ಒಟ್ಟು 6782 ಕಡೆಗಳಲ್ಲಿ , 129 ದಾಸರು , 3981 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮಂದಮತಿಯೈ ನಾನುಮದನಜನಕನು ನೀನುಕುಂದುಗಳನೆಣಿಸದಲೆ ದಯೆ ಮಾಡಿ ಸಲಹೋ ಪಪಾಪಕರ್ತನು ನಾನು ಪಾಪನಾಶಕ ನೀನುಕೋಪ ಮದ ಮತ್ಸರದಿ ಸುಳಿವೆ ನಾನು ||ತಾಪವನು ತರೆದು ನಿರ್ಭಯವ ಮಾಡುವೆ ನೀನುರೂಪಛಾಯಕೆ ಮರುಳುಗೊಂಬೆನೈ ನಾನು 1ಶರಣ ಶಿಕ್ಷಕ ನೀನುಪರಮಪಾತಕಿನಾನುದುರಿತಪರ್ವತವ ಪರಿಹರಿಪೆ ನೀನು ||ಮರುಳುಗೊಂಬನು ನಾನು ಅರಿತು ರಕ್ಷಿಪೆ ನೀನುಗರುವಮತಿಯೈ ನಾನಗಮ್ಯ ನೀನು 2ಮಂದಭಾಗ್ಯನು ನಾನು ಇಂದಿರಾಪತಿ ನೀನುಹಿಂದು ಮುಂದಿನ ಸುದ್ದಿ ಅರಿಯದವ ನಾನು ||ತಂದೆ ಶ್ರೀ ಪುರಂದರವಿಠಲ ರಾಯನೆ ದೇವಎಂದೆಂದು ಭಕ್ತರನು ಸಲಹುವೆಯೋ ನೀನು 3
--------------
ಪುರಂದರದಾಸರು
ಮಂದರಧರ ದೇವ ಮೊರೆಹೊಕ್ಕವರ ಕಾಯ್ವಪಮಂದಾಕಿನಿಯ ಪಿತ ಮಾವ ಕಂಸನ ಹೃತ |ಸುಂದರ ಶಶಿವದನ ರಂಗಯ್ಯ ಅ.ಪಕಣ್ಣು ನೋಟದಿ ಚೆಲುವ, ಕಮಠರೂಪದಿ ನಲಿವ |ಹೆಣ್ಣ ಮೊರೆಯಕೇಳಿ ಹಿರಣ್ಯನುದರ ಸೀಳಿ ||ಮಣ್ಣು ಬೇಡಿ ಬೆಳೆದೆ - ಕೃಷ್ಣಯ್ಯ ||ಹೊನ್ನ ಕೊಡಲಿಯ ಪಿಡಿದು ಹತ್ತು ಗ್ರೀವನ ಕಡಿದು |ಚಿಣ್ಣರ ಒಡಗೂಡಿ ಚಪಲೆಯರ ವ್ರತಗೆಡಿಸಿ |ಚೆನ್ನರಾವುತನಾದೆಯೊ - ರಂಗಯ್ಯ 1ಗೋಚರನಂದದಲಿ - ಗಿರಿಯ ತಾಳಿದೆ ಬೆನ್ನಿನಲಿ |ಭೂಚೋರನ ಕೊಂದು ಬಾಲ ಕರೆಯಲು ಬಂದು |ಯಾಚಕ ನೀನಾದೆ - ರಂಗಯ್ಯ ||ಸೂಚತನ ಸುತಗೊಲಿದು ಶರಧಿಯಕಟ್ಟಿ ಮೆರೆದೆ |ಕೀಚಕಹತಪೋಷ ಖೇಚರಪುರವಾಸ |ನೀಚಜನರ ತರಿದೆ - ರಂಗಯ್ಯ 2ವನವನಲೆದು ಬಂದ - ವನಿತೆರತ್ನವ ತಂದ |ಘನಕಂಭದಿಂದ ಬಂದುಗರುವ ಮುರಿದು ಬಲಿಯ |ಜನನಿಯ ಶಿರವರಿದೆ - ರಂಗಯ್ಯ ||ಹನುಮವಂದಿತಪಾದ ಹರುಷ ಪಾಂಡುವವರದ |ಮನಸಿಜ ವೈರಿಗೊಲಿದು ಮಹಾಕಲಿಕಿಯಾದೆ |ಘನಪುರಂದರ ವಿಠಲ - ರಂಗಯ್ಯ 3
--------------
ಪುರಂದರದಾಸರು
ಮಂದಿಯಗೊಡವೆ ಇನ್ನೇನು ಮಗಳೆ |ಮುಂದೆ ನೋಡಿ ಹಂಜಿ ನೂಲವ್ವ............ ಪ.ಕಣ್ಣ ಮುಂದಿನ ಕಸವನು ತೆಗೆದು |ಸಣ್ಣಗೆ ನೀ ನೂಲವ್ವ............... ಅಪವಸುಧೆಯ ದೊಡ್ಡ ಮಣೆಯಮಾಡಿ |ಶಶಿರವಿಗಳೆರಡು ಕಂಬವ ಹೂಡಿ ||ಆ ಸಿರಿರಂಗರ ಎರಡು ಚಕ್ರವ ಮಾಡಿ |ದರ್ಶನವೆಂಬುವ ನುಲಿಯನು ಬಿಗಿದು 1ಪರಬ್ರಹ್ಮನಅಳವು ಮಾಡಿ |ಕುರುಡು ನಾಶಿಕ ಬೆನಕದಿ ತಿಕ್ಕಿ ||ಹರಿ ನೀನೆ ಎಂಬ ದಾರವಕಟ್ಟಿ |ವಿರತಿವಿಚಾರದ ಬೆಲ್ಲಗಳಿಕ್ಕಿ2ಜಾÕನವೆಂಬುವ ಕದರನ್ನಿಕ್ಕಿ |ಮಾನಮದವೆಂಬ ಹಂಜಿಯ ಹಿಡಿದು ||ಧ್ಯಾನವೆಂಬ ಎಳೆಯನು ತೆಗೆದು |ಮೌನದಿಂದಲಿ ನೂಲವ್ವ 3ಕಕ್ಕುಲಾತಿ ಕಾಂಕ್ಷೆಗಳೆಂಬ |ಸಿಕ್ಕುದೊಡಕುಗಳನೆ ಬಿಡಿಸಿ ||ಒಕ್ಕುಡಿತೆಯ ಮಾಡಿದ ಮನದಿ |ಕುಕ್ಕಡಿನೂಲು ಕೂಡಿ ಹಾಕಮ್ಮ 4ಇಪ್ಪತ್ತೊಂದು ಸಾವಿರದ ಮೇ -ಲಿಪ್ಪ ನೂರು ಎಳೆಯನು ಹೊಡೆದು ||ತಪ್ಪದೆ ಹುಂಜವಕಟ್ಟಿ ನೀನು |ಒಪ್ಪದಿ ಸೀಳು ಇಳುವಮ್ಮ 5ಸದ್ಯದಿ ನೀ ಜಾಡರಲ್ಲಿ |ಸಿದ್ಧಬದ್ಧ ಸೀಳುಗಳ ಹಾಕಿ ||ವಿದ್ಯೆಯೆಂಬುವ ಹಚ್ಚಡವನ್ನು |ಬುದ್ಧಿಯಿಂದಲಿ ನೇಯಿಸಮ್ಮ 6ಒಪ್ಪುವಾತ್ಮ ಪರಮಾತ್ಮನೆಂಬ |ಒಪ್ಪ ಎರಡು ಹೋಳುಗಳಹಚ್ಚಿ ||ತಪ್ಪದೆ ಪುರಂದರವಿಠಲನ ಪಾದಕೆ |ಒಪ್ಪಿಸಿ ಕಾಲವ ಕಳೆಯಮ್ಮ 7
--------------
ಪುರಂದರದಾಸರು
ಮಧ್ವಮುನಿಯೆ -ಗುರು- ಮಧ್ವಮುನಿಯೆಪಮಧ್ವಮುನಿ ನಮ್ಮೆಲ್ಲರ | ಉದ್ಧರಿಸುವ ಕಾಣಿರೊ ಅ.ಪಅಂದು ಹನುಮಂತನಾಗಿ | ಬಂದ ರಾಮಪದಾರ-ವಿಂದದಿ ನೆರೆದು ತುಂಬಿಯಂದದಿ ಶೋಭಿಸಿದ 1ಏಣಾಂಕವಂಶದಿ ಪುಟ್ಟಿ | ಕ್ಷೋಣಿಪಾಲಕ ಶಿರೋಮಾಣಿಕ್ಯವಾಗಿ ಹರಿಗೆ | ಪ್ರಾಣನೆಂದೆನಿಸಿಕೊಂಬ 2ಕಟ್ಟಕಡೆಯಲ್ಲಿ ಯೋಗ | ದಿಟ್ಟನಾಗಿಪುರಂದರ|ವಿಠಲಗಾವಾಸವಾದ | ಪೆಟ್ಟಿಗೆಯೊಲೊಪ್ಪುವಂಥ 3
--------------
ಪುರಂದರದಾಸರು
ಮನ್ನಾರು ಕೃಷ್ಣಗೆ ಮಂಗಳ ಜಗವಮನ್ನಿಸಿದೊಡೆಯಗೆಮಂಗಳ ಪ.ಬೊಮ್ಮನ ಪಡೆದಗೆ ಭಕ್ತರುದ್ಧಾರಿಗೆಕಮ್ಮಗೋಲನಯ್ಯಗೆ ಮಂಗಳ ||ಧರ್ಮಸಂರಕ್ಷಗೆ ದಾನವ ಶಿಕ್ಷಗೆನಮ್ಮ ರಕ್ಷಕನಿಗೆ ಮಂಗಳ 1ತುರುಗಳ ಕಾಯ್ದಗೆ ಕರುಣಾಕರನಿಗೆಗಿರಿಯನೆತ್ತಿದನಿಗೆ ಮಂಗಳ ||ಪುರದ ತಿಮ್ಮಪ್ಪಗೆ ವಾರಿಜನಾಭಗೆಹರಿರ್ವೋತ್ತಮನಿಗೆ ಮಂಗಳ 2ದೇವಕಿ ದೇವಿಯ ತನಯಗೆ ಮಂಗಳದೇವ ತಿಮ್ಮಪ್ಪಗೆ ಮಂಗಳ ||ಮಾವನ ಕೊಂದು ಮಲ್ಲರ ಮಡುಹಿದಪುರಂದರವಿಠಲಗೆ ಮಂಗಳ 3
--------------
ಪುರಂದರದಾಸರು
ಮರವನು ನುಂಗುವ ಪಕ್ಷಿ ಮನೆಯೊಳಗೆ ಬಂದಿದೆ ಪ.ಒಂಟಿ ಕೊಂಬಿನ ಪಕ್ಷಿ ಒಳಗೆ ಕರುಳಿಲ್ಲಗಂಟಲು ಮೂರುಂಟು ಮೂಗು ಇಲ್ಲಕುಂಟು ಮನುಜನಂತೆ ಕುಳಿತಿಹುದು ಮನೆಯೊಳಗೆಎಂಟು ಹತ್ತರ ಭಕ್ಷ ಭಕ್ಷಿಸುವುದು 1ನಡುವೆ ತಲಿಯೆಂಬುವದು ನಡು ನೆತ್ತಿಯಲಿ ಬಾಯಿಕಡು ಸ್ವರಗಳಿಂದ ಗಾನ ಮಾಡ್ವದುಅಡವಿಯಲಿ ಹುಟ್ಟುವುದು ಅಂಗವೆರಡಾಗುವುದುಬಡತನ ಬಂದರೆ ಬಹಳ ರಕ್ಷಿಪುದು 2ಕಂಜ ವದನೆಯರ ಕರದಲ್ಲಿ ನಲಿದಾಡುವುದುಎಂಜಲನುಣಿಸುವುದು ಮೂರ್ಜಗಕೆರಂಜಿಪಶಿಖಾಮಣಿ ಸಿಂಹಾಸನದ ಮೇಲಿಪ್ಪಸಂಜೀವ ಪಿತ ಪುರಂದರವಿಠಲನೇ ಬಲ್ಲ * 3
--------------
ಪುರಂದರದಾಸರು
ಮರವನೇರಿ ಮಡುವದು ಮುಂದಾ ಶ್ರೀ ಕೃಷ್ಣ ಕಾಳಿಶಿರವನೇರಿ ತಾಂಡವವಾಡಿದಾಸ್ಮರಿಸಲವನ ತರುಣಿಯರಿಗೆ ವರವ ಪ್ರಾಣವಿರಿಸಿ ಕೊಟ್ಟುಶಿರದಿಚರಣಗುರುತನಿರಿಸಿ ಪೊರೆದ ಕಾಳಿಂಗನನು ಕೃಷ್ಣ 1ರಜತಗಿರಿಗೆ ಸದೃಶವೆನಿಸಿದ ಶ್ರೀಕೃಷ್ಣ ಯಮ-ಳಾರ್ಜುನವೆಂಬ ಮರವ ಕೆಡಹಿದಅಜಗರನ ನಿಜ ಉರಕೆ ಬಿಜಯಂಗೈದು ಸುಜನೋದ್ಭಾರಿಭಜಿಸೆ ಗೋವ್ರಜವ ಕಾಯ್ದ ಅಜಗರನ ಸೀಳಿ ಕೃಷ್ಣ 2ಚಂದ್ರಮುಖಿಯರುಡುವ ಶೀರೆಯ ಶ್ರೀಕೃಷ್ಣನು ಮರದಿಬಂಧಿಸಿಟ್ಟು ಮಾನಗಳೆವೆಯಾನಂದನನ್ನು ಬಂದು ತುಡುಕಿದಂದು ಫಣಿಯ ಹೊಂದಿಸಿದೆನಂದಗೋಪಿ ಕಂದ ಗೋವಿಂದದಾಸವಂದ್ಯ 3
--------------
ಗೋವಿಂದದಾಸ
ಮರೆಯದಿರು ಮರೆಯದಿರು ಗುರುರಾಯನ |ಲೋಕ ಪರಿಪಾಲಿಸುವಗುರುಸಾರ್ವಭೌಮನ್ನಪxmಟ veಡಿsioಟಿ='1.0' eಟಿಛಿoಜiಟಿg='%SಔUP-ಇಓಅಔಆIಓಉ%'ಪರಮೇಶ್ವರನು ತಾನೆಪರಮಪ್ರೇಮದಿಂದಗುರುರೂಪವನುಧರಿಸಿ ಧರೆಗೆ ಬಂದು, ತ್ವರದಿಂದ ಮಾನವರ ಮರವೆಯನುಪರಿಹರಿಸಿ | ಸ್ಥಿರ ಮುಕ್ತಿ ಸುಖವಿತ್ತು ಪೊರೆವ ಗುರುವರನ1ಕರುಣದಿಂ ಜನರ ರಕ್ಷಿಸುವ ಸದ್ಗುರುವರನ | ಶರಣು ಪೊಕ್ಕರೆಕೃಪಾ ಸುಧೆಗರೆವನ | ನಿರುತದಲಿ ಭಕುತರಿಗೆ |ನಿರತಿಶಯಸೌಖ್ಯವನು ಸರಿದಂತೆ ವರವಿತ್ತು | ಮೆರೆವ ದೇಶಿಕನ2ಕುವರ ಬಾರೆಂದಭಯಕರವಶಿರದಲ್ಲಿರಿಸಿ |ನೆರೆಸುಬೋಧೆಯಗೈದು ನರಭಾವ ಕಳೆದು |ಮರಣ ಭಯ ಹರಸಿ | ಬಹು ಹರುಷದಿಂದಿರುಎಂದ ಚಿರ ಸಿಂಧುಗಿಯವಾಸ |ಗುರುಶಂಕರನಪಾದ3
--------------
ಜಕ್ಕಪ್ಪಯ್ಯನವರು
ಮರೆಯದೆ ಮನದಲಿ ಸಿರಿವರನ ಚರಣವನುಸ್ಮರಿಸಿದಂಥವರನ್ನು ನರರೆನ್ನಬಹುದೆ ? ಪ.ಮುರಹರನಿಗೆರಗುವ ಶಿರವು ದ್ವಾರಕಾಪುರವುಹರಿಕಥೆ ಕೇಳುವಕರ್ಣ ಗೋಕರ್ಣವುಬಿರುದು ಪೊಗಳುವಜಿಹ್ವೆ ಸ್ಥಿರದಿ ಕ್ಷೀರಾರ್ಣವವರದನ ಪೂಜಿಪ ಕರವು ರಾಮೇಶ್ವರವು 1ಸೃಷ್ಟೀಶ ನಿರ್ಮಾಲ್ಯ ಗೃಹಣನಾಸಿಕ ಕಾಶಿಕೃಷ್ಣನ ನೋಡುವ ದೃಷ್ಟಿ ಶ್ರೀ ಮುಷ್ಣವುಅಷ್ಟಮದಗಳ ಜರೆದ ಮುಖ ಮಥುರಾಪುರವಿಷ್ಣುವನು ಪಾಡುವ ಕಂಠ ಭೂ ವೈಕುಂಠ 2ಪರಕೆ ನಡೆಸುವಜಂಘೆ ಹರಿವ ಗಂಗೆಯು ಈಪರಿಯಲೊಪ್ಪುವ ಅಂಗ ಶ್ರೀರಂಗವುಧರೆಯೊಳುಪುರಂದರ ವಿಠಲರಾಯನಪರಮಭಾಗವತರ ಉದರವೆ ಬದರಿ3
--------------
ಪುರಂದರದಾಸರು
ಮರೆಯಲಿನ್ನೆಂತುಪಕಾರ ಮಾರುತಿಮರೆಯಲಿನ್ನೆಂತುಪಕಾರ ಪ.ವಿಧಿಮುಂತಾದ ತ್ರಿದಶರಿಂದೆನ್ನಯಸದಮಲಪ್ರಾಣಾಧಾರ 1ಬ್ರಹ್ಮಚರ್ಯವ್ರತಧರ್ಮನಿಯಾಮಕನಿರ್ಮಲ ವಜ್ರಶರೀರ 2ದಾಸವರ್ಯ ಗುಣರಾಶಿ ತ್ವದೀಯ ವಿ-ಶ್ವಾಸವಿನ್ನೆಷ್ಟೊಗಭೀರ3ವ್ಯಾಪ್ತಮಾದಾಪದಕಾಪ್ತ ನಿನ್ನುಪಕೃತಿಸಪ್ತಸಾಗರದಿಂದಪಾರ 4ಶ್ರೀಲಕ್ಷ್ಮೀನಾರಾಯಣನು ಹನುಮನಆಲಿಂಗಿಸಿದನುದಾರ 5
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಮರೆಹೋಗಿ ಬುಧರೀ ತಾತನ್ನ ವರಗುರು ಸತ್ಯನಾಥನ್ನ ಪ.ಇಂದ್ರಿಯಜಿತ ಸುಜನೌಘ ಚಕೋರಕೆ ಚಂದ್ರನ್ನಮುದಸಾಂದ್ರನ್ನಮಂದರಧರಜಾನಕಿಪತಿ ರಾಮಚಂದ್ರನ ಪ್ರಿಯ ಮುನೀಂದ್ರನ್ನ1ಅಮಲಸುಖತೀರ್ಥ ಪ್ರಮೇಯಸಾಕಲ್ಯನಿರ್ಣಯ ಬಲ್ಲನ್ನಎಲ್ಲಾ ಬಲ್ಲೆಂಬೋ ಮಾಯಿಮತದಲ್ಲಣನ ಪಟುಮಲ್ಲನ 2ರುಕ್ಷಮಾಯಿಗಳ ಶಿಕ್ಷಿಪನ ಸಪಕ್ಷನ್ನ ಕರುಣಾಕ್ಷನ್ನಪಕ್ಷ್ಷಿಗಮನನ ದೀಕ್ಷೆಲಿ ಪೂಜಿಪ ದಕ್ಷನ್ನ ಸುರಪಕ್ಷನ್ನ 3ಶಂಕರನ ಗರ್ವ ಮುರಿದು ಬಿರುದಾಂಕನ್ನ ನಿಶ್ಯಂಕನ್ನಕಿಂಕರಜನಸÀುರಭೂರುಹ ಸುಗುಣಗಣಾಂಕನ್ನ ಶಶಿಗಧಿಕನ್ನ 4ಮರುತಮತಾಗ್ರಣಿಗುರುಸತ್ಯಾಧಿಸುತ ವಿರತನ್ನಾಮಲ ಚರಿತನ್ನಕರ್ತಪ್ರಸನ್ನವೆಂಕಟಪತಿಪದನಿರತನ್ನ ಶುಭಕರತನ್ನ5
--------------
ಪ್ರಸನ್ನವೆಂಕಟದಾಸರು
ಮಲವು ತೊಳೆಯಬಲ್ಲುದೆಮನವ ತೊಳೆಯದನಕ ಪಹಲುವು ನೀರಿನೊಳಗೆ ಪೊಕ್ಕುಹಲುಬಿದರಿನ್ನೇನು ಫಲ? ಅಪಬೋಗಫಲವನುಂಡು ವಿಷಯ ಭೋಗದಿಂದ ಮತ್ತರಾಗಿಭೋಗಬೇಡಿ ಜನರು ಜೀವಕಾಗಿ ಮುನಿವರುಯೋಗಿಯಂತೆ ಜನರ ಮೆಚ್ಚುಗಾಗಿ ಹೋಗಿ ಉದಯದಲ್ಲಿಕಾಗೆಯಂತೆ ಮುಳುಗಿದರೆ ಅಮೋಘ ಫಲವು ಬಾಹೊದೆ? 1ಪರರ ಕೇಡಬಯಸಿಗುರು - ಹಿರಿಯರನ್ನು ನಿಂದಿಸುತಪರಮ ಸೌಖ್ಯದಿಂದ ಪರಸ್ತ್ರೀಯರನ್ನ ಆಳುತಪರಮಯೋಗನಿಷ್ಟೆಯೆಂದು ಧರೆಯ ಮೇಲೆ ಡಂಭತೋರಿಹರಿವ ನದಿಯ ತೀರದಲ್ಲಿ ಪರಿಯು ಬಕ ಧ್ಯಾನದಂಥ 2ತಂದೆ - ತಾಯಿ ತಿರುತಿನ್ನಲು ಒಂದು ದಿವಸ ಕೇಳಲಿಲ್ಲಮಂದಗಮನೆಯರೊಡನೆ ಆನಂದದಿಂದ ನಲಿಯುತತಂದೆಯ ಹೆಸರಿನಿಂದ ನೂರು ಮಂದಿಗುಣಿಸಿ ಹರುಷದಿಂದತಂದೆ ತೃಪ್ತನಾದನೆಂಬ ಮಂದಮತಿಯ ಜನರುಗಳ 3ಕಾಸವೀಸಕ್ಕಾಗಿ ಹರಿಯದಾಸನೆಂದು ತಿರುಗಿ ತಿರುಗಿದೇಶದಿಂದ ದೇಶಕಿಳಿದು ಕಾಶಿಯಾತ್ರೆ ಮಾಡಲುಆಶಾಪಾಶ ಬಿಡದ ಮನದ ಕೂಸಿನಂತೆ ಕಾಡುತಿಪ್ಪವೇಶಧಾರಿಗಳಿಗೆ ಆ ಕಾಶಿಯ ಫಲ ಬಾಹೊದೆ? 4ಏನು ಮಾಡಲೇನು ಫಲ - ಏನು ನೋಡಲೇನು ಫಲಜ್ಞಾನವಿಲ್ಲದಚ್ಯುತನ ಧ್ಯಾನವಿಲ್ಲದವರಿಗೆಮೌನ ನೇಮ ನಿಷ್ಠೆ ಪರಾಧೀನವೆಂಬುದ ತಿಳಿದುಕೊಂಡುದೀನನಾಥ ಪುರಂದರವಿಠಲನ ನಿಲುಕಲೊಲ್ಲದೆ 5
--------------
ಪುರಂದರದಾಸರು
ಮಹತಿಗೆ ಮಹತು ಹರಿನಾಮಬಹುಜನ್ಮಜಲಧಿ ಶೋಷಿಸುವ ಹರಿನಾಮ ಪ.ಹಿಂದೊದಗಿದಘರಾಶಿ ಬೇಯಿಸಿ ಬಿಸುಟುವ ನಾಮಮುಂದೆ ಬಹ ದುರಿತಕಡ್ಡಹ ನಾಮಮಂದಮತಿ ಕತ್ತಲೆಗೆ ಬಾಲಾರ್ಕಸಮ ನಾಮದಂದುಗದ ಬಳ್ಳಿಯನು ಹರಿವ ನಾಮ 1ಮುಕುತಿ ನಗರವ ತುಂಬಿಸುವ ಅಭಯಕರ ನಾಮಶಕುತ ಯಮಾಲಯಕೆÉ ಭಯಂಕರದ ನಾಮಅಕಳಂಕ ದಾಸರಿಗೆ ಆದ್ಯಂತಗತಿ ನಾಮಭಕುತರೆಡರಿನ ಗಿರಿಗೆ ವಜ್ರನಾಮ 2ಸರ್ವ ಶ್ರುತಿಮುನಿಗಳುಗ್ಗಡಿಸುತಿಹ ನಾಮಉರ್ವಿಯೊಳು ನಂಬಿದರ ಪೊರೆವ ನಾಮಸರ್ವಜÕರಾಯಗುರು ನಿರ್ವಚನಿಸುವ ನಾಮಸರ್ವೇಶ ಪ್ರಸನವೆಂಕಟೇಶನ ಶ್ರೀನಾಮ 3
--------------
ಪ್ರಸನ್ನವೆಂಕಟದಾಸರು
ಮಹಾದೇವ ಶಿತಿಕಂಠ ದಾಸ ಕಲ್ಪಮಹೀಜ ಬಿನ್ನವಿಪೆ ನಿರ್ದೋಷ ||ಆಹಾ ||ಕುಹಕಾರಿ ಹರಿಪಾದ ಮಹಿಮೆ ಕೊಂಡಾಡಿಸೊ |ಗಹನವಿಕ್ರಮಭೀಮ ಮಹೀಧರಪ ಜಾಧವ ಪಸ್ಫಟಿಕಾಭ ಶ್ರೀಕಂಠ ದಕ್ಷ ಧ್ವಂಸಿ |ನಿಟಿಲಲೋಚನ ಸುರಪಕ್ಷ ಹೇ || ಧೂ |ರ್ಜಟ ಹೀನ ವಿಷಯಾಖ್ಯ ಕಕ್ಷವಹ್ನಿ|ಕುಟಿಲತ್ವ ಬಿಡಿಸತಿ ದಕ್ಷ ||ಆಹಾ||ಕಠಿಣ ಸಂಸಾರದಿತ್ರುಟಿಮಾತ್ರ ಸುಖ ಕಾಣೆ |ವಟುರೂಪಿ ಭಕುತರ ಕಟಕದೊಳಿರಿಸೆನ್ನ1ಇಳಿರಥ ನಗಶರಸೋಮಮೌಳಿ|ನಳನಂದಿನಿಪ ಸುತ ರಾಮ ನಾಮಾ |ನಲಿದು ಪಾಡುವ ಗುಣಧಾಮ ರೌಪ್ಯಾ |ಬಲಾವಾಸಾನಂಗ ವಿರಾಮಾ ||ಆಹಾ||ಹಲವರಾಶ್ರಯಿಸಿ ನಾ ಬಲು ನೊಂದೆನೋರ್ವರು ಕಾಯ್ವ |ಸುಳಿವು ಕಾಣೆನೋ ಹೇ ಗರಳಕಂಠ ಪೊರೆಯೆನ್ನ 2ಪಂಚ ಸುಸ್ಮಿತ ಯುಕ್ತ ವದನಾ ನಿಷ್ಪ್ರ |ಪಂಚ ಗಜಾಸುರ ಹನನಾ ಏಕಪಂಚಾಸ್ಯ ಜನಕ ಕೇಶವನಾ ಪ್ರೀತಿ |ಮಂಚ ನೀನಾಹೆ ಖಳರನಾ ||ಆಹಾ||ಹಿಂಚಾಗಿ ಅಳಿವಂಥ ಹಂಚಿಕೆಯಲಿವರ|ಮುಂಚೆ ಕರೆದು ಕೊಟ್ಟು ವಂಚಿಪೆ ಅತ್ರಿಜ 3ಅಹಂಕಾರಾಧೀಶ ನಭೇಶತಾತ|ಮಹಾ ಮುನಿ ವಂದ್ಯಾಮರಾಸ್ಯ ಚಂದ್ರ |ದಿನಪತೇಕ್ಷಣನೆ ಅಶೇಷಾಮೋದ|ಬಹುಮೋದಸಕ್ತಾಯನ್ನಾಶಾ ||ಆಹಾ||ದಹಿಸೊಜಠರಪೋಷ ವಹಿಸಿ ಬೆಂಡಾದೆನೊ |ಅಹಿಮಲಾಂಧಕಾಸುರ ಗುಹಹ ಅಶ್ವತ್ಥಾಮ 4ಶಕ್ರಾವರಜ ಶ್ರೀ ಪ್ರಾಣೇಶ ವಿಠ್ಠಲ |ನಕ್ರಾಹನಂಘ್ರಿಯನಿಶದಲ್ಲಿ |ವಕ್ರವಿಲ್ಲದೆ ಸೇವಿಪೀಶ ಹೇ ತ್ರಿ- |ವಿಕ್ರಮಕರವ್ಯೋಮಕೇಶ||ಆಹಾ||ಶುಕ್ರಪೂಜಿತಪಾದಅಕ್ರೂರಯನ್ನೊಳಿ |ದ್ದ ಕ್ರಮವೆಣಿಸದೆ ಸುಕೃತವೊದಗಿಸೊ5
--------------
ಪ್ರಾಣೇಶದಾಸರು
ಮಾಡುತಿಹ ಸಂಸಾರ ಮಲಿನ ಹೊದ್ದೆದೆಯೋಗಿಆಡಲೇನವ ಆನಂದವಿಹ ಸುಖವಪಬಾಲ ಶಿಶುಲೇಲೆಗಳ ಬಗೆ ಬಗೆಯ ಲಾಲಿಸುತಶೂಲಧರಸುತರೀಗ ಬಂದರೆನುತ್ತಕಾಲು ಕೈ ಮೋರೆಗಳ ತೊಳೆದುಣಿಸಿ ರಕ್ಷಿಸುತಮೂಲೋಕಕೆನ್ನ ಭಾಗ್ಯ ಮಿಗಿಲು ಮಿಗಿಲೆನುತ1ಸತಿವಿನೋದವ ಮಾಡೆ ಸರಸವನೆ ಮಾಡುತ್ತಅತಿ ಆದಿವಸ್ತು ತಾನೀಕೆಯನುತಾಮತಿಭ್ರಾಂತನಾಗದಲೆ ಮಂಗಳನು ತಾನೆನುತಮತಿಯಾಟ ಬ್ರಹ್ಮವಿದು ಇದುವೆ ಎನ್ನುತ್ತ2ಬಡತನವು ಬಂದು ಕಾಡುತ್ತಲಿರೆ ನೋಡುತ್ತದೃಢಬುದ್ಧಿಯಾಗಿ ತಾನೀಗಲಿರುತಬಿಡದೆ ರಕ್ಷಿಪ ವಿಶ್ವಕುಟುಂಬಿಯಹನೆನುತಪಡದೆ ಆಯಾಸ ಸುಖವಾಸಿಯಾಗಿರುತ3ಬಡಿದಾಡುತಿಹ ಗೃಹದ ಜನರುಗಳ ನೋಡುತ್ತಬಿಡು ನಿನ್ನ ಬುದ್ಧಿಯನು ಎಂದು ಹೇಳುತ್ತಕಡೆಗಣಿಸಿದವರ ಅತ್ತಿತ್ತ ಮಾಡುತ್ತಕಡಹನಿಶ್ಚಲದಿಂದ ಮತಿಶಾಂತವಿರುತ4ನಿಂದ್ಯದೂರಪವಾದವನು ಕೇಳುತ್ತಮಂದಶ್ರವಣನೋ ಎಂಬ ತರದಲಿರುತನಿಂದುದೃಢ ಚಿತ್ತದಲಿ ನಿರ್ಲೇಪ ತಾನೆನುತಬಂಧಹರ ಚಿದಾನಂದ ತಾನಾದಗೆನುತ5
--------------
ಚಿದಾನಂದ ಅವಧೂತರು