ಒಟ್ಟು 581 ಕಡೆಗಳಲ್ಲಿ , 93 ದಾಸರು , 511 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಲೇಸಾಗಿ ಭಜಿಸುವೆ ಗೋಪಾಲದಾಸರ ರಾಶಿ ದುರಿತಂಗಳಾ ಪ ವಾಸವಾ ಪಿಡಿದ ವಜ್ರವೀಗಿರಿಯಂತೆ ನಿಶ್ಶೇಷದಿ ಭೇದಿಪರೊಇವರು ಅ.ಪ. ಸತಿ ಗಿರಿವಾಸ ನಾಮಕಳಾ ಸುರುಚಿರೋದರವೆಂಬೊ ಶರನಿಧಿಯಲ್ಲಿ ಚಂದಿರನಂತೆ ಉದಿಸಿಹರೋ ಇವರು 1 ಸದಮಲಮನದಲ್ಲಿ ಪದುಮನಾಭನ ನಾಮ ಪದೋಪದಿಯಲ್ಲಿ ಬಿಡದೇ ಪದರೂಪದಲ್ಲಿ ಪೊಗಳುವೊ ಸುಜನರಿಗೆ ಮೋಹವನುಣಿಸುತಿಹರೊ ಇವರು 2 ವಿಜಯದಾಸರೇ ತಮ್ಮ ನಿಜಗುರುಗಳೂ ಎಂದು ಭಜಿಪರೋ ಭಕುತಿಯಲ್ಲಿ ದ್ವಿಜವರ್ಯ ಜನಕಿಷ್ಟ ಸೃಜಿಸೋರು ಕಲ್ಪ ಭುಜದಂತೆ ನಿರುತದಲ್ಲಿ ಇಲ್ಲಿ 3 ತೊಂಡ ಪ್ರಹ್ಲಾದ ಪ್ರಿಯನ ಮಂಡಲ ಯತಿಗಳ ಬೆಳೆಪ ಯಾತ್ರೆಗಳ ಕೈಕೊಂಡು ಸೇವಿಸುತಿಹರೊ ಇವರು 4 ಭಕುತಿ ಪ್ರಾಚುರವಾಗೆ... ಹರಿನಾಮಪ್ರಕಟಿಸಿ ಕವನದಿಂದಾ ನಿಖಿಳಾಭೀಷ್ಟವನೀವ ಲಕುಮೀಪತಿಯೇ ಎಂದು ಭಕುತಗೆ ಬೋಧಿಪರೊ ಇವರು 5 ಆವಾವ ಕ್ರಿಯೆಗಳಲ್ಲಾವಾವ ಕಾಲದಿ ತಾವದಗಿನ್ನು ಹರಿಕಾವ ಸುಜೀವರ ಈ ವಿಧವೆಂದು ತನ್ನವರಿಗುಪದೇಶಿಪಾ6 ಭವ ತೋಯದಿ ಕಡೆಗೆತ್ತುವಾ . 7 ಸುಜನ ಜನರ ಕಾಯಕ್ಲೇಶವ ಕಳೆದು ಮಾಯಾರಮಣನ ವಲಿಸುವಂಥ ದಿವ್ಯ ಉಪಾಯವ ತೋರಿಪರೊ ಇವರು 8 ಮಂದ ಮನುಜ ನಾನು ಒಂದೊಂದಿವರ ಗುಣವೃಂದ ಪೊಗಳಲೊಶವೇ ತಂದೆ-ವರದಗೋಪಾಲವಿಠ್ಠಲನ ಹೊಂದಿ ಸೇವಿಪ ಗುರುವೇ 9
--------------
ತಂದೆವರದಗೋಪಾಲವಿಠಲರು
ಲೋಕ ಭರಿತನೊ ರಂಗಾನೇಕಚರಿತನೊ ಪ. ಕಾಕುಜನರ ಮುರಿದು ತನ್ನಏಕಾಂತಭಕ್ತರ ಪೊರೆವ ಕೃಷ್ಣ ಅ.ಪ. ರಾಜಸೂಯ ಯಾಗದಲ್ಲಿ ರಾಜರಾಜರಿರಲು ಧರ್ಮ-ರಾಜಸುತನುಯೀತನೇ ಸಭಾಪೂಜ್ಯನೆಂದು ಮನ್ನಿಸಿದನಾಗ 1 ಮಿಕ್ಕನೃಪರ ಜರಿದು ಅಮಿತವಿಕ್ರಮ ಯದುವರನೆ ತನಗೆತಕ್ಕ ರಮಣನೆಂದು ರುಕ್ಮಿಣಿ ಉಕ್ಕಿ ಮಾಲೆಯಿಕ್ಕಿದಳಾಗ2 ಜ್ಞಾನಶೂನ್ಯನಾಗಿ ಸೊಕ್ಕಿ ತಾನೆ ವಾಸುದೇವನೆನಲುಹೀನ ಪೌಂಡ್ರಕನ ಶಿರವ ಜಾಣರಾಯ ತರಿದನಾಗ 3 ಉತ್ತರೆಯ ಗರ್ಭದಲ್ಲಿ ಸುತ್ತಮುತ್ತಿದಸ್ತ್ರವನ್ನುಒತ್ತಿ ಚಕ್ರದಿಂದ ನಿಜಭಕ್ತ ಪರೀಕ್ಷಿತನ ಕಾಯ್ದ4 ತನ್ನ ಸೇವಕಜನರಿಗೊಲಿದು ಉನ್ನಂತ ಉಡುಪಿಯಲ್ಲಿ ನಿಂತುಘನ್ನಮಂದಿರ ಮಾಡಿಕೊಂಡ ಪ್ರಸನ್ನ ಹಯವದನ ಕೃಷ್ಣ 5
--------------
ವಾದಿರಾಜ
ವಂದನೆಯ ಮಾಡುವೆ ಶ್ರೀಗುರುವಿಗೆ- ವಂದನೆಯ ಮಾಡುವೆÀ ಪ ವಂದನೆ ಮಾಡುವೆನಿಂದು ಯದುಶೈಲದೋಳ್ ಚಂದದೊಳಿರುತಿಹ ತಂದೆ ನಾರಾಯಣಗೆ ಅ.ಪ ಹರುಷದಿಂದಲಿ ಇನ್ನು ಹರಸಿ ಸಜ್ಜನರಿಗೆ ವರಗಳ ಕೊಡುತಿಹ ವರಲಕ್ಷ್ಮಿ ತಾಯಿಗೆ 1 ಹಿರಿದಾದ ದೈತ್ಯನ ಸೀಳಿ ಸಂತೋಷದಿ ಮೊರೆಹೊಕ್ಕ ಕಂದನ ಪೊರೆದ ನರಸಿಂಹಗೆ 2 ಪಾವನತರಮಾದ ದೇವಸಮೂಹವ ಕಾವ ಕೃಪಾನಿಧಿ ಕಲ್ಯಾಣಮ್ಮಗೆ 3 ವಿಸ್ಫುರಿತದಲ್ಲಿರ್ಪ ವೈರ್ಮುಡಿ ತಿರುಮಣ್ಣು ಸರ್ಪಶಯನಗರ್ಪಿಸಿದಂತ ಗರುಡಗೆ 4 ಶ್ರೀಲೋಲನಡಿಗಳ ಲೀಲಾಮೃತಗಳ ಶೀಲರಾಗಿ ಕುಡಿದ ಶ್ರೇಷ್ಠ ಆಳ್ವಾರ್ರಿಗೆ 5 ವರದವಿಠಲನ ಒಲಿದು ತಾ ಬಂದಿನ್ನು ಗಿರಿಯೊಳು ನೆಲೆಸಿದ ವರ ಗುರುಪೀಠಕೆ 6 ಪಂಕಜಾಕ್ಷನಪಾದಪಂಕಜ ನಂಬಿಹ ವೆಂಕಟಪುರದೊಳಗಿರುವ ವೈಷ್ಣವರಿಗೆ 7 ವಿಷ್ಣುವಿನಂಶದಿ ಪುಟ್ಟಿ ಸಂತೋಷದಿ ಸೃಷ್ಟಿಯನಾಳ್ವ ಶ್ರೀ ಕೃಷ್ಣಭೂಪಾಲಗೆ8 ಮರೆಯದೆ ಭಕ್ತರ ಕರುಣದಿಂದಲಿ ಕಾಯ್ವ ವರಮಹದೇವನ ಪುರದಶ್ರೀರಂಗಗೆ 9
--------------
ರಂಗದಾಸರು
ವಂದಿಪೆ ಹರಿಹರನೇ | ನಿನಗೆ ನಾ ವೃಂದಾರಕನುತನೇ ಪ. ಬಂದು ಈ ಕ್ಷೇತ್ರದಿ ನಿಂದು ಸದ್ಭಕ್ತರ ಮೂರ್ತಿ ಅ.ಪ. ಚತುರ ಹಸ್ತದಿಂದಾ | ಶೋಭಿಸೆ ಅತಿ ಕೌತುಕದಿಂದಾ ಪಾದ ಕಮಲಜನ ತತಿಗೆ ತೋರದಂತೆ ಕ್ಷಿತಿಯಲಡಗಿದೇ 1 ಸೋಮಶೇಖರವಂದ್ಯಾ | ಆರ್ಧದ ಲಾಮಹ ಹರನಿಂದಾ ಪ್ರೇಮದಿ ಕೂಡಿಕೊಂಡೀ ಮಹಿ ಜನರಿಗೆ ನೀಮೋಹಕ ತೋರುವ ಜಗದ್ವಂದ್ಯಾ 2 ಪಾಪಿಗುಹನವರವಾ| ಕೆಡಿಸಲು ರೂಪಧರಿಸಿ ತಾಮಸರಿಗಂಧಮತಮ ಕೂಪದಿ ಕೆಡಹುವೆ ಶ್ರೀ ಮೋಹಿತ 3 ಅರ್ಧಹರನ ರೂಪಾ| ಕೃತಿಯಲಿ ಶುದ್ಧ ವಿಷ್ಣು ರೂಪಾ ಮುದ್ದು ಸುರಿವ ಭವ್ಯಾಂಗ ಸ್ವರೂಪ ಉದ್ಧರಿಸೆನ್ನನು ಶುದ್ಧ ಬುದ್ಧಿಮತಿಯನಿತ್ತು 4 ಶಂಖಚಕ್ರ ಅಭಯಾ| ತ್ರಿಶೂಲವ ಬಿಂಕದಿ ಧರಿಸಿದೆಯಾ ಪಂಕಹೋದ್ಭವೆ ಪಾರ್ವತಿಯ ಉಭ ಯಾಂಕದಲ್ಲಿ ಪೊಂದಿಹೆ ಶುಭಕಾಯಾ 5 ಅರ್ಧಶಿರದಿ ಮಕುಟಾ| ಆರ್ಧದಿ ಶುದ್ಧಗಂಗೆ ತ್ರಿಜಟಾ ಅರ್ಧಚಂದ್ರ ಶೋಭಿಸುತಿದೆ ಜಗತ್ತಿಗೆ ಅದ್ಭುತ ಅಚ್ಚರಿ ರೂಪಧಾರಕ 6 ಪಣೆಯ ತಿಲಕ ಢಾಳಾ | ಕಂಠಾಭ ರಣಗಳು ಪೂಮಾಲಾ ಮಿನುಗುವವಲ್ಲಿ ಪೀತಾಂಬರನುಟ್ಟಿಹ ಗುಣಗಣ ಪೂರ್ಣನೆ ಹನುಮನಯ್ಯ ಹರಿ7 ಮಾಯಾ | ಕವಿಸದೆ ಇನ್ನು ಕಾಯೊ ಜೀಯಾ ಘನ್ನ ಭಕ್ತಿ ಸುಜ್ಞಾನ ವೈರಾಗ್ಯವ ಮನ್ನಿಸಿ ಕರುಣಿಸಿ ನಿನ್ನ ಪದವಿ ಕೊಡು 8 ಹರನೊಳು ಹರ ಶಬ್ದಾ | ವಾಚ್ಯನೆ ಸಿರಿವರ ನಿರವದ್ಯಾ ಸರ್ವ ಶಬ್ದ ಸುರವಾಚ್ಯ ಈ ಪರಿಯೊಳು ಹರಿಹರ ಕ್ಷೇತ್ರದಿ ವರಗೃಹ ಮಾಡಿದಿ 9 ತುಂಗಭದ್ರ ತೀರಾ | ವಾಸನೆ ರಂಗ ಪಾಪ ದೂರಾ ಮಂಗಳ ಗೋಪಾಲಕೃಷ್ಣವಿಠಲ ಭವಹಿಂಗಿಸಿ ಪೊರೆ ದುಸ್ಸಂಗ ಬಿಡಿಸಿ ಹರಿ 10
--------------
ಅಂಬಾಬಾಯಿ
ವಂದಿಸು ಗುರು ಸತ್ಯಸಂಧ ಮುನಿಯಾ ವೃಂದಾವನಕೆ ಹರುಷದಿಂದ ಎಂದೆಂದು ಪ ಗಂಗಾ ಪ್ರಯಾಗ ಗಯಾ ಶ್ರೀಶೈಲಹೋಬಲ ಭು ಜಂಗಾದ್ರಿ ಮೊದಲಾದ ಕ್ಷೇತ್ರಗಳನು ಇಂಗಿತಜ್ಞರ ಸಹಿತ ಸಂಬಂಧ ಗೈಸಿ ವರಮಹಿಷ ತುಂಗಾತಟದಿ ವಾಸವಾಗಿಪ್ಪ ಯತಿವರಗೆ 1 ಭೂದೇವನುತ ಸತ್ಯಬೋಧ ಮುನಿವರ ಕರ ವೇದಿಕದೊಳುದ್ಭವಿಸಿದ ಕಲ್ಪವೃಕ್ಷ ಸಾಧುಜನರಿಗೆ ಬೇಡಿದಿಷ್ಟಾರ್ಥಗಳ ಮೋದದಿ ಕೊಡುವ ಮಹಿಮರ ಕಂಡು 2 ಶ್ರೀ ಮನೋರಮನ ಅತಿವಿಮಲತರ ಶಾಸ್ತ್ರ ನಾಮಾವಳಿಗೆ ಸುವ್ಯಾಖ್ಯಾನ ರಚಿಸಿ ಧೀಮಂತ ಜನರಿಗುಪದೇಶಿಸಿ ನಿರಂತರ ಧಾಮ ಜಗನ್ನಾಥ ವಿಠಲನ ಒಲುಮೆ ಪಡೆದವರಿಗೆ 3
--------------
ಜಗನ್ನಾಥದಾಸರು
ವಂದಿಸುವೆನು ರಘುವರನಾ ಸುರವಂದಿತ ಚರಣಾಂಬುಜನ ಪ ತಂದೆ ಮಾತಿಗೆ ವನಕ್ಹೋಗಿ ಬಂದವನಾಸುಂದರ ಸಹ ಸೀತೆಯಿಂದ ಅನುಜನಾ ಅ.ಪ ಚಾಪ ಭಂಜಕನಾ 1 ವಾರಿಧಿ ಸೇತು ಬಂಧಕನಾ ಸೀತಾ -ಚೋರನ ಶಿರವಳಿದವನಾಚಾರು ಸಿಂಹಾಸನವೇರುತ ಸರಯು -ತೀರದ ಅಯೋಧ್ಯಾ ವಿಹಾರ ಸುಂದರನಾ2 ಕೇಸರಿ ಸುತಗೆ ತನುಧನಮಣಿಆಶ್ರಯವನು ಕೊಟ್ಟವನಾಕೋಸಲ ಜನರಿಗೆ ಮೋಕ್ಷವವಿತ್ತವನಾಇಂದಿರೇಶ ಸುಖಾತ್ಮ ನಿರ್ದೋಷ ಪುರುಷನಾ 3
--------------
ಇಂದಿರೇಶರು
ವರದೇಂದ್ರ ಮುನಿಪ ದಿಕ್ಷತಿಗಳಂತೆ ಪರಮ ಸಂಭ್ರಮದಿ ರಾಜಿಸುವ ನೋಳ್ಪರಿಗೆ ಪ ಸುರರಾಜನಂತೆ ಭೂಸುರಗಡಣ ಮಧ್ಯದಲಿ ಮೆರೆವ ದುರ್ವಿಷಯಕೆ ಪಾವಕಾ ನಿರುತ ಸದ್ಧರ್ಮ ಶಿಕ್ಷಿಸುವಲ್ಲಿ ವರದಂಡ ಧರನಂತೆ ಇರುವ ದಿಗ್ವಜಿಯಿಸುವ 1 ಜ್ಞಾನಾದಿ ಗುಣದಿ ರತ್ನಾಕರನೆನಿಸಿ ಕುಮತ ಪಾನೀಯಧರಗಳಿಗೆ ಪವಮಾನನೆನಿಪ ದೀನಜನರಿಗೆ ಧನದ ವೈರಾಗ್ಯ ತಪದಲಿ ಕೃಶಾನು ಕೇತನ ತೆರದಲೊಪ್ಪುವನಜಸ್ರ 2 ಸೂರಿಕುಲವರಿಯ ವಸುಧೀಂದ್ರರಾಯ ಕರಸ ರೋರುಹದಿ ಜನಿಸಿ ಪರಮೋತ್ಸಹದಲಿ ಶ್ರೀರಾಮ ವ್ಯಾಸ ಜಗನ್ನಾಥ ವಿಠಲನ ಚರ ಣಾರವಿಂದರ್ಚನೆಯ ಪಡೆದು ಸಂತೋಷಿಸುವ3
--------------
ಜಗನ್ನಾಥದಾಸರು
ವಾದಿರಾಜರ ಪದವ ಸ್ಮರಿಸುವೆ ಅ- ಗಾಧ ಮಹಿಮರ ಸದಯ ಹೃದಯರ ಪ ಸಾಧು ಜನರಿಗೆ ಬೋಧಿಸಿರ್ಪರ ಗೆದ್ದು ಮುತ್ತಿನ ಪೀಠವೇರ್ದರ 1 ಮೋದದಿಂದ ಚರಿಸಿ ತೀರ್ಥ ಪ್ರ- ಬಂಧ ಗ್ರಂಥವ ರಚಿಸಿ ಮಾನ್ಯರಾ ಗಿರ್ದ ಗುರುಗಳನೆಂತು ಬಣ್ಣಿಪೆ 2 ರಾಜಸಭೆಯೊಳು ರಾಜಭೀಷ್ಮಕ ತನುಜೆಯರಸನ ಸ್ತುತಿಪ ಕಾವ್ಯವ ಈ ಜಗತ್ತಿನೊಳ್ ಶ್ರೇಷ್ಠ ಕಾವ್ಯವೆಂ ದಿದನೆ ಗಜದೊಳು ಮೆರೆಸಿದರಸನು 3 ಒಂದುನೂರ ಇಪ್ಪತ್ತು ವರ್ಷದೊಳ್ ಸಿಂಧುಶಯನನ ಸೇವಿಸುತ್ತಲಿ ಇಂದ್ರದತ್ತ ವಿಮಾನದಿಂದಲಿ ಸತ್ಯಲೋಕವನೈದಿದ ಗುರುವರ 4 ರಾಜೇಶ ಹಯಮುಖಾನಂತ ಗುಣಗಳ ಪೊಗಳುತಿರ್ಪರ ರಾಗಶೂನ್ಯರ ಋಜು ಗಣೇಶರ ಜ್ಞಾನಪೂರ್ಣರ 5
--------------
ವಿಶ್ವೇಂದ್ರತೀರ್ಥ
ವಾದಿರಾಜರ ಸ್ತೋತ್ರ ಇದಿರ್ಯಾರೋ ಗುರುವೆ ಸಮರ್ಯಾರೋ ಶ್ರೀ ಹಯವದನ ಪದ ಪ್ರಿಯ ವಾದಿರಾಜ ಪ ಸಿರಿನಿಲಯನ ಗುಣಗಳ ಸ್ಮರಿಸುತಗುರು ಮಧ್ವ ಮುನಿಪನ ಮಹಿಮೆಯ ಪೊಗಳುತನೆರೆದಿದ್ದ ಮಾಯ್ಮದ ಕರಿಗಳ ಶಿರವನುಭರದಿ ಛೇದಿಪ ಬಲಿ ವಿಬುಧ ಕೇಸರಿಯೆ 1 ಸಾರ ಸಜ್ಜನರಿಗೆ ತಿಳಿಯದೇಪರಿಪರಿ ಕುಸಮಯ ತಮ ಕವಿಯಲು ನೀಸರಸ ಭಾರತಿ ಮೊದಲಾದ ಗ್ರಂಥಗಳನುವಿರಚಿಸಿ ತಮ ಹರಿಸಿದ ದಿನಕರನೇ 2 ಸೋದೆಯ ಪುರದಲ್ಲಿರುವ ಹಯವದನನಮೋದದಿ ಭಜಿಸುತ ಈ ಧರೆಯೊಳ್ ಪೂರ್ಣಬೋಧ ತೀರ್ಥರ ಪಾದಸೇವಕರಿಗೆಆದರ ಮಾಳ್ಪ ಯತಿಕುಲ ಶಿರೋಮಣಿಯೇ 3 ಮುದ್ದು ಲಕ್ಷ್ಮೀಶ ವೆಂಕಟ ವಿಠ್ಠಲನಹೊದ್ದಿದ ಭಕ್ತರ ಸಂತಾಪ ಕಳೆಯುತ ಮಧ್ವಮುನಿಯ ಮತ ದುಗ್ಧವಾರಿಧಿಯೊಳುಉದ್ಭವಿಸಿದ ಪೂರ್ಣ ಶುದ್ಧ ಚಂದ್ರಮನೇ 4
--------------
ವೆಂಕಟೇಶವಿಟ್ಠಲ
ವಾದಿರಾಜರು ಸಾಗಿಬಾರಯ್ಯ ಗುರುವೆ ವಾದಿರಾಜೇಂದ್ರಾರ್ಯ ಬಾಗುವೆ ನಾ ನಿನಗೆ ಶಿರವಾ ಪ. ಭಾಗವತರ ದುರಿತಾಘಂಗಳನೆ ಕಳೆದು ಬಂದಾ ದುರ್ವಾದಿಗಳನೆ ಮರೆದು ಸುರರೆಲ್ಲ ಇವರೆ ಮೇಲ್ ಪೂ ಮಳೆಯಗರೆದು ತುಂಬುರರು ನರದರು ಗಾನಗಳಿಂದ ಮೆರೆದು ಘಲುಘಲು ಘಲುರೆಂದು, ಅಪ್ಸರರು ನಾಟ್ಯಗಳ ಕುಣಿದು ಅ.ಪ. ಹೊದ್ದ ಕಾವೆ ಶಾಟಯಲೊಪ್ಪುವಾ ಶ್ರೀ ಮುದ್ರಿ ಗಂಧಾಕ್ಷತೆಯಿಂದಾ ಗಳದಲ್ಲಿ ಶ್ರೀ ತುಳಸಿ ಪುಷ್ಪಮಾಲೆಗಳಿಂದಾ ಝಗಝಗನೆ ಮುಖಕಮಲಳ್ಹೋಳವೋದು ಯೆಂದಾ ಋಜುಗಣದವರಹುದೆಂದು ಪೇಳುವಾನರನಿಂದಾ ಮಾಡುವವರಿಗೆ ಕ್ರಿಮಿಕೀಟಗಳು ದುರುವುವುದೇಹದಿಂದಾ ಬಂದ ಜನರಿಗ್ಹರುಷ ಬಡಿಸುವದರಿಂದಾ ಮುದದಿಂದಾ 1 ಏನುಪೇಳಲಿ ಗುರುವೆ ನಿನ್ನ ಮಹಿಮೆಯು ನೋಡಲಾಶ್ಚರ್ಯವೋ ಭೂತರಾಜರಿಂದ ಪೂಜೆಗೊಂಬುವ ಛಂದವೋ ಧಿಂ ಧಿಮಿ ಧಿಮಿಕೆಂದು ಕುಣಿದಾಡುವಾನಂದವೊ ಯಡಬಲದಿ ದ್ವಾರ ಪಾಲಕರಿರುವಾನಂದವೋ ಮುಕ್ತಿಯನೆ ಕೊಡುವಾ 2 ನಿನ್ನಂಥಾ ಕರುಣಿ ಗುರು ಇನ್ನಿಲ್ಲ ಧರೆಯೊಳು ಮನ್ನೀಸಿ ಸಲಹಯ್ಯ ಮಹರಾಯ ಘನ್ನ ಸಂಸಾರದೊಳು ಬನ್ನಪಟ್ಟು ಬಹಳ ನೊಂದೇನೀ ಕೈಪಿಡಿದು ಎಂದು ನಿಂದೀನೀ ಉದ್ಧಾರ ಮಾಡಬೇಕೆಂದು ಬಂದೀನಿ ಮಂದ ಭಾಗ್ಯ ಜೀವನ ಕುಂದುಗಳೆಣಿಸಿದಾಗೊದೊ ಇಂದು ಅಡಿಗಡಿಗೆ ನಮೋ ಬೇಡುವೆನೋ ಬಂಧೊ 3 ರುಕ್ಮಿಣಿ ಕಳುಹಿದಾ ವಾಲೆಯು ತಾನು ಶ್ರಿ ಕೃಷ್ಣಗರ್ಪಿಸಿದನು ದ್ವಿಜನು ಸಾಮಾನ್ಯವಲ್ಲವೋ ಈತ ಗುರುರಾಜನೆಂದೆನಿಸೀದಾ ದುರ್ವಾದಿಗಳು ಜಯಸೀದಾ ಪವಮಾನರಾಯನೆಂದೆನಿಸಿದಾ ಸುರರಿಗಮೃತವನುಣಿಸೀದಾ ವೃಂದಾವನ ಚಾರ್ಯರಿಂದ ಸೇವೆ ಸ್ವೀಕರಿಸೀದಾ ಸುಖವಸುರಿಸೀದಾ 4 ಸ್ವಾದೀಯಪುರದಲ್ಲಿ ಇರುವರೋ ಗುರುರಾಜರು ಅಮೃತ ಪಾನ ಬಂದ ಸೇವಕರಿಗಭೀಷ್ಟವ ಕರೆದು ತಾ ಕೊಡುವ ದ್ರಷ್ಟ ಜನರಾ ಫಲ್ಗಳ ಮುರಿವಾ ಸರ್ವೇಶನಲ್ಲದೆಂಬೋರ ಅಳಿವಾ ಮಧ್ವಮತವನ್ನುದ್ದಾರ ಮಾಡುವ ಕಾಳೀಮರ್ಧನಕೃಷ್ಣನೊಲಿವಾ 5
--------------
ಕಳಸದ ಸುಂದರಮ್ಮ
ವಾಮ ಭಾಗದಿ ಲಕ್ಷ್ಮೀದೇವಿಯುಭೂಮಿ ದೇವಿಯು ದಕ್ಷಭಾಗದಿಶ್ರೀ ಮನೋಹರನಿಹನು ಮಧ್ಯದಿಪ್ರೇಮದಲಿ ನಮಿಸು 1 ನಮಿಸು ಕೃದ್ದೋಲ್ಕ ವಾಸುದೇವರಸ್ಮರಿಸು ಕೇಶವದ್ವಿತಿ ಮತ್ಪರಸ್ಮರಿಸು ಕೂರ್ಮಾನಂತ ಶಕ್ರರಸುರಿಪ ದಿಶಿಯಲ್ಲೀ 2 ಸ್ಮರಿಸು ಸಹಸ್ರೋಲ್ಕ ಮಾಯರಶಿರಿವರಾವನಿ ಧರನ ವಾರುಣಿಸ್ಮರಹರಾಂಚಿತನು ವಹ್ನಿಯಶರನ ಕೋನದಲಿ 3 ನಮಿಸು ಮಹೋಲ್ಕ ಸಂಕರ್ಷಣನನಮಿಸು ಗೋವಿಂದ ವಿಷ್ಣು ನರಹರಿನಮಿಸು ವಾಮನ ಬ್ರಹ್ಮ ಯಮರನುಕ್ರಮದಿ ದಕ್ಷಿಣದಿ 4 ಸ್ಮರಿಸು ಸಹಸ್ರೋಲ್ಕ ಜಯರನುಸ್ಮರಿಸು ಮಧುಹನ ಪರಷುರಾಮನಸರಸಿಜಾಸನ ಸತಿಯು ನಿಋತಿಯತಿಋತಿ ಕೋಣದಲಿ 5 ವೀರ ಉಲ್ಕ ಪ್ರದ್ಯುಮ್ನ ತ್ರಿವಿಕ್ರಮಸಾರ ರಘುವರ ವೃಷ್ಣಿನಾಥಸ-ಮೀರ ವರುಣರ ಪೂಜಿಸೂವುದುವಾರಿ ದಿಶೆಯಲ್ಲೀ 6 ನುತಿಸು ಸಹಸ್ರೋಲ್ಕ ಕೃತಿಯರನತಿಸು ಶ್ರೀಧರ ಬುದ್ಧಿ ಭಾರತಿಸತತ ಗಮನರ ವಾಯು ಕೋಣದೊಳತಿ ಸುಭಕ್ತಿಯಲಿ 7 ದ್ಯುಲ್ಕ ಅನಿರುದ್ದೇಂದ್ರಿಶೇಯರನಳಿನನಾಭನ ಕಲ್ಕಿ ನಂತರಸಲಿಲ ಮೂರುತಿ ರೋಹಿಣೇಶರಒಲಿಸು ಉತ್ತರದೀ 8 ಸ್ಮರಿಸು ಸಹಸ್ರೋಲ್ಕ ಶಾಂತರಸ್ಮರಿಸು ದಾಮೋದರನ ವಿಶ್ವನಗಿರಿಜೆಯನು ಪಾರ್ವತೀ ಪತಿಯಹರನ ಕೋಣದಲಿ 9 ವಾರಣಾಸನ ಮೊದಲು ನಿಜಪರಿವಾರ ಸಹಿತದಿ ಸರ್ವದಿವಿಜರುಮಾರನಯ್ಯನ ಸುತ್ತಲೂ ಪರಿ-ಚಾರರಾಗಿಹರು 10 ಈಸು ಪೀಠಾವರಣ ತ್ರಿದಿವನಿವಾಸಿಗಳ ಮಧ್ಯದಲಿ ಸಂತತವಾಸುದೇವನ ಪೂಜಕೇಶನಿ-ವಾಸ ಪೊಂದುವರು 11 ಗಿರಿಯೊಳಿರುತಿಹ ವೆಂಕಟೇಶನಸರಸ ಪೀಠಾವರಣ ಪೂಜೆಯಕರಡಿ ಮಗಳಿಗೆ ಜೈಗಿಷವ್ಯನುಅರುಹಿದನು ಮುದದಿ 12 ಗರುಡನಿಗೆ ಶ್ರೀಕೃಷ್ಣ ಪೇಳಿದಹರಿಯ ಪೀಠಾವರಣ ಪೂಜೆಯಸರ್ವ ಜನರಿಗೆ ತಿಳಿಯಲೋಸುಗವಿರಚಿಸಿದೆ ನಾನೂ 13 ಇಂದಿರೇಶನು ಎನ್ನವಾಣಿಲಿನಿಂದು ಮಾಡಿದನೀ ಸುಗ್ರಂಥವಲೆಂದು ಆತನ ಪಾದಕಮಲದ್ವಂದ್ವಕೊಪ್ಪಿಸುವೆ 14
--------------
ಇಂದಿರೇಶರು
ವಾಯು ಕುಮಾರ ಸುಜನೋದ್ಧಾರ ಮಾ ರಮಣ ಪ್ರಿಯ ಭಕುತವರ ಪ ಪಾರಾವಾರದಂತಿಹ ಈ ಘೋರ ಸಂಸಾರದ ಪಾರವಗಾಣಲುಪಾಯವ ತೋರೊಅ.ಪ ಇನಕುಲ ತಿಲಕನ ಅನವರತದಿ ದರು ಶನದಲಿ ಹಿಗ್ಗುವ ಅನುಭವವು ಸನಕ ಸನಂದನ ಮುನಿಜನಗಳಿಗುಂಟೆ ವಿನಯದಿ ಬೇಡುವೆ ಅನುಗ್ರಹವ 1 ಈ ಮಹಿಯೊಳು ಬಲ ಭೀಮನೆಂಬ ದಿವ್ಯ ನಾಮದಿ ಪರಿಪರಿ ಸೇವಿಸುತ ಸತ್ಯ ಭಾಮಾಕಾಂತನ ಪ್ರೇಮ ಪಾತ್ರನೆಂದು ಕಾಮಿಸುವೆನು ನಿನ್ನ ವರ ದಯುವ 2 ವರ ಯತಿ ವೇಷದಿ ಹರಿಮತವನು ಬಲು ಹರಡುತ ಧರೆಯೊಳು ಸುಜನರಿಗೆ ನರ ಹರಿ ಲೋಕಕೆ ಮಾರ್ಗವರುಹಿದ ಗುರುಗಣ ಗುರು ಮಧ್ವರಾಯ ಪ್ರಸನ್ನನಾಗೊ 3
--------------
ವಿದ್ಯಾಪ್ರಸನ್ನತೀರ್ಥರು
ವಾಯುದೇವರು ನಿನ್ನ ನಂಬಿ ಬಂದೆ ಪಂಚಮುಖಿ ಪ್ರಾಣ ಅನ್ಯ ಹಂಬಲ ಬಿಡಿಸಿ ಬಿಂಬ ಮೂರುತಿ ತೋರೋ ಪ ಹಿಂದೆ ತ್ರೇತಾಯುಗದಿ ರಾಮನಾಜ್ಞೆಯ ಹೊಂದಿ ಸಿಂಧು ದಾಟಿ ಸೀತೆಗೆರಗಿ ನಿಂದು ಸುಂದರ ರಾಮ ಮುದ್ರಿಕೆಯಿತ್ತು ಲೀಲೆಯಲಿ ಕೊಂದ ರಕ್ಕಸ ಪುರವನನಲಗೆ ಇತ್ತೆ 1 ಬಂಡಿ ಅನ್ನವನುಂಡು ಭಂಡ ಬಕನಾ ಕೊಂದು ಹಿಂಡು ನೃಪರಾ ಜರಿದು ಕೊಂಡು ದ್ರೌಪದಿಯಾ ಮಂದಮತಿಗಳನಳಿದು ತಂದಿ ಸೌಂಗಂಧಿಕವ ಪುಂಡ ಕೀಚಕರಳಿದ ಪಾಂಡವಪ್ರಿಯದೂತ 2 ಮೋದತೀರ್ಥರೆನಿಸಿ ವಾದಿಗಳ ನಿಗ್ರಹಿಸಿ ಬೋಧಿಸಿ ಸುಜನರಿಗೆ ಮಾಧವನ ಗುಣವ ಸಾಧು ವಂದಿತ ಬಾದರಾಯಣರು ಇರುತಿರುವ ಬದರಿಯಲ್ಲಿರುವಿ ಶ್ರೀ ನರಹರಿಯ ತೋರೋ 3
--------------
ಪ್ರದ್ಯುಮ್ನತೀರ್ಥರು
ವಾಯುದೇವರು ಶಾಂತ ಜನರಿಗೀಶಾ ರವಿಕುಲ ಕಾಂತನ ನಿಜದಾಸ ಪ ಭ್ರಾಂತಿ ಬಿಡಿಸಿ ನಿಶ್ಚಿಂತ ಮನದಿ ವೇ- ದಾಂತವೇದ್ಯನಲಿ ಸಂತಸ ಕೊಡುವನ ಅ.ಪ. ಕಡಲ ದಾಟಿ ಬಂದೂ ಒಡೆಯನ ಮಡದಿಗುಂಗುರ ತಂದೂ ಸಡಗರದಲಿ ತುಡುಗ ದೈತ್ಯವ ಕೊಂದು ಅಡಿಯಿಡೆ ಲಂಕೆ ಸುಟ್ಟು ಸುಡುಭುಗಿ ಮಾಡಿದೆ 1 ಏಕಚಕ್ರದಲ್ಲೀ ಬಕಗೆಂ- ದ್ಹಾಕಿದ ಗ್ರಾಸದಲೀ ಶಾಖಡಿಸಲಬಿಡದೇಕತುತ್ತು ಮಾಡಿ ಭೀಕರ ದೈತ್ಯನವಲೋಕಿಸದ್ಹೊಡದೆಲೋ 2 ವಾಯು ಹನುಮ ಭೀಮ ಮಧ್ವಾ ಕಾಯೋ ಪೂರ್ಣಕಾಮಾ ಸಾಯ ಬಡಿದೀ ನೀ ಮಾಯಿಗಳೆಲ್ಲರ ರಾಯ ಶ್ರೀನಿಧಿವಿಠಲಾಯಗೆ ತಿಳಿಸಿದೆ ಎಲೆಲೋ 3
--------------
ಶ್ರೀನಿಧಿವಿಠಲರು
ವಾಸುದೇವ ಪ ವಾಸುದೇವ ಅ.ಪ ವಾಸುದೇವ 1 ವಾಸುದೇವ 2 ಮುರಹರ ಶರಣು ಹೊಕ್ಕೆನೊ ಕಾಯೊ ಶ್ರೀಕೃಷ್ಣ ವಾಸುದೇವಶರಣೆಂಬ ಜನರಿಗೆ ಕರುಣಿಪ ಶ್ರೀಕೃಷ್ಣ ವಾಸುದೇವ3 ವಾಸುದೇವ 4 ಶೇಷಶಯನ ನೀ ಪೋಷಿಸೊ ಶ್ರೀಕೃಷ್ಣ ವಾಸುದೇವಭಾಸುರಾಂಗನೆ ಭಕ್ತವತ್ಸಲ ಶ್ರೀಕೃಷ್ಣ ವಾಸುದೇವ5
--------------
ವ್ಯಾಸರಾಯರು