ಒಟ್ಟು 2374 ಕಡೆಗಳಲ್ಲಿ , 123 ದಾಸರು , 1810 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕರುಣಿಸೆ ಕೋಮಲ ಗಾತ್ರೆ ಕಂಜಜಮಾತೆ ಪ ಸುರರು ನಲಿಯುತ ಶಿರವ ಬಾಗಿ ಕರವ ಮುಗಿಯಲು ಪರಮ ಹರುಷದಿ ವರವ ಕೊಡುತಿಹ ಹರಿಯ ಮಡದಿಯೆ ಅ.ಪ. ಕ್ಷೀರವಾರಿಧಿ ತನಯೆ ನಿನ್ನಯ ದೇಹ ಬೀರುತಿದೆ ವಿದ್ಯುಛ್ಛವಿಯೆ ಶ್ರೀ ಹರಿಜಾಯೆ ವರ ಸುದರ್ಶನ ಶಂಖಹಸ್ತದಿ ಮೆರೆಯುತಿರೆ ಭಕುತರನು ಸಲಹಲು ಕರವೀರಪುರ ನಿಲಯದಿ ನೆಲಸಿ ವರದಭಯ ಹಸ್ತವ ತೋರುತಿರ್ಪೆ 1 ಮನಸಿಜಕೋಟಿ ಸುರೂಪಿಣಿ ಮೃದುಮಧುರ ವಾಣಿ ಧನಕನಕಾದಿಗಳಭಿಮಾನಿ ಕೈವಲ್ಯದಾಯಿನಿ ವನಜಸಂಭವೆ ನಿನ್ನ ಒಂದರೆ- ಕ್ಷಣವು ಬಿಡದಲೆ ತನ್ನ ಉರದೊಳು ದನುಜಮರ್ಧನ ಧರಿಸಿಕೊಂಡು ತನುವು ಮನವನು ನಿನಗೆ ತೆತ್ತಿಹ 2 ರಂಗೇಶವಿಠಲನ ರಾಣಿ ಪಂಕಜಪಾಣಿ ಡಿಂಗರೀಕರ ಪೊರೆವ ಕರುಣಿ ಕಾಳಾಹಿವೇಣಿ ಮಂಗಳಾಂಗಿಯೆ ಖೂಳ ಕುಜನರ ಸಂಗಬಿಡಿಸುತ ತವ ಪದ ಸರೋ ಜಂಗಳಲಿ ನಾ ನಲಿದು ವಿಹರಿಪಭೃಂಗನಾಗುವ ಪರಿಯ ತೋರೆ 3
--------------
ರಂಗೇಶವಿಠಲದಾಸರು
ಕರುಣಿಸೊ ಗುರು ಎನಗೆ ಸ್ಮರಿಸು ಹಾಂಗೆ ದೋರು ನಿಮ್ಮರುಹ ಬ್ಯಾಗೆ ಗುರುತಲೀಗೆ 1 ನಿನ್ನವನೆ ಎಂದೆನಿಸೊ ಭಿನ್ನ ಹರಿಸೊ ಎನ್ನ ದಯದಿ ಪಾಲೆಸೋ ಧನ್ಯಗೈಸೊ 2 ಅನುದಿನದಿ ಕಾಯೊ ನೀ ಬಂದು ಅನಾಥ ಬಂಧು ದೀನಾನಾಥ ನೀ ಎಂದೆಂದು ಘನ ಕೃಪಾಸಿಂಧು 3 ಭಕ್ತ ಜನರನುಕೂಲ ಭೋಕ್ತಸಕಲ ಶಕ್ತ ನೀನಹದೊ ಕೃಪಾಲ ಬಕ್ತ ವತ್ಸಲ 4 ಅನುಭವಸುಖ ಬೀರಿಸೊ ಖೂನದೋರಿಸೊ ದೀನ ಮಹಿಪತಿ ತಾರಿಸೊ ಘನಸುರಿಸೊ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಕರುಣಿಸೊ ಶ್ರೀ ಗುರುರಾಜ ಬರದ್ಯಾಕೆ ಎನ್ನೊಳು ದಯ ಪ ದಯಮಾಡೊ ಶ್ರೀ ಗುರುರಾಜ ಹಯವದನನಿಗತಿ ಪ್ರಿಯ ಅ.ಪ ಒಲಿಸಾದೆ ವಿದ್ಯೆಗಳನ್ನು ಬಾಲತನದಿ ಬಹುಕಾಲ ಕಳೆದೆ ಕುಲೀಲೆಗಳಲ್ಲಿ ಛಲವ್ಯಾಕೆ ಎನ್ನೊಳು ಬಲ್ಲಿ 1 ಜ್ಞಾನರಹಿತ ಪ್ರಾಯದಿ ಮಾನಾಪೇಕ್ಷೆಯನೆ ಮಾಡಿ ಮೌನಿ ವೇಷವನೆ ಧರಿಸಿ ಹೀನಾಚರಣೆಯಲ್ಲಿರುವೆ 2 ಪತಿತಾಗ್ರಣಿಯು ನಾ ಬಲ್ಲಿ ಪತಿತಪಾವನ ನೀ ಬಲ್ಲೆ ಗತಿಪದ ಮತಿಯನಿತ್ತು ರತಿಪತಿಪಿತನ ತೋರಿ3 ಬಲ್ಲವರನು ರಕ್ಷಿಪುದು ಅಲ್ಲ ಬಿರುದು ಘನವಾದ್ದು ಅಲ್ಪನ ಪೊರೆಯಲು ನಿನಗೆ ಒಳ್ಳೆ ಕೀರುತಿ ಬರುವುದು 4 ಸರ್ವಜ್ಞ ನಿನಗೆ ನಾನೆಂತೋ ಉರ್ವೀಭಾರನು ನಾ ಪೇಳ್ವೆ ಪರ್ವ ಪಂಚಕಗಳ ಕಳೆ ಶ್ರೀ ನರಹರಿಯನೆ ಪೊಂದಿಸಿ 5
--------------
ಪ್ರದ್ಯುಮ್ನತೀರ್ಥರು
ಕರುಣಿಸೋ ಶಾಸ್ತ್ರಾರ್ಥ ಮದ್ಗುರು ಶ್ರೀ ವಿಷ್ಣುತೀರ್ಥಾ ಪ ಭವರೋಗ ಭೇಷಜನೆ ಬಹುಬಾಧೆ ಬಡುವೆನೊ ಭಾರತೀಶನ ಮುಖ್ಯ ಪ್ರೀತಿಪಾತ್ರಾ 1 ಶ್ರೀನಾಥ ನಿನ್ನಂಥ ದಾತರನು ನಾಕಾಣೆ ಅವನಿಯೊಳಗೆಲ್ಲ ಅರಸಿ ನೋಡಲು 2 ಪರಮ ಭಾಗವತರಿಗೆ ಮುಖ್ಯ ಹಿತಕರ್ತ ನೀನೆ ಧ್ವರಿಯೇ ಧರಿಯ ರಮಣ ತಂದೆವರದಗೋಪಾಲವಿಠಲನ ಮರಿಯೇ 3
--------------
ತಂದೆವರದಗೋಪಾಲವಿಠಲರು
ಕರುಣೆ ತೋರೋ ಕಣ್ಣ ತೆರೆದು ಗುರುವು ನೀನೆ ಗತಿಯು ನೀನೆ ಪ ತ್ವರದಿ ಜಪವ ಪೂರ್ಣ ಮಾಡಿ ಕರವ ಶಿರದಲಿಡುತ ಅ.ಪ. ಸಿರಿಯ ವರನ ಪರಮ ಭಕುತ ಸಿರಿದಮಣಿಗಳಲ್ಲಿ ನೀನು ಹಿರಿಯ ಅಹುದೊ ಜಗದ ಗುರುವೆ ಪರಮ ಕರುಣಾಕರನೆ ದೇವ 1 ಹರಿಯ ಆಜ್ಞದಂತೆ ನೀನು ಸರುವ ಪ್ರಾಣಿಗಳಲಿ ನಿಂದು ಹಿರಿದು ಜಪವನಾಚರಿಸಿ ಅವರು ಅರಿಯದಂತೆ ನಿರುತ ಪೊರೆವೆ 2 ಶರಧಿ ಮಥನದಿಂದ ಬಂದ ಗರಳನಂದು ಭುವನಗಳನು ಉರುಹುತಿರಲು ಹರಿಯ ಮನವ ಅರಿತು ನೀನು ಭರದಿ ಕುಡಿದೆ 3 ಪೊಗಳಲವೆ ನಿನ್ನ ಮಹಿಮೆ ಸುಗುಣಮಣಿ ಭಾರತಿಯ ಪತಿಯೆ ಅಗಜೆಯರಸನನ್ನು ಪೆತ್ತ ನಗಧರನ ಪ್ರೀತಿ ಪಾತ್ರ 4 ಅಜನಪದಕೆ ಅರುಹನಾದೆ ದ್ವಿಜ ಫಣೀಶಾದಿಗಳ ಗುರುವೆ ಭಜನೆಗೈವೆನೆಂತು ನಿನ್ನ ತ್ರಿಜಗವಂದ್ಯ ತ್ರಿಜಗಪೂಜ್ಯ 5 ತ್ರೇತೆಯಲಿ ಅಂಜನಿಯಳ ಪೂತ ಗರ್ಭದಿಂದ ಬಂದು ಪೋತನಾದ ರವಿಜನನ್ನು ಪ್ರೀತಿಯಿಂದ ಸಲಹಿದೆಯ್ಯ 6 ಅಂದು ಕಪಿಯ ವೃಂದವೆಲ್ಲ ಬಂದು ಶರಿಧಿ ತಟದಿ ನಿಂದು ಮುಂದೆ ದಾರಿ ಕಾಣದಿರಲು ಸಿಂಧುವನ್ನು ದಾಟಿ ಬಂದೆ 7 ಮಂಗಳಾಂಗಿ ಸೀತೆಯನ್ನು ಕಂಗಳಿಂದ ನೋಡಿ ಹಿಗ್ಗಿ ಅಂಗನೆಯ ಪಾದಕೆರಗಿ ಉಂಗುರವನಿತ್ತ ಧೀರ 8 ಫಲವ ಸವಿವ ನೆವದಿ ನೀನು ನಲಿದು ವನವ ಮುರಿದು ತುಳಿದೆ ಕಲಹಕಿಳಿದು ಬಂದ ಅಕ್ಷನ ಬಲಿಯಹಾಕಿ ಕುಣಿಯುತಿರ್ದೆ9 ಕುಲಿಶಧರನ ಗೆಲಿದ ವೀರ ಜಲಜಭವನ ಶರವ ಬಿಡಲು ಛಲದಿ ನೀನು ಅದನು ತಡೆದು ಮಲೆತು ನಿಂತ ಮಹಿಮಯುತನೆ 10 ವನಜಭವ ನಾಮನ ಕೇಳಿ ಕನಲಿ ಬಂದಾ ಶರಕೆ ಸಿಲುಕಿ ದನುಜ ಸಭೆಗೆ ಬಿಜಯಮಾಡಿ ಅನುವ ತಿಳಿದು ಬಂದ ದೇವ 11 ರಕ್ಕಸನ ಲೆಕ್ಕಿಸದೆ ಧಿಕ್ಕರಿಸಿ ಮಾತನಾಡಿ ಪಕ್ಕಿರಥನ ಬಲುಮೆಯನ್ನು ಹೆಕ್ಕಳಿಸಿ ನೀ ಪೊಗಳಿ ನಿಂದೆ 12 ಉಕ್ಕಿ ಬಂದ ರೋಷದಿಂದ ರಕ್ಕಸನು ಚರರ ಕರೆದು ಇಕ್ಕಿರಿವನ ಬಾಲಕುರಿಯ ತಕ್ಕ ಶಿಕ್ಷೆ ಮಾಡಿರೆನಲು 13 ಸುಟ್ಟಬಾಲ ನೆಗಹಿಕೊಂಡು ದಿಟ್ಟ ನೀನು ಪುರವನೆಲ್ಲ ಅಟ್ಟಹಾಸದಿಂದ ಮೆರೆದೆ 14 ಶರಧಿ ಹಾರಿ ಬಂದು ಸತ್ಯಸಂಧ ರಾಮಗೆರಗಿ ಇತ್ತು ಚೂಡಾಮಣಿಯನವನಾ ಚಿತ್ತ ಹರುಷಗೈದ ಧೀರ 15 ಹರಿಯು ತನ್ನ ಬೆರಳಿನಲ್ಲಿ ಗಿರಿಯನೆತ್ತಿ ನಿಂತನೆಂದು ಸರುವ ಗಿರಿಗಳನ್ನು ನೆಗಹಿ ಶರಧಿಗೊಡ್ಡಿ ಸೇತುಗೈದೆ 16 ಸುರರಿಗಮೃತವಿತ್ತನೆಂದು ಅರಸಿ ಸಂಜಿವನವ ನೀನು ಭರದಿ ತಂದು ಒರಗಿ ಬಿದ್ದ ಹರಿಯ ವೃಂದಕೆರೆದು ಮೆರೆದೆ 17 ಮಂದರಾದ್ರಿಯನ್ನು ಒಡೆಯ ಅಂದು ಬೆನ್ನಲಿ ಪೊತ್ತು ನಿಂದು ಸಿಂಧುವನ್ನು ಗೆಲಿದನೆಂದು ಬಂದೆ ಹಾರಿ ಲಂಕಪುರಿಗೆ 18 ಧರಣಿಧವಗೆ ನೆರಳಿನಂತೆ ಕಾಲ ಚರಿಸಿ ನೀನು ಅರಸಿನಂತೆ ಬಂಟನೆಂಬ ಕರೆಯವಾರ್ತೆ ಖರೆಯಗೈದೆ 19 ಕಾಲನೇಮಿ ಯತಿಯ ರೂಪ ಜಾಲದಿಂದ ವೇಳೆ ಕಳೆಯೆ ಶೀಲವಂತ ಅವನ ಸೀಳಿ ಬಾಲದಿಂದ ನಗವ ತಂದೆ 20 ವ್ಯಾಸಮುನಿಯ ಯಂತ್ರದಲ್ಲಿ ವಾಸವೆಂದು ತೂರಿಕೊಳುತ ದಾಸ ಜನರ ಆಸೆಗಳನು ಬೇಸರಾದೆ ನೀ ಸಲಿಸುವೆ 21 ನೀನು ಒಲಿಯೆ ರಾಮನೊಲಿವ ನೀನು ಮುನಿಯೆ ರಾಮ ಮುನಿವ ನಾನು ನಿನಗೆ ಅನ್ಯನಲ್ಲ ಸೂನುವಲ್ಲೇ ತಿಳಿದು ನೋಡೊ 22 ನಿನ್ನ ನಂಬಿ ಸರಮೆಯರಸ ಪನ್ನಗಾರಿರಥನ ಒಲುಮೆ- ಯನ್ನು ಪಡೆದು ಹರುಷವಾಂತು ಧನ್ಯನಾದ ಧರೆಯೆ ಮೇಲೆ 23 ನಿನ್ನ ಜರೆದ ಅವನ ಅಣ್ಣ ತನ್ನ ಬಂಧು ದೇಶ ಕೋಶ- ವನ್ನು ನೀಗಿಕೊಂಡು ಕೊನೆಗೆ ಮಣ್ಣುಗೂಡಿ ಪೋದನಯ್ಯ 24 ದಂತಿಪುರದ ದೊರೆಯೆ ಮಡದಿ ಕುಂತಿದೇವಿ ಕುವರನಾಗಿ ಕಂತುಪಿತನ ಮತವ ತಿಳಿದು ನಿಂತು ಖಳರ ಸದೆದ ಶೂರ 25 ಏಕಚಕ್ರ ನಗರದಲ್ಲಿ ಶೋಕ ಪಡುತಲಿರ್ದ ಜನರ ಕಾಕು ಬಕನ ಏಕಮುಷ್ಠಿಯಿಂದ ಕೊಂದೆ 26 ಕೀಚಕಾರಿ ನಿನ್ನ ಮಹಿಮೆ ಯೋಚನೆಗೆ ನಿಲುಕದಯ್ಯ ಯಾಚಿಸೂತಿ ದೀನನಾಗಿ ಮಾಚದಂತೆ ಸಲಹೊ ಸ್ವಾಮಿ 27 ಜರೆಯ ಸುತನ ಗರುವ ಮುರಿದು ಭರದಿ ಅವನ ತನುವ ಸೀಳಿ ಧರಣಿಧವರ ಸೆರೆಯ ಬಿಡಿಸಿ ಪರಮ ಹರುಷಗರೆದ ಧೀರ 28 ದುರುಳ ದುಶ್ಶಾಸನನ ಅಂದು ಧುರದಿ ಕೆಡಹಿ ಉರವ ಬಗೆದು ತಿರೆಯ ಹೊರೆಯ ಹರಿಸಿದಂಥ ಸರುವ ಪುಣ್ಯ ಹರಿಗೆ ಇತ್ತೆ 29 ಮಲ್ಲಯುದ್ಧದಲ್ಲಿ ನೀನು ಖುಲ್ಲ ದುರ್ಯೋಧನನ ತೊಡೆಗ ಸುರರು ನೋಡಿ ಫುಲ್ಲ ಮಳೆಯಗರೆದರಾಗ 30 ಸೃಷ್ಟಿಕರ್ತ ಕೃಷ್ಣ ನಿನ್ನ ಇಷ್ಟದೈವವೆಂದು ಅವನ ನಿಷ್ಠೆಯಿಂದ ಭಜಿಸಿ ಇಳೆಯ ಶಿಷ್ಟ ಜನರ ಕಷ್ಟ ಕಳೆದೆ 31 ಖಲರು ನಿನ್ನ ಬಲುಮೆ ನೋಡಿ ಗೆಲುವು ತಮಗೆ ಆಗದೆಂದು ಕಲಿಯುಗದಿ ವಿಪ್ರರಾಗಿ ಇಳೆಯ ಧವನ ಹಳಿಯುತಿರಲು 32 ಜಡಜನೇತ್ರ ನಿನ್ನ ಕರೆದು ಅಡಗಿಸಿವರವಾದವೆನಲು ನಡುವೆ ಮನೆಯು ಎಂಬ ದ್ವಿಜನ ಮಡದಿ ಗರ್ಭದಿಂದ ಬಂದೆ 33 ಯತಿಯು ನೀನೆಂದೆನಿಸಿಕೊಂಡು ಚ್ಯುತಿ ರಹಿತ ಪ್ರೇಕ್ಷರಿಂದ ಶ್ರುತಿಪುರಾಣ ವೇದಮಂತ್ರ ತತಿಗಳನು ಪಠಣಗೈದೆ 34 ಹರಿಯೆ ಹರನು ಹರನೆ ಹರಿಯೆಂ- ದುರುಳ ಖಳರ ಕರೆದು ಕರೆದು ಜರೆದು ಭರದಿ ಹರಿಯೆ ಶರಣೆಂದರುಹಿ ಮೆರೆದೆ 35 ಮಾಯ ಮತವ ಧಿಕ್ಕರಿಸಿ ನ್ಯಾಯ ಶಾಸ್ತ್ರವನ್ನು ರಚಿಸಿ ಕಾಯಭವನ ಪಿತನ ಹಳಿದ ನಾಯಿಗಳನು ಬಡಿದು ನಿಂದೆ 36 ಕೃತಕಭಾಷ್ಯ ರಚಿಸಿದಂಥ ದಿತಿಜರನ್ನಾನತರ ಮಾಡಿ ಗತಿಯ ತೋರಿ ಜನಕೆ ಸತ್ಯಾ- ವತಿಯ ಸುತನ ಒಲುಮೆ ಪಡೆದೆ 37 ಮಧ್ವಮತವ ಉದ್ಧರಿಸಿ ಶುದ್ಧವಾದ ಬುದ್ಧಿಗಲಿಸಿ ಹದ್ದುವಾಹನ ಮುದ್ದುಕೃಷ್ಣನ ಶ್ರದ್ಧೆಯಿಂದ ಬದ್ಧಗೈದೆ 38 ಅಷ್ಟಮಠವ ರಚನೆ ಮಾಡಿ ಶಿಷ್ಟಜನರ ಬಾಧೆ ಕಳದೆ ತುಷ್ಟರಾದ ದ್ವಿಜರು ನಿನ್ನ ಎಷ್ಟು ಪೊಗಳಿ ತೀರದಯ್ಯ 39 ದಾನಧರ್ಮವ ಮಾಡಲಿಲ್ಲ ಜ್ಞಾನಮಾರ್ಗ ಹಿಡಿಯಲಿಲ್ಲ ದೀನತನದ ಭವಣೆಯಿಂದ ನಾನು ಮರುಗಿ ಬಂದೆನೀಗ 40 ವಚನ ಮಾರ್ಗದಲ್ಲಿ ನಿನ್ನ ಪ್ರಚನೆ ಮಾಳ್ಪೆ ಕೇಳೊ ದೇವ ರಚಿಸಲಾರೆ ನಿಯಮಗಳನು ಉಚಿತ ತೋರಿದಂತೆ ಮಾಡೊ 41 ನಾರಸಿಂಹ ರಾಮಕೃಷ್ಣ ನಾರಿ ಸತ್ಯವತಿಯ ಮಗನ ಮೂರುತಿಗಳ ಹೃದಯದಲ್ಲಿ ಸೇರಿ ಭಜಿಪ ಭಾವಿ ಬ್ರಹ್ಮ 42 ವಾಯು ಹನುಮ ಭೀಮ ಮಧ್ವ ರಾಯ ನಿನ್ನ ನಂಬಿ ಬಂದೆ ಮಾಯ ಪಾಶದಿಂದ ಬಿಡಿಸಿ ಕೃಪಣ ಬಂಧು 43 ಜನುಮ ಜನುಮದಲ್ಲಿ ನೀನೆ ಎನಗಿ ಜನನಿ ಜನಕನಾಗಿ ಕನಸು ಮನಸುನಲ್ಲಿ ನಿನ್ನ ನೆನೆಸುವಂತೆ ಮತಿಯ ನೀಡೊ 44 ತುಂಗಭದ್ರ ತೀರ ವಾಸ ಭಂಗಬಾಳನು ಹೊರೆಯಲಾರೆ ಮಂಗಳಾಂಗ ಕಳುಹೊ ಎನ್ನ ರಂಗಈಶವಿಠಲ ಪುರಿಗೆ 45
--------------
ರಂಗೇಶವಿಠಲದಾಸರು
ಕರೆದೆಡೆಗೆ ತಾ ಬರುವ ಕರೆದೆಡೆಗೆ ತಾ ಬರುವ ಪ ಬರುವೆ ತರುವ ಸುಖವ ಮುರುಳೀಧರನು ಅ.ಪ ತಿಳಿಯ ಭಕುತಿಯ ಪಡೆದ ಜನರಿಗೆ ಗೆಳೆಯನಿವ ಬಲು ಸುಲಭನು ಇಳೆಯಸುರರಾದರದಿ ಕರೆಯಲು ಹರುಷದಲಿ ನಲಿನಲಿಯುತಲಿ 1 ಸದನದಲಿ ಹದನಿಲ್ಲ ಈತನಿ ಗೊದಗಿಸುವುದತಿ ಸಾಹಸ ವಿಧಿಯ ಬರಹವು ಇಲ್ಲವೆನುತಲಿ ಹೆದರದಿರಿ ಮಧುಸೂಧನನು 2 ಇದು ನನದು ಇದು ನನದು ಎನುವ ಮದದ ವಚನಕೆ ನಗುತಲಿ ಇದು ನಿನದು ಎನ್ನಲು ಪ್ರಸನ್ನನು ವಿದುರನಾಲಯ ಪೊಕ್ಕಿಹ3
--------------
ವಿದ್ಯಾಪ್ರಸನ್ನತೀರ್ಥರು
ಕರ್ಕಿ ಚೆನ್ನಕೇಶವ ಸ್ತುತಿ ಅನ್ಯರನು ಬೇಡೆನು ಚನ್ನಕೇಶವನೇ ಸೇವ್ಯ ಸರ್ವಾತ್ಮನೇ ಪ ತರಳ ಧೃವನನು ಕಾಯ್ದು ಧರಣಿಯನ್ನವಗಿತ್ತ ಸುರಸೇವ್ಯನಾಕೇಶವಂದ್ಯ ಹರಿ ಜೊರತು 1 ದುರುಳ ಕುರುಪತಿಯನುರೆಜೆ ಭಾಮೆ ದ್ರೌಪದಿಮಾನ ತರಿಯತಿಣಿಸಲ್ಕವಳ ಕಾಯ್ದ ಹೊರತು 2 ದುಷ್ಟ ಕಂಸನ ಬಾಧೆಯಿಂ ಲೋಕ ತತ್ತರಿಸೆ ಭ್ರಷ್ಟನನು ಕೊಂದ ಜಗ ಪೊರೆದ ಹರಿ ಹೊರತು 3
--------------
ಕರ್ಕಿ ಕೇಶವದಾಸ
ಕರ್ಮ ಬೆನ್ನ್ಹತ್ತಿ ಕಾಡಲು ನೀ ಮಾಡುವುದೇನೊ ರಂಗ ಪ ಕೊಟ್ಟು ಕುದಿದೆನು ಮನದಿ ಇಟ್ಟ್ಹಂಗಿಸಿದೆ ಜವÀದಿ ಬಿಟ್ಟುಂಡೆನತಿಥಿಗಳೆಷ್ಟೆಷ್ಟೋ ನಾನು ಕೆಟ್ಟ ಕೃತ್ಯವ ಮಾಡಿ ಕೊಟ್ಟೆ ಪರರಿಗನಿಷ್ಟ ನಿಷ್ಠವಂತರ ಕಂಡು ನಿಷ್ಠೂರವಾಡಿದೆ 1 ಮತಿಭ್ರಷ್ಟನಾಗಿ ಪರಸತಿಯರಿಗೆ ಮನಸೋತೆ ಇತರ ವನಿತೆಯ ಗರ್ಭ ಪತನಗೈಸಿದೆನೊ ಕೃತಿಮಥನದಿ ಬಲುಹಿತಬೋಧವನೆ ಬೋಧಿ ಸುತ ನಾಶಗೈದೆನ್ನಹಿತಕಾಗಿ ಪರರ 2 ಕೊಡುವರಿಗೆ ಕಿಡಿಯಿಟ್ಟೆ ಬಡವರನು ಬಳಲಿಸಿದೆ ಒಡನುಡಿದ ಭಾಷೆಯ ನಡೆಸಲಿಲ್ಲೊಂದು ಒಡಗೂಡಿರ್ದರರೊಳು ಕೆಡಕುಹುಟ್ಟಿಸಿ ನಾನು ಜಡತನದಿ ದಿನಗಳೆದೆ ಕಡುಭ್ರಷ್ಟನಾಗಿ 3 ಪರಧನಪಹರಿಸಿದೆ ಪರರ ಗೃಹ ಮುರಿದೆನು ವರ ಮಾತಾಪಿತರ ಬಲ್ಪರಿಯಿಂ ನೋಯಿಸಿದೆ ಗುರುಹಿರಿಯರ ಜರೆದೆ ಪರನಿಂದೆಗೆಳಿಸಿದೆ ಗರುವದಿಂ ಚರಿಸಿದೆ ಶರಣಜನರೊಂದಿಸದೆ 4 ಕೃಪಣತ್ವ ಕಳಿಲಿಲ್ಲ ಚಪಲ ಚೇಷ್ಟಳಿಲಿಲ್ಲ ಚಪಲಾಕ್ಷನ ದಿನದಿ ಉಪವಾಸ ಗೈಯಲಿಲ್ಲ ಸುಪಥದಿ ಮನವಿಟ್ಟು ಶಪಿಸುತಲೆಡೆವಿಡದೆ ಜಪಿಸಿ ಶ್ರೀರಾಮಪಾದ ಕೃಪೆಯ ಪಡೆದವನಲ್ಲ 5
--------------
ರಾಮದಾಸರು
ಕಲಿಪುರುಷನಿಗತಿಹರುಷ ಬಲುಸಜ್ಜನಗಳುಬಾಯ್ಬಾಯ್ಬಿಡುವುದು ಪ ಅಲಕ್ಷ್ಮೀರಮಣ ಅಖಿಲ ದುರ್ಗುಣಂ ಗಳಕೊಟ್ಟೆಲ್ಲರ ಗಾಳಿಗೆ ತೂರುವೆ ಅ.ಪ ರಾವಣಾಸುರಗೆ ಮಗನೆನಿಸಿ ದೇವತೆಗಳ ಸೆರೆಯಲ್ಲಿಡಿಸಿ ಭಾವಜ್ಞರನು ನಿರಾಕರಿಸಿ ಸಭಾಸ್ಥಾನಗಳ ಭಂಗಪಡಿಸಿ ಬಹುದುಃಖ ಪಡಿಸಿ ಪಾಂಡುಕುಮಾರರ ಪಾವನಿಯಿಂತೊಡೆಯೊಡೆದು ಬೀಳುತ ಬಗೆಯ ನೆನದುಯೀಗೆಮ್ಮ ಬಾಧಿಸುವೆ 1 ಆಗಮಗಳು ಸುಳ್ಳೆಂಬುವದು | ನಾ ಯೋಗಿಯೆಂದು ಹಿಗ್ಗುತಲಿಹುದು ಭಾಗವರತ ನಿಂದನೆಗೈದು | ನಿರ್ ಭಾಗ್ಯತನ್ನತಾನೆ ಪೊಗಳುವದು ಸಾಗರದಂತಿಹ ದುರಾಸೆಯೊಳಗಾ ವಾಗಲು ಜನ ಮುಳುಗುತ ತಿಳಿಯದೆ ಹಾಗರ್ವದಿ ನಿಷ್ಫಲವ ಪೊಂದುವರಿದು 2 ನೀತಿ ತಪ್ಪಿತಾವ್ನಡೆಯುವುದು | ದು ರ್ಜಾತಿಗಳುತ್ತಮರೆಂಬುವದು ಆತುರದಲಿಮನವಳುಕುವುದು | ಬಲು ಘಾತಕತನದಲಿತಿರುಗುವದು ಗಾತುರಸುಖವೇ ಮೊಕ್ಷವೆಂದು ವಿಷ ಯಾತಿಶಯದಿಯರಿಷಡ್ವರ್ಗಗಳೊಳು ರಾತಿರಿಪಗಲೆನ್ನದೆ ಬೀಳ್ವುದುನಿ ನ್ನಾತಗಳಿಂಗೆ ಸ್ವಭಾವಗುಣಂಗಳು 3 ಕ್ಷಾಮಡಾಂಬರಗಳ್ಹೆಚ್ಚುವದು | ನಿ- ಷ್ಕಾಮರ ಹಾಸ್ಯವಮಾಡುವದು ಕಾಮದಿಜನಗಳ ಬಾಧಿಪದು ನಿಷ್ಕಾರಣರೋಗದಿ ಸಾಯುವದು ಪಾಮರರೆಲ್ಲರು ಪಂಡಿತರಾವೆಂ- ದೀಮಹಿಯೊಳುಮನಬಂದಂತೆಸದಾ ತಾಮಸಗಳಬೋಧಿಸುತಲಿಜಗದೊಳು ದ್ರವ್ಯಾರ್ಜನೆಮುಖ್ಯಸಾಧನವೆಂಬುದು 4 ವಿಪರೀತ ಫಲಗಳಾಗುವುದು ಚಪಲಹೊಂದಿಚಿಂತಿಸುತಿಹುದು ಜಪಹೋಮಗಳನು ತ್ಯಜಿಸುವದು ಬಲುಜಾಡ್ಯಂಗಳನನುಭವಿಸುವದು ಉಪಕಾರಗಳನುಮಾಳ್ಪರಲ್ಲಿ ಪ್ರ ತ್ಯಪಕಾರಗಳೆಣಿಸುತಲಾವಾಗಲು ಕಾಲಕಳೆಯುತ ವೃಥಾನೋಯುವದು 5 ಶೂದ್ರರುವೇದವ ಪಠಿಸುವದು | ನಿರು ಪದ್ರವನುದಂಡಿಸುತಿಹುದು | ಹರಿ ರುದ್ರವಿಧಿಗಳದೂಷಿಪದು | ಅ- ಬದ್ಧವೆಬಲುರುಚಿಯೆಂಬುವದು ಕ್ಷುದ್ರಕುನಾಸ್ತಿಕಮತವನಂಬಿ ದೇ- ವದ್ರೋಹಗಳನುಮಾಡುತ ಬಾಯಲಿ ಇದ್ದದ್ದಾದರುಯಿಲ್ಲೆಂಬುವದು6 ಪರರೊಡವೆಗಳಪಹರಿಸುವದು | ನೆರೆ- ಹೊರೆಯಂತಿರಬೇಕೆಂಬುವದು ಗುರುವಿನಲ್ಲಿ ದ್ವೇಷವೆಣಿಸುವದು | ಸತಿ- ಯರುಪತಿಯಲಿದ್ವೇಷಿಸುತಿಹುದು ನಿರತವುಜೀವನಕಿಲ್ಲೆಂದುಬಳಲಿ ದುರ್ವಿದ್ಯಗಳಭ್ಯಾಸಿಸಿಕಡೆಯಲಿ ನರಕಂಗಳಿಗೆ ಪ್ರಯಾಣಮಾಡುವದು7
--------------
ಗುರುರಾಮವಿಠಲ
ಕಲಿಮುಖ್ಯ ದೈತ್ಯರನು ಸ್ಮರಿಸಿ ಬಿಡದೆ ಕಲುಷವರ್ಜಿತ ಭಾಗವತರು ಮರೆಯದಲೆ ಪ ಮಲಮೂತ್ರಗಳ ವಿಸರ್ಜನೆ ಗೈವಾಗ ಎಂ ಜಲ ಕೈ ಬಾಯ್ದೊಳೆದು ಉಗುಳುವಾಗ ಹುಳಿ ಬೀಜ ಕವಡೆ ಪಗಡೆಗಳಾಡುವಾಗ ಮ ಕ್ಕಳನಾಡಿಸುತಲಿ ವಿಸ್ಮರಣೆಯಿಂದಿರುವಾಗ 1 ಸಂಧಿಕಾಲದಲಿ ಸತಿಯೊಡನೆ ಪವಡಿಸಿದಾಗ ನಿಂದ್ಯ ಕರ್ಮಗಳನಾಚರಿಸುವಾಗ ತಂದೆ ತಾಯಿಗಳ ದಿನ ಮರೆತು ಒಟ್ಟಾಗ ಕ ರ್ಮೇಧಿ ಭಿಕ್ಷಕೆ ಬರಲು ಇಲ್ಲೆಂಬುವಾಗ 2 ಮಾಸೋಕ್ತ ಧರ್ಮವನು ತೊರೆದಾಗ ವಿಪ್ರಗೋ ಗ್ರಾಸಗಳ ಕೊಡದೆ ಭುಂಜಿಸುವಗಲೇ ಮೀಸಲು ಮಡಿ ಮೈಲಿಗೆಗಳ ನೋಡದಲೆ ದು ಷ್ಯಾಸೆಯಲಿ ನೀಚರಾಲಯದಲುಂಬಾಗ 3 ಪ್ರಾಯ ಧನ ಮದದಿಂದ ಹೇಯ ವಿಷಯಗಳು ಪಾ ದೇಯವೆಂದರಿದು ಭುಂಜಿಸುವಾಗಲು ಜಾಯಾತ್ಮ ದೇಹಾದಿಗಳು ತನ್ನದೆಂಬಾಗ ಮಾಯವಾದಿಯ ಉಕುತಿ ಮನಕೆ ತಂದಾಗ 4 ಮತಿವಮತರೊಡನೆ ಮತ್ಸರ ಪುಟ್ಟಿದಾಗವ ರ್ಪಿತ ಪದಾರ್ಥಗಳ ಭುಂಜಿಸುವಾಗಲು ಮೃತ ವತ್ಸ ಗೋವಿನ ಚಲಮಂಬಾಗ ಶ್ರೀ ಪತಿ ಜಗನ್ನಾಥವಿಠಲನ ಸ್ಮøತಿ ಬಿಟ್ಟಾಗ 5
--------------
ಜಗನ್ನಾಥದಾಸರು
ಕವಿ ಕವಿದು ಪೊಳೆವ ಭುವನಪಾವನ ಚರಿತ ಇಂದೀವರಾಕ್ಷ ಪ ತವಪೂರ್ಣ ನಿಜ ಒಲಿಮೆ ಪ್ರಭುಪೂರ್ಣ ಕವನದಲಿ ಮೋದ ಕರಿವರದ ಭವಭಂಗ ಪರಿಹಾರ ಕವನ ವೋದಿದ ಮಾತ್ರ ಧವಳ ಕೀರುತಿ ಬೆಳುದಿಂಗಳನು ಮೀರಿಹುದೊ 1 ತವಪೂರ್ಣ ಗುಣ ಕ್ರಿಯೆ ರೂಪ ಘನ ಭಾವಗಳು ಲವಲವಿಕೆ ಎಮ್ಮ ಚೇತನಕೆ ಕೊಟ್ಟು ಭವಭೀತಿಗೆ ಭೀತಿ ತಂದೊಡ್ಡುವುದೊ ಕಮಲೇಶ ಸವಿದುಣ್ಣುವಾ ಜನಕೆ ಜಡದಲ್ಲೂ ನೀ ಬರುವೆ 2 ಶ್ರವಣ ಮಾತ್ರಕೆ ಮೈಮರೆಸುವುದು ಮಹಸಿರಿಯು ಶುಕ ಪಿತ ಸವಿದ ರುಚಿಯು ಇಹುದು ಪವಮಾನ ಕೃಷ್ಣಾರ್ಯ ರಾಮಾರ್ಯರತಿ ವಲುಮೆ | ಶ್ರವಿಸುವುದು ಪಠಿಪರನು ಭಕ್ತಿಮತ್ತರ ಮಾಡಿ 3 ಕವಲುಮತಿಯಲಿ ಮುಳುಗಿ ಚಲಿಸದಿರು ಇದರಿಂದ ಭವಮೂಲಕುನ್ಮೂಲ ಇದರ ಮಹಿವi ಅವಲಿಯನು ತಿಂದವನು ಅಗಲಿರದೆ ಒಡನಿಹನು ಜವನ ದೂತರು ತಲೆಮಣಿದು ಓಡುವರೊ 4 ತತ್ವಾಭಿಮಾನಿಗಳಿಗಾಹಾರವಿದು ಸತ್ಯ ತತ್ವಾರ್ಥ ಬಲು ಸುಲಭದಲ್ಲೆ ಮನಕವಗಾಹ್ಯ ಸತ್ಕøತಿಯ ಮಾಡಿ ಚಿತ್ಸುಖವ ಉಣು ನಿತ್ಯ ವಾತಾತ್ಮ ಗುರು ಶ್ರೀ ಜಯೇಶವಿಠಲನ ನೋಡು 5
--------------
ಜಯೇಶವಿಠಲ
ಕಂಸಾರಿ ಪ. ಶೌರಿ ಸುರ ನರವಂದಿತ ಚರಣವ ಕೋರಿ ಪರಿಪರಿ ಬೇಡುವೆ ನಿನ್ನೆಡೆ ಸಾರಿ ಅರಿಯದ ಕಂದನ ಪೊರೆ ದಯೆತೋರಿ ಅರಿಯೆನದಾರನು ಮರೆಯೆನು ನಿನ್ನನು ಕರುಣಾಕರನೆಂಬೀ ಬಿರುದುಳಿಸಿನ್ನು 1 ಮನ್ಮಥಪಿತ ಬಾ ಸುಂದರಕಾಯ ಮನ್ನಿಸು ಎನ್ನಪರಾಧವ ಜೀಯ ಚಿನ್ಮಯರೂಪನೆ ಚೆನ್ನಿಗರಾಯ ಅನ್ಯರ ನೆರೆಯೆನು ನೀ ಕೇಳಯ್ಯ ಎನ್ನೊಳಗೀಪರಿ ಛಲವೇಕಯ್ಯ ಇನ್ನಾದರು ಕೈಪಿಡಿ ದಮ್ಮಯ್ಯ 2 ಮಂದರಗಿರಿಧರ ಗೋವಿಂದನೆ ಬಾ ನಂದಕುಮಾರನೆ ತಡೆಯದೆ ನೀ ಬಾ ನಂದಿನಿಗೊಲಿದಾನಂದವ ಕೊಡು ಬಾ ವೃಂದಾವನ ವಿಹಾರನೇ ಬಾ ಬಾ ಇಂದಿರೆಯರಸನೆ ಶೇಷಗಿರೀಶನೆ ಇಂದೆನಗೊಲಿದೈ ತಂದೆಯೆ ಭಳಿರೆನೆ 3
--------------
ನಂಜನಗೂಡು ತಿರುಮಲಾಂಬಾ
ಕಳವಳಿಪುದೆನ್ನ ಮನ ಕಮಲಾಕ್ಷ ಬಾರದಿರೆ ಪ ನಳಿನಸಂಭÀವ ಲಿಖಿತವೇನಿಹುದೊ ಸಖಿಯೆ ಅ.ಪ. ಪೋದ ವಿಪ್ರನು ಬರದಿರಲು ಏನು ಕಾರಣವೊ ಹಾದಿಯಲಿ ವಿಘ್ನ ತಾನೊದಗಿತೊ ಮಾಧವನಿಗೆನ್ನೊಳು ಮಮತೆ ಬಾರದೆ ಹೊಯ್ತೆ ಮೇದಿನಿಯೊಳೇಕೆ ನಾ ಪುಟ್ಟಿ ಬಂದನೆ ಸಖಿಯೆ 1 ನಿನ್ನ ಹೊರತೆನಗಿನ್ನು ಅನ್ಯಗತಿಯಿಲ್ಲೆಂದು ಭಿನ್ನವಿಸಿಕೊಂಡಿದ್ದೇನಾಯಿತೆ ಕರ್ಮ ಬಲವಂತವಾಗಿರಲು ಬನ್ನಪಡಿಸುತಲೆನ್ನ ಬಳಲಿಪುದು ಸರಿಯೆ 2 ವಸುದೇವ ಸುತನಾಗಿ ಶಿಶುತನದ ಕ್ರೀಡೆಯೊಳ್ ಅಸುರರನು ಸಂಹಾರ ಮಾಡಿದವಗೆ ಶಿಶುಪಾಲನಾಕಾಲದ ವಶಮಾಡಲಸದಳವೆ ಕುಸುಮಾಕ್ಷಿ ಕರಿಗಿರೀಶನೆ ಗತಿಯು ಸಖಿಯೆ 3
--------------
ವರಾವಾಣಿರಾಮರಾಯದಾಸರು
ಕಳೆಯ ಬ್ಯಾಡ ಮನವೇ ದಿನಾ ಕಳೆಯ ಬ್ಯಾಡ ಪ ವಿನುತ ಪದವನುಜ ಮರೆತು ದಿನ ಅ.ಪ ಆರನು ನಂಬಿದರಾರು ಕಾಯುವರು ಧೀರ ದೇವಕಿಯ ಸುಕುಮಾರ ನುಳಿದು ದಿನ 1 ಕ್ಷಿತಿಗೆ ಪಾರ್ಥಸಾರಥಿಯ ನುಳಿದು 2 ವಿನುತ ದ್ವಂದ್ವನುಳಿದು ದಿನ 3
--------------
ಅಸ್ಕಿಹಾಳ ಗೋವಿಂದ
ಕಳೆಯ ಬ್ಯಾಡವೋ ಕಾಲವ | ತಿಳಿ ನೀ ಮಾನವಾ | ವೃಥಾ | ಪ ಹರಿಚರಿತಾಮೃತ ವರಸುಗ್ರಂಥವನು ಪರಮತತ್ವವೆಂದರಿಯದೆ ಜಗದೊಳು 1 ಹದ್ದುಗಳಂದದಿ ಕಳೆಯಬ್ಯಾಡವೋ ಕಾಲವ 2 ದೋಷಿಗಳಮದದಿ ಕಳೆಯಬ್ಯಾಡವೋ ಕಾಲವ 3 ತನುಮನಧನ ಸತಿಯರನು ವಿಧಿಜಕಗರ್ಪಿಸದೆ ಶುನಕನಂದದಿ ಕಳೆಯ ಬ್ಯಾಡವೋ ಕಾಲವ 4 ಪ್ರೇಮದಿಂದಲಿ ಶಾಮಸುಂದರನ ನಾಮವು ಪಾಡದೆ ಪಾಮರನಂದದಿ ಕಳೆಯಬ್ಯಾಡವೋ ಕಾಲವ 5
--------------
ಶಾಮಸುಂದರ ವಿಠಲ