ಒಟ್ಟು 7812 ಕಡೆಗಳಲ್ಲಿ , 132 ದಾಸರು , 3804 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮಂಗಳ ತ್ರಿವೆಂಗಳಪ್ಪ ಮಂಗಳಾಂಗ ರಂಗಗೆ ಶ್ರೀಮಂಗಳೆಯ ಸಂಗಗೆ ಜಗಂಗಳಾಂತರಂಗಗೆ ಪ.ಕಂಗಳಿಕ್ಕದಂಗೆ ನಿಖಿಳಾಂಗ ಕಪಟಂ ಕಮಠಂ? ಗೆ ಭೂವೆಂಗಳರಸಂಗೆ ನರಸಿಂಗದೇವನಿಗೆ 1ತಿಂಗಳೊಲಿದ್ದಗೆ ಖಳರ ಜಂಗುಳಿ ನಾದ್ದಂಗೆ ಕಲ್ಲವೆಂಗಳ ಮಾಳ್ಪಂಗೆ ಚೆಲ್ವ ಪೊಂಗೊಳಲೂದುವಂಗೆ 2ತುಂಗಮೋಹನಗೆ ಸತುರಂಗವಾಹನಂಗೆ ವಿಹಂಗಗೆ ಭುಜಂಗಶಯನ ಪ್ರಸನ್ನವೆಂಕಟಂಗೆ 3
--------------
ಪ್ರಸನ್ನವೆಂಕಟದಾಸರು
ಮಂಗಳ ಮಂದಿರಗೆ ಮಂಗಳ ಮುರಾರಿಗೆಮಂಗಳ ತಿಮ್ಮಯ್ಯಗೆ ಜಯಮಂಗಳ ಪ.ನೀಲಘನಕಾಯಗೆ ಶ್ರೀಲಕುಮಿ ಸಹಾಯಗೆವ್ಯಾಳವರಶಾಯಿಗೆ ಭಾಳನೇತ್ರಧ್ಯೇಯಗೆ 1ದೀನ ಪರಿಶುದ್ಧಗೆ ದಾನವರನೊದ್ದಗೆಆನಂದನಿರುದ್ಧಗೆಮಾನವಮೃಗೇಂದ್ರಗೆ2ಶೇಷಗಿರಿವಾಸಗೆ ದಾಸಭಯನಾಶಗೆತೋಷಪೂರ್ಣಹಾಸಗೆ ಪ್ರಸನ್ವೆಂಕಟೇಶಗೆ 3
--------------
ಪ್ರಸನ್ನವೆಂಕಟದಾಸರು
ಮಂಗಳ ಮಹಿಮಗೆ ನೀರಾಜನಂಗಳ ಪೈಸರಿಸಿ ಭೃಂಗಾಳಕಂಗಳೆಯರು ಸ್ಮಿತವದನಂಗಳೆಯರು ಶಿರಿ ತಿರುವೆಂಗಳಪತಿಗಾರತಿಯ ಬೆಳಗಿರೆ ಪ.ಅಕ್ರಮದಲಿಶ್ರುತಿಕದ್ದೊಯ್ದವನಾಕ್ರಂದಿಸಿ ಸೀಳಿದಶುಭಮತ್ಸ್ಯಾಕೃತಗೆ ಜಗಂಗರ್ಭಾಕೃತಗೆ ಹತತಮವ್ಯಾಕೃತಗಾರತಿಯ ಬೆಳಗಿರೆ 1ಇಂದಿರನೈಶ್ವರ್ಯವು ಮಕರದಮಂದಿರ ಮಗ್ನಾಗಿರೆ ಗಿರಿಭೃತಕಂಧರಗೆ ಕಚ್ಛಪ ಸುಂದರಗೆ ಕರುಣಾಸಾಂದರಗಾರತಿಯ ಬೆಳಗಿರೆ 2ಪೊಂಗಣ್ಣಿನದಿತಿಜಕ್ಷಿತಿಯಹಿಂಗದೆ ಬೈಚಿಡಲು ಕ್ರೋಡದಿಭಂಗಿತಗೆ ವಸುಮತಿ ಸಂಗತಗೆ ದಿವಿಜರಇಂಗಿತಗಾರತಿಯ ಬೆಳಗಿರೆ 3ದಾನವಗಂಜದೆ ಶಿಶು ವರಹರಿನೀನೆ ಗತಿಯೆನೆ ಕಾಯ್ದ ಸುಜಾಣನಿಗೆ ನಿಜಜನಪ್ರಾಣನಿಗೆ ನರಪಂಚಾನನಗಾರತಿಯ ಬೆಳಗಿರೆ 4ಧರ್ಮದಿ ಕೊಬ್ಬಿದ ಬಲಿಚಕ್ರನಮರ್ಮದಿ ಜಡಿದ ವಿಚಿತ್ರಕರ್ಮನಿಗೆ ಧೃತಮೃಗಚರ್ಮನಿಗೆ ಅಣುವಟುಶರ್ಮನಿಗಾರತಿಯ ಬೆಳಗಿರೆ 5ವೀರ ಕ್ಷತ್ರಿಯರ ಕುಲ ಸಂಹಾರ ರೇಣುಕೆ ಕಂಠ ವಿದಾರಿಗೆ ವಿತರಣ ಶೂರಗೆಘೋರಕುಠಾರಿಗಾರತಿಯ ಬೆಳಗಿರೆ 6ಮುನಿಮಖಪಾಲಕ ತ್ರಯಂಬಕಧನುಹರ ಸೀತಾವರ ದಶಮುಖಹನನಗೆ ಮತ್ತವನನುಜಪಗೆ ಅಂಜನಾತನುಜಪಗಾರತಿಯ ಬೆಳಗಿರೆ 7ಪೊಂಗೊಳಲೂದುತ ಗೋಜಂಗುಳಿಹೆಂಗೆಳೆಯರ ಮೋಹಿಪ ತಾವರೆಗಂಗಳಗೆ ಸುಖದ ತರಂಗನಿಗೆ ಪಾಂಡವಸಂಗನಿಗಾರತಿಯ ಬೆಳಗಿರೆ 8ನೀಚರ ಬಲವಳಿಯಲು ಸತ್ವರಖೇಚರನಾರಿಯರ ವ್ರತಹೃತಆಚರಗೆಜಿತಬೌದ್ಧಾಚರಗೆ ನಿಗಮವಿಗೋಚರಗಾರತಿಯ ಬೆಳಗಿರೆ 9ಸಂಕರ ಕಲಿಯಂ ಮಥಿüಸಲು ತಾಬಿಂಕದಿ ಹಯವೇರಿದ ಸದ್ಧರ್ಮಾಂಕುರಗೆ ವರ್ಧಿಪ ಕಿಂಕರಗೆ ಪ್ರಸನ್ವೆಂಕಟರೇಯಗಾರತಿಯ ಬೆಳಗಿರೆ 10
--------------
ಪ್ರಸನ್ನವೆಂಕಟದಾಸರು
ಮಂಗಳಂ ಮಾರಣಮಣಗೆಮಂಗಳಂ ಪ.ನೀರೊಳು ಮುಳಗಿನಿಗಮ ತಂದವಗೆ<?xmಟ veಡಿsioಟಿ='1.0' eಟಿಛಿoಜiಟಿg='uಣಜಿ-8'?>ಘೋರರೂಪದಿ ಕಂಬದೋಳ್ ಬಂದವಗೆ 1ಪೊಡವಿಯನೀರಡಿ ಮಾಡಿದ ದೇವಗೆಕೊಡರಿಯ ಕರನಾಗಿ ಜನಿಸಿದವಗೆಮಡದಿ ಸಹಿತ ವನವಾಸದೊಳಿದ್ದವಗೆಬಿಡದೆ ಪಾಂಡವ ಭೃತ್ಯನಾದವಗೆ 2ಭರದಲಿ ಸತಿಯರ ವ್ರತಗೆಡಿಸಿದವಗೆಧುರದಲಿ ತುರಗವನೇರಿದವಗೆಗಿರಿಜಾಪುರದೊಳು ವಾಸವಿದ್ದವಗೆವರದ ಶ್ರೀ ಪುರಂದರವಿಠಲಗೆ 3
--------------
ಪುರಂದರದಾಸರು
ಮಂಗಳ ಮಾರಮಣಗೆ ಮಂಗಳ ಜಯಮಂಗಳ ಭೂರಮಣಗೆ ಮಂಗಳ ಪ.ಮುಕುಟಕೆ ಮಂಗಳ ಮತ್ಸ್ಯಾವಾತಾರಗೆಮುಖಕೆ ಮಂಗಳ ಮುದ್ದು ಕೂರ್ಮನಿಗೆ ||ಸುಕಂಠಕೆ ಮಂಗಳ ಸೂಕರರೂಪಗೆನಖಕೆ ಮಂಗಳ ಮುದ್ದು ನರಸಿಂಹಗೆ 1ವಕ್ಷಕೆ ಮಂಗಳ ವಟವಾಮನನಿಗೆಪಕ್ಷಕೆ ಮಂಗಳ ಭಾರ್ಗವಗೆ ||ಕಕ್ಷಕೆ ಮಂಗಳ ಕಾಕುತ್ಸ್ಥರಾಮನಿಗೆಕುಕ್ಷಿಗೆ ಮಂಗಳ ಶ್ರೀ ಕೃಷ್ಣಗೆ 2ಉರುಗಳಿಗೆ ಮಂಗಳ ಉತ್ತಮ ಬುದ್ಧಗೆಚರಣಕ್ಕೆ ಮಂಗಳ ಚೆಲ್ವ ಕಲ್ಕಿಗೆ ||ಪರಿಪರಿ ರೂಪಗೆಪರಮ ಮಂಗಳಪುರಂದರವಿಠಲಗೆ ಶುಭಮಂಗಳ 3
--------------
ಪುರಂದರದಾಸರು
ಮಂಗಳಂಜಯಮಂಗಳಂ ಪ.ನಿಗಮವ ತಂದಾ ಮತ್ಸ್ಯನಿಗೆನಗವ ಬೆನ್ನಲಿ ಪೊತ್ತ ಕೂರ್ಮನಿಗೆ ||ಜಗವನುದ್ಧರಿಸಿದ ವರಹಾವತಾರಗೆಮಗುವನು ಕಾಯ್ದ ಮುದ್ದು ನರಸಿಂಹಗೆ 1ಭೂಮಿಯ ದಾನವ ಬೇಡಿದಗೆಆ ಮಹಾಕ್ಷತ್ರಿಯರ ಗೆಲಿದವಗೆ ||ರಾಮಚಂದ್ರನಾದ ಸ್ವಾಮಿಗೆ ಸತ್ಯಭಾಮೆಯರಸ ಗೋಪಾಲಕೃಷ್ಣಗೆ 2ಬತ್ತಲೆ ನಿಂತಿಹ ಬುದ್ಧನಿಗೆಉತ್ತಮ ಹಯವೇರಿದ ಕಲ್ಕಿಗೆ |ಹತ್ತವತಾರದಿ ಭಕ್ತರ ಸಲಹುವಸತ್ಯ ಶ್ರೀ ಪುರಂದರವಿಠಲನಿಗೆ 3
--------------
ಪುರಂದರದಾಸರು
ಮಂಗಳಾರತಿಯ ಮಾಡಿರೊ ಶ್ರೀನಿವಾಸಗೆ ಪ.ಸಂಗಸುಖದ ಭಂಗವೆಲ್ಲಹಿಂಗಿತೆಂದು ಹೊಂಗಿ ಮನದಿ ಅ.ಪ.ಘಟ್ಟಿಹೃದಯ ತಟ್ಟೆಯಲ್ಲಿಕೆಟ್ಟ ವಿಷಯ ಬತ್ತಿ ಮಾಡಿಶ್ರೇಷ್ಠ ಜ್ಞಾನ ತೈಲವೆರೆದುವಿಷ್ಣುನಾಮ ಬೆಂಕಿ ಉರಿಸಿ 1ಶ್ರದ್ಧೆಯಿಂದ ಎತ್ತಿ ಮನದಬುದ್ಧಿಪ್ರಕಾಶಗಳು ತೋರಿಎದ್ದ ಕಾಮಕ್ರೋಧಗಳನುಅದ್ದಿ ಪಾಪಗೆದ್ದು ಮನದಿ 2ತತ್ತ್ವಪ್ರಕಾಶಗಳ ತೋರಿಚಿತ್ತಮಾಯಕತ್ತಲೆಯನುಕಿತ್ತುಹಾಕಿ ಹರಿಯಮೂರ್ತಿಸ್ವಸ್ಥ ಚಿತ್ತದಿಂದ ನೋಡಿ 3
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಮಗಳೆ ಜಾನಕಿ ನಿನ್ನ ಸುಗುಣಸನ್ಮೋಹನ್ನಖಗಕುಲರನ್ನ ಮನೋರಮಣಮನೋರಮಣ ಕಾಂತ ಶ್ರೀರಾಮನಅಗಲದಿರು ಕಾಣೆ ಮರಿಯಾನೆ ಶೋಭಾನೆ 1ಪತಿಯೇಳ್ವ ಮೊದಲು ಜಾಗ್ರತೆಯಾಗಿ ಯೆದ್ದು ಗೃಹ-ಕೃತ್ಯಕೆಲ್ಲಕ್ಕನುಸರಿಸಿಅನುಸರಿಸಿ ನಡೆ ನೀ ಮಗಳೆಹಿತವಾಗಿ ಬಾಳು ಪತಿಯೊಳು ಶೋಭಾನೆ 2ಗಂಡನ ಮಾತಿಗೆ ದುರ್ಚಂಡಿಸದಿರು ಮಗಳೆಗಂಡನುಣ್ಣದ ಮೊದಲು ನೀಮೊದಲು ನೀನುಣ್ಣದಿರುಪುಂಡರೀಕಾಕ್ಷಿ ಪುಣ್ಯರಾಶಿ ಶೋಭಾನೆ 3ಮುಗುಳು ನಗೆಯ ಬೀರು ಜಗಳವ ಮಾಡದಿರುಜಗದೊಳು ಕೀರ್ತಿಯುತಳಾಗುಯುತಳಾಗು ಬಂಧುಗಳಲಿ ನೀಹಗೆಯ ಮಾಡದಿರು ಕೃಪೆದೋರು ಶೋಭಾನೆ 4ವೃದ್ಧ ಮಾವನಪಾದಹೊದ್ದಿ ಸೇವೆಯಮಾಡುಸುದ್ಧ ಭಾವದೊಳು ನಡೆ ಮಗಳೆನಡೆ ಮಗಳೆ ನಿತ್ಯಸುಮಂಗಲೆಮುದ್ದಾಗು ಬಂಧು ಬಳಗಕ್ಕೆ ಶೋಭಾನೆ 5ಅತ್ತೆಯ ಮಾತಿಗೆ ಪ್ರತ್ಯುತ್ತರ ಕೊಡದಿರುಪ್ರತ್ಯೊಬ್ಬಳೆ ಸ್ಥಳದಿ ನಿಲದಿರುನಿಲದಿರು ನೀರಜಗಂಧಿಸತ್ಯ ವಚನವನೆ ಸವಿಮಾಡು ಶೋಭಾನೆ 6ಮೈದುನರನ್ನು ತನ್ನ ಮಕ್ಕಳೆಂಬಂತೆನೋಡುಸಾಧುಭಾವದದಲಿ ನಡೆ ಮಗಳೆನಡೆ ಮಗಳೆ ಪಂಕ್ತಿಯಲಿಭೇದ ಮಾಡದಿರು ಕೃಪೆದೋರು ಶೋಭಾನೆ 7ಕಂಡರೆ ಶಿಷ್ಟರ ದಂಡ ನಮಸ್ಕರಿಸುಹಿಂಡುದಾಸಿಯರ ದಣಿಸದಿರುದಣಿಸದಿರು ಉತ್ತಮಳೆಂದು ಭೂ-ಮಂಡಲದಿ ಕೀರ್ತಿಪಡು ಪೂರ್ತಿ ಶೋಭಾನೆ 8ಚಂಡಿತನವ ನಿನ್ನ ಗಂಡನೊಳ್ಮಾಡದಿರುಗಂಡಸರ ಮುಂದೆ ಸುಳಿಯದಿರುಸುಳಿಯದಿರು ಸಂತತ ಸೌಖ್ಯ-ಗೊಂಡು ಬಾಳಮ್ಮ ಸೀತಾಭಾಮಾ ಶೋಭಾನೆ 9ಕ್ಷಮೆಯಲ್ಲಿ ಧಾತ್ರಿಯುಂಬ ಕ್ರಮದಲ್ಲಿ ಮಾತೆಸುರತಸಮಯದಿ ವೇಶ್ಯಾ ತರುಣಿಯಳತರುಣಿಯಳ ತೆರದಿ ರಾಮನ ಸತಿಯಂ-ತೆ ಮಾಡವ್ವ ಸುಖಂ ಜೀವಾ ಶೋಭಾನೆ 10ಲಕ್ಷ್ಮೀನಾರಾಯಣರಂತೆ ಸೀತಾರಾಮರು ನೀವುಕುಕ್ಷಿಈರೇಳು ಜಗವನ್ನುಜಗವನ್ನು ನಮ್ಮನ್ನು ಸರ್ವರರಕ್ಷಣ್ಯ ಮಾಡಿ ಸುಖಿಯಾಗಿ ಶೋಭಾನೆ 11
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಮಂಜುಳ ವೇಣುಗಾನವ ಮಾಡಿ ಮೋಹಿಪ ಜಗವಕಂಜಜನಯ್ಯ ಮುರಾರಿ ಕಾಮಿನಿಯರಿಗುಪಕಾರಿ ಪ.ಯಮುನೆಯ ಪುಲಿನದಿ ಯದುಕುಲ ಚಂದ್ರ ಹೊಂದೆರಮಣೀರ್ವಕ್ಷ ಮಧ್ಯದಿ ರಾಜಿಸುತ ಕುಲಾಂಬುಧಿ 1ಪೂರ್ಣ ಪೀಯೂಷಕರನು ಪೂರ್ವಾಚಲಕೆ ಸಾರ್ದನುಪೂರ್ಣಾನಂದ ಮುಕುಂದ ಪವನ ಸಂಚಾರದಿಂದ 2ಕುಂದನೀಲೋತ್ಪಲ ಜಾಜಿಕಮಲಮಲ್ಲಿಗೆ ಜುಜಿ( ?)ಮಂದಾರಪುನ್ನಾಗಭುಜಮೂಲದಿ ಗೋಪಾಲರಾಜ3ಕುಸುಮಾಕರಕುಂಜದಿ ಕುಶಲಕ್ರೀಡಿತನಾದಿಸುಸಪ್ತ ಸ್ವರದಿಂದ ಸುಖದಾನಂದ ಮುಕುಂದ 4ಕತ್ತಲೆವಿರಿ ಸಂಪಿಗೆಕಮಲಮೊಲ್ಲೆ ಮಲ್ಲಿಗೆಸುತ್ತಿದ ಎಳೆಪಲ್ಲವ ಮಾರನಂತಹ ಚೆಲುವ 5ಮುತ್ತಿನ ಚೊಲ್ಲೆಯಲ್ಲಿಯ ಮುಂಗುರುಳಲ್ಲಿ ವಲಯಕಸ್ತೂರಿ ತಿಲಕ ಒಪ್ಪೆ ಕವಿದಡರ್ವದ್ವೀರೇಫೆ 6ಕಡೆಗಣ್ಣಿನ ನೋಟದಿ ಕುಡಿಹುಬ್ಬಿನ ಮಾಟದಿಮಡದೇರ್ಗೆ ಮಾರಶರ ಮೂಡಿಸುತತಿ ಸುಂದರ 7ಮುಗುಳುನಗೆಮೊಗದ ಮಣಿಕುಂಡಲ ಕರ್ಣದಯುಗ ಕರ್ಣಾಕರ್ಣಿಕರಾಯತ ನಟ ನರಾಕಾರ 8ವನಮಾಲೆವೈಜಯಂತಿಶ್ರೀವತ್ಸಕೌಸ್ತುಭಕಾಂತಿಮಿನುಗುವಾಮೋದ ಗಂಧಮುಡಿ ತೋರೋ ಶ್ರೀ ಗೋವಿಂದ 9ಹಾರಕೇಯೂರ ಕಂಕಣ ಹೊಳೆವ ಮಧ್ಯಒಡ್ಯಾಣಚಾರುಪೀತಾಂಬರೋತ್ತರಿ ಚೀರದಿಂದೆಸೆವಹರಿ10ವಾಮಬಾಹುವಿಲೊಪ್ಪುವ ವೇಣುವಿನ ಘನರವಬ್ರಹ್ಮ ಗಂಧರ್ವರ ಗಾನ ಬಗೆಗೆ ಮೀರುವ ದೇವ 11ಸುಲಲಿತಂದುಗೆ ಗೆಜ್ಜೆ ಸಂದ್ರೇಖೆ ಶೋಭಿತಹೆಜ್ಜೆಕೆಲದ ಗೋಪಾಂಗನೇರ ಕಾಮಧೇನು ಸಾರೋತ್ತರ 12ಧರೆಗೆರಗಿದ ಜಡೆ ಸಲೆ ಕಾಳಿಂದಿ ಮೇಲಾಡೆ ಸಕಳ ಪಕ್ಷಿಮೃಗವು ಸಂಚರಿಸದೆ ನಿಂದವು 13ಜಡಂಗಳು ಚೇತರಿಸೆ ಜನದ ಚೇಷ್ಟೆ ಥಂಬಿಸೆಕಡುರಸತುಂಬಿತುಳುಕಲಜಭವಾಂಡೊಲಿಯಲು14ವೃಕ್ಷಗಳ ಶೃಂಗಾರಿಯ ವತ್ಸಗಳಾವದೊರೆಯಈಕ್ಷಿಸಿ ತೃಣ ಮೆಲ್ಲದೆಯಿದ್ದವು ಗೀತಕೇಳುತ 15ನೀರಸ ತರುಫಲಾಗೆ ನಿತ್ಯಪ್ರಜÕತೆಗೆನೀರದಗೆ ಸ್ವರಗೈಯೆ ನಿಗಮನಯ್ಯ ಮರೆಯ 16ಮಂಗಳಮೇಘಘರ್ಜನೆ ಮಾಡಿದವು ಮೆಲ್ಲಮೆಲ್ಲನೆರಂಗನ ಮೇಲಮೃತ ಧಾರೆಯವಿತ್ತವರ್ಥಿಯಿಂದ 17ನಂದವ್ರಜದ ವನವು ನಂದನ ಚೈತ್ಯಾಧಿಕವುನಂದಸೂನುವಿನ ಗೀತ ನಾದ ವೇದಾನಂತಾನಂತ 18ಕಮಲಜ ಭವೇಂದ್ರಾದಿಕರು ಭ್ರಾಂತಿಯನೈದಿದರುಅಮರಜನ ನಾರೇರು ಅಂಗಜವಶವಾದರು 19ಗೋಷ್ಠದ ಗೊಲ್ಲ ಗೋಪೇರ ಗೋವರ್ಧನ ಗೋಪಾಲರದೃಷ್ಟಕೆ ಸುರಮುನಿ ಗಂಧರ್ವರು ಪೊಗಳಿದರಾಗ 20ಸುರಭ್ಯಾಗಾರದಿ ಕೃಷ್ಣ ಸಂಚರಿಸಲು ಸರ್ವೇಷ್ಠಪೂರಣವಪ್ಪಿತುಧರೆಪರಮಮಂಗಳ ಸಾರಿ21ಸುರರುಸುಖ ಸಂಭೃತ ಶರಧಿಯೊಳೋಲಾಡುತಸಿರಿಮಂಗಳವ ಹೇಳಿ ಸುರಿದರರಳ ಮಳೆ22ಪ್ರಸನ್ನತರ ಚರಿತ ಪ್ರಸನ್ನಾವ್ಯಾಕೃತಗಾತ್ರಪ್ರಸನ್ನಪೂರ್ಣ ಪ್ರಜೆÕೀಷ್ಠ ಪ್ರಸನ್ನವೆಂಕಟಕೃಷ್ಣ 23
--------------
ಪ್ರಸನ್ನವೆಂಕಟದಾಸರು
ಮಡಿ ಮಡಿದ ಮಡಿಯೆಂದು ಮುಮ್ಮಾರು ಹಾರುತಿ |ಮಡಿಯೆಲ್ಲಿ ಬಂದಿತೊ ಬಿಕನಾಶಿ ಪ.ಮಡಿಯು ನೀನೆ - ಮೈಲಿಗೆ ನೀನೆ - |ಸುಡಲಿ ನಿನ್ನ ಮಡಿ ಬಿಕನಾಶಿ ಅಪಎಲವು - ಚರ್ಮ - ಮಲ - ಮೂತ್ರ ಗುಂಡಿಯಲಿ |ನಲಿಯುತ ನಿಂತೆಯಾ ಬಿಕನಾಶಿ ||ನೆಲೆಗೊಂಡ ನವದ್ವಾರದ ಹೊಲೆಯೊಳು |ಅಳಲುತ ನೀ ಬಿದ್ದೆ ಬಿಕನಾಶಿ 1ಹುಟ್ಟಲುಸೂತಕ ಸಾಯಲುಸೂತಕ |ನಟ್ಟುನಡುವೆ ಬಂತೆ ಬಿಕನಾಶಿ ||ಬಿಟ್ಟು ಬಿಡದೆ ಕಾವೇರಿಯ ಮುಳುಗಲು |ಮುಟ್ಟು ಹೋಹುದೆ ಬಿಕನಾಶಿ 2ಚರ್ಮವು ತೊಳದರೆ ಕರ್ಮವು ಹೋಹುದೆ |ಮರ್ಮವ ತಿಳಿಯದೆ ಬಿಕನಾಶಿ ||ಬೊಮ್ಮನಯ್ಯ ಪುರಂದರವಿಠಲನ ಪಾಡಿ |ನಿರ್ಮಲದಿ ಬಾಳೆಲೊ ಬಿಕನಾಶಿ 3
--------------
ಪುರಂದರದಾಸರು
ಮಂತ್ರ ದೊರಕಿತು ನಾಮ ಮಂತ್ರ ದೊರಕಿತು |ಯಂತ್ರವಾಹಕನಾರಾಯಣನಪಅಂತರಂಗದಿ ಜಪಿಸುವಂಥ ಅ.ಪಆಶೆಯಲ್ಲಿ ಬೀಳಲಿಲ್ಲ ಕ್ಲೇಶಪಟ್ಟು ಬಳಲಲಿಲ್ಲ |ವಾಸುದೇವಕೃಷ್ಣನೆಂಬ ಶಾಶ್ವತದೀ ದಿವ್ಯ ನಾಮ1ಅರ್ಥ ವೆಚ್ಚವಾಗಲಿಲ್ಲ, ಕಷ್ಟಪಟ್ಟು ಬಳಲಲಿಲ್ಲ |ಭಕ್ತಿಯಿಂದ ಭಜಿಸಿ ಮಹಾಮುಕ್ತಿ ಪದವಸೇರುವಂಥ 2ಹೊದ್ದಿದ ಪಾಪವೆಲ್ಲ ಕಳೆದು, ಉದ್ಧಾರವಾಯಿತು -ಕುಲಕೋಟಿಯು |ಮುದ್ದು ಕೃಷ್ಣನ ದಿವ್ಯನಾಮ ವಜ್ರಕವಚ ಹೃದಯದಲ್ಲಿ 3ಹಾಸಬಹುದು ಹೊದೆಯಬಹುದು, ಸೂಸಿಒಡಲ ತುಂಬಬಹುದು |ದಾಸರನ್ನು ಬಿಡೆದೆ ಪೊರೆವ ಶ್ರೀಶನೆಂಬ ದಿವ್ಯ ನಾಮ 4ಒಂದುಬಾರಿಸ್ತುತಿಸಿದರೆ ಒಂದು ಕೋಟಿ ಜಪದಫಲವು |ಇಂದಿರೇಶ ಶ್ರೀಪುರಂದರವಿಠಲನೆಂಬ ದಿವ್ಯನಾಮ5
--------------
ಪುರಂದರದಾಸರು
ಮಂದಮತಿಯೈ ನಾನುಮದನಜನಕನು ನೀನುಕುಂದುಗಳನೆಣಿಸದಲೆ ದಯೆ ಮಾಡಿ ಸಲಹೋ ಪಪಾಪಕರ್ತನು ನಾನು ಪಾಪನಾಶಕ ನೀನುಕೋಪ ಮದ ಮತ್ಸರದಿ ಸುಳಿವೆ ನಾನು ||ತಾಪವನು ತರೆದು ನಿರ್ಭಯವ ಮಾಡುವೆ ನೀನುರೂಪಛಾಯಕೆ ಮರುಳುಗೊಂಬೆನೈ ನಾನು 1ಶರಣ ಶಿಕ್ಷಕ ನೀನುಪರಮಪಾತಕಿನಾನುದುರಿತಪರ್ವತವ ಪರಿಹರಿಪೆ ನೀನು ||ಮರುಳುಗೊಂಬನು ನಾನು ಅರಿತು ರಕ್ಷಿಪೆ ನೀನುಗರುವಮತಿಯೈ ನಾನಗಮ್ಯ ನೀನು 2ಮಂದಭಾಗ್ಯನು ನಾನು ಇಂದಿರಾಪತಿ ನೀನುಹಿಂದು ಮುಂದಿನ ಸುದ್ದಿ ಅರಿಯದವ ನಾನು ||ತಂದೆ ಶ್ರೀ ಪುರಂದರವಿಠಲ ರಾಯನೆ ದೇವಎಂದೆಂದು ಭಕ್ತರನು ಸಲಹುವೆಯೋ ನೀನು 3
--------------
ಪುರಂದರದಾಸರು
ಮದ್ದಿನ ಹವಾಯಿ ನೀನೋಡುಬಗಳಮದ್ದಿನ ಹವಾಯಿ ನೀನೋಡುಮದ್ದಿನ ಹವಾಯಿ ಹೃದಯ ಬಯಲಲ್ಲದೆಎದ್ದಿರು ಚತುಷ್ಟ ತನುವಿಗೆ ಬೇರೆಯುಪತೂರ್ವುತಲಿದೆ ಬಿರಿಸಾಕಾಶದ ತುದಿಗೇರ್ವುತಲಿದೆಅಂಬರಬಾಣಬೀರ್ವುತಲಿದೆ ಚಕ್ರದ ಕಿಡಿಯಗಲಕೆಜಾರ್ವುತಲಿದೆ ಅಜ್ಞಾನದಖೂನ1ಗಡಿಗ ಬಾಣದ ಗತಿಯನೆನೋಡುಗಜುಗಿಂಗಳ ಕಾಯಬ್ಬರವಗಿಡುಗಳು ಹಾರ್ವವು ಜಿನಿಸು ಜಿನಿಸುಗಳುಭಡಲ್ ಭಡಲ್ಲಿಹ ಸಪ್ಪಳವು2ಅಂತರ ದೌಸು ಸರಬತ್ತಿಗಳುಅಗಸೆಯ ಹೂವಿನ ಅಚ್ಚರಿಯಕಂತುಕ ಪೆಟಲವು ಮುತ್ತಿ ಸೇ-ವಂತಿಗೆ ಕವಳೆಯ ಹೂವಿನ ಸುರಿಮಳೆಯು3ಕೋಳಿಯು ಮುಳುಗುತಲೇಳುತಲಿರುತಿರೆಕೋಣ ಆನೆಗಳ ಕಾದಾಟಬಾಳೆಯ ಗೊನೆಗಳು ಬೆಳ್ಳಿಯ ಚುಕ್ಕೆಯುಬೆಳ್ಳನೆ ಜ್ಯೋತಿಯ ಕಡಕದಾಟ4ನಿನ್ನ ಕಾಂತಿ ಇವು ನೀನೇ ನೋಡುತಲಿರುತನ್ಮಯ ದೃಷ್ಟಿಯನಿಟ್ಟುಚೆನ್ನ ಚಿದಾನಂದ ಬಗಳೆ ನೀ ಸಾಕ್ಷಿಯಿರೆ ಚೈ-ತನ್ಯಾತ್ಮಕ ಶುದ್ಧನವ5ಸೂಚನೆ :ದೀಪಾವಳಿ ಮುಂತಾದ ಸಂದರ್ಭಗಳಲ್ಲಿ ಹಾರಿಸುವ ಮದ್ದಿನ ವಸ್ತುಗಳ ಬೆಳಕಿಗೆ ದೇವಿಯನ್ನು ಹೋಲಿಸಿದ್ದಾಗಿದೆ. ಇದರಲ್ಲಿ ಬಂದಿರುವಕೆಲವು ಮದ್ದಿನ ಪದಾರ್ಥಗಳ ಹೆಸರುಗಳು ಆಗಿನ ಕಾಲದವು.
--------------
ಚಿದಾನಂದ ಅವಧೂತರು
ಮದ್ದು ಮಾಡಬಾರದೇನೇ ಮುದ್ದು ಮಾಯಾದೇವಿ ? ಪ.ಮುದ್ದು ಬಾಲಕೃಷ್ಣನಲ್ಲಿ ಮನಸು ನಿಲ್ಲುವ ಹಾಗೆ ಅಪಕರಗಳಿಂದ ಹರಿಯ ಮಂ ದಿರದ ಕಸವ ತೆಗೆಯಲಿಕ್ಕೆ |ನಿರುತದಲ್ಲೂ ಬೇಸರಿಯದೆ ಹರುಷವು ಪುಟ್ಟವ ಹಾಗೆ 1ಶ್ರುತಿ - ರಾಮಾಯಣ ಶ್ರೀಭಾಗವತ ಪಂಚರಾತ್ರಾಗಮಾದಿಕಥೆಯ ಕೇಳುವುದಕೆ ಬಹಳ ರತಿಯು ಪುಟ್ಟುವ ಹಾಗೆ 2ದೇಹವು ಅನಿತ್ಯವೆಂದು ನೇಹದಿಂದ ಪೋಷಿಸದಲೆ |ಮಾಹೇಂದ್ರಾವರಜನ ಅಹ ರಹರವು ಭಜಿಸುವ ಹಾಗೆ 3ನರರಸ್ತವನ ಹೇಯವೆಂದು ಅರಗಳಿಗೆಯು ಅಗಲದಲೆ |ನರಹರಿಯ ಭಕ್ತರಿಗೆ ಶರಣುಹೋಗುವ ಹಾಗೆ 4ಮನಸು ವಾಕ್ಕಾಯಗಳಿಂದ ಸದ್ ಗುಣದಿ ಪುರಂದರವಿಠಲನಅನುರಾಗದಿಂ ಬಿಡದೆ ಪಾಡಿ ಕುಣಿದು ಕುಣಿದು ದಣಿವ ಹಾಗೆ 5
--------------
ಪುರಂದರದಾಸರು
ಮದ್ದು ಮಾಡಲರಿಯಾ ಮುದ್ದು ರಮಾದೇವೀ ಪ.ಮುದ್ದು ಕೃಷ್ಣನಲ್ಲಿ ಮನ ಸಿದ್ಧವಾಗಿ ನಿಲ್ಲುವಂತೆ ಅಪವಚನಗಳೆಲ್ಲ ವಾಸುದೇವನ ಕಥೆಯೆಂದುರಚನೆ ಮಾಡುವರಲ್ಲಿರಕ್ತಿನಿಲ್ಲುವ ಹಾಗೆ1ಸಂತೆ ನೆರಹಿಸತಿ ಸುತರು ತನ್ನವರೆಂಬಭ್ರಾಂತಿ ಬಿಟ್ಟು ನಿಶ್ಚಿಂತನಾಗುವ ಹಾಗೆ 2ಎನ್ನೊಡೆಯಸಿರಿ ಪುರಂದರವಿಠಲನಸನ್ಮತಿಯಿಂದೆ ಹಾಡಿ ಪಾಡುವ ಹಾಗೆ 3
--------------
ಪುರಂದರದಾಸರು