ಒಟ್ಟು 764 ಕಡೆಗಳಲ್ಲಿ , 81 ದಾಸರು , 697 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬಂದು ನಿಲ್ಲೆಲೊ ಮನಮಂದಿರದೊಳು ಹರಿ ಇಂದುವದನ ಆನಂದದಿಂದ ಪ. ಮುಂದಗಮನೆರ ಅಂದದಿ ಕೂಡ್ಯರ- ವಿಂದ ಮಧ್ಯದಿ ಬಹು ಸುಂದರ ವೆಂಕಟ ಅ.ಪ. ಗಜವ ಪಾಲಿಸಿದಂಥ ಭುಜಗಶಯನ ಹರೆ ತ್ರಿಜಗದೊಳಗೆ ದಿಗ್ವಿಜಯ ಮೂರುತಿ ಗೋ- ವ್ರಜವ ಪಾಲಿಸಿ ಭೂಭುಜರ ಪೊರೆದೆ ಅಂ- ಬುಜನೇತ್ರ ಅಜಪಿತ ಭಜಿಸಲಾಪೆನೆ ನಿನ್ನ ಭುಜಗ ಭೂಷಣವಂದ್ಯ ರಜ ತಮೊ ಸತ್ವದಿ ತ್ರಿಜಗವ ಸೃಷ್ಟಿಪೆ ಕುಜನರ ಶಿಕ್ಷಿಪೆ ರಜ ತಮೊ ದೂರನೆ ಸುಜನರ ಪೊರೆಯುವ ಋಜುಗಣವಂದಿತ 1 ವ್ಯಾಪ್ತಾ ಜಗದಿ ನಿರ್ಲಿಪ್ತ ಗುಣಗಳಿಂದ ಆಪ್ತ ಜೀವಕೆ ಸುಷುಪ್ತಿ ಕಾಲದಿ ನೀ ಗುಪ್ತನಾಗಿ ಪೊರೆವ ಶಕ್ತನಹುದೊ ತ್ರಿ- ಸಪ್ತ ಇಂದ್ರಿಯಗಳ ತೃಪ್ತಿಗೊಳಿಸು ನಿನ್ನೊಳ್ ಸಪ್ತ ಋಷಿಗಳಿಂದ ಗುಪ್ತರ್ಚನೆಗೊಂಬೆ ಸಪ್ತಜಿಹ್ವನೊಳು ವ್ಯಾಪ್ತನಾಗಿ ಸುರರ ತೃಪ್ತಿಪಡಿಸುವ ವ್ಯಾಪ್ತ ಮೂರುತಿಯೆ ಸಪ್ತ ಸಪ್ತ ಭುವನೇಶ ಪ್ರಕಾಶ 2 ವೇದಸುತಗೆ ಇತ್ತು ಆದರದಿ ಸುಧೆ ಮೋದದಿ ಸುರರಿಗುಣಿಸಿ ಭೂದೇವಿಯನು ಕಾಯ್ದೆ ಬಾಧಿಸೆ ಖಳ ಸುತನ ಭೇದಿಸಿ ಕಂಭ ಬಂದೆ ಪಾದದಿ ಗಂಗೆ ಪೆತ್ತು ಬಾಧೆ ಕ್ಷತ್ರಿಯರಿಗಿತ್ತೆ ಆದರದಲಿ ಸುಗ್ರೀವನ ಪೊರೆದೆ ಯಾದವ ವಂಶ ಮಹೋದಧಿ ಚಂದ್ರ ಸಾಧಿಸಿ ತ್ರಿಪುರರ ಛೇಧಿಸಿ ಕಲಿಮುಖ- ರಾದ ದುಷ್ಟರ ಸೀಳಿ ಬಾಧೆಯ ಬಿಡಿಸಿದೆ 3 ಪದ್ಮನಾಭನ ತೋರೊ ಪದ್ಮಸಂಭವ ಜನಕ ಪದ್ಮನಾಭನೆ ಹೃತ್ಪದ್ಮ ಮಧ್ಯದಿ ವಾಸ ಪದ್ಮ ಬಾಂಧವ ತೇಜ ಪದ್ಮ ನಯನಕರ ಪದ್ಮದಿಂದಲಿ ನೀ ಪದ್ಮಾವತಿಯ ಕೂಡ್ದೆ ಪದ್ಮವೈರಿಯ ಕೋಟಿ ಮುದ್ದು ಮುಖದ ತೇಜ ಪದ್ಮ ಉದರ ಷಟ್ಪದ್ಮದಿ ವಾಸ ಪದ್ಮ ಸರೋವರ ತೀರವಾಸ ಹೃ ತ್ಪದ್ಮ ಮಧ್ಯದಿ ಭೂಪದ್ಮಿನಿ ಸಹಿತ 4 ಆಪಾರ ಮಹಿಮನೆ ಗೋಪಾಲಕೃಷ್ಣವಿಠ್ಠಲ ಭೂಪರೈವರ ಕಾಯ್ದೆ ದ್ರೌಪದಿ ಮಾನದೊಡೆಯ ನೀ ಪ್ರೀತಿಯಿಂದ ಪೋಗಿ ತಾಪವ ಬಿಡಿಸಿದೆ ವ್ಯಾಪಕನೊ ಜಗಸ್ಥಾಪಕನೊ ಬಹು ರೂಪಕನೊ ದುಷ್ಟತಾಪಕನೊ ಹರಿ ಪಾಪ ಹರಿಸಿ ಕರ್ಮಲೇಪನ ಮಾಡದೆ ಪರಿ ಪರಿಯಿಂದ ಕಾಪಾಡೊ ಭಕ್ತರ5
--------------
ಅಂಬಾಬಾಯಿ
ಬಂದೆನಿಲ್ಲಿಗೆ ಸಂದರುಶನಕ್ಕೆ ಬಂದೆನಿಲ್ಲಿಗೆನ್ನ ಮನದಿ ಬಂದು ನಿಲ್ಲೆಂದು ನಿನ್ನ ವಂದಿಸ್ವರವ ಬೇಡುವೆ ನಾ ನಂದನ ಸುಂದರ ಕೃಷ್ಣ ಬಂದೆನಿಲ್ಲಿಗೆ ಪ ಪಾಲಶರಧಿ ಆಲದೆಲೆಯಲ್ಯೋಗನಿದ್ರೆ ಮಾಡಿ ನಿನ್ನ ನಾಭಿಕಮಲನಾಳದಿಂದ ಆಗ ಅಜನ ಪಡೆದ ಹರಿಯೆ 1 ಸಾಗರವ ಬಿಟ್ಟು ನಾಗಶಯನ ಶೂರಸುತನಲ್ಲುದಿಸಿ ಯೋಗಿಗಳ ಹೃದಯಕಮಲ ಆಲಯವ ಮಾಡಿದ್ದ ದೊರೆಯೆ2 ಕಂದನಾಗಿ ಬಂದು ಕಾಳಿಂದಿ ದಾಟಿ ನಂದಗೋಕುಲ ವೃಂದಾವನದಿ ಗೋವುಕಾಯ್ದ ಇಂದಿರೇಶ ಅಜನಪಿತನೆ 3 ಅಷ್ಟಮಠದ ಯತಿಗಳಿಂದ ಮುಟ್ಟಿಪೂಜೆಗೊಂಬುವಂಥ ಶ್ರೇಷ್ಠರೊಳಗೆ ಶ್ರೇಷ್ಠ ನಿನ್ನುತ್ಕøಷ್ಟಮಹಿಮೆ ನೋಡಲೀಗ4 ಧ್ವಜ ವಜ್ರಾಂಕುಶ ರೇಖವುಳ್ಳ ಪದುಮಪಾದ ನೋಡಲೀಗ5 ದೊಡ್ಡ ಮುತ್ತು ವಜ್ರದ್ಹರಳಿನಡ್ಡಿಕೆ ಉಡಿದಾರ ಹೊಳೆಯೆ ಒಡ್ಯಾಣವನೆಯಿಟ್ಟ ಜಂಘÉ ಜಾನುದ್ವಯವ ನೋಡಲೀಗ6 ಉದರದಲ್ಲೀರೇಳುಲೋಕ ಅಡಗಿಸಿದನಂತಶಯನ ಪದುಮ ಪೊಕ್ಕಳಿಂದ ಬ್ರಹ್ಮನ ಪಡೆದ ಪರಮಾತ್ಮನ್ನ ನೋಡ7 ವಂಕಿ ಬಾಹುಪುರಿಗಳಿಂದ ಕಂಕಣ ಭೂಷಣಗಳೊಪ್ಪೆ ಕರವ ನೋಡ8 ನೀಲವರಣ ನಿನ್ನ ಬೆರಳು ಸಾಲು ಮಾಣಿಕ್ಯ ಮುದ್ರಿಕಿಂದ್ಹೊಳೆಯೆ ಲೀಲೆಯಿಂದ ಗಿರಿಯೆತ್ತಿದ ಗೋಪಾಲಕೃಷ್ಣ ನಿನ್ನ ನೋಡ 9 ವೈಜಯಂತಿ ತೋರ ಮುತ್ತಿನೆಳೆÀಗಳ್ಹೊಳೆವೋ ಶ್ರೀದೇವೇರಿಗಾಶ್ರಯವಾಗಿದ್ದಿ ್ವಶಾಲ ವಕ್ಷಸ್ಥಳವ ನೋಡ10 ಪಚ್ಚೆಪದಕ ಪಾರಿಜಾತ ಅಚ್ಚ ಮಲ್ಲಿಗೆ ತುಳಸಿಮಾಲೆ ಶ್ರೀ- ಕೌಸ್ತುಭ ಶೃಂಗಾರ ಕೊರಳ ಸಿರಿಯರಸು ನಿನ್ನ ನೋಡ11 ಮಧ್ವರಾಯರು ಕೈಯ ಬೀಸೆ ಎದ್ದು ಬಂದು ಹಡಗದಿಂದಿ ಲ್ಲಿದ್ದಾನುಡುಪಿಕ್ಷೇತ್ರದಿಯೆಂದು ಮುದ್ದುಕೃಷ್ಣನ ಮುಖವ ನೋಡ12 ಕ್ರೂರಕಂಸನ(ಅ)ಪ್ಪಳಿಸಿ ದ್ವಾರಾವತಿಯಲ್ಲಿದ್ದ ಅಷ್ಟಭಾರ್ಯೇರಿಂದ್ವಿ- ಹಾರ ಮಾಡಿದ್ವಾರಿಜಾಕ್ಷನ್ವದನ ನೋಡ 13 ಚಂದ್ರನಂತೆ ಹೊಳೆವೊ ಮುಖದಿ ದುಂಡು ಮುತ್ತಿನ ಮೂಗುತಿನಿಟ್ಟು ಕುಂದಣದ್ವಜ್ರ ಬಿಗಿದ ಕರ್ಣಕುಂಡಲವನ್ನು ನೋಡಲೀಗ14 ಕೇಸರಿ ಗಂಧ ಕಸ್ತೂರಿಯ ನಾಮ ತಿಲಕ ಒಪ್ಪೋವಜ್ರದರಳೆಲೆ ದೇವಕೀಸುತನ (ನೋಡ) 15 ಬಾಲಭಾಸ್ಕರ ಕೋಟಿಲಾವಣ್ಯರೂಪಗೆಲುವ ಕಾಂತಿ ಸಾಲುದೀವಿಗೆ ಸೊಬಗು ಕಮಲದಳಾಯತಾಕ್ಷ ಹರಿಯ ನೋಡ16 ಕೆಂಪುಹರಳು ಝಗ ಝಗಿಸುವೊ ಪಂಚರತ್ನದ ಕಿರೀಟ ಚಂಚಲಾಕ್ಷ ಹರಿಯ ಶಿರದಿ ಮುಂಚೆ ನೋಡಿ ಮುಗಿವೆ ಕೈಯ17 ಅಸುರರ್ವಂಚಿಸಮೃತ ಬೀರಿ ಪಶುವಾಹನಗೆ ಮೋಹ ತೋರಿ ಮೋಸದಿಂದ ಭಸ್ಮಾಸುರನ ನಾಶಮಾಡಿದ ನಾರಿ ನೋಡ18 ಲವಣಶರಧಿತೀರ ಮಧ್ವ ಸರೋವರದಲಿ ಶುದ್ಧಸ್ನಾನ ಪರಮ ಮಂತ್ರ ಜಪಿಸೋ ನಿನ್ನ ಶರಣು ಸುಜನಜನರ ನೋಡ19 ಉತ್ತಮ ವೈಕುಂಠ ಬಿಟ್ಟೀ ಉಡುಪಿಯಲ್ಲಿ ವಾಸವಾಗಿ ಭಕ್ತಜನರಭೀಷ್ಟಕೊಡುವೋ ನಿತ್ಯಮುಕ್ತ ನಿನ್ನ ನೋಡ20 ಶ್ರೀಶನೊಲಿಸಿದ್ಹನುಮ ಭಾರತೀಶನಾದ ಮಧ್ವರಾಯರ ದಾಸರ ದಾಸತ್ವಕೊಡು ಭೀಮೇಶಕೃಷ್ಣಂದಯದಿ ನೋಡ 21
--------------
ಹರಪನಹಳ್ಳಿಭೀಮವ್ವ
ಬಂದೆನ್ನ ಮನಮಂದಿರದಲಿ ನಿಲ್ಲೊ | ಹೇ ಶ್ರೀನಿವಾಸ ಬಂದೆನ್ನ ಮನಮಂದಿರದಲಿ ನಿಲ್ಲೊ ಪ. ಇಂದಿರೇಶ ವೈಕುಂಠದಿಂದ ನೀ ಬಂದು ಈಗ ಎನ್ನ ಹೃದಯ ಕಮಲದಿ ಅ.ಪ. ಜಗದಂತರಾತ್ಮ ನಿರ್ಮಲಾತ್ಮ | ನಿರ್ಗತ ದುರಿತಾತ್ಮ ನಿಗಮಾದಿಗಳೊಂದ್ಯ ನೀ ನಿತ್ಯಾತ್ಮ | ಜೀವಂತರಾತ್ಮ ಸುಗುಣವಂತ ನಿನ್ನ ಬಗೆ ಬಗೆ ಮಹಿಮೆಯ ಪೊಗಳಬಲ್ಲೆನೆ ನಾ ಖಗವಾಹನನೆ 1 ಅರಿಯೇನೋ ಅನ್ಯರ ಹರಿ ಸರ್ವೇಶ | ಹೃತ್ಕಮಲದಿ ವಾಸ ಪರಿಹಾರಗೈಸೊ ಈ ಭವಕ್ಲೇಶ | ನಂಬಿದೆ ಸರ್ವೇಶ ಅರಘಳಿಗೆ ನಿನ್ನಗಲಿರಲಾರೆನೊ ಸಿರಿಸಹಿತದಿ ನಿನ್ನರಮನೆಯಿಂದಲಿ 2 ಇಂದು | ನೀ ರಕ್ಷಕನೆಂದು ಕರಕರೆಗೊಳಿಪುದು ಧರ್ಮವೆ ನಿಂದು | ನೀ ಕಾಯಲಿಬೇಕಿಂದು ಸರಿಯಲ್ಲವು ಈ ತೆರದಲಿ ತೊರೆವುದು ಶರಣ ರಕ್ಷಕನೆಂಬೊ ಬಿರುದು ಪೊತ್ತಿಲ್ಲವೆ 3 ಎಂತೆಂತು ಸಹಿಸಲಿ ಈ ಭವಕ್ಲೇಶ | ಜೀವಾಂತರವಾಸ ಕಂತುಪಿತ ಎಣಿಪರೆÀ ಎನ್ನಯ ದೋಷ | ಸರಿಯಲ್ಲ ಸುರೇಶ ಇಂತು ನಿನಗೆ ಒಪ್ಪಿಸಿದರೊ ಗುರುಗಳು ಚಿಂತಿತಾರ್ಥ ನಿನಗೆನ್ನ ತರ ತಿಳಿಯದೆ 4 ಬೆಟ್ಟದ ಒಡೆಯ ಬೇಗನೆ ಬಾರೊ | ಹೃತ್ಕಮಲದಿ ತೋರೊ ಶ್ರೇಷ್ಠ ಶ್ರೀ ಗುರುಗಳ ಕರುಣವ ಬೀರೊ | ಸಲಹುವರಿನ್ಯಾರೊ ಮುಟ್ಟಿ ಭಜಿಪೆ ನಿನ್ನ ಶ್ರೇಷ್ಠ ಪದಂಗಳ ಸೃಷ್ಟೀಶ ಗೋಪಾಲಕೃಷ್ಣವಿಠ್ಠಲನೆ 5
--------------
ಅಂಬಾಬಾಯಿ
ಬಲ್ಲವಗಿಲ್ಲಿದೆ ವೈಕುಂಠ ಪ ಶÀರೀರ ಹರಿಯ ಪಟ್ಟಣ ಹೃದಯಸರೋಜವಾತನ ಅರಮನೆ ಸೂರ್ಯಾದಿ ದೇವರು ಚಕ್ಷುರಾದಿಗಳಲ್ಲಿದ್ವಾರಪಾಲಕರಾಗಿ ಇಪ್ಪರೆಂದು 1 ನಡೆ ಸರ್ವದಾ ಶ್ರೀಹರಿಯ ಯÁತ್ರೆ ನುಡಿ ಸರ್ವ ಶಬ್ಧಾರ್ಥ ಹರಿಯನಾಮಬಿಡದೆ ಶ್ರೀಹರಿಗೆರಗುವ ಚೇತನಜಡಗಳೆಲ್ಲ ಶ್ರೀಹರಿಯ ಪ್ರತಿಮೆಯೆಂದು 2 ಅನಿರುದ್ಧ ರೂಪಗಳಿಂದಶ್ರೀರಮಣನೆ ಭೋಜ್ಯಗಳಲ್ಲಿಪ್ಪಸಾರ ಅಂಶವನು ಪ್ರದ್ಯುಮ್ನ ಸಂಕರುಷಣಮೂರುತಿಯಿಂದ ಭುಂಜಿಪನೆಂದು 3 ಹರಿ ಚರಾಚರ ಸರ್ವ ಜಗದ್ಭರಿತಮುರಹರನಿದ್ದುದೆ ವೈಕುಂಠನರಹರಿಯಲಿ ನವವಿಧ ಭಕುತಿಗೆಸರಿಸಮವೆಂದಿಗಿಲ್ಲವೆಂದು 4 ಜಾಗರಾದಿಗಳಲ್ಲಿ ವಿಶ್ವಾದಿ ಮೂರುತಿಯೋಗಿ ಶ್ರೀಕೃಷ್ಣನೆ ವಿಷಯಂಗಳಭೋಗಿಪನೆಂಬ ಯೋಗಿಗೆ ವಿಹಿತಭೋಗಂಗಳೆಲ್ಲ ಯಾಗಂಗಳೆಂದು 5
--------------
ವ್ಯಾಸರಾಯರು
ಬಾ ಬಾ ಬಾ ಮೆಲ್ಲಡಿ ಇಡುತಲಿ ಕರಿಗಿರಿ ನರಹರಿ ಪ. ಪದ್ಮನಾಭ ಹೃ ತ್ಪದ್ಮದಿ ನೆಲಸುತ ಪದ್ಮಿನಿಯೊಡನೇ 1 ದಾಸರ ಮೇಳವ ಶ್ರೀಶನೆ ಕೇಳುತ ವಾಸುದೇವ ನಮ್ಮ ಆಶೆ ಪೂರೈಸಲು 2 ರಂಗ ಉತ್ತುಂಗ ಕಾಳಿಂಗಮರ್ದನ ಯದು ಪುಂಗವ ಶ್ರೀ ಭೂ ಸಂಗದಿ ರಥದಲಿ 3 ಶುದ್ಧ ಸಾತ್ವಕ ನಮ್ಮ ಉದ್ಧಾರಕ ತಂದೆ ಮುದ್ದು ಮೋಹನರಾ ಮುದ್ದಿನ ದೇವನೆ 4 ಆಪದ್ಬಾಂಧರ ಶ್ರೀಪತಿ ಕರುಣದಿ ಗೋಪಾಲಕೃಷ್ಣವಿಠ್ಠಲ ಸರ್ವೇಶ್ವರ5
--------------
ಅಂಬಾಬಾಯಿ
ಬಾ ಬಾ ಬಾರೈ ಬಾ ಬಾ ಬಾ ಬಾರೈ ಬಾ ಬೇಗ ಬಾರೆಂದು ಭಕುತರು ಕರೆಯಲು ಹರಿ ಪ. ಶ್ರೀಸತಿಯಪ್ಪಿಕೊಂಡಿಪ್ಪನೆ ಬಾ ಶೇಷಶಯನ ಎನ್ನಪ್ಪನೆ ಬಾ 1 ಮತ್ಸ್ಯನಾಗಿ ಜಲದೊಳಾಡಿದವನೆ ಬಾ ಕಚ್ಛಪವತಾರವ ಮಾಳ್ದನೆ ಬಾ 2 ಧsÀರೆಗಾಗಿ ಜಲದೊಳಗಿಳಿದನೆ ಬಾ ಹಿರಣ್ಯಕನುದರವ ಸೀಳ್ದನೆ ಬಾ 3 ಶಕ್ರನ ಪೊರೆದ ಶ್ರೀ ವಾಮನನೆ ಬಾ ವಕ್ರನೃಪಾಲಕುಲಶಮನನೆ ಬಾ 4 ರಾವಣಾಂತಕ ರಘುರಾಮನೆ ಬಾ ದೇವಕಿ ನಿಜಸುತ ಪ್ರೇಮನೆ ಬಾ 5 ಸತಿಯರ ವ್ರತವ ಕೆಡಿಸಿದನೆ ಬಾ ಚತುರ ಕಲಿಯನೋಡಿಸಿದನೆ ಬಾ 6 ಹಯವದನಾಶ್ರಿತ ಶರಣನೆ ಬಾ ಪ್ರಿಯಸುರ ಸೇವಿತ ಚರಣನೆ ಬಾ 7
--------------
ವಾದಿರಾಜ
ಬಾಗಿಲನು ತೆಗಿಸಿ ದರುಶನವ ಕರುಣಿಸಿದೆಯೋ ಭೋಗ ನರಸಿಂಹಸ್ವಾಮಿ ಪ. ನಾಗಶಯನನೆ ದೇವ ಕರಿಗಿರಿ ನಿಲಯ ಹರಿ ಯೋಗಿ ಶ್ರೀಗುರು ಹೃದಯ ನಿಲಯ ಅ.ಪ. ಸಿರಿಯನ್ನೆ ತೊಡೆಯ ಮೇಲೆರಿಸಿಕೊಂಡು ನಗುತ ಪರಿಪರೀ ಸೇವೆಯನು ಭಕ್ತರಿಂ ಕೊಳುತ ಪರಮಾತ್ಮ ಪಂಚಾಮೃತದ ಅಭಿಷೇಕವನು ಎರೆಯುತಿರೆ ಕಂಡು ನಾ ಹರುಷಪಟ್ಟೆನೊ ಸ್ವಾಮಿ 1 ಸುರನದಿಯ ಜಲ ತಂದು ನಿನಗಭಿಷೇಕವನೆ ಎರೆದು ಪರಿಪರಿಯ ಪೂಜೆ ಅಲಂಕಾರವನೆ ಮಾಡಿ ತರತರದ ಷಡ್ರಸವ ಭೋಜನವಗೈಸುತಲಿ ವರ ಮಂಗಳಾರತಿಯನೆತ್ತಿದುದ ಕಂಡೆ 2 ಘನ್ನ ಮಹಿಮೆನೆ ಸ್ವಾಮಿ ಎನ್ನ ಬಿನ್ನಪ ಕೇಳಿ ಮನ್ನಿಸಿ ದರುಶನವ ಇನ್ನು ಕರುಣಿಸಿದೆ ನಿನ್ನ ಸಮರಿನ್ಯಾರೊ ಪನ್ನಗಶಯನನೆ ಧನ್ಯರೋ ನಿನ್ನ ಪದವ ನಂಬಿದವರು3 ಶಾಂತರೂಪವ ಧರಿಸಿ ಶಾಂತ ಮೂರುತಿ ಎನಿಸಿ ಅಂತರಂಗದಿ ನಿನ್ನ ಧ್ಯಾನಿಸುವರ ಸಂತೋಷಪಡಿಸುತಲಿ ಕಾಯ್ವ ಕಮಲಾಕಾಂತ ಅಂತರಂಗವ ತಿಳಿದು ಸಂತೈಸೊ ಎನ್ನ 4 ಪಾಪಿ ದೈತ್ಯನ ಕೊಂದು ಕೋಪಿಸದೆ ಭಕ್ತನೊಳು ಕಾಪಾಡಿದೆಯೊ ಪರಮಪ್ರೇಮದಿಂದ ಗೋಪಾಲಕೃಷ್ಣವಿಠ್ಠಲನೆ ಅದರಂದದಲಿ ಕಾಪಾಡೊ ಭಕ್ತರನು ಹೃದಯದಲಿ ನೆಲಸಿ 5
--------------
ಅಂಬಾಬಾಯಿ
ಬಾರಯ್ಯ ಬೇಗ ಶ್ರೀ ಶ್ರೀನಿವಾಸ ಭಕ್ತರ ನುಡಿಗೆ ಪ. ಬಾರೋ ನಿನ್ನ ಮುಖ ತೋರೊ ತ್ವರಿತದಲಿ ಸಾರಸಾಕ್ಷ ನಿನ್ನ ಸಾರಿದೆನಯ್ಯ ಅ.ಪ. ವೈಕುಂಠದಿಂದ ಬಂದೆಯೊ ಗಿರಿಗೆ | ಲಕ್ಷ್ಮಿಯು ತಾ ಪೋಗೆ ಬೇಕಾಗಲಿಲ್ಲವೊ ಅರಮನೆ ನಿನಗೆ | ಮುನಿಗಳ ವರದನಿಗೆ ಬೇಕಾದ್ವೈಭವ ನೀ ಕೈಕೊಳುತ ಸಾಕುತಲಿಪ್ಪೆಯೊ ನೀ ಕರೆದವರನು 1 ಶ್ರೀಸ್ವಾಮಿ ಪುಷ್ಕರಣಿಯ ದಡದಲ್ಲಿ | ನೀ ವಾಸಿಸುತಲ್ಲಿ ಸೇವಾದಿಗಳನು ಬಗೆಬಗೆ ಕೊಳ್ಳುತಲಿ | ಸುಜನರ ಪೊರೆಯುತಲಿ ಈ ವಿಧದಿಂದಲಿ ಭಾವಜನಯ್ಯನೆ ಪಾವಕಸಖನೊಳು ಪಾವನನಾಗಿಹೆ 2 ವರ್ಣಿಸಲರಿಯೆ ನಿನ್ನನು ದೊರೆಯೆ | ಲೋಕದಿ ಅಚ್ಚರಿಯೆ ಘನ್ನ ಸುಮಹಿಮನೆ ಬೇಡುವದರಿಯೆ | ನೀನೆ ಕೈಪಿಡಿಯೆ ಮುನ್ನ ಮಾಡಿದ ಘನ್ನ ಪಾಪಗಳು ಇನ್ನಿರಲಾರವೊ ಮನ್ನಿಸಿ ಪೊರೆಯೊ 3 ಜಗಸೃಷ್ಟಿಯಿಂದ ಜೀವರ ಮಾಳ್ಪೆ | ಜೀವರ ಸೃಷ್ಟಿಪೆ ತ್ರಿಗುಣಾದಿಗಳಿಂದ ತಿರುಗಿಸುತಿರ್ಪೆ | ಕರ್ಮದ ತೆರೆಮಾಳ್ಪೆ ವಿಗಡ ದೇಹದೊಳು ಬಗೆ ಬಗೆ ದೇವರು ತಗಲಿ ನಿನ್ನ ಪದನಗಧರ ಕಾಣರೊ 4 ಕಣ್ಣ ಬಿಟ್ಟಿರುವೆ ಬೆನ್ನೊಳೆ ಬೆಟ್ಟವೆ | ಮಣ್ಣ ತಿನುತಿರುವೆ ಚಿಣ್ಣ ನಿನಗೊಲಿದು ಚಿಣ್ಣನಾಗ್ವೆ | ಬೆನ್ನೊಳು ಪರಶುವೆ ಹಣ್ಣು ಕೊಟ್ಟವಳಿಗೆ ಒಲಿದು ಗೋಪಿಯರ ಕಾಯ್ದು ಬಣ್ಣಗೆಟ್ಟು ಹಯವನ್ನೇರಿದೆ5 ಆಕಾಶರಾಯನ ಮಗಳ ತಂದೆ | ಈ ಗಿರಿಯಲಿ ನೀನೆ ಸಾಕುವ ಬಿರುದು ನಿನ್ನದೆಂದೆ | ನೀ ಕಾಯಲೆಬೇಕೆಂದೆ ನೂಕಿ ಎನ್ನ ಭವತಾಪನೀಗಲೆ ಶ್ರೀಕಳತ್ರ ನಿನ್ನ ಭಕ್ತರೊಳಿಡಿಸೊ 6 ಅಪಾರಮಹಿಮ ಅದ್ಭುತಚರಿತ | ಶೇಷಾದ್ರಿಯೊಳ್ ನಿರುತ ವ್ಯಾಪಾರ ಮಾಡುತ ಗುಪ್ತದೊಳಿರುತ | ನಿಜ ಭಕ್ತಗೆ ಕಾಣುತ್ತ ಪರಿ ಅದ್ಭುತ ಚರಿತೆಯ ತೋರುವ ಗೋಪಾಲಕೃಷ್ಣ ವಿಠ್ಠಲನೆ ನೀ ಕಾಯೊ 7
--------------
ಅಂಬಾಬಾಯಿ
ಬಾರಯ್ಯ ಭಕ್ತವತ್ಸಲ ಶ್ರೀ ಗುರು ಮುದ್ದುಕೃಷ್ಣ ಮದನಗೋಪಾಲ ಧ್ರುವ ಯಾದವಕುಲತಿಲಕ ಶ್ರೀದೇವದೇವ ಸಾಧುಜನರ ಪಾಲಕ ಉದ್ಧವ ಪ್ರಾಣಪೋಷಕ ಆದಿಕೇಶವ ಸದಮಲ ಸುಖದಾಯಕ 1 ಇಂದೀವರದಳನಯನ ನಂದಕುಮಾರ ಸುಂದರ ಶುಭವದನ ಮಾಧವ ಮಧುಸೂದನ ಮಂದರಧರ ವೃಂದ ಗೋಕುಲೋದ್ಧರಣ 2 ಮುರಹರ ಸಂಕರುಷಣ ಉರಗಶಯನ ತೋರಯ್ಯ ನಿಮ್ಮ ಚರಣ ಬಾರಯ್ಯ ನಾರಾಯಣ ಗರುಡವಾಹನ ಹೊರೆಯಾ ಮಹಿಪತಿ ಪ್ರಾಣ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಬಾರೊ ಗೋಪಿನಾಥ ನಿನ್ನಗಲಿರಲಾರೆನೊ ಪ ಶೌರಿ ಅ.ಪ ವಾರಿಚರ ಕೂರ್ಮನೆ ಧಾರುಣಿ ತಂದನೆ ತೋರ ಕೊರಳ ಹಾರ ವರಮೃಗರೂಪನೆ 1 ಮೇದಿನಿ ಪಾಲಕರ ಕೊಂದು ವೈರಿ 2 ಬೆತ್ತಲೆ ನಿಂತು ದುಷ್ಕøತ್ಯ ಮಾಳ್ಪರ ಕೊಂದು ಉತ್ತಮ ತುರಗವೇರಿದ ಭೃತ್ಯವತ್ಸಲ ದೇವ 3 ವಿಜಯ ರಾಮಚಂದ್ರವಿಠಲರಾಯನೆ ಸುಜನ ವಂದಿತ ನಿನ್ನ ಭಜನೆಯ ಪಾಲಿಸೊ 4
--------------
ವಿಜಯ ರಾಮಚಂದ್ರವಿಠಲ
ಬಾರೊ ನೀಯನ್ನಮನಿಗೆ ಗೋಪಾಲಕೃಷ್ಣ ಪ ಅಂದದಿ ಚಂದದಿ ಆಡುತ ಪಾಡುತ ಧಿ ಮಿಧಿಮಿಯನ್ನುತ ದಿನ ದಿನ ಕುಣಿಯುತ 1 ಅಂದುಗೆ ಗೆಜ್ಜೆಗಳಿಂದ ಶೋಭಿತನಾಗಿ ಮಂದಾರ ಕೂಡಿಕೊಂಡು ಗಜಗು ಭೊಗರಿಯಾಡುತ 2 ಬಾಲಕನಾಗಿ ನೀ ಲೀಲೆಯ ತೋರುತ ಲಾಲಿಯ ನಾಡುವ ಬಾಲಕರ ಕೂಡ 3 ಕುಡಿಯಲು ನಿನಗೆ ಕೊಡುವೆನು ನೊರೆಹಾಲ ಹುಡುಗರ ಕೂಡಿಕೊಂಡು ಶಿಡಿಗುಡಿನಾಡುತ 4 ಪತಿ ಹೆನ್ನೆ ವಿಠಲ 5
--------------
ಹೆನ್ನೆರಂಗದಾಸರು
ಬಾರೊ ಮನಕೆ ಮುರಾರಿ ಗೋಪಾಲಕೃಷ್ಣ ಬಾರೊ ಬೇಗ ಹದಿ- ನಾರು ಸಾವಿರದ ನೂರೆಂಟು ನಾರೇರ ಮನೋಹರ ಪ. ನೀಯೆನಗಿಂಬೆಂದರಸುತ ನಂಬಿಹೆನು ಸಂಬಾಳಿಸುತಿಹ ದೊರೆ ನೀನು ತುಂಬಿದ ದುರಿತಾಡಂಬರ ಓಡಿಸಿ ಬೆಂಬಲನಾಗಿರು ಕಂಬ್ವರಧರನೆ1 ಬಲೆಯನು ಕೆಡವುತ ಬೇಗದಲಿ ಕಳದನುಗಾಲವು ಕಾವುತಲಿ ಸುಲಲಿತ ವಕ್ಷಸ್ಥಳದಲಿ ಭಾರ್ಗವಿ ಲಲನೆಯನಿರಿಸಿದ ನಳಿನಜ ಜನಕಾ 2 ಮಾನ್ಯ ಪರಾಪರ ಮೂರುತಿಯೆ ಚಿನ್ಮಯ ನಿನಗಿದು ಕೀರುತಿಯೆ ಪನ್ನಗ ಗಿರಿವರ ಪದಯುಗ ಪದ್ಮಗ- ಳೆನ್ನ ಶಿರದೊಳಿಸುನ್ನತ ಕರುಣದಿ 3
--------------
ತುಪಾಕಿ ವೆಂಕಟರಮಣಾಚಾರ್ಯ
ಬಾರೊ ಹನುಮ ಬಾರೊ ಭೀಮ ಬಾರೊ ಮಧ್ವಮುನಿಪ ಪ. ಬಾರೊ ರಾಮಕೃಷ್ಣ ವೇದವ್ಯಾಸರ ಪ್ರಿಯ ಭಕ್ತ ಅ.ಪ. ಅಂಜನೇಯ ಸುತನು ಆಗಿ ಸಂಜೀವನ ಗಿರಿಯ ತಂದೆ ಕಂಜಲೋಚನೆಯ ವಾರ್ತೆ ಮಂಜುಭಾಷಣ ರಾಮನಿಗರುಹಿದೆ 1 ಪಾಪಿ ಕೌರವ ಕುಲವ ಕೊಂದು ದ್ರೌಪದಿಯ ಕಾಯ್ದ ಮಹಿಮ ಶ್ರೀಪತಿ ಶ್ರೀ ಕೃಷ್ಣನ ಭಜಿಸಿದ ಭೂಪ ಭೀಮಸೇನ ಬೇಗ 2 ಭೂಸುರ ಜನ್ಮದಲಿ ಬಂದು ಆಸೆಯಿಂದ ಆಶ್ರಮ ಕೊಂಡು ದೋಷಿ ಅನ್ಯಮತವ ಮುರಿದು ಭೂಸುರರ ಕಾಯ್ದ ಮಧ್ವ 3 ಸಕಲ ಸುಜನರ ಸೇವೆ ಕೊಂಡು ಮುಕುತಿಮಾರ್ಗಪ್ರದ ನೀನಾಗಿ ಭಕುತಿಮಾರ್ಗವ ತೋರಿ ಎನ್ನ ಹೃತ್ಕಮಲ ಮಧ್ಯದಲಿ ನಿಲ್ಲೊ 4 ಗೋಪಾಲಕೃಷ್ಣವಿಠ್ಠಲನ ರೂಪ ನೋಡುವ ಕೃಪೆಯ ಮಾಡೊ ಶ್ರೀಪತಿ ಶ್ರೀ ಶ್ರೀನಿವಾಸಗೆ ನೀ ಪ್ರೀತಿಕರನೆಂದು ನಮಿಪೆ 5
--------------
ಅಂಬಾಬಾಯಿ
ಬಾರೋ ನಮ್ಮ ಮನೆಗೆ ಗೋಪಾಲಕೃಷ್ಣ ಪ ಗೊಲ್ಲ ಬಾಲಕರನು ನಿಲ್ಲಿಸಿ ಪೆಗಲೇರಿಗುಲ್ಲು ಮಾಡದೆ ಮೊಸರೆಲ್ಲ ಸವಿದ ಕೃಷ್ಣ 1 ಕಸ್ತೂರಿ ತಿಲಕವ ಶಿಸ್ತಾಗಿ ಪಣೆಯೊಳಿಟ್ಟುಮಸ್ತಕದಲಿ ಪರವಸ್ತು ತೋರಿದ ಕೃಷ್ಣ 2 ಮುಜ್ಜಗವನೆಲ್ಲ ಬೊಜ್ಜೆಯೊಳಗಿಟ್ಟುಗೆಜ್ಜೆಯ ಕಟ್ಟಿ ತಪ್ಹೆಜ್ಜೆಯನಿಕ್ಕುತ 3 ನಾರೇರು ಬಿಚ್ಚಿಟ್ಟ ಸೀರೆಗಳನೆ ವೊಯ್ದುಮ್ಯಾರೆ ಇಲ್ಲದೆ ಕರತೋರೆಂದ ಶ್ರೀಕೃಷ್ಣ 4 ಅಂಗನೆಯರ ವ್ರತಭಂಗವ ಮಾಡಿದರಂಗವಿಠಲ ಭವಭಂಗವÀ ಪರಿಹರಿಸೋ 5
--------------
ಶ್ರೀಪಾದರಾಜರು
ಬಾರೋ ಮನೆಗೆ ರಂಗಾ ಕರುಣಾ ಪಾಂಗ ನರಸಿಂಗ ಪ. ಬಾರೋ ನಿನ ಪರಿವಾರ ಸಹಿತಲಿ ವಾರೆರೊಡಗೂಡಿ ನೀರಜಾಕ್ಷನೆ ಭವ ಕರುಣಾಂಬುದೆ ಅ.ಪ. ಪಿಡಿದು ಖಡ್ಗವ ನಿನ್ನ ವಡೆಯನ ತೋರೆಂದು ಘುಡುಘುಡಿಸಲು ಕಂದ ವಡನೆ ಕೂಗೆ ವಡಲ ಬಗೆದು ಕರುಳ ಮಾಲೆಯ ಪಿಡಿದು ಧರಿಸುತ ವಡನೆ ಭಕ್ತನ ಬಿಡದೆ ಸಲಹಿದ ಕಡು ದಯಾನಿಧೆ 1 ಪಿತನ ತೊಡೆಯಿಂದ ಭೂಪತಿಸತಿ ನೂಕಲು ಅತಿಭಯದಲಿ ಧ್ರುವ ಖತಿಗೊಳ್ಳುತ ಪತಿತ ಪಾವನ ನಿನ್ನ ಕಾಣಲು ಮುನಿ ಪತಿಯು ಪೇಳಿದ ಪಥದಿ ಪುಡುಕೆ ಅತಿಶಯದಿ ಬಂದ್ಹಿತವ ಕೋರಿದ ಗುಣಾನ್ವಿತ ದಯಾಂಬುಧೆ2 ಕರಿ ಮೊರೆಯಿಡೆ ಸಿರಿಗ್ಹೇಳದಲೆ ಬಂದು ಗರುಡ ಗಮನನಾಗಿ ತ್ವರಿತದಿಂದ ಶರಣಪಾಲಕ ನಿನ್ನ ಚಕ್ರದಿ ತರಿದು ನಕ್ರ ನಕರಿಯ ಪೊರೆದ ತೆರದೊಳೆನ್ನ ವಗುಣಗಳೆಣಿಸದೆ ಹರುಷದಲಿ ಶ್ರೀ ಶ್ರೀನಿವಾಸ 3
--------------
ಸರಸ್ವತಿ ಬಾಯಿ