ಒಟ್ಟು 16359 ಕಡೆಗಳಲ್ಲಿ , 135 ದಾಸರು , 7416 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬಾರೆ ನೀ ಹಂಸಗಮನೆ ಮಾರನ ಪೀಠಕ್ಕೆ ಸಾರಿ ಕರೆವೆ ಲಕ್ಷ್ಮೀದೇವಿಯೇ ಪ. ಕಮಲ ಪುಷ್ಪದೊಳು ನೆಲಸಿದ ಲಕ್ಷ್ಮಿಯೆ ಕಮಲದ ಹಾಸಿಗೆ ಕಾಮಜನಕನ ಸಹಿತ 1 ಮುತ್ತು ಮಾಣಿಕ್ಯವು ಕೆತ್ತಿದ ಹಾಸಿಗೆ ಮುತ್ತೈದೆರೆಲ್ಲರೂ ಮುದದಿಂದ ಕರೆಯುವೊರು 2 ಶ್ರೀ ಲಕ್ಷ್ಮೀದೇವಿಯೆ ಶ್ರೀ ಕೃಷ್ಣನರಸಿಯೆ ಶ್ರೀನಿವಾಸನ ಕೂಡಿ ಪ್ರೀತಿಯಿಂದ ಸರಸನಯನೆ 3
--------------
ಸರಸ್ವತಿ ಬಾಯಿ
ಬಾರೆ ಪಾರ್ವತಿ ಸಾರೆ ಸುಖವ ತೋರೆ ನಿನ ದಯವ ಪ ಬಾರಿ ಬಾರಿಗು ಪ್ರಾರ್ಥಿಸುವೆನೆ ಸಾರಸಾಕ್ಷಿಯೆ ಸರ್ಪವೇಣಿಯೆ ಅ.ಪ ದಕ್ಷಕುವರಿಯೆ ಈಕ್ಷಿಸೆನ್ನನು- ಪೇಕ್ಷೆ ಮಾಡದಲೆ ಅಕ್ಷಿತ್ರಯನ ಸತಿಯೆ ಭಕ್ತರ ಕಷ್ಟ ಬಡಿಸುತಲಿ ಸೂಕ್ಷ್ಮ ಮತಿಯನಿತ್ತು ಕೃಷ್ಣನ ಸ್ತೋತ್ರಗಾನದಲಿ ಅ- ಪೇಕ್ಷೆಯೊದಗುವ ಮನವ ಪಾಲಿಸು ರಕ್ಷಿಸೀಗಲೆ ಭಕ್ತವತ್ಸಲೆ 1 ಮಂದಗಮನೆ ಮತ್ತೊಂದು ಪೇಳುವೆ ನಂದಿವಾಹನನಾ ಮುಂದೆ ಸ್ತುತಿಪ ಭಕ್ತವೃಂದ ವಿ- ದೆಂದು ಪೇಳಿದೆ ನಾ ಸುಂದರ ಶ್ರೀ ಹರಿಯ ಸೇವೆಗೆ ಪೊಂದಿಸೆನ್ನ ಮನ ಚಂದದಿಂದ ಪ್ರಾರ್ಥಿಸುವೆನೆ ಸುಂದರಾಂಗಿಯೆ ನಿನ್ನನನುದಿನ 2 ಕಮಲನೇತ್ರೆಯೆ ವಿಮಲ ಸದ್ಗುಣಗುಣಿಯೆ ಪಾರ್ವತಿ ಕಮಲಸಂಭವ ಭವಸುರಾರ್ಚಿತನ ಸ್ಮರಿಸುವ ಮತಿ ಹೃ- ತ್ಕಮಲದೊಳಗೆ ನಿಲಿಸುವಂತೆ ಮಾಡು ಸದ್ಗತಿ ಕಮಲನಾಭ ವಿಠ್ಠಲ ಕೊಡುವ ನೆನುತ ಕೀರುತಿ 3
--------------
ನಿಡಗುರುಕಿ ಜೀವೂಬಾಯಿ
ಬಾರೆ ಬೇಗನೆ ವಾರಿಜಾಮುಖಿ ಚಾರುವೇದಕೆ ನೀ ಬಾ ಬೇಗನೆ ಪ ಕನಕಾಂಬರವನುಟ್ಟು ‌ಘನಕಂಚುಕವ ತೊಟ್ಟು ಹಣೆಗೆ ತಿಲಕವಿಟ್ಟು ವನಜಾಜಿ ಮಲ್ಲಿಗೆಯಾ ಮುಡಿಯುತ ನೀ ಬೇಗನೆ ಬಾ 1 ಲುಲ್ಲ ಪೈಜಣದಿ ಘಿಲ್ಲು ಘಿಲುರೆನುತಲಿ ನಿಲ್ಲದೆ ಉಲ್ಲಾಸದೀಗ | ಬೇಗ ಫುಲ್ಲನಯನೆ ಬಾ 2 ಕಾಮನ ಶಿರೋಮಣಿ ಕಾಮನ ಕರುಣಿ ಶಾಮಸುಂದರನ ರಾಣಿ ನೀ ಬೇಗೆನ ಪ್ರೇಮದಿಂದಲಿ ಬಾ 3
--------------
ಶಾಮಸುಂದರ ವಿಠಲ
ಬಾರೆ ವೆಂಕಟರಮಣಿ ಶ್ರೀದೇವಿ ನೀ ಬಾರೆ ವೆಂಕಟರಮಣಿ ಪ ನಿತ್ಯ ಅ.ಪ. ಏನು ಪುಣ್ಯವೆ ನಂದು ಪಾರಾಯಣನೀನು ಕೇಳುವಿ ಬಂದುಹೀನ ಮಾನವನಿಗೆ ನೀನು ಬರುವಿ ಎಂಬೊಜ್ಞಾನವಿಲ್ಲದೆ ಉಚ್ಚ ಸ್ಥಾನದೊಳಗೆ ಬಾರೆ 1 ಸ್ವಪ್ನದೊಳಗೆ ಬರುವಿ ಶ್ರೀದೇವಿ ನೀಕ್ಷಿಪ್ರದಿಂದಲಿ ಪೋಗುವಿಸರ್ಪಶಯನ ನಮ್ಮಪ್ಪ ಗೋಕುಲ ಬಾಲಅಪ್ಪಿಕೊಳ್ಳುವ ಸುಖ ಒಪ್ಪಿಸಬೇಕಮ್ಮ 2 ಸಿರಿ ರಂಗನಂಕದಿ ಕೂತುಭೃಂಗಕುಂತಳೆ ಹೃದಯಂಗಳದೊಳಗಾಡೆ 3 ಎಲ್ಲ ದೇವತೆಗಳನೆ ತಪಾದಿಯೆಪುಲ್ಲ ವಾರಿಜನಯನೆಗೊಲ್ಲ ಬಾಲನಪಾದ ಪಲ್ಲವ ನೋಡದೆನಿಲ್ಲಲೊಲ್ಲದು ಮನಸೊಲ್ಲು ಲಾಲಿಸೆ ತಾಯೆ4 ಇಂದಿರೇಶನ ರಾಣಿ ಎನ್ನಯ ಮನೋ-ಮಂದಿರದೊಳು ಬಾ ನೀನಂದಗೋಕುಲ ಬಾಲಾನಿಂದು ಕರದೊಳೆತ್ತಿತಂದು ತೋರಿಸೆ ಅರವಿಂದನಿಲಯೆ ಲಕ್ಷ್ಮಿ 5
--------------
ಇಂದಿರೇಶರು
ಬಾರೆ ಸಖಿ ಪೋಗಿ ರಾಸ ಕ್ರೀಡೆಯಾಡುವ ಪ ಸಾರಸಾಕ್ಷ ಕೃಷ್ಣನು ತಾ ಕೊಳಲನೂದುವ ಅ.ಪ ಜಾರನೆಂದು ಸಣ್ಣಮಾತನಾಡಿದ್ದಾಯಿತು ಚೋರನೆಂದು ಬಹಳ ದೂರು ಮಾಡಿದ್ದಾಯಿತು ಮೂರು ನಿಮಿಷ ಅವನ ಮರೆಯಲಾಗದಾಯಿತು ಬೀರುತಿರುವ ಮೋಹಜಾಲ ಸಡಲದಾಯಿತು 1 ಯಾವನೀತನೆಂದು ಚಿಂತೆ ಮಾಡಿದ್ದಾಯಿತು ಗೋವಳನಿವನಲ್ಲವೆಂದು ನಿರ್ಧರಾಯಿತು ಯಾವನಾದರೇನು ಇವನ ಕ್ಷಣವು ಕಾಣದೆ ಜೀವನ ಕಳೆಯುವುದೆ ದೊಡ್ಡ ಭಾರವಾಯಿತು 2 ಮಂದಹಾಸದಿಂದ ಸಕಲ ಜಗವ ಬೆಳಗುವ ಚಂದ್ರನು ತಾನಿವನ ನೋಡಿ ಬಹಳ ನಾಚುವ ಸಾಂದ್ರವಾಯಿತಂತರಿಕ್ಷ ಮಧುರ ನಾದದಿ ಮಲಯ ಮಾರುತ ತಾ ತಲೆಯನಾಡುವ 3 ನಾದದ ಸುಧೆ ಸಾಗರದಲಿ ತೇಲುವಂತಿದೆ ಮಾಧವ ತಾ ಸುಧೆಯ ರಸವನೆರಚುವಂತಿದೆ ಬಾಧಿಸುತಿಹ ಭವದ ತಾಪವಡಗಿದಂತಿದೆ ಮಾದರಿಫಲ ರಾಸಕ್ರೀಡೆ ತೋರುವಂತಿದೆ 4 ಸಕಲ ಲೋಕನಾಥನೀತನೆಂದು ತಿಳಿಯಿತು ಸಕಲವನರ್ಪಿಸುವುದೊಂದೆ ಮಾರ್ಗ ಉಳಿಯಿತು ಲಕುಮಿ ಮುರುಳಿ ರೂಪದಲ್ಲಿ ಇಹುದು ಹೊಳೆಯಿತು ಭಕುತಿ ಹರಿದು ಎನ್ನ ವiನ ಪ್ರಸನ್ನವಾಯಿತು 5
--------------
ವಿದ್ಯಾಪ್ರಸನ್ನತೀರ್ಥರು
ಬಾರೆ ಸಖಿ ಪೋಗೋಣ ಬಾಯೆದ್ದು ಪೋಗೋಣ ಬಾ ಪ ಶೆಳೆಯ ಬ್ಯಾಡ ಸೀರೆನುಡುವೆ ಕರವಬಿಡೊ ಕೈಯ್ಯ ಮುಗಿವೆ ಪ್ರಾಣ ಪ್ರೀಯಾ ಅ.ಪ. ಚಪಲಮುಖಿಯೆ ಚಪಲವಾಗಿದೆ ನಿಲ್ಲದೆ ಹೋಗೋಣ ಪ್ರಿಯಚಾಪಲ್ಯರಹಿತ ಪೂರ್ಣ ಚಲ್ವ ನಿಲ್ಲೋ ನಿಲ್ಲೋ ನಿಲ್ಲದೇ ಪ್ರಿಯಾ1 ಮದನ ಬಾಣಕೆ ಬೆದರಿ ಬಂದೆ ಕುದುರೆನೇರಿ ಬೇಗ ಮದನನಯ್ಯ ಬದರಿವಾಸಿ ಪದರಬಿಡೊ ಪ್ರಿಯಾ2 ದುಂಡುಮುಖಿಯೆ ಗುಂಡುಕುಚವ ಕಂಡು ಮನವ ನಿಲ್ಲದು ಬೇಗ ಕೋದಂಡಪಾಣಿ ತಂದೆವರದಗೋಪಾಲವಿಠ್ಠಲದಂಡ ಪುರುಷ 3
--------------
ತಂದೆವರದಗೋಪಾಲವಿಠಲರು
ಬಾರೆಲೋ ಬೇಗನೆ ಭಾರತೀಪತಿ ಪ್ರಿಯ ಸಾರುತ ಬೇಗ ಶ್ರೀ ನಾರಾಯಣ ಪ. ನಾರದಾದಿ ವಂದ್ಯ ಪಾರುಗಾಣಿಸೆ ಭವ ಗಾರು ಮಾಡದೆ ಶ್ರೀಶ ಸರ್ವೇಶ ಅ.ಪ. ಸುಮನಸರೊಡೆಯನೆ ನೀನಾಗಮಿಸಲು ಸಕಲವು ಸುಗಮವಹುದೆ ಕಮಲೆಯ ಪ್ರೀಯನೆ ನಿನ್ನಾಗಮನವನೆ ಬಯಸುವೆ 1 ಭಕ್ತರ ಕಾಯುವ ಯುಕ್ತಿ ನಿನಗೆ ಸರಿ ಭಕ್ತವತ್ಸಲನೆಂಬೊ ಬಿರುದಿನ ದೇವ ಶಕ್ತಿ ಸ್ವರೂಪನೆ ಅಶಕ್ತರ ಪೊರೆವಾ ಸಕ್ತಿಯ ತೋರಿಸೆ ಭಕ್ತರಿದ್ದೆಡೆಗೆ 2 ಎನ್ನಪರಾಧ ಎಣಿಸಲೆನ್ನಳವೆ ಪನ್ನಗಾದ್ರಿನಿವಾಸ ಕೃಪೆತೋರೊ ಸನ್ನುತಚರಿತ ನಿನ್ನ ಪೊರತು ಎನ ಗನ್ಯರ ಕಾಣೆನಾ ಶ್ರೀ ಶ್ರೀನಿವಾಸ ದೊರೆ 3
--------------
ಸರಸ್ವತಿ ಬಾಯಿ
ಬಾರೈ ಪ್ರಭುವೆ ಬಾರೈ ಪ್ರಭುವೆ ಪ ತೋರೈ ಹರಿಪಾದವ ಗುರುವೆ ಕಮಲ ನಂಬಿದೆ ಭವ ಬಂಧನ ಹರಿಸಿ ಕರುಣದಿ ಜವನ ಭವನ ಬಿಡಿಸೋ ದೀನ ದಿವಿಜ ತರುವೆ1 ಹರಿಕಥಾ ಸುಧಾ ಸಾರ ವರ ರಹಸ್ಯವ ಪೊರೆ ಕರುಣದಿಂದಲರುಹಿಸದಾ ಪೊರೆಯೋ ವಿಭುವೆ 2 ಸುಂದರ ಸುಪ್ರೇಮ ಪಾತ್ರ ಕಂದನನುದಾಶಿಸುವದು ತಂದೆಗೆ ಥರವೆ 3
--------------
ಶಾಮಸುಂದರ ವಿಠಲ
ಬಾರೈ ಬಾರೈ ಗುರು ಸಾರ್ವಭೌಮನೇ ಪ. ಉಟ್ಟವಸನವು ತೊಟ್ಟ ಆವಿಗೆ ಇಟ್ಟ ದ್ವಾದಶ ಊಧ್ರ್ವ ಪುಂಡ್ರವು ದಿಟ್ಟತನದಿ ಇಟ್ಟು ಕೊರಳೊಳು ಮಣಿ ಮನೋಭೀಷ್ಠವ ಸಲಿಸುತ 1 ದಂಡಕ ಮಂಡಲ ಕೈಯಲಿ ಪಿಡಿದು ಕಂಡ ಕಂಡದ ಪೂಜೆಗೊಂಬುವ ಕೊಂಡ ಜನರ ಪರಿಪಾಲಿಸುತಲಿ ಕಂಡ ಕಂಡವರ ಕಾಯುವ ಕರುಣೆ2 ಭೂತ ಪ್ರೇತ ಭಯ ನಾಶಗೊಳಿಸಿ ಭೀತಿಯ ಬಿಡಿಸಿ ಮಂತ್ರಾಲಯದಿ ಖ್ಯಾತಿವಂತ ರುಕ್ಮಿಣೀಶವಿಠಲನ ಕರುಣದಿ ಪ್ರೀತಿಪ ಜನರ ಮನೋಭೀಷ್ಠವೊಲಿದ 3
--------------
ಗುಂಡಮ್ಮ
ಬಾರೈ ಬಾರೈ ಭಾರತಿ ಮನೋಹರ ಮಾರುತಿ ಗುರುವರನೆ ದೇವ ಪ ಪವನದೇವ ಬಾರೋ ಪವಿಸಮಗಾತ್ರ ಬಾರೋ ರವಿಜನ ಭಯ ಹರ | ಪಾವನ್ನ ಮೂರುತಿ 1 ಮಧ್ವಮುನಿಯೆ ಬಾರೋ | ಉದ್ಧರಿಸಲು ಬಾರೋ | ಶುದ್ಧ ಮುಕುತಿದಾತ ದದ್ದಲಪುರವಾಸ 2 ಸಿಂಧು ಬಂಧನ ಬಾರೋ | ಮಂದರೋದ್ಧಾರ ಶಾಮಸುಂದರ ಪ್ರಿಯಸಖ3
--------------
ಶಾಮಸುಂದರ ವಿಠಲ
ಬಾರೈ ಬೇಗ ಶ್ರೀರಾಮ ನಮೊ ಭಾನುಕುಲಾಂಬುಧಿ ಸೋಮ ನಮೊತೊರಿಸು ತವಪದಕಮಲ ನಮೊ ನೀರದಶ್ಯಾಮಲವದನ ನಮೊ ಪ ಅಜಹರಪ್ರಾರ್ಥಿತಮೋದ ನಮೊ ಅಯೋಧ್ಯನಗರವತಾರ ನಮೊಸುಜನಪಾಲ ಕುಜನಾರಿ ನಮೊ ಸನ್ಮುನಿಯಾಶ್ರಮ'ಹರ ನಮೊ1 ಸರಯೂತೀರ ಸಂಚಾರ ನಮೊ ಸತ್ಯಪರಾಕ್ರಮ ಸ್ವಾ'ು ನಮೊಪರಮಪುರುಷ ಪದ್ಮಾಕ್ಷ ನಮೊ ಪತಿತೋದ್ಧರ ಪರಮಾತ್ಮ ನಮೊ 2ಕ್ರೂರತಾಟಕಧ್ವಂಸ ನಮೊ ಮಾರೀಚಾದಿ 'ಚ್ಛೇದ ನಮೊಕಾರ್ಮುಕ'ದ್ಯಧುರೀಣ ನಮೊ ಕೌಶಿಕಮಖಸಂರಕ್ಷ ನಮೊ 3ಗೌತಮಸತಿಯಘಭಂಗ ನಮೊ ಕಾಂತಯಹಲ್ಯಾಸ್ತೌತ್ಯ ನಮೊ ಮಾತಾಪಿತಗುರುವೇ ನಮೊ ಮಮುದ್ಧರಿಸು ಮಹಾತ್ಮ ನಮೊ 4ಕ್ರೂರನು ಕುಟಿಲನು ಕುಮತಿ ನಮೊ ಕಲುಷಾರ್ಚಿತ ದುಷ್ಕರ್ಮಿ ನಮಸಾರರ'ತ ಸಂಸಾರಿ ನಮೊ ಸರ್ವ ದೋಷಪರಿಹಾರ ನಮೊ 5ಕೌಸಲೇಯಕನಕಾಂಬ್ರ ನಮೊ ದಾಶರಥೆ ದನುಜಾರಿ ನಮೊಶ್ರೀಶಚನ್ನಪುರಿಧಾಮ ನಮೊ ದಾಸವೈಷ್ಣವಕುಲಪ್ರೇಮ ನಮೊ 6ರಾಮರಾಮಜಯರಾಮ ನಮೊ ರಾಮತುಲಸಿದಳಧಾಮ ನಮೊರಾಮತುಲಸಿಗುರಸ್ವಾ'ು ನಮೊ ರಂಗಸ್ವಾ'ುದಾಸೇಶ ನಮೊ 7
--------------
ಮಳಿಗೆ ರಂಗಸ್ವಾಮಿದಾಸರು
ಬಾರೈಯ ಬಾರೈಯ ಸೂರಿವರಿಯ ಐಕೂರು ನಿಲಯ ಪ ನೀನ್ಹಾಕಿದ ಸುಜ್ಞಾನದ ಸಸಿಗಳು ಮ್ಲಾನವಾಗುತಿವೆ ಸಾನುರಾಗದಲಿ 1 ಸತಿ ತವಕರುಣ ಸಲಿಲವ ಎರೆದು ಫಳಿಲನೆ ವೃಥ್ಧಿಯ ಗಳಿಸಿ ಸಲಹಲು 2 ನಾಟಿಸಿದ ಸಸಿಗಳು ನೀಟಾಗುವ ಪರಿ ತೋಟಗ ನೀ ಕೃಪೆ ನೋಟದಿ ನೋಡಲು 3 ಕೋವಿದರ ನೀ ಕಾವಲಿ ಇರಲು | ಕು ಜೀವಿಗಳಿಂದಲಿ ಹಾವಳಿಯಾಗದು 4 ನೀಮರೆದರೆ ಸುಕ್ಷೇಮವಾಗದು ಶಾಮಸುಂದರನ ಪ್ರೇಮದ ಪೋತ 5
--------------
ಶಾಮಸುಂದರ ವಿಠಲ
ಬಾರೈಯ್ಯಾ ಗೋವಿಂದಾ ನಂದಾ | ಶ್ರೀವಧು ಲೋಲಾ ಸುರಜನ ಪಾಲಾ | ಸುಮನಾಮಾಲಧರ ಘನ ನೀಲಾ 1 ಭುವನಾಧಾರ ಭೂಬಯ ಹಾರಾ | ದುರಿತ ನಿವಾರಾ 2 ದಾನವ ಮಥನಾ ಕೌಸ್ತು ಭಾಭರಣಾ | ಘನಗುರು ಮಹಿಪತಿ ನಂದನ ಪ್ರಾಣ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಬಾರೈಯ್ಯಾ ಬಾರೈಯ್ಯಾ ಚಕೋರ ಶಶಾಂಕಾ ಪ ಕ್ಲೇಶ ಕಳೆದು ತವ ದಾಸ ಜನರ ಸಹವಾಸವ ನೀಡಲು 1 ಹನುಮ ಭೀಮ ಮುದ | ಮುನಿವರ ಹರಿಪದ ಅನುದಿನ ಗರೆಯಲು 2 ವಾತಜ ನಿನ್ನಯ ದೂತರು ನಾವೈ ಪಾತಕ ಭೀತಿಯ | ಪ್ರೀತಿಲಿ ಬಿಡಿಸಲು 3 ಭಾವ ಭಕ್ತಿಯಲಿ | ಸೇವಿಪರಿಗೆ ಸುಖ | ದೇವಗುರು | ಛಾವಣಿ ನಿಲಯಾ 4 ತಂದೆ ನೀನೊಲಿದರೆ | ನಂದಜ ಶಾಮ ಸುಂದರ ಸಲಹುವನೆಂದು ಪ್ರಾರ್ಥಿಪೆವು 5
--------------
ಶಾಮಸುಂದರ ವಿಠಲ
ಬಾರೊ ಕೃಷ್ಣ ಬಾರೊ ಕೃಷ್ಣ ಬಾರೊ ಕೃಷ್ಣ ಮನದಸದನಕೆ ಪ ತೊರೊ ಕೃಷ್ಣ ತೊರೊಕೃಷ್ಣ ತೊರೊಕೃಷ್ಣ ಚರಣ ಬಡವಗೆ ಅ ಶಿರವ ನಿಡುವೆ ಚರಣದಲ್ಲಿದುರಿತಹರಣ ಕರುಣಭರಿತನೆ ಪೊರೆವ ಧರಣಿ ಧರಿಪನೆ 1 ಸಿರಿಯಮದದಿ ಮರೆತೆ ನಿನ್ನ ಕರೆದು ಪೊರೆಯೊ ಶರಣರಕ್ಷಕಾ ಅಳಿವೆ ಕ್ಷೇಮ ಧಾಮನೆ 2 ವೇದವಿನುತ ಮೋದಭರಿತ ಸಾಧುಚರಿತ ಆದಿ ಕಾರಣಾ ಕಾಯೊ ಬಂಧನೀಡ್ವನೇ3 ನೀರಜಾಕ್ಷ ವಾರಿನಿಲಯ ಸೂರಿಗಮ್ಯ ಪೂರ್ಣಧಾಮನೆ ಸರ್ವನಾಮ ಸರ್ವಕರ್ಮ ಸರ್ವಶ್ರೇಷ್ಟಸರ್ವ ಪ್ರೇರಕಾ 4 ಇಂದಿರೇಶ ನಂದಪೂರ್ಣ ಸುಂದರಾಂಗ ಬಂಧಮೋಚಕ ಕುಂದುರಹಿತ ವಂದನಾರ್ಹ ಬಿಂದು ಬಿಂಬ ಕಂಧರಾಶ್ರಯ 5 ಭುವನ ವಿತತ ಭುವನಮೂಲ ಭುವನ ಪಾಲ ಭುವನನಾಶಕ ಭುವನ ಭಿನ್ನ ಸ್ತವನ ಪ್ರೀಯ ಕವನವರಿಯೊ ಕವಿಬಿರೀಡಿತ ಭಕುತಿದಾಯಕ ಶಕುತ “ಶ್ರೀಕೃಷ್ಣವಿಠಲ” ಯುಕುತಿ ಗೊಲಿಯ ಲಕುಮಿನಾಯಕ
--------------
ಕೃಷ್ಣವಿಠಲದಾಸರು