ಒಟ್ಟು 7928 ಕಡೆಗಳಲ್ಲಿ , 135 ದಾಸರು , 4955 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶ್ರೀನಿವಾಸ ಗುರು ಗುಣಾಧೀಶ | ಪಾಲಿಸೊ ಭಕ್ತರ ತೋಷ ನಾ ನಿನ್ನ ದಾಸ ಪ ಏನಾದರು ಎನ್ನ ಹೀನತೆ ಎಣಿಸದೇಸಾನುರಾಗದಿ ನಿನ್ನ ಅಧೀನದೊಳಗಿರುವುದು ಅ.ಪ. ನಿತ್ಯ 1 ಅಗ್ನಿಹೋತ್ರವ ನಡೆಸುವ ತೆರದಿ | ಆಗ್ಯನ್ನನು ಮುದದಿಸುಜ್ಞಾನಿ ನೀನೇ ಕರಗಳ ಪಿಡಿದೀ | ಅಜ್ಞಾನವ ಬಿಡಿಸೀವಿಘ್ನವಗೊಳಿಸದೆ ಸರ್ವಜ್ಞ ಪಾದದೀಮಗ್ನನ ಮಾಡು ಪ್ರಾಜ್ಞ ಶಿರೋಮಣಿ2 ನಿನ್ನ ನಂಬಿದ ಪಾಮರ ನಾನು | ಪಾವನ್ನ ನೀನುಎನ್ನ ಗುಣ ದೋಷಗಳನ್ನು | ಮನ್ನಿಸುವಾದೇನು ಅನ್ನಂತ ಪಾಪಿ ನಾನು ನೀನಾದರೊ ದಯವನ್ನು ಮಾಡುನಿನ್ನ ಪೊಂದಿದೆ ಮಹಾನುಭಾವ 3 ಪಾತಕಿ ನಾನಾದರೂ ನಿನ್ನಚರಣಕ್ಕೆ ಸುತ್ತಿದ ಬಿರಿದು ಬಿಡುವುದುಂಟೇ4 ಅನ್ಯರಿಗಾನು ಎರಗುವನಲ್ಲ | ನೀ ಬಲ್ಲಿ ಎಲ್ಲಮನ್ನಿಸಿ ದಯದಿ ಎನ್ನಯ ಸೊಲ್ಲ ಶಿರಿ ಲ-ಕ್ಷ್ಮೀ ನಲ್ಲ ಎನ್ನ ಪಿಡಿಯೊ ಮೋ-ಹನ್ನ ವಿಠಲನ್ನ ತೋರಿ ಪಾವನನೆನಿಸುವುದು 5
--------------
ಮೋಹನದಾಸರು
ಶ್ರೀನಿವಾಸ ಜಗನ್ನಿವಾಸ ಪ ದೀನ ರಕ್ಷಕ ನಿಖಿಲ ಮಾನವರಮಾನಾಭಿಮಾನ ದೊಡೆಯನು ನೀನೇಯಲ್ಲದಿಲ್ಲಾ ಅ.ಪ. ನಕ್ರಮುಖದಲ್ಲಿ ಸಿಕ್ಕಿ ದುಃಖಿಸುವ ಕರಿರಾಜ ಚಕ್ರವರ್ತಿಯು ಶರಣು ಹೊಕ್ಕೆನನಲು ಚಕ್ರವನು ಪಿಡಿದು ನೀನಕ್ಕರೆಯೊಳೈತಂದು ನಕ್ರವದನವಸೀಳಿ ರಕ್ಷಿಸಿದೆ ಗಜವಾ-ದೇವ 1 ಹಿಂದೆ ನಾನಾನ್ನಗಿರಿಯಿಂದ ಬಹದಾರಿಯೊಳು ಸಂದುಗೆಳೀಚಲು ಭಂಡಿ ಸಂಜೆಯೊಳಗೆ ಮುಂದಾಗ ಜೊತೆಯೊಳಗೆ ಬಂದು ಜನಕೆಲ್ಲಿನೀ ಬಂದು ಬೆಳಕನು ತೋರಿ ಮಂದೆಗೂಡಿದೆ ಕೃಷ್ಣಾ 2 ಇಂದು ನಿಜ ಸತಿಯುನೊಂದಳುಬ್ಬಸರೋಗದಿಂದ ಗಾಳಿಯದೀಪದಂದಮಾಗಿ/ ನಂದಿಪೋಗದ ಮುನ್ನ ಬಂದು ನೀಮರೆಯಾಗು ಎಂದು ಮೊರೆಯಿಡಲೀಗ ಬಂದು ಸಲಹಿದೆ ತಂದೆ 3 ತುರುಗಾಯ್ವರಸುಗಳನು ಮರಳಿಪಡೆದೆ ನರಪೌತ್ರನನು ಬಾಣದುರಿಯಿಂದ ರಕ್ಷಿಸಿದೆ ಸರಿಯಾರು ನಿನಗೆ ಸುರನರಭುಜಂಗರಲ್ಲಿ4 ತರಳಧ್ರುವ ಪ್ರಹ್ಲಾದ ತರುಣಿ ಪಾಂಚಾಲಿ ಕುರು ವರವಿಭೀಷಣ ತಾಪಸರನುಪೊರೆದೆ ಶರಣರನು ಪಾಲಿಸುವ ಬಿರುದು ಧರಿಸಿಹ ವ್ಯಾಘ್ರಗಿರಿಯೊಳಗೆ ನೆಲಸಿರುವ ವರದ ವಿಠಲ ರಾಯ 5
--------------
ಸರಗೂರು ವೆಂಕಟವರದಾರ್ಯರು
ಶ್ರೀನಿವಾಸ ನಿನಗೆ ನಾ ಮಣಿದು ಫಲವೇನೊ ಕಾಣಿಸದೊ ನಿನಗೆನ್ನ ಕಷ್ಟ ಪ. ಜಾಣತನವಿದನೆಲ್ಲಿ ಮಾನನಿಧಿ ಕಲಿತೆಯೊ ಗಾನವಿಲೋಲ ಸ್ವಾಮಿ ಪ್ರೇಮಿ ಅ.ಪ. ಎಷ್ಟು ಕೂಗಲು ದಯವು ಪುಟ್ಟಲಿಲ್ಲವೊ ನಿನಗೆ ಕೃಷ್ಣಮೂರುತಿಯೆ ಕೇಳೊ ಕಷ್ಟಪಡಿಸುವುದೀಗ ದಿಟ್ಟತನವೇ ನಿನಗೆ ಶ್ರೇಷ್ಠ ನೀನೆನಿಸಿಕೊಂಡು ಪಟ್ಟವ್ಯಾತಕೆ ನಿನಗೆ ಮೂರು ಲೋಕದ ರಾಜ್ಯ ಬಿಟ್ಟು ಬಿಡು ನೀನೀಗಲೆ ದೃಷ್ಟಿಯಿಂದಲಿ ನೋಡಿ ನಿನ್ನ ತೋರೆಂದೆನಲು ಸೊಟ್ಟ ತಿರುಹಿರುವೆ ಮುಖವ ದೇವ 1 ತೋರೊ ಮೋರೆಯನೆನಲು ನೀರ ಪೋಗುವೆ ಬೆನ್ನು ಭಾರ ಪೊತ್ತು ಕೋರೆ ತೆರೆವೆ ಘೋರ ರೂಪವ ತೋರಿ ಈ ರೀತಿ ಬೆದರಿಸುವೆ ದಾರಿ ಎನಗಿನ್ನಾವುದೊ ನಾರಿಯನೆ ಪೆತ್ತು ನೀ ನಾರಿಯನೆ ಕೊಂದು ನಿನ್ನ ನಾರಿ ಚೋರನ ವಧಿಸಿದೆ ನಾರೆರೋಸ್ತ್ರವ ಕದ್ದು ನಾರಿಯರ ವ್ರತ ಕೆಡಿಸಿ ಏರಿ ಓಡಿದೆ ಕುದುರೆಯ ಜೀಯಾ 2 ಈ ಪರಿಗೈದರೆ ಕಾಪಾಡುವವರ್ಯಾರೊ ಭೂಪರೈವರ ಪೊರೆದನೆ ತಾಪಪಡುವುದು ನಿನಗೆ ತೋರ್ಪುದಿಲ್ಲವೆ ದೇವ ಪಾಪಿ ಎಂದೆನಬೇಡವೊ ನೀ ಪಾರುಗೊಳಿಸಬೇಕೀಪರಿಯ ಬವಣೆಗಳ ಶ್ರೀಪತಿಯೆ ಶ್ರೀನಿವಾಸ ಗೋಪಾಲಕೃಷ್ಣವಿಠ್ಠಲನೆ ನೀನಲ್ಲದೆಕಾಪಾಡುವವರನರಿಯೆ ದೊರೆಯೆ 3
--------------
ಅಂಬಾಬಾಯಿ
ಶ್ರೀನಿವಾಸ ನಿನ್ನ ಕರುಣಾ ಏನೆಂದು ಸ್ತುತಿಪೆ ಪ. ಮಾನವರೊಳಗತಿ ಹೀನಬುದ್ಧಿಯಲಿ ಏನೊಂದು ಮಾರ್ಗ ಕಾಣದೆ ಬಹು ಬಳಲಿ ನಾನಾ ಚಿಂತೆಗಳಿಂದ ಧ್ಯಾನಿಪ ಸಮಯದಿ ತಾನಾಗಿ ಕರುಣಿಸಿ ಮಾನ ಪಾಲಿಸಿದಿ 1 ಹುಣಾರುವೆನ್ನನು ನಾನಾ ತರದೊಳು ಮಾನಹಾನಿಯ ಮಾಡಿ ಮರಳಿ ಬಾಧಿಸಲು ತಾನೆಂದು ಪೇಳುವರಿಲ್ಲದಂತಿರಲು ನೀನೆ ಬಂದೊದಗಿ ರಕ್ಷಿಸಿದೆ ಕೃಪಾಳು 2 ತದನಂತರದಲಿ ಕಷ್ಟದ ಬಾಧೆ ಸಹಿಸದೆ ಮದರಾಶಿಯೆಂಬ ಪಟ್ಟಣಕೆ ನಾ ಸರಿದೆ ಸದರವಲ್ಲೆಂದು ತಿಳಿದು ನಿನಗೊದರೆ ವಿಧಿಪಿತ ನೀನಲ್ಯು ಪ್ರೇರಿಸಿ ಪೊರೆದೆ 3 ಸಿರಿವರ ನಿನ್ನಯ ಪರಮ ಮಂಗಳಮೂರ್ತಿ ಹರುಷದಿಂದಲಿ ನೋಡಿ ಬರಲು ನಾನಿಲ್ಲಿ ದೊರೆತನದಲಿ ಮಾನಿತಪದಲ್ಲಿ ಇರಿಸಿ ನಿರಂತರ ಕಾವುದ ಬಲ್ಲಿ4 ಶರಣಾಗತ ರಕ್ಷಾಕರನೆ ಮಂದಿರದ ವರನಾಗಿ ಸಲಹುವ ದೊರೆ ನಿನ್ನ ಬಿರುದ ತರಳ ಬುದ್ಧಿಯೊಳೆಂತು ವರ್ಣಿಪೆ ವರದ ಕರುಣಾ ಸಾಗರ ವೆಂಕಟಾದ್ರಿಯೊಳ್ಮೆರೆದ 5
--------------
ತುಪಾಕಿ ವೆಂಕಟರಮಣಾಚಾರ್ಯ
ಶ್ರೀನಿವಾಸ ನಿನ್ನ ನಂಬಿದ ದಾಸನ ಎನ್ನನು ಕಾಯೋ ಶ್ರೀವಾಸುಕಿಶಯನ ಪ ರೂಪರಹಿತ ಬಹುರೂಪ ಧರಿಸಿಹ ಶ್ರೀಪತಿ ಎನ್ನನು ನೀಪರಿಪಾಲಿಸು 1 ಕಾಲರೂಪ ಬಹುಲೀಲೆಯ ತೋರುವ ಮೂಲಪುರುಷ ಸುರಪಾಲಕ ಶ್ರೀಹರಿ 2 ಶಕ್ತಿಗಳನು ಅವ್ಯಕ್ತದೊಳಿರಿಸಿ ಸ ಮಸ್ತ ವಸ್ತುವ ಸುವ್ಯಕ್ತ ಪಡಿಸಿದ 3 ಕಲ್ಪಕೋಟಿ ನಿನಗಲ್ಪಕಾಲ ಪರಿ ಕಲ್ಪಿತ ಸುರನರ ಕಲ್ಪಭೋಜ ಹರಿ 4 ಖಂಡಪರಶು ಅಖಂಡಲಾದಿ ಸುರ ಪುಂಡರೀಕ ಪದ 5 ಮಂದರಧರ ಗೋವಿಂದ ಮುಕುಂದ ಸ ನಂದನಾದಿ ಮುನಿಬೃಂದ ಸುವಂದಿತ 6 ಸಾರಸುಗುಣ ಪರಿವಾರ ಸಜ್ಜನಾಧಾರ ಧೀರವರದವಿಠಲ ಹರಿ 7
--------------
ವೆಂಕಟವರದಾರ್ಯರು
ಶ್ರೀನಿವಾಸ ನಿನ್ನ ನಂಬಿದ ದಾಸನ ಶ್ರೀನಿವಾಸುಕಿಶಯ ಕಾಯೋ ಯನ್ನನು ಪ ನೀಪರಿಪಾಲಿಸು 1 ಮೂಲಪುರುಷಸುರ ಪಾಲಕ ಶ್ರೀಹರಿ 2 ಶಕ್ತಿಗಳನು ಅವ್ಯಕ್ತದೊಳಿರಿಸಿ ಸಮಸ್ತವಸ್ತುವ ಸುವ್ಯಕ್ತಪಡಿಸಿದ 3 ಕಲ್ಪಕೋಟಿ ನಿನಗಲ್ಪಕಾಲ ಪರಿಕಲ್ಪಿತಸುರನರ ಕಲ್ಪಭೋಜಹರಿ4 ಪುಂಡರೀಕಪದ 5 ಮಂದರಧರ ಗೋವಿಂದ ಮುಕುಂದ ಸನಂದನಾದಿ- ಮುನಿಬೃಂದಸುವಂದಿತ 6 ಸಾರಸುಗುಣ ಪರಿವಾರ ಸಜ್ಜನಾ ಧಾರಧೀರವರದ ವಿಠಲಹರಿ7
--------------
ಸರಗೂರು ವೆಂಕಟವರದಾರ್ಯರು
ಶ್ರೀನಿವಾಸ ನಿನ್ನ ಪಾದಧ್ಯಾನವ ಪಾಲಿಸಿ ಎನ್ನ ಮಾನಸಾನಂದಿಸೋ ಶತಭಾನುತೇಜನೆ ಪ ಸಾನುರಾಗದಿಂದ ನಿನ್ನ ಧ್ಯಾನಿಪಜನರ ಭವ ಕಾನನಾದಹನ ಚಿತ್ರಭಾನು ದನುಜಾರಿಹರಿ ಅ.ಪ ಇಂದಿರಾರಮಣ ನಿನ್ನ ಸುಂದರ ಚರಣಕೆ ನಾಂ ವಂದನೆಯ ಮಾಡುವೆನಯ್ಯಾ ಇಂದುವದನಾ ಇಂದುಧರ ನುತ ಮುಚುಕುಂದವರದನೆ ಗುಣ ಬಂಧುರಾ ಶ್ರೀ ಪುಲಿಗಿರಿ ಮಂದಿರ ಮಂದರಧರ1 ಇಷ್ಟುದಿನ ನಿನ್ನ ಮನಮುಟ್ಟಿ ಭಜಿಸದೆ ಬಲು ದುಷ್ಟಮನುಜರ ಕೂಡಿ ಭ್ರಷ್ಟನಾದೆನು ಇಷ್ಟ ಫಲದಾಯಕ ತ್ರಿವಿಷ್ಣಪಾದಿಪಾನುಬವ್ಯ ಅಷ್ಟಸಿದ್ಧಿಪ್ರದ ನಿನ್ನ ಗಟ್ಟಿಯಾಗಿ ನಂಬಿದೆನು 2 ಲೋಕಪತಿ ಪಿನಾಕೆಯನ್ನು ವೃಕನೆಂಬ ಭೀಕರಾಸುರನು ಉರಿಹಸ್ತ ಬೇಡಲು ಆಕಪಾಲಿಯಿತ್ತು ಅವಿವೇಕದಿಂದ ಲೋಡುತಿರೆ ಲೋಕ ಮೋಹಿನಿಯ ರೂಪ ಸ್ವೀಕರಿಸಿ ಶಿವನಕಾಯ್ದೆ3 ಆಡಿಸೋ ನಿನ್ನವರೊಳು ಪಾಡಿಸೋ ನಿನ್ನಯ ಕೀರ್ತಿ ಮೂರ್ತಿ ಬೇಡಿಸದಿರು ಆಡಿಸದೆ ಭವವೆಂಬ ಕಾಡಿನೋಳ್ಕಟಾಕ್ಷದಿಂದ ನೋಡಿ ನಿನ್ನ ನಾಡಿನೊಳಗಾಡಿಸೋ ಮುರಾರಿಹರಿ4 ವಾಸುಕಿಶಯನ ಪೀತವಸನ ದಿವ್ಯಭೂಷಣ ವಿ ಭೂಷಿತ ಲಲಿತಶುಭ ವೇಷವಿಪುಲ ಭಾಸಮಾನ ವ್ಯಾಘ್ರಶೈಲಾವಾಸ ಶ್ರೀನಿವಾಸ ಭಕ್ತ ಪೋಷಣ ದುರಿತಗಣ ಶೋಷಣ ಶ್ರೀ ವರದವಿಠಲ5
--------------
ವೆಂಕಟವರದಾರ್ಯರು
ಶ್ರೀನಿವಾಸ ಪಾಹಿಮಾಂ ಶ್ರೀಯಮನ್ಮನೋರಮಾಂ ಪ ವಿಭಾವನ 1 ಪೂರ್ಣಚಂದ್ರಾನನ ಪುಣ್ಯವೃಕ್ಷಾನನ 2 ಸೇವಕಾನಂದನ ದೇವಕೀನಂದನ 3 ಭಂಜನ 4 ಮಾರಕೋಟಿಸುಂದರ ಶ್ರೀರಮಾ ಮನೋಹರ 5 ದೂರಿತಾಘ ಸಂಕುಲ ದುಷ್ಟಕುಲಾನಲ 6 ಪುಂಡರೀಕ ಲೋಚನ ಚಂಡಪಾಪ ಮೋಚನ 7 ಭವ ಭಯೋತ್ತಾರಣ ಭವ್ಯ ಸುಗುಣ ಪೂರಣ 8 ವ್ಯಾಘ್ರಾದ್ರಿನಾಯಕ ವ್ಯಕ್ತ ಸೌಖ್ಯದಾಯಕ 9 ತವಪದಾಂಭೋರುಹಂ ಭವತು ಹೃತ್ಸುಖಾವಹಂ10 ವರದವಿಠಲ ಶ್ರೀಧರ ಶರಣಜನ ದಯಾಕರ 11
--------------
ವೆಂಕಟವರದಾರ್ಯರು
ಶ್ರೀನಿವಾಸ ಪಾಹಿಮಾಂ-ಶ್ರೀಯಮಯನ್ಮನೋರಮಾಂ ಪ ದೀನಲೋಲ ಕಾಮನ-ಧೀರಮುನಿವಿಭಾವನ 1 ಪೂರ್ಣಚಂದ್ರಾನನ-ಪುಣ್ಯವೃಕ್ಷಕಾನನ 2 ಸೇವಕಾನಂದನ-ದೇವಕೀನಂದನ 3 ಶಂಖಚಕ್ರ ರಂಜನ-ಕಿಂಕರಾರ್ತಿಭಂಜನ 4 ದೂರಕೋಟಿ ಸುಮದರ-ಶ್ರೀರಮಾಮನೋಹರ 5 ದೂರಿತಾಘ ಸಂಕುಲ-ದುಷ್ಟಕುಲಾನಲ 6 ಪುಂಡರೀಕ ಲೋಚನ-ಚಂಡ ಪಾಪಮೋಚನ 7 ಭವ ಭಯೋತ್ತಾರಣ-ಭವ್ಯ ಸುಗುಣ ಪೂರಣ8 ವ್ಯಾಘ್ರಾದ್ರಿ ನಾಯಕ-ವ್ಯಕ್ತ ಸೌಖ್ಯದಾಯಕ 9 ತವಪದಾಂಬೋರುಹಂ ಭವತು ಹೃತ್ಸುಖಾವಹಂ10 ವರದ ವಿಠಲ ಶ್ರೀಧರ-ಶರಣ ಜನ ದಯಾಕರ 11
--------------
ಸರಗೂರು ವೆಂಕಟವರದಾರ್ಯರು
ಶ್ರೀನಿವಾಸ ಪೂರಿಸಭಿಲಾಷ ಪ್ರಾಣ ಪಾಲೇಶ ಏನಿದು ಸಾವಕಾಶ ಪ. ಹಿಂದಿನ ಪ್ರಹ್ಲಾದ ಮೈಥಿಳ ಮತ್ತಜಾಮಿಗಳ ಭಾರತ ಕುಂಡಗೋಳ- ಗಾಂದಿನೀಸುತ ಧ್ರುವ ಪಾರ್ಶದಿ ಅಂಬರೀಷಾದಿ ಭಕ್ತರುಗಳಂತೆ ಎಂದೀ ಶ್ರುತಿ ಪುರಾಣಗಳ ಆದರೆ ನನ್ನನು ಬರಿದೆ ಇದು ರೀತಿಯೆ ನಿನಗೆ1 ಬಂದಡಿಗಡಿ ಇಡುತ ಸಾಮಜವಾಹನ ಬೇಡಿದಭೀಷ್ಟ ನೀಡಿದ ಬಳಿಕಾತನು ನುಡಿದ ಒಂದನಾದರು ಮನಕೆ ಅಭಯವನಿತ್ತು ಪೊರೆದೆ ನಾ ಮಾಡಿದಪರಾಧವು ಅತಿ ಸ್ವಲ್ಪವು ಅದಕೆಣೆಯಾಗದಿರಲು ಪಾಲಿಪರ ಕಾಂಬೆನೆಲ್ಲಿ 2 ಪಾರ್ಥಗೆ ಸಾರಥಿಯೆನಿಸುತ ರಥ ನಡಸುತ ಕುರುಸೇನೆಯೊಳಿರುತ ಗಾಂಗೇಯ ನಗುತ ಶೋಣಿತವ ಹರಿಸಲು ನಿಯಮದ ತೊರಿದೆ ಭಕ್ತವತ್ಸಲತೆಯ ತೋರಿದೆ ಸುಖವಾರಿದ ವೆಂಕಟಾದ್ರಿಯೊಳ್ಮೆರೆದೆ 3
--------------
ತುಪಾಕಿ ವೆಂಕಟರಮಣಾಚಾರ್ಯ
ಶ್ರೀನಿವಾಸ ಶ್ರೀ ವಾಸ ಪ ಭಜಿಸಿದೆ ನಿನ್ನನು, ತ್ಯಜಿಸಿದಿರೆನ್ನನು ಭಜಕಾಮರತರು ಕುಜನ ವಿದೂರ ಅ.ಪ. ತಂದೆ ತಾಯಿನಿಜ ಬಂಧುಸಹೋದರ ನಂದನಾಪ್ತನೀನೆಂದು ನಂಬಿದೆ 1 ನಿನ್ನ ಮರೆತು ಬಹು ಜನ್ಮ ಜನ್ಮದೊಳು ಖಿನ್ನನಾಗಿ ನಿಜವನ್ನೆ ಕಾಣದೆ 2 ಕರುಣದಿಂದ ನಿಜ ಚರಣಸೇವಕರ ಪೊರೆವ ವ್ಯಾಘ್ರಗಿರಿ ವರದವಿಠಲ 3
--------------
ಸರಗೂರು ವೆಂಕಟವರದಾರ್ಯರು
ಶ್ರೀನಿವಾಸ ಸಲಹೋ ನಮ್ಮ ಶ್ರೀನಿಧಾನ ಚರಣನೆ ಪ ಧ್ಯಾನ ನಿರತ ಮೌನಿ ಜನರ ಮಾನಸಾಬ್ಜಹಂಸನೆ ಅ.ಪ ನಕ್ರಮುಖದಿ ಸಿಕ್ಕಿದಿಭನನಕ್ಕಿರಿಂದ ಪೊರೆದನೆ ಚಕ್ರಧರ ತ್ರಿವಿಕ್ರಮಾದಿ ಚಕ್ರಭೋಗಿ ಶಯನನೆ 1 ಬಿಟ್ಟು ನಿನ್ನ ಭ್ರಷ್ಟನಾಗಿ ಕೆಟ್ಟ ಜನ್ಮ ಜನ್ಮದೆ ಹುಟ್ಟಿ ಹುಟ್ಟಿ ಕಷ್ಟಪಟ್ಟಿ ಕೃಷ್ಣ ನಿನ್ನ ನಂಬಿದೆ 2 ಶರಣಜನರ ಪೊರೆವನೆಂಬ ಬಿರುದು ಧರಿಪನಲ್ಲೆಲಾ ಹರಿಣ ಹರಣಧರದೊಳಿರುವ ಕರುಣಿ ವರದ ವಿಠಲ 3
--------------
ವೆಂಕಟವರದಾರ್ಯರು
ಶ್ರೀನಿವಾಸ ಸುಗುಣೈಕ ನಿಧೆ ಶ್ರೀಮಾನಸಹಂಸ ದಯಾಜಲಧೆ ಪ ತೋಯಸನ್ನಿಭಕಾಯ-ಮನೋಜನಿಕಾಯ ಮಾಪಮಧುರಾಲಾಪ ನಿಧಾಯಹೃದಿಧ್ಯಾಯಾಮಿಹರೆ 1 ವಿಗ್ರಹ ಮಖಿಳಶುಭಗ್ರಹಣಂ ಮದನುಗ್ರ ಹಾರ್ಥಮದಿ ತಿಷ್ಠವಿಭೋ ಸಮರ್ಯಾಂ ಸ್ವೀಕುರುಭೋ 2 ಪಾದ್ಯಾಘ್ರ್ಯಾಚಮನಾದ್ಯಮಖಿಳ ಜಗ- ದಾದ್ಯಕಲ್ಪಿತಂ ಭವದರ್ಥಂ ಸುಖೋಷ್ಣಮಿದಂ 3 ನಿಸ್ತುಲಕಾಂಚನವಸ್ತ್ರಮಲಂಕುರು ಕಸ್ತೂರಿತಿಲಕಂ ಸುಮುಖೋ ಕೌಸ್ತುಭರತ್ನ ಮಜಸ್ತುತಮಂಡನ ಮಸ್ತುತನೌಗುಣ ಭೂಷಣತೇ 4 ಮಂದಾರಕಾ ಮಾಲ್ಯಾಕಲಿತಂ ಮಲಂಕುರುಸನ್ನಿಹಿತಂ 5 ಗಂಧರ್ವಾಮರ ವಂದಿತ ಮಲಯಾ ಗಂಧಲೇಪನ ಮಾಕಲಯಾ ಧೂಪಂ ಜಿಘ್ರಹರೇ 6 ತಾಪತ್ರಯ ಪರಿತಾಪನಿವಾರಣಂ- ತಾಪಸಮಾನಸದೀಪ ಹರೇ ರೂಪಾಲೋಕಯ ಶ್ರೀನೃಹರೇ 7 ಮಂತ್ರತಂತ್ರ ಯಂತೃಣಮೂರ್ತೇ ಸುಮಂತ್ರಪುಷ್ಪಂ ಸ್ವೀಕುರುಹೇ 8 ವಿಚಿತ್ರದಂತ ಚಾಮರಯುಗಳಂ ಶ್ರೋತ್ರಮಿತ್ರ ತೋರ್ಯತ್ರಿಕಮಾಕಲಯಾತ್ರ ಭೋಗಾಮಧಿರಾಜ ಕಳಂ 9 ಪಾಯಸಮತಿಹೃದ್ಯಂ ಮಧುನಾಸ್ವೀಕುರು ನೈವೇದ್ಯಂ 10 ಶಿಶಿರಾಂಬುಪಿಬಾಮಲ ಘನಸಾರಂ ಬಹುಮನ್ವಸ ಕರ್ಪೂರಂ 11 ಪರಿವಾರ ವಿಭೋ ಕರ್ಪೂರಾರ್ತಿಕಮಂಗೀಕುರುಭೋ 12 ಕುಕ್ಷಿಭುವನ ಸಂರಕ್ಷಿತ ಸೇವಕ ಪಕ್ಷಪ್ರದ ಕ್ಷಿಣಮನುವಾರಂ ಪಕ್ಷಿಗಮನನಿಜ ವಕ್ಷೋಧೃತ ಶುಭಲಕ್ಷಕರೋಮ ನಮಸ್ಕಾರಂ13 ಸಾಗರತನಯಾಯಾಗವಿಹಿತ ಭೂಭಾಗದೇಯ ನೀಳಾ ಸಹಿತಂ ಕುರುಲಸಿತಂ14 ಆರಾಧನಮ ಪಜಾಯತಮುಪಚಾರಮಿಷೇಣ ಮಯಾ ಚರಿತಂ ನಾರಾಯಣ ಚರಣಾರಾಧನಮಿತಿ ಕಾರುಣ್ಯೇನ ಕ್ಷಮಸ್ಸೇದಂ 15 ಚರಣಾಗತ ಜನಭರಣಾಲಂಕೃತ ಹರಿಣಾರ್ಯದ್ರಿ ನಿಕೇತನ ತೇ ಚರಣಾರಾಧನ ಕರಣಾಂಚಿತಮಿತಿ ವರದ ವಿಠಲಗೀತಂ ತನುತೇ 16
--------------
ಸರಗೂರು ವೆಂಕಟವರದಾರ್ಯರು
ಶ್ರೀನಿವಾಸ ಸುಜನೋದ್ಧಾರ ಏನು ತಾತ್ಸಾರ ನಾನು ನಿನ್ನ ದಾಸನೆಂದು ಮಾನವರು ನುಡಿದ ಮೇಲೆ ಪ. ಪುಟ್ಟಿದಾಕ್ಷಣಾದಿಯಾಗಿ ದುಷ್ಟಸಂಗಕೊಳಗಾಗಿ ನಷ್ಟಪ್ರಜ್ಞೆಯಿಂದ ಬಹು ಕಷ್ಟಿಯಾದೆನು ಕೃಷ್ಣ ಶಬ್ದ ವಾಚ್ಯಪರಮೇಷ್ಠಿ ಜನಕ ನಿನ್ನ ಮನ ಮುಟ್ಟಿ ಭಜಿಸದೆ ಬಯಲೆಷ್ಟವ ಬಯಸುವೆನಲ್ಲೊ 1 ದಾನಧರ್ಮ ಜಪತಪ ಮೌನ ಮೊದಲಾದ ಸ- ತ್ಸಾಧನ ಹೀನನಾದರು ನಿನ್ನಾನುರಾಗದಿ ಮನಮುಟ್ಟಿ ಕ್ಞಣವಾದರು ಧ್ಯಾನಿಸಲು ಸಕಲವಂದ್ಯ ಮುನಿಗಮ್ಯ ಪದವನೀವಾತನು ನೀನೆಂದೊಂದೆ ತಿಳಿದೆ 2 ಮನವಚನ ಕಾಯಕಾದನುದಿನ ಕೃತವಾದ ಘನ ಪಾಪಂಗಳಿಗೆ ನಾ ಕೊನೆಗಾಣೆನು ದನುಜಾರಿ ರಾಮ ಅನಿಮಿತ್ತಬಂಧು ಎಂಬ ಘನತೆ ತೋರಿಸಿ ನಿನ್ನ ತನಯನೆಂದೆಂನ ಸಲಹೊ 3 ವೀರವೇದೋದ್ಧಾರ ವರಮಂದರಧರ ನರ ಹರಿಕುಬ್ಜಾಕಾರ ಪೃಥ್ವೀಭಾರವಾರಕ ವಾರುಧಿ ಬಂಧಕಯದು ವೀರ ತ್ರಿಪುರ ಸ್ಮರ ಹರನಿಂದ ತರಿಸಿದ ತುರಗವೇರಿದ ಧೀರ 4 ಮಂದಮತಿಯಾದ ಎನ್ನ ಬಂಧುವಾಗಿ ಕೈಯ ಪಿಡಿದು ಮುಂದು ಗಾಣಿಸುವೆನೆಂದು ಹಿಂದೆ ರಕ್ಷಿಸಿ ಇಂದು ಎನ್ನ ಕುಂದನೆಣಿಸಿ ತಂದೆ ನೀನುಪೇಕ್ಷಿಸಲು ಮುಂದೆ ಕಾಯ್ವರಾರೊ ಕರುಣಾಸಿಂಧು ಅನಿಮಿತ್ತ ಬಂಧು 5 ಮಾನಗೇಡಿನಿಂದ ದ್ವೇಷಿ ಮಾನವಾಧಮರ ಮುಂದೆ ಶ್ವಾನಕಿಂತ ಕಡೆಯಾಗಿನ್ನೇನು ಮಾಡಲೊ ನೀನೆ ಗತಿಯೆಂಬ ಮನೋಧ್ಯಾನದಿಂದ ಬಂದೆ ನಿಂದು ಕಾನನದ ಶಿಶುವಿದೆಂದು ಮಾನಿಸಿ ರಕ್ಷಿಸೊ ತಂದೆ 6 ಘಾಸಿಗೊಳಿಸುತೀ ಆಶಾಪಾಶದಿಂದ ಎನ್ನ ಬಿಡಿಸಿ ದಾಸರ ದಾಸ್ಯವನಿತ್ತು ಪೋಷಿಸೆನ್ನುತ ಮೀಸಲಾಗಿಹೆನು ಶ್ರೀನಿವಾಸ ಬೇಗ ಸಲಹೊ ಬಂದು 7
--------------
ತುಪಾಕಿ ವೆಂಕಟರಮಣಾಚಾರ್ಯ
ಶ್ರೀನಿವಾಸ-ಶ್ರೀನಿವಾಸ-ಶ್ರೀನಿವಾಸ ಪ ಶ್ರೀನಿವಾಸ ನಾನಿಹೆ ನಿನ್ನ ದಾಸ-ನಿನ್ನ ದಾಸ ನಿನ್ನದಾಸ ಅ.ಪ. ಈಶ, ತರಿಯುವೆ ಕ್ಲೇಶಾ ಕೊಡುಲೇಶ, ಕೊಡುಲೇಶ ಜೀಯ, ಸಡಗರ ದೈವ ಬಡವನು ನಾನು ಕೊಡುವುದು ಏನು, ಅಡಿಗಳನೀಡು, ಇಡುವೆನು ಮೌಳಿ, ಇಡುವೆನು ಮೌಳಿ ಘನಸುಖದಾತ, ಚಿನ್ಮಯಗಾತ್ರ, ವನರುಹ ನೇತ್ರ, ಅನಿಲನಸೂತ್ರ ಅನುದಿನ ತನುಮನನಾಥ ತನುಮನನಾಥ ಕುಂದುಗಳಳಿದು, ಕಂದನ ಸಲಹೋ ಕಂದನ ಸಲಹೋ 1 ವೇದವ್ಯಾಸ, ವಾದಾಗಾರ, ಬೋಧಿಸಿವಿದ್ಯೆ ಸಾಧನೆಗೈಸೋ ವೇಧನ ತಂದೆ ವೇಧನತಂದೆ ಸೋದರ ಪ್ರಜೆಗಳು ದೈತ್ಯರ, ಖೇದವನೀಡ್ಡೆ ಖೇದವನೀಡ್ದೆ ಧೀರವರಾಹ, ಯಾಗಶರೀರ, ಬಹುಗಂಭೀರ ಶೃತಿಗಳಸಾರ ಸಾರ ಸಾರಕೆ ಸಾರ ಕಂಭದಿಬಂದೆ ಕಂದನ ಪೊರೆದೆ ಕಂದನ ಪೊರೆದೆ 2 ಬಲಿಯೆಡೆನಿಂದ ಬೇಡುವೆನೆಂದ ಬೇಡುವೆನೆಂದ ಮೂರಡಿಯಿಂದ ಬೆಳೆಯುತ ಬಂದ ಬೆಳೆಯುತ ಬಂದ ಭೂಮಿಯು ಮುಗಿಯೆ ಶಿರವನ್ನೀಯೆ, ಭಕ್ತನಕಾಯೆ, ಬಾಗಿಲಕಾಯ್ದೆ, ಬಾಗಿಲಕಾಯ್ದೆ ವಿಪ್ರರ ಪೊರೆದ, ವರಸಮರಿಲ್ಲ ವರಸಮರಿಲ್ಲ ಭಾರ್ಗವರಾಮ, ಋಷಿಗಣಸ್ತೋಮ, ದೈತ್ಯವಿರಾಮ, ಸತ್‍ಜನಪ್ರೇಮ, ಮಂಗಳ ನಾಮ ಮಂಗಳನಾಮ 3 ತಾರಕನಾಮ, ಕಲಿಗಿವ ಭೀಮ, ದಶರಥರಾಮ, ಸೀತಾರಾಮ ಜಯಜಯರಾಮ ಜಯಜಯರಾಮ ಲಕ್ಷ್ಮಣನಣ್ಣ, ಸಗುಣಸಂಪನ್ನ, ಜಗಕಿವ ಅನ್ನ, ಬಿಡಬಿಡಬೆನ್ನ ಪ್ರಾಣನೆ ಅನ್ನ, ಕೇವಲನಣ್ಣ, ರವಿಶಶಿಕಣ್ಣ, ಸಿದ್ಧವಿದಣ್ಣ ಆಗಿಸಿ ಯಾಗ, ಸಾಗುತ ಬಂದ ಸಾಗುತ ಬಂದ ಕೊಂದನು ಖಳರ, ಮುಂದಕೆ ನಡೆದ 4 ಮುಟ್ಟಿ, ಕಳ್ಳನ ಮೆಟ್ಟಿ ರಾಜ್ಯವಕೊಟ್ಟ ಜಗಜ್ಜಟ್ಟಿಜಗಜ್ಜಟ್ಟಿ ನಿಜಮುನಿಇವನೆ, ನಿಜವಿಧಿ ಇವನೆ, ಸರ್ವೇಶ, ಸರ್ವೇಶ ಬೆಣ್ಣೆಯ ತಿಂದ ಪೋರನು ಎನಿಸಿ, ಚೋರನು ಎನಿಸಿ ಎನಿಸಿ, ಕ್ರೂರನು ಎನಿಸಿ, ನಾರೇರ ವರಿಸಿ, ಭೂರಿದನೆನಿಸಿ, ಲೀಲೆಯ ತೋರ್ದ 5 ಊರಿಗೆ ಬಂದೆ, ಜರೆಸುತ ಬಂದು, ಬಹುಮಡಿನೊಂದು, ಮರಳಿಯು ಬಂದು ಕದನಕೆ ನಿಂದ, ಬಲುಭಂಢ, ಬಲುಭಂಢ ರಾತ್ರಿಯಲೊಂದು ಸಾಗಿಸಿ ಬಂದು, ವೊಕ್ಕೂ, ತಾಮುಕುಂದ ತಾಮುಕುಂದ, ಸೂತ, ಜಗವಿಖ್ಯಾತ ಕೊಲ್ಲಿಸಿದಾತ ಸರ್ವಸಮರ್ಥ, ಸರ್ವಸಮರ್ಥ ಕಾಲದಿ ಭೇದ ಇಲ್ಲವು ಎಂದು ವಿಭುಶರಣೆಂಬೆ, ವಿಭುಶರಣೆಂಬೆ 6 ವೇದಸುವೃಂದ, ತ್ರಿಪುರರಕೊಂದ, ಬಲ್ಲ, ಎಲ್ಲವ ಬಲ್ಲ ನಿತ್ಯವಿದೆಲ್ಲ, ತಿಳಿದವರಿಲ್ಲ, ಸಾರಿಸಾಕಲ್ಯ ಜಗವನೆಲ್ಲ, ಬಿಗಿದಿಹನಲ್ಲ, ನಾಮದಿನಲ್ಲ, ನಾಮದಿನಲ್ಲ, ಆದಿಯು ಇಲ್ಲ, ಮಧ್ಯವು ಇಲ್ಲ, ಕೊನೆತಾನಿಲ್ಲ, ಖೇದವು ಇಲ್ಲ, ಮೋದವೆ ಎಲ್ಲ, ಭಗನಿಹನಲ್ಲ ಅಪಜಯವಿಲ್ಲ, ಶ್ರೀಗಿವನಲ್ಲ, ಅಪ್ರತಿಮಲ್ಲ, ಪ್ರಕೃತಿಯು ಅಲ್ಲ, ಸ್ವಾಮಿಯು ಇಲ್ಲ, ತಾನೇ ಎಲ್ಲ ಪ್ರೇರಿಪನೆಲ್ಲ, ಭಿನ್ನನು ನಲ್ಲ, ಸರ್ವೋತ್ಕøಷ್ಠ 7 ಕುಜನರ ಮುರಿಯೆ, ಎನಿಸಿ, ಧರ್ಮವನುಳುಹಿ, ಭಕ್ತರಿಗೊಲಿದು, ಪೊರೆವುದು ಸತ್ಯ, ಪೊರೆವುದು ಸತ್ಯ, ಸತ್ಯರ ಸತ್ಯ, ಸಂತರ ಮಿತ್ರ, ಪರಮ ಪವಿತ್ರ, ಲೋಕವಿಚಿತ್ರ ಸುಖಚಾರಿತ್ರ, ಮಂಗಳಗಾತ್ರ, ನಿಖಿಳಸುಭರ್ತ, ಭಕ್ತರ ಭೃತ್ಯ ನತ ಜನಪಾಲ, ವೇದಗಳೆಲ್ಲ, ಶಬ್ದಗಳೆಲ್ಲ, ಘೋಷಗಳೆಲ್ಲ ನಾಮಗಳೆಲ್ಲ, ಇವನನೆ ಎಲ್ಲ, ಪೊಗಳುವವಲ್ಲ, ಮುಕ್ತರಿಗೆಲ್ಲ, ಪ್ರಕೃತಿಯ ಸತ್ತಾ, ಸಕಲವ ನೀತ, ನೀಡುವ ದಾತ, ಸರ್ವಸುವ್ಯಾಪ್ತ, ಸರ್ವಸ್ವತಂತ್ರ8 ವೇದವ್ಯಾಸ, ಬದರೀನಿವಾಸ, ವೇದಸ ಪೀಠ, ಸಾಧಿಸುವಂತ್ಯ ಮೋದಕವೀಂದ್ರ, ಮಧ್ವನಪೋಷ, ಆದರವೀಯೊ ಪಾದಗಳಲ್ಲಿ ವೇದಗಳಳಿಯೆ, ವಿಧಿ ಮುಖಸುರರು, ಪಿಡಿದರು ಪಾದ ಮಾಧವ ನೀನು ಮೇದಿನಿಗಿತ್ತೆ ಸೂತ್ರ ಗೈದ ಮಹೇಶ, ವೇದಕುಮಿಗಿಲು, ಭಾರತಕರ್ತ, ಭಾರತ ಕರ್ತ ಛಂದದಸುಕಾಯ ಕುಡಿಸೈ ಜೀಯ ಹರಿಸುತಮಾಯ, ಹರಿಸುತಮಾಯ, ಹರಿಸುತಮಾಯ 9 ಶ್ರೀ ಇಹವಕ್ಷ, ಜ್ಞಾನಸುಪಕ್ಷ, ಸರ್ವಾಧ್ಯಕ್ಷ, ದಿವಿಜರಪಕ್ಷ ಬೃಹತೀಭಕ್ಷ, ತಾನಿರಪೇಕ್ಷ, ಆಶ್ರಿತರಕ್ಷ, ಕರುಣ ಕಟಾಕ್ಷ, ಕರುಣಿಸು ರಕ್ಷ, ನೀಜಗರಕ್ಷ, ಅಜಗರ ಶೈಯ್ಯ, ಮನ್ಮಥನಯ್ಯ ಭವಬಿಡಿಸಯ್ಯ, ಭಯಹರಿಸಯ್ಯ ದಯಮಾಡಯ್ಯ ಶರಣುಪರೇಶ ಇಚ್ಛೆ ಅನೀಶಾ, ಕಳೆಕಳೆ ಆಶಾ, ಕಡಿಕಡಿಪಾಶಾ, ನಾಬಡದಾಸ, ತೈಜಸ ಶರಣು, ಪ್ರಾಜ್ಞನೆ ಶರಣು, ತುರ್ಯನೆ ಶರಣು, ಕಪಿಲನೆ ಶರಣು ಶರಣು ಅನಂತ, ಶರಣು ಅನಂತ 10 ವೆಂಕಟರಮಣ, ಕಿಂಕರನಾನು, ಸಂಕಟಹರಿನೊ ಶಂಕರತಾತ ತಿದ್ದೊ, ಪಂಕಜನಯನ ದಡ್ಡನು ನಾನು ಭಕ್ತಿಗಡ್ಡೆಗೆಸೇರಿಸು ಪ್ರಾಣನ ಆಣೆ ರಾಜರ ಆಣೆ ಜಯಮುನಿ ಆಣೆ, ಗುರುಗಳ ಆಣೆ, ಉರಗಾದ್ರಿವಾಸ, ಪದ್ಮಜಳೀಶ, ಹರಿಸುತ ದೋಷ, ಚರಣದಿವಾಸ, ನಿರುತಲೀಯೊ, ಕರುಣವ ಸುರಿಸಿ, ಮರುತನ ಮತದ ಅರುಹುತಲೆನಗೆ, ಸಂತತ ವೆಂಬೆ, ಸಂತತವೆಂಬೆ, ಸಂತತವೆಂಬೆ ನಂದದಿ ಪಠಿಸೆ ನಂದವು ಶಾಶ್ವತ, ಜಯಮುನಿಹೃಸ್ಥ, ಮಧ್ಯರಮೇಶ ಶ್ರೀಕೃಷ್ಣವಿಠಲ ವಲಿಯುವ ಸಿದ್ಧ, ವಲಿಯುವ ಸಿದ್ಧ 11
--------------
ಕೃಷ್ಣವಿಠಲದಾಸರು