ಒಟ್ಟು 12958 ಕಡೆಗಳಲ್ಲಿ , 134 ದಾಸರು , 6175 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಭಿಮಾನವ್ಯಾಕೊ ಮಾನವಾ ಪ ಸಭಯ ದುಃಖದೊಳಗಿರುವಾ ದುರಭಿಅ.ಪ ನೀರ ಮೇಲಿನ ಗುಳ್ಳೆಯಂದದಿ ತೋರ್ಪ ಶ- ರೀರ ಭೋಗಾಪೇಕ್ಷಿಸಿ | ನಾನು ನನ್ನದೆಂದು 1 ತನ್ನನೇನು ತಾ ಬಲ್ಲದೆ | ನಾನು ನನ್ನದೆಂದು 2 ಪೈಣ ದಾರಿಗೆ ದಾರಿಯಾವುದು | ನಾನು ನನ್ನದೆಂದು3 ಇಭದಂತೆ ಮದವೇರುತಾ | ನಾನು ನನ್ನದೆಂದು4 ಇದು ಸ್ಥಿರವಿಲ್ಲ ಇನ್ನೊಂದು ತಪ್ಪುವುದದಲ್ಲ ಪದರದೆ ನೀ ಕೇಳೀಸೊಲ್ಲ | ನಾನು ನನ್ನದೆಂದು 5 ವೇದಶಾಸ್ತ್ರ ಪುರಾಣವ್ಯಾರ ಪೊಗಳುವುದು ಶೋಧನೆ ಮಾಡಿ ತಿಳಿಯದೆ | ನಾನು ನನ್ನದೆಂದು6 ಗುರುರಾಮವಿಠಲನು ಗುರುತಾಗಿರುವ ನೆಲೆ ಅರಿತುಕೊಂಡವ ಧನ್ಯ | ನಾನು ನನ್ನದೆಂದು 7
--------------
ಗುರುರಾಮವಿಠಲ
ಅಭ್ಯಾಸವಮಾಡಿ ಅಭ್ಯಂತ್ರದೊಳಗಿಹುದು ಧ್ರುವ ಕಣ್ಣು ಕಾಣುವದ್ಹಚ್ಚಿ ಚೆನ್ನಾಗಿ ಚಿತ್ಸ ್ವರೂಪವ ಭಿನ್ನವಿಲ್ಲದೆ ಭಾಸುವದು ಪುಣ್ಯಪ್ರಭೆಯು 1 ಕಿವಿಯು ಕೇಳುವದ್ಹಚ್ಚಿ ಸವಿಸವಿ ಸಾರಾಯದ ಶ್ರುತಿ ಆವಾಗ ನಿಮ್ಮೊಳಾಲಿಸಿ ಪವಿತ್ರ ಪ್ರಣವ 2 ಘ್ರಾಣ ಗ್ರಹಿಸುವದ್ಹಚ್ಚಿ ದೇಹದೊಳಾವಾಗ ಪೂರ್ಣ ಸೋಹ್ಯ ಸೂತ್ರವಿದು ಸೋಹ್ಯವೆಂಬುದಾ 3 ಜೀವಕೆ ಜೀವ್ಹಾಳಚ್ಚಿ ಸುವಿದ್ಯಸೇವೆ ಸೂತ್ರದ ಸರ್ವದಾ ಸವಿಸಾರವ ನೋಡಿ ದಿವ್ಯನಾಮದ 4 ಶಿವಸುಖವಿದುರಿಡುವಾಂಗೆ ಜೀವ ಜೀವದಾ 5 ಮನಸಿಗೆ ಮನಹಚ್ಚಿ ಮನೋನ್ಮನಮಾಡಿ ಘನಸುಖದೊಳು ಬೆರೆದಾಡಿ ಅನುಭವಿಸಿ ನೋಡಿ 6 ಗುರುವಿಗೆ ಗುರುವೆಂದರಿದು ನರದೇಹದ ಭಾವನೆಯ ಮರೆದು ಕರಕೊ ಮಹಿಪತಿ ಇರುಳ್ಹಗಲೆ ಸ್ಮರಿಸಿದಾಕ್ಷಣ 7
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಅಮಮಪೇಳುವೆÀನೇನ ರಮಣನಾಕೃತಿಯನಾ ಕಮಲ ಪತ್ರಾಂಬಕೀ ಕೇಳು ಸಖೀ ಹುಳುಕು ಮೋರೆಯ ಮತ್ತೆ ಕೊಳಕು ದೇಹದ ಕಾಂತ ಹುಳುಕು ಬೇರನು ಮೆಲುವನರೆರೆÀ ಚಲುವ ಕೋರೆಯದು ಮೊಳಯುದ್ಧ ಮೀರಿಹುದು ತುಟಿಯನ್ನು ಕ್ರೂರರೂಪವನಾಂತ ಧೀರನಹುದು ಪುರದಾಚೆ ಸಂಚಾರ ಮರದಡಿಯೊಳೇ ವಾಸ ವರಹಗಳೆ ಬಾಂಧವರು ಪರಮಚಿತ್ರ ಅರರೆ ಬಣ್ಣಿಪೆನೆ ಕೀಟಿರೂಪಧರನ ಪರಿಯೇನ ಪೇಳ್ವೆನೀ ಕ್ರೂರವರನ ಗುರುಗಳಾಣತಿಯಿಂದ ಪಡೆದೆನಿವನ ವರಶೇಷಗಿರಿವಾಸನೆನೆದ ಹದನ
--------------
ನಂಜನಗೂಡು ತಿರುಮಲಾಂಬಾ
ಅಮ್ಮ ನೀ ಕರೆತಾರೆ ಅರವಿಂದನಯನ ಒಮ್ಯಾದರು ಬಾರ ನಮ್ಮನೆಗೆ ಬ್ರಹ್ಮನ ಪಡೆದನಗಮ್ಯಮಹಿಮನೆ ತಾ ಕಾಮ್ಯಾರ್ಥ ಕರೆವ ಶ್ರೀ ರಮ್ಮೆರಮಣನ ಪ ಘನ ಉದಕದಿ ನೋಡೆ ಗ್ರಂಥಚೋರನ ಕೊಂದು ವೇದವ ತಂದಜಗಿತ್ತು ಬರುವೊನೊ ಪಯಾಬ್ಧಿಯೊಳು ಸುಧೆ ಸುರಜನರಿಗೆ ನೀಡಿ ಮೇರುಮಂದರದಲಡಗಿಕೊಂಡಿಹನೊ 1 ಭೂಮಿ ಬಗಿದು ನೋಡ್ಹೇಮಾಕ್ಷನಂತಕನಾಗಿ ಕೋಡಿಂದಲಾ ಧರೆನೆತ್ತಿ ಬರುವೊನೊ ಉಗುರಿನಿಂದಲಿ ಉರಬಗಿದು ಕರುಳನ್ಹಾಕಿ ಮೃಗರೂಪ ಧರಿಸಿ ಕಂಬದಲಿ ಬರುವೊನೊ 2 ಗೊತ್ತನ್ಹೇಳುವೆ ಈ ಜಗತ್ತು ಸಾಲದಲ್ಹೋಗಿ ಒತ್ತಿ ಬಲಿಯ ಬಾಗಿಲ್ಹತ್ತಿಲಿರುವೊನೊ ಹೈಹಯ ಮೊದಲಾದ ಸರುವ ರಾಜರನೆಲ್ಲ ಗೆಲಿದು ಕಾಮಧೇನು ಕೊಂಡು ಬರುವನೊ3 ಒಬ್ಬ ಸತಿಯನಾಳಲಾರದೆ ಗರ್ಭಿಣಿಯ ದಬ್ಬಿ ಕಾನಡಿಗೊಬ್ಬೆ (ಕಾಡಿನಲ್ಲೊಬ್ಬೆ?) ಲ್ಲಿರುವೊನೊ ತೋಷ್ಟಪುತ್ರಿಯರು ಮೇಲಷ್ಟಭಾರ್ಯರು ಶತಪತ್ನೇರನಾಳದಿನ್ನೆತ್ತÀ ಪೋಗಿಹನೊ 4 ಬತ್ತಲೆ ತಿರುಗುವನಿತ್ತ ಬರುವನ್ಹ್ಯಾಗೆ ವಸ್ತ್ರವ ಕೊಟ್ಟು ನಮ್ಮ್ಹತ್ತಿಲೆ ಹರಿಯ ಖಡ್ಗ ಪಿಡಿದು ಕಲಿಗಳ ಕೊಲ್ಲಲ್ಹೋಗುವ ಬಿದ್ದು ಪಾದಾರವಿಂದಕ್ಕೆರಗಿ ಭೀಮೇಶಕೃಷ್ಣ(ನ) 5
--------------
ಹರಪನಹಳ್ಳಿಭೀಮವ್ವ
ಅಮ್ಮನ ತೊಡೆಯ ಮೇಲೆ ನಮ್ಮ ಕೃಷ್ಣ ಸುಮ್ಮನೆ ಮಲಗಿಹನು ಪ ಸುಮ್ಮೊನದಿ ಸುಖದಿಂ ನಲಿದಾಡುತ ಅ.ಪ ಮಣ್ಣ ಮೆದ್ದುದ ಕಂಡು ಗೋಪಿದೇವಿ ಚಿಣ್ಣನ ಬಾಯಿನೋಡೆ ಕಣ್ಣಿಗೆ ಬ್ರಹ್ಮಾಂಡ ತೋರಿಸಿದಂಥ ಪರಬ್ರಹ್ಮ 1 ತರಳ ತರಲೆ ಮಾಡೆ ತಾಯಿಯು ಹೊರಳೆಗೆ ಕಟ್ಟಲಾಗಿ ಸುರತರುಗಳ ಮುರಿದು ನಿಜತರವ ಗೈದ ನಿತ್ಯಾತ್ಮ 2 ಕಾಲಲೊದೆದು ಕೊಂದು ಧಾತಾ ದೇವೇಂದ್ರರ ಶಿರಬಾಗಿಸಿದ ಪೂತಗುಣ 3 ಹಾಲುಕೊಡೆನೆ ಬಾಲ ಸಂಜೆಗೆ ಹಸುವ ಕರೆವೆನೆನಲು ಲೀಲೆಯಿಂ ಕಣ್ಣ ಮುಚ್ಚಿ ಕತ್ತಲೆ ಕವಿಸಿದ ದೈವ 4 ಗೋಪೀಜನಗಳೊಡನೆ ಗೋಪಾಲನು ಸ್ತ್ರೀಲೋಲನಾಗಿ ಕುಣಿದು ರಥಾಂಗಪಾಣಿ 5 ನವನೀತ ಚೌರ್ಯಮಾಡಿದ ನಾರೀಜನರ ವಸ್ತ್ರಾಪಹರ ಗೈದ ಅವನೀಭಾರವ ಕಳೆದ ಮಾಯಾಮೂರ್ತಿ ದೇವಶಿಖಾಮಣಿ6 ಭೂಮಿಪಾಲನೆ ಮಾಡಿದ ಹಿಂಸಕರ ವಂಶವಳಿಪ ಹಂಸಲೋಲ ಜಾಜಿಶ್ರೀಶ 7
--------------
ಶಾಮಶರ್ಮರು
ಅಮ್ಮಮ್ಮ ಗೋಪಿಯೆನೆ ಏನೆಂಬೆ ಪರ ಬೊಮ್ಮ ಮಗನೆಂಬೊ ಧೈರ್ಯಕೆ ಪ. ಬೊಮ್ಮನಯ್ಯನ ಸಿರಿರಮ್ಮೆ ಪತಿಯ ಘನ ಪೆರ್ಮೆ ಗುಣಗಣನಿಲಯನ ಅ.ಪ. ಹೊಳೆವ ಶ್ರೀರೂಪು ವಟಪತ್ರದಲ್ಲಿ ಪ್ರಳಯಜಲಧಿಯ ಶಯನನ ಸೆಳೆಮಂಚದ ಮ್ಯಾಲೆ ಮಗ್ಗುಲೊಳಿಟ್ಟು ತನ್ನ ಗೋಪಿ 1 ಚರಾಚರಂಗಳ ಸೃಷ್ಟಿ ಸ್ವಯಿಚ್ಛೆಯಿಂದ ಪುರುಷರೂಪವ ಧರಿಸಿದ ಪರಮಮಂಗಳ ಮೂರುತಿಯ ತನ್ನ ಗೋಪಿ 2 ಕತ್ತಲೆಯನು ನುಂಗಿ ತತ್ವಂಗಳನು ಕೊಂಡು ಮತ್ತೆ ಬೊಮ್ಮಾಂಡದೊಳಗೆ ಪೊಕ್ಕು ತತ್ವಸಾರದಿಂದೊಪ್ಪುವ ಕೊಮರನ ಗೋಪಿ 3 ಅದಭ್ರಸೃಷ್ಟಿಗಳಿಗಗೋಚರನಾದ ಆದಿಮೂರುತಿ ¸ಚ್ಚಿದಾನಂದನ ಸದಾ ತನಯನೆಂದೆತ್ತಿ ಮುದ್ದಿಸಿ ಸುಖ ಗೋಪಿ 4 ಚತುರುಭುಜ ಶಂಖ ಚಕ್ರ ಗದೆ ಪದುಮ ಸುತಪ ಪ್ರಶ್ನೆಗೆ ವರವಿತ್ತ ಶ್ರುತಿಶಿರೋಮಣಿಯೆಂದರಿಯದೆ ತಾ ಗೋಪಿ 5 ಬೊಮ್ಮಕಲುಷಾನಂತ ಸಹಸ್ರಗಳ ನಿಮಿಷಮಾತ್ರದಿ ಪಡೆದನ ಬೊಮ್ಮಾಂಡವೆ ತನ್ನ ರೋಮಕೂಪದಲ್ಲಿಪ್ಪ್ಪ ರನ್ನವೆ ಮಗನೆಂದಳೆ ಗೋಪಿ6 ಅನ್ನಂತ ರವಿತೇಜಕಿರೀಟದ ಅನ್ನಘ್ರ್ಯ ಸರ್ವಾಭರಣ ಪೊನ್ನ ವಸ್ತ್ರವನ್ನುಟ್ಟ ಅದ್ಭ್ಬುತ ಬಾಲಕನ ಗೋಪಿ 7 ಅನ್ನಂತಾನಂತ ಜೀವಗಣಗಳು ಅನ್ನಂತಾನಂತ ಕರ್ಮಗಳು ಅನ್ನಂತಾನಂತ ಗಾಯತ್ರಿಗೆ ಕÀರ್ತೃ ವಿಷ್ಣು ಗೋಪಿ 8 ಅನ್ನಂತಾಸನ ಶ್ವೇತದ್ವೀಪ ವೈಕುಂಠ ದನ್ನವರತ ವಾಸವಾಗಿಪ್ಪನ ಅನ್ನಿಮಿಷರ ಯೋಚನೆಗೆ ಒಲಿದನ ಗೋಪಿ 9 ಧರ್ಮದÀ ವೃದ್ಧಿಗೆ ಧರ್ಮದ ಹಾನಿಗೆ ತನ್ನಿಚ್ಛೆಯಲವತರಿಸಿದ ಮಮ ಪ್ರಾಣಾಹಿ ಪಾಂಡವನೆನಿಸಿದ ಗೋಪಿ 10 ಉದ್ದಾಮ ಕಾಂಚೀದಾಮ ಕಂಕಣ ಶ್ರೀ- ಮುದ್ರೆಯ ಶ್ರೀವತ್ಸಕೌಸ್ತುಭಧರನ ಮಧ್ವಮುನಿಗೆ ತಾನೊಲಿದು ಬಂದನ ಗೋಪಿ 11 ಸರಸಿಜಬೊಮ್ಮಾಂಡ ಒಡೆದಾಗ ವಿರಿಂಚಿ ತೊಳೆದ ಪಾದೋದಕವ ಹರ ಸೇವಿಸಲಾಗ ಶಿವನ ಮಾಡಿದ ಹರಿಯ ಮಗನೆಂದಳೆ [ಗೋಪಿ] 12 ದೇವಕಿ ಉದರದಲ್ಲಿದ್ದಾಗ ಬ್ರಹ್ಮಾದಿ ದೇವರಿಂದಲ್ಲಿ ಕೀರ್ತಿಸಿಕೊಂಡು ಭಾವಕಿ ದೇವಕಿ ವಸುದೇವನಲ್ಲಿ ಪಿತೃ ಗೋಪಿ 13 ಶಿಶುರೂಪವ ತೋರಿದ ಬೊಮ್ಮನ ಕಂಡು ವಸುದೇವಗೆ ನದಿ ಎಡೆ ಬಿಡೆ ಸಾಸಿರನಾಮ ಚಿತ್ರವಾಗಿದ್ದ ಜಗ- ಗೋಪಿ 14 ಪಾಲಗಡಲಲ್ಲಿ ಪವಡಿಸಿಪ್ಪನ ಕಾಲಮೇಲೆ ಮಲಗಿಸಿಕೊಂಡು ನೀಲಮೇಘಶ್ಯಾಮಯೆಂದು ಬಣ್ಣಿಸುತಲಿ ಗೋಪಿ 15 ಆದಿದೇವನು ಬ್ರಹ್ಮಸೂತ್ರವ ಕಲ್ಪಿಸಿ ವೇದ ವಿಭಾಗವ ಮಾಡಿದನ ಆದರದಿಂತುಂತೆಂದು ಕಲಿಸಿ ಸಂ ಗೋಪಿ 16 ಭಾನುಶತಕೋಟಿತೇಜಪ್ರಕಾಶನ್ನ ಆನಂದವನೆ ನೋಡಿ ಮನ ಉಬ್ಬಿ ಆನಂದನಿಧಿಯ ತೊಡೆಯ ಮ್ಯಾಲೆಯಿಟ್ಟು ಗೋಪಿ 17 ಶೃಂಗಾರನಿಧಿಯನ್ನು ಬಾಯೆಂದು ಕರೆದು ರ- ಥಾಂಗಪಾಣಿಯನೆ ಎತ್ತಿಕೊಂಡು ತಿಂಗಳನೋಡಯ್ಯ ಕಂದ ಎಂದಾತನ ಗೋಪಿ 18 ಸನ್ನಕಾದಿಗಳಯ್ಯನ ಪಿತನ ಕರೆ ದೆನ್ನ ಮಾಣಿಕವೆಯೆಂದಪ್ಪಿಕೊಂಡು ಹೊನ್ನ ತಾ ಗುಬ್ಬಿಯೆಂದಾಡು ಎನ್ನಯ್ಯನೆ ಗೋಪಿ 19 ಗಂಭೀರವಾರಿಧಿಗೆ ಅಂಬಾ ಹೂಡಿದ ತೋಳು ಇಂದಿರೆಯನೆ ಅಪ್ಪಿದ ತೋಳು ಶಂಭರಾರಿಯ ಪಿತ ತೋಳನ್ನಾಡೈ ಎಂದು ಗೋಪಿ 20 ಪಾದ ಉ- ದ್ದಂಡ ಬಲಿಯಮೆಟ್ಟಿದ ಪಾದ ಪುಂಡರೀಕಾಯತವಾದ ಪಾದದಿ ಪ್ರ- ಗೋಪಿ 21 ನಿತ್ಯತೃಪ್ತನು ಹಸ್ತ (ಸಿದ?) ನೆಂದೆನುತಲೆ ಇತ್ತ ಬಾ ಹೊರೀಯೆಂದಾದರಿಸಿ ಹೊತ್ತಾರಿಂದಮ್ಮೆ ಉಣ್ಣದಿರಲು ಹೊಟ್ಟೆ ಗೋಪಿ 22 ಅಮ್ಮೆ ಉಂಬುವ ಪುಟ್ಟ ಬಾಯ ಮುದ್ದಿನ ಮಾ ರಮ್ಮೆಯನರಸುವನಚ್ಚರಿಯ ಅಮ್ಮೆ ನೋಡಿ ನಗುವ ಮುದ್ದು ಬಾಲಕನ ಪರ ಗೋಪಿ 23 ತಾಯ ಮೊಗವ ನೋಡುತ್ತಾಕಳಿಸುತ ಬಾಯಲ್ಲೀರೇಳುಲೋಕವ ತೋರೆ ಆಯತೆ ನೋಡಿ ಮರಳಿ ಕಂಗೆಟ್ಟು ವಿಶ್ವ- ಗೋಪಿ 24 ಜ್ಞಾನಘನನ ವಿಶ್ವತೋನಯನನ ಆನಂದಚರಿತ್ರನ ಅವ್ಯಕ್ತನ ಜ್ಞಾನಿಗಳ ಹೃತ್ಕಮಲದೊಳಿಹನ ಕಣ್ಣಮುಚ್ಚಿ ಗೋಪಿ 25 ಹಾಲ ಹರವಿಯ ಒಡೆದು ಬಂದು ಗೋ- ಪಾಲ ನೀನೆಲ್ಲಿಗೆ ಪೋದೆಯೆಂದು ಕಾಲಕರ್ಮಂಗಳಿಗೆ ಕಾರಣವಾದೋನ ಗೋಪಿ 26 ಜಗದುದರ ಜಂಘಿಸುತ ಅಡಿಯಿಡೆ ಮೃಗಲೋಚನೆ ಮೈಮರೆದಿರೆ ಅಗಣಿತಮಹಿಮನು ಚರಿಸುತ ಬರ ಗೋಪಿ 27 ಆಮ್ಮಹಾ ಮತ್ತಿಯ ಮರನ ಮುರಿದು ಸುರರು ಜಯವೆನ್ನೆ ಶ್ರೀಮಣಿ ಶಿವರಿಂದ ಕೀರ್ತಿಸಿಕೊಂಬ ಗೋಪಿ 28 ಕತ್ತಲೆಯೊಳಗಿದ್ದು ಅಂಜಿದ ಮಗನೆಂದು ಶ್ರುತಿಮಂತ್ರಗಳಿಂದುಚ್ಚರಿಸಿ ಮೃತ್ಯುಂಜಯನ ಪಿರಿಯನೆತ್ತಿಕೊಂಡು ಗೋಪಿ 29 ಶೇಷಶಾಯಿಯ ಹಾಸಿ ಮಲಗಿಸಿ ಚಾರು- ವೇಷನ್ನ ನಿದ್ರಿಗೈಸುವೆನೆಂದು ಸಾಸಿರಮುಖಭೂಷಣನ ಪಾಡುತ್ತ ಸಂ- ತೋಷದಿ ಮೈಮರೆದಳೆ ಗೋಪಿ30 ತ್ರಿಗುಣಾತೀತನ್ನ ಪೊಂದೊಟ್ಟಿಲೊಳ್ಮಲಗಿಸಿ ಜೋಗುಳ ಪಾಡುವ ಯಶೋದೆÉಯ ಎಸೆವ ನೀಲವಸ್ತ್ರನು ಪಾಡೆನ್ನೆ ಕೃಷ್ಣ ಅನು- ಗೋಪಿ 31 ಹರಿಯ ಹೊರಿಸುವಳಲ್ಯಲ್ಲಿ ನಿಮ್ಮಣ್ಣ ವರ ಸಿಂಹಾಸನವಾಗಿಪ್ಪನೆಂದು ಸಿರಿಯಕೂಡೇಕಾಂತದಲಿಪ್ಪನ್ನ ಗೋಪಿ 32 ಪಾದ ನಿಮ್ಮಣ್ಣನ ಶಿರದಲೊಪ್ಪಿದೆÀಯೆಲೆ ಕಂದ ಸುರವರರ ಭಾಗ್ಯನಿಧಿಯೆ ಬಲರಾಮ ಗೋಪಿ 33 ಕಣ್ಣಮುಚ್ಚಿದ ಕೃಷ್ಣನೆಂದು ತೊಟ್ಟಿಲ ಬಿಟ್ಟು ಪುಣ್ಯಾಂಗನೆ ಮೈಮರೆದಿರೆ ಅಣ್ಣ ಆಶನು ಬೆಣ್ಣೆಯ ಕಳಹೋದ ಚಿಣ್ಣನ ಕಾಣೆನೆಂದಳೆ ಗೋಪಿ34 ನೀಲಾಂಬರನ ಬೆನ್ನ ಮೆಟ್ಟಿ ನೆಲವಿನ ಮ್ಯಾಲಿನ ಬೆಣ್ಣೆಯ ಮೆಲ್ಲೆ ಕೃಷ್ಣ ಬಾಲಕಿಯರು ಕೂಡಿ ಕಳ್ಳ ಸಿಕ್ಕಿದನೆಂದು ಗೋಪಿ 35 ಹುಟ್ಟ್ಟದ ಬೆಳೆಯದ ಹಸುಳೆ ಅಣ್ಣನ ಬೆನ್ನ ಮೆಟ್ಟಿ ನೆಲವು ಜಗ್ಗಿದನೆಂದು ರಟ್ಟು ಮಾಡಿದಿರೆಲ್ಲ ನೋಡಿರವ್ವಾ ಎನ್ನ ಗೋಪಿ 36 ಕಂದನ ಎತ್ತಿಕೊಂಡು ರಾಜ್ಯದಂಗನೆಯರ ಮಂದಿರವನೆ ಪೊಕ್ಕು ಬರುತಿರೆ ಒಂದೊಂದು ಕೌತುಕವನೆ ಕಂಡಾನಂದ ಗೋಪಿ 37 ಶಶಿಮುಖಿಯಂಗಳದ ಹಾಲಹಳ್ಳ ಮೊಸರ ಮಡುವು ಬಾಗಿಲ ಮುಂದೆ ಪ್ರಸಾದವೆಲ್ಲ ಬೆಣ್ಣೆ ಫಲಿತವಾಗಿರೆ ಗೋಪಿ 38 ವಾರಿಧಿಯೊಳಗಿದ್ದ ಪನ್ನಗಶಾಯಿಯ ತೇರ ಮೇಲೆ ಇದ್ದ ಬಾಲಕನ ಮೂರುತಿ ಒಂದೆಂಬೋ ಅ- ಗೋಪಿ 39 ದ್ರೌಪದಿಗಕ್ಷಯವಿತ್ತನ ಗುರು ಸಾಂ- ದೀಪಗೆ ಸುತನ ತಂದಿತ್ತನ ಪ್ರೀತಿಯಿಂದಲಿ ಯಜ್ಞಪತ್ಯರಿಗೊಲಿದ ಸುಪ್ರ- ಗೋಪಿ 40 ಘಾತಪುತ್ರರ ಆರು ಮಂದಿಯ ತರಹೇಳಿ ಮಾತೆಯೆಚ್ಚರಿಸೆ ಅಂಗೀಕರಿಸಿ ಅತಿ ಬೇಗದಿಂದಣ್ಣನ ತಂದು ತೋರಿದ ಅ- ಗೋಪಿ 41 ಭಕುತ ಶ್ರುತದೇವ ಬಹುಳಾಶ್ವರಾಯಗೊಲಿ ದೇಕ ಕಾಲದಿ ರೂಪೆರಡಾಗಿ ಆ ಕರುಣಾಬ್ಧಿಯ ಮಾಯಾರೂಪಿÀನ ಪರಿ- ಗೋಪಿ 42 ಪೂತನಿ ಶಕಟವತ್ಸಾಸುರ ವೃಷಭÀನ ಪಾತಕಿ ಚಾಣೂರ ಕುಂಜರನ ಘಾತಿಸಿ ಕಂಸನ್ನ ರಂಟೆಯಾಡಿದ ಬಲು ಭೂತನ್ನ ಮಗನೆಂದಳೆ ಗೋಪಿ43 ಬಾಲತನದಲ್ಲಿ ಸಖನಾಗಿ ಬಂದು ಕು- ಚೇಲ ತಂದವಲಕ್ಕಿಯ ಧರಿಸಿ ಮೇಲುತನದಿಂದ ಸೌಭಾಗ್ಯವಿತ್ತ ಶ್ರೀ ಲೋಲನ್ನ ಮಗನೆಂದಳೆ ಗೋಪಿ&ಟಿbsಠಿ
--------------
ವಾದಿರಾಜ
ಅಯ್ಯಯ್ಯೊ ಮೊರೆುಡಲೇಕೆ ಕೇಳಿಸದೆನ್ನಹುಯ್ಯಲು ವೆಂಕಟರಮಣನೆಕಯ್ಯಾರೆ ಋಣಪಿಶಾಚಕೊಪ್ಪಿಸಿದೆಯಾಕೊಯ್ಯಬಾರದೆ ಕೊರಳನು ಕೋಪ ಬಂದರೆ ಪದೇಶ ಕಾಲದ 'ಪರ್ಯಾಸವೋ ನಾ ಮಾಡ್ದದೋಷದ ಬಲುಹೊ ತಿಳಿಯದಲ್ಲಾನೀ ಸಲಹೆಂದು ಕೂಗುವದೆನ್ನೊಳುದಿಸಿದುದೇಸು ಭವದ ಸುಕೃತವೊ ಫಲಿಸದಿದೇಕೆ 1ತಂದೆ ತಾುಗಳು ಪುಣ್ಯವೃಂದವ ಮಾಡ್ದವರೆಂದು ಜನರು ಪೇಳುತಿರುವರೂಕಂದನುದಿಸಿದನೆಂತೆಂದು 'ಗ್ಗಿದರಂತೆಕಂಡೆನಲ್ಲಾ ನರಕವನೀ ಋಣಕೆ ಸಿಕ್ಕಿ 2ಜನಿಸಿದ ಮೂರು ವರುಷಕೆ ನಿನ್ನಯದಾಸನೆನುತ ಮಾತುಳನಿಂದ ನುಡಿಸಿದೆಅನವರತವು ನಿನ್ನ ನೆನಹಪಾಲಿಸಿದೆುೀಯನುಭವವೇನೆಂದರೇಕೆ ನುಡಿಯದಿಹೆ 3ತನುವ ದಂಡಿಪೆನೆ 'ಷಯರುಚಿ ಬಿಡದಿದೆವನಿತೆ ಸುತರ ಮೋಹ ಬಿಡದಿದೆಘನವಾದ ಗುರು'ನನುಗ್ರಹ ದೊರೆತಿದೆಋಣಪೈಶಾಚ'ದೊಂದು ಗಣಿಸದಲೆಯುತಿದೆ 4ಮೊರೆಯ ಲಾಲಿಸದೆ ಕೈಬಿಡಬೇಡ ಚಿಕನಾಗಪುರಪತಿ ವೆಂಕಟರಮಣನೆಮರೆಯೊಕ್ಕೆನೈ ತಿಮ್ಮದಾಸ ನಾನೆಲೆ ಜಗದ್ಗುರುವೆ ಶ್ರೀವಾಸುದೇವಾರ್ಯ ದಯಾಬ್ಧಿಯೆ5
--------------
ತಿಮ್ಮಪ್ಪದಾಸರು
ಅರಣೀ ಗರ್ಭದಿಂ ಸಂಭವ | ಸುರ ಜೇಷ್ಠ ಭ್ರಾತಾಸುರಪತಿ ನುತ ವೈಭವ ಪ ಭವ ಪರಿ ಹರಿಸಾಮಯೆ ಅ.ಪ. ಅಂಬಾರ ಮಣಾ - ಶಂಕರಾ | ಗೌರಿವರಾ |ಜಂಭಾಸುರ ಹರ - ಸುರ ವರ ||ಅಂಬುಜಾಸನ - ಕುವರಾ - ಗಂಗಾಧರಾ |ಹಂಬಲಿಸುವ - ಭಕ್ತರ ||ಶುಂಭ ನಿಶುಂಭರ | ಸಂಹರ ರಾಮನಅಂಬುಜ ಪದ ದ್ವಯ | ನಂಬಿದ ಭಕ್ತನೆ |ತುಂಬಿದ ಭಕುತಿಯ | ಹಂಬಲ ಹರಿಯಲಿಸಂಭ್ರಮದಲಿ ಕೊಡು | ಶಂಭು ವಂದಿಸುವೆ 1 ಪ್ರಮಥರ ಪೋಷ-ಭೂತೇಶ-ಭುವನೆ5ವ್ಯೋಮಕೆ5-ಉಗ್ರೇಶ ||¸5Àುನಸ ಮುನೀಶ - ಕೈಲಾಸ ವಾಸೇಶಅಮರಾರಿ ನಾಶ ಸತೀಶ ||ಕುಮತಿಗಳ್ಮೋಹಕ | ಕುಮತವ ವಿರಚಿಸಿರಮೆಯರಸಗೆ ಬಹು | ಪ್ರಮುದವ ಪಡಿಸಿದೆ |ಅಮರೋತ್ತಮ ನಿಮ | ವಿಮಲ ಪದಾಬ್ಜಕೆನಮಿಸುತ ಬೇಡುವೆ ಸನ್ಮತಿ ಪ್ರದನೇ 2 ಶುಕ | ಶುಕಿ ಭವನೆನಿಸೀ 3
--------------
ಗುರುಗೋವಿಂದವಿಠಲರು
ಅರವಿದೂರನೆ ತವ ಮಹಿಮೆಯು ಘನ್ನ ಪ ಬಂಡಿಕಾಲನು ಪಿಡಿದೆಯಂತೆ | ಹತ್ತು ಬಂಡಿರಾಯಗೆ ಸುತ ನೀನಾದಿಯಂತೆ ಬಂಡಿ ಅಸುರನ ಕೊಂದಿಯಂತೆ | ಧುರದಿ ಬಂಡಿ ನಡಸಿ ನರನ ಸಲಹಿದೆಯಣತೆ 1 ತಂದೆ ತಂದೆಗೆ ತಂದೆಯಂತೆ | ಜಗದ ತಂದೆ ನಿನಗೆ ತಂದೆ ತಾಯಿಗಳಂತೆ ತಂದೆ ನೃಪಾಲನ ಸುತೆಗೀಶನಂತೆ 2 ಸಿಂಧೂರದ್ವಯ ವರದನಂತೆ | ಮಧ್ಯ ಸಿಂಧೂರವದನವು ನಿನಗಿಹುದಂತೆ ಸಿಂಧು ಮಂದಿರ ನಿನಗಂತೆ ಶಾಮ ಸುಂದರ ನಿನಗೆ ಭಕ್ತರ ಚಿಂತೆಯಂತೆ 3
--------------
ಶಾಮಸುಂದರ ವಿಠಲ
ಅರಸಕೇಳಲೈ ಸರಸಿಯೊಳಗೆ ತಾ ಸರಸವಾಡುತಾ ಕರಿವರನಿರೆÉ ಪರಮ ಭೀಕರ ಪ್ರಬಲ ನಕ್ರವು ಕರಿಯ ಕಾಲನು ಪಿಡಿದು ಸೆಳೆಯಿತು 1 ಚಕಿತನಾಗುತ ಚತುರ ದ್ವಿಪವರ ಮಕರಿ ವದನದಿಂ ಮುಕ್ತನಾಗಲು ಸಕಲ ಸಾಹಸಗೈದನಕ್ಕಟ ವಿಕಲವಾಯಿತಾ ಯತ್ನವೆಲ್ಲವು 2 ನಕ್ರ ಸೆಳೆತವು ಪ್ರಬಲವಾಗಲು ದಿಕ್ಕು ತೋರದೆ ಕೂಗಿಕೊಂಡನು ಮಿಕ್ಕ ಗಜಗಳು ಕೂಡಿ ಬಿಡಿಸಲು ಶಕ್ತಿಮೀರಿ ಸಾಹಸಗೈದುವು 3 ಆನೆಗಳು ಒಂದೆಡೆ ಎಳೆಯಲು ನೆಗಳು ಒಂದೆಡೆ ಎಳೆಯಲು ಏನನೆಂಬೆ ಹೋರಾಟವೀ ಪರಿ ಏನು ನಡೆದರೂ ವಿಫಲವಾಯಿತು 4 ಹಿಂಡು ಬಳಗಗಳೆಲ್ಲ ನೋಡುತ ದಂಡೆ ಮೇಲೆ ತಾವ್ ನಿಂತುಬಿಟ್ಟವು ಜೊಂಡು ಹುಲ್ಲು ತಾ ಪಿಡಿದು ತನ್ನಯ ಶುಂಡಾಲ ಗೆದ್ದನು 5 ನಕ್ರಬಾಧೆಯು ಬಿಡಿಸಲಾರಿಗೂ ಶಕ್ಯವಾಗದೆ ಹೋಯಿತಕ್ಕಟ ದಿಕ್ಕುಗೆಟ್ಟು ತಾ ದೈನ್ಯದಿಂದಲೇ ದುಃಖಪಡುತ ಭೋರಿಟ್ಟು ಕೂಗಿದ 6 ಉದಿಸಿತಾಗ ಸುಜ್ಞಾನವವನೊಳು ಸುದತಿ ಮಕ್ಕಳು ಸಲಹರೆಂಬುದು ಬದಲು ಬಯಸದ ಬಂಧು ಕರಿಗಿರಿ ಸದನನೆಂದು ತಾನಂಬಿ ನೆನೆದನು 7
--------------
ವರಾವಾಣಿರಾಮರಾಯದಾಸರು
ಅರಿಕುಕೊಳ್ಳಿರೈಯ್ಯಾ ನೀವು ಹರಿಯ ನಾಮಾವೃತ ಗುರ್ತು ಮಾಡಿಕೊಡುವ ಪೂರ್ಣ ಸದ್ಗುರು ಸಮರ್ಥ ಧ್ರುವ ಒಳ್ಳೆಒಳ್ಳೆವರು ಬಂದು ಕೇಳಿರೊ ನೀವಿನ್ನು ತಿಳದುಕೊಳ್ಳಿ ಇದಕೆ ಬೀಳುವದಿಲ್ಲಾ ಹಣಹೊನ್ನು ಉಳ್ಳ ಬುದ್ಧಿಯಿಂದ ನೀವು ತೆರೆದುನೋಡಿ ಕಣ್ಣು ಕೊಳಲರಿಯದವನ ಬಾಯಾಗ ಬೀಳುದು ಮಣ್ಣು 1 ಬ್ರಹ್ಮಸುಖ ಇದೇ ಇದೇ ನೋಡಿರೋ ಸಾಕ್ಷಾತ ತುಂಬಿ ತುಳಕುತ್ತ ಒಮ್ಮನ ಮಾಡಿಕೊಂಡು ಬಂದು ಕೊಳ್ಯಮೃತ ನೇಮದಿಂದ ಕೊಳ್ಳಲಿಕ್ಕೆ ದೋರುದು ಸ್ವಹಿತ 2 ಇಹಪರ ನಾರ್ಥಕಿದೆ ಕೇಳಿರೋ ನೀವೆಲ್ಲ ದೇಹ ಅಭಿಮಾನಿಗಿದು ಸಾದ್ಯವಾಗುವುದಿಲ್ಲ ಸೋಹ್ಯವರಿತು ಸೂರೆಗೊಂಡು ಮಹಿಮ ತಾನೆ ಬಲ್ಲಗುಹ್ಯವಾಕ್ಯ ತಿಳಿದುನೋಡಿ ಮಹಿಪತಿ ಸೊಲ್ಲಾ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಅರಿತು ಕೊಳ್ಳಿರೊ ಬ್ಯಾಗ ಹರಿಯ ನಾಮಮೃತ ದೊರಕುವದಲ್ಲಿದು ನೋಡಿ ಸರ್ಕನೆ ಸರ್ವರಿಗೆಲ್ಲಾ ಧ್ರುವ ಗುರುಕರುಣ ಕೃಪೆಯಿಂದ ಪರಮ ದಿವ್ಯಾಮೃತವು ಸುರಿಸುರಿದು ಚಪ್ದರಿಸು ಸೂರ್ಯಾಡಿ ಸಾರಸವ 1 ಅನುದಿನ ಸೇವಿಸುವ ಅನುಭವಿಗಳೂಟ ಏನೆಂದು ಸುರಲಿ ನಾ ಆನಂದೋಬ್ರಹ್ಮವಾ 2 ಮಾನವ ಜನ್ಮ ಚಂದ ಮಾಡಿಕೊಳ್ಳಿರೊ ಬಂದ ಕೈಯಲಿ ಬ್ಯಾಗ 3 ಆಲಸ್ಯ ಮಾಡಬ್ಯಾಡಿ ವಾಲ್ಗೈಸಿಕೊಳ್ಳಲಿಕ್ಕೆ ಸುಲಲಿತವಾಗಿಹುದು ತಿಳಿದುಕೊಂಬವರಿಗೆ 4 ಇರಳ್ಹಗಲ ಪೂರ್ಣ ಸುರವುತಿಹ ಅಮೃತ ತರಳ ಮಹಿಪತಿ ಪ್ರಾಣ ದೊರೆವ ಸಂಜೀವನ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಅರಿತುಕೊಳ್ಳಿರೋ ನಿಮ್ಮ ಆತ್ಮವಸ್ತುವನುಪರಮ ಗುರು ಕರುಣದಿ ನೀವು ನಿಮ್ಮನು ಪ ಬಿದಿಗೆ ಚಂದ್ರನು ಆವುದೆಂದು ಕೇಳಲಿಕೆಅದಕೋ ಶಾಖಾಗ್ರ ಎಂದೆನಲು ಅರಿದಂತೆವಿಧಿಸಿ ಗುರುಮುಖದಿ ವಿವರಿಸಿ ಕಂಡು ಅರಿದುಸದಯಲಾನಂದ ತಾವೆಂದು ಭಾವಿಪುದು 1 ಊರು ಆವುದು ಎಂದು ಕೇಳುತಿರಲಿಕೆಊರದಕೋ ಗುಡ್ಡದ ಮೇಲೆನಲು ಅರಿದಂತೆಧೀರ ಗುರು ಮುಖದಿ ದಿಟ್ಟಿಸಿ ಕಂಡು ಅರಿತುಸಾರ ಸಂಪತ್ತು ತಾವೆಂದು ಧ್ಯಾನಿಪುದು 2 ಅರಸು ಅವನು ಎಂದು ಕೇಳುತಿರಲಿಕೆಅರಸ ಅಲ್ಲಿಹನೆಂದು ನಡೆವವನೆ ಅರಿತಂತೆಪರಮ ಗುರು ದಯದಿ ಪಾಟಿಸಿ ಕಂಡು ಅರಿದುಪರಮ ಗುರು ಚಿದಾನಂದ ತಾವೆಂದು ಭಾವಿಪುದು 3
--------------
ಚಿದಾನಂದ ಅವಧೂತರು
ಅರಿಯಾರೊ ಅಂದಿಗಂದಿಗನ್ಯ - ಈ ಧರೆಯೊಳಿವರ ಮಹಿಮೆ ಘನ್ನ ಪ ಮರುತಾವೇಶಯುತ - ಉರಗಾಂಶರನ್ನ ಅ.ಪ ಪ್ರಲ್ಹಾದ ಲಕ್ಷ್ಮಣ ಬಾಹ್ಲೀಕÀ ವ್ಯಾಸನು ಇಲ್ಲೀಗ ರಾಘವೇಂದ್ರ ಉಲ್ಲಾಸ ಬಡುವನು 1 ಇನ್ನೂರ ನಾಲ್ವತ್ತು ಮುನ್ನೀಗ ಪೋದದ್ದು ನನ್ನುರ ಅರವತ್ತು ಇನ್ನು ಉಳಿದಿಹದು 2 ಎಲ್ಲೀ ನೋಡಲಿವರಿಲ್ಲದ ಸ್ಥಳವಿಲ್ಲ ಬಲ್ಲಾ ಭಕುತಗೆ - ಅಲ್ಲಲ್ಲೆ ತೋರುವದು 3 ಖುಲ್ಲ ನರರಿಗೆ - ಎಲ್ಲೆಲ್ಲಿ ಇಲ್ಲವೊ ಸಲ್ಲೋದು ನಿಶ್ಚಯ - ಸುಳ್ಳಲ್ಲ ಈ ಮಾತು 4 ದುಷ್ಟ ಜನರಿಗೆ ಇಷ್ಟಾರ್ಥ ಕೊಡುವೊನೊಮ್ಮೆ ಶಿಷ್ಟಾ ಜನರಿಗ ಭೀಷ್ಠಾವ ಕೊಡುವದು 5 ಇವರ ಪೂಜಿಪ ಜನ - ದಿವಿಜರು ನಿಶ್ಚಯ ಭುವನದೊಳಗೆ ಇನ್ನು ಇವರಿಗೆ ಸರಿಯುಂಟೆ 6 ಇವರನ ಒಲಿಸಲು ಪವನಾನು ಒಲಿವನು ಮಾಧವ ತಾನೆÀ ಒಲಿವÀನು 7 ಅಮಿತ ಮಹಿಮರೆಂದು ಪ್ರಮಿತರು ಪೇಳೋರು ಸುಮತಿಗಳ ಮನಕೆ ಗಮಿಸಿ ತಿಳಿಸುವದು 8 ದಾತಾ ಗುರು ಜಗನ್ನಾಥಾ ವಿಠಲ ಬಹು ಪ್ರೀತಿಯಿಂದಲಿ ಇವರ ಖ್ಯಾತಿಯ ಮಾಡೊದು 9
--------------
ಗುರುಜಗನ್ನಾಥದಾಸರು
ಅರುಕ್ಯುಳ್ಳ ಗುರುಪಾದವಾಶ್ರೈಸೊ ಎನ್ನ ಮನವೆ ಎgವಾಗ್ಯನುಭವ ಸುರಕಿ ಕೊಳ್ಳೊ ಧ್ರುವ ಮರಹುಮರದೀಡ್ಯಾಡಿ ಅರಹುವಿನೊಳರಿತು ಗೂಡಿ ಕುರುಹ ಗುರುತುಮಾಡಿ ಸ್ಥಿರವು ಕೂಡಿ 1 ತಿರಹು ಮರ್ಹವಿನ ಖೂನ ಅರಹು ಮರ್ಹವಿನ ಸ್ಥಾನ ಇರಹು ಆಗೀಹ್ಯ ಘನ ಬೆರಿಯೋ ಧ್ಯಾನಾ 2 ಜೀವ ಶಿವರಸಂದು ಠಾವಮಾಡಲು ಬಂದು ಭವಕ ಬೀಳುವನೆಂದು ಭಾವಿಕನೆಂದು 3 ಅಗ್ರಗುರು ಸುವಿದ್ಯ ಶೀಘ್ರಸಾಧ್ಯ 4 ಕೀಲು ತಿಳಿದರೆ ಸಾಕು ಜಾಲವ್ಯಾತಕೆ ಬೇಕು ಮೂಲಗುರುಪಾದ ಮಹಿಪತಿ ನೀ ಸೋಂಕು 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು