ಒಟ್ಟು 4871 ಕಡೆಗಳಲ್ಲಿ , 122 ದಾಸರು , 3096 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎಂಥ ಕೆಲಸಮಾಡಿ ಬಂದನೇ ಗೋಪ್ಯಮ್ಮ ನಿನ ಮಗ|| ಎಂಥ ಕೆಲಸ ಮಾಡಿ ಬಂದ ಕಾಂತ ಮಯೊಳಿಲ್ಲದಾಗ ಚಿಂತೆಲೇಶವಿಲ್ಲದೆ ಬಂದು ಚಿದುಗ ಬುದ್ಧಿತೋರಿ ಆಗ ಪ ಮಲಗಿ ಇರಲು | ಹೊಡಕೊಂಡು ಯಾರು ಹೋದರಂದನೆ ಈ ಮಾತು ಕೇಳಿ ಗಂಡ ಆಕಳ ಹುಡುಕ ಹೋದನೆ ಸುತ್ತಿ ಗಂಡನೆಂದು ಕೂಡೆಂದೆನ್ನ 1 ಬಟ್ಟೆ ಬಿಡಿಸಿ ಭಯವಿಲ್ಲವೆಂದನಮ್ಮ ಮಾನವುಳ್ಳ ಸ್ತ್ರೀಯರ ಸಂಗ ಸ್ನಾನಕ್ಕಾಗಿ ನದಿಗೆ ಹೋಗಿ ಸ್ನಾನಮಾಡೊ ನೀರೊಳು ನಿಂತೆನೆ ಆವೇಳೇ ಬಂದು ಕಾಣದ್ಹಾಗೆ ಶೀರಿ ತೆಗೆದನೆ ನಾನು ಕಾಣದೆ ಉಡಲು ಹೋದೆ ಕಾನನದೊಳು ಕೈಯ್ಯ ಪಿಡಿದು ಏನು ಮಾನ ಕಳದನಮ್ಮಾ 2 ಹೆಂಗಳೆರು ಎಲ್ಲ ಕೂಡಿ ಗಂಗಾಕ್ರೀಡೆನಾಡೋ ವೇಳೆ ಅಂಗವಸ್ತ್ರÀವನೆಲ್ಲ ತೆಗೆದನೆ ತೆಗೆದು ಮರದ ಟೊಂಗೆನೇರಿ ಕಾಡುತಿಹನೆ ಭಂಗ ಅಂಗವ್ರತವೆಲ್ಲ ಕೆಡಿಸಿರಂಗ ' ಹೆನ್ನೆ ವಿಠಲ’ ಶ್ರೀರಂಗಧಾಮನೆನೆಯಿರೆ 3
--------------
ಹೆನ್ನೆರಂಗದಾಸರು
ಎಂಥ ಗರವು ನೋಡಮ್ಮಯ್ಯರುಕ್ಮಿಣಿಗೆಂಥ ಗರವು ನೋಡಮ್ಮಯ್ಯಕಂತುನಯ್ಯನ ಎನಗಂತ್ರವ ಮಾಡಿದ ಮಂತ್ರವ ಮಾಡಿದಳಮ್ಮಯ್ಯ ಪ. ಹಿಡಿದ ವೀಳ್ಯವ ನಾನು ಕೊಡುವೊ ಸಮಯದಿಬಂದು ಕಿಡಿ ಹಾಕಿದಳು ನೋಡಮ್ಮಯ್ಯಭಾವೆ ಕಿಡಿಯ ಹಾಕಿದಳು ನೋಡಮ್ಮಯ್ಯ ಹುಡುಗೆ ವೀಳ್ಯಕೆ ಮುಖಕೊಡಬಹುದುಕೃಷ್ಣನು ಬಿಡನು ಇವಳದೇನಮ್ಮಯ್ಯಇಂಥ ಭಿಡೆಯು ಇವಳದೇನಮ್ಮಯ್ಯ 1 ಮೋದ ಇಟ್ಟವಳಿಗೆಆದರವಿಲ್ಲ ನೋಡಮ್ಮಯ್ಯಏನೂ ಆದರವಿಲ್ಲ ನೋಡಮ್ಮಯ್ಯ ಕಾಡುತ ಕೊಟ್ಟ ವೀಳ್ಯವ ಮಾಧವಗೆಕೊಟ್ಟರೆ ಹೋದೀತು ಬುದ್ದಿ ನೋಡಮ್ಮಯ್ಯರುಕ್ಮಿಣಿಯಲ್ಲೆ ಹೋದೀತು ಬುದ್ಧಿ ನೋಡಮ್ಮಯ್ಯ 2 ಥಾಟು ಥೀಟಿನ ಭಾವೆ ಮಾಟ ಮಾಡಿದಳೇನಮ್ಮಯ್ಯಬೂಟಕತನ ನೋಡಮ್ಮಯ್ಯಬೂಟಕಗುಣದವಳ ಕೂಟಕೆ ಮೆಚ್ಚಿದಹರಿಯ ಆಟವÀ ನೋಡಮ್ಮಯ್ಯಮರುಳಾಟವ ಹರಿಯ ನೋಡಮ್ಮಯ್ಯ3 ಸೃಷ್ಟ್ಯಾದಿಕರ್ತಗೆ ಇಟ್ಟಳು ಮದ್ದಾನೆ ಧಿಟ್ಟತನವ ನೋಡಮ್ಮಯ್ಯರುಕ್ಮಿಣಿಯ ದಿಟ್ಟತನವ ನೋಡಮ್ಮಯ್ಯಎಷ್ಟು ಧೈರ್ಯವೆಂದು ಕೃಷ್ಣತಾ ಬೆರಗಾಗಿ ಬಿಟ್ಟನುವೀಳ್ಯವ ನೋಡಮ್ಮಯ್ಯ4 ವಟಪತ್ರ ಶಾಯಿಗೆ ಕುಟಿಲ ಮಂತ್ರವಮಾಡೊ ಚಟುಲತನ ನೋಡಮ್ಮಯ್ಯ ಭಾವೆಯ ಚಟುಲತನವ ನೋಡಮ್ಮಯ್ಯಸಟಿಯಲ್ಲ ಇವಳೆದೆ ಕಠಿಣತಿಶÀಯವೆಂದು ಮಿಟಿಮಿಟಿ ನೋಡಿದನಮ್ಮಯ್ಯಕೃಷ್ಣ ಮಿಟಿಮಿಟ ನೋಡಿದನಮ್ಮಯ್ಯ 5 ಭಾಳೆ ದಯಾಳು ಎಂದು ಹೇಳುವ ಶೃತಿಗಳುಕೇಳಿ ಆಟವು ನೋಡಮ್ಮಯ್ಯಹರಿಯ ಕೇಳಿ ಆಟವು ನೋಡಮ್ಮಯ್ಯಕಾಳ ಕೂಟವ ಕೈತಾಳವ ಹಿಡಿದಂತೆಆಳುವನಿವಳ ನೋಡಮ್ಮಯ್ಯಕೃಷ್ಣ ಆಳುವನಿವಳ ನೋಡಮ್ಮಯ್ಯ6 ಸರ್ವದಾ ತನ್ನ ಕೂಡ ಇರಬೇಕೆಂದೆನುತಲಿಎರೆದಳು ತೈಲವ ನೋಡಮ್ಮಯ್ಯಹರಿಗೆ ಎರೆದಳು ತೈಲವಮ್ಮಯ್ಯಭರದಿ ಕೋಪಿಸಿ ಕಣ್ಣು ತೆರೆದು ನೋಡುವರೆನ್ನಧರಿಸಲಿನ್ನೆಷ್ಟು ನೋಡಮ್ಮಯ್ಯನಾ ಧರಿಸಲಿನ್ನೆಷ್ಟು ನೋಡಮ್ಮಯ್ಯ 7 ಪುಂಡರೀಕಾಕ್ಷನ ಕೊಂಡಾಡಿ ಸುಖಿಸುವಹೆಂಡಿರು ಕಡಿಮೆಯೇನಮ್ಮಯ್ಯಹರಿಗೆ ಹೆಂಡಿರು ಕಡಿಮೆಯೇನಮ್ಮಯ್ಯಕೆಂಡವ ತುಂಬಿದ ಮಂಡಿ ತೋರಿಸಿದಂತೆಚಂಡಿಯನಾಳುವ ನಮ್ಮಯ್ಯಕೃಷ್ಣ ಚಂಡಿಯನಾಳುವ ನಮ್ಮಯ್ಯ8 ಧಿಟ್ಟಿಯರಿಬ್ಬರು ಕೋಪ ಬಿಟ್ಟರೆ ಇವರಿಗೆಎಷ್ಟು ಒಲುಮೆ ನೋಡಮ್ಮಯ್ಯನಾ ಎಷ್ಟು ಒಲುಮೆ ನೋಡಮ್ಮಯ್ಯಧಿಟ್ಟ ರಾಮೇಶನಲೆ ಇಟ್ಟರೆ ಇವರಿಗೆಎಷ್ಟರೆ ಗರ್ವ ನೋಡಮ್ಮಯ್ಯಬೇಡಿದ್ದು ಎಷ್ಟರೆ ಗರ್ವ ನೋಡಮ್ಮಯ್ಯ 9
--------------
ಗಲಗಲಿಅವ್ವನವರು
ಎಂಥ ವಿಲಕ್ಷಣನೋ ಶ್ರೀಹರಿ ಪ ಪಂಥವು ತಿಳಿಯದನಂತ ಮೂರುತಿಯೆ ಅ.ಪ. ಅಣುವೆಂದರೆ ನೀ ಮಹತನಾಗುವಿಅಣುವಾಗುವಿ ನೀ ಮಹತನೆಂದರೆಅಣು ಮಹತ್ತೆರಡೂ ಕೂಡಿರ ಲಾ ಸಹಗುಣವು ತಿಳಿಯದೊ ಅಜ್ಞೇಯಾ 1 ಧನವ ಕೊಟ್ಟರೆ ನೀ ಬೇಡೆನ್ನುವಿತಿನಿಸು ಕೊಟ್ಟರೆ ಒಲಿಯದಲಿರುವಿಅನುದಿನ ಮನವನ್ನಿತ್ತು ಮಾಳ್ಪ ಬರಿಘನ ಭಕ್ತಿಗೆ ಬಹು ನೀನು ಮೆಚ್ಚುವಿ 2 ಆಕಾರವು ನಿನಗಿಲ್ಲವೆಂತೆನೆಸಾಕಾರ ನೀನಾಗಿ ತೋರುವಿಈ ಕಾರಣ ನಿಜ ನಿಜ ತಿಳಿಯದು ಪೇಳಲುಬೇಕೈ ಗದುಗಿನ ವೀರನಾರಾಯಣ3
--------------
ವೀರನಾರಾಯಣ
ಎಂಥ ಶೂರನೊ ರಾಮ ಎಂಥ ಧೀರನೊ ಪ ಕಂತುಹರನ ಧನುವನೆತ್ತ ಪಂಥದಿಂದ ಮುರಿದು ಬಿಸುಟ ಅ.ಪ. ಹಲವು ಶೂರರಾಜರದನು ಚಲಿಸಲಾಗದ ಧನುವ ಸುಲಭದಿಂದಲೆತ್ತಿ ಮುರಿದು ಲಲನೆ ಸೀತೆಯೊಲಿಸಿದವನು 1 ಸಕಲ ಕ್ಷತ್ರಿಯರನು ಗೆಲಿದು ಪ್ರಕಟನಾದ ಪರಶುರಾಮ ಶಕುತಿಯನ್ನು ತಾನು ಪರಮ ಯುಕುತಿಯಿಂದ ಗೆಲಿದು ಬಂದ 2 ಸಾಲು ಶಿರನ ಕೀಟವೆಂದು ಬಾಲದಲ್ಲಿ ತಂದ ವೀರ ವಾಲಿಯನೇಕ ಬಾಣದಲಿ ಲೀಲೆಯಿಂದಲಿರಿದ ಜಾಣ 3 ಹತ್ತನಾಲ್ಕು ಲೋಕಗಳನು ಸುತ್ತಿಗೆಲಿದು ಖ್ಯಾತನಾದ ಹತ್ತು ತಲೆಯ ದುಷ್ಟನನ್ನು ಕತ್ತು ಕಡಿದು ಕೆಡಹಿದವನು 4 ರಾಸಿ ದೈತ್ಯರನ್ನು ಕೊಂಡು ದೇಶವನ್ನು ಉದ್ಧರಿಸಿದ ವಾಸವಾದಿ ಸುರನುತ ರಂ- ಗೇಶವಿಠಲರೇಯನವನು 5
--------------
ರಂಗೇಶವಿಠಲದಾಸರು
ಎಂಥಾ ಜಾಣೆಯೋ ಸುಪ್ರವೀಣೆಯೋ ಮುನ್ನಾಕೆಎಂಥಾ ನೋಂಪಿಯನೋಂತ ಫಲವೋಕಾಂತನ ಪರಕೀಯ ಕಾಂತೆಯೆಡೆಗ ಬಿಡ-ದಂತೆ ಸಂತಸದೊಳೇಕಾಂತ ಸುಖದೊಳಿರ್ಪ ಪ ನುತ ಹಂಸತೂಲತಲ್ಪದೊಳು ನಾನಾ ಬಂಧಗತಿಯಲಿ ಕಾಮಕೇಳಿಯನೆಸಗಿರತಿಸುಖಪಾರವಶ್ಯದೊಳೊಂದು ವರುಷದಮಿತಿಯನು ತೃಟಿಕಾಲವೆಂದುಸುರುವಳು ತಾ 1 ಹೆಣ್ಣು ಜನ್ಮದಿ ಹುಟ್ಟಿದುದಕೆ ಫಲವದುಕನ್ನೆಯರೊಳಗೆ ಕಟ್ಟಾಣಿಯಾಕೆಮುನ್ನೆಷ್ಟುಗಾಲ ತಪವ ಮಾಡಿ ತಾನಿಂಥಾಪುಣ್ಯವ ಪಡೆದಳಾಕೆಯ ಜನ್ಮ ಸಫಲವೋ2 ವರುಷವಾಗಲಿ ಒಂದು ದಿನವಾದರಾಗಲಾತರುಣಿಯ ಭೋಗದಂತಿರಬೇಡವೆಇರುಳು ಹಗಲು ಕಾಣದಂತೆ ಶ್ರೀ ಕೆಳದಿಯಪುರದ ರಾಮೇಶನೊಳ್ಪರಸದೊಳಿರುವಳಿಂ 3
--------------
ಕೆಳದಿ ವೆಂಕಣ್ಣ ಕವಿ
ಎಂಥಾ ಠೌಳಿಗಾರನಮ್ಮ ಗೋಪಮ್ಮ ನಿನ್ನ ಮಗ ನ್ನೆಂಥಾ ಠೌಳಿಗಾರನಮ್ಮ ಪ. ಎಂಥಾ ಠೌಳಿಗಾರ ಪಂಥಾದಿ ಬೆನ್ನಟ್ಟಿ ಬಂದು ನಿಂತಲ್ಲೆ ನಾನಾರೂಪವೆಂತು ತಾಳುವ ನೋಡೆ ಎಂಥಾ ಅ.ಪ. ನೀರೊಳು ಮೀಯಲು ಪೋದೆನೆ ಗೋಪಮ್ಮ ಸಾರಿ ಪಿಡಿಯಲು ಹೋದೆ ಆರು ಅರಿಯರೆಂದು ಪೊತ್ತು ಮರೆಯಾದನೇ ಗೋಪಮ್ಮ 1 ಗೋಪಿ ಧೂಳು ಕೆದರಿ ಕೋರೆ ತೋರುವನ ಖೂಳ ದೈತ್ಯನ ಸೀಳೆ ಕೇಳಿ ಕಂದನ ನುಡಿ ಭಾಳ ಕ್ರೂರ ಮೃಗ ಕೇಳಿದೊಡಲು ಭಯ ತಾಳಿ ಬಂದೆ ಇಂಥ2 ದೊರಕಿದನೆಂದೆ ತಿರುಕ ಬ್ರಹ್ಮಚಾರಿ ತಿರುಗಿ ನೋಡೆ ಥೋರ ಕೊಡಲಿ ಪಿಡಿದು ನಿಂತು ಮಾರುತಿ ಸೇವಿತನಾದ ಗಮನ ದೇವನು ಎಂಥಾ 3 ಚಿತ್ತಜನೈಯ್ಯನು ನಾನೆತ್ತ ಪೋದರು ಬಿಡ ಸುತ್ತಿ ಬಹನೆ ಕೃಷ್ಣಾ ಮುತ್ತ ತಾರೆನುತ ಕತ್ತಲೆಯೊಳು ಪೋದೆ ವಿಸ್ತರಿಸುವೆನೆಂತು ಗೋಪಿ ಇಂಥಾ 4 ಶ್ರೀಪತಿ ಶ್ರೀನಿವಾಸನ ಪಿಡಿದು ಗೋಪಾಲನ ಎಳತಂದೆ ನಿನ್ನೆಡೆಗೆ ತಾ ಪರಾರಿಯಾಗಿ ಗೋಪತಿ ಹಯನೇರಿ ಏಪರಿ ಪೋದನೊ ತಾಪತಾಳಲಾರೆ ಎಂಥಾ 5
--------------
ಸರಸ್ವತಿ ಬಾಯಿ
ಎಂಥಾ ಮೋಹನನೇ ನೋಡಮ್ಮಯ್ಯಾ| ಸಂತತ ತೃಪ್ತನು ಬಾಲಕನಾದಾ|ಅ- ನಂತ ಚರಿತೆಯಾ ದೋರುವ ಕೃಷ್ಣ ಪ ಮೂಡಣ ದೇಶಕೆ ಪಡರಲು ಗೋಪಿಯು| ತಡೆಯದೆ ದುಮುಧುಮು ಧುಮುಕೆನುತ| ಕಡೆಯಲು ಧುಡು ಧುಡು ಧುಡುನಡೆಯುತ ಬಂದು| ಪಿಡಿದೆನ್ನ ಸೆರಗ ಬೆಣ್ಣೆ ಬೇಡುವಾ ಕೃಷ್ಣ 1 ಸಮಗೆಳೆಯರ ಸಂಗಡ ಧ್ವನಿವೇಣಿಯ| ಉಮಟೆಸುತಲಿ ಧಿಗಿಧಿಗಿಲೆನುತಾ| ಧಿಮಿಕಿಟ ಧಿರಕಿಟ ತಿರುಕಿಟವೆಂಬೋ| ಕ್ರಮದಿ ವಾದ್ಯವ ಬಾರಿಸುವಾ ಕೃಷ್ಣ 2 ಗುರು ಮಹೀಪತಿ ಪ್ರಭುವಿನ ಪದರಜ| ದೊರಕದು ಅಜಭವ ಮುಖ್ಯರಿಗೆ! ಹರುಷದಿ ತೋಳ್‍ದೊಡೆ ಮೇಲೆ ಓಡಾಡುವಾ| ಧರೆಯೊಳು ಯಶೋಧೆ ಸುಕೃತವೆಂತೋ3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಎಂಥಾ-----------ಈಗ ಪಿಡಿಯೊ ಎನ್ನ ಕೈಯ್ಯ ಬೇಗ ಅನಂತಾ ಭಗವಂತಾ ಶ್ರೀಕಾಂತಾ ಜಗದಂತ ....... ಪ ಒಂದೊಂದು ದಿನವು ಎಂಬುದು ಒಂದೊಂದು ಯುಗವು ಆಗಿ ಬೆಂದು ಬಹಳ ಬೇಸರದಿಂದ ತಂದೆ ----------ಬಂದೀ ಕಂದನೆಂದು ಕರುಣದಿಂದ ---------ಗೋವಿಂದ ನಂದ ಮುಕುಂದಾ ಶ್ರೀ ಮಂದರಧರ 1 ಮಕ್ಕಳು ಮರಿಗಳು ಎಲ್ಲಾ ------ಕಾಣದ ದೇವಾ ಶುಷ್ಕ ಭೂತರಾಗಿ ಇನ್ನು ಸುಖವು ಕಾಣದೆ ---ನೆಗೊಂಡು ಬಹಳಘೋರ ನಾ ಬಡುವದು ಕಂಡು ನಿಕ್ಕಾಸಲಾರದೆ ನಿನ್ನ ಮೊರೆಯ ಹೊಕ್ಕ ಕಾಯಯ್ಯ ನೀನೆ --------- ಶ್ರೀ ಲೋಕನಾಯಕ ಹರಿಯೆ 2 ಮನಸು ನಿನ್ನ ಧ್ಯಾನವು ಬಿಟ್ಟು ತಿರಸೂ? ಚಿಂತನೆಗೊಳಗೆ ಆಗಿ ಕನಸಿನಲ್ಲಿ ಕಾಣೋನಿಲ್ಲಾ ಕಾಯದ ಸುಖವೆಂಬಾದಿನ್ನು ಅನಿಮಿತ್ತ ಬಂಧು ಕೃಷ್ಣ ಹರಿ 'ಹೊನ್ನ ವಿಠ್ಠಲ' ರಾಯ ಮನಸಿಜನಯ್ಯ ಮೋಹನ್ನ ನಿಧಾನಾ ಸುರಧೇನು ಸದ್ಗುಣಪೂರ್ಣ 3
--------------
ಹೆನ್ನೆರಂಗದಾಸರು
ಎಂಥಾತ ಗುರುರಾಯನು ಜಗ - ದಂತರ್ನಿಯಾಮಕನು ಪ ಸಂತೋಷದಿಂದಲಿ ಅಂತೇವಾಸಿಗಳ ನಿಂತು ಪಾಲಿಸುತಿಹನು ಅ.ಪ ಚಿಂತೆಯು ಯಾಕೆಂದನು ನಿ - ಶ್ಚಿಂತಿ ಮಾರ್ಗವಿದೆಂದನು ಅಂತರದೊಳು ಶಿರಿಕಾಂತನ ಪದವೇಕಾಂತದಿ ಭಜಿಸೆಂದನು 1 ಯಾತಕೆ ಶ್ರಮವೆಂದನು ನಿನಗೆ ಪಾತಕÀವಿಲ್ಲೆಂದನು ಶಿರಿ ನಾಥನ ಭಜಿಸೆಂದನು 2 ಮಾತು ಮೀರದಿರೆಂದಾನು ಮಾತು ಲಾಲಿಪÀನೆಂದನು 3
--------------
ಗುರುಜಗನ್ನಾಥದಾಸರು
ಎಂಥಾದರು ಬಂದರು ಚಿಂತೇ ಇಲ್ಲಾ ಪಂಥವು ಸರಿಯಲ್ಲಾ ಪ ಚಿಂತೆ ಎಂದೆಂಬುದೆ ಮನಸಿನ ರೋಗಾ ಸಂತಸ ಸಂತ್ಯಾಗ ಎಂಥೆಂಥ ಮಿಂಚುವ ದೇಹವಿದೀಗ ಕೃಂತನ ವಿಧಿಭಾಗ ಎಂತಲ್ಲಿ ನೆಲೆಸಿ ಹವಣಿತ ರೋಗಾ ಸಂತತ ಜಡ ಬೀಗಾ ನೀ ನೆನ್ನೊ 1 ಹಿತಾಹಿತವೆಂದಿಗೂ ಕೈಶೇರಿಲ್ಲಾ ಕೃತಿಪತಿ ತಾ ಬಲ್ಲಾ ಮತಿಗೆಟ್ಟು ಸತಿಯೇ ಗತಿಯೆಂದೆಲ್ಲಾ ಸುತಮೋಹ ಬಿಡಲಿಲ್ಲಾ ಮಿತಿಮೀರಿ ಪಣ ಭಂಡಾರದೊಳೆಲ್ಲಾ ರತಸುಖರೆ ಡಿಲ್ಲಾ ಕೇಸರಿ ಸುಖಗುರಿ ಮುರಿಯಲು ಧೃತಿಗೆಟ್ಟು ಬಳಲುವ ಸಂಗತಲ್ಯಾರು ತಿಳಿಯೋ 2 ನೀರಿನ ಬುದ್ಬುದ ಪರಿಸಂಸಾರಾ ದುಃಖದ ಆಗಾರಾ ಶ್ರೀರಾಮ ಮಂತ್ರದ ಸಾರಾ ನಿಜ ಸೌಖ್ಯದ ದ್ವಾರಾ ಶೇರಿ ಹಣ ಹೊನ್ನು ಹೆಂಣ ವಿಚಾರಾ ಗಂಜಾಸಮ ತಾರಾ ನಿಜಸುಖವನು ಪಡೆಯೇ 3
--------------
ನರಸಿಂಹವಿಠಲರು
ಎಂಥಾದೋ ಶ್ರೀ ವೈಕುಂಠವೆಂಥಾದೋ ಪ ಕಂತುಪಿತನ ದೇಹಕಿರಣ ಅದ ರಂತರಂಗ ಹೇಮಾಭರಣ ಕಾಂತಿ ಗಂತು ನಾಚಿದ ರವಿ ಅರುಣ ಅಹಾ ನಂತ ಕಾಲದಲ್ಲಿ ಸಂತತ ತುತಿಪರ್ಗೆ ಪ್ರಾಂತಕ್ಕೆ ನಾಲ್ಕು ನಿಶ್ಚಿಂತ ಮುಕ್ತಿಯ ಸ್ಥಾನ 1 ಪಾಲಸಾಗರ ಮಧ್ಯೆ ಕೂಟ ಒಳ ಗೇಳು ಸುತ್ತಿಸಾಗರ ದಾಟಿ ತಾಳ ಮೇಳದವರು ಮೂರುಕೋಟಿ ನಾಮ ಪೇಳ್ವ ಗಾಯಕರ ಗಲಾಟೆ ಆಹ ಶೀಲ ಮುನಿಗಳು ದೇವ ಗಂಧರ್ವರು ಜೀವನ್ಮುಕ್ತರುಗಳು ಸೇರಿಪ್ಪ ಹರಿಪುರ2 ಹೇಮ ಪ್ರಾಕಾರದ ಪುರವು ಅಲ್ಲಿ ಆ ಮಹ ಬೀದಿ ಶೃಂಗಾರವು ನೋಡೆ ಕಾಮಧೇನು ಕಲ್ಪತರುವು ಬಲು ರಮಣೀಯವಾದ ಇರವು ಆಹಾ ಶ್ರೀ ಮೂರುತಿಯೊಂದು ವೇದಾಂತಶ್ರುತಿ ಸಾರೆ ಆ ಮಹಮುಕ್ತರು ಸೇರಿಹ ಮಂದಿರ 3 ಸುತ್ತಲು ಸನಕಾದಿ ಮುನಿಯ ದಿವ್ಯ ನರ್ತನ ಗಾಯನ ಧ್ವನಿಯು ಪುಷ್ಟ ವೃಷ್ಟಿ ಚಂಪಕ ಜಾಜಿ ಹನಿಯು ಅಲ್ಲಿ ಅಷ್ಟಮ ಸ್ತ್ರೀಯರ ಮನೆಯು ಆಹಾ ಪಾದ ಸಂ ಪತ್ತಿಗೀ ಶಯನ ಸರ್ವೋತ್ತಮನ ಗೃಹ 4 ಥಳಥಳಿಸುವ ದಿವ್ಯದ್ವಾರ ಅಲ್ಲಿ ಹೊಳೆವಂಥ ರಂಗಮಂದಿರ ಮುತ್ತಿ ಭಾರ ಹೇಮ ತುಳಸಿ ಸರದ ಶೃಂಗಾರ ಆಹಾ ಹೊಳೆವ ಮಾಣಿಕದ ಮಂಟಪ ಮಧ್ಯದೊಳ್ಮೆರವ ಚೆಲುವ ಜಗನ್ನಾಥ ವಿಠಲನ ನಿಜಸ್ಥಾನ 5
--------------
ಜಗನ್ನಾಥದಾಸರು
ಎಂದಿಗೆ ದೊರಕುವನೋ ಪ. ಎಂದಿಗೆ ದೊರಕುವ ಸುಂದರ ಪುರುಷನು ಒಂದು ಗಳಿಗೆ ಯುಗ ಒಂದಾಗಿ ಕಳೆದೆನು ಅ.ಪ. ಸರಿರಾತ್ರಿ ವೇಳ್ಯದಲಿ ಮೆಲ್ಲನೆ ಒಂದು ಸರಸವಾಡುತಲಿ ಪರಿಪರಿ ವಿಧದಲಿ ಸ್ಮರನ ಕಲೆಯ ತೋರಿ ವಿರಹಗೊಳಿಸಿ ನಾಳೆ ಬರುವೆನೆನ್ನುತ ಪೋದ 1 ಕೌಸ್ತುಭ ರತ್ನಾ- ಲಂಕೃತ ಶುಭಗ್ರೀವನ ಶಂಕರಾರ್ಚಿತನು ಮೀನಾಂಕಜನಕ ನಿಷ್ಕ- ಲಂಕ ಮಹಿಮನು ಶ್ರೀವೆಂಕಟರಮಣನು 2 ಅಂಗಜಕೋಟಿರೂಪ ಪರಮ ಸದಯಾ- ಪಾಂಗನಿರತ ನಿರ್ಲೇಪ ಮಂಗಲ ಚರಿತ ಭುಜಂಗಶಯನ ನರ- ಸಿಂಗ ವರದ ಮಾತಂಗ ಶ್ರೀರಂಗನು3 ಚಂದಿರಶತವದನ ಶೋಭಿಪ ನವ ಕುಂದ ಕುಟ್ಮಲರದನ ಸಿಂಧುಶಯನ ಮುಚುಕುಂದಾಪ್ತ ಸಚ್ಚಿದಾ- ನಂದ ಗೋವಿಂದ ಮುಕುಂದ ನಂದನಕಂದ4 ಅಕ್ಷರಾರ್ಚಿತ ದೇವನು ಶರಣ ಜನ ಪಕ್ಷ ಪರಾತ್ಪರನು ಪಕ್ಷೀಂದ್ರ ತುರಗ ಪದ್ಮಾಕ್ಷ ತ್ರಿಲೋಕ ವಿ- ಲಕ್ಷಣಮೂರ್ತಿ ಶ್ರೀಲಕ್ಷ್ಮೀನಾರಾಯಣ 5
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಎಂದಿಗೆ ದೊರಕುವನೋಪ. ಎಂದಿಗೆ ದೊರಕುವ ಸುಂದರ ಪುರುಷನು ಒಂದು ಗಳಿಗೆ ಯುಗ ಒಂದಾಗಿ ಕಳೆದೆನುಅ.ಪ. ಸರಿರಾತ್ರಿ ವೇಳ್ಯದಲಿ ಮೆಲ್ಲನೆ ಒಂದು ಸರಸವಾಡುತಲಿ ಪರಿಪರಿ ವಿಧದಲಿ ಸ್ಮರನ ಕಲೆಯ ತೋರಿ ವಿರಹಗೊಳಿಸಿ ನಾಳೆ ಬರುವೆನೆನ್ನುತ ಪೋದ 1 ಕೌಸ್ತುಭ ರತ್ನಾ- ಲಂಕೃತ ಶುಭಗ್ರೀವನ ಶಂಕರಾರ್ಚಿತನು ಮೀನಾಂಕಜನಕ ನಿಷ್ಕ- ಲಂಕ ಮಹಿಮನು ಶ್ರೀವೆಂಕಟರಮಣನು2 ಅಂಗಜಕೋಟಿರೂಪ ಪರಮ ಸದಯಾ- ಪಾಂಗನಿರತ ನಿರ್ಲೇಪ ಮಂಗಲ ಚರಿತ ಭುಜಂಗಶಯನ ನರ- ಸಿಂಗ ವರದ ಮಾತಂಗ ಶ್ರೀರಂಗನು3 ಚಂದಿರಶತವದನ ಶೋಭಿಪ ನವ ಕುಂದ ಕುಟ್ಮಲರದನ ಸಿಂಧುಶಯನ ಮುಚುಕುಂದಾಪ್ತ ಸಚ್ಚಿದಾ- ನಂದ ಗೋವಿಂದ ಮುಕುಂದ ನಂದನಕಂದ4 ಅಕ್ಷರಾರ್ಚಿತ ದೇವನು ಶರಣ ಜನ ಪಕ್ಷ ಪರಾತ್ಪರನು ಪಕ್ಷೀಂದ್ರ ತುರಗ ಪದ್ಮಾಕ್ಷ ತ್ರಿಲೋಕ ವಿ-ಲಕ್ಷಣಮೂರ್ತಿ ಶ್ರೀಲಕ್ಷ್ಮೀನಾರಾಯಣ5
--------------
ತುಪಾಕಿ ವೆಂಕಟರಮಣಾಚಾರ್ಯ
ಎಂದಿಗೆ ನೀ ಕರುಣಿಸುವಿ ಸುಂದರಾಂಗ ಎನ್ನೊಳು ಕುಂದಿ ಪೋದೆನಲ್ಲೊ ಬೇಗ ಬಂದು ಕಾಯೊ ಕರುಣಾಳು ಪ. ಧರ್ಮ ಕರ್ಮಗಳು ಮಾಳ್ಪ ಮರ್ಮವರಿಯದಿದ್ದರು ಭರ್ಮದಾಶೆಗಾಗಿ ಹೀನ ಕರ್ಮದೊಳಗೆ ಬಿದ್ದರು ದುರ್ಮದಾಂಧರನು ಗೆಲುವ ನಿರ್ಮಲ ಚಿದಾತ್ಮ ನಿನ್ನ ಹಮ್ರ್ಯದ ಮುಂದೊದರಿ ಸರ್ವಶರ್ಮಪೊಂದಿಚ್ಛಿಸುವೆನು 1 ಜೀಯ ನಿನ್ನ ಪೊಗಳಿ ಪಾಡುವಾಯವಿರಲು ಸಾಕಯ್ಯ ರಾಯರೊಲವು ತನ್ನಂತೆ ನಿರಾಯಾಸದಿಂದಹುದೈಯ್ಯ ವಾಯುವೀಯ ಜನರ ಕೂಡಿ ಮಾಯ ಗೆಲಲು ಮಾನವೀಯ ಕಾಯವನ್ನು ನೋಯದಂತೆ ಕಾಯೊ ಸಕಲದಾಯಕಾರಿ 2 ನಿತ್ಯಾನಂದ ನಿನ್ನ ಪಾಡಿ ಹೊತ್ತ ಕಳೆವ ಕಾರ್ಯಕ್ಕೆ ಒತ್ತಿ ಬರುವ ವಿಘ್ನಬಾಧೆ ಹತ್ತದಂತೆ ಓಡಿಸು ಸತ್ಯರಮಣ ಶರಣ ಪುರುಷೋತ್ತಮ ಶ್ರೀ ವೆಂಕಟೇಶ ಚಿತ್ತದಲ್ಲಿ ನಿನ್ನ ದಿವ್ಯ ಮೂರ್ತಿದೋರೊ ಮರಿಯದಿರು 3
--------------
ತುಪಾಕಿ ವೆಂಕಟರಮಣಾಚಾರ್ಯ
ಎಂದಿಗೆ ನೀ ಯೆನ್ನ ಮುಂದಕೆ ಬರುವೆಯೊ ಸುಂದರ ಮೂರುತಿಯೆ ನಂದದಿ ಭಕುತರ ವೃಂದಗಳೆಲ್ಲವ ಸಂದೇಹವಿಲ್ಲದೆ ಮುಂದಕೆ ಕರದೊಯ್ವೆ ಪ ಪಂಕಜಾಕ್ಷನೆ ನೀನು ಕಿಂಕರ ಜನರಾ- ತಂಕಗಳೆಲ್ಲವ ಶಂಕಿಸದೆ ವೆಂಕಟನಾಮಕ ಸಂಕಟಪರಿºರವಿವ- ಳಾಂಕರನÀರವ ನಿಶ್ಶಂಕೆಯಿಂದಲಿಯಿತ್ತು 1 ಆರುವೈರಿಗಳೆನ್ನ ಗಾರುಮಾಡುವರಯ್ಯಾ ಆರು ಕಾವರು ಇಲ್ಲಾ ಮಾರಜನಕನೆ ಪಾರುಗಾಣಿಸದೆ ನೀ ದೂರಗೈಸಲು ಯನ್ನ- ನಾರು ರಕ್ಷಿಪರೊ ದೋಷವಿದೂರನೆ ಪೇಳೋ 2 ಯರಬೆರಡೆನಾಗಿತ್ತು ಪೊರಿಯೋ ದೇವರ ದೇವ ಕರುಣಾಬ್ಧಿ ನೀನೆಂದು ವರವೋದು ಶ್ರುತಿಯು ಶರಣಾಗತನನ್ನು ಪೊರೆಯದೆ ಬಿಡುವಂದು ಸರಿಯೇನೋ ಕರುಣಾಳು ಸಿರಿವತ್ಸಾಂಕಿತನೆ 3
--------------
ಸಿರಿವತ್ಸಾಂಕಿತರು