ಒಟ್ಟು 5479 ಕಡೆಗಳಲ್ಲಿ , 130 ದಾಸರು , 3579 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸಜ್ಜನರ ನಡತಿದೊ ಶ್ರೀ |ಅರ್ಜುನ ಸಖನ ಪದಾಬ್ಜ ಭಜಿಸುವದೆ ಪಕುಹಕರ ಸಂಗವ ಮಾಡದೆಖೇಚರ|ವಹನನಾಳುಗಳ ಆಳಾಗೀ ||ಅಹರ್ನಿಶಿಯಲಿ ತತ್ವ ವಿಚಾರಿಸುತಲಿ |ಅಹಲ್ಲಾದವ ಮನದಲಿ ಬಿಡುತಿಪ್ಪುದೆ 1ನೀಚ ಸುರ ನರರ ಸೇವಿಸಿ ವರಶನ |ಯಾಚಿಸದೆ ಸ್ವಧರ್ಮವ ಬಿಡದೇ ||ಖೇಚರಜ ಮತವ ಪೊಂದಿಸು ಕರ್ಮಗ- |ಳಾಚರಿಸುತವಿಜ್ಞಾನಘಳಿಸುವದೆ 2ಪದ್ಮಜಮುಖರಿಗೆ ಕ್ಷಣ ಕ್ಷಣದಲಿ ಶಿರಿ |ಬುದ್ಧಿಯ ಪ್ರೇರಿಸುವಳು ಆರೇ ||ಪ್ರದ್ಯುಮ್ನನು ಮಾಡುವ ಲೀಲಿಯು ಬಳಿ |ಇದ್ದರು ಒಂದನು ಅರಿಯಳು ಎಂಬುದೆ 3ತತ್ವಭಿಮಾನಿಗಳೆಲ್ಲಸಮೀರಪ್ರ- |ವರ್ತಿಸಿದಂದದಿ ವರ್ತಿಪರೂ ||ಸತ್ಯವತಿ ಜಗತೊಬ್ಬನೆ ಅಚ್ಛಿನ್ |ಭೃತ್ಯಶಿವಾದ್ಯರು ಛಿನ್ನರು ಎಂಬುದೆ 4ಮೂಲದಲಿದ್ದ ಮಹತ್ಮಿ ನಿರುತ ಶ್ರೀ |ಲೋಲನ ಅವತಾರದೋಳುಂಟೂ ||ಕಾಳೀಶಗೆ ಕೊಂಡರೆ ಬರುತಿಪ್ಪುದು |ನೀಲಕಂಠ ಪ್ರಮುಖರಿಗಿಲ್ಲೆಂಬುದೆ 5ಚೇತನಚೇತನವಾದ ಜಗತ್ಯವು |ವಾತನಧೀನದೊಳಿರುತಿಹದೂ ||ಆತನು ರಮೆಯಧೀನವಳುಹರಿ|ದೂತಳೆಂದು ನಿಶ್ಚಯ ತಿಳಕೊಂಬುದೆ 6ಎಲ್ಲ ದಿವಿಜರವಲಕ್ಷಣ ಯುಕ್ತರು |ಬಲ್ಲಿದಹರಿಮಾರುತ ಮಾತ್ರಾ ||ಸಲ್ಲಕ್ಷಣರೆನುತಲಿ ತಿಳಿದು ಗಿರಿಜ |ವಲ್ಲಭಪ್ರಮುಖರಿಗೊಂದಿಸುತಿಪ್ಪುದೆ 7ಅಂಬುಜಭವ ಮೊದಲಾದವರಿಗೆ ಪೀ- |ತಾಂಬರತನ ಪೆಸರಿತ್ಯಹನೂ ||ಕಂಬಸದನ ತೊಲಿ ಜಂತಿಯು ಮಾಳಿಗಿ |ಎಂಬ ಶಬ್ದವಾಚ್ಯನುಹರಿಎಂಬುದೆ 8ಅರಸುಗಳಾದವರನುಗರ ಕೈಯಲಿ |ನರರ ಶೀಕ್ಷಿ ಮಾಡಿಸುವಂತೇ ||ಹರಿವಿಧಿಶಿವರೊಳು ತಾನಿಂತಾವಾಗ |ಮರಿಯಾದಿಗಳು ನಡಿಸುತಿಹ್ಯನೆಂಬುದೆ 9ಸೃಜಿಸುವ ಜನೊಳಿದ್ದು ಜಗವ ಪೊರವನು |ಭುಜಗಭೂಷಣನೊಳಿದ್ದು ಲಯಾ ||ದ್ವಿಜರೂಪಿಯೆ ಮಾಳ್ಪನು ಎಂತಿಳಿಯದ |ಕುಜನರು ನರಕವ ಐದುವರೆಂಬುದೆ 10ವಂದೊಂಧರಿ ನೇಮದಿ ಬಲ್ಲರು ಮರ |ಳೊಂದನರಿಯರಜಾದಿಗಳೂ ||ಮಂದರಧರಬಹು ಬಲ್ಲನು ಜೀವರ |ಬಂಧಕ ಶಕುತಿಯೊಳಿರಿಸಿಹನೆಂಬುದೆ 11ಜ್ಞಾನಾನಂದಾದಿ ಗುಣಭರಿತಹರಿ|ಹೀನತನವನೆಂದಿಗ್ಯು ಅರಿಯಾ ||ಕಾಣಿಸಿಕೊಳ್ಳನು ಎಂದಿಗು ಅಧಮರಿ- |ಗೇ ನಳಿನಾಕ್ಷನು ಎಂದುಚ್ಚರಿಪುದೆ 12ಝಷಮೊದಲಾದವತಾರವು ಮಿಥುನೀ |ದೆಶೆಯಿಂದಲಿ ಆಗಿಲ್ಲನಳಾ ||ಮಸಿಯಲು ಕಾಷ್ಠದಿ ತಾ ತೋರ್ವಂದದಿ |ವಸುದೇವಜನವ್ಯಕ್ತನು ಯಂದರಿವದೆ 13ಆಪಗ ವನಧಿಯನಳನಿಳಶಶಿರವಿ|ಈ ಪೊಡವೀವನನಿರಂತರದೀ ||ಶ್ರೀಪತಿಕಟ್ಟಲಿಯೊಳಗಿಹದೆಂದು ಪ- |ದೆ ಪದೆ ನೆನದು ಸುಖಬಡುತಲಿರುವುದೆ 14ನಿಶಿಯಲಿ ಕಂಡಿಹ ಸ್ವಪ್ನವು ನಿಶ್ಚಯ |ಅಸಮ ಸೃಜಿಸಿದ ಜಗತ್ಯವನೂ ||ಹುಸಿಎಂಬವ ಕುಲಭ್ರಷ್ಟನು ಎಂದಿಗು |ಹಸಗತಿ ಅವನಿಗೆ ಇಲ್ಲಿಲ್ಲೆಂಬುದೆ 15ಪ್ರಾಣಿಗಳೊಳಗಿದ್ದೆಲ್ಲ ಕೆಲಸವನು |ತಾನೆ ಮಾಡಿ ಮಾಡಿಸಿ ಫಲವಾ ||ಏನು ನೋಡೆ ನಿರ್ಮಲನಾಗಿಹಹರಿ|ಭಾನುಸಖ ಜಲದೊಳಿರುವಂತೆಂಬುದೆ16ತಾ ಬಂಧಿಸುತಿಹ ಸರ್ವ ಜಗತ್ಯವ |ನೂ ಬದ್ಧನು ಅಲ್ಲವು ಊರ್ಣಾ ||ನಾಭಿಯ ಜಾಲಿಯ ಹೊರಗಿರುವಂದದಿ |ಶ್ರೀ ಭಗವಂತನು ಇರುತಿಹನೆಂಬುದೆ17ಭಕ್ತಿಗೆ ಭೇದವು ಜ್ಞಾನಕೆ ಭೇದವು |ಮುಕ್ತಿಗೆ ಭೇದವು ಯಂತಿಳಿದೂ ||ಸುತ್ಪುರುಷರ ಸ್ನೇಹವ ಸಂಪಾದಿಸಿ |ಮತ್ತೊಂದೊಲ್ಲೆನು ಯಂದಿರುತಿಪ್ಪುದೆ 18ಸಾಧನತ್ರಯ ಫಲಗಳನು ವಿಚಾರಿಸಿ |ಮಾಧವನಗುಣಮಹತ್ಮಿಯನೂ ||ಸಾದರದಿಂ ಜ್ಞಾನಿಗಳ ಮುಖದಲಿ ದಿ- |ನೇ ದಿನೇಕೇಳಿವಿಜ್ಞಾನಘಳಿಸುವದೆ 19ಕಾಲಿಲ್ಲದೆ ನಡಿಯಲು ಬಲ್ಲನುಹರಿ|ಕೇಳುವ ಕಿಂವಿಯಿಲ್ಲದೆ ತನ್ನಾ ||ಲೀಲಿಯು ಹೀಂಗದೆ ಯಂದು ತಿಳಿಪುದಕೆ |ಈ ಲೋಕದಿಅಹಿಮಾಡಿಹನೆಂಬುದೆ 20ಚೇತನ ಕೃತ್ಯವ ಮಾಡುತಲಿಪ್ಪವ |ಚೇತನಗಳು ಚಿಂತಾಮಣಿ ದೇ- ||ವಾತರು ಸಂಜೀವನ ಪರ್ವತ ಶ್ರೀ-ನಾಥನ ಆಜÕವು ಯಿದು ಎಂದರಿವುದೆ 21ಸತ್ವಾದಿ ಗುಣರಹಿತ ಪರಮಾತ್ಮನು |ಚಿತ್ತು ಜ್ಞಾನಬಲ ಸುಖ ಪೂರ್ಣಾ ||ಮೃತ್ಯುಂಜಯಸಖಗುಣಶೂನ್ಯಂಬ ಪ್ರ- |ವರ್ತಕ ಹೀಗೆಂದೂ ತಿಳಿದೀಹದೆ 22ಯೇಸು ಯೇಸು ಕಲ್ಪಗಳಾದರು ಶ್ರೀ- |ವಾಸುಕಿಶಯನಗೆ ಎಂದೆಂದೂ ||ನಾಶವಿಲ್ಲ ವಿಶೋಕರು ಧರಿಯೊಳು |ಶ್ರೀಶನ ವ್ಯತಿರಿಕ್ತಾರಿಲ್ಲೆಂಬುದೆ 23ಬ್ರಹ್ಮಾದಿಗಳಿಗೆ ಜನಕನು ಶ್ರೀಪರ|ಬ್ರಹ್ಮಗೆ ಒಬ್ಬರು ಸರಿಯಿಲ್ಲಾ ||ಒಮ್ಮಿಗು ಅಧಿಕರು ಇಪ್ಪರೆ ಶೃತಿಯಲಿ |ಸಮ್ಮತವಾಗದೆ ಈ ನುಡಿಯಂಬುದೆ 24ಶತಸುಖಿ ವಿಧಿ, ಕೋಟಿ ಸುಖಿ ರಮಾ, ಪರಿ- |ಮಿತಯಿಲ್ಲದ ಸುಖಿ ಕೇಶವನೂ ||ಕ್ಷಿತಿಯೊಳು ಪರಮೇಶ್ವರನೈಶ್ವರ್ಯಕೆ |ಇತರರು ಆರುಂಟು ಸಮಾನೆಂಬುದೇ 25ತಾರಿಯು ಗಗನದೊಳೀಸವೆ ಯಂಬುದು |ಧಾರುಣಿಯೊಳಗೆಣಿಸಲಿ ಬಹುದೂ ||ನಾರಾಯಣನ ಮಹತ್ಮಿ ಗಣಣಿಯನು |ಆರಾರಿಲ್ಲವು ಬಲ್ಲವರೆಂಬುದೆ 26ವಿಶ್ವಾಸದಿ ದೂರ್ವಿಯ ದಳವಿತ್ತರೆ |ವಿಶ್ವಕುಟುಂಬಿಯು ಕೈಕೊಂಬಾ ||ಅಶ್ವಾದಿ ಮುಖದಿಂ ಪೂಜಿಸಲು ಅ |ವಿಶ್ವಾಸದವರು ಕೊಳ್ಳನು ಎಂಬುದೆ27ಗೋವಿಂದಗೆ ನಿಜ ನಾಮೆನಿಸುತಿಹವು |ಐವತ್ತೊಂದೂ ವರ್ಣಗಳೂ ||ಈ ವಿವರವು ತಿಳಿದೂ ನಿಂದಾಸ್ತುತಿಗಳು |ದೇವನ ಗುಣಕಥನಗಳೆಂದರಿವದೆ 28ದುರ್ಜನರಿಗೆ ಎಂದಿಗೂ ದಯಮಾಡನು |ನಿರ್ಜರೇಶ ಸಂತರಿಗೊಲಿವಾ ||ದುರ್ಜಯವಾದ ಮನಸು ನಿಶ್ಚೈಸುತ |ಅಬ್ಜದಳಾಕ್ಷನ ಒಲಿಸಿರೊ ಎಂಬುದೆ 29ಯಮ ನಿಯಮಾದಿಗಳಲಿ ದಾರಢ್ಯದಿ |ಕಮಲಾ ಸ್ವಸ್ತಿಕದಾಸನದೀ ||ಸಮಚಿತ್ತದಿ ರೇಚಕ ಪ್ರಮುಖದಲಿಂ |ಸಮಿರನ ಬಂಧಿಸಿ ಜಪವನು ಮಾಳ್ಪುದೆ 30ಸ್ವಾಗರ್ಭಕ ಆಗರ್ಭಕ ಎಂಬುವ |ಯೋಗದ ಲಕ್ಷಣ ತಿಳಕೊಂಡೂ ||ಮೂಗಿನ ತುದಿಯನೆ ಈಕ್ಷಿಸುತಲಿ ಶ್ರೀ |ಭಾಗೀರಥಿ ಪಿತನ ಸ್ಮರಿಸುತಿಪ್ಪುದೆ31ಅಂಗುಷ್ಠಾರಂಭಿಸಿ ಮಸ್ತಕತನ |ಕಂಗಜ ಜನಕನ ರೂಪವನೂ ||ಹಿಂಗದೆ ಧೇನಿಸಿ ಮೈರಧರುಷದಿ |ಕಂಗಳಿಂದುದಕ ಸೂಸುತಲಿಪ್ಪುದೆ 32ಈ ಕರ್ಮವ ಮಾಡಿದೆ ಯನಗೀಪರಿ|ಸಾಕಲ್ಲ್ಯೆವು ಆಯಿತು ಎಂದೂ ||ಲೋಕಕೆ ತಿಳಿಸದೆ ತನ್ನಯ ಭಾವವ |ಜೋಕಿಲಿ ಬಚ್ಚಿಟ್ಟೂಕೊಂಡಿರುವದೆ 33ಧ್ಯಾನಕೆ ಕುಳಿತರೆ ಮನ ಹರಿದೋಡಲು |ಜಾನಕಿರಮಣನ ಮೂರುತಿಯಾ ||ತಾನೀಕ್ಷಿಸುತಲಿ ಸರ್ವದ ತತ್ವದ |ರೇಣುದೊಳಗೆ ಮುಣಿ ಮುಣಿಗಿ ಯೇಳುವದೆ 34ಅಸುರರನಳಿಯಲು ಶಕ್ತನು ಶ್ರೀಹರಿ |ದಶರೂಪವ ತಾಳಿದನ್ಯಾಕೇ ||ವಸುಧಿಯೊಳಗೆ ಪಾಪಿಷ್ಠ ಜನರ ಮೋ- |ಹಿಸುವದಕೀಪರಿಲೀಲಗಳೆಂಬುದೆ 35ಅನ್ಯತ್ರದಿ ಇಂದ್ರಿಯಗಳ ಚಲಿಸದೆ |ತನ್ನೊಶದೊಳಗಿರಿಸನುದಿನದೀ ||ಪನ್ನಗಶಯನನ ಪೂಜಿಯ ಮಾಡುತ |ಧನ್ಯನು ಈ ನರನೆನಿಸುತಲಿಪ್ಪುದೆ 36ಕೋಪವ ಬಿಟ್ಟು ನಿರಂತರ ಜ್ಞಾನಿಗ- |ಳಾ ಪದ ಭಜಿಸುತ ಹರಿದಿನದೀ ||ಲೋಪವ ಮಾಡದೆ ನಿರ್ಜಲ ಜಾಗರ- |ವಾಪರಮಮುದದಿ ನಡಸುತಲಿಪ್ಪುದೆ 33ಋಣಕೆ ಕಾಳಕೂಟವ ಕುಡಿವಂತೆ ಮ- |ರಣದಂದದಿ ಸನ್ಮಾನಕ್ಕೇ ||ಕುಣುಪದಂತೆ ಪರಸ್ತ್ರೀ ನೋಡಲ್ ಭಯ |ವನು ಬಡುವನು ಬ್ರಾಹ್ಮಣನೆಂದರಿವದೆ 38ಶತಮಖನಿಗೆ ಈಶಬಲ ಅವಗೆ ಬಲ ಮ- |ರುತವಗೆ ಬಲಹರಿಅವಗೆಂದೂ ||ಇತರರ ಬಲ ಬೇಕಿಲ್ಲ ಸ್ವತಂತ್ರ |ಚ್ಯುತಸರ್ವಜÕ ಸುಗುಣ ಪೂರ್ಣೆಂಬುದೆ 39ಸಂಸಾರವ ಹೇಯಿಸಿಕೊಂಡಾವಗ |ಕಂಸಾಂತಕನೂಳಿಗವನ್ನೂ ||ಸಂಶಯವಿಲ್ಲದೆ ಮಾಡುತೊಂದಧಿಕ |ವಿಂಶತಿ ಕುಲ ಉದ್ಧಾರ ಮಾಡುವದೆ 40ಪ್ರಥಮ ವಯಸದಲಿ ವಿದ್ಯಾಭ್ಯಾಸವು |ದ್ವಿತಿಯದಲ್ಲಿ ಗೃಹಕರ್ಮವನೂ ||ತೃತಿಯದಿ ಸತ್ತೀಥ್ರ್ಯಾತ್ರಿಗಳನುಮಾ|ಡುತಲಲ್ಲೆಲ್ಲಿಹ ಮಹಿಮಿ ಕೇಳುವದು 41ಘೋರತರ ಕುಸಂಸಾರವೆಂಬ ಈ |ವಾರಿಧಿತ್ವರದಾಟುವದಕ್ಕೇ ||ಮಾರಮಣನ ನಾಮೋಚ್ಚಾರವೆ ನವ |ತಾರಕವೆಂದುಪದೇಶ ಮಾಡುವದೆ 42ಜಲದೊಳಗುದ್ಭವಿಸಿದ ಮುತ್ತುದಕ ಮ- |ರಳೆ ಹ್ಯಾಂಗಾಗದೊ ಅದರಂತೇ ||ಕಲಿಕ್ಯವತಾರನ ಶರಣರು ಎಂಬರು |ಇಳಿಯೊಳು ನರರೆಂದೆನಿಸಲು ಯಂಬುದೆ 43ದ್ವಾದಶ ನಾಮವ ಪಂಚಮುದ್ರಿಗಳು |ಆದರದಲಿ ಧರಿಸುತ ಪಂಚಾ ||ಭೇದವ ತಿಳಿದು ನಿರಂತರದಲಿ ದು- |ರ್ವಾದಿಗಳ ಮತವ ಹಳಿವುತಲಿಪ್ಪುದೆ 44ಮಧ್ವಮತದ ಸರಿ ಮತಗಳು ಸಪ್ತ ಸ- |ಮುದ್ರತನಕ ಹುಡುಕಿದರಿಲ್ಲಾ ||ಬುದ್ಧಿವಂತರೆಲ್ಲೀತನ ಸೇವಿಸಿ |ಸದ್ವೈಷ್ಣವರೆಂದೆನಿಸಿರೊ ಎಂಬುದೆ 45ಮಾತಾಪಿತೃರ ಆರಾಧನಿ ಬಲು |ಪ್ರೀತಿಲಿ ಮಾಡುತ ಭಾಸ್ಕರಗೇ ||ಪ್ರಾತರಾದಿ ಸಂಧ್ಯಾಘ್ರ್ಯವ ಕೊಡುತಲಿ |ಆ ತರುವಾಯ ಜಪಂಗಳ ಮಾಳ್ಪುದೆ 46ಗುರುಹಿರಿಯರ ಚರಣವ ವಂದಿಸುತಲಿ |ಪರರಿಗೆ ಉಪದ್ರವನು ಕೊಡದೇ ||ಮರುತಾಂತರ್ಗತನೋಲ್ಗವನಲ್ಲದೆ |ನರಸ್ತೋತ್ರವ ಸ್ವಪ್ನದಿ ಮಾಡದಿಹದೆ 47ನಡಿಯಲು ದಾರಿಯ ಮನಿಯೊಳಗಿದ್ದರು |ನುಡಿ ನುಡಿಗನಿರುದ್ಧನ ನೆನದೂ ||ಬಡವರೆ ಗೋಪಾಲನ ಹೊಂದಿದವರು |ಅಡವಿಯೊಳಿದ್ದರು ಧೊರಿಗಳೆ ಎಂಬುದೆ 48ಪರಮಾಣುಗಳೊಳು ತಾನಿಹ್ಯ ತನ್ನೊಳ- |ಗಿರಸಿಹನಗಣಿತ ಬೊಮ್ಮಾಂಡಾ ||ಶಿರಿಗೆಂದೆಂದಿಗಸದಳವು ತಿಳಿಯಲು |ಕರಿವರದಿಂಥ ಮಹತ್ಮನು ಎಂಬುದೆ 49ಹೊತ್ತರಾದಿನಿಶಿಪ್ರಹರಾಗುವನಕ |ಮೃತ್ತಿಕಿ ಶೌಚಾದಿ ಸುಕರ್ಮಾ ||ತತ್ತಲವಾಗದೆ ಶ್ರೀ ಮುದತೀರ್ಥರ |ಉಕ್ತ್ಯನುಸಾರಾಚರಿಸುತಲಿಪ್ಪುದೆ 50ಹಾನಿ ಲಾಭ ಜಯ ಅಪಜಯ ಮಾನಪ- |ಮಾನಸುಖಾಸುಖ ಸಮ ಮಾಡೀ ||ಈ ನರರಿಗೆ ತನ್ನಿಂಗಿತ ತೋರದೆ |ಪ್ರಾಣೇಶ ವಿಠಲನ ಕರುಣವ ಪಡೆವದೆ 51
--------------
ಪ್ರಾಣೇಶದಾಸರು
ಸಂತತ ನಿಮ್ಮ ಸ್ಮರಣೆ ಉಳ್ಳವರಿಗೆಅಂತರ್ಬಾಹ್ಯಾರ್ಥವು ತೋರುವುದೊಂದರಿದೆ ಪ.ಅಂತ್ಯಜಾತಿಯಳಂಗಸಂಗದಿ ಮತಿಗೆಟ್ಟುಅಂತ್ಯವಸಾನದೊಳೊಯ್ಯ ಬಂದಅಂತಕನವರ್ಗಂಜಿಅಣುಗನಾರಾಯಣನೆಂತೆಂದಜಾಮಿಳನ ಕಾಯ್ದೆ ಕರುಣಾಬ್ಧಿ 1ಕಾಂತಾರತಿರುಗಿ ಕ್ರೀಡೆಗೆ ಜಲದೊಳು ಪೊಕ್ಕದಂತಿಅಂಘ್ರಿಯನಕ್ರನುಂಗೆಳೆಯೆಚಿಂತಿಸಿ ತುದಿಯಲ್ಲೆ ಹರಿಯೆಂದು ಕೂಗಲನಂತಾಸನವ ಬಿಟ್ಟು ಬಂದೆತ್ತಿ ಹೊರೆದೆ 2ಕಂತುವೈರಿಯ ಭಕ್ತ ಸೊಕ್ಕಿ ನೃಪರನೌಸೆಕಾಂತ ನಿಮ್ಮಡಿಗೆ ಬಿನ್ನಹ ಕಳುಹೆಕುಂತಿಯ ತನುಜನಿಂದವನ ಕೊಲ್ಲಿಸಿ ಭೂಕಾಂತರಿಗೊಲಿದ್ಯೊ ಪ್ರಸನ್ನವೆಂಕಟಕೃಷ್ಣ 3
--------------
ಪ್ರಸನ್ನವೆಂಕಟದಾಸರು
ಸತ್ಯ ಜಗತಿದು ಪಂಚಭೇದವು,ನಿತ್ಯ ಶ್ರೀ ಗೋವಿಂದನ |<?xmಟ veಡಿsioಟಿ='1.0' eಟಿಛಿoಜiಟಿg='uಣಜಿ-8'?>ಕೃತ್ಯ ತಿಳಿದು ತಾರತಮ್ಯದಿ ಕೃಷ್ಣನಧಿಕೆಂದು ಸಾರಿರೈ ಪ.ಜೀವ ಈಶಗೆ ಭೇದ ಸರ್ವತ್ರ ಜೀವ ಜೀವಕೆ ಭೇದವು |ಜೀವ ಜಡರೊಳು ಭೇದ ಜಡರೊಳು ಭೇದಜಡ ಪರಮಾತ್ಮಗೆ 1ಮಾನುಷೋತ್ತಮರಧಿಕ ಕ್ಷಿತಿಪರು ಮನುಜ ದೇವ ಗಂಧರ್ವರು |ಜಾನಪಿತರಜಾನ ಕರ್ಮಜರ್ದಾನವಾರಿ ತತ್ತ್ವೇಶರು 2ಗಣಪ ಮಿತ್ರರು ಸಪ್ತಋಷಿಗಳುವಹ್ನಿ - ನಾರದ ವರುಣನು |ಇನಜಗೆ ಸಮ ಚಂದ್ರ - ಸೂರ್ಯರು ಮನುಸುತೆಯು ಹೆಚ್ಚು ಪ್ರವಹನು 3ದಕ್ಷಸಮ ಅನಿರುದ್ಧಗುರು ಶಚಿರತಿ ಸ್ವಾಯಂಭುವರಾರ್ವರುಕಕ್ಷಪ್ರಾಣನಿಗಿಂತ ಕಾಮನು ಕಿಂಚಿದಧಿಕನು ಇಂದ್ರನು 4ದೇವ ಇಂದ್ರನಿಗಧಿಕ ಮಹರುದ್ರ ದೇವರಿಗೆ ಸಮ ಗರುಡನು |ಕೇವಲವು ಈಶೇಷ- ರುದ್ರರು ದೇವಿ ಹೆಚ್ಚು ಸರಸ್ವತೀ5ವಾಯುವಿಗೆ ಸಮರಿಲ್ಲ ಜಗದೊಳು ವಾಯುದೇವರೆ ಬ್ರಹ್ಮರು |ವಾಯುಮುಕ್ತಗೆ ಕೋಟಿಗುಣದಿಂದಧಿಕ ಶಕ್ತಳು ಶ್ರೀ ರಮಾ 6ಅನಂತ ಗುಣದಿಂ ಲಕುಮಿಗಧಿಕನು ಶ್ರೀ ಪುರಂದರವಿಠಲನು |ಘನರು ಸಮರೂ ಇಲ್ಲ ಜಗದೊಳು ಹನುಮಹೃತ್ಪದ್ಮವಾಸಗೆ 7
--------------
ಪುರಂದರದಾಸರು
ಸತ್ಯಜಗತಿದು ಪಂಚಭೇದವುನಿತ್ಯಶ್ರೀಗೋವಿಂದನಕೃತ್ಯ ತಿಳಿದು ತಾರತಮ್ಯದಿ ಕೃಷ್ಣನಧಿಕೆಂದು ಸಾರಿರೈ ಪಜೀವ ಈಶಗೆ ಭೇದ ಸರ್ವತ್ರ ಜೀವಜೀವಕೆ ಭೋದವುಜೀವ ಜಡರೊಳು ಭೇದ ಜಡರೊಳು ಭೇದ ಜಡಪರಮಾತ್ಮಗೆ 1ಮಾನುಷೋತ್ತಮರಧಿಕ ಕ್ಷಿತಿಪರು ಮನುಜ ದೇವಗಂಧರ್ವರುಜಾನ ಪಿತರsಜಾನ ಕರ್ಮಜರ್ದಾನವಾರಿ ತತ್ಪೇಶರು 2ಗಣಪಮಿತ್ರರು ಸಪ್ತ ಖಷಿಗಳು ಮಹ್ನಿ ನಾರರವರುಣನುಇನಜಗೆ ಸಮಚಂದ್ರ ಸೂರ್ಯರುಮನುಸುತೆಯು ಹೆಚ್ಚುಪ್ರವಹನು 3ದಕÕಸಮ ಅನಿರುದ್ಧ ಗುರುಶಚಿರತಿಸ್ವಾಯಂಭುವರಾರ್ವರುಕಕ್ಷಪ್ರಾಣನಿಗಿಂತ ಕಾಮನು ಕಿಂಚದಧಿಕನು ಇಂದ್ರನು 4ದೇವ ಇಂದ್ರನಿಗಧಿಕ ಮಹರುದ್ರ ದೇವರಿಗೆ ಸಮ ಗರುಡನುಕೇವಲವು ಈಶೇಷರುದ್ರರು ದೇವಿ ಹೆಚ್ಚು ಸರಸ್ವತೀ5ವಾಯುವಿಗೆ ಸಮರಿಲ್ಲ ಜಗದೊಳು ವಾಯುದೇವರೆ ಬ್ರಹ್ಮರುವಾಯು ಮುಕ್ತಗೆ ಕೋಟಿಗುಣದಿಂದಧಿಕ ಶಕ್ತಳು ಶ್ರೀರಮಾ 6ಅನಂತ ಗುಣದಿಂ ಲಕುಮಿಗಧಿಕನು ಶ್ರೀಪುರಂದರವಿಠಲನುಘನರು ಸಮರೂ ಇಲ್ಲ ಜಗದೊಳು ಹನುಮಹೃತ್ವದ್ಮವಾಸಗೆ 7
--------------
ಪುರಂದರದಾಸರು
ಸತ್ಯಭಾಮಾವಿಲಾಸಶ್ಲೋಕಶ್ರೀ ಬ್ರಹ್ಮೇಶ ಸುರೇಂದ್ರ ಪೋಷಕಹರಿದ್ವಾರಾವತೀಲ್ಬಾಳ್ದನುಶ್ರೀ ಭೈಷ್ಮೀವರ ಸತ್ಯಭಾಮೆಯ ಬಹು ಸಾಸ್ರಾಂಗನೇರಾಳ್ದನುಈ ಭೂಭಾರಹರಾವತಾರ ಯದುಪಂ ನರ್ಲೀಲೆಯಂ ತಾಳ್ದನುಸೌಭಾಗ್ಯಾಂಬುಧಿ ಕೃಷ್ಣನಯ್ಯ ಜನಕಾನಂದಾಬ್ಧಿಲಿಟ್ಟಾಳ್ದನು 1ಸೌಪರ್ಣಾಂಸದಲಿಟ್ಟು ದೇವ ತರುವ ಸತ್ಯ ಸಹಾ ಒಪ್ಪುವಆಪನ್ನಾನ್ವಯ ಕಾಮಧೇನೆನಿಸುವ ಅಧ್ಯಾತ್ಮ ಶ್ರೀಮಾಧವಈ ಪದ್ಯಂಗಳ ಪೇಳಿಸಿದನು ದಯಾಬ್ಧಿ ಪಾರಿಜಾತಾಖ್ಯವಗೋಪಾಲೇಶನ ಪಾದಪದ್ಮ ನೆನೆವೆ ಆನಂದವಂ ಬೇಡುವೆ 2ಪದಶ್ರೀಕೃಷ್ಣ ದ್ವಾರಕಾನಗರದಿ ಪ್ರೇಮದಾನೀಕದಿ ರಾಜಿಸಲಾಗನಾಕದಲರು ಒಂದು ನಾರದ ತಂದಿರೆಶ್ರೀಕಾಂತನಿತ್ತ ರುಕ್ಮಿಣಿಗೆ 3ಒಂದು ಹೂವಿನ ಪರಿಮಳವುನಗರತುಂಬಿಇಂದುವದನೆಸತ್ಯಭಾಮೆಇಂದುಗೋವಿಂದ ರುಕ್ಮಿಣಿಗೆ ಕುಸುಮವಿತ್ತನೆಂದು ಕೇಳ್ದಳು ಸುಸ್ವಭಾವೆ 4ಶ್ಲೋಕಅರ್ಧಾಂಗಿಯಲಿ ಸ್ನೇಹವೆಗ್ಗಳಕಣಾ ಮುದ್ದಿಸಿ ಹೂವಿತ್ತನುಇದ್ದೇನಿನ್ನು ವೃಥಾ ಭುವಿಯಲಿ ಸಖಿ ನಿರ್ದೇಹವಂ ಸಾರ್ವೆನುಕದ್ದು ಬೆಣ್ಣೆಯ ಮೆದ್ದು ಪುಂಶ್ಚಲಿಯರೊಳಿದ್ದಾತನ ಬುದ್ಧಿಯತಿದ್ದಿ ನೋಡಿದೆ ಸೋತೆ ಎನ್ನ ನಳಿತೋಳ್ಹೊದಿಸಿ ನಾ ಶೌರಿಯ 5ಸಾಕಿನ್ನಾತನ ಚಿತ್ತಪಲ್ಲಟಸಟೆಆ ಕಾಮಿನಿಪ್ರಿಯನನೂಕದಿನ್ನಿರೆ ಎನ್ನ ಮಂಚಕೆ ಬರಲ್ಪೋಕ ಸ್ಮರನಯ್ಯನಯಾಕಿನ್ನಾಭರಣಾಂಬರೋತ್ತರಿ ಸಖೀ ಏಕಾಗ್ರನೇಕಾಂಗನನೀಕಂಡ್ಹೇಳವಮಾನ ತಾಳಳು ಸಖಿ ಜೋಕಿನ್ನು ನಿನ್ಬಹುಮಾನ6ಪದಕ್ರೋಧ ಕಳವಳಿಕೆ ಮುನಿಸಿನಿಂದಲಿ ಸತ್ಯವಾದಿ ಸತ್ರಾಜಿತ ಕನ್ಯೆಮೇದಿನಿಮೇಲೆ ಮಲಗಿದಳು ಧೊಪ್ಪನೆ ಮಂಚಕೈದದೆ ನಿತ್ಯಸುಖಿ ಧನ್ಯೆ 7ಬಿಸಿ ಬಿಸಿ ನಿಟ್ಟುಸಿರ್ಗರೆದು ಕೋಮಲ ಮುಖಶಶಿಯ ಕಸ್ತೂರಿ ಅಂಗಯ್ಯಲೊರೆಸಿಬಿಸಜಾಕ್ಷಿ ಕಂಬನಿದುಂಬೆ ಒರತೆಯಿಟ್ಟುಎಸೆವಕಜ್ಜಲಜಲ ಸೂಸಿ 8ಶ್ಲೋಕವಕ್ಷೋಜಾತದ ಹೊನ್ನ ಕುಪ್ಪಸವನು ಅಕ್ಷೋದದಿಂ ತೋಯಿಸಲ್ಸಾಕ್ಷಾನ್ಮಂಗಳ ಮುತ್ತಿನ್ಹಾರ ಕಡಿದಳ್ ಲಕ್ಷಾಭರಣ್ಬಿಟ್ಟಳುತಾ ಕ್ಷೋಣಿಯನು ಹೊಂದಿ ಬಿದ್ದು ಬೆಮರ್ದಳ್ಅಕ್ಷಯಸೌಗಂಧಿಯಳ್ಪಕ್ಷಿವಾಹನ ಮಾಡಿದ ಉಪಕಾರ ಲಕ್ಷಿಸಿ ಹಾಯೆಂದಳು 9ಹಾ ಹಾ ಕೈತವ ಮೀನ ಜೃಂಭಕಮಠಹಾ ಹೈಮದೃಘ್ಘಾತಕಹಾ ಹಾ ನಿಷ್ಕರುಣಾಂಗ ಶಿಕ್ಷಕ ಹರೆ ಹಾ ಹಾ ಬಲಿರ್ವಂಚಕಹಾ ಮಾತೃ ಮೃಗಾರ್ದ ಜಾರವ್ರತ ಹಾ ಹಾ ಹಾ ಕಲಿರ್ಮಾರಕಹಾ ಹಾ ಮದ್ಗøಹ ದೂರಕ ಪರಸಖ ಆಶಾಬ್ಧಿ ಸಂಶೋಷಕ10ಪದತಾಳಿನ್ನು ತಾಳೆಂದು ತವಕದಿ ಸವತಿಯಮೇಲೆ ಕೋಪಿಸಿ ಸತ್ಯಭಾಮೆಜಾಲಕ ಮಾಲೆಯ ಹರಿದು ಚಿಮ್ಮಿದಳತ್ತಮೇಲೆಣ್ಣೆಗಂಟ ಹರಹಿದಳು 11ಮೂರ್ಛೆಯೊಳ್ಮೈಮರೆದಂತೆ ತೇಲ್ಗಣ್ಣ ಹಾಕಿದುಶ್ಚಿಹ್ನ ಲೀಲೆಯ ತೋರೆನಿಶ್ಚಲ ಭಾವೆಯನರಿತೆತ್ತಿ ಒಯ್ದರುಒಚ್ಚೇರೆಗಂಗಳೆಯರು ಬೆದರಿ12ಶ್ಲೋಕಧೈರ್ಯಂಗೆಟ್ಟ ಮೃಗೇಂದ್ರ ನಾರಿಯಿವಳೊ ನ್ಯೆರಾಶ್ಯ ಬಳ್ಳ್ಯಿಹಳೊವೈಮಾನಿಕರ ದೇವತ್ಯಾಕೆ ಮುನಿದಳಯ್ಯಯ್ಯೊ ಸೌಜನ್ಯಳೊಮಯೂರಭ್ರಮುಡೇಳ್ ಮಹಾಪತಿವ್ರತೇಳ್ಮತ್ತೇಭ ಗಾಮಿನಿಯಳ್ಕೈವಲ್ಯಜÕರು ಬಲ್ಲರೀಕೆಯ ಬಗೆ ಕಾಯಯ್ಯ ಕೃಷ್ಣಯ್ಯನೆ 13ಎತ್ತೊಯ್ದು ಮೃದುತಲ್ಪಮಂಚಕವಳ ಮತ್ತಾಲವಟ್ಬೀಸಲುಫೂತ್ಕಾರಂ ಕಿವಿಯೊಳ್ಪೂರೈಸಿ ನುಡಿಸಲ್ಸತ್ಯಂಗನೆ ಸುಮ್ಮನೆಪ್ರತ್ಯುತ್ತರಗೊಡದಿರಲು ಬೆದರಿವರ್ಚಿತ್ತಜನೈಗ್ಹೇಳಿದರುಮುಕ್ತಕೇಶಿಯ ವಾರ್ತೆ ಕೇಳಿದು ಬಹು ಚಿತ್ರವಿಚಿತ್ರೆಂದನು 14ಪದದೂತೇರ ನುಡಿಗ್ಯದುನಾಥನು ಮನ್ನಿಸಿಆತುರದಲಿ ನಡೆತಂದುಪ್ರೀತಿಗಗ್ಗಳೆ ಸತ್ರಾಜಿತ ಸಂಜಾತಳೆನೀತವೆ ನೀ ಮುನಿದಿಹುದು 15ಎಂದು ಮಂಚದಲಿ ಕುಳಿತು ಪ್ರಾಣನಾಥೆ ಬಾಇಂದುವದನೆಮಾತನಾಡೆಕಂದ ಕಂದರ್ಪನಾಣೆ ಕಪಟವಿಲ್ಲೆನ್ನಲ್ಲಿಕಣ್ಣೆರೆದಿತ್ತಲೊಮ್ಮೆ ನೋಡೆ 16ಶ್ಲೋಕಕಸ್ತೂರಿ ತಿಲಕಿಲ್ಲ ನಿನ್ನ ಪಣೆಯೊಳ್ಮುತ್ತಿನ ಬೊಟ್ಟಿಲ್ಲವೆಮತ್ತೇನ್ಭೂಷಣವೇಣಿ ನಿನ್ನ ನೊಸಲೊಳ್ಮುತ್ತಿನಮಣಿಇಲ್ಲವೆರತ್ನಾಂಕಾಭರಣಿಲ್ಲ ನಿನ್ನ ಶ್ರುತಿಯೊಳ್ಮತ್ವಜ್ರದೋಲಿಲ್ಲವೆಹತ್ತೆಗಟ್ಟಿದ ನಿಷ್ಕಕಂಠ ಪದಕಿಲ್ಲ ಒತ್ತಾದ ಹಾರಿಲ್ಲವೆ 17ವ್ಯತ್ಯಸ್ತ ಸ್ತನಪಟ್ಟಿಕೆ ರುಚಿರ ಶ್ರೀ ಗಂಧಾನುಲೇಪಿಲ್ಲವೆಸ್ವಸ್ತಂಬ್ರ ಸ್ಮರಣಿಲ್ಲವೆ ಮಮಸಖಿ ಸ್ವಸ್ಥಾಗುಸುರ್ಭಾವೆ ನಂಬು ಸ್ತ್ರೈಣರ್ಬಗೆ ತೋರಿದೆ ಸ್ವಸುಖದಿ ತಾ ಸ್ತ್ರೈಣನಲ್ನಿಶ್ಚಯಹೇ ಸ್ತ್ರೀರತ್ನಶಿಖಾಮಣಿರಮಣಿ ಕೇಳ್ದುಶ್ಚಿತ್ತ ಮಾಣೆಂದನು 18ಪದಈಪರಿಭಾವೆಯ ಚರಣದೆಡೆ ಕುಳಿತುಶ್ರೀಪತಿ ಪ್ರಾರ್ಥನೆ ಮಾಡೆತಾ ಪತಿಯೊಡನೊಂದು ಮಾತನಾಡಳುಸತಿತಾಪದ್ವಿಗುಣಿಸಿತು ಕೇಳಿ 19ಮಾನಭಂಗವ ಮಾಡಿದ ಮೇಲೆಂತು ಬಹುಮಾನವನೊಲ್ಲದಿಹ ಸತಿಯತಾನೆತ್ತಿ ತೊಡೆ ಮೇಲೆ ಮಲಗಿಸಿಕೊಂಡು ದುಮ್ಮಾನವ ಬಿಡಿಸುವ ಹರಿಯು 20ಶ್ಲೋಕಮಾನವಮನ್ನಿಸಿದಾಕೆಯ ಸ್ಥಿತಿಯನು ಶ್ರೀನಾಥ ಕಂಡೆಂದನುಏನೆಮಾನಿನಿನಿನ್ನ ಕೋಪ ಬಿಡದೆ ನಾ ನೋಡಿದೆ ಕಲ್ಲೆದೆಮನುಷ್ಯರೊಳುದಾವಸ್ತ್ರೀಗೆ ಸಲಿಗೆ ತಾನಿತ್ತವಂಗೀ ಬಗೆತಾನೆ ತೋರಿದೆವಿಶ್ವಶಿಕ್ಷಿಕ ಗಡಾ ಏನಾಶ್ಚರ್ಯ ಗಡಾ 21ಎಚ್ಚೆತ್ತೆನ್ನೊಳು ಮಾತನಾಡೆ ಪ್ರವುಢೆ ಹುಚ್ಚಾಗದಿರೆಂದನುಸಚ್ಚಿನ್ಮೂರ್ತಿಯ ಮಾತಕೇಳಿ ಕುಳಿತಳ್ವಚ್ಚೆರೆಗಣ್ಮುರಿಯಲುಉಚ್ಚಾರಂ ಗದಗದ್ಗಿಸಿ ಸ್ಛುರಿತಾಧರೆಗಚ್ಚಗ ತಾನೆಂದನುಉಚ್ಚಾರದೊಳಗೊಂದು ನಿನ್ನ ಮನದ ಮಚ್ಚಾಟ ಬೇರೆಂದಳು 22ಪದನಾರಿ ಪತಿಯ ಬಿಟ್ಟು ದೂರದಿ ಕುಳಿತಳುವಾರೆ ನೋಟದ ಬೆಡಗಿನಲಿಜಾರಿದ ಸೆರಗೆದೆಗೇರಿಸಿ ಹೊದ್ದು ಮುರಾರಿಗೆ ವಾರೆ ಮುಖದಿರುಹಿ 23ಕಪಟನಾಟಕ ನಿನ್ನ ಮಾಯವಗಾಧವುಕಪಟಗಿತ್ತಿಗೆದಿವ್ಯಕುಸುಮಅಪಮಾನ ಸತ್ಯಳಿಗೆಮಾನಬಂಗಾರಿಗೆಚಪಲತೆ ತಿಳಿಯದು ನಿನ್ನ 24ಶ್ಲೋಕಕೇಳ್ನಾರೀಮಣಿ ನಾರದ ಕುಸುಮದ ಅರಳೊಂದು ಪಾದಾಬ್ಜಕೆನಲ್ವಿಂದರ್ಪಿಸಲಾಗ ಯೋಚಿಸಿದೆ ನಾ ಚೆಲ್ವ ಅಮರ್ಭೂರುಹಬಲ್ವಿಂದೀ ನಗರಕ್ಕೆ ನಿನ್ನ ಮನೆಯಂಗಳದೊಳು ಸ್ಥಾಪಿಸುವಉಲ್ಲಾಸಂ ಪಿಡಿದಿರ್ದೆ ನಾಕುಸುಮಜೇಷ್ಠಳ್ಗೀಯೆ ನೀ ಮುನಿವರೆ25ಹೂವೊಂದಾಕೆಗೆ ಕೊಟ್ಟೆ ಸಾಕು ತರುವ ನಿವಾರಿಸಿ ವಜ್ರಿಯಗರ್ವಿಂ ನಿನ್ನಿದಿರಲ್ಲಿ ಕೊಂಡು ಬಹೆ ನಾ ಭವ್ಯಾಂಗಿ ಕೇಳ್ಭಾಮಿನಿದಿವ್ಯಾಮೋದಮಯ ದ್ರುವiಂ ಸುರರಿಗಂ ಸೇವ್ಯಾದುದ ನಿನ್ನಯಭವ್ಯಂಗಳದೊಳಗಿಟ್ಟು ಮೆಚ್ಚಿಸುವೆ ನಾ ನವ್ಯಾದ್ಭುತಂನೋಡುನೀ26ಬಿನ್ನಣೆ ಮಾತಲ್ಲ ನಿನ್ನಾಣೆಭಾವಕಿಇನ್ನು ದುಮ್ಮಾನವೇಕೆನ್ನುತಾಚೆನ್ನಿಗರರಸನು ರಮಣಿಯ ನಳಿತೋಳಚೆನ್ನಾಗಿ ಸೆಳೆದಪ್ಪಿಕೊಳುತ 27ಎನ್ನ ಶಪಥÀವಿದು ನಿನ್ನೆತ್ತಿ ಖಗವೇರಿಕನ್ನೆ ಶಚಿಯ ಮನೋಹರನಮನೆಗೆ ಹೋಗಿ ವಿಜಯರವದಿ ತಂದುರನ್ನದತರುನಿನಗೀವೆ ನಾ 28ಶ್ಲೋಕಹೀಗೆಂದಾಕೆಯಮೆಚ್ಚಿಸಿದನುಆ ವಿಯೋಗಿಯಸಂಯೋಗಿಯಭೋಗಭಾಗಾಶೆಯ ನಿಯತಿ ಸುಖಿಯಾ ತ್ರೈಗೇಹ ಸಂಸ್ಥಾನಿಯಾಯೋಗೇಶೇಶ್ವರ ತನ್ನ ಪಾಶ್ರ್ವದಿ ದಿವಿಪ ನಾಗೇಶೈರ್ವಂದಿಯಾಶ್ರೀಗೋವಿಂದ ಮನುಷ್ಯರ ತೆರದಲಿ ಹೀಂಗಾಡಿದ ಲೀಲೆಯ 29ಬಾ ಸತ್ರಾಜಿತ ಗರ್ಭಸಿಂಧು ಸುಮಣಿ ಬಾ ಸೋಮಬಿಂಬಾನನೆಬಾ ಸೌಂದರ್ಯದವಾರಿಧಿಪರಮೆ ಬಾ ಬಾ ಸತ್ಯಭಾಮೆ ರಮೆಬಾ ಸಂಧ್ಯಾರುಣದಂಬಕಿ ಸುಕಬರೆ ಬಾ ಸ್ವಚ್ಛ ಬಿಂಬಾಧರೆಬಾ ಸದ್ರತ್ನದ ಭೂಷಣೆ ಪ್ರಸನ್ನವಾಗೆ ಸರ್ವತೋಷಾಂಗನೆ 30ಪದನಿನಗಾಗಿ ವೇದ ಕದ್ದವನ ಕೊಂದೆನಿನಗಾಗಿ ನನ್ನುದಧಿಯಲ್ಲಿ ನಿನ್ನ ತಂದೆನಿನ್ನ ಕದ್ದವನ ಕೊಂದೆ ನೀ ಬರಲೆತ್ತಿದೆನಿನ್ನ ಭಾಗ್ಯದ ಸಖಿ ಹಿಡಿದೆ 31ನಿನ್ನ ಭಾರವ ತೆಗೆದೆ ನಿನಗಾಗ್ಯಟವಿಯಲ್ಲಿದ್ದೆನಿನ್ನಮುನಿಸುತಿಳಿಯ ಬಂದೆನಿನ್ನನೆ ಮೆಚ್ಚಿ ಅನ್ಯ ಕನ್ಯೇರ ವ್ರತವನಳಿದೆನಿನ್ನ ಪುಣ್ಯದ ಬೆಳಸ ಬೆಳೆದೆ 32ಶ್ಲೋಕಶ್ರೀಶೌರಿಸರಸೋಕ್ತಿಯಿಂದ ಸತಿಯ ಲೇಸಾಗಿ ಸಂತೈಸುತಆಸ್ಯಾಬ್ಜಾಂಕಿತ ಸ್ವೇದವನ್ನು ಸುಮುಖವನೊತ್ತಿ ಆರೈದನುಕೇಶ ನೇವರಿಸುತ್ತ ತಾ ಚತುಷ್ಕಪರ್ದಾ ಸತ್ಯಭಾಮಿನಿಗೆಶ್ರೀಶ ಮಂಡಿಸಿ ವೇಣಿಯಲ್ಲಿ ಇಡುವ ಭೂಷಣಗಳನಿಟ್ಟನು 33ಕಸ್ತೂರಿ ತಿಲಕಿಟ್ಟ ನೇತ್ರಯುಗಕೆ ಮತ್ತಂಜನವಿಟ್ಟನುವೃತ್ತಾದ ಸುಕಪೋಲದೊಳ್ಮಕರಿಕಾ ಪತ್ರಂಗಳನಿಟ್ಟನುಮುಕ್ತಾಹಾರಪ್ರವಾಳನೀಲಮಣಿಗಳ್ವತ್ತಾದ ಸ್ವರ್ಣಮಾಲಿಕಾರತ್ನಾಂಕಾಭರಣಿಟ್ಟನು ಯದುಪತಿ ಸತ್ಯಂಗನಾಪ್ರಿಯನು 34ಪದಮುಡಿಗೆ ಮಲ್ಲಿಗೆಯ ಮುಡಿಸಿದ ಮದನನಯ್ಯಮಡದಿಯೆದೆಗೆ ಮಲಯಜವಕಡು ನರ್ಮೋಕ್ತಿಗಳಲ್ಲಿ ಪೂಸಿದ ಘನಶ್ಯಾಮಬಿಡು ನಿನ್ನ ಖತಿಯೆಂದ ದೇವ 35ಕೋಟಿ ಚಂದ್ರಾರ್ಕ ಲಾವಣ್ಯನರ್ಧಾಂಗಿಗೆಕೋಟಿ ಕೋಟ್ಯಾಭರಣಿತ್ತನೋಟ ಬೇಟದಿ ಮನೋರಥವ ಪೂರೈಸಿದನಾಟಕಸೂತ್ರನಿರ್ಲಿಪ್ತ 36ಶ್ಲೋಕಇತ್ಯಾದಿ ಬಹುಮನ್ನಿಸಿ ಗರುಡನ ಹತ್ತಿದ ಸ್ವಸ್ತ್ರೀ ಸಹನಿತ್ಯಾನಂದಮಯ ಸ್ವರೂಪ ಅಮರಾವತಿಗೆ ಪೋಪನ್ನಕಪೃಥ್ವೀಜಾತನು ಮತ್ತನಾಗಿ ಅಮರರ್ಮೊತ್ತವ ಬಾಧಿಸಲುಇತ್ತೀ ಕಾರ್ಯವ ಬಿಟ್ಟು ಮುಂಚೆ ನಡೆದ ಜೆÉೂೀತಿಷ್ಮತಿಸ್ಥಾನಕೆ 37ಹೋಗಿ ಆ ನರಕನ್ನ ಸೀಳಿ ಭೌಮಿಜಗಿತ್ತನು ಭಾಗ್ಯವಸೌಗಂಧಿಯರ ಷೋಡಶ ಸಹಸ್ರರ ಯೋಗಾರ್ಹರಂ ತಂದನುಶ್ರೀ ಗೋಪೀಜನ ಮೋಹನಾಘಹರಣ ಹೋಗ್ವಾಗ ಸ್ವರ್ಧಾಮಕೆಆಗಿತ್ತಾಕುಂಡಲಅದಿತಿಗೆ ಮ್ಯಾಗಿಂದ್ರನಿಂ ಸಂಪೂಜ್ಯನು 38ಪದಶಚಿಯರಸನು ಪೂಜಿಸಿದ ಮೇಲೆ ರಾಣಿಯಉಚಿತಕೆಮಂದರತರುವಮುಚುಕುಂದವರದನು ತರುತಿರೆ ಅಮರರನಿಚಯಸಹಿತ ಕಾದಿದಿಂದ್ರ 39ಗರುಡನ ಗರಿಯ ಗಾಳಿಯಲೆಲ್ಲರೋಡಿಸಿಧÀರೆಗೆ ತಂದನು ದ್ವಾರಾವತಿಗೆಅರಸಿಯಂಗಳದೊಳು ನಿಲಿಸಿದ ತರುಮೂಲಸರಿ ಲೆತ್ತವಾಡುವ ಎಂದಳಾಗೆ 40ಶ್ಲೋಕಪಾರಿಜಾತದ ಮೂಲ ಚೈತ್ಯದಲ್ಲಿನ ಶ್ರೀರಂಗ ರತ್ನಾಸನಸಾರಿ ಇಬ್ಬರು ಲೆತ್ತವಾಡುವಹರಿನಾರೇರ ಮುಂದೆನ್ನನುಭೂರಿಮಾನಿಯಮಾಡುಸ್ವಾಮಿ ಎನಲು ಕಾರುಣ್ಯ ವಾರಿನಿಧಿಧಾರಿಣಿಯಲ್ಲಿ ಸ್ತ್ರೈಣನೆಂಬರು ಸಖಿ ಈ ರೀತಿ ಮಾಣೆಂದನು 41ನೀ ಲೆತ್ತವನು ವೃಕ್ಷ ಮೂಲದಲಿ ಎನ್ನೊಳಾಡ ಒಲ್ಲೆಂದರೆಮೇಲೀಅಂಬರಭೂಷಣೇಕೆ ವಿಭುವೆ ಮೇಲೀ ಶರೀರೇತಕೆಶ್ರೀಲೋಲ ಶರಣೇಚ್ಛದ ಎನಿಸುವ ನಿನ್ನ ಬಿರುದೇತಕೆಬಾಲೇರ್ಮುಂದಪಹಾಸ್ಯವಾಯಿತೆನುತ ಲೋಲಾಕ್ಷಿ ತಾ ಮುನಿದಳು42ಪದಹಂಸದುಪ್ಪಳದ ಸುಪ್ಪತ್ತಿಗೆ ಮಂಚದಿ ರಾಜಹಂಸಗಮನೆ ಮುನಿದು ಮಲಗೆಮಾಂಶಳು ಕದವನಿಕ್ಕಿದಳು 43ನೀನೆಂದ ಮಾತ ನಡೆಸುವೆ ಮುನಿಯದಿರುಮಾನಿನಿರನ್ನೆ ಕದತೆರೆಯೆಶ್ರೀನಾಥ ಹೀಗೆ ಮನ್ನಿಸಿ ಕದತೆರೆಸಿದ ದಯಾನಿಧಿ ಪ್ರಸನ್ವೆಂಕಟೇಶ 44ಶ್ಲೋಕಲಕ್ಷ್ಮೀ ಭೂರಮಣ ಭವಾಬ್ದಿಮಥನಪಕ್ಷೀಂದ್ರಸದ್ವಾಹನಮೋಕ್ಷಾಧೀಶವಿರಿಂಚಿವಾಯುಫಣಿಭೂ ತ್ರ್ಯಕ್ಷೇಂದ್ರ ದೇವಾಯನವಕ್ಷೋಜಾವರ ಸುಂದರಾಗ್ರಣಿ ವರಲಕ್ಷ್ಮೀ ಮನೋನಾಯಕರಕ್ಷಿಸಿದನು ಸ್ವಸ್ತ್ರೀಯ ನೆರೆದನು ಸಾಕ್ಷಾತ್ ಪ್ರಸನ್ವೆಂಕಟ45ಅನಂತಾಬ್ಬ ಭವಾಂಡ ಹುಟ್ಟಿ [ಸಿ] ಸ[ಲಹು] ವತಾನೇ ಬಯಲ್ಮಾಡುವತಾ ನಿರ್ಲಿಪ್ತ ಸದಾಗಮೈಕ ಸುವಿಜಯಾನಂದ ಪೂರ್ಣಾತ್ಮನುಈ ನಾಟ್ಯವನು ತೋರಿದ ಸುಜನರಿಗಾನಂದ ವೃದ್ಧಿಕರತಾನಾಡಿದನು ಲೆತ್ತವ ಸತಿಗೂಡಜ್ಞಾನಿಪ್ರಸನ್ವೆಂಕಟ 46ಪದಮಂಗಳಾತ್ಮಕ ವಿಶ್ವನಾಟಕವಾಡಿದ ಸತ್ಯಂಗನೆಯೊಳು ಲೆತ್ತದಾಟಅಂಗನೆಷೋಡಶ ಸಹಸ್ರರ ಸೋಲಿಸುವರಂಗ ಪ್ರಸನ್ನವೆಂಕಟೇಶ 47ಶ್ರೀ ಸುರವೃಕ್ಷತಳದಿ ರತ್ನಾಭರಣಮಯನೀ ಸೋತೆ ಸತ್ಯಭಾಮಿನಿಯೆಂದರೆಹರಿನೀ ಸೋತ್ಯೊ ಪ್ರಸನ್ನವೆಂಕಟೇಶ 48ಲೇಶ ಹಾಸದಿ ಜಗತ್ಪ್ಪ್ರಪಂಚವ ತೋರುತ್ತವಾಸುದೇವಪ್ರಕೃತಿ ಗೂಡಿಈ ಶೋಭಿಸುವ ದ್ವಾರಕಾ ನಗರದಲಿದ್ದಪ್ರಸನ್ವೆಂಕಟೇಶನ ನೋಡಿ 49ಅನಂತದೇಶದಿ ಅನಂತ ಕಾಲದಿಅನಂತ ಸದ್ಗುಣಸಾಂದ್ರದೀನ ದಯಾನಿಧಿ ಪ್ರಸನ್ನÉಂಕಟ ಕೃಷ್ಣಮನುಷ್ಯಲೀಲೆಯ ತೋರಿದ 50ಈ ಸತ್ಯಭಾಮಾವಿಲಾಸದ ಪದ್ಯಪದಲೇಸಾಗಿ ನರನಾರಿಯರುತೋಷಭರಿತರಾಗಿ ಪಾಡಲು ಸುಖವೀವಶ್ರೀಶ ಪ್ರಸನ್ನವೆಂಕಟೇಶ 51
--------------
ಪ್ರಸನ್ನವೆಂಕಟದಾಸರು
ಸತ್ಯವೇ ಸ್ನಾನ ಜಪ ನೇಮ - ಹೋಮ - ಅ - |ಸತ್ಯದಲಿ ನಡೆದುಮಾಳ್ಪದುವ್ಯರ್ಥಕರ್ಮಪ.ಅಪ್ಪಳಿಸಿ ಪರರ ದ್ರವ್ಯಗಳನ್ನು ತಂದುಂಡು |ಒಪ್ಪದಲಿ ಉಪವಾಸ ವ್ರತವ ಮಾಡಿ ||ತಪ್ಪದಲೆ ತಾ ಸ್ವರ್ಗ ಸೂರೆಗೊಂಬುವನೆಂಬ |ಸರ್ಪಗಳು ಮಾಡದಪರಾಧವೇನಯ್ಯ ? 1ಬಿಡದೆ ಮದ - ಮತ್ಸರಾಹಂಕಾರದೊಳು ಮುಳುಗಿ |ಒಡನೆ ಬೆರಳುಗಳೆಣಿಸಿ ಮೌನದಿಂದ ||ತಡೆಯದಲೆ ಪರಲೋಕ ಸುಖವನೈದುವೆನೆಂಬ |ಬಡ ಬಕವು ಮಾಡಿದಪರಾಧವೇನಯ್ಯ 2ಪರಸತಿಯು ಪರಧನವು ಪರನಿಂದೆ ಪರಹಿಂಸೆ |ಪರಮ ಪಾತಕದ ಕಾರಣವ ತೊರೆದು ||ಧರೆಗಧಿಕಪುರಂದರ ವಿಠಲನ ನೆರೆಭಜಿಸಿ |ವರವನು ಪಡೆಯೆ ಸಾಲೋಕ್ಯವನ್ನೀವ 3
--------------
ಪುರಂದರದಾಸರು
ಸತ್ಸಂಗವಿಡಿದು ಸರ್ವೋತ್ತಮನೆ ಗತಿಯೆಂದುನೆಚ್ಚಿ ಅರ್ಚಿಸು ಗಡ ಮನುಜ ಪ.ವಿರಹ ಶಬ್ದಗಳ ಮೈಯ್ಯೊಲಿದೊಲಿದುಕೇಳಿಸತಿಯರ ಧ್ವನಿಗೆ ಮಗುಳೆ ಮೋಹಿಸುತಹರಿಣ ಘಂಟಾರವಕೆ ಬಲೆ ಬೀಳುವಂತಾಗದಿರುಹರಿಕಥೆಯಕೇಳಿಬಾಳು1ಅರಿಯದರ್ಭಕನು ಕೆಂಡವ ಮುಟ್ಟಿ ಅಳುವಂತೆಪರಸ್ತ್ರೀಯ ಸರಸಕೊಳಗಾಗಿನರಕದೊಳು ಬೀಳ್ವ ಪಾಮರನೆ ಹರಿಚರಣಾಬ್ಜಸ್ಪರುಶ ದೊರಕುವುದೆಂತೊ ನಿನಗೆ 2ದೀಪ ಕಾಶಕೆ ಪತಂಗವು ಕೆಡೆವ ಪರಿಯು ಸಲ್ಲಾಪವು ಪರಸತಿಯರೊಡನೆಶ್ರೀಪತಿಯ ಮೂರುತಿಯ ಕಂಡೆರಗು ಮೂಢಮತಿಪಾಪ ಬುದ್ಧಿಗಳನ್ನುಜರಿದು3ಶಸ್ತ್ರ್ತಧಾರೆಯ ಮಧುವ ಬಯಸುವಂತನ್ಯೋತ್ತಮ ಸ್ತ್ರೀಯರಧರಸುಧೆಬಯಸಿಚಿತ್ತವ್ಯಸ್ತವ ಮಾಣದೊಮ್ಮೆಗಾದರೆಹರಿಭಕ್ತಿರಸವೀಂಟಿ ಸುಖಿಯಾಗು 4ವನಜವನವಂ ಬಿಟ್ಟು ಅಳಿವೃಂದ ಚಂಪಕದನನೆಗೈದಿ ಪ್ರಾಣ ಬಿಡುವಂತೆವನಿತೆಯರ ವಾಸನೆಯೆ ನಿರಯದೌತಣವೆಂದುವನಜಾಕ್ಷ ನಿರ್ಮಾಲ್ಯ ಸೂಡು 5ಇಂತೆಂಬ ಪಂಚಭೌತಿಕದೇಹದಾಸೆಯೊಳುಸಂತತದಿಲಂಪಟನೀನಾಗಿಅಂತ್ಯದೊಳುಜರೆಕಾಡುವಾಗ ಕಫ ವಾತವೆಮುಂತಾದ ವ್ಯಥೆ ಬೆನ್ನ ಬಿಡವು 6ಭಸ್ಮಕ್ರಿಮಿಕೀಟವಾಗಿ ಪೋಪ ಕಾಯಕೆ ನಂಬಿವಿಸ್ಮರಣೆ ಬೇಡ ಹರಿಪದಕೆಕಶ್ಮಲಾನ್ವಿತವಾದ ಯೋನಿಗಳ ಬರವರಿತುವಿಸ್ಮರಣೆ ಬೇಡ ಹರಿಪದಕೆ 7ಬಲ್ಲಿದರ ಸಿರಿಯ ಸೈರಿಸಲಾರೆನೆಂದೆಂಬಕ್ಷುಲ್ಲಕರ ನುಡಿಯನಾಡದಿರುಎಲ್ಲಿ ಭಾಗವತರ ನಿಕೇತನಾಜೆÕಯ ಕೇಳೆಅಲ್ಲಿ ಮಧುಕರವೃತ್ತಿತಾಳು8ಹರಿದಾಸರ ವಿಲಾಸವೆ ಎನ್ನ ಸಿರಿಯೆಂದುಹರಿದಾಸರಡಿಗೆ ಮಗುಳೆರಗಿಹರಿದಾಡುವ ಮನಕೆ ಸೆರಯಿಕ್ಕಿ ಹರಿಯನೆ ನೆನೆದುಹರುಷ ಪುಳಕಿತನಾಗಿ ಬಾಳು 9ದಶಇಂದ್ರಿಯಂಗಳಿಗೆ ವಶವಾಗದಿರು ಏಕಾದಶಿ ವ್ರತಕೆ ವಿಮುಖವಾಗದಿರುದಶಶಿರಾರಿಯ ನಾಮದಶನವೆಭುಂಜಿಸುದಿಶೆಯರಿತೂ ಕಾಣನಾಗದಿರು 10ಪದ್ಮನಾಭನ ಪಾದಪದ್ಮವೆ ಗತಿಯೆಂದುಪದ್ಮಜನ ಪದಕೆ ಪೋಗುವನಪದ್ಧತಿಯವಿಡಿದುವರಪದ್ಮಪತಿ ವಾಸ ತ್ರೈಸದ್ಮನಿಗೆ ಉದ್ಯೋಗಮಾಡು11ಕಡು ಬಂಧುಬಳಗ ಸತಿಸುತರುಂಟು ವೃತ್ತಿಯೊಳುಕಡಿಮಿಲ್ಲವೆಂಬ ಪಾಶವನುಕಡಿದು ಕಡಲೊಡೆಯನೆ ಸಲಹೆಂದು ಗರ್ಜಿಸಲುಕಡೆಹಾಯಿಸಬಲ್ಲದಿದು ನಿನಗೆ 12ಆವಾಗೆ ಜಗಕೆ ಸರ್ವೋತ್ತಮನೆ ಹರಿಯೆಂದುಜೀವೋತ್ತಮನೆ ವಾಯುವೆಂದುಭಾವಶುದ್ಧಿಗಳಿಂದ ಬಯಲುಡಂಬಕಬಿಟ್ಟುಜೀವಿಸಲು ಸ್ವರೂಪ ಸುಖವಾಹುದು 13ವರಊಧ್ರ್ವಪುಂಡ್ರಹರಿಮುದ್ರೆಯನಲಂಕರಿಸುಶಿರಿ ತುಲಸಿ ಪದ್ಮಸರ ಧರಿಸುಸ್ಮರನ ಶರಕಂಜದರಿಯಾರುವರ್ಗವನೊದೆದುಹರಿದು ಬಹ ದುರಿತಗಳ ಸದೆದು 14ಏಸುಜನ್ಮದಿ ಬಂದು ನೊಂದೆ ಭವಾಟವಿಯೊಳುಮೋಸ ಹೋಗದಿರಿನ್ನು ತಿಳಿದುಬೇಸರದೆ ಉರಗಾದ್ರಿವರದ ಪ್ರಸನ್ವೆಂಕಟೇಶನಂಘ್ರಿಯ ಬಿಡದೆ ಭಜಿಸು 15
--------------
ಪ್ರಸನ್ನವೆಂಕಟದಾಸರು
ಸಂದಿತಯ್ಯ ಪ್ರಾಯವು |ಸಂದಿತಯ್ಯ ಪ್ರಾಯವು ಪಮೂರು ತಿಂಗಳುಸಂದುಹೋಯಿತು ತಿಳಿಯದೆ ||ಬಂದೆ ತಾಯಿಯ ಜಠರದಲಿ ಮ-|ತ್ತೊಂದು ಬುದ್ಧಿಯನರಿಯದೆ ||ಬೆಂದೆ ನವಮಾಸದಲಿ ಗರ್ಭದಿ |ಒಂದು ದಿವಸವು ತಡೆಯದೆ ||ಕುಂದದೀಪರಿಯೊಂದು ವರುಷವು |ಇಂದಿರೇಶನೆ ಕೇಳು ದುಃಖವ 1ಕತ್ತಲೆಯೊಳಿರಲಾರೆನೆನುತಲಿ |ಹೊತ್ತೆ ಹರಕೆಯ ನಿನ್ನನು ||ಮತ್ತೆ ಜನಿಸಲು ಭೂಮಿಯೊಳು ನಾ |ಅತ್ತುನಿನ್ನನು ಮರೆತೆನು ||ಮತ್ತೆ ಮಲ-ಮೂತ್ರದೊಳು ಬಾಲ್ಯದಿ |ಹೊತ್ತು ದಿನಗಳ ಕಳೆದೆನು ||ಮತ್ತೆ ನರಕದೊಳುರುಳುತುರುಳುತ |ಉತ್ತಮೋತ್ತಮ ನಿನ್ನ ನೆನೆಯದೆ 2ಚಿಕ್ಕತನವನು ಮಕ್ಕಳಾಟದಿ |ಅಕ್ಕರಿಂದಲಿ ಕಳೆದೆನು ||ಸೊಕ್ಕಿ ಹದಿನಾರಲಿ ನಾನತಿ |ಮಿಕ್ಕಿ ನಡೆದೆನು ನಿನ್ನನು ||ಸಿಕ್ಕಿ ಬಹು ಸಂಸಾರ ಮಾಯೆಯ |ಕಕ್ಕುಲಿತೆಯೊಳು ಬಿದ್ದೆನು ||ಹೊಕ್ಕುದಿಲ್ಲವು ನಿನ್ನ ಪಾದವ |ರಕ್ಕಸಾರಿಯೆ ಕೇಳು ದುಃಖವ 3ಸುಳಿದೆ ಮನೆಮನೆ ಕಳೆದೆ ಕಾಲವ |ಉಳಿದ ಯೋಚನೆ ಮಾಡದೆ ||ಬೆಳೆದೆ ತಾಳೆಯ ಮರದ ತೆರದಲಿ ||ಉಳಿವ ಬಗೆಯನು ನೋಡದೆ ||ಎಳೆಯ ಮನದೊಳೆ ಇಳೆಯ ಜನರೊಳು |ಬಳಕೆ ಮಾತುಗಳಾಡಿದೆ ||ಕಳೆದೆ ಈ ಪರಿಯಿಂದ ಕಾಲವ |ನಳಿನನಾಭನೆ ನಿನ್ನ ನೆನೆಯದೆ 4ಎಡೆಬಿಡದೆಅನುದಿನದಿ ಪಾಪದ |ಕಡಲೊಳಗೆ ನಾನಾಳ್ದೆನು ||ದರವ ಕಾಣೆದೆ ಮಧ್ಯದಲಿ ಎ-|ನ್ನೊಡಲೊಳಗೆ ನಾನೊಂದನು ||ದೃಢದಿ ನಿನ್ನಯ ಧ್ಯಾನವೆಂಬಾ |ಹಡಗವೇರಿಸು ಎನ್ನನು ||ಒಡೆಯ ಪುರಂದರವಿಠಲ ಎನ್ನನು |ಬಿಡದೆ ಕಾಯೈ ಬೇಗ ಶ್ರೀಹರಿ5
--------------
ಪುರಂದರದಾಸರು
ಸಂದು ತೀರದಿರಲಿ ಆನಂದಭಕುತಿ ಕೃಷ್ಣಹೊಂದಿ ಬಿಡಲಾರೆನೊ ಮುಕುಂದ ನಿನ್ನಂಘ್ರಿ ನಿಷ್ಠೆಯ ಪ.ಸಿರಿಭಾಗವತಶಾಸ್ತ್ರವರಪಂಚರಾತ್ರಾಗಮಪರಮಭಾರತದ ತಾತ್ಪರ್ಯಾರ್ಥದಪರಿಚಯವಮಾಡುಹರಿಮಹೋದಾರಿ ಕೃಷ್ಣಗುರುಮಧ್ವ ನಿರೂಪದ ತರತಮ ಭಾವಾರ್ಥದ1ಜಯರಾಯ ಗುರುಗಳ ವಿಜಯವಾಕ್ಯವ ಕೇಳಿಸುನಯತಂತ್ರಸಾರಮಂತ್ರಾಶ್ರಯ ಬಲಿಸುದ್ವಯಸಪ್ತ ಭಕ್ತಿಯಿಂದ ಆಯುಷ್ಯ ಸಾಗಿಸು ತತ್ವಚಯಜ್ಞಾನವೆಂಬ ದಿವ್ಯ ಪೀಯೂಷವುಣಿಸುವ ಸವಿ2ಲಲಿತ ಶ್ರೀಮುದ್ರೆ ಊಧ್ರ್ವತಿಲಕ ತಪ್ತಲಾಂಛನಹೊಳೆವ ದ್ವಾದಶನಾಮ ತುಲಸಿದಂಡೆಕಳಧೌತ ಮೀರ್ವಾಂಗಾರ ನಳಿನಾಕ್ಷ ಧಾತ್ರಿಸರಗಳದೊಳೊಪ್ಪುವ ಶ್ಲಾಘ್ಯ ಬಲುವೈರಾಗ್ಯ ಭಾಗ್ಯದ 3ಅಹರ್ನಿಶಾತ್ಮಜ ಸವಿ ಸ್ನೇಹವೆ ಶ್ರೀಪಾದದಲ್ಲಿದೇಹ ಧನ ಮನ ಒಪ್ಪಿಸಿಹೊ ವೃತ್ತಿಲಿಬಹಿರಂತಕ್ಷಣಕೆ ರೂಹುದೋರ್ವ ಭಾಷ್ಪ ತನುರುಹತೋಷಾಬ್ದಿಯೊಳು ಮಗ್ನರಹ ಮಹಿಮರ ಸಂಗ4ಎಸೆವ ಹರಿದಿನಅನಿಮಿಷಜಾಗರದ ಕೀತ್ರ್ನೆಲಸತ್ತಿರುಳಿನಾಪರವಶನರ್ತನ ಕುಶತಲ್ಪ ಪ್ರಸನ್ವೆಂಕಟೇಶನಂಘ್ರಿಲಂಪಟನಿಯಮೇರ ತಾಳ ಮೇಳಸುಸುಖ ಸುಬ್ಬಾನ ಸೂರೆ 5
--------------
ಪ್ರಸನ್ನವೆಂಕಟದಾಸರು
ಸರಸ್ವತಿ ದೇಹಿಸನ್ಮತಿಪ.ವಿಧಿಸತಿ ಸುವ್ರತಿ ಶ್ರೀಮತಿಭಾರತಿಅ.ಪ.ನಿಗಮವೇದ್ಯನನುನಿತ್ಯಪೊಗಳುತಿಜಗದೀಶ್ವರಿ ಜಲಜಾಯತನೇತ್ರಿಭಗವತಿ ಪವಿತ್ರಿ ಸಾವಿತ್ರಿ ಗಾಯತ್ರಿಸರಸ್ವತಿ ದೇಹಿಸನ್ಮತಿ1ಶರ್ವೇಂದ್ರಪೂರ್ವ ಗೀರ್ವಾಣತತಿಸರ್ವದಾಚರಿಸುವುದು ತವ ಸ್ತುತಿಸದ್ಭಕ್ತಿ ವಿರಕ್ತಿ ತ್ರಿಶಕ್ತಿ ದೇವಕಿಸರಸ್ವತಿ ದೇಹಿಸನ್ಮತಿ2ಲಕ್ಷ್ಮೀನಾರಾಯಣನ ಮೂರುತಿಲಕ್ಷಿಸಿ ಮನದೊಳಾನಂದದೊಳಿರುತಿಗುಣವತಿಸುಗತಿಸುಧೃತಿ ವಿಧಾತ್ರಿಸರಸ್ವತಿ ದೇಹಿಸನ್ಮತಿ3
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಸರಿಸರಿದೋಡುತಿವೆಲವತ್ರುಟಿಗಳುತಿರುಗದಲಿಟ್ಟಡಿಯಹರಿಗುರು ಪ್ರೀತಿಯ ದೊರಕಿಸು ಪ್ರಾಣಿಕಿರಿಯರಲ್ಲ್ಲ್ಯಮನವರು ಪ್ರಾಣಿ ಪ.ಪರದಾರ ಪರಸಿರಿ ಪರನಿಂದೆ ನಿರುತದಿಚಿರರತಿ ಬೆರತ್ಯಲ್ಲೊಪರಉಪಕಾರ ದಾರಿಯರಿಯದೆ ಬರಿ ಒಣಗರುವಿನಲಿರುವ್ಯಲ್ಲೊನರಹರಿ ಚರಣವಾದರಿಸದೆ ಸ್ಮರಿಸದೆನರರನುಸರಿಪ್ಯಲ್ಲೊಶರೀರ ಸಿಂಗರಿಸಿ ಸತ್ಕಾರ್ಯಬಾಹಿರನಾಗಿನಿರಯಕೆ ಗುರಿಯಾದ್ಯಲ್ಲೊ ಪ್ರಾಣಿ 1ಸುಖಗಳ ಕಕುಲತೆಗಖಿಳ ಸಾಧಕನಾದೆಭಕುತಿಗಳಿಕೆ ತೊರೆದುಬಕವೃತ್ತಿಯ ಕಲಿತು ಮುಖವ ಮುಸುಕಿದೆ ವಿರಕ್ತಿಸರಕುದೋರೈಲೋಕದ ಮೋಹಕ ಜ್ಞಾನಾಧಿಕನಾದೆ ಅಕಳಂಕಸುಖತೀರ್ಥವಾಕುದೋರೈಸಕಲಕಲೆ ಕಲಿತು ಸ್ತ್ರೀಕದಂಬ ಸಖನಾದೆಮುಕುತಿ ಹೊಂದಿಕೆ ತೋರೈ ಪ್ರಾಣಿ 2ಅಶನದುವ್ರ್ಯಸನಕೆ ನಿಶಿದಿನ ವಶನಾದೆಶ್ರೀಶ ಭೃತ್ಯೆನಿಸಿಕೊಳ್ಳೊಹುಸಿಉಪದೇಶಧ್ಯಾತ್ಮ ವೇಷದೊಳು ಘಾಸಿಯಾದೆದಶವ ವರಿಸಿಕೊಳ್ಳೈವಿಷಯ ಬಯಸಿ ವೃಥ ಮಸಿವರ್ಣೆನಿಸದೆ ನೀನ್ಯಶಸ ಕೂಡಿಸಿಕೊಳ್ಳೈಹಸಿತೃಷೆಗಸಣೆಗೆ ಬೇಸರದೆ ಪ್ರಸನ್ವೆಂಕಟೇಶನ ಒಲಿಸಿಕೊಳ್ಳೈ ಪ್ರಾಣಿ 3
--------------
ಪ್ರಸನ್ನವೆಂಕಟದಾಸರು
ಸರ್ವ ಪರಬ್ರಹ್ಮ ಸರ್ವ ಪರಬ್ರಹ್ಮಸರ್ವ ಪರಬ್ರಹ್ಮ ತಾನೆ ಪರಬ್ರಹ್ಮಪಹುದುಗಲ್ಲ ಕಣುಕಲ್ಲ ಬೇಳೇ ಭಕ್ಷ್ಯವು ಅಲ್ಲಅದರೊಳಗಣ ಸಿಹಿ ಅದುವೆ ಪರಬ್ರಹ್ಮ1ತೊಳೆಯಲ್ಲ ಬೀಜಲ್ಲ ತೊಗಟಲ್ಲ ಹಣ್ಣಲ್ಲತಿಳಿಯೆ ರುಚಿಯು ಬೇರೆ ಅದುವೆ ಪರಬ್ರಹ್ಮ2ಹಾಲು ನವ ನೀತವಲ್ಲ ಮೊಸರು ಮಜ್ಜಿಗೆಯಲ್ಲಹಾಲೊಳಗಣಘೃತಅದುವೆ ಪರಬ್ರಹ್ಮ3ದೇಹವಲ್ಲ ತತ್ವವಲ್ಲ ಮನ ಬುದ್ಧೀಂದ್ರಿಯವಲ್ಲದೇಹದೊಳಗಣ ದೇಹಿ ಅದುವೆ ಪರಬ್ರಹ್ಮ4ಸರ್ವಮಾಯೆ ಮಾತುಮಿಥ್ಯಸರ್ವಬ್ರಹ್ಮವೇ ಸತ್ಯಸರ್ವ ಚಿದಾನಂದ ಸರ್ವ ಪರಬ್ರಹ್ಮ5
--------------
ಚಿದಾನಂದ ಅವಧೂತರು
ಸಲಹು ವೆಂಕಟರಮಣ ದಯಾಂಬುಧಿಸಲಹು ವೆಂಕಟರಮಣ ಪ.ಮಸ್ತಕದೊಳೊಪ್ಪುವ ಮಾಣಿಕ ಮಕುಟದಕಸ್ತೂರಿನಾಮದ ಚೆಲುವವಿಸ್ತರ ಕದಪಿಲಿ ಹೊಳೆವಕುಂಡಲಪ್ರಶಸ್ತವದನಜಗಜೀವ1ಎಳೆನಗೆ ತಿಂಗಳ ಕಾಂತಿಲಿಹೃತ್ತಾಪಕಳೆವ ಕರುಣಿ ಸಿರಿಕಾಂತಗಳದೊಳು ವನಮಾಲೆವೈಜಯಂತಿಪದಕಗಳೊಲೆವ ಮಂಗಳಮೂರ್ತಿಮಂತ 2ಮುತ್ತಿನ ಸರ ಸರಪಳಿ ಭುಜಕೀರ್ತಿಯುಎತ್ತಿದ ಶಂಖಾರಿಪಾಣೆರತ್ತುನ ಮೇಲೊಡ್ಯಾಣ ಕಂಕಣ ಮುದ್ರೆಒತ್ತೆ ಅಭಯವರದನೆ 3ಉಟ್ಟು ಪೊಂದಟ್ಟಿ ಕಠಾರಿ ಕಟ್ಟಿರುವದುಷ್ಟರ ರಣಜಿತವೀರಇಟ್ಟ ವಜ್ರದ ಕಾಲಂದಿಗೆ ಪಾವುಗೆಮೆಟ್ಟಿದ ಸುರರಮಂದಾರ4ಅಗರುಚಂದನಕಪ್ಪುರ ಕೇಶರ ಸುರಭಿಗಳಿಗೆ ಅತಿಪ್ರಿಯ ಅಂಗಮಘಮಘಿಸುವ ಮಲ್ಲಿಗೆ ಸಂಪಿಗೆಯಮಾಲೆಗಳ ಪ್ರಸನ್ವೆಂಕಟ ರಂಗ 5
--------------
ಪ್ರಸನ್ನವೆಂಕಟದಾಸರು
ಸಲಹು ಸಲಹು ಗುರುರಾಯನೆ ನನ್ನಾಲಸದೆ ಪಾವನ್ನಕಾಯನೆ ನಾನುಹಲವು ದಿವಸ ನಿನ್ನ ನಂಬಿರೆದ್ವಿಜಕುಲಮಣಿ ಜನಾರ್ದನಾಚಾರ್ಯನೆ ಪ.ನಿನ್ನ ಶರಣು ಹೊಕ್ಕ ಭೃತ್ಯರು ತತ್ವಪೂರ್ಣರಾದರು ಪೂತರಾದರುನನ್ನ ಮನ್ನಿಸಲಾಗದೆ ದಾತನೆ ವಿದ್ಯೋನ್ನತ ವಿಶ್ವಕೆ ಪ್ರೀತನೆ 1ಆ ಬಾಲ್ಯದೊಳು ರಘುಪತಿಪಾದಭಜನಾದರ ನಿನಗುಂಟುಕೋವಿದಈ ಮೇದಿನಿಯಲಿ ಸುಧಾಸುರಸದಬಹು ಸ್ವಾದವ ಬಲ್ಲ ಇಷ್ಟಾರ್ಥದ 2ಅಜ್ಞಾನ ಕತ್ತಲೆ ಕವಿದಿದೆ ಅಭಿಜÕನ ಮಾಡಲಿ ಬಾರದೆ ನಿನ್ನಪ್ರಜÕತನದ ಪ್ರಸವನಿತ್ಯಆಜ್ಞಾಧಾರಕಗೀಯೊ ಜ್ಞಾನವ 3ಭಕ್ತಿ ವೈರಾಗ್ಯ ಸುಜ್ಞಾನ ಸಂಯುಕ್ತ ಮಂಗಳ ಗುಣಾಲಂಕೃತಯುಕ್ತಿ ಸಾಲದು ಹರಿಸೇವೆಗೆ ಸ್ವಪ್ನವ್ಯಕ್ತ ಬೋಧಿಸೆನಗೆ 4ತಂದೆ ತಾಯಿ ಆಪ್ತಮಿತ್ರ ನೀಗತಿಹೊಂದಿಪ ದುರಿತಘಹರ್ತ ನೀ ಗೋವಿಂದ ಪ್ರಸನ್ವೆಂಕಟೇಶನ ಹೃದಯಮಂದಿರದೊಳು ಪೂಜಾಶೀಲನೆ 5
--------------
ಪ್ರಸನ್ನವೆಂಕಟದಾಸರು
ಸಲ್ಲದು ಪುನರ್ಜನ್ಮ ಸಲ್ಲದು ಯೋಗಿಗೆಪರದವಲ್ಲಭತಾನಾಗಿನಿತ್ಯಸುಖಿಸುವಾತಾಂಗೆಪಬೀಜವದು ಹೋಗಿ ಅನ್ಯ ತೇಜದೊಳು ಬಿದ್ದ ಬಳಿಕಬೀಜವೆಂದು ಬಿತ್ತಲದು ಫಲಿತವಾಗುವುದೋಸಾಜಕರ್ಮಿಗಳು ಗುರುಕೃಪೆಯ ಪಡೆಯಲುಮುಕುತಿ ತಾನಲ್ಲದೆ ಪುನರ್ಜನ್ಮವೆಲ್ಲಿಯದೋ1ಕಾಷ್ಠವದು ಹೋಗಿ ಅಗ್ನಿ ಕುಂಡದಲಿ ಸುಟ್ಟ ಬಳಿಕಕಾಷ್ಠವೆಂದು ಕರೆಯಲದು ಕಾಷ್ಠವಹುದೇಶ್ರೇಷ್ಠವಾದ ಬ್ರಹ್ಮದೊಳು ವೇಷ್ಠಿತಾನಾದ ಬಳಿಕನಷ್ಟಮಾತಲ್ಲದೇ ಪುನರ್ಜನ್ಮವೆಲ್ಲಿಹುದು2ಕೀಟವದು ಹೋಗಿ ಭೃಮರದಾಟದೊಳು ಬಿದ್ದು ತನ್ನಕೀಟತನವಳಿದ ಮೇಲೆ ಕೀಟವಾಗುವುದೇಪಾಡಿ ಚಿದಾನಂದನೊಳು ಕೂಟವು ತಾನಾದ ಮೇಲೆಮುಕುತಿ ತಾನಲ್ಲದೆ ಪುನರ್ಜನ್ಮವೆಲ್ಲಿಯದು3
--------------
ಚಿದಾನಂದ ಅವಧೂತರು