ಒಟ್ಟು 7252 ಕಡೆಗಳಲ್ಲಿ , 131 ದಾಸರು , 4420 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸೃಷ್ಟಿಗೊಡೆಯನೇ ನಿನ್ನ ದೃಷ್ಟಿಯಿಂದಲಿ ಎನ್ನ ಕಡೆ ನೋಡವಲ್ಲಿ ಪ ಘಟ್ಯಾಗಿ ನೀ ಗತಿಯೆಂದು ನಾ ನಂಬಿದರೆ ಸೊಟ್ಟಗಿಹ ಮೊಗವಟ್ಟವೇರುತಲಿದೆ ಇಷ್ಟಿಲ್ಲವೆಂದು ನೀ ಬಿಟ್ಟ ರಾಜವನಲ್ಲಾ ಕಟ್ಟುವೆನೋ ಇಟ್ಟು ಮನ ತವ ಪದದಿ ಬಿಡದೆ 1 ಅಷ್ಟ ಸೌಭಾಗ್ಯ ಮದವೆಷ್ಟೋ ಅದರಿಂದ ದಯ ದೃಷ್ಟಿ ಇಲ್ಲದೇ ನಯನ ಮುಚ್ಚಿ ತೆರೆಯುವುದೋ ಭ್ರಷ್ಟನೆಂದು ದೂರ ದೃಷ್ಟೀಲಿ ನೋಡಿದರೆ ಬಿಟ್ಟು ಕೊಡೊ ಭಕುತವತ್ಸಲನೆಂಬೋ ಬಿರುದು 2 ಇಟ್ಟು ನೋಡುವುದು ನಿನಗೆಷ್ಟು ಸುಖವೋ ಅಟ್ಟಿ ಬಹ ದುರಿತಗಳ ಮೆಟ್ಟಿನೀ ತುಳಿಯದಿರೆ ಬಿಟ್ಟು ಕೊಡೊ ಕರುಣಾಸಾಗರನೆಂಬೊ ಬಿರುದು 3 ಕೆಟ್ಟ ಜನ್ಮವ ಕೊಡು ಕನಿಷ್ಟದಿಂದಲಿತು ಹೊಟ್ಟೆಗನ್ನವು ದೊರೆಯದಂತೆ ಮಾಡೋ ಪುಟ್ಟಿ ಭಕುತಿ ಮಾತ್ರ ಥಟ್ಟನೆ ಕೊಟ್ಟು ಮನ- ದಿಷ್ಟ ಪೂರೈಸಿ ತವ ದಾಸನ ಮಾಡೋ 4 ಶ್ರೇಷ್ಠ ಸಾತ್ವೀಕನಾಗಿದ್ದರೆ ಹರಿ ನಿನಗೆ ಇಷ್ಟು ಬಾಯ್ದೆರದು ನಾ ಬೇಡಲ್ಯಾಕೊ ಕೆಟ್ಟ ಪಾಪಿಷ್ಟನಾದುದಕೆ ಶ್ರೀ ಹನುಮೇಶ ವಿಠಲನೇ ತವ ಚರಣ ತೋರಿಸಲಿ ಬೇಕೊ 5
--------------
ಹನುಮೇಶವಿಠಲ
ಸೃಷ್ಟಿಯೊಳಗೆಲ್ಲ ದುಷ್ಟರ ಪ್ರಭೆಯಾಗಿ ನಿಷ್ಠರುದೋರದಂತಾದರು ಮಾ ಧ್ರುವ ಭ್ರಷ್ಟರು ಬೂಟಿಕಿ ಶಿಷ್ಠರೆ ಕೈಕೊಂಡು ನಿಷ್ಠರಿಗಾಟ್ಲಿ ತಂದರು ಮಾ ತುಟ್ಟಿಲೆ ಮಿಸುಕದೆ ಗುಟ್ಟಿಲಿದ್ದವರ ಬಟ್ಟೆಗ್ಯಳದಿನ್ನು ತಾಹರು ಮಾ ಹೊಟ್ಟೆಯೊಳು ಹೊಕ್ಕು ಕಟ್ಟಲೆ ಕುಳಿತಿನ್ನು ನೆಟ್ಟ ನೇರಿಷ್ಟ ನೇಮಿಸುರು ಮಾ ಇಟ್ಟ ತೊಟ್ಟವರನು ಕೆಟ್ಟದೃಷ್ಟಿಲೆ ನೋಡಿ ದಿಟ್ಟತನದಿ ಪ್ರಾಣಕೊಂಬರು ಮಾ 1 ಕೊಟ್ಟು ಹಣಹೊನ್ನು ಇಟ್ಟದ್ದು ಬೇಡಲು ಕುಟ್ಟಿ ಅವನಬಾಯಿ ಹಾರರು ಮಾ ತುಟ್ಟಿಲೆ ವಂದಾಡಿ ಹೊಟ್ಟಲೆ ವಂದಿಟ್ಟು ನೆಟ್ಟನೆ ಘಾಸಿಮಾಡರು ಮಾ ಗಂಟುಳ್ಳವರ ಕಂಡು ಕಟ್ಟಿದಂಡಗಳನ್ನು ನಷ್ಟತನದಿ ಹೊಟ್ಟೆ ಹೊರುವರು ಮಾ ಬಟ್ಟಿಲೆ ತೋರಲು ಬಿಟ್ಟಿಯ ಹಿಡಿದಿನ್ನು ಹೆಟ್ಟಿ ಅವನ ಮುಂದೆ ನಡೆಸುರು ಮಾ 2 ಶುದ್ದಿಯು ಇಲ್ಲದೆ ರಾಜ್ಯಾಧಿಪತಿಗಳು ಇದ್ದು ಇಲ್ಲದಂತಾದರು ಮಾ ಮಂದಮತಿಗಳು ಅಂದಣವೇರಿನ್ನು ಬುದ್ಧಿವಂತರೀಗ್ಹೀನತಂದರು ಮಾ ಮುದ್ರಾಧಾರಿಗಳೆಲ್ಲ ಕ್ಷುದ್ರದೃಷ್ಟಿಯು ಮಾಡಿ ಕ್ಷುದ್ರತನದಿ ಕೆಡುತಿಹರು ಮಾ ಸಿದ್ಧಸಾಧಕರೆಲ್ಲ ಗುದ್ದನೇ ಹೊಕ್ಕರು ಇದ್ದರೆ ಬುದ್ಧಿಹೀನರು ಮಾ 3 ಉಳಿಯಮುಟ್ಟಿದ ದೈವ ಉಳಿಯದೇ ಹೋದವು ಉಳಿಗಾಲ ವಿಲ್ಲದಂತಾಯಿತು ಮಾ ತಿಳಿವಳಿಕುಳ್ಳವರೆಲ್ಲ ತಲೆಮುಸಕ್ಹಾಕಿನ್ನು ಕಳ್ಳರೆ ಸಾಜರು ಆದರು ಮಾ ಒಳ್ಳೆಯವರ ನುಡಿ ಎಳ್ಳಷ್ಟು ಮಾಡುತ ಸುಳ್ಳರು ನಿಜನುಡಿವೆಂಬುರು ಮಾ ಉಳ್ಳವರು ಖಳಬುದ್ಧಿ ಕೈಕೊಂಡು ಇಳೆಯೊಳು ಧರ್ಮವ ಜರೆದರು ಮಾ 4 ಸಾಧುಸಜ್ಜನರೆಲ್ಲ ಭೇದವ ಅಡಗಿಸಿ ಮೇಧಿನಿಯಲು ಗುಪ್ತರಾದರು ಮಾ ಇದ್ದರ ಘನಸುಖ ಸಿದ್ಧರ ನೆರೆಯಲಿ ಬುದ್ಧಿಹೀನರು ತಾವು ಅರಿಯರು ಮಾ ಸದ್ಗುರು ಕೃಪೆಯಿಂದ ಸದ್ಬ್ರಹ್ಮದ ನೆಲೆಯ ಸತ್ ಶಿಷ್ಯಮಹಿಪತಿ ತಿಳಿದನು ಮಾ ಎಂದಿಗೆ ಬೇಡಿನ್ನು ದುರ್ಜನರ ಸಂಗವು ತ್ರಾಹಿ ತ್ರಾಹಿ ತ್ರಾಹಿ ಎಂದನು ಮಾ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಸೆರೆಯೊಳಗೆ ಹರಿಸೆರೆಯೆ ಮುಖ್ಯಾ ಭಾವದೊಳಗೆ ಗುರುಭಾವನÉಯೆ ಮುಖ್ಯಾ ಪ ----ದೊಳಗೆ ಪ್ರಥಮ -----ರಾರÉೀ ಮುಖ್ಯಾ ಸೇವನೆಯೊಳಗೆ ಪುಣ್ಯ ಸೇವನೆ ಮುಖ್ಯಾ ದೇವರೊಳಗೆ ವಿಷ್ಣು ದೇವಾರೆ ಮುಖ್ಯಾವು ಯಾವ ಶಾಸ್ತ್ರಗಳಿಗೂ ವೇದವೇ ಮುಖ್ಯಾ 1 ವನದೊಳು ಫಲವುಳ್ಳಾ -----ಮುಖ್ಯಾ ದೀನದಾನವರೊಳಗೆ -----ದೀನನೆಂಬುವದೇ ಮುಖ್ಯ ಜನರೊಳು ಸಾಧು ಸಜ್ಜನರಾದವರೇ ಮುಖ್ಯಾ ಮನೆಗೆ ಹಿರಿಯನಾದ ಯಜಮಾನನೇ ಮುಖ್ಯಾ 2 ಮಾಸಗಳೊಳು ಚೈತ್ರಮಾಸವೆ ಮುಖ್ಯವು ವಾಸನೆಯೊಳು ಲಕ್ಷ್ಮೀವಾಸನೆ ಮುಖ್ಯ ಭೂಸುರರೊಳಗೆಲ್ಲ ಪೂರ್ಣ ಪಂಡಿತರೆ ಮುಖ್ಯ ವಾಸು ದೇವರಿಗೆ ----ದಾಸನೆ ಮುಖ್ಯ 3 ಸ್ಥಾನದೊಳಗೆ ಗಂಗಾಸ್ಥಾನವೇ ಮುಖ್ಯವು ಧೇನುಗಳೊಳು ಕಾಮಧೇನುವೇ ಮುಖ್ಯ ಜ್ಞಾನದಲ್ಲಿ ಹರಿಸರ್ವೋತ್ತಮ ಜ್ಞಾನವೆ ಮುಖ್ಯ ಗಾನದೊಳಗೆ ಸಾಮಗಾನವೇ ಮುಖ್ಯ 4 ವೃಕ್ಷಗಳೊಳು ತುಲಸೀ ವೃಕ್ಷವೇ ಮುಖ್ಯವು ಭಿಕ್ಷಗಳೊಳು ಯತಿ ಭಿಕ್ಷವೇ ಮುಖ್ಯವು ಪಕ್ಷಿಗಳೊಳು ಗರುಡ ¥ಕ್ಷಿಯೇ ಮುಖ್ಯ ಲಕ್ಷಾಧಿಕಾರರಿಗೆ ಲಕ್ಷ್ಮೀಯೆ ಮುಖ್ಯ 5 ಪರ್ವತಗಳೊಳು ಮೇರು ಪರ್ವತವೆ ಮುಖ್ಯ ಉರೆಗೆ ಮಳೆ ಬೆಳೆ ಉರುವೆ (ಬರುವೆ?) ಮುಖ್ಯ ಮರ್ಯಾದೆ ನ್ಯಾಯಗಳಿಗೆ ಹಿರಿಯರಾದವರೇ ಮುಖ್ಯ ಸರ್ವಾಧಿಕಾರರಿಗೆ ಸರ್ವಸಮತವೆ ಮುಖ್ಯ 6 ಕ್ಷೇತ್ರಗಳೊಳು ಕುರುಕ್ಷೇತ್ರವೆ ಮುಖ್ಯ ಯಾತ್ರಿಗಳೊಳು ಗಂಗಾಯಾತ್ರಿಯೆ ಮುಖ್ಯ ಸೂತ್ರಗಳೊಳು---------ಮುಖ್ಯವು ಸ್ತೋತ್ರಗಳೊಳು ಹರಿಸ್ತೋತ್ರವೇ ಮುಖ್ಯ 7 ಗ್ರಾಮಗಳೊಳು ಸಾಲಿಗ್ರಾಮವೇ ಮುಖ್ಯ ಭೂಮಿಗಳೊಳು ಪುಣ್ಯ ಭೂಮಿಯೇ ಮುಖ್ಯ ಆರು-------ಳಿಗೆಲ್ಲ ಆರೋಗ್ಯವೆ ಮುಖ್ಯ ಕಾಮುಕ ಸ್ತ್ರೀಯರಿಗೆಲ್ಲ ಕಾಮಪುರುಷನೇ ಮುಖ್ಯ 8 ಸನ್ಮಾರ್ಗಗಳೊಳಗೆ ಸನ್ಯಾಸಿ ಮಾರ್ಗವೆ ಮುಖ್ಯ ಅನಿಮೇಷಾ ಜಾಗರದೊಳಗೆ ಅನಿಮೇಷರೆ ಮುಖ್ಯ ಧನ್ಯ `ಹೆನ್ನೆ ವಿಠ್ಠಲನ ' ದಯವು ಇದ್ದರೆ ಮುಖ್ಯ 9
--------------
ಹೆನ್ನೆರಂಗದಾಸರು
ಸೇರಿ ಬದುಕುವೆ ನಮ್ಮ ಸ್ವಾಮಿಯಂಘ್ರಿಯನುಭೂರಿ ದೋಷಗಳನ್ನು ಬಯಲ ಮಾಳ್ಪುದನು ಪನಿರ್ಗುಣದ ರೂಪವದು ನಿಲುಕದೆಂದಿಗೂ ಮನಕೆದುರ್ಗುಣದ ಪುಂಜಕ್ಕೆ ದೊರಕುವುದೆ ಹುಡುಕೆಅರ್ಗಳದ ವೃತ್ತಿಗಳಲಾಳಿ ಮುಳುಗಿರಲಿದಕೆಮುಗ್ಗಿ ಮೋಹಿಪ ನಾನು ಮಥಿಸಲಿನ್ನೇಕೆ 1ಸಗುಣಮೂರ್ತಿಯ ನೋಡೆ ಸ್ಥಿರದಿ ಬುದ್ಧಿಯು ನಿಲದುಅಗಣಿತದ ವಾಸನೆಯೊಳತಿಬದ್ಧವಡೆದುಬಿಗಿ ಭದ್ರವಾಗಿರಲು ಬಹು ಕರ್ಮವೆಳೆದೆಳೆದುಬಗೆಯದನು ನೆರೆ ನೋಡಿ ಬಿಟ್ಟದನು ಜರೆದು 2ಧ್ಯಾನಿಪರು ಧ್ಯಾನಿಸಲಿ ಧೈರ್ಯದಲಿ ಬ್ರಹ್ಮವನುಜ್ಞಾನಿಗಳು ತಿಳಿಯಲಾ ಗೂಢ ತತ್ವವನುಮಾನರಹಿತರು ಹರಿಗೆ ಮಾಡಲಾ ಕರ್ಮವನುನಾನೊಂದನೊಡಬಡೆನು ನೋಡಿ ಕಠಿಣವನು 3ವೇದಶಾಸ್ತ್ರಗಳೋದಿ ವಾದಿಸಲಿ ವಾದಿಗಳುಸಾಧಿಸಲಿ ಸ್ವರ್ಗವನು ಸಕಲ ಶ್ರೌತಿಗಳುಬೋಧಿಸಲಿ ಪರರಿಂಗೆ ಬಹುತತ್ವಭೇದಿಗಳುಮಾಧವನಿಗೆರಗುವದೆ ಮತವೆನಗೆ ಕೇಳು 4ಪಾದಪದ್ಮವನಂಬಿ ಪಡೆದರಮಿತರು ಗತಿಯ ಓದಿದವರೈದಿದರು ವಾಸನೆಯ ಬಗೆಯಕಾದು ರಕ್ಷಿಪುದಂಘ್ರಿ ಕೊಡುವುದಮಿತದ ಸಿರಿಯವಾದಿಸದೆ ನಂಬಿದೆನು ವಿಧಿಜನಕನಡಿಯ 5ಇದು ತಾನೆ ಲೋಕಗಳನೆಲ್ಲವಾಳುವ ದೊರೆಯುಇದು ತಾನೆ ಯೋಗಿಗಳಿಗಿದಿರಾದ ಬಗೆಯುಇದು ವಿಷಯದೊಳಗಿರುವರೆಬ್ಬಿಸುತ್ತಿಹ ಸುಧೆಯುಇದನೆ ನಾನಂಬಿದೆನು ಯಾಕೆ ಕರೆಕರೆಯು 6ತರುಬಿ ನಿಂದಿದೆ ಲೋಕ ತತ್ಪಾದಪದ್ಮವನುಹೊರೆಯುತಿಹುದಾ ಜನವ ಹೊಣೆಯಾಗಿ ತಾನು ತಿರುಪತೀಶ್ವರ ನನಗೆ ತೋರ್ದನೀ ಮತಿಯನ್ನುವರದೇಶ ನನಗೊಲಿದವೊಡೆಯ ವೆಂಕಟನು 7ಓಂ ತೀರ್ಥಪಾದಾಯ ನಮಃ
--------------
ತಿಮ್ಮಪ್ಪದಾಸರು
ಸೇವಕನೆಲೊ ನಾನು ನಿನ್ನಯ ಪಾದಸೇವೆ ನೀಡೆಲೊ ನೀನು ಪ. ಸೇವಕನೆಲೊ ನಾನು ಸೇವೆ ನೀಡೆಲೊ ನೀನುಕಾವದೇನೆಲೊ ಶ್ರೀವಧೂವರ ರಾವಣಾಂತಕ ರಕ್ಷಿಸೆನ್ನನುಗೋವರ್ಧನ ಗಿರಿಧರ ದೇವ ಗೋವುಗಳ ಕಾವಶ್ರೀಮಹಾನುಭಾವ ವರಗಳನೀವ ದೇವಶ್ರೀವಲ್ಲಭ ದಯಮಾಡೆನ್ನನುಈ ವ್ಯಾಳೆಗೆ ಇಂದಿರೆರಮಣ ಅ.ಪ. ರಾಮ ದಶರಥನಂದನ ರಘುಕುಲಾಬ್ಧಿಸೋಮ ಸುಂದರವದನವಾಮನ ಪರಿಪೂರ್ಣಕಾಮ ಕೌಸಲ್ಯರಾಮಸ್ವಾಮಿ ಶ್ರೀರಂಗಧಾಮ ದೈತ್ಯವಿರಾಮಶ್ರೀಮದನಂತ ನಾಮಭೀಮ ಮುನಿಜನಸ್ತೋಮರಮ್ಯಗುಣಧಾಮ ರಣರಂಗಭೀಮಕೋಮಲಶ್ಯಾಮ ಹೇಸಾಮಜವರದ ನೀನನುದಿನಕಾಮಿತಫಲವನು ಕರುಣಿಸಿ ಕಾಯೊ 1 ಶಂಕರ ಸುರಸೇವಿತ ಶೇಷಗರುಡಾ-ಲಂಕಾರ ಮಣಿಶೋಭಿತಪಂಕಜನಯನ ಮೀ-ನಾಂಕ ಜನಕ ಪಾದ-ಪಂಕಜಾಸನವಿನುತ ತಿರುಪತಿವೆಂಕಟ ಬಿರುದಾಂಕ ಜಯ ಜಯಶಂಖಚಕ್ರಗದೆ ಪಂಖ ಪಿಡಿದಕಳಂಕ ಚರಿತ ತಾ-ಟಂಕಗೊಲಿದ ನಿಶ್ಶಂಕಲಂಕಾಧಿಪರಿಪು ರಘುಪತಿಕಿಂಕರರಿಗೆ ಕಿಂಕರ ನಾನೆಲೊ 2 ಮಾಧವ ಮಧುಸೂಧನನಂದಮಂಗಳ ವಿಗ್ರಹಬಿಂದುಮಾಧವ ಶ್ರೀಮುಕುಂದ ಶ್ರೀಮದಾ-ನಂದ ವಂದಿತಾಮರವೃಂದ ಶ್ರುತಿಗಳ ತಂದ ತುರಗವನೇರಿ ಬಂದವೃಂದಾವನದೊಳಗಿಂದ ಯಶೋದೆಯಕಂದ ಹರಿಗೋ-ವಿಂದ ಶೇಷಗಿರಿಯಲಿ ನಿಂದಮಂದಾಕಿನಿ ಪಡೆದೆಲೊ ಧ್ರುವಗೊಲಿ-ದಂದದಿ ಎನಗೊಲಿಯೊ ಹಯವದನ 3
--------------
ವಾದಿರಾಜ
ಸೈ ಸೈ ಶರಣಾಗತ ವತ್ಸಲ ನೀ ನೋಯಿಸಬಂದಸುರೆಗೆ ನಿರ್ಮಲ ಸುಖವಿತ್ತಿ ಪ. ಬೆನ್ನಿನ ಮೇಲೆ ಬೆಟ್ಟವ ಪೊರಿಸಿದ ಸುರ- ರನ್ನು ಕಾಪಾಡಿ ಸುಧೆಯನುಣಿಸಿದಿ ನೀ 1 ಹಂಜಿಯಂದದಿ ತಲೆ ನರತಿಹ ಬ್ಯಾಡತಿ ನಿರಂಜನ ಮೂರುತಿ2 ಅಟ್ಟಿ ಬರುತ ನಿನ್ನ ಕಟ್ಟಿದ ಗೋಪೆಗೆ ಪೊಟ್ಟೆಯೊಳಿಹ ಸರ್ವ ಲೋಕವ ತೋರಿದಿ 3 ಅಗ್ರಜ ಭಾರ್ಯಳನುಳುಪಿ ಕೊಲ್ಲಿಸಿದಂಥ ಸುಗ್ರೀವನ ಕೂಡೆ ಸಖ್ಯವ ಬೆಳಸಿದಿ 4 ಪಾತಕಿ ಪತಿಯಾದ- ಜಾಮಿಳನನು ತನ್ನ ನಿಲಯಕೆ ಕರೆಸಿದಿ 5 ವಿಧ ವಿಧದನ್ನವ ಕುರುಪತಿಯಲಿ ಬಿಟ್ಟು ಕುಡುತೆ ಪಾಲುಂಡುವ 6 ಕಂಡವರನು ಕೊಂದಿಹ ಕ್ರೂರನ ಮುನಿ ಮಂಡಲದಲಿ ಪ್ರಚಂಡನೆಂದೆನಿಸಿದಿ 7 ಕುಂತಿಯ ಕುವರನ ಕುದುರೆಯ ನಡೆಸುತ ಅಂತರಂಗ ಸಖ್ಯವ ಬೆಳೆಸಿದಿ ನೀ 8 ಖುಲ್ಲ ಚೇಷ್ಟೆಯ ಮಾಡಿ ಕಲ್ಲಾಗಿ ಬಿದ್ದ ಅ- ಹಲ್ಯೆ ಪತಿವ್ರತೆ ಎಂಬ ಬಿರುದ ಕೊಟ್ಟ್ಟಿ 9 ತಂದೆಯ ಕೊಲ್ಲಬೇಕೆಂದು ಸನ್ನಹಗೈದ ಕಂದನ ಸ್ವಾಂಕದೊಳಂದು ಕುಳ್ಳಿರಿಸಿದಿ 10 ಎಷ್ಟೊ ಪಾಪಗಳಟ್ಟುಳಿ ಬಿಡಿಸಿರೆ ಭ್ರಷ್ಟನೆಂದೆನ್ನೊಳು ನಿಷ್ಠುರವ್ಯಾತಕೆ 11 ಪನ್ನಗ ಗಿರಿವರ 12
--------------
ತುಪಾಕಿ ವೆಂಕಟರಮಣಾಚಾರ್ಯ
ಸೈ ಸೈ ಸದ್ಗುರುವಿನ ದಯದಿಂದೆಲ್ಲಾ ಮೈ ಮರೆತೆನೆ |ಐ ಅದು ಏನು ಕಾರಣ ಮೈ ಮರೆದು ಮತ್ತುಳಿದೆನೆ | ಕೈ ಕೈ ತಲೆ ಮೇಲಿಡಲು ವೈರಾಗ್ಯ ಪಡೆದೆನೆ |ಥೈ ಥೈಯಂತ ಕುಣಿಸಿ ತನ್ನಂತೆ ತಾ ಮಾಡಿದನೆ ¥ ನಾನೂ ನೀನೆಂಬುದು ಮರೆಸಿ ತಾನೇ ತಾನಾದನೆ |ಮಾನ ಅಪಮಾನ ಎರಡೂ ಪಾನ ಮಾಡಿದನೆ |ಜ್ಞಾನ ಮಾರ್ಗವ ತೋರಿ ಧ್ಯಾನ ಹೇಳಿದನೆ |ಖೂನ ತೋರಿಸಿ ವಿನೋದ ಮಾಡಿದನೆ 1 ನಾದ ಶಬ್ದದಿ ಮನಲುಬ್ಧ ಮಾಡಿದನೆ |ವಾದಿ ದುರ್ವಾದಿಗೂಡ ಕಾದಿ ಗೆಲಿಸಿದನೆ |ಭೇದಾಭೇದವ ಅರಿಯದ ಹಾದೀ ತೋರಿದನೆ |ಈದ ಹುಲಿಯಂಥ ಮನಸು ಸಾದ ಮಾಡಿದನೆ 2 ಭೃಕುಟಿ ಮಧ್ಯದಿ ವಸ್ತು ಪ್ರಕಟ ಮಾಡಿದನೆ | ಆಸನ ದ್ವಾರ ಕವಾಟವ ಬಲಿಸಿ ಶ್ವಾಶಗಳೆಲ್ಲಾ ನಿಲಿಸಿದನೆ | ನಾಸಿಕಾಗ್ರದ ಕೊನೆಯ ಮೇಲೆ ಭಾನು ಪ್ರಕಾಶವ ತೋರಿದನೆ | ಈಶನು ದತ್ತ ಮಹೇಶ ದಿಗಂಬರ ಘೋಷದೊಳಗೆ ಮನವೀಸಿದನೆ 3
--------------
ಭೀಮಾಶಂಕರ
ಸೈಯವ್ವ ಇದು ಸೈಯೆ, ಗೋಪಿ, ಸೈಯವ್ವ ಇದು ಸೈಯೆ ಪ ಸೈಯೆ ಗೋಪಿ, ನಿನ್ನ ಮಗರಾಮನಿಗೆ ಒಳ್ಳೆ ಬುದ್ಧಿ ಕಲಿಸಿದ್ದೀಯೆ ಅ ಸಂಜೆಯ ವೇಳೆಗೆ ಬಂದು - ಸಟೆಯಲ್ಲ - ಮನೆಯ ಒಳಗಡೆ ನಿಂದುಕುಂಜರಗಮನೆ ಬಾರೆಂದು ಎನ್ನ ಮುಂಗುರುಳ ತಿದ್ದಿದಗಂಜಿ ಶಲ್ಯವ ಎನಗೆ ಮುಸುಕಿಟ್ಟು ಮುದ್ದಾಡಿ ಕಡೆಗೆಕಂಜಲೋಚನೆ ಕುಚದ ಗಂಟು ಬಿಚ್ಚೆಂದ ನೋಡು 1 ಬಿಟ್ಟ ಮಂಡೆಯಲಿ ಗಂಡ ಮೈಮರೆತು ಮಲಗಿಹುದ ಕಂಡುಜುಟ್ಟನ್ನು ಬಿಚ್ಚಿ ಮಂಚದ ನುಲಿಗೆ ಬಿಗಿದು ಕಟ್ಟಿದಕೊಟ್ಟಿಗೆ ಸುಡುತಿದೆ ಏಳೆಂದು ಬೊಬ್ಬೆಯಿಟ್ಟುದ ಕೇಳಿಥಟ್ಟನೇಳಲು ಗಂಡ, ಜುಟ್ಟು ಕಿತ್ತು ಹೋಯಿತಮ್ಮ2 ಅಡವಿ ಜಟ್ಟಿಂಗನ ಮಾಡಲಿಕೆ ಒಳ್ಳೆ ಸಡಗರ ಸಂಭ್ರಮದಿಂದಹೆಡಗೆ ತುಂಬ ಹೋಳಿಗೆ ಮಾಡಿ ಕೊಡ ನೀರು ತರಲು ಹೋದೆನೆಕಡೆಗೊಂದು ಹೋಳಿಗೆ ಬಿಡದೆ ಕೊಡದುಪ್ಪ ಹಾಲ್ಮೊಸರು ಪಾಯಸಕಡು ಫಟಿಂಗ ತುಡುಗು ತಿಂದು ಮೀಸಲಳಿದು ಎಡೆಗೆಡಿಸಿ ಹೋದನೆ 3 ಊರೊಳಿಂತಾಯ್ತೆಂದು ಸಾರಿದೆವೆ ನಾರೇರುಅಡವಿಯಲಿ ಕೂಡಿದೆವೆ ಹಲವಾರು ಹೆಂಗಸರುನೂರಾರು ಗೆಳತೇರು ಉಳಿದ ಹಾಲನು ಮಾರಿದಾರಿ ಹಿಡಿದು ಬರುವಾಗೊಂದು ಕೊಳವ ಕಂಡೆವೆ ನೊಡು 4 ಓರಗೆ ಹೆಂಗಳು ನಾವು ನೀರಾಟವಾಡಲಿಕೆಸೀರೆ ಕುಬಸವ ದಡದೊಳಿಟ್ಟು ಕೊಳಕೆ ಧುಮುಕಿದೆವೆಚೋರ ನಿನ್ನ ಮಗ ಸೀರೆಕುಬಸವನೆಲ್ಲ ತಕ್ಕೊಂಡು ಹೋಗಿತೋರದುಂಚ ಕಡಹದ ಮರನೇರಿ ನೋಡುತ ಕುಂತನೆ 5 ನೆಟ್ಟನೆ ನೀರಾಟವಾಡಿ ನಾಲ್ಕೂ ದಿಕ್ಕಿನಲಿ ನಾವು ಅಡರಿದೆವೆಇಟ್ಟಲ್ಲಿ ಸೀರೆಕುಬಸಗಳಿಲ್ಲ ಕೆಟ್ಟೆವಯ್ಯಯ್ಯೋಕಿಟ್ಟನ ಕೈಚಳಕವೆಂದು ನಾವಷ್ಟದಿಕ್ಕುಗಳ ನೋಡಿದೆವೆತುಟ್ಟತುದಿ ಕೊಂಬೆಯಲಿ ಕುಂತಿರುವ ಪುಟ್ಟನ್ನ ಕಂಡೆವೆ 6 ಮುಂದೆ ಹಸ್ತದಿ ಮುಚ್ಚಿಗೊಂಡು ಕೃಷ್ಣನಿಗೆ ಗೋಗರೆದು ಕೇಳಲುವಂದನೆ ಮಾಡಿದರೆ ನಿಮಗೆ ಸೀರೆ ಕುಬಸವ ಕೊಡುವೆನೆಂದಒಂದು ಕರದಿ ಮುಗಿವೆವೆಂದರೆ ಎರಡು ಕರದಿ ಮುಗಿಯಿರೆಂದಬಂಧನಕ್ಕೊಳಗಾದೆವೆಂದು ವಿಧಿಯಿಲ್ಲದೆ ಮುಗಿದೆವೆ 7 ಪುಷ್ಪಗಂಧಿಯರೆ ಒಪ್ಪಿತವಾಗಲಿಲ್ಲ ನನ್ನ ಮನಕೆಚಪ್ಪಾಳೆ ಇಕ್ಕುತ ಮರದ ಸುತ್ತ ತಿರುಗಿರೆಂದತಪ್ಪದು ಎಷ್ಟೊತ್ತಾದರು ಬಿಡನೆಂದು ಜಯಜಯವೆನುತಚಪ್ಪಾಳೆ ಇಕ್ಕುತ ಮರದ ಸುತ್ತಲೂ ತಿರುಗಿದೆವೆ8 ಪಗಡೆಕಾಯಿ ಕುಚದ ದಗಡಿಯರೆ ಪುಗಡಿ ಹಾಕಿರಿ ಎನ್ನೆದುರುತೆಗೆದು ಕೊಡುವೆ ನಿಮ್ಮ ವಸ್ತ್ರಗಳ ಬಗೆಬಗೆಯಿಂದಜಗದೊಳು ನಗೆಗೇಡಾದೆವು ಇನ್ನು ನುಡಿದು ಫಲವಿಲ್ಲೆಂದುಪುಗಡಿ ಹಾಕಿದೆವೆ ನಾವು ಛೀ ಛೀ ಎನ್ನುತಲಿ 9 ಕಡೆಯಾಟ ಕಮಲನೇತ್ರೆಯರೆ ಎಡೆಯಾಗಿ ಹೋಗಿ ನಿಲ್ಲಿರಿಓಡಿಬಂದರೊಂಟಿಯಾಗಿ ಹಿಡಿದು ನೋಡಿ ಕೊಡುವೆ ಎಂದಕೋಡಗ ಕೊರವಂಗೆ ಸಿಕ್ಕಿ ಆಡಿದಂತೆ ನಾವಾಡಿದೆವೆಓಡಿ ಬಂದೊಬ್ಬೊಬ್ಬರಿಗೂ ಹಿಡಿದು ಸವರಿ ವಸ್ತ್ರವನಿತ್ತನೆ 10 ತಂಡತಂಡದ ನಮಗೆ ಬಣ್ಣಬಣ್ಣದ ಬಳೆಯನಿಟ್ಟುಮಂಡೆ ಬಾಚಿ ಕುರುಳ ತಿದ್ದಿ ಕುಂಕುಮವಿಟ್ಟನೆಪುಂಡ ನಿನ್ನಣುಗ ನೆಲೆಯಾದಿಕೇಶವರಾಯಬಂಡು ಮಾಡಿ ಬಳಲಿಸಿ ಕೊನೆಗೆ ರಮಿಸಿ ಕಳಿಸಿಕೊಟ್ಟನೆ 11
--------------
ಕನಕದಾಸ
ಸೋಜಿಗದಲಿ ಜೀವಿಸುವರು ಸುಜನರು ಪ ಈ ಜಗದಲಿ ದುಷ್ಟ ಗೋಜಿಗೆ ಸಿಲುಕದೆ ಅ.ಪ ಪರರ ವಿಭವಗಳಿಗೆ ಕರಗಲರಿಯರಿವರು ಕೊರೆಯುವ ಬಡತನಕುರಿಯಲರಿಯರು ಹರಿ ಕರುಣದಿ ತಮಗೆ ಸಿರಿಯು ಬಂದೊದಗಲು ಪರಿಪರಿ ವಿಧದಲಿ ಮೆರೆಯದೆ ದೈನ್ಯದಿ 1 ಕೆಡುಕುತನಗಳನು ಅರಿಯರು ಈ ಜನ ಬಡವರ ಸೌಖ್ಯಕೆ ದುಡಿವರು ಮುದದಲಿ ಕಡುದುರುಳರು ನಿಂದೆ ನುಡಿಗಳಾಡುವರೆಂದು ದುಡುಕದೆ ಅವರಲಿ ಕ್ಷಮೆಯ ತೋರುತ ಸದಾ 2 ಪರರಿಗುಪಕೃತಿಯಲರಿಯರು ಮಿತಿಯನು ಪರರಿಗುಪಕೃತಿಗೆ ಜರಿಯರು ಮತಿಯನು ಶರಣ ಪ್ರಸನ್ನನ ಕರುಣವ ಪೊಂದಲು ವರನೀತಿಗಳಲಿ ನಿರತರಾಗುತ ಸದಾ 3
--------------
ವಿದ್ಯಾಪ್ರಸನ್ನತೀರ್ಥರು
ಸೋಜಿಗವಾಯಿತು ಸದ್ಗುರುವಿನ ಕೃಪೆ ಹೇಳಲೇನು ನಿಜಗುಹ್ಯದ ಮಾತು ಗುರುತವಾಗಿ ಹ್ಯ ಸಾಧು ಬಲ್ಲ ಖೂನ ಧ್ರುವ ನೀಗದ ನೀಗಿತು ಹೋಗದ ಹೋಯಿತು ತ್ಯಾಗಲ್ಯೊಂದು ಬಾಗದ ಬಾಗಿತು ಸಾಗದ ಸಾಗಿತು ಯೋಗಲ್ಯೊಂದು ಆಗದ ಆಯಿತು ಕೂಗದ ಕೂಗಿತು ಈಗಲ್ಯೊಂದು ತೂಗದ ತೂಗಿತು ಸುಗಮ ತಾ ತೋರಿತು ಜಗದೊಳೊಂದು 1 ಹುರಿಯಲೊಂದು ಅರಿಯಿತು ಅರಿವಿಲೊಂದು ಸುರಿಯದ ಸುರಿಯಿತು ಗರೆಯದ ಗರಿಯಿತು ತ್ಯರಿಯಲೊಂದು ಜರಿಯದ ಜರಿಯಿತು ಬೆರಿಯದೆ ಬೆರಿಯಿತು ಕುರಿವಿಲೊಂದು 2 ಜಾರದ ಜಾರಿತು ಮೀರದ ಮೀರಿತು ಹಾರಲೊಂದು ತೋರದ ತೋರಿತು ಸೇರದ ಸೇರಿತು ಸಾರಲೊಂದು ಬೀರದ ಬೀರಿತು ಸಾರಸದೋರಿತು ಕರದಲೊಂದು ತರಳ ಮಹಿಪತಿಗ್ಹರುಷವಾಯಿತು ಗುರುಕರುಣಲಿಂದು 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಸೋಜೀಗ ರೊಳಗತಿ ಸೋಜೀಗ ರಾಘವೇಂದ್ರಾ ಗುರು ಪ ಸೋಜೀಗ ವಲ್ಲವೆ ರಾಜಾ ಗುರುವು ನೀನು ನೈಜ ರೂಪದಿ ಬಂದು ಮಾಜಾದೆ ಪೊರೆವುದು ಅ.ಪ ಬೆಂಬಲ ನಿನಗೆಂದು ಸ್ತಂಭದಿ ಹರಿ ಬಂದ ಇಂಬು ಪಾಲಿಸು ಗುರುವೇ ನಂಬೀದ ಜನಗಣ ಡಿಂಭದಿ ನೀ ಮೂಡಿ ಅಂಬಕ ದೊಳು ಕಂಡೇ 1 ಇಲ್ಲ ಹರಿಯು ಎಂಬ ಕ್ಷುಲ್ಲ ಸಂಶಯ ವೆಂಬ ಹಲ್ಲು ಮುರಿದು ಭಕ್ತರಲ್ಲಿ ತುಂಬುವೆ ಭಕ್ತಿ ಇಲ್ಲದಿರಲು ನೀನು ಕಳ್ಳ ಕಲಿಯು ಜಗ ವೆಲ್ಲ ತುಂಬುತ ಶೃತಿ ಸುಳ್ಳು ಎನಿಸುತಿದ್ದಾ 2 ನಿರುತ ನೀಡುತ ಹರಿಕೆ ಕರೆದು ಪೊರೆವೆ ಜನರ ಸರಿಯು ಕಾಣೆನು ನಿನಗೆ ಹರಿಯ ಕಿಂಕರ ಶರಣು ಮರುತ ದೇವನ ಮತ ಮೆರೆಸಿ ಕುಣಿಸುತ್ತಿರುವೆ ಶರಣ ಜನರ ಪೊರೆವ ಪರಮಾಪ್ತ ಸಿದ್ಧವೋ 3 ಹುಣ್ಣು ಅಳಿಸಿ ಭಕ್ತಿ ಹಣ್ಣು ತಿನ್ನಿಸಿ ಜ್ಞಾನ ಕಣ್ಣು ಪಾಲಿಪ ಗುರು ಮಣ್ಣು ಗೂಡಿಸೊ ಭವವ ಸಣ್ಣವರೆಮ್ಮ ಶಂಕು ಕರ್ಣನೆ ಸಲಹೈಯ್ಯ ಗಣ್ಯರೊಳಗೆ ಗಣ್ಯ ಪೂರ್ಣ ಪ್ರಜ್ಞರ ಪ್ರೀಯಾ 4 ಹಿಂದೆ ಹೋಯಿತು ಹೊತ್ತು ಮುಂದೆ ಕಾದಿದೆ ಮೃತ್ಯು ಇಂದು ಭಾರವ ಪೊತ್ತು ಕಂದರೆಮ್ಮನು ಕಾಯೋ ಇಂದ್ರ ತಾತನ ಹೃದಯ ಮಂದೀರದಲಿ ನಲಿವ ಇಂದಿರೇಶ ಕೃಷ್ಣವಿಠಲ ರಾಯನ ತೋರು 5
--------------
ಕೃಷ್ಣವಿಠಲದಾಸರು
ಸೋದಾಕ್ಷೇತ್ರವೆ ದಿವ್ಯ ಕ್ಷೇತ್ರ ಬಂದ ಜನರಿಗಿಷ್ಟವನೀವ ಕ್ಷೇತ್ರ ವೀರಶೈವರ ಗೆದ್ದ ಕ್ಷೇತ್ರ ಪ ಒಂದು ಭಾಗದಿ ರೂಪ್ಯಪೀಠ ಮ- ತ್ತೊಂದು ಭಾಗದಿ ಸೋದಾಕ್ಷೇತ್ರ ಕುಂದು ಎಳ್ಳಷ್ಟಿಲ್ಲದೆ ತೋರ್ಪು ದೆಂದು ಹರಿಭಕ್ತರಾದರಿಸುವರು 1 ವೈಕುಂಠನಂತಾಸನಗಳು ಚೆಂದವೇನೆಂದು ಪೇಳಲಿ ಮನವೆ 2 ರಾಜೇಶ ಹಯಮುಖ ಚರಣ ಕಂಜ ಮಧುಪನಂತಿರುವ ಶ್ರೀಭಾವಿ- ಕಂಜಜಾತನ ಪದಕರುಹ ವಾದಿರಾಜರಾಯರ ದಿವ್ಯ ಕ್ಷೇತ್ರ 3
--------------
ವಿಶ್ವೇಂದ್ರತೀರ್ಥ
ಸೋಮ ಸುರ್ಯೋಪರಾಗದಲಿ ಗೋಸಹಸ್ರಗಳ ಭೂಮಿದೇವರಿಗೆ ಸುರನದಿಯ ತಟದಿ ಶ್ರೀ ಮುಕುಂದಾರ್ಪಣವೆನುತ ಕೊಟ್ಟ ಫಲವಕ್ಕು ಈ ಮಧ್ವನಾಮ ಬರೆದೋದಿದವರಿಗೆ 1 ಪುತ್ರರಿಲ್ಲದವರು ಸತ್ಪುತ್ರರೈದುವರು ಸ ರ್ವತ್ರದಲಿ ದಿಗ್ವ್ವಿಜಯವಹುದು ಸಕಳ ಶತ್ರುಗಳು ಕೆಡುವರಪಮೃತ್ಯು ಬರಲಂಜುವುದು ಸೂತ್ರನಾಮಕನ ಸಂಸ್ತುತಿ ಮಾತ್ರದೀ 2 ಶ್ರೀ ಪಾದರಾಯರು ಪೇಳಿದ ಮಧ್ವ ನಾಮ ಸಂ ತಾಪ ಕಳೆದಖಿಳ ಸೌಖ್ಯನೀವುದೂ ಶ್ರೀಪತಿ ಜಗನ್ನಾಥವಿಠಲನ ತೋರಿ ಭವ ಕೂಪಾರದಿಂದ ಕಡೆಹಾಯಿಸುವುದು 3
--------------
ಜಗನ್ನಾಥದಾಸರು
ಸೋಹಮೆಂದು ಸುಖಿಸು ವಿಗತ ಮೋಹದಿಂದ ಸಂತತಂದೇಹ ದೇಹದೊಳಗೆ ತೋರ್ಪನೀ ಹಿತಾತ್ಮನೀತ ಪರಮ ಪಘನದ ರತುನಮಂಟಪವನು ಶುನಕವೇರಿ ತನ್ನ ನೆಳಲಕನಲಿ ನೋಡಿ ಗಳಹಿ ತಾನಿದೆಂಬುದರಿಯದೆಮನದೊಳನ್ನವೆಂದು ಭ್ರಮಿಸಿ ಮತ್ತೆ ಕಡಿಯಲದರೊಳೊಡದು*ನೆನೆವ ತನ್ನ ರಕುತವನ್ನು ಸವಿವ ರೀತಿಯಲಿವಿನುತ ಜೀವ ತನ್ನ ಛಾಯೆಯನು ಸಮಸ್ತರೊಳಗೆ ನೋಡಿನೆನೆದಿದನ್ಯವೆನುತ ಭ್ರಾಂತನಾಗಿ ಮಾಯೆುಂದನುಭವಿಸುವೆನಿದನಿದೊಲ್ಲೆನೆನುತ ಭೇದ ಬುದ್ಧಿುಂದಮನುಮಥಾಗ್ನಿುಂದ ಬೆಂದು ಮನದಲಿದ್ದ ಕಾರಣಂ 1ನರರು ಗಜವ ಪಿಡಿಯೆ ಕಪ್ಪ ಕೊರವುತದರ ನಡುವೆ ತಿಟ್ಟನಿರಿಸಿ ಕಣ್ಣಿಯಲ್ಲಿ ಕಟ್ಟಿಯದರ ಸುತ್ತಲೂನೆರಹಿ ಕಾಷ್ಠ ಮೃತ್ತುಗಳನು ನಿಜದಪ್ಪಿರಮಾಡೆ ಭ್ರಮಿಸಿಕರಿಣಿಗಾಗಿ ಬಂದು ಗಜವು ಮರೆದು ಬಿದ್ದ ರೀತಿುಂದುರೆ ವಿರಿಂಚಿ ಕೂಪ ಸಾಮ್ಯವಾದ ನರಶರೀರಮಂಮರೆಸಲದರ ಮೇಲೆ ಚರ್ಮವೆನಿಪ ಮಾಯೆುಂದ ನರರುಮರೆತು ತಾವಿದೆನ್ನುತದರಲಿದ್ದ ಕಾರಣಂ 2ಮರೆದು ತನ್ನ ತಾಣವನ್ನು ಮೆರೆದುಲಂಘಿಸುತಲಿ ಭೇಕವಿರಲು ಹೊಂಚಿ ಪಿಡಿದು ಪಾವು ಪಿರಿದು ದೇಹಮಂನೆರೆದು ನುಂಗಲಾರದಿರುತಲಿರಲು ಭೇಕ ತನ್ನ ಹಸಿವಿಗಿರದೆ ಬಾಯ ತೆಗೆದು ನೊಣನನರಸಿ ಪಿಡಿವ ರೀತಿುಂನರರು ತಮ್ಮ ಕಾಲಸರ್ಪ ಉರುಬಲದನು ಮರೆತು ಭೋಗಪರತೆುಂದ ಕಾಮರೋಷ ವಿರಸರಾಗುತಿರಲು ನೀನರಿದನಿತ್ಯವೆಲ್ಲವೆಂದು ಮೆರೆದು ಗೋಪಾಲಾರ್ಯ ಪದವನೆರೆದು* ಭಕತಿುಂದ ನೋಡಿ ಪಾಡಿ ಹರುಷದಿಂದ ನೀ 3
--------------
ಗೋಪಾಲಾರ್ಯರು
ಸೌಪರ್ಣಿ ಪತಿ ಪಕ್ಷಿಪದ | ಪದ್ಮಕ್ಕೆ ಶರಣೆಂಬೆ | ಸದ್ಮದೊಳಗೆ ಹರಿಪದ್ಮಪದವ ತೋರು || ಕರುಣವ ನೀ ಬೀರು ಪ ನಿತ್ಯ ಹರಿಯ ಸ್ಮøತಿಯಿತ್ತು ಕಾವುದೆನ್ನ | ಬಂದ ಪ್ರಪನ್ನನ ಅ.ಪ. ಮೋದ ಪಾದ ತೋರಿಸು 1 ಯೋನಿ ಬರೆ ಭಯ | ವೇನು ಹರಿಸ್ಮøತಿ | ಸಾನು ಕೂಲಿಸಮ್ಮ 9 ಪಾಪಕಂಜೆ ದ | ಯಾ ಪಯೋನಿಧಿ | ಗೋಪ ಗುರು ಗೋ | ವಿಂದ ವಿಠಲನರೂ¥5Éೂೀರೆ ಹೃ | ತ್ಕೂಪದೊಳು ಭವ ಕೂಪ ದಾಟ5 ಸೌಪರ್ಣಿದೇವಿ 3
--------------
ಗುರುಗೋವಿಂದವಿಠಲರು