಿವಂತೇ5
--------------
ಜಗನ್ನಾಥದಾಸರು
ಜೊಜೊ ತುಲಸೀರಾಮ ಜೊಜೊ ಶ್ರೀರಾಮ ಜೊಜೊ ಸುಗುಣಸ್ತೋಮ ಜೊಜೊಯಭಿರಾಮಾ ಪಜೊಜೊ ಸ್ವಾರ್ಥತ್ಯಾಗಿ ಜೊಜೊ ನಿಜಯೊಗಿಜೊಜೊ 'ಷಯ'Àರಾಗಿ ಜೊಜೊ 'ತಲಾಗೀ 1ಜೊಜೊ ಸತ್ಯ'ಚಾರ ಜೊಜೊ ಸುಕುಮಾರಜೊಜೊಪತಿತೊದ್ಧಾರ ಜೊಜೊ ಯಘುದೂರ 2ಜೊಜೊ ಪರಮೋದಾರ ಜೊಜೊ ಗಂಭೀರಜೊಜೊ ದುರ್ಮತಹಾರ ಜೊಜೊ ಜಿತಮಾರ 3ಮಂಗಳಕರೋಲ್ಲಾಸ ಮಂಜುಮುಖಹಾಸಾರಂಗಸ್ವಾ'ುೀದಾಸ ರಮ್ಯಹೃದಿವಾಸಾ 4
--------------
ಮಳಿಗೆ ರಂಗಸ್ವಾಮಿದಾಸರು
ಜೋ ಜೋ ಎನ್ನಿ ನಿರ್ವಿಕಾರಿಯಜೋ ಎಂದು ತೂಗಿರಿ ಬ್ರಹ್ಮಾಸ್ತ್ರ ದೊರೆಯ ಪ ವಾದಾತೀತಳಿಗೆ ಹೃದಯ ತೊಟ್ಟಿಲ ಮಾಡಿವೇದ ನಾಲಕು ಎಂಬ ನೇಣನೆ ಹೂಡಿಸಾಧನ ಚತುಷ್ಪಯ ಹಾಸಿಗೆ ಹಾಸಿಬೋಧಾನಂದಳನು ಭಾವದಿ ತಂದು ನೋಡಿ 1 ಶುದ್ಧದ ಚವುರಿ ಸಡಿಲಿಸಿ ಮಗ್ಗುಲಲಿ ಶಾಂತರಸ ದೀಪಗಳ ಹಚ್ಚಿಹೊಡೆಯುತಿಹ ಭೇರಿಗಳ ಘಂಟಾರವ ಹೆಚ್ಚೆಎಡೆಬಿಡದೆ ಓಂಕಾರ ಮಂತ್ರ ಘೋಷಣವು ಮುಚ್ಚಿಕಿಡಿ ನಯನೆಯಳನು ನೋಡಿ ಹರುಷ ತುಂಬೇರಿ 2 ಹಿರಿದಾ ಖಡ್ಗದ ಹಲಗೆ ಬಲ ಭಾಗದಲಿಟ್ಟುಶರಶಾಙರ್É ಬತ್ತಳಿಕೆ ಎಡಭಾಗದಲ್ಲಿಟ್ಟು ದುಷ್ಟ ಶತ್ರುಗಳ ಕಾಲದೆಸೆಗಿಟ್ಟುಪರಮಾಮೃತ ಪಾನ ಪಾತ್ರೆ ತುಂಬಿಟ್ಟು 3 ಜೋ ಜೋ ಶತ್ರು ಸ್ತಂಭಿನಿ ಎನ್ನಿರಿ ನರರೆಲ್ಲಜೋ ಜೋ ಗತಿಮತಿ ಸ್ತಂಭಿನಿ ಎನ್ನಿರಿ ಸುರರೆಲ್ಲಜೋ ಜೋ ಜಿಹ್ವಾ ಸ್ತಂಭಿನಿ ಎನ್ನಿರಿ ಹರರೆಲ್ಲಜೋ ಜೋ ಸ್ತಂಭಿನಿ ಎನ್ನಿರಿ ಧರೆಯೆಲ್ಲ 4 ಜೋ ಜೋ ಸುರಗಿರಿ ಧೈರ್ಯದಾಯಿನಿ ಜೋ ಜೋಜೋ ಜೋ ಹರಿ ಸಮ ಭಾಗ್ಯವೀವಳೆ ಜೋ ಜೋಜೋ ಜೋ ಶಿವ ಸಮ ಸತ್ವವೀವಳೆ ಜೋ ಜೋಜೋ ಜೋ ನಂಬಿದ ರಾಜ್ಯವೀವಳೆ ಜೋ ಜೋ 5 ಭಕ್ತರಭಿಮಾನಿ ಭಕ್ತಮಾತೃಕೆ ಜೋ ಜೋಭಕ್ತವತ್ಸಲೆ ಭಕ್ತ ಕರುಣಾಳು ಜೋ ಜೋಭಕ್ತ ಜೀವನಿ ಭಕ್ತ ಬಂಧುವೆ ಜೋ ಜೋಭಕ್ತ ಚಿಂತಾಮಣಿ ಭಾಗ್ಯಳೇ ಜೋ ಜೋ 6 ಯೋಗಾರೂಢಕೆ ಏಕಾಕ್ಷರಿ ಜೋ ಜೋಯೋಗಿ ಹೃದ್ವಾಸಿನಿ ಯೋಗ್ಯಳೇ ಜೋಜೋಯೋಗಿ ಬೃಹತ್ಯಾಗಿ ವಿರಾಗಿ ಜೋಜೋಯೋಗಿಗಳ ಭಂಡಾರಿ ಯೋಗೀಳೆ ಜೋಜೋ 7 ಚಿದಬಿಂದುಗಳೆಂಬ ಮಂತ್ರ ಪುಷ್ಪ ಚೆಲ್ಲಿಚೆದುರೆಯರು ಮಂಗಳಾರತಿ ಬೆಳಗುತಿಲ್ಲಿಸದಮಳೆ ನೀ ಮಲಗು ಯೋಗ ನಿದ್ರೆಯಲಿಚಿದಾನಂದ ತಾನಾದ ಬಗಳಾಂಬೆ ಸುಖದಲಿ 8
--------------
ಚಿದಾನಂದ ಅವಧೂತರು