ಒಟ್ಟು 8803 ಕಡೆಗಳಲ್ಲಿ , 129 ದಾಸರು , 4024 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಏನು ಸುಖವೋ ಎಂಥಾ ಸುಖವೊಹರಿಯ ಧ್ಯಾನ ಮಾಡುವವರ ಸಂಗ ಏನು ಸುಖವೊತಂಬೂರಿ ಮೀಟುತ್ತ ಹೃದಯಗೆಜ್ಜೆಯು ಕಾಲಲ್ಲಿಕಟ್ಟಿಸ್ವರ್ಣಲೋಷ್ಠ ಸಮವೆಂದುಪುಷ್ಪದಿ ಸುಗಂಧ ಹ್ಯಾಂ-ದರ್ವಿಯಂತೆ ದೇಹವನ್ನುನಡೆವೋದು ನುಡಿವೋದು ನಿರುತಸೃಷ್ಟಿಗೊಡೆಯನ ಮನ-
--------------
ಗೋಪಾಲದಾಸರು
ಏನು, ಬರೆದೆಯೊ ಬ್ರಹ್ಮ ಎಂತು ನಿರ್ದಯನು-ಅಭಿ |ಮಾನವನು ತೊರೆದು ಪರರನು ಪೀಡಿಸುವುದ ಪಬಲ್ಲಿದರ ಮನೆಯ ಬಾಗಿಲ ಕಾಯ್ದು ಬೇಸತ್ತು |ಸೊಲ್ಲುಸೊಲ್ಲಿಗೆಅವರಕೊಂಡಾಡುತ ||ಇಲ್ಲ ಈ ವೇಳೆಯಲಿ ನಾಳೆ ಬಾ-ಎನಲಾಗಿ |ಅಲ್ಲವನೆ ತಿಂದ ಇಲಿಯಂತೆ ಬಳಲುವುದ 1ಗೇಣೊಡಲ ಹೊರೆವುದಕೆ ಹೋಗಿ ನರರೊಳು ಪಂಚ-|ಬಾಣ ಸಮರೂಪ ನೀನೆಂದು ಪೊಗಳೆ ||ಮಾಣು ಎನ್ನಾಣೆ ನೀ ನಾಳೆ ಬಾ ಎಂದೆನಲು |ಗಾಣತಿರುಗುವ ಎತ್ತಿನಂತೆ ಬಳಲುವುದ2ಹಿಂದೆ ಬರೆದಾ ಬರೆಹ ಏನಾದರಾಗಲಿ |ಮುಂದೆನ್ನ ವಂಶದಲಿ ಪುಟ್ಟುವರಿಗೆ ||ಸಂದೇಹಬೇಡ ಶ್ರೀಪುರಂದರವಿಠಲನೇ |ಕಂದರ್ಪನಯ್ಯ ಉಡುಪಿಯ ಕೃಷ್ಣರಾಯ 3
--------------
ಪುರಂದರದಾಸರು
ಏನೆಂದಳಯ್ಯ ಸೀತೆ |ನಿನಗೇನ ಮಾಡಿದಳೊ ಪ್ರೀತೆ ಪದಾನವನ ಪುರದೊಳಗೆ ದಾರಿಯನು ನೋಡುತಲೆ |ಧ್ಯಾನವನು ಮಾಡುತಿಹಳೊ ಹನುಮಾ ಅ.ಪಎಲ್ಲಿಂದ ಬಂದೆ ಹನುಮಾ - ನೀಯೆನ್ನ -ಕೇಳುಸೊಲ್ಲೆನ್ನ ಪ್ರೇಮ ||ವಲ್ಲಭನ ನೆನೆದರೆ ನಿಮಿಷ ಯುಗವಾಗುತಿದೆನಿಲ್ಲಲಾರೆನು ಎಂದಳೊ ಹನುಮಾ 1ದೇವರಾಯನ ಪಾದವ - ಎಲೆ ಕಪಿಯೆ -ದಾವಪರಿಯಲಿ ಕಾಂಬೆನೊ ||ರಾವಣನ ಶಿರವರಿದು ಲಂಕಪಟ್ಟಣವನೆಲ್ಲ |ಹವನವಮಾಡಿಸು ಎಂದಳೊ ಹನುಮಾ || 2ಅಂಜನಾತನಯ ಕೇಳೊ - ನೀ ಹೋಗಿ -ಕಂಜನಾಭನಿಗೆ ಪೇಳೊ ||ಕುಂಜರವಕಾಯ್ದು ಶ್ರೀಪುರಂದರವಿಠಲನ |ಪಂಜರದ ಗಿಣಿಯೆಂದಳೊ ಹನುಮಾ 3
--------------
ಪುರಂದರದಾಸರು
ಏನೊ ರಂಗ ನಿನ್ನ ವನಿತೆಯೊಳಪರಾಧಧ್ಯಾನಿಸಲು ದೊರಕೊಂಬುದೆನೀನಗಲಬೇಡ ತರಳೆಗಭಯವ ಕೊಟ್ಟುಮೌನದಲಿ ನಡೆಯೊ ಮನೆಗೆ ಬೇಗ ಪ.ಸ್ಮರನ ದಾಳಿಗೆ ಕಂದಿ ಕುಂದಿ ಬಳ್ಕಡಿಯಿಡುತವಿರಹಾಗ್ನಿಗನ್ನತೊರೆದು ಸ್ಮರಿಸುವಳುನಿರುತ ನಿನ್ನಯ ಗುಣಾವಳಿಗಳನುಕರಿಸೋತರಳೆಯ ಕೂಡೊ ಕೋಪ ಬೇಡೊ ನೋಡೊ 1ಪರಮಪುರುಷ ನೀ ಅವಳ ಜರಿದ ಕಾರಣಸೋಮಕಿರಣ ವಿಷಸಮ ಝಳದಪರಿತೋರಿ ಬಳಲುವಳು ಸಖಿಭೃಂಗ ಕಳಕಕೆತರಳೆ ಕೂಡೊ ಕೋಪ ಬೇಡೊ ನೋಡೊ 2ನಲ್ಲ ನಿನ್ನ ಸಂಗ ಬಯಕೆಗೆ ಕಣ್ಣ ತೇಲಿಸುವಳಲ್ಲೊ ತೊದಲ್ಲು ನುಡಿವಳಲ್ಲೊಮೆಲ್ಲನೆದೆ ನೋಡಿ ಸುಯಿಗರೆವಳು ಖಗಾಂಕಜನಬಿಲ್ಲಿಗೆಬಲಿಕೊಡಲಿ ಬಾರೊ ತೋರೊ3ಪಯನಿಧಿ ಒಡೆಯನ್ಯಾಕೆ ಬಾರನೆಂದವಳು ತನ್ನಯ ಸುದತಿಯರ ಬೈವಳುನಯನಧsರವಿರಸಿ ಕಂಬನಿದುಂಬುವಳು ಗಡಪ್ರಿಯಳರಸೆಜಾರವಿರಸಹರಿಸೊ4ನಿನ್ನ ನಂಬಿದಳಿಗಿಂತಾಗುತಿರೆ ಸುಮ್ಮನಿಹೆಎನ್ನ ಹೇಯ ಬಾರದೆನಲುಉನ್ನತ ಹಯವನೇರಿ ಬಂದವಳ ನೆರೆದ ಪ್ರಸನ್ನ ವೆಂಕಟನಾಯಕರಸಿಕ5
--------------
ಪ್ರಸನ್ನವೆಂಕಟದಾಸರು
ಏಳಲವ ಮಾಡಿದಿರಿ ಏನ ಕೊಟ್ಟರು ಬೇಡಕಾಲಮನುಜರ ಸಂಗ ಸಾವಿರ ಕೊಟ್ಟರು ಬೇಡಪ.ಆದಿ ತಪ್ಪುವನವನ ಆಶೆಮಾಡಲು ಬೇಡಕೂಡಿ ನಡಿಯುವಲ್ಲಿಕಪಟ ಬೇಡಮೂಢ ಹೆಣ್ಣಿನ ಸಂಘ ಮಮತೆ ಇದ್ದರೂ ಬೇಡಮಾಡಿದಪುಕಾರವನ್ನು ಮರೆಯಬೇಡ 1ಬಂಧುವರ್ಗದಿ ಬಲುನಿಂದು ವಾದಿಸಬೇಡಮಂದಮತಿಯ ಕೂಡಾ ಮಾತು ಬೇಡಬರದ ತಿಥಿಗಳಲಿ ಬರಿದೆ ಕೋಪಿಸಬೇಡಇಂದಿರೇಶನ ಮರೆದು ಜಡವಾಗಬೇಡ 2ಹವಣರಿಯದೆ ಹಗೆಗಳ ಹತ್ತಿರಗೆಯಬೇಡಜವನ ಭೂಮಿಯಲಿದ್ದು ಜೊತೆ ಬೇಡಭುವನೀಶ ಪುರಂದರವಿಠಲನ ನೆನೆಯದೆಅವಮತಿಯಾಗಿ ನೀ ಕೆಡಲುಬೇಡ 3
--------------
ಪುರಂದರದಾಸರು
ಏಳಿ ಮೊಸರ ಕಡೆಯಿರೇಳಿ-ಗೋ-|ಪಾಲ ಚೂಡಾಮಣಿ ಏಳದ ಮುನ್ನ ಪಇಂದುಮುಖಿಯರೆದ್ದು ಮುಖವನೆ ತೊಳೆದು ಶ್ರೀ-|ಗಂಧ-ಕಸ್ತೂರಿ-ಕುಂಕುಮಗಳಿಟ್ಟು ||ಚಂದ್ರಗಾವಿಯ ಸೀರೆಯ ನೀರಿವಿಟ್ಟು ಮು-|ಕುಂದನ ಪಾಡುತ ಚದುರೆಯರೆಲ್ಲ 1ಹೊಂಗೊಡ ಬೆಳಗಿಟ್ಟು ಪೊಸಮೊಸರನೆತುಂಬಿ|ರಂಗನೀಲದ ಕಡೆಗೋಲನಿಟ್ಟು ||ಶೃಂಗಾರವಾದ ರೇಶಿಮೆಯ ನೇಣನೆ ಹಿಡಿದು |ರಂಗನ ಪಾಡುತ ಚದುರೆಯರೆಲ್ಲ 2ಬಡನಡು ಬಳುಕುತ ಕುಚಗಳಲ್ಲಾಡುತ |ಕಡಗ-ಕಂಕಣ ಝಣಝಣರೆನ್ನುತ ||ಮುಡಿದ ಮಲ್ಲಿಗೆ ಹೂವು ಎಡಬಲಕುದುರೆ ಪಾ-|ಲ್ಗಡಲೊಡೆಯನ ಪಾಡುತ ಚದುರೆಯರು 3ಹುಸಿನಿದ್ದೆಯಲಿ ಶ್ರೀಕೃಷ್ಣನು ಮಲಗಿರೆ |ಹಸಿದು ಆಕಳಿಸಿ ಬಾಯಾರುತಲಿ ||ಮುಸುಕಿನೊಳಿದ್ದು ಬೆಣ್ಣೆಯ ಬೇಡುತಲಿರೆ |ಶಶಿವದನನಿಗೆ ಬೆಣ್ಣೆಯ ನೀಡಲೋಸುಗ 4ಏಣಾಂಕಮುಖಿಯರು ಹೊಸ ಬೆಣ್ಣೆಯನು ತೆಗೆದು |ಪ್ರಾಣಪದಕ ಕೃಷ್ಣನಿಗೆ ಕೊಡಲು ||ಚಾಣೂರ ಮಲ್ಲನ ಗೆಲಿದು ಬಾರೆನುತಲಿ ||ಜಾಣ ಪುರಂದರವಿಠಲನಪ್ಪಲುಗೋಪಿ5ದೃಷ್ಟಿಯು ತಾಗೀತೆಂದಿಟ್ಟು ಅಂಗಾರವ |ತಟ್ಟೆಯೊಳಾರತಿಗಳ ಬೆಳಗಿ ||ಥಟ್ಟನೆ ಉಪ್ಪು-ಬೇವುಗಳನಿವಾಳಿಸಿ|ತೊಟ್ಟಿಲೊಳಿಟ್ಟು ಮುದ್ದಾಡುವಳೊ 6ನಮ್ಮಪ್ಪ ರಂಗಯ್ಯ ಅಳಬೇಡವೊ ದೊಡ್ಡ |ಗುಮ್ಮ ಬಂದಿದೆ ಸುಮ್ಮನಿರು ಎನುತ ||ಅಮ್ಮಿಯನೀಯುತ ಅಮರರನಾಳ್ದನ |ರಮ್ಮಿಸಿ ರಮ್ಮಿಸಿ ಮುದ್ದಾಡುವಳೊ 7ಏಸೊ ಬೊಮ್ಮಾಂಡವ ರೋಮದೊಳಿರಿಸಿದ |ವಾಸುದೇವನನೆತ್ತಿ ಕೊಂಬುವಳೊ ||ನಾಶರಹಿತನಾಯುಷ್ಯ ಹೆಚ್ಚಲೆಂದು |ರಾಶಿದೈವಕೆ ತಾ ಬೇಡಿಕೊಂಬುವಳೊ 8ಮಾಧವಬಾ ಮದುಸೂದನ ಬಾ ಬ್ರ-|ಹ್ಮಾದಿವಂದಿತಹರಿಬಾ ಯೆನುತ ||ಆದಿ ಮೂರುತಿ ಶ್ರೀ ಪುರಂದರವಿಠಲನ |ಆದರದಲಿ ಮುದ್ದಾಡುವಳೊ 9
--------------
ಪುರಂದರದಾಸರು
ಏಳು ನಾರಾಯಣ ಏಳು ಲಕ್ಷ್ಮೀರಮಣಏಳು ಶ್ರೀಗಿರಿಯೊಡಯ ಶ್ರೀವೆಂಕಟೇಶ ಪಕಾಸಿದ್ದ ಹಾಲನ್ನು ಕಾವಡಿಯೊಳ್ ಹೆಪ್ಪಿಟ್ಟುಲೇಸಾಗಿ ಕಡೆದು ಹೊಸ ಬೆಣ್ಣೆ ಕೊಡುವೆಶೇಷಶಯನನೆ ಏಳು ಸಮುದ್ರ ಮಥನವಮಾಡುದೇಶ ಕೆಂಪಾಯಿತು ಏಳಯ್ಯ ಹರಿಯೇ 1ಅರುಳು ಮಲ್ಲಿಗೆ ಜಾಜಿ ಪರಿಮಳದ ಪುಷ್ಪಗಳಸುರರುತಂದಿದ್ದಾರೆ ಬಲು ಭಕುತಿಯಿಂದಅರವಿಂದನಾಭ ಸಿರಿವಿಧಿಭವಾದಿಗಳೊಡೆಯಪಿರಿದಾಗಿ ಕೋಳಿ ಕೂಗಿತೇಳಯ್ಯ ಹರಿಯೇ 2ದಾಸರೆಲ್ಲರು ಬಂದು ಧೂಳಿದರ್ಶನಕೊಂಡುಲೇಸಾಗಿ ತಾಳ ದಂಡಿಗೆಯ ಪಿಡಿದುಶ್ರೀಶಪುರಂದರವಿಠಲರಾಯ ನಿಮ್ಮ ಪಾದವನುಲೇಸಾಗಿ ಪೊಗಳುವರು ಹರಿಯೇ
--------------
ಪುರಂದರದಾಸರು
ಏಳು ಶ್ರೀ ಗುರುರಾಯ ಬೆಳಗಾಯಿತಿಂದುಧೂಳಿ ದರುಶನ ಕೊಡಿರಿ ಈ ವೇಳೆ ಶಿಷ್ಯರಿಗೆ ಪ.ಏಳುಗುರುರಾಘವೇಂದ್ರ ಏಳು ದಯಾಗುಣಸಾಂದ್ರಏಳು ವೈಷ್ಣವ ಕುಮುದಚಂದ್ರ ಶ್ರೀ ರಾಘವೇಂದ್ರ ಅ.ಪ.ಅಶನವಸನಗಳಿಲ್ಲವೆಂಬವ್ಯಸನಗಳಿಲ್ಲಮುಸುಕ್ಹಾಕಿ ಮೋಸದಲೆ ಮೋಹಿಸಿದೆನೆಲ್ಲಅಸುರಾರಿಯ ಸ್ಮರಿಸದೆ ಪಶುವಿನೊಲು ಈ ದೇಹವಸುಮತಿಯೊಳು ಬಹಳ್ಹಸಗೆಟ್ಟಿತಲ್ಲ 1ನಾನು ನನ್ನದು ಎಂದು ಹೀನಮನಸಿಗೆ ತಂದುಏನು ಮಾಡುವಕರ್ಮನಾನೆ ಅಹುದೆಂದುಸ್ವಾಮಿ ಕರ್ತೃತ್ವವನು ತಿಳಿಯಲಿಲ್ಲ ನಾನೊಂದುನೀನೆ ಉದ್ಧರಿಸಯ್ಯ ದೀನ ದಯಾಸಿಂಧು 2ಅನ್ಯರ ಕೈಯಲ್ಲಿ ನಿನ್ನವರನಿರಿಸುವುದುಅನ್ಯಾಯವಾಯ್ತುಪಾವನ್ನಗುರುರಾಯಎನ್ನ ಮಾತಲ್ಲವಿದು ನಿನ್ನ ಮಾತೇ ಸರಿಮನ್ನಿಸಿ ಆಗು ಪ್ರಸನ್ನ ಗುರುರಾಯ 3ವೇದ ಶಾಸ್ತ್ತ್ರಗಳನ್ನು ಓದಿ ಪೇಳ್ದವನಲ್ಲಭೇದಾಭೇದವನು ತಿಳಿಯಲಿಲ್ಲಸಾಧು ಸಜ್ಜನರ ಸಹವಾಸ ಮೊದಲಿಲ್ಲಹಿಂದಾಗಿಮಾನಮಾರಿಸಿದಿ ಉಳಿಸಲಿಲ್ಲ4ಆಸೆಗೊಳಗಾದೆನೊ ಹೇಸಿ ಮನುಜನು ನಾನುಕ್ಲೇಶಭವಸಾಗರದೊಳೀಸುತಿಹೆನೊಏಸುಜನ್ಮದಿ ಎನ್ನಘಾಸಿಮಾಡಿದೆ ಮುನ್ನದಾಸನಾಗುವೆ ತೋರೊ ಪ್ರಸನ್ನವೆಂಕಟನ 5
--------------
ಪ್ರಸನ್ನವೆಂಕಟದಾಸರು
ಒಪ್ಪನಯ್ಯ -ಹರಿ- ಮೆಚ್ಚನಯ್ಯಪಉತ್ತಮ ತಾನೆಂದುಕೊಂಡು ಉದಯಕಾಲದಲ್ಲಿ ಎದ್ದು |<?xmಟ veಡಿsioಟಿ='1.0' eಟಿಛಿoಜiಟಿg='uಣಜಿ-8'?>ನಿತ್ಯನಿತ್ಯ ನೀರಿನೊಳಗೆ ಕಾಗೆ ಹಾಗೆ ಮುಳುಗುವವಗೆ 1ಚರ್ಮದ ದೇಹಕ್ಕೆ ಗೋಪಿಚಂದನವ ತೊಡೆದುಕೊಂಡು |ಎಮ್ಮೆಯ ರೋಗದ ಬರೆಯ ಹಾಗೆ ಅಡ್ಡತಿಡ್ಡ ಬರೆದ ಮನುಜಗೆ 2ಮಾತಿನಲ್ಲಿ ಮತ್ಸರವು ಮನಸಿನೊಳಗೆ ವಿಷದ ಗುಳಿಗೆ |ಓತಿಯಂತೆ ಮರದ ಮೇಲೆ ನಮಸ್ಕಾರ ಮಾಡುವವಗೆ 3ನಿಷ್ಠೆಯುಳ್ಳವ ತಾನೆಂದು ಪೆಟ್ಟಿಗೆ ಮುಂದಿಟ್ಟು ಕೊಂಡು |ಕೊಟ್ಟಿಗೆಯೊಳಗಿನ ಎತ್ತಿನಂತೆ ನುಡಿಸುವ ಗಂಟೆಯ ಶಬ್ದಕೆ ಆತ 4ಏಕೋಭಾವ ಏಕೋಭಕ್ತಿ ಏಕನಿಷ್ಠೆಯಿಂದಲಿ |
--------------
ಪುರಂದರದಾಸರು
ಒಂಬತ್ತು ಬಾಗಿಲೊಳು ಒಂದು ದೀಪವಹಚ್ಚಿ |<?xmಟ veಡಿsioಟಿ='1.0' eಟಿಛಿoಜiಟಿg='uಣಜಿ-8'?>ನಂಬಿಗಿಲ್ಲದೆ ಒಗತನ ಮಾಡಿದೆನೆ ಸೂವಕ್ಕ ಸುವ್ವಿ ಪತನುವೆಂಬ ಕಲ್ಲಿಗೆ ಮನ ಧಾನ್ಯವನುತುಂಬಿ |ಒನೆದೊನೆದು ಒಬ್ಬಳೆ ಬೀಸಿದೆನೆ 1ಅಷ್ಟ ಮದಗಳೆಂಬ ಅಷ್ಟಧಾನ್ಯವ ತೆಗೆದು |ಕುಟ್ಟಿ ಕುಟ್ಟಿ ಕಾಳು ಮಾಡಿದೆನೆ 2ನಷ್ಟ ತರ್ಕವೆಂಬ ಕಟ್ಟಿಗೆ ಉರಿದು ನಾ |ನಿಷ್ಠೆಯಿಂದನ್ನವ ಮಾಡಿದೆನೆ 3ಅಷ್ಟರೊಳು ಗಂಡಬಂದ ಅಡುವ ಗಡಿಗೆಯ ಬಡೆದ |ಹುಟ್ಟು ಮುರಿದು ಮೂಲೆಗೆ ಹಾಕಿದನೆ 4ಹುಟ್ಟಿನಲಿ ತಿರುಹುವ ಒಟ್ಟಿನಲಿ ಕುದಿಸುವ |ಕಟ್ಟಂಬಲಿಯನೆತ್ತಿ ಕುಡಿಸಿದನೆ............... 5ಉಡುವ ಸೀರೆಯ ಸೆಳೆದು ಗಿಡದ ತೊಪ್ಪಲ ಸುತ್ತಿ |ಕಡೆಗೆ ಬಾರದಹಾಗೆ ಮಾಡಿದನೆ 6ಮಾಡಿದೆನೆಒಗೆತನ ನಂಬಿಗಿಲ್ಲದ ಮನೆಯೊಳು |ಕೊಡಿದೆನೆ ಪುರಂದರವಿಠಲನ................. 7
--------------
ಪುರಂದರದಾಸರು
ಒಲ್ಲನೋಹರಿಕೊಳ್ಳನೋ ಪಮಧುಕ್ಷೀರ ಮೊದಲಾದ ಪಂಚಾಮೃತಗಳಿದ್ದುಕಮಲಮಲ್ಲಿಗೆ ಜಾಜಿ ಸಂಪಿಗೆ-ಕೇದಿಗೆ
--------------
ಪುರಂದರದಾಸರು
ಒಲ್ಲೆನೆಂದರಾಗುವುದೆ ಅಲ್ಲಿ ಪಡೆದು ಬಂದುದನುಎಲ್ಲವನುಂಡು ತೀರಿಸಬೇಕು ಹರಿಯೆಪ<?xmಟ veಡಿsioಟಿ='1.0' eಟಿಛಿoಜiಟಿg='uಣಜಿ-8'?>ತಂದೆತಾಯಿ ಬಸಿರಿಂದ ಬಂದ ದಿನ ಮೊದಲಾಗಿಒಂದಿಷ್ಟು ಸುಖವನೆ ಕಾಣೆ ನಾ ಹರಿಯೆಬಂದುದನೆಲ್ಲವನುಂಡು ತೀರಿಸದೆ ಭ್ರಮೆಗೊಂಡ ಮೇಲೇನುಂಟು ಹಗೆಯ ಜೀವನವೆ1ಎಮ್ಮರ್ಥ ಎಮ್ಮ ಮನೆ ಎಮ್ಮ ಮಕ್ಕಳು ಎಂಬಹೆಮ್ಮೆ ನಿನಗೇತಕೊ ವ್ಯರ್ಥ ಜೀವನವೆಬ್ರಹ್ಮ ಪಣೆಯೊಳು ಬರೆದ ವಿಧಿಯು ತಪ್ಪುವುದುಂಟೆಸುಮ್ಮನೆ ಇರು ಕಂಡ್ಯ ಹಗೆಯ ಜೀವನವೆ2ಅಂತರಂಗದಲೊಂದು ಅರ್ಥ ದೇಹದಲೊಂದುಚಿಂತೆಯಾತಕೆ ನಿನಗೆ ಪಂಚರೆದುರುಕಂತುಪಿತ ಕಾಗಿನೆಲೆಯಾದಿಕೇಶವರಾಯಅಂತರಂಗದಿ ನೆಲೆಗೊಳುವ ತನಕ3
--------------
ಕನಕದಾಸ
ಒಳ್ಳೆಯದೊಳ್ಳೆಯದು ಪಎಲ್ಲ ಸ್ಥಳವ ಬಿಟ್ಟು ಇಲ್ಲಿ ಅಡಗಿದುದು ಬಲ್ಲಿದತನವೆ ? ಅ.ಪಬಿಡೆನೊ ಬಿಡೆನೊ ಎನ್ನ ಒಡೆಯ ತಿರುಮಲ ನಿನ್ನ |ಉಡೆಯ ಪೀತಾಂಬರ ಪಿಡಿದು ನಿಲಿಸಿಕೊಂಬೆ 1ಅರಿವುಮರೆವು ಮಾಡಿ ತಿರುಗಿಸಿದೆಯಾ ಎನ್ನ |ಕೊರಳಿಗೆ ನಿನ್ನಯಚರಣಕಟ್ಟಿಕೊಂಬೆ 2ಅತ್ತೆಯ ಮಕ್ಕಳಿಗೆ ತೆತ್ತಿಗ ನಿನಗಾಗಿ |ಎತ್ತದ ರಾಶಿ ತಂದಿತ್ತ ಪರಿಯಲಿ 3ಅತ್ತಲಿತ್ತಲಿ ನೋಡಿನ್ನೆತ್ತ ಪೋಗಲಿ ನಿನ್ನ |ಚಿತ್ತದಲ್ಲಿ ಹೊತ್ತು ಕಟ್ಟಿಕೊಂಬೆನು 4ಇರುಳು ಹಗಲು ಬಿಡೆದೆ ವರಪುರಂದರಗೊಲಿದೆ |ಅರಿದುಏನು ಇಷ್ಟು ಪುರಂದರವಿಠಲನೆ 5
--------------
ಪುರಂದರದಾಸರು
ಒಳ್ಳೆವೀರನೆಂಬೊ ಮಾತು ಸುಳ್ಳು ಕೃಷ್ಣರಾಯಮೈಗಳ್ಳನೆಂದು ಕರೆಯೋರಲ್ಲೊ ಅಜರ್ಂುನರಾಯ ಪ.ವೀರಮಾಗಧಯುದ್ಧಕ್ಕೆ ಬಾರೆಂದು ಕರೆಯಲು ಅಂಜಿನೀರೊಳಗೆ ಹೋಗಿ ಅಡಗಿದೆಯಲ್ಲೊ ಶ್ರೀಕೃಷ್ಣರಾಯ 1ಯುದ್ಧ ಮಾಡುವೆನೆಂದು ಸನ್ನದ್ದನಾಗಿ ಬಂದು ಅಂಜಿಗುದ್ದುಹೊಕ್ಕೆಯಲ್ಲೊ ನೀನು ಅರ್ಜುನರಾಯ2ಜರಿಯ ಸುತನು ಯುದ್ದದಲ್ಲಿ ಕರಿಯೆ ಅಂಜಿಕೊಂಡು ನೀನುಗಿರಿಯಮರೆಯಲ್ಲಡಗಿದೆಲ್ಲೊ ಶ್ರೀ ಕೃಷ್ಣರಾಯ 3ಬಿಂಕದಿಂದ ಬಾಣ ಧರಿಸಿ ಶಂಕಿಸದೆ ಅಂಜಿ ಬಂದುಮಂಕು ಮನುಜರಂತೆ ನಿಂತ್ಯೊ ಅರ್ಜುನರಾಯ 4ದೊರೆಯು ಮಾಗದ ಯುದ್ದಕ್ಕೆ ಬಾರÉಂದು ಕರೆದರೆ ಅಂಜಿವರಾಹನಾಗಿ ಓಡಿದೆಲ್ಲೊ ಶ್ರೀ ಕೃಷ್ಣರಾಯ 5ಪೊಡವಿರಾಯರೆಲ್ಲ ಒಂದಾಗಿ ಬಿಡದೆ ಯುದ್ಧಮಾಡೆನೆಂಬೊಬಡಿವಾರವು ಎಷ್ಟು ನಿನಗೆ ಅರ್ಜುನರಾಯ 6ಬಿಲ್ಲು ಧರಿಸಿ ಮಾಗಧನು ಬಿಲ್ಲಿಗೆ ಬಾ ಎಂದು ಕರಿಯೆಹಲ್ಲು ತೆರೆದು ಹೆದರಿಕೊಂಡ್ಯೊ ಶ್ರೀಕೃಷ್ಣರಾಯ 7ಸಿಟ್ಟಿನಿಂದಕರ್ಣಬಾಣ ಬಿಟ್ಟನಯ್ಯ ನಿನ್ನ ಮ್ಯಾಲೆಕೊಟ್ಟಿಯಲ್ಲೊ ಮುಕುಟವನ್ನು ಅರ್ಜುನರಾಯ 8ಹಲವುರಾಯರೆಲ್ಲ ನಿನ್ನ ನೆಲಿಯುಗಾಣದಂತೆÀ ಮಾಡೆಬಲಿಯ ಹೋಗಿ ಬೇಡಿದೆಲ್ಲೊ ಶ್ರೀ ಕೃಷ್ಣರಾಯ 9ಕರ್ಣನ ಬಾಣವು ನಿನ್ನಹರಣಮಾಡಲೆಂದು ಬರಲುಮರಣ ತಪ್ಪಿಸಿದೆನಲ್ಲೊ ನಾನು ಅರ್ಜುನರಾಯ 10ನಡವಕಟ್ಟಿ ವೈರಿಗಳ ಹೊಡೆಯಲಿಕ್ಕೆ ಅರಿವೊ ಕೃಷ್ಣಕಡಿಯಲಿಕ್ಕೆ ಜಾಣನಯ್ಯ ಶ್ರೀ ಕೃಷ್ಣರಾಯ 11ಎಷ್ಟು ಗರ್ವದಿಂದ ದ್ವಿಜಗೆಕೊಟ್ಟೊ ಭಾಷೆ ಶಪಥ ಮಾಡಿನಷ್ಟವಾಯಿತಲ್ಲೊ ವಚನ ಅರ್ಜುನರಾಯ 12ಎಲ್ಲ ವ್ಯಾಪ್ತಿ ಎಂಬೊ ಮಾತು ಎಲ್ಲಿದೆಯೊ ಈಗನಿನ್ನವಲ್ಲಭೆಯ ಒಯ್ದನ್ಹ್ಯಾಂಗೊ ಶ್ರೀಕೃಷ್ಣರಾಯ 13ಧೀರಾಧೀರರೆಲ್ಲ ಕೂಡಿ ವೀರನೆಂದು ಪೊಗಳಲುನಾರಿಯ ಸೀರೆಯ ಹ್ಯಾಂಗ ಸೆಳಿದಾನಯ್ಯ ಅರ್ಜುನರಾಯ 14ಶಂಭರಾರಿ ಪಿತನೆ ನಿನ್ನಜಂಬವೆಷ್ಟು ಕದ್ದುಕೊಂಡುತಿಂಬೋದಕ್ಕೆ ಜಾಣನಯ್ಯ ಶ್ರೀಕೃಷ್ಣರಾಯ 15ಎಷ್ಟುಗರುವ ನಿಮ್ಮೆಲ್ಲರ ಅಷ್ಟಗುಣವ ನಾನ ಬಲ್ಲೆಹೊಟ್ಟೆಬಾಕ ಭೀಮನಯ್ಯ ಅರ್ಜುನರಾಯ 16ಬತ್ತಲೆಂದು ನಗಲು ಜನರು ಮತ್ತೆನಾಚಿ ಕುದುರೆಯನ್ನುಹತ್ತಿಕೊಂಡು ಓಡಿದೆಲ್ಲೊ ಶ್ರೀ ಕೃಷ್ಣರಾಯ 17ವ್ಯರ್ಥಕೈಪ ಧರಿಸಿ ಕನ್ಯೆ ಎತ್ತಿಕೊಂಡು ಒಯ್ದಮ್ಯಾಲೆಹತ್ತು ಜನರು ನಕ್ಕರಲ್ಲೊ ಅರ್ಜುನರಾಯ 18ಕೃಷ್ಣಾರ್ಜುನರ ಈ ಸಂವಾದ ಸಂತುಷ್ಟನಾಗಿ ರಮಿ ಅರಸುಇಷ್ಟಾರ್ಥವ ಕೊಡಲಿ ನಮಗೆ ಶ್ರೀ ಕೃಷ್ಣರಾಯ 19
--------------
ಗಲಗಲಿಅವ್ವನವರು
ಓಡಿ ಬಾರಯ್ಯ ವೈಕುಂಠಪತಿ ನಿನ್ನನೋಡುವೆ ಮನದಣಿಯೆ ಪನೋಡಿ ಮುದ್ದಾಡಿ ಮಾತಾಡಿ ಸಂತೋಷದಿಪಾಡಿ ಪೊಗಳುವೆನುಪರಮಪುರುಷಹರಿಅ.ಪಕೆಂದಾವರೆಯಂತೆ ಪಾದಂಗಳೆರಡುಅಂದುಗೆಕಿರಿಗೆಜ್ಜೆ ಘಲುಘಲುರೆನುತ ||ಚೆಂದದಿ ಪೀತಾಂಬರವಲೆದಾಡುತಕುಂದಣದುಡುದಾರ ಝಣ ಝಣ ಝಣಕುತ 1ಕೋಟಿ ಸೂರ್ಯ ಪ್ರಕಾಶಗಳಿಂದಲಿ ಲ-ಲಾಟದಲ್ಲಿ ಇಟ್ಟ ಕಸ್ತುರಿ ತಿಲಕ ||ಕೂಟದ ಗೋಪಾಂಗನೆಯರ ಕೂಡೆಆಟ ಸಾಕು ಬಾರೋ ಅರವಿಂದ ನಯನ 2ಕಿರುತುರುಬಿನ ಮೇಲೆ ಒಲೆವುತಿರುತಿರೆಮುರುಗು ಮಲ್ಲಿಗೆ ಜಾಜಿ ಶ್ರೀತುಳಸೀ ||ಕರದಲಿ ಪಿಡಿದಾ ಪೊಂಗೊಳಲೂದುತತಿರಿತಿಂದು ಬಾಹೋ ಸಡಗರ ಸಾಕೋ 3ಎಣ್ಣೂರಿಗತಿರಸ ಸದಮಲ ದೋಸೆ ಬೆಣ್ಣೆಅಣ್ಣಯ್ಯ ನಿನಗೆ ಕೊಡುವೆನೋ ಬಾರೋ ||ಕಣ್ಣಮುಚ್ಚಿ ಗೋಪಾಂಗನೆಯರ ಕೂಡಿ |ಬೆಣ್ಣೆಯ ಮೆಲುವುದು ಉಚಿತವೆ ಸಾಕೋ 4ಮಂಗಳಾತ್ಮಕ ಮೋಹನಾಕಾರನೆಸಂಗೀತಲೋಲಸದ್ಗುಣ ಶೀಲ ||ಮಂಗಳೆ ಲಕುಮಿಯ ಸಹಿತವಾಗಿ ಬಂದುಕಂಗಳ ಮುಂದಾಡೊಪುರಂದರವಿಠಲ5
--------------
ಪುರಂದರದಾಸರು