ಒಟ್ಟು 8803 ಕಡೆಗಳಲ್ಲಿ , 129 ದಾಸರು , 4024 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬಣ್ಣಿಸಿಗೋಪಿತಾ ಹರಿಸಿದಳು |ಎಣ್ಣೆಯನೂಡುತ ಯದುಕುಲ ತಿಲಕನ ಪಆಯುಷ್ಯವಂತನಾಗು ಅತಿ ಬಲ್ಲಿದನಾಗು |ಮಾಯಾವಿ ಖಳರ ಮರ್ದನ ನಾಗು ||ರಾಯರ ಪಾಲಿಸು ರಕ್ಕಸರ ಸೋಲಿಸು |ವಾಯುಸುತಗೆ ನೀ ಒಡೆಯನಾಗೆನುತಲಿ 1ಧೀರನು ನೀನಾಗು ದಯಾಂಬುಧಿಯಾಗು |ಆ ರುಕ್ಮಿಣಿಗೆ ನೀನರಸನಾಗು ||ಮಾರನ ಪಿತನಾಗು ಮಧುಸೂದನನಾಗು |ದ್ವಾರಾವತಿಗೆ ನೀ ದೊರೆಯಾಗೆನುತಲಿ 2ಆನಂದ ನೀನಾಗುಅಚ್ಯುತನೀನಾಗು |ದಾನವಂತಕನಾಗುದಯವಾಗು|ಶ್ರೀನಿವಾಸನಾಗು ಶ್ರೀಧರ ನೀನಾಗು |ಜ್ಞಾನಿಪುರಂದರವಿಠಲನಾಗೆನುತಲಿ3
--------------
ಪುರಂದರದಾಸರು
ಬಂದದೆಲ್ಲವೊ ಬರಲಿ - ಗೋ -ವಿಂದನ ದಯೆ ನಮಗಿರಲಿ ಪಮಂದರಧರ ಗೋವಿಂದ ಮುಕುಂದನಸಂದರುಶನ ನಮಗೊಂದೇ ಸಾಲದೆ ? ಅ.ಪಆರು ಅರಿಯದಿರಲೆನ್ನ - ಮುರಾರಿಯು ವರದ ಪ್ರಸನ್ನತೋರುವ ದುರಿತದ ಬೆನ್ನ -ಭವಹಾರಿ ಕೃಪಾಂಬುಧಿ ಚೆನ್ನ ||ಶ್ರೀರಮಣನ ಶ್ರೀಚರಣ ಸೇವಕರಿಗೆಘೋರಯಮನು ಶರಣಾಗತನಲ್ಲವೆ ? 1ಅರಗಿನ ಮನೆಯೊಳಗಂದು ಪಾಂಡುವರನು ಕೊಲಬೇಕೆಂದುದುರುಳ ಕುರುಪ ಕಪಟದಲಿ ಹಾಕಿರುತಿರೆ ಆ ಕ್ಷಣದಲಿ ||ಹರಿಕೃಪೆಯವರಲ್ಲಿದ್ದ ಕಾರಣದುರಿತವೆಲ್ಲ ಬಯಲಾದುದಲ್ಲವೆ ? 2ಸಿಂಗನ ಪೆಗಲೇರಿದಗೆ - ಕರಿಭಂಗವೇಕೆ ಮತ್ತವಗೆ |ರಂಗನ ದಯವುಳ್ಳವಗೆ - ಭವಭಂಗದ ಭೀತಿಯ ಹಂಗೆ ||ವiಂಗಳ ಮಹಿಮ ಶ್ರೀಪುರಂದರ ವಿಠಲನಹಿಂಗದ ದಯೆವೊಂದಿದ್ದರೆ ಸಾಲದೆ ? 3
--------------
ಪುರಂದರದಾಸರು
ಬಂದಿದೆ ದುರಿತಘಸಂಗ ಶ್ರೀರಂಗಮಂದಮತಿಯೆಂದುಪೇಕ್ಷಿಸದುಳುಹೊ ಪ.ಒಲ್ಲೆನೆಂದರೆ ಬಿಡದೀ ಮನ ತಿಳಿದತ್ತೆಕ್ಷುಲ್ಲ ವೃತ್ತಿಯ ಸೇರಿ ಬಿಡಲೊಲ್ಲದುಕಲ್ಲುಗೊಂಡಿದೆ ಪುಣ್ಯಮಾರ್ಗಕ್ಕೆ ಇದರೊಳುಫುಲ್ಲನಾಭನೆ ಆವ ತೆರದಿಂದ ಸಲಹೊ 1ಕೆಂಡವ ಕೊಂಡು ಮಂಡೆಯ ಬಾಚುತಿದೆಪರಹೆಂಡಿರು ವಿತ್ತದಾಸೆಗೆ ತೊಡಕಿಕಂಡರೆ ಸೊಗಸದು ಭಕುತಿ ವೈರಾಗ್ಯವಪುಂಡರೀಕಾಕ್ಷನೆಗತಿನೀನೆ ಬಲ್ಲೆ2ಮೆಲ್ಲ ಮೆಲ್ಲನೆ ದುಷ್ಕರ್ಮವ ಸಾಧಿಸಿಬಲ್ಲಿದಜವನವರ ಬರಮಾಡಿದೆವಲ್ಲಭಪ್ರಸನ್ವೆಂಕಟ ಕೃಷ್ಣನಿಲ್ಲಿಸು ನಿನ್ನ ನಾಮವ ನಾಲಿಗೆಯಲಿ 3
--------------
ಪ್ರಸನ್ನವೆಂಕಟದಾಸರು
ಬಂದು ನಮ್ಮ ಮನೆಗೆ ನಿಂದಿಸಿಲ್ಲಿಗೆ ಬಂದೆಚಂದೇನೆ ಇದು ಚಂದೇನೆ ಪ.ಚಾರುಗುಣಶೀಲೆಯರ ದೂರಿ ಇಲ್ಲಿಗೆ ಬಂದೆಚಾರ್ವಾಕಳೆಂದು ಸಾರಿ ಕೈ ಹೊಯ್ದರು 1ಸುಂದರ ಗುಣದೆಯರಿಗೆ ಅಂದ ಮಾತುಗಳೆಲ್ಲಹೊಂದೋವೇನೆ ವ್ಯರ್ಥ ನಿಂದ್ಯಳಾದಿ ನೀನು 2ಶ್ರೀಶನ ಸತಿಯರ ಮೀಸಲ ಗುಣದೆಯರಹಾಸ್ಯ ಮಾಡಿ ಬಂದು ದೂಷಳಾದಿ ನೀನು 3ಭಾಳಗುಣಾಢ್ಯರಿಗೆ ಅವಹೇಳನವಾಡಿದಿತಾಳೆ ಈ ಮಾತಿಗೆ ನಿವಾಳಿಸುವರ ನಿನ್ನ 4ಮುದ್ದು ರಾಮೇಶನ ಅರ್ಧಾಂಗಿಯರಿಗೆಅವದ್ದ ನುಡಿದು ಬಂದು ಬಿದ್ದು ನಗುವಂತೆ 5
--------------
ಗಲಗಲಿಅವ್ವನವರು
ಬಂದು ನಿಂದಿಹ ನೋಡಿ- ಭೂತಳದಿ ವೆಂಕಟಇಂದಿರೆಯನೊಡಗೂಡಿ- ಒಪ್ಪುವ ನಿರಂತರಪೊಂದಿ ಭಜನೆಯ ಮಾಡಿ- ಆನಂದ ಬೇಡಿ ಪವಂದಿಸುತ ಮನೆದೊಳಗೆ ಇವನಡಿ-ದ್ವಂದ್ವ ಭಜಿಸಲು ಬಂದ ಭಯಹರ |ಇಂದುಧರಸುರವೃಂದನುತ ಗೋ-ವಿಂದಘನದಯಾಸಿಂಧು ಶ್ರೀಹರಿ ಅ.ಪದ್ವಾರದೆಡಬಲದಲ್ಲಿ- ಜಯವಿಜಯರಿಬ್ಬರುಸೇರಿ ಸೇವಿಪರಲ್ಲಿ- ಸನಕಾದಿನುತ ಶೃಂ-ಗಾರನಿಧಿ ಅಂಗದಲಿ- ಮುತ್ತಿನಲಿ ಶೋಭಿಪಹಾರ ಹೊಂದಿಹುದಲ್ಲಿ- ವಿಸ್ತಾರದಲ್ಲಿ ||ವಾರವಾರಕೆ ಪೂಜೆಗೊಂಬುವಹಾರ ಮುಕುಟಾಭರಣ ಕುಂಡಲ-ಧಾರಿ ಭುಜ ಕೇಯೂರ ಭೂಷಿತಮಾರಪಿತಗುಣಮೋಹನಾಂಗ ||ಚಾರುಪೀತಾಂಬರ ಕಟಿಯ ಕರ-ವೀರ ಕಲ್ಹಾರಾದಿ ಹೂವಿನಹಾರ ಕೊರಳೊಳು ಎಸೆಯುತಿರೆ ವದ-|ನಾರವಿಂದನು ನಗುತ ನಲಿಯುತ 1ಎಲ್ಲ ಭಕುತರಭೀಷ್ಟ-ಕೊಡುವುದಕೆ ತಾ ಕೈ-ವಲ್ಯ ಸ್ಥಾನವ ಬಿಟ್ಟ- ಶೇಷಾದ್ರಿ ಮಂದಿರದಲ್ಲಿ ಲೋಲುಪ ದಿಟ್ಟ-ಸೌಭಾಗ್ಯನಿಧಿಗೆದುರಿಲ್ಲ ಭುಜಬಲ ಪುಷ್ಪ-ಕಸ್ತೂರಿಯಿಟ್ಟ ||ಚೆಲ್ವ ಪಣೆಯಲಿ ಶೋಭಿಸುವ ಸಿರಿ-ವಲ್ಲಭನಗುಣಪೊಗಳದಿಹ ಜಗ-ಖುಲ್ಲರೆದೆದಲ್ಲಣ ಪರಾಕ್ರಮಮಲ್ಲಮರ್ದನಮಾತುಳಾಂತಕ||ಫಲ್ಗುಣನಸಖಪ್ರಕಟನಾಗಿಹದುರ್ಲಭನು ಅಘದೂರ ಬಹುಮಾಂಗಲ್ಯ ಹೃಯಯವ ಮಾಡಿ ಸೃಷ್ಟಿಗೆಉಲ್ಲಾಸ ಕೊಡುತಲಿ ಚೆಂದದಿಂದಲಿ 2ಪದಕ-ಕೌಸ್ತುಭದಾರ-ಸರಿಗೆಯ ಸುಕಂಧರಸುದರ್ಶನ-ದರಧಾರ-ಸುಂದರ ಮನೋಹರಪದಯುಗದಿ ನೂಪುರ-ಇಟ್ಟಿಹನು ಸನ್ಮುನಿಹೃದಯ ಸ್ಥಿತ ಗಂಭೀರ-ಬಹುದಾನ ಶೂರ ||ವಿಧಿ-ಭವಾದ್ಯರ ಪೊರೆವ ದಾತನುತುದಿ ಮೊದಲು ಮಧ್ಯವು ವಿರಹಿತನುಉದುಭವಾದಿಗಳೀವ ಕರ್ತನುತ್ರಿದಶಪೂಜೀತ ತ್ತಿಭುವನೇಶ ||ಸದುನಲಾಸದಿ ಸ್ವಾಮಿ ತೀರ್ಥದಿಉದುಸುತಿರೆಸಿರಿಮಹಿಳೆ ಸಹಿತದಿಪದುಮನಾಭಪುರಂದರವಿಠಲನುಮುದದಿ ಬ್ರಹ್ಮೋತ್ಸವದಿ ಮೆರೆಯುತ 3
--------------
ಪುರಂದರದಾಸರು
ಬಂದೆನೇಳೆ ಗೋವಿಂದ ನಾ ಇಂದುಮುಖಿ ನಿದ್ರೆ ಬಿಟ್ಟುಬಂದು ನೀ ಬಾಗಿಲ ತೆಗೆಯೆ ಗೋವಿಂದ ನೀ ಗೋವೃಂದವ ಕಾಯಲು ಹೋಗಯ್ಯ ಪ.ಸೋಮಕ ಖಳನ ಕೊಂದು ನೇಮದಿ ವೇದವ ತಂದಶ್ರೀ ಮತ್ಸ್ಯಾವತಾರ ಬಂದೆನೆ ಮತ್ಸ್ಸ್ಯನಾದರೆಆ ಮಹಾಂಬುಧಿಗೆ ಹೋಗಯ್ಯ 1ಸಿಂಧುಮಥÀನ ಕಾಲಕೆ ವೃಂದಾರಕರಿಗÉೂಲಿದಸುಂದರ ಕೂರ್ಮನು ಬಂದೆನೆ ಕೂರ್ಮನಾದರೆಮಂದರಹೊರಲು ಹೋಗಯ್ಯ2ಪ್ರಳಯಾಂಬುಗಿಳಿದೊಬ್ಬನ ಸುಲಭದಿ ಕೋರೇಲಿ ಸೀಳಿದಚೆಲುವ ವರಾಹನು ಬಂದೆನೆ ವರಾಹನಾದರೆಇಳೆಯ ಕೂಡಾಡ ಹೋಗಯ್ಯ 3ಸೊಕ್ಕಿ ಕಂಬವ ಗುದ್ದ್ದಿದ ರಕ್ಕಸನಂತರ ಮಾಲೆಯನಿಕ್ಕಿದ ನರಹರಿ ಬಂದೆನೆ ನರಹರಿಯಾದರೆಚಿಕ್ಕವನೊಳಾಡ ಹೋಗಯ್ಯ 4ಹೋಮವ ಮಾಡಿ ಮೀರಿದ ಭೂಮಿಪನುಕ್ಕ ಮುರಿದನೇಮದ ವಾಮನ ಬಂದೆನೆ ವಾಮನನಾದರೆನೇಮ ನಿಷ್ಠೆಗೆ ನೀ ಹೋಗಯ್ಯ 5ಭೂಭಾರವನಿಳುಹಿ ದ್ವಿಜರ್ಗೆ ಭಾಗ್ಯವ ಕೊಟ್ಟ ಶೌರ್ಯಶೋಭಿತಭಾರ್ಗವಬಂದೆನೆ ಭಾರ್ಗವನಾದರೆಆ ಬಾಲೇರಂಜಿಸ ಹೋಗಯ್ಯ 6ಸೀತೆಗಾಗಿ ರಾವಣನ್ನ ಘಾತಿಸಿದೆ ಕೇಳೆವಾತಜಾತ ವಂದ್ಯ ರಾಮ ಬಂದೆನೆ ರಾಮನಾದರೆ ಸರಯೂ ತೀರದಲ್ಲಿರ ಹೋಗಯ್ಯ 7ಸೋಳಸಾಸಿರ ಗೋಪೇರನಾಳುವ ಪ್ರೌಢ ಕಾಣೆ ಗೋಪಾಲ ಚೂಡಾಮಣಿ ಬಂದೆನೆ ಗೋಪಾಲನಾದರೆ ಗೋಪಾಲೇರೊಡನಾಡ ಹೋಗಯ್ಯ 8ದೃಢದಲ್ಲಿ ತಪವಿದ್ದ ಮಡದೇರ ಮನಗೆದ್ದಕಡುಮುದ್ದು ಬುದ್ಧ್ದ ಬಂದೇನೆ ಬುದ್ಧನಾದರೆ ಮಿಥ್ಯದಸಡಗರದಲ್ಲಿರ ಹೋಗಯ್ಯ 9ಪದ್ಮಗಂಧಿ ನಿನ್ನ ರತಿಗೊದಗಿದೆ ಬಿಂಕವಿನ್ನ್ಯಾಕೆಕುದುರೆಯೇರಿ ಕಲ್ಕಿ ಬಂದೆನೆ ಕಲ್ಕಿಯಾದರೆಕದನಕೆ ಜಾಣ ಹೋಗಯ್ಯ 10ವಲ್ಲಭನ ನುಡಿಕೇಳಿ ನಲ್ಲೆ ಸತ್ಯಭಾಮೆಪಾದಪಲ್ಲವಕೆರಗಿ ನಿಂತಳು ಪ್ರಸನ್ವೆಂಕಟಚೆಲುವ ನೀನೆಂದರಿಯೆನೆಂದಳು 11
--------------
ಪ್ರಸನ್ನವೆಂಕಟದಾಸರು
ಬಂದೆಯಾ ಪರಿಣಾಮದಿ ನಿನ್ನಬಂಧು ಬಳಗವನೆಲ್ಲ ಬಿಟ್ಟು ಸನ್ಮಾರ್ಗದಿ ಪಸಂಚೀತ ಪ್ರಾರಬ್ಧ ಕರ್ಮಂಗಳನೆಲ್ಲಕಿಂಚಿತು ಮಾಡಿ ಸಂಕೋಲೆಯ ಹಾಕಿ ||ಮಿಂಚುವ ಧನ - ಪುತ್ರ ದಾರೇಷಣಂಗಳವಂಚಿಸಿ ಕವಲು ದಾರಿಯ ಬಿಟ್ಟು ಮಾರ್ಗದಿ 1ಕಾಮವ ಖಂಡಿಸಿ ದ್ರೋಹವ ದಂಡಿಸಿನಾಮರೂಪ ಕರ್ಮಂಗಳ ನಿಂದಿಸಿ ||ತಾಮಸಕರ್ಮನಡತೆಯ ತಗ್ಗಿಸಿ ನಿರ್ನಾಮ ಮಾಡಿ ಮದ-ಮತ್ಸರಂಗಳನೀಗಿ2ಅಷ್ಟಭೋಗಂಗಳ ನಷ್ಟಂಗಳ ಮಾಡಿಅಷ್ಟೈಶ್ಚರ್ಯವ ಮಟ್ಟು ಮಾಡಿ ||ಅಷ್ಟ ಪ್ರಕೃತಿಗಳ ಕುಟ್ಟಿ ಕೆಡಕಿ ಬಹಳನಷ್ಟತುಷ್ಟಿಗಳಲ್ಲಿ ದೃಷ್ಟಿಯೇನಿಲ್ಲದೆ 3ಸ್ಥೂಲ ಸೂಕ್ಷ್ಮ ಕಾರಣ ದೇಹಂಗಳನೆಲ್ಲಬೀಳುಗೆಡಹಿ ಪಂಚಭೂತಂಗಳ ||ಪಾಳು ಮಾಡಿ ಪಂಚ ಪಂಚ ಇಂದ್ರಿಯಗಳಕೋಳಕೆ ತಗುಲಿಸಿ ಕೊನಬುಗಾರನಾಗಿ 4ಹೊಳೆವ ಪ್ರಪಂಚದ ಬಲೆಯ ಬೀಸಿ ಸಂಗ-ಡಲೆ ಸಾಗಿ ಬರುತಿಹ ದಾರಿಯೊಳು ||ಒಲಿದು ಮುಕ್ತಿಯನೀವ ಪುರಂದರವಿಠಲನುಬಲವನಿತ್ತುದರಿಂದೆ ನಾನು ನೀನೆನ್ನದೆ 5
--------------
ಪುರಂದರದಾಸರು
ಬಂದೆಯಾ ಬಾರೊ ಗೋಪಾಲ ಕೃಷ್ಣಬಂದೆಯಾ ಬಾರೊ ಪ.ಇಲ್ಲಿಯ ಗೊಲ್ಲತೇರೆಲ್ಲರುಬಲ್ಲಿದಕಾಮುಕ ನಲ್ಲೇರುಫುಲ್ಲಲೋಚನ ನಿನ್ನ ಮುದ್ದಿನ ಮೊಗವಮೆಲ್ಲನೆ ಚುಂಬಿಸಿ ಬಿಡರೊ ಮಗುವೆ 1ಚಿಕ್ಕವನೆಂದಾಡಿಸಿ ನಿನ್ನಚಕ್ಕಂದಿಲಿ ಬಾಡಿಸಿ ಚಿನ್ನಸಕ್ಕರೆ ಮಾತಲಿ ಬಿಗಿದಪ್ಪುವರೊಕಕ್ಕಸಕುಚದಂಗನೆ ಗೋಪಿಯರೊ 2ಇರುಳ್ಹಗಲೆನ್ನ ಕಂದನ್ನಮರುಳಿಕ್ಕುವರೆಂದಂಜುವೆ ನಾತರಳನ ಕಾಲಿಂಗೆರಗುವೆ ನೋಡೋತರಳೇರೊಡಗೂಡಾಡಲಿ ಬೇಡೊ 3ನಿಲ್ಲದೆ ನಿನ್ನ ಬರಮಾಡುವರೊಚೆಲ್ವಹ ಹಣ್ಣುಗಳ ನೀಡುವರೊಒಳ್ಳೆ ನಾರೇರನುದಿನ ನಿನ್ನಬುಲ್ಲಿ ಬೆಲ್ಲಕೆ ಮನಸೋತಿಹರಣ್ಣ 4ವಿಗಡೇರ ದೃಷ್ಟ್ಯಾಗಲೆತಗಲಿದವೈ ನಿನ್ನ ಮೈಯಲಿಅಗಲದಿರೆನ್ನ ಪ್ರಸನ್ನವೆಂಕಟನಗಪತಿ ಬಡವರ ಧನವೆ ಕೃಷ್ಣ 5
--------------
ಪ್ರಸನ್ನವೆಂಕಟದಾಸರು
ಬಂದ್ಯಾ ವಿಠಲಇಂದುಬಡವನಲ್ಲಿವೃಂದಾವನದಲ್ಲಿ ಗೋವೃಂದಗಳ ಕಾಯಿದವನೆಸುಳಿಗುರುಳು ಮೇಲೆ ಅರಳೆಲೆಯು ಸಿರಿಕಿರೀಟಕೊರಳಲ್ಲಿ ಸರಿಗೆ ಸರಪಳಿ ಪಚ್ಚೆಪದಕವುಮುಂಗಯ್ಯ ಕಡಗ ಸರಪಳಿ ತೋಳಭಾಪುರಿಮಾಳಿಗೆ ಶ್ರೀನಿವಾಸಾರ್ಯರ ಮನೆಯಿಂದಈಸು ಬಗೆ ಪೂಜೆಯು ಎನ್ನಿಂದಲಾಗದು
--------------
ಗೋಪಾಲದಾಸರು
ಬರಗಾಲವಲ್ಲವಿದು ಬಳಲದಿರಿಧ್ಯಾನಪ್ರಿಯವು ಆಗೆ ಧನ ಬ್ಯಾರೆ ಪ್ರಿಯನಲ್ಲಅಗ್ಗವಾದಾಗಲಿ ಮುಗ್ಗಿ ಬೆಳುವರೆಮಾರುವಧಾರಣೆಯು ಏರಿ ಇಳುವುದಕೆವರಣ ಆಶ್ರಮಗಳ ಮರಿಯಾದಿಗಳು ತಪ್ಪಿಜ್ಞಾನ ಬರಗಾಲವು ಬಿದ್ದದೆ ಜನಕೆಲ್ಲಪಾಲನೆಯ ಕಾಲವಿದು ಸಂಹಾರ ಕಾಲಲ್ಲಿಹರಿಯ ಮರದಿಪ್ಪುದೆ ಬರಗಾಲ ಬರಗಾಲ
--------------
ಗೋಪಾಲದಾಸರು
ಬಲ್ಲವನಾದರೆ ಈ ತಳ್ಳಿಬೇಡ |ಅಲ್ಲದಪಥಇದರಾಸೆಯ ಬಿಡು ನೀನುಪ.ಸರ್ಪನ ಪಣೆಯೊಳು ಜೇನು ತುಪ್ಪವ ಕಂಡು |ಅಪ್ಪನೆ ತಾರೆಂದು ಅಳುತಿರಲು ||ತುಪ್ಪದ ಸವಿಯನು ಜನರುಂಡುತೀರಲು |ಮುಪ್ಪಾಗಿ ಇರುವುದ ಕಂಡು ಮೂದಲಿಸುವ 1ನಂಬಿದ ಮನುಜರ ಹಂಬಲ ಮರೆವುದು |ಡೊಂಬಿಯವರು ಕಂಡು ತಡೆಯಲಾಗಿ ||ಕುಂಭದ ರೊಕ್ಕದ ಲಂಚವನಿತ್ತಲ್ಲಿ |ಅಂಬರವನು ಕಂಡು ನಗುತಿಪ್ಪ ಮನುಜನ 2ಅಂಬರವಡಗಿಯೆಕುಂಭಿನಿ ಜಾರಿಯೆ |ನಂಬಿದ ಮನುಜರು ನಡೆವಡೆಯೆ ||ಕುಂಭದ ನೀರನು ಚೆಲ್ಲುತ ಮಗುಳಲ್ಲಿಕಂಬದ ಹಾಗೆಯೆ ನಿಂತಿಹ ನರನು 3ಇಟ್ಟಿಹ ಬಾಗಿಲ ಕಾಣದೆ ತಾ ಬಂದು |ಹೊಟ್ಟೆಯ ಬಗಿದಲ್ಲಿ ಹೊರವಂಟ ವೇಳೆ ||ಕಟ್ಟಿದ್ದು ಕರಗಿಯೆ ಸೆಟ್ಟೆಲೆ ಒಣಗಿಯೆ |ದುಷ್ಟನೊಬ್ಬನು ಬಂದು ನಿಂತಿಹನು 4ಕಡಹದ ಪಲ್ಲಕ್ಕಿ ಬೆಡಗನು ಕಾಣುತ |ಅಡವಿಯಮೃಗ ಬಂದು ಕುಳಿತಿರ್ದುದ ||ಒಡನೆ ಕಟ್ಟಿದ ವಾಹಕರು ಹದಿನಾರು ಮಂದಿ |ಕಡಮೆಯ ಸಂಬಳ ತಡವಿಡುವವರನು 5ಅಕ್ಕಿಯ ರಾಶಿಯು ತೀರಲು ಕೊಳಗವು |ಬೆಕ್ಕಸ ಬೆರಗಾಗಿ ಕುಳಿತಿಪ್ಪದು ||ಬಿಕ್ಕಿದ ಅಕ್ಕಿದ ಹಕ್ಕಿಯು ಹಕ್ಕಿಯೆ |ಗಕ್ಕನೆ ಹಾರವ ಪಕ್ಷಿಯ ನೋಡುತ 6ಇರುತಿರೆ ಗಣಿತದಿರವಿಶಶಿ ಒಂದಾಗಿ |ಧರೆಯೊಳು ಸಾವಿರ ಎಲೆ ಬೀಳ್ವುದು ||ಎರವಿನಾಭರಣವ ಅವರವರೊಯ್ಯಲು |ಪುರಂದರವಿಠಲನ ಮೊರೆಬೀಳು ಕಂಡೆಯ 7
--------------
ಪುರಂದರದಾಸರು
ಬಲ್ಲವರು ಮೊರೆ ಹೋಗುವರೆ ನೀನಾವಬಲ್ಲಿದನೆಂದೆನ್ನನುಪೇಕ್ಷಿಪೆ ರಂಗ ಪ.ಸಲ್ಲದವನು ಸಾಲಗೂಳಿ ನೀ ಎಂದೆನ್ನಕ್ಷುಲ್ಲನ ಮಾಡಿ ನೀಕರಿಸದಿರೊಒಳ್ಳೆ ಸತ್ಯವ್ರತರ ಋಣ ನುಂಗಿ ಸೆರೆಸಿಕ್ಕಿಕಲ್ಹೊತ್ತು ಪುಲ್ಗಚ್ಚಿ ಹಲ್ದೆರೆದೆ ನೀನು 1ಬೇಡಿ ತಿರಿದು ಉಂಬ ಬಡವ ಛೀ ಸಾರೆಂದೀಡಾಡುವುದುಚಿತೆ ನೀ ನೃಪನೊಂಚಿಸಿಬೇಡಿ ಮನೆಯ ಕೊಂಡೆ ನೀರಿನರಸನಲ್ಲಿರೂಢಿಯ ಗೂಡ ಬಿಟ್ಟೋಡಿದೆತುಡುಗ2ನಾ ದೋಷಪೂರ್ಣನೆನುತ ಮನ ಬಲ್ಲದುನೀ ದೋಷದೂರನುಶ್ರುತಿಬಲ್ಲವುಭೂದೋಷಹರ ಪ್ರಸನ್ವೆಂಕಟೇಶ ತಿಳಿಯದೆನಾ ದಾಸನಾದೆ ನಾಮಸ್ವಾದಕ್ಹುಚ್ಚಾದೆ 3
--------------
ಪ್ರಸನ್ನವೆಂಕಟದಾಸರು
ಬಲ್ಲಿದ ನೀನೆಂದು ಬಡವರ ಬಾಯನು ಬಡಿಯದಿರೆಚ್ಚರಿಕೆ<?xmಟ veಡಿsioಟಿ='1.0' eಟಿಛಿoಜiಟಿg='uಣಜಿ-8'?>ಎಳ್ಳಷ್ಟು ತಪ್ಪಿದರೆ ಯಮನವರೆಳೆದೊಯ್ವರು ಎಚ್ಚರಿಕೆಚ್ಚರಿಕೆ ಪ.ಮಾಡು ದಾನ - ಧರ್ಮಪರ ಉಪಕಾರವ ಮರೆಯದಿರೆಚ್ಚರಿಕೆಕೇಡ ನೆಣಿಸಬೇಡ ನಂಬಿದ ಠಾವಿಗೆ ಕೆಡುವೆ ಮತ್ತೆಚ್ಚರಿಕೆಮೂಢರ ಒಡನಾಡಿ ಮುಂದರಿಯದೆ ನೀನು ಮುನಿಯದಿರೆಚ್ಚರಿಕೆನೋಡಿ ನಡೆವ ಸುಗುಣರ ನೋಡಿ ನಡೆಯೊನೀ ನಟನೆ ಬೇಡಚ್ಚರಿಕೆ 1ಹೊನ್ನ - ಹೆಣ್ಣು - ಮಣ್ಣು ತನ್ನನೆಅಣಕಿಸಿ ಹೋಹುವು ಎಚ್ಚರಿಕೆಮುನ್ನ ಮಾಡಿದ ಫಲದಿಂದಲಿ ಬಂದೆಯೊ ಮುಂದೆ ಇನ್ನಚ್ಚರಿಕೆಚೆನ್ನಾಗಿ ತಾ ಬಾಳಿ ಬದುಕುವೆನೆಂತೆಂಬ ಚೇಷ್ಟೆ ಬೇಡೆಚ್ಚರಿಕೆಬೆನ್ನನು ಬಡಿಯದೆ ಬಿಡುವರೆ ಯಮನವರು ಮರೆಯದಿರೆಚ್ಚರಿಕೆ 2ಬಾಳಿ ಬದುಕಿ ಸಿರಿವಾಹಗೆ ಟವಳಿಯಬಣಗು ಬೇಡದೆಚ್ಚರಿಕೆಹಾಳು ಬದುಕಿಗಾಗಿ ಹಲವರ ಕೂಡಣ ಹಗಣ ಬೇಡಚ್ಚರಿಕೆಕಾಲನವರು ಬಂದುಆವಾಗ ಕರೆವರೊ ಕಾಣದು ಎಚ್ಚರಿಕೆಶ್ರೀಲೋಲ ಪುರಂದರವಿಠಲರಾಯನ ಮರೆಯದಿರೆಚ್ಚರಿಕೆ 3
--------------
ಪುರಂದರದಾಸರು
ಬಲ್ಲಿದಗುರುಗಳಿಗೆಎಲ್ಲ ಹಿರಿಯರಿಗೆ ಎರಗಿಬಲ್ಲಷ್ಟು ತತ್ವ ರಚಿಸಿದೆಕೋಲಬಲ್ಲಷ್ಟು ತತ್ವ ರಚಿಸಿದೆಲಕ್ಷ್ಮಿವಲ್ಲಭನಿದಕೆ ಒಲಿಯಲಿಕೋಲ1ಪತಿಗಳ ದಯದಿ ಮಾತುಪತಿರಚಿಸಿದಶ್ರೀಪತಿ ಗುಣನಿಧಿ ಕವನವಕೋಲಶ್ರೀಪತಿ ಗುಣನಿಧಿ ಕವನವು ವಿಸ್ತರಕೆಮಧ್ವ ಮತದ ಜನತಿದ್ದಿ ಕೊಡಬಹುದುಕೋಲ2ರಾಮಕೃಷ್ಣ ದೈವರು ಪ್ರೇಮದ ನುಡಿಗಳುನೇಮ ನಿಷ್ಠೆಯಲೆ ಶ್ರವಣವೆಕೋಲನೇಮ ನಿಷ್ಠಯಲಿ ಶ್ರವಣವ ಮಾಡಲುನಮ್ಮ ಕಾಮನ ಪಿತನುಕೈಹಿಡಿವಕೋಲ3ಮುದ್ದುರಂಗನ ಕಥೆಬುದ್ಧಿ ಸಾಲದೆ ಅಪದ್ಧವೆ ಇರಲಿಅತಿದಯದಿಕೋಲಅಪದ್ಧವೆ ಇರಲಿ ಅತಿದಯದಿ ಪಾಂಡುರಂಗವಿದ್ವಜ್ಜನ ವಂದ್ಯ ಕೈಕೊಳ್ಳೊಕೋಲ4ಅರಸಿ ರುಕ್ಮಿಣಿ ಭಾವೆಗೆಸರಸಲ್ಲಾಡಿದ ಮಾತುಹರುಷ ಮನದಿಂದ ಶ್ರವಣವೆಕೋಲಹರುಷ ಮನದಿಂದಶ್ರವಣ ಮಾಡಲುನಮ್ಮ ನರಸಿಂಹನಿದಕೆ ಒಲಿವನುಕೋಲ5ಹರದಿರುಕ್ಮಿಣಿ ಭಾಮೆತಿರುಗಿಸಿದ ಮುಯ್ಯವಆದರದಿಂದ ಕೇಳಿದವರಿಗೆಕೋಲಆದರದಿಂದ ಕೇಳಿದವರಿಗೆ ಶ್ರೀಕೃಷ್ಣಪರಮಪದವಿಯನೆ ಕೊಡುವನುಕೋಲ6ಮಚ್ಛ ನೇತ್ರಿಯರು ತಂದಅಚ್ಛಾದ ಮುಯ್ಯವಸ್ವಚ್ಛಮನದಿಂದ ಶ್ರವಣವÀಕೋಲಸ್ವಚ್ಛಮನದಿಂದ ಶ್ರವಣವ ಮಾಡಲುನಮ್ಮ ಅಚ್ಯುತನಿದಕೆ ಒಲಿವನುಕೋಲ7ಮಂದಗಮನೆಯರು ತಂದಚಂದದ ಮುಯ್ಯವಆನಂದ ಮನದಿಂದ ಶ್ರವಣವಕೋಲಆನಂದ ಮನದಿಂದ ಶ್ರವಣವ ಮಾಡಲುನಮ್ಮ ಅನಂತ ನಿದಕೆ ಒಲಿವನುಕೋಲ8ಕಾಂತೆ ರುಕ್ಮಿಣಿ ಭಾಮೆಗೆಪಂಥಲಾಡಿದ ಮಾತುಸಂತೋಷದಿಂದ ಶ್ರವಣವಕೋಲಸಂತೋಷದಿಂದ ಶ್ರವಣವ ಮಾಡಲು ಭಾಗ್ಯಸಂತಾನ ಕೊಡುವ ರಮಿ ಅರಸುಕೋಲ9
--------------
ಗಲಗಲಿಅವ್ವನವರು
ಬಹಳ ಸಂತೋಷಿ ಭಕ್ತರು ಬಹಳ ಸಂತೋಷಿಬಹಳ ಸಂತೋಷಿ ಬಗಳ ಬಹಳ ಸಂತೋಷಿಪಕಾಂತಿಯೆಂಬ ಸತಿಯು ದೊರಕಲಿ ಬಹಳ ಸಂತೋಷಿಕಾಂತಿ ಎಂಬ ಕುಲಕುಡಿಬೆಳೆಯಲಿ ಬಹಳ ಸಂತೋಷಿ1ಕ್ಷಮೆಯು ಎಂಬ ಕ್ಷೇಮವು ಬೆಳೆಯಲಿ ಬಹಳ ಸಂತೋಷಿದಮೆಯು ಎಂಬ ದನಕರು ಹೆಚ್ಚಲಿ ಬಹಳ ಸಂತೋಷಿ2ಆತ್ಮ ಸಂತೋಷದಾ ಅಂಗಡಿ ನಡೆಯಲಿ ಬಹಳ ಸಂತೋಷಿಸ್ವಾತ್ಮಾನುಸುಖ ಸಾಮ್ರಾಜ್ಯ ದೊರೆಯಲಿ ಬಹಳ ಸಂತೋಷಿ3ಭೂತ ದಯೆಯ ಅಂಗಿಯ ತೊಡಿರಿ ಬಹಳ ಸಂತೋಷಿಖ್ಯಾತಿ ಎಂಬ ಕುಪ್ಪಸ ಹಾಕಿರಿ ಬಹಳ ಸಂತೋಷಿ4ಸೂಸಲಿ ಚಿದಾನಂದ ಕೃಪೆಯಿಂದಿಗೆ ಬಹಳ ಸಂತೋಷಿವಾಸವಮಾಡಲಿ ನಮ್ಮಲ್ಲಿ ಬಗಳೆ ಬಹಳ ಸಂತೋಷಿ5
--------------
ಚಿದಾನಂದ ಅವಧೂತರು