ಒಟ್ಟು 475 ಕಡೆಗಳಲ್ಲಿ , 83 ದಾಸರು , 427 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶ್ರೀ ವೆಂಕಟೇಶ ಸ್ತೋತ್ರ(2) ವೈಕುಂಠವಾಸ ಹರಿ ಶ್ರೀ ಕಂಠನುತ ನಿನ್ನ ಸಾಕಾರರೂಪ ತೋರೋ ಯಾಕಿಂತು ನಿರ್ದಯವು ಈ ಕುಮತಿ ಮೇಲಿನ್ನು ನೀ ಕರುಣಿಸೀಗ ಕಾಯೊ 1 ವಾಕು ಲಾಲಿಸುತ ನೀ ಬೇಕೆಂದು ಬೆಟ್ಟದಲ್ಲಿ ಲೋಕದ ಜನರನ್ನು ಸಾಕುತ್ತ ನಿಂತಿರುವ ಆಕಳ ಕಾಯ್ದ ದೇವಾ 2 ಕನಸು ಮನಸೀನಲ್ಲಿ ವನಜಾಕ್ಷ ನಿನ ದಿವ್ಯ ಘನರೂಪವನ್ನೆ ತೋರೊ ಅನುರಾಗದಿಂದ ಸಲಹೋ 3 ವೆಂಕಟಗಿರಿನಿಲಯ ಮಂಕುಮತಿಯ ಬಿಡಿಸಿ ಸಂಕಟಗಳನೆ ಹರಿಸೊ ಶಂಖಚಕ್ರಾಂಕಿತನೆ ಪಂಕಜಪಾದ ಮನ ಪಂಕಜದೊಳಗೆ ತೋರೊ 4 ಪದ್ಮಾಕ್ಷ ಪದ್ಮಮುಖ ಪದ್ಮಾನಾಭನೆ ನಿನ್ನ ಪದ್ಮ ಪಾದವೆ ಗತಿಯೊ ಪದ್ಮಾವತಿಪ್ರಿಯ ಪದ್ಮಹಸ್ತಾನೆ ನಿನ್ನ ಪದ್ಮಾದಿ ನಿನ್ನ ತೋರೊ 5 ಸೃಷ್ಟಿ ಸ್ಥಿತಿ ಲಯಕೆ ಕರ್ತಾನೆ ಎನ್ನ ಮನ ದಿಷ್ಟಾವ ಸಲಿಸಿ ಕಾಯೋ ಥಟ್ಟಾನೆ ಮನಕೆ ತೋರೊ 6 ತತ್ವಾಧಿಪತಿಗಳೊಳು ವ್ಯಾಪ್ತಾನಾಗಿರುತಿರ್ದು ಕರ್ಮ ಮಾಳ್ಪೆ ಎತ್ತಾ ನೋಡಿದರು ಸುರರರ್ಥಿಯಿಂ ಸ್ತುತಿಸುವರೊ ನಿತ್ಯಾಮೂರುತಿ ನೀ ಎಂದೂ 7 ನಿಗಮಾದಿ ವೇದದಿಂ ಬಗೆಬಾಗೆ ಸ್ತುತಿಸಿ ಕೊಂ ಬಗಣೀತ ಮಹಿಮ ದೇವಾ ಖಗರಾಜ ವಾಹನನೆ ನಗೆಮೊಗದ ಚೆಲುವ ಪ ನ್ನಗಶಾಯಿ ಸಲಹೊ ಎನ್ನ 8 ನಿತ್ಯಾ ತೃಪ್ತಾನೆ ಹರಿ ನಿತ್ಯಾ ಪ್ರಾಪ್ತಾನೆ ಸಿರಿ ನಿತ್ಯಾ ವಿಯೊಗಿ ದೇವಾ ನಿತ್ಯ ನಿರ್ವೀಕಾರ ನಿತ್ಯಾ ಕಲ್ಯಾಣಪೂರ್ಣ 9 ಜೀವಾಂತರಾತ್ಮಕನೆ ಜೀವಾ ನಿಯಾಮಕನೆ ಜೀವಾದಿ ಭಿನ್ನ ದೇವಾ ಜೀವೇಶ ಜೀವರಿಂ ಸೇವ್ಯಾನೆಂದೆನಿಪ್ಪೆ ಜೀವಾರ ಕರ್ಮಕರ್ತ 10 ಸತ್ವಾರಜೋತಮದಿ ನಿತ್ಯಾ ಸೃಷ್ಟೀಸುತಲಿ ವ್ಯಾಪ್ತಾನಾಗಿರುವೆ ಜಗದಿ ಸತ್ಯಾಮೂರುತಿ ಜಗತ್ಕರ್ತಾ ಕಾರಣರೂಪ ಸತ್ಯಾಧಿಪತಿಯ ವಂದ್ಯ 11 ಆದಿಯಲಿ ಅಸುರ ತಾ ವೇದ ಕದ್ದೊಯ್ಯೆ ಛೇದೀಸಿ ತಮನ ಕೊಂದೂ ನಿಗಮ ತಂದಾದರದಿ ಸುತಗಿತ್ತೆ ಶ್ರೀಧರನೆ ಮಚ್ಛರೂಪಿ 12 ಸುರರೆಲ್ಲ ಕಂಗೆಟ್ಟು ಮೊರೆ ಇಡಲು ನಿನ್ನ ಬಲು ಕರುಣೆಯಿಂದಾಲಿ ಬಂದೂ ಗಿರಿ ಎತ್ತಿ ಅಮೃತವ ಸುರರೀಗೆ ತಂದಿತ್ತ ವರ ಕೂರ್ಮರೂಪಿ ಸಲಹೊ 13 ಆದಿಹಿರಣ್ಯಾಕ್ಷ ಮೇದಿನಿಯ ಕದ್ದೊಯ್ಯೆ ಛೇದೀಸಿ ಅವನ ಕಾಯಾ ಆದರಿಸಿ ಧರಣಿಯನು ಆ ದಿವಿಜರಿಗೆ ಇತ್ತೆ ವರಾಹ ಕಾಯೊ 14 ದುಷ್ಟಾದಾನವ ಸುತನು ಅಟ್ಟೂಳಿಪಡಿಸುತಿರೆ ಸೃಷ್ಟೀಶ ಪೊರೆಯೊ ಎನಲು ಪುಟ್ಟಿ ನೀ ಸ್ಥಂಭದಲಿ ಕುಟ್ಟೀ ಅಸುರನನ್ನು ಪುಟ್ಟಾನ ಕಾಯ್ದ ನೃಹರಿ15 ಇಂದ್ರಾಲೋಕಾವನು ಬಲೀಂದ್ರಾನಾಕ್ರಮಿಸಿರಲು ಪೇಂದ್ರಾ ನೀನಾಗಿ ಬಂದೂ ಇಂದ್ರಾರಿಗೇಸುತಲ ಚಂದಾದಿತ್ತು ನೀ ನಿಂದ್ರಾಗೆ ಸ್ವರ್ಗವಿತ್ತೆ 16 ಪಿತನ ಆಜ್ಞೇಗೆ ಪತಿವ್ರತೆ ಮಾತೆ ಶಿರವಳಿದು ಮತಿವಂತನೆನಿಸಿ ಮೆರೆದೇ ಖತಿಯಿಂದ ಕ್ಷತ್ರಿಕುಲ ಹತಗೈಸಿ ಮೆರೆದ ಅ ಪ್ರತಿ ಭಾರ್ಗವಾನೆ ಕಾಯೋ 17 ಸೇತು ಬಂಧನಗೈದು ಖ್ಯಾತ ರಾವಣನೊರಸಿ ಸೀತೇಯ ತಂದ ರಾಮಾ ಮಾತೆ ವಚನಕಾಯ್ದೆ ವಾತಾತ್ಮಜನ ಪೊರೆದೆ ಪ್ರೀತಿಯಿಂದೆನ್ನ ಕಾಯೊ 18 ವನದಲ್ಲಿ ನಿಂತು ಘನಧ್ವನಿಯಿಂದ ಕೊಳಲೂದಿ ವನಜಾಕ್ಷಿಯರನೆ ಕಾಯ್ದೆ ಮುನಿವಂದ್ಯ ಶ್ರೀ ಕೃಷ್ಣ ಮುನಿನಾರದಗೊಲಿದೆ ಸನಕಾದಿ ವಂದ್ಯ ಸಲಹೋ 19 ತ್ರಿಪುರಾಲಲನೆಯಾರ ವ್ರತಭಂಗವನೆಗೈದು ನಿಪುಣಾನೆಂದೆನಿಸಿ ಮೆರೆದೆ ಬುದ್ಧ ತ್ರಿಪುರಾರಿ ವಂದ್ಯ ಹರಿ ಕೃಪೆಮಾಡಿ ಸಲಹೊ ಎನ್ನ 20 ಕಲಿಬಾಧೆ ವೆಗ್ಗಳಿಸೆ ಛಲದಿಂದ ದುಷ್ಟರನು ತಲೆಯಾ ಚೆಂಡಾಡಿ ಮೆರೆದೆ ಬಲವಂತ ಹಯವೇರಿ ಕಲಿದೈತ್ಯರನು ಕೊಂದೆ ನಳಿನಾಕ್ಷ ಕಲ್ಕಿ ಕಾಯೊ 21 ಭಕ್ತಾವತ್ಸಲನಾಗಿ ಮುಕ್ತಾಜೀವರ ಕಾಯ್ವೆ ಶಕ್ತಾವಂತನೆ ಸ್ವಾಮಿ ಮುಕ್ತೀದಾಯಕ ನೀನೆ ಮುಕ್ತಾಶ್ರಯನು ನೀನೆ ಮುಕ್ತಾರಿಗೊಡೆಯ ನೀನೆ 22 ಬಂದೇಯೊ ಭಕ್ತರನು ಚಂದಾದಿಂದಲಿ ಪೊರೆಯ ಬೇ ಕೆಂದೂ ನೀ ನಾಗಗಿರಿಗೆ ನಂದಾಕಂದಾನೆ ಹರಿ ಇಂದಿರೆಯರಸ ಬಹು ಸುಂದಾರ ಶ್ರೀನಿವಾಸ23 ಹಿಂದೇ ಮಾಡೀದ ಪುಣ್ಯ ಬಂದೂ ತಾ ಒದಗಿಗೋ ವಿಂದಾನ ಗಿರಿಯ ಯಾತ್ರೇ ಸಂದೀಸೆ ವೇಂಕಟನ ಸಂದಾರುಶನದಿಂದ ದುರಿತ 24 ಜಯ ಗುರುಗಳಂತರ್ಯ ಜಯ ನಾಗಶಯನ ಹರೆ ಜಯ ವೆಂಕಟಾದ್ರಿನಿಲಯ ಜಯ ತಂದೆ ಮುದ್ದುಮೋಹನ ದಾಸವರದ ಜಯ ಪದ್ಮನಾಭ ಜಯ ಭೋ 25 ಸ್ವಾಮೀ ಕಾಸಾರದತಿ ಪ್ರೇಮಾದಿ ನೆಲಸಿ ಸುರ ಕಾಮೀತವೀವ ಪ್ರಭುವೇ ಸ್ವಾಮಿ ಶ್ರೀ ವೇಂಕಟನೆ ನೇಮಾದಿಂದಲಿ ಭಜಿಪೆ ಕಾಮೀತವೀಯೊ ದೇವಾ 26 ಇಷ್ಟೂ ಬಿನ್ನಪವನ್ನು ಕೃಷ್ಣಾಮೂರುತಿ ಕೇಳಿ ಕಷ್ಟಾವ ಬಿಡಿಸಿ ಕಾಯೋ ದಿಟ್ಟಾ ಶ್ರೀ ಗೋಪಾಲಕೃಷ್ಣವಿಠ್ಠಾಲಾನೆ ಶ್ರೇಷ್ಠಾ ಶ್ರೀ ಗುರುವರದನೇ 27
--------------
ಅಂಬಾಬಾಯಿ
ಶ್ರೀ ವೆಂಕಟೇಶ ಸ್ತೋತ್ರ(2) ವೈಕುಂಠವಾಸ ಹರಿ ಶ್ರೀ ಕಂಠನುತ ನಿನ್ನ ಸಾಕಾರರೂಪ ತೋರೋ ಯಾಕಿಂತು ನಿರ್ದಯವು ಈ ಕುಮತಿ ಮೇಲಿನ್ನು ನೀ ಕರುಣಿಸೀಗ ಕಾಯೊ 1 ವಾಕು ಲಾಲಿಸುತ ನೀ ಬೇಕೆಂದು ಬೆಟ್ಟದಲ್ಲಿ ಲೋಕದ ಜನರನ್ನು ಸಾಕುತ್ತ ನಿಂತಿರುವ ಆಕಳ ಕಾಯ್ದ ದೇವಾ 2 ಕನಸು ಮನಸೀನಲ್ಲಿ ವನಜಾಕ್ಷ ನಿನ ದಿವ್ಯ ಘನರೂಪವನ್ನೆ ತೋರೊ ಅನುರಾಗದಿಂದ ಸಲಹೋ 3 ವೆಂಕಟಗಿರಿನಿಲಯ ಮಂಕುಮತಿಯ ಬಿಡಿಸಿ ಸಂಕಟಗಳನೆ ಹರಿಸೊ ಶಂಖಚಕ್ರಾಂಕಿತನೆ ಪಂಕಜಪಾದ ಮನ ಪಂಕಜದೊಳಗೆ ತೋರೊ 4 ಪದ್ಮಾಕ್ಷ ಪದ್ಮಮುಖ ಪದ್ಮಾನಾಭನೆ ನಿನ್ನ ಪದ್ಮ ಪಾದವೆ ಗತಿಯೊ ಪದ್ಮಾವತಿಪ್ರಿಯ ಪದ್ಮಹಸ್ತಾನೆ ನಿನ್ನ ಪದ್ಮಾದಿ ನಿನ್ನ ತೋರೊ 5 ಸೃಷ್ಟಿ ಸ್ಥಿತಿ ಲಯಕೆ ಕರ್ತಾನೆ ಎನ್ನ ಮನ ದಿಷ್ಟಾವ ಸಲಿಸಿ ಕಾಯೋ ಥಟ್ಟಾನೆ ಮನಕೆ ತೋರೊ 6 ತತ್ವಾಧಿಪತಿಗಳೊಳು ವ್ಯಾಪ್ತಾನಾಗಿರುತಿರ್ದು ಕರ್ಮ ಮಾಳ್ಪೆ ಎತ್ತಾ ನೋಡಿದರು ಸುರರರ್ಥಿಯಿಂ ಸ್ತುತಿಸುವರೊ ನಿತ್ಯಾಮೂರುತಿ ನೀ ಎಂದೂ 7 ನಿಗಮಾದಿ ವೇದದಿಂ ಬಗೆಬಾಗೆ ಸ್ತುತಿಸಿ ಕೊಂ ಬಗಣೀತ ಮಹಿಮ ದೇವಾ ಖಗರಾಜ ವಾಹನನೆ ನಗೆಮೊಗದ ಚೆಲುವ ಪ ನ್ನಗಶಾಯಿ ಸಲಹೊ ಎನ್ನ 8 ನಿತ್ಯಾ ತೃಪ್ತಾನೆ ಹರಿ ನಿತ್ಯಾ ಪ್ರಾಪ್ತಾನೆ ಸಿರಿ ನಿತ್ಯಾ ವಿಯೊಗಿ ದೇವಾ ನಿತ್ಯ ನಿರ್ವೀಕಾರ ನಿತ್ಯಾ ಕಲ್ಯಾಣಪೂರ್ಣ 9 ಜೀವಾಂತರಾತ್ಮಕನೆ ಜೀವಾ ನಿಯಾಮಕನೆ ಜೀವಾದಿ ಭಿನ್ನ ದೇವಾ ಜೀವೇಶ ಜೀವರಿಂ ಸೇವ್ಯಾನೆಂದೆನಿಪ್ಪೆ ಜೀವಾರ ಕರ್ಮಕರ್ತ 10 ಸತ್ವಾರಜೋತಮದಿ ನಿತ್ಯಾ ಸೃಷ್ಟೀಸುತಲಿ ವ್ಯಾಪ್ತಾನಾಗಿರುವೆ ಜಗದಿ ಸತ್ಯಾಮೂರುತಿ ಜಗತ್ಕರ್ತಾ ಕಾರಣರೂಪ ಸತ್ಯಾಧಿಪತಿಯ ವಂದ್ಯ 11 ಆದಿಯಲಿ ಅಸುರ ತಾ ವೇದ ಕದ್ದೊಯ್ಯೆ ಛೇದೀಸಿ ತಮನ ಕೊಂದೂ ನಿಗಮ ತಂದಾದರದಿ ಸುತಗಿತ್ತೆ ಶ್ರೀಧರನೆ ಮಚ್ಛರೂಪಿ 12 ಸುರರೆಲ್ಲ ಕಂಗೆಟ್ಟು ಮೊರೆ ಇಡಲು ನಿನ್ನ ಬಲು ಕರುಣೆಯಿಂದಾಲಿ ಬಂದೂ ಗಿರಿ ಎತ್ತಿ ಅಮೃತವ ಸುರರೀಗೆ ತಂದಿತ್ತ ವರ ಕೂರ್ಮರೂಪಿ ಸಲಹೊ 13 ಆದಿಹಿರಣ್ಯಾಕ್ಷ ಮೇದಿನಿಯ ಕದ್ದೊಯ್ಯೆ ಛೇದೀಸಿ ಅವನ ಕಾಯಾ ಆದರಿಸಿ ಧರಣಿಯನು ಆ ದಿವಿಜರಿಗೆ ಇತ್ತೆ ವರಾಹ ಕಾಯೊ 14 ದುಷ್ಟಾದಾನವ ಸುತನು ಅಟ್ಟೂಳಿಪಡಿಸುತಿರೆ ಸೃಷ್ಟೀಶ ಪೊರೆಯೊ ಎನಲು ಪುಟ್ಟಿ ನೀ ಸ್ಥಂಭದಲಿ ಕುಟ್ಟೀ ಅಸುರನನ್ನು ಪುಟ್ಟಾನ ಕಾಯ್ದ ನೃಹರಿ 15 ಇಂದ್ರಾಲೋಕಾವನು ಬಲೀಂದ್ರಾನಾಕ್ರಮಿಸಿರಲು ಪೇಂದ್ರಾ ನೀನಾಗಿ ಬಂದೂ ಇಂದ್ರಾರಿಗೇಸುತಲ ಚಂದಾದಿತ್ತು ನೀ ನಿಂದ್ರಾಗೆ ಸ್ವರ್ಗವಿತ್ತೆ 16 ಪಿತನ ಆಜ್ಞೇಗೆ ಪತಿವ್ರತೆ ಮಾತೆ ಶಿರವಳಿದು ಮತಿವಂತನೆನಿಸಿ ಮೆರೆದೇ ಖತಿಯಿಂದ ಕ್ಷತ್ರಿಕುಲ ಹತಗೈಸಿ ಮೆರೆದ ಅ ಪ್ರತಿ ಭಾರ್ಗವಾನೆ ಕಾಯೋ 17 ಸೇತು ಬಂಧನಗೈದು ಖ್ಯಾತ ರಾವಣನೊರಸಿ ಸೀತೇಯ ತಂದ ರಾಮಾ ಮಾತೆ ವಚನಕಾಯ್ದೆ ವಾತಾತ್ಮಜನ ಪೊರೆದೆ ಪ್ರೀತಿಯಿಂದೆನ್ನ ಕಾಯೊ 18 ವನದಲ್ಲಿ ನಿಂತು ಘನಧ್ವನಿಯಿಂದ ಕೊಳಲೂದಿ ವನಜಾಕ್ಷಿಯರನೆ ಕಾಯ್ದೆ ಮುನಿವಂದ್ಯ ಶ್ರೀ ಕೃಷ್ಣ ಮುನಿನಾರದಗೊಲಿದೆ ಸನಕಾದಿ ವಂದ್ಯ ಸಲಹೋ 19 ತ್ರಿಪುರಾಲಲನೆಯಾರ ವ್ರತಭಂಗವನೆಗೈದು ನಿಪುಣಾನೆಂದೆನಿಸಿ ಮೆರೆದೆ ಬುದ್ಧ ತ್ರಿಪುರಾರಿ ವಂದ್ಯ ಹರಿ ಕೃಪೆಮಾಡಿ ಸಲಹೊ ಎನ್ನ 20 ಕಲಿಬಾಧೆ ವೆಗ್ಗಳಿಸೆ ಛಲದಿಂದ ದುಷ್ಟರನು ತಲೆಯಾ ಚೆಂಡಾಡಿ ಮೆರೆದೆ ಬಲವಂತ ಹಯವೇರಿ ಕಲಿದೈತ್ಯರನು ಕೊಂದೆ ನಳಿನಾಕ್ಷ ಕಲ್ಕಿ ಕಾಯೊ 21 ಭಕ್ತಾವತ್ಸಲನಾಗಿ ಮುಕ್ತಾಜೀವರ ಕಾಯ್ವೆ ಶಕ್ತಾವಂತನೆ ಸ್ವಾಮಿ ಮುಕ್ತೀದಾಯಕ ನೀನೆ ಮುಕ್ತಾಶ್ರಯನು ನೀನೆ ಮುಕ್ತಾರಿಗೊಡೆಯ ನೀನೆ 22 ಬಂದೇಯೊ ಭಕ್ತರನು ಚಂದಾದಿಂದಲಿ ಪೊರೆಯ ಬೇ ಕೆಂದೂ ನೀ ನಾಗಗಿರಿಗೆ ನಂದಾಕಂದಾನೆ ಹರಿ ಇಂದಿರೆಯರಸ ಬಹು ಸುಂದಾರ ಶ್ರೀನಿವಾಸ 23 ಹಿಂದೇ ಮಾಡೀದ ಪುಣ್ಯ ಬಂದೂ ತಾ ಒದಗಿಗೋ ವಿಂದಾನ ಗಿರಿಯ ಯಾತ್ರೇ ಸಂದೀಸೆ ವೇಂಕಟನ ಸಂದಾರುಶನದಿಂದ ದುರಿತ 24 ಜಯ ಗುರುಗಳಂತರ್ಯ ಜಯ ನಾಗಶಯನ ಹರೆ ಜಯ ವೆಂಕಟಾದ್ರಿನಿಲಯ ಜಯ ತಂದೆ ಮುದ್ದುಮೋಹನ ದಾಸವರದ ಜಯ ಪದ್ಮನಾಭ ಜಯ ಭೋ 25 ಸ್ವಾಮೀ ಕಾಸಾರದತಿ ಪ್ರೇಮಾದಿ ನೆಲಸಿ ಸುರ ಕಾಮೀತವೀವ ಪ್ರಭುವೇ ಸ್ವಾಮಿ ಶ್ರೀ ವೇಂಕಟನೆ ನೇಮಾದಿಂದಲಿ ಭಜಿಪೆ ಕಾಮೀತವೀಯೊ ದೇವಾ 26 ಇಷ್ಟೂ ಬಿನ್ನಪವನ್ನು ಕೃಷ್ಣಾಮೂರುತಿ ಕೇಳಿ ಕಷ್ಟಾವ ಬಿಡಿಸಿ ಕಾಯೋ ದಿಟ್ಟಾ ಶ್ರೀ ಗೋಪಾಲಕೃಷ್ಣವಿಠ್ಠಾಲಾನೆ ಶ್ರೇಷ್ಠಾ ಶ್ರೀ ಗುರುವರದನೇ 27 ಸೀತಾಪತಿವಿಠಲ ದಾಸಳ ನಿರ್ಯಾಣ ಪದ 266 ಮಾಧವನಾ ಪುರ ಸೇರಲು ಬೇಗ ಪ. ಪುಟ್ಟಿದಾರಭ್ಯದಿ ನಿಷ್ಟೆನೇಮದೊಳಿದ್ದು ಕಷ್ಟಪರಂಪರೆ ಸಹಿಸುತ ಜಗದಿ ಹರಿಯ ಕರುಣದಿ ಗುರುಕೃಪೆ ಪಡೆದಿ 1 ಹಿರಿಯೂರೆನ್ನುವ ಪುರ ವರ ವೇದಾವತಿ ತೀರ ಪರಮ ಸಾತ್ವಿಕರಲ್ಲಿ ಜನುಮ ತಳೆದಿ ತುಳಸಿಯ ವರದಿ ಮುದ್ದಿನಿಂ ಬೆಳೆದಿ 2 ಶಿಷ್ಟ ಸಂಪ್ರದಾಯ ಕಟ್ಟಿನೊಳಗೆ ನಿನ ಗಷ್ಟಮ ವರುಷದಿ ಮದುವೆಯ ಮಾಡಿ ಹರುಷವಗೂಡಿ ಹರಿಯ ಕೊಂಡಾಡಿ 3 ಸತಿ ರುಕ್ಮಿಣೀಬಾಯಿ ಹೆಸರಿನಿಂ ಬಾಳ್ವೆಯ ಬಹು ಅಲ್ಪಕಾಲ ಕೊಟ್ಟನೆ ಸಿರಿಲೋಲ ಮುಸುಕಿತು ಮಾಯಜಾಲ 4 ಸಂಸಾರ ಕೈಕೊಂಡು ವಂಶಕೊಬ್ಬನ ಪಡೆದು ಕಂಸಾರಿ ಕರುಣದಿ ಇರುತಿರೆ ನೀನು ವಿಧಿ ತಂದೊಡ್ಡಿದನು 5 ಎರಡು ವರ್ಷದ ಮಗುವ ಕರದಲ್ಲಿ ಕೈಕೊಂಡು ಪರಿಪರಿ ಕಷ್ಟದಿ ಶಿಶುವ ಬೆಳೆಸಿದೆ ವಿದ್ಯೆ ಕಲಿಸಿದೆ ಪುತ್ರಗ್ಹರಸಿದೆ 6 ಒಬ್ಬ ಆ ಮಗನರ್ಥಿ ಸಂಸಾರವನೆ ಕಂಡು ಉಬ್ಬಿ ಹರುಷಾದಲ್ಲಿ ಇರುತಿರೆ ನೀನು ಮೊಮ್ಮಕ್ಕಳನು ಪಡೆದೆ ನಾಲ್ವರನು 7 ಘಟಿಸುತ ಸ್ವಪ್ನದಿ ಸೇವೆಗೈಯ್ಯೆಂದು ಅಭಯವನಂದು ಕೊಡಲು ದಯಸಿಂಧು 8 ಮರುದಿನ ಮನೆಯಲ್ಲೆ ಭರದಿ ಸೇವೆಯ ಕೊಂಡು ಹರಿವಾಯುಗಳನಿಟ್ಟು ಸುತ್ತುವರಿಯುತ್ತ ಎಡವಿ ಬೀಳುತ್ತ ಪ್ರದಕ್ಷಿಣೆ ಬರುತಾ 9 ಒಲಿದು ಆ ಭಕ್ತಿಗೆ ವರನೇತ್ರವಿತ್ತನು ನಳಿನನಾಭನ ಭಕ್ತ ಘಟಿಕಾಚಲನಿಲಯ ಭಾರತಿಪ್ರೀಯ ದಿವಿಜರ ಒಡೆಯ 10 ಭಕ್ತಿ ವಿರಕ್ತಿ ಜ್ಞಾನವು ಚಿತ್ತದಿ ಮೂಡಿ ಸೋತ್ತಮರಾದ ಶ್ರೀ ವಿಬುಧರ ದಯದಿ ಮೋಕ್ಷಸಾಧನದಿ ದಿನಗಳ ಕಳೆದಿ 11 ಶ್ರವಣ ಕೀರ್ತನ ಸ್ಮರಣೆ ಮನನಾದಿಗಳನೆಲ್ಲ ತವಕದಿ ಕೈಕೊಂಡು ಮೋದದಿ ಮೆರೆದಿ ಕಷ್ಟವ ಮೆರೆದಿ ಹರಿಗುರು ದಯದಿ 12 ಪ್ರಥಮ ಯಾಮದಲೆದ್ದು ಜಿತಮನದಿಂದ ಶ್ರೀ ಪತಿಯ ಸ್ತೋತ್ರಗಳನ್ನು ವದನದಿ ಸತತ ಪರಿಯಂತ 13 ಉಚ್ಛಸ್ವರದಿ ನೀನು ಪಾಡಿದ್ಹಾಡುಗಳಿಂದು ಅಚ್ಚಳಿಯದೆ ನಮ್ಮ ಸ್ಮರಣೆಯೊಳ್ನಿಂತು ಹರುಷವನಾಂತು ಮರೆಯುವುದೆಂತು 14 ವೃದ್ಧಾಪ್ಯ ತಲೆದೋರೆ ಇದ್ದೊಬ್ಬ ಪುತ್ರನು ಪದ್ಮನಾಭನ ಪುರ ಸೇರಿ ನಿನ್ನಗಲಿ ದುಃಖದಿ ಬಳಲಿ ತೊಳಲಿದೆ ಬಳಲಿ 15 ಪೌತ್ರರಿಬ್ಬರು ನಿನ್ನ ಹೆತ್ತಮ್ಮನಂದದಿ ಚಿತ್ತದಿ ತಿಳಿದಿನ್ನು ಸಲಹುತ್ತಿರಲು ಹರಿದಯ ಬರಲು ದುಃಖ ಮರೆಯಲು 16 ಕಲ್ಯಾಣನಗರದಿ ಕಿರಿಯ ಮೊಮ್ಮಗನಿರೆ ಆಹ್ಲಾದದಿಂದ ನೀನವನಲ್ಲಿ ಇರಲು ಸದ್ಗುರು ಬರಲು ಜ್ಞಾನವೆರೆಯಲು 17 ಹರಿದಾಸಕೂಟದ ವರ ಅಂಕಿತವ ಕೊಂಡು ಗುರುಕರುಣವ ಪೊಂದಿ ನೀ ನಮಗೆಲ್ಲ ಸನ್ಮಾರ್ಗಕ್ಕೆಲ್ಲ ಮೊದಲಾದೆಯಲ್ಲ 18 ಶ್ರೀ ತಂದೆ ಮುದ್ದುಮೋಹನದಾಸರ ದಯದಿ ಸೀತಾಪತಿವಿಠ್ಠಲನ್ನ ಒಲಿಸಿದೆ ಧ್ಯಾನದೋಳ್ತಂದೆ ಆನಂದಪಡೆದೆ 19 ಕಂಚಿ ಕಾಳಹಸ್ತಿ ಶ್ರೀ ರಂಗಯಾತ್ರೆಯ ಸಂಚಿಂತನೇಯಿಂದ ಗೈದೆಯೆ ನೀನು ಗಳಿಸಿದೆ ಇನ್ನು ಭಕುತಿಯ ಪೊನ್ನು 20 ಉಡುಪಿ ಮಂತ್ರಾಲಯ ಸೇತು ರಾಮೇಶ್ವರ ಕಡು ಭಕ್ತಿಯಲಿ ತಿರುಪತಿ ಕ್ಷೇತ್ರ ಚರಿಸಿ ಕಷ್ಟವ ಸಹಿಸಿ ಶ್ರೀ ಹರಿಗೆ ಅರ್ಪಿಸಿ 21 ಕಡುಕೃಪೆಯಿಂದಂದು ಕಣ್ಣನ್ನೆ ಕೊಟ್ಟಂತ ಮೃಡಪಿತ ಘಟಿಕಾಚಲೇಶನ್ನ ಕೂಡಿ ಕಣ್ತುಂಬ ನೋಡಿ ತನುವನೀಡಾಡಿ 22 ಅಂತರಂಗದ ಬಿಂಬ ಸರ್ವಾಂತರ್ಯಾಮಿ ಎಂ ತೆಂಬಂಥ ಚಿಂತನೆ ಸಂತತಗೈದೆ ಅಭಿಮಾನ ತೊರೆದೆ ದ್ವಂದ್ವ ಸಹಿಸಿದೆ 23 ವ್ರತನೇಮ ಜಪತಪ ಸತತದಿಗೈಯ್ಯುತ್ತ ಕ್ಷಿತಿವಾರ್ತೆಗೆಳಸಾದೆ ಮನವನ್ನೆ ಸೆಳೆದು ಹರಿಪಾದಕ್ಕೆರದು ಹಿತವನ್ನೆ ಮರೆದು 24 ಭಾಗವತಾದಿ ಸಚ್ಛಾಶ್ತ್ರ ಶ್ರವಣಗೈದು ಜಾಗ್ರತಳಾದಿ ಭೂಸುರರ ಸೇವೆಯಲಿ ಸೂಕ್ಷ್ಮಧರ್ಮದಲಿ ಪುಣ್ಯಗಳಿಸುತಲಿ 25 ಸತತಬಿಂಬಕ್ರಿಯ ವ್ರತವಂದೆ ಕೈಕೊಂಡು ಜತನದಿ ಮರೆಯದೆ ಪ್ರತಿಕಾರ್ಯದಲ್ಲಿ ಅರ್ಪಿಸಿ ಹರಿಯಲ್ಲಿ ಇದ್ದೆ ಮೋದದಲಿ 26 ಮುಖ್ಯಪ್ರಾಣನ ದಯ ಮುಖ್ಯಮಾಡುತ ಇನ್ನು ಅಕ್ಕರೆ ಭಕ್ತಿಯ ತೋರಿದೆ ನೀನು ಬೆನ್ನು ಬಿಡದವನು ನಿನ್ನ ಸಲಹಿದನು 27 ಭಾರತಿಪತಿ ಮುಖ್ಯಪ್ರಾಣಾಂತರ್ಗತನೆಂಬ ವಾರುತಿ ಇಲ್ಲದ ವಚನವೆ ಇಲ್ಲಾ ನಿನ್ನ ಈ ಸೊಲ್ಲ ಮರೆಯಲೊಶವಲ್ಲ 28 ಶ್ರೀ ರಾಮಚಂದ್ರನ ಆರಾಧನೆಯಗೈದು ಸಾರತತ್ವವ ತಿಳಿದು ಸಾಧಿಸಿ ಪಥವ ಸಹಸ್ರಾರು ಜಪವ ಗೈದೆ ತಪವ 29 ನೀ ಹಾಡಿದ ಸ್ತೋತ್ರ ನಿನ್ನ ಸನ್ಮಾರ್ಗವ ನನ್ನೆಯಿಂದಲಿ ಎರೆದೆ ಹೆಣ್ಣು ಮಕ್ಕಳಿಗೆ ಸ್ಮರಿಸುವರೀಗೆ ಸತ್ಕೀರ್ತಿಯದಾಗೆ 30 ಹರಿ ಗುರು ವರತತ್ವ ದಿವಿಜರಭಿಮಾನಿಗಳ ನಿರುತದಿ ಚಿಂತಿಸಿ ಸಾಧನಗೈದೆ ಕಾಲವ ಕಳೆದೆ ಹರಿಪಾದಕ್ಕೆರೆದೆÀ 31 ಬಿಂಬಾನು ಸಂಧಾನ ಚತುರಳಾಗಿ ನೀನು ಸಂಭ್ರಮದಿಂದ ಶ್ರೀ ಮಧ್ವಶಾಸ್ತ್ರದಲಿ ಮನಸ ನೀಡುತಲಿ ಸುಖ ಸುರಿಯಲಿ 32 ಒದ್ದು ತಾಪತ್ರಯ ಸದ್ಗುರು ಕೃಪೆ ಪೊಂದಿ ಗೆದ್ದೆ ನೀ ಸುಲಭದಿ ಭವದ ಬಂಧನವ ಪಡೆದೆ ಹರಿ ದಯವ ಕೊಟ್ಟಿತೆ ಮುದವ 33 ಪೇಳಲೋಶವೆ ಹೇ ದಯಾಳು ನಿನ್ನಯ ಗುಣ ಬಾಳಿದೆ ಧರೆಯೊಳು ತೊಂಬತ್ತೈದೊರುಷ ವೃದ್ಧಾಪ್ಯದೋಷ ನಿನಗಿಲ್ಲ ಲೇಶ 34 ಇಂದ್ರಿಯಂಗಳು ಎಲ್ಲ ಒಂದು ಕುಗ್ಗದೆ ಒಬ್ಬ ರಿಂದಲು ಸೇವೆಯ ಕೊಳದೆ ಲವಲವಿಕೆ ಯಿಂದಿರುವ ಬಯಕೆ ಸಲಿಸೀತೆ ಮನಕೆ 35 ಕಿರಿಯ ಮೊಮ್ಮೊಗ ರಮಾಕಾಂತನಲ್ಲಿರುತಿರೆ ಕರೆಹೇಳಿ ಕಳುಹಿದ ಹರಿ ತನ್ನ ಪುರಕೆ ಕ್ಲಿಪ್ತಕಾಲಕ್ಕೆ ಆಗೆ ಮನವರಿಕೆ 36
--------------
ಅಂಬಾಬಾಯಿ
ಶ್ರೀನಾಥ ಶ್ರೀನಾಥ ಶ್ರೀನಾಥ ಮೋಹಿನೀ ರೂಪ ತಾ ತಾಳಿದಾನೆ ಸುಕಲಾಪ ತಾನೋಡಿಸುವುದು ಹೃತ್ತಾಪ ವನಂಬೆನೆ ಹರಿಯ ಪ್ರತಾಪ ಪ ಬಂಗಾರದ ಲತೆಯಂತೆ ಬಳುಕುವಳು ಬಾಜು ಬಂದಿಗೆ ಗೊಂಡೆಗಳ ಕಟ್ಟಿಹಳು ಮುಂಗಾಲಿಲೆ ನಿರಿಗಿಗಳ ಚಿಮ್ಮುವಳು ಮೋಹನ ಮಾಲೆಗಳ ಕಟ್ಟಿಹಳು ಕುಂಭ ಕುಚದ ಭಾರಕ್ಕೆ ತಡಿಯಳೂ ತುದಿಬೆರಳಲಿ ಗಲ್ಲವನೊತ್ತಿಹಳು ಕೇಸರಿ ಗಂಧ ಹಚ್ಚಿಹಳು ಹೊಂಗ್ಯಾದಿಗೆ ಪೋಲುವ ಮೈಬಣ್ಣ ಹೊಮ್ಮಸದಲಿ ಹೋಲುವ ಈ ಹೆಣ್ಣು ಹಿಂಗಡೆಯಲಿ ವರ ಹೆರಳು ಭಂಗಾರ ಹಿಮ್ಮಡಿ ಬಡಿಯೋದು ಸರ್ಪಾಕಾರ ಭಂಗಿಸುವಳು ಬಹು ದೈತ್ಯರ ಹೃದಯ ಬಹು ವಿಲಾಸದಿ ತೋರ್ಪಳು ಸಖಿಯ ಅಂಗಜದರು ಗಂಧಕೆ ಅಳಿವೃಂದ ಆಡುತಲಿಗೆ ಝೇಂಕಾರಗಳಿಂದಾ ಸಂಗಡನೆರದ ಸುರಾಸುರರಿಂದ ಸತಿ ಚಲುವಿಂದಾ ಮಂಗಳಮುಖಿ ನಮ್ಮಂಗಳ ಮೋಹಿಸಿ ಭಂಗನ ಪಡಿಸುವಳೈ ತ್ರಿಜಗವ ಜಗಂಗಳ ಪಾಲಿಸುವಳು | ಮನ ಸಂಗಡ ಅಪಹರಿಸುವಳು | ಜಡ ಜಂಗಮಲಿಗೆ ಬಹು ಪ್ರೀತ್ಯಾಸ್ಪದಳು ಸಾರಂಗಿ | ಸಾರಂಗಿ | ಸಾರಂಗೀ ಸಾಂಬಮದ ಭಂಗಿ | ಬಹಳ ಸುಖಸಂಗಿ ಸುಂದರಿ ಲಲಿತಾಂಗಿ | ಮೋಹನಾಪಾಂಗೀ ಬಡು ಹೆಂಗಲ್ಲ ಈಕೆ ಬಹುಭಂಗ ಬಡುವಿರಿ ಜ್ವಾಕೆ || ಶ್ರೀನಾಥ || 1 ಕನ್ನಡಿಯಂದದಿ ಪೋಲುವ ಕಪೋಲ ಕರ್ಪೂರ ರಂಜಿತ ವರ ತಾಂಬೂಲ ಕಣ್ಣಿಗ್ಹಚ್ಚಿಹಳು ಕನಕದ ಕೋಲಾ ಕಾಮಿನಿಯಂದಡಿ ತೋರ್ಪಳು ಜಾಲಾ ಬಿನ್ನುಡಿ ಹಾಕಿದ ಚಂದ್ರದ ಕುಪ್ಪುಸ ಚಪಲಾಕ್ಷಿಯ ನೋಟದ ಬಲು ರಭಸಾ ಕರ್ಣಾಯತ ನೇತ್ರಗಳ ವುಲ್ಲಸಾ ವುನ್ನಂಕಾ ನಾಶಿಕದ ಬುಲಾಕು ವಜ್ರಮಯದ ವರಮಖರೆದ ಬೆಳಕು ಕರ್ಣದಿ ರತ್ನಖಚಿತ ತಟಾಂಕಾ ಕುಸುರು ಹಚ್ಚಿದ ಬಾಹುಲಿಗಳ ಬಿಂಕ ಸಣ್ಣ ನಡುವಿನೊಯ್ಯಾರದ ನಲ್ಲೆ ಸರಸಿಜನಾಭನ ಸೃಷ್ಟಿ ಇದಲ್ಲೆ ಬಣ್ಣಿಸಲಳವಲ್ಲವು ಸೌಂದರ್ಯ ಬಿಡಿಸುವುದು ಕೇಳ ಮುನಿಗಳ ಧೈರ್ಯ ಬೆಣ್ಣೆಯಂತೆ ಮೃದುವಾದ ಶರೀರ ಭಾಗ್ಯಹೀನರಿಗೆ ಇದು ಬಲುದೂರಾ ಕನ್ನೆ ಶಿರೋಮಣಿ | ಕಾಮನ ಅರಗಿಣಿ ಕೌಸ್ತುಭಮಣಿಗಳ ಹಾರೇ ಸುವರ್ಣವರ್ಣ ಸುಕುಮಾರೇ ಮೋಹನ್ನರಸನೆ ಗಂಭೀರೇ ಮೋಹನ್ನೆ ಮಧುರ ಮಧುರಾಧರ ಮಂಜುಳ ವಕುಜಲರೆ ಬಹೋಚ್ಚಧರೆ ಛÅಪ್ಪನ್ನ ಛಪ್ಪನ್ನ ದೇಶಗಳು ಚಲುವರಿದ್ದರೂ ಚಪಲಾಕ್ಷಿಗೆ ಸಮರಾರೇ ಗತ ಪುಣ್ಯದಿಂದ ಕೈಸೇರುವಳಲ್ಲದೇ ಕಾಮಾಂಧsÀರಿಗತಿ ದೂರೇ ಈ ಹೆಣ್ಣು | ಈ ಹೆಣ್ಣು | ಈ ಹೆಣ್ಣು ಸುರಾಸುರರನ್ನೆ ಮೋಹಿಸಳು ಚನ್ನ ಮನಕೆ ತರಳಿನ್ನ ಬಿಡು ವಿಷದ್ಹಣ್ಣು ಅಪೇಕ್ಷಿಸೆ ಮಣ್ಣು ಕೂಡಿಸುವಳು ತನ್ನ ಜನರಿಗಮೃತಾನ್ನ ಕೊಡುವಳು ಮಾನ್ಯಳು ಪರಮಸೋನ್ಯಳು | ಸುಗುಣ ಅರಣ್ಯ ವಿನಾಶೇ ಬ್ರಹ್ಮಾಂಡಜಾದ್ಯಂಗೀತೇ || ಶ್ರೀನಾಥ || 2 ಹುಡುಗಿ ನೋಡು ಹೊಸ ಪರಿಯಾಗಿಹಳು ಹದ ಮೀರಿದ ಯವ್ವನದಿ ಮೆರೆವಳು ಅರಳು ತುಂಬಿಹಳು ಮಂದಸ್ಮಿತದಲಿ ಮೋಹಿಸುತಿಹಳು ಬೆಡಗಿನಿಂ ನುಡಿಯ ಸವಿಯ ತೋರುವಳೂ || ಬಹು ವಿಧದಾಭರಣಗಳನ್ನಿಟ್ಟಹಳು ನಡಿಗಿಗಳಿಂದ ನಾಚುತ ಹಂಸ ನವಮಣಿ ಚಂದ್ರರ ಕೆಡಿಸಿತು | ನಂಬೆ ಜಡಿತ ಮುತ್ತಿನ ತಾಯಿತ ಕಠಾಣೀ ಜಗವನು ಮೋಹಿಸುವಳು ಸುಶ್ರೋಣೀ ಬಿಂಕದ ನುಡಿ ಸೊಬಗಿನ ಚಂದಾ ಅಡಗಿದವೆ ಪಿತಭೃಂಗಗಳಿಂದಾ ಹಿಡಗಿ ಮರಗಿ ಮಧ್ಯಶಮನ ಮರಗೀ ಕೇಸರಿ ಬಹು ಸೊರಗೀ ಉಡುಪತಿ ಕೋಟಿ ಪ್ರಭ ಧಿಕ್ಕಾರಾ ಉಲ್ಲಾಸದಿ ಮನ ಮುಖ ಚಂದಿರಾ ನಡಿಗಗಳಿಂದೆನೆ ರಾಜಿಸುತಿ ಹೋದೆ ನವರತ್ನದಯದೆ ಮಯದ ಫಣಿಕಟ್ಟು ಮೇಲ್ಪೊಡವಿವೊಳಗೆ ಪಡಿಗುಣಕ ಕಡಿಯಿಲ್ಲಾ ಸುಳ್ಳುನುಡಿಯಿಲ್ಲಾ ಯೆನ್ನೊಡೆಯಾ ಶ್ರೀ ವಿಜಯ ವಿಠ್ಠಲನಲ್ಲದೆ ಎಲ್ಲಿಂದ ಬಂದಳೋ ಕೆಳದೀ || ಶ್ರೀನಾಥ || 3
--------------
ವಿಜಯದಾಸ
ಶ್ರೀನಿವಾಸ ಪೂರಿಸಭಿಲಾಷ ಪ್ರಾಣ ಪಾಲೇಶ ಏನಿದು ಸಾವಕಾಶ ಪ. ಹಿಂದಿನ ಪ್ರಹ್ಲಾದ ಮೈಥಿಳ ಮತ್ತಜಾಮಿಗಳ ಭಾರತ ಕುಂಡಗೋಳ- ಗಾಂದಿನೀಸುತ ಧ್ರುವ ಪಾರ್ಶದಿ ಅಂಬರೀಷಾದಿ ಭಕ್ತರುಗಳಂತೆ ಎಂದೀ ಶ್ರುತಿ ಪುರಾಣಗಳ ಆದರೆ ನನ್ನನು ಬರಿದೆ ಇದು ರೀತಿಯೆ ನಿನಗೆ1 ಬಂದಡಿಗಡಿ ಇಡುತ ಸಾಮಜವಾಹನ ಬೇಡಿದಭೀಷ್ಟ ನೀಡಿದ ಬಳಿಕಾತನು ನುಡಿದ ಒಂದನಾದರು ಮನಕೆ ಅಭಯವನಿತ್ತು ಪೊರೆದೆ ನಾ ಮಾಡಿದಪರಾಧವು ಅತಿ ಸ್ವಲ್ಪವು ಅದಕೆಣೆಯಾಗದಿರಲು ಪಾಲಿಪರ ಕಾಂಬೆನೆಲ್ಲಿ 2 ಪಾರ್ಥಗೆ ಸಾರಥಿಯೆನಿಸುತ ರಥ ನಡಸುತ ಕುರುಸೇನೆಯೊಳಿರುತ ಗಾಂಗೇಯ ನಗುತ ಶೋಣಿತವ ಹರಿಸಲು ನಿಯಮದ ತೊರಿದೆ ಭಕ್ತವತ್ಸಲತೆಯ ತೋರಿದೆ ಸುಖವಾರಿದ ವೆಂಕಟಾದ್ರಿಯೊಳ್ಮೆರೆದೆ 3
--------------
ತುಪಾಕಿ ವೆಂಕಟರಮಣಾಚಾರ್ಯ
ಶ್ರೀನಿವಾಸದೇವರು ಬಾರಯ್ಯ ವೇಂಕಟ ಮನ್ಮನಕೆ ತ್ವರಿತದಿ ನಿಜನಾರೀಸಹಿತದಿ ಈ ಸಮಯಕೆ ಶರಣೆಂಬೆನು ಪದಯುಗಕೆ ಪ ಸಾರಿದ ನಿಜಶÀರಣನ ಈ ಭವಭÀವ ಘೋರಭಯವ ಪರಿಹÀರಿಸುವುದಕ್ಕೆಅ.ಪ ವ್ಯಕ್ತಾವ್ಯಕ್ತ ತ್ರಿಜಗದ್ವ್ಯಾಪ್ತಾ ದೋಷ ನಿರ್ಲಿಪ್ತಾ ಮುಕ್ತಾ ಮುಕ್ತ ಜೀವರ ಗಣದಾಪ್ತಾ ನೀ ಸರ್ವತ್ರದಿ ವ್ಯಾಪ್ತ ಭಕ್ತನ ಹೃದಯದಿ ವ್ಯಕ್ತನಾಗಿ ನಿಜ ಮುಕ್ತಿಪಥವ ತೋರೊ ಭಕ್ತಿಯನಿತ್ತು 1 ಕವಿಜನಗೇಯಾ ಆನಂದದಾಯಕ ನಿರ್ಜಿತಮಾಯಾ ಕಾಯಯ್ಯಾ ಜೀಯಾ ಆನತಜನಸನ್ಮಾನದ ಮನ್ಮನ ವನಜದಿ ನೀ ಸನ್ನಿಹಿತಾಗುವುದಕೆ 2 ಸೋಮಾಸುರನಾಮಕ ದೈತ್ಯನ ಕೊಂದೂ ವೇದವ ತಂದೂ ಕೂರ್ಮ ಕಿಟ ನರಹರಿ ರೂಪದಿ ನಿಂದೂ ವಾಮನನೆಂದೂ ರಾಮ ಭಾರ್ಗವ ಯದುಕುಲಸಾಗರ - ಸೋಮ ಬೌದ್ಧ ಕಲ್ಕಿ ಪ್ರೇಮದಿ ಮನಕೆ 3 ನಿಗಮಗೋಚರ ನಿತ್ಯಾನಂದಾ ಬಗೆಬಗೆ ಜನ್ಮವನೈದಿದೆ ಮುಕುಂದಾ ಮುಗಿವೆನೊ ಕರದಿಂದಾ ಅಗಣಿತ ಗುಣನಿಧಿ ಸುಗಮದಿ ಭವದ ಬಗೆಯನು ತಿಳಿಸೊ ನಗೆ ಮೊಗದಿ ಬಾ 4 ವಿಧಿಶಂಭುವಂದಿತ ಪದಯುಗಕಮಲಾ ನಿತ್ಯ ನಿರ್ಮಲಾ ಆಧಿಭೂತಾಧ್ಯಾತ್ಮಿಕತಾಪದ ಶಮಲಾ ನೀ ಮಾಡೆನ್ನನು ವಿಮಲಾ ಸದಯ ಸುಧಾಕರ ಹೃದಯದಿ ತವಪದ ಪದುಮ ಭಜಿಪೆ ನೀ ಮುದದಲಿ ಮನಕೆ5 ಸಾಸಿರನಾಮ ನತಜನಪ್ರೇಮಾ ಪೊರೆಯೋ ಶ್ರೀ ರಾಮಾ ಆಶೀ ಪೂರ್ತಿಸಿ ಮಾಡೆನ್ನಲಿ ಪ್ರೇಮಾ ಸುರಸಾರ್ವಭೌಮಾ ವಾಸಮಾಡಿ ಅಭಿಲಾಷೆಯ ಪೂರ್ತಿಸೊ ವಾಸುದೇವ ವಾರಾಸಿಜರಮಣಾ 6 ಶರಣಾಗತಜನಪರಿಪಾಲಾ ಕರುಣಾಲವಾಲಾ ಕರುಣಿಸೆನ್ನನು ಹೇ ಶಿರಿಲೋಲಾ ನಮಿತಜನಸುgಸಾಲ ಅಜ ಭವ ಸುರ ನಿಕರಾರ್ಚಿತಪದ ಸರಸಿಜಯುತ ನೀ ಸುರವರದೇವಾ 7 ಪನ್ನಗಗಿರಿ ನಿಜಕೃತವಾಸಾ ಪೊರೆ ಎನ್ನನು ಶ್ರೀಶಾ ಬಿನ್ನಪ ಮಾಳ್ಪೆನು ಹೇ ಶ್ರೀನಿವಾಸಾ ಕೊಡು ಎನಗೆ ಲೇಸಾ ಎನ್ನ ಸಲಹೋದಕೆ ಅನ್ಯರ ಕಾಣೆನೊ ಮನ್ನಿಸು ನೀನಾಪನ್ನಜನಸುಖದಾ 8 ಲಕ್ಷ್ಮೀನಾಯಕ ವರಪಕ್ಷಿಗಮನಾ ಅಕ್ಷಯ ಫಲವನ್ನ ರಕ್ಷಿಸಿ ಕಾಯ್ವದೋ ನೀ ಎನ್ನಾ ಲಕ್ಷ್ಮಣನಣ್ಣಾ ಕ - ಟಾಕ್ಷದಿ ಎನ್ನ ವೀಕ್ಷಿಸು ಕ್ಷಣ ಕ್ಷಣ..... 9 ಧರ್ಮಾರ್ಥಕಾಮಮೋಕ್ಷವ ನಾನೊಲ್ಲೇ ಕರ್ಮದ ಸುಳಿಯಲ್ಲೇ ಮರ್ಮವ ತಿಳಿಯದೆ ಬೀಳುವೆ ನಾನಲ್ಲೇ ನಿರ್ಮಿಸದಿರು ಎನ್ನಲ್ಲೇ ಕರ್ಮಭವದ ಮಹÀ ಮರ್ಮವ ತಿಳಿಸೀ ದುರ್ಮನ ಬಿಡಿಸೆಲೊ ಬೊಮ್ಮನ ತಾತಾ 10 ದಿಟ್ಟ ಗುರು ಜಗನ್ನಾಥವಿಠಲ ನಾನನಾಥಾ ಥಟ್ಟಾನೆ ನೀ ಎನ್ನನು ಕಾಯೋ ಶ್ರೀನಾಥಾ ಇಷ್ಟೇ ಎನಮನದರ್ಥ ಸೃಷ್ಟಿಯೊಳಗೆ ಬಹು ಭ್ರಷ್ಟರಸ್ತುತಿಸಿ ನಿ - ಕೃಷ್ಟನಾದೇನೋ ಶ್ರೇಷ್ಠ ಮೂರುತೀ 11
--------------
ಗುರುಜಗನ್ನಾಥದಾಸರು
ಶ್ರೀರಾಮ ಜಯರಾಮ ಜಯ ಜಯತು ರಾಮ ಶ್ರೀರಾಮ ಜಯರಾಮ ಜಯ ಜಯತು ರಾಮ ಪ ನಮೋ ರಾಮಚಂದ್ರ ಸದಾಪೂರ್ಣಾನಂದ ನಮೋ ಸುಗುಣ ಸಾಂದ್ರ ಕೌಸಲ್ಯಕಂದ ನಮೋ ರಾಘವೇಂದ್ರ ಸೀತಾ ಕುಮುದ ಚಂದ್ರ ನಮೋ ಅಜಭವೇಂದ್ರಾದ್ಯಖಿಲ ಸುರವಂದ್ಯ 1 ನಿನ್ನ ಉದಯದಿರವಿಯು ಉನ್ನತಿಯನೈದಿಹನು ಘನ್ನತೆಯ ಪೊಂದಿಹರು ಕೌಸಲ್ಯದಶರಥರು ನಿನ್ನ ಅನುಜರು ಜಗದಿ ಪರಮ ಪಾವನ್ನರು ನಿನ್ನರಸಿ ಶ್ರೀಸೀತೆ ತ್ರೈಲೋಕ್ಯ ಮಾತೆ 2 ನಿನ್ನ ಕರುಣದಿ ಹನುಮ ಬ್ರಹ್ಮತ್ವ ವೈದಿದನು ನಿನ್ನ ನಾಮದಿ ವ್ಯಾಧ ವಾಲ್ಮೀಕನಾದ ನಿನ್ನ ಪದರಜ ಸೋಂಕಿ ಶಿಲೆಯಬಲೆಯಾದುದು ನಿನ್ನ ಪ್ರೇರಣೆಯಿಂದ ಪ್ರಣವೆ ಜ್ವಾಲಾಯಿತು 3 ನಿನ್ನ ಪ್ರೇಮದಿ ಶಬರಿ ಮುನ್ನ ಸವಿನೋಡಿ ಫಲ ನಿನ್ನ ಪದಕರ್ಪಿಸಲು ಘನಪದವಿಯಿತ್ತೆ ನಿನ್ನ ಸಖ್ಯವನೆ ಬೆರಸಿದವ ಸುಗ್ರೀವನು ಧನ್ಯವಾಗಿರುತಿಪ್ಪ ನಿಹಪರಂಗಳಲಿ 4 ನಿನ್ನ ದಾಸ್ಯವನೈದಿ ಅನಂತ ಕಪಿವರರು ಉನ್ನತೋನ್ನತ ಯೋಗ್ಯತೆಗಳ ಪಡೆದಿಹರು ನಿನ್ನ ದ್ವೇಷದಿ ರಾವಣಾದಿಗಳು ಮಡಿದರು ನಿನ್ನ ಪೊಂದಿದ ವಿಭೀಷಣ ರಾಜ್ಯಪಡೆದ 5 ಸುರರು ಕೃತ ಪುಟಾಂಜಲಿಯಲ್ಲಿ ಸ್ಥಿತರಾಗಿ ಇರುತಿಹರು ನಿನ್ನಾಜ್ಞದಿ ಇತರ ಮನುಜರ ತೆರದಿ ಪಿತನಾಜ್ಞೆ ಪಾಲಿಸಲು ವ್ರತವನೇ ಕೈಕೊಂಡು ವನಕೈದಿದೆ 6 ಜಾನಕಿಯು ಅವಿಯೋಗಿ ನಿನ್ನ ಬಳಿಯಿರುತಿರಲು ವಾನರರ ಭಲ್ಲೂಕಗಳ ಸೇನೆನೆರಹಿ ಕಾನನವ ಸಂಚರಿಸಿ ಖಳರನ್ನು ಮೋಹಿಸಿದೆ ಶ್ರೀನಿಧಿಯೆ ತವ ಲೀಲೆ ಬಹು ಚೋದ್ಯವು 7 ತಾಮಸರ ಸಂಹರಿಸಿ ಭೂಮಿ ಭಾರವನಿಳಿಸಿ ನೇಮದಿಂ ಕೈಕೊಂಡು ರಾಜ್ಯವನ್ನು ಪ್ರೇಮದಿಂ ಪಾಲಿಸಿದೆ ಪ್ರಜೆಗಳನು ವಿಧವಿಧದಿ ತಾಮರಸಜನ ಪ್ರಾರ್ಥನೆಯ ಮನ್ನಿಸಿ 8 ನಿನ್ನ ರಾಜ್ಯವೆ ಸಕಲ ಸುಖದ ಸಾಮ್ರಾಜ್ಯವು ನಿನ್ನ ಯಾಙ್ಞವೆ ವೇದವಾಣಿಯಿಂದಧಿಕವು ನಿನ್ನನಂತವತಾರಗಳ ಚರಿತೆ ಸೋಜಿಗವು ನಿನ್ನಯವತಾರಕ್ಕು ಮೂಲಕ್ಕಭೇದವು 9 ನಿನ್ನ ಮಹಿಮಾ ಜಲಧಿಯೊಳು ರಮೆಯು ಮುಳುಗಿಹಳು ನಿನ್ನ ಸ್ತುತಿಗೈವ ನಾಲ್ಮೊಗನು ನಾಲ್ಮೊಗದಿಂ ನಿನ್ನ ಧ್ಯಾನದಿ ಸದಾ ಮೋದಿಪನು ಮಾರುತನು ನಿನ್ನನೇ ಪಾಡುವರು ಅಜಪವನ ಪತ್ನಿಯರು 10 ನಿನ್ನ ನಾಮವ ಸವಿದು ಭವನು ನಲಿನಲಿಯುತಿಹ ಖಗರಾಜ ರತಿ ವರ್ಣಿಸುವರು ಚನ್ನೆ ಪಾರ್ವತಿಯು ವಾರುಣಿಯು ಸೌಪರ್ಣಿಯು ಚನ್ನಾಗಿ ಪಾಡುವರು ನಿನ್ನ ಗುಣಗಳನು 11 ಸುರರು ನಾರದಾದಿ ಋಷಿವರರು ವಂದಿಸುತ ಭಕ್ತಿಯಲಿ ನಿನ್ನ ಪದಗಳಿಗೆ ಅಂದದಲಿ ವೀಣಾ ಸುಗಾನ ಸಂಗೀತದಲಿ ಒಂದೊಂದೇ ಮಹಿಮೆಗಳ ಪೊಗಳಿ ಕುಣಿಯುವರು 12 ಸುಖತೀರ್ಥಮುನಿರಾಜ ಗುರುರಾಘವೇಂದ್ರಾರ್ಯ ಅಕಳಂಕ ವgದೇಂದ್ರ ಯತಿಸಾರ್ವಭೌಮರು ಮುಕುತಿದಾಯಕ ನಿನ್ನ ಪದಕಮಲ ಪೂಜಿಸುತ ಪ್ರಖರ ಕಿರಣದಿ ಜಗವ ಬೆಳಗುತ್ತಲಿಹರು 13 ತಾಳತಂಬೂರಿ ಸಮ್ಯಾಳದಿಂದಲಿ ಕೂಡಿ ಕಾಲುಗೆಜ್ಜೆಯ ಕಟ್ಟಿ ಮೇಲು ಸ್ವರದಿಂದ ಮೇಲಾದ ಭಕ್ತಿಯಲಿ ವಾಲ್ಗೈಸುತಿಹರು 14 ನಿನ್ನ ಲೀಲೆಯ ಕಥೆಯು ಮುಕ್ತಿಗೆ ಸತ್ಪಥವು ನಿನ್ನ ನಾಮದ ಮಹಿಮೆ ನಿಗಮಗಮ್ಯ ನಿನ್ನ ಚರಣೋದಕವು ತ್ರಿಜಗಪಾವನ್ನವು ನಿನ್ನ ನೇಮವೇ ಸೃಷ್ಟಿ ಸ್ಥಿತಿಲಯಕೆ ಕಾರಣವು 15 ನಿನ್ನ ನಾಮದಿ ಭರದಿ ಶುಕನು ಕುಣಿದಾಡುತಿಹ ನಿನ್ನ ಧ್ಯಾನದಿ ಯೋಗಿವೃಂದ ಸಂದಿಪು (ದು) ನಿನ್ನ ರೋಷದಿ ಅಜಭವಾದ್ಯರು ತೃಣರು 16 ಮೂರ್ತಿ ಕಣ್ಣಿಗಲ್ಹಾದಕರ ನಿನ್ನಂಘ್ರಿ ಸೇವೆ ಸಾಮ್ರಾಜ್ಯಗಿಂ ಪರತರವು ನಿನ್ನ ನಾಮದ ರುಚಿಯು ಅಮೃತಕಿಂತಧಿಕ 17 ನಿನ್ನ ಧ್ಯಾನವೆ ಸಕಲ ಸಾಧನದ ಸಾರವು ನಿನ್ನ ಗುಣಗಾನವೆ ಶಾಸ್ತ್ರಗಳ ಭೂಷಣವು ನಿನ್ನ ಮಹಿಮಾರಹಿತ ಕಾವ್ಯವಗ್ರಾಹ್ಯವು ನಿನ್ನ ಲೀಲಾ ರಹಿತ ಶಾಸ್ತ್ರವೆ ಕುಶಾಸ್ತ್ರ 18 ನಿನ್ನ ನಾಮಧ್ಯಾನವೇ ದೇಹ ಸಾರ್ಥಕವು ನಿನ್ನ ನಾಮವೆ ವಿವಿಧ ರೋಗನಿರ್ಮೂಲಕವು ನಿನ್ನ ನಾಮವೆ ದುರಿತರಾಶಿಗೆ ಪಾವಕವು ನಿನ್ನ ನಾಮವೆ ಸಕಲಭವಬಂಧ ಮೋಚಕವು 19 ರೇಣು ತೃಣ ಕಾಷ್ಟದಲಿ ನಿನ್ನ ದಯಪರಮೇಷ್ಠಿಯಿಂದಿರುವೆಗಳಲಿ ನಿನ್ನ ಪ್ರೇಮದಿ ನಲಿದ ಮಂದಮತಿ ವಂದ್ಯನು ನಿನ್ನಲ್ಲಿ ಮಮತೆಯಿಲ್ಲದವದೂಷಿತನು 20 ಅಜಭವಗಿರೀಶಾ ಭಜಕÀಜನ ದಾಸಾ ಸುಜನಮನತೋಷಾ ಕುಜನ ಮನಕ್ಲೇಶ ದ್ವಿಜತತಿಯ ಪೋಷ, ರಜನಿಚರನಾಶ ರಜತಪುರಧೀಶ, ಭುಜಗÀಗಿರಿ ವಾಸ 21 ತಂದೆ ತಾಯಿಯು ನೀನೆ, ಬಂಧು ಬಳಗವು ನೀನೆ ಹಿಂದು ಮುಂದು ನೀನೆ, ಎಂದೆಂದು ನೀನೆ ಬಂದಭಯ ಪರಿಹರಿಸಿ ಕುಂದದಲೆ ಕಾಯ್ವಸಂ - ಬಂಧಿಗನÀು ಆಪ್ತ ಗೋವಿಂದ ನೀನೆ 22 ಸೃಜಿಸಿದವನು ನೀನೆ ಪೋಷಿಸಿದವನು ನೀನೆ ನಿಜಗತಿಯ ಜೀವರಿಗೆ ನೀಡುವವÀನು ನೀನೆ ಅಜಪಿತನೆ ನಿನ್ನ ಪದ ಭಜನೆ ಮಾಳ್ಪವರನ್ನು ನಿಜವಾಗಿ ಕಾಪಾಡಿ ಪೊರೆವ ಪ್ರಭುನೀನೆ 23 ಕೊಡುವವನು ನೀನೆ ಕೋಳುವವನು ನೀನೆ ಅಡಿಗಡಿಗೆ ಸುಖದುಃಖ ನೀಡುವವ ನೀನೆ ಕೊಡುವದಾತನು ನೀನೆ ಕೊಟ್ಟದ್ದು ಕೊಂಡರೆ ಹೊಡಕೊಂಡು ಅಳುವದ್ಯಾತಕೆ ಮೂಢಪ್ರಾಣಿ 24 ಈ ಪೊಡವಿಯೊಳು ಮೊದಲು ನಾನು ಬಹು ಕಾಲದಿ ಕೌಪೀನ ಸಹ ಯನ್ನ ಸಂಗಡಿರಲಿಲ್ಲ ಈ ಪೊಡುವಿಯನು ಬಿಟ್ಟು ನಾ ಪೋಪಕಾಲಕ್ಕು ಈ ಪರಿಯೆ ಪೋಪೆನೆಂಬುದು ಸಟಿಯು ಅಲ್ಲ 25 ಗಾಡಿ ವಾಜಿಯು ಮತ್ತೆ ಬೆಡಗಿನ ವಸನಗಳು ಕೇಡುಯಿಲ್ಲದವಾ ಭರಣ ವಸ್ತುಗಳು ನಾಡಿನೊಳು ಬಹುಮನ್ನಣೆಯು ಯೆಂಬರೆಲ್ಲೆನ್ನ ಕೂಡಬರಬಹುದಾದುದೊಂದುಯಿಲ್ಲ 26 ಎಷ್ಟುಗಳಿಸಿದರೆನ್ನ ಹೊಟ್ಟೆಗೊಂದೇ ರೊಟ್ಟಿ ಸೃಷ್ಟಿಪತಿ ನಿನ್ನಂಘ್ರಿ ನಿಷ್ಠೆ ತೊರೆದು ಕಷ್ಟ ನಷ್ಟಗಳನ್ನು ಸಹಿಸಿ ನಿಷ್ಠ್ಠುರನಾಗಿ ದುಷ್ಟತನದಿಂದ ನಾನಿಷ್ಟುಪರಿಗಳಿಸಿ 27 ದಾನಧರ್ಮಗಳಿಲ್ಲ ವÀ್ರತನೇಮಗಳುಯಿಲ್ಲ ಆನಮಿಸಿಕೊಡಲಿಲ್ಲ ಮಾನಿ ವಿಪ್ರರಿಗೆ ಧೇನುಪಾಲನೆ ನಿನ್ನಧ್ಯಾನವನ್ನೇ ಮರೆದು ಶ್ವಾನನÀಂದದಿ ಕಾದು ಕೊಂಡು ಕುಳಿತಿಪ್ಪೆ 28 ವಾರನಾರಿಯರಲ್ಲಿ ವೇಷಧಾರಿಗಳಲ್ಲಿ ಸೊರೆಮಾಡಿದೆ ಕರ್ಣನೆನಿಸ ಬೇಕೆಂದು ಶ್ರೀರಮಾಪತಿ ನಿನ್ನ ಚರಣ ಕಮಲಗಳನ್ನು ಆರಾಧಿಪರಿಗೆ ನಾರುವ್ವಿ ಕೊಡಲಿಲ್ಲ 29 ಸತಿಸುತರು ಹಿತÀದವರು ಹಿತವ ಮೇಲ್ತೋರಿದು - ರ್ಗತಿಗೆನ್ನ ಗುರಿಮಾಡುತಿಪ್ಪರಲ್ಲದಲೇ ಪರ - ಗತಿಗೆ ಸಾಧನ ತೋರ್ಪರಾರು ಯನಗಿಲ್ಲ 30 ಈ ಮಹಾಜ್ವರದಿಂದ ನೊಂದು ನಿನ್ನನು ನೆನೆವೆÉ ನಾಮಹಾಭಕ್ತಿಯಲಿ ನಂಬಿದವನಲ್ಲ ನಾ ಮಾಡಿದ ಪಾಪರಾಶಿಗಳ ಪರಿಹರಿಸಿ ಪ್ರೇಮದಿಂದಲಿ ಪೊರೆಯೋ ಪರಮಕರುಣಿ 31 ರೋಗವನೆ ಹೆಚ್ಚಿಸು ನಿರೋಗಿಯನು ಮಾಡು ಭವ ರೋಗದಿಂದಗತೀ ಕಡೆದಾಂಟಿಸು ಯೋಗಿವರ ನಿನ್ನಿಚ್ಛೆ ಹೇಗೆÀಮಾಡಿದರುಸರಿ ಆಗದೆಳ್ಳಿನಿತು ಸಂಕೋಚವೆನಗೆ 32 ನೀಕೋಟ್ಟಕವಚವಿದು ನೀ ತೆಗೆದು ಹಾಕಲ್ಕೆ ನಾಕೆಟ್ಟುದುದುಯೇನು ಕರುಣಾಳುವೆ ಈ ಕವಚ ಕೆಲಕಾಲ ಬಿಟ್ಟಮಾತ್ರಕೆ ಮುಂದೆ ನೂಕಬೇಡೆನ್ನ ಮನ ಪಾಪಗಳ ಕಡೆಗೆ 33 ತನುಮನವು ನಿನ್ನದು ಧನಧಾನ್ಯ ನಿನ್ನದು ವನಿತೆ ನಿನ್ನವಳು ಮನೆ ಮಾರು ನಿನ್ನದು ದೇವ ಎನಗಾಪ್ತರೆಂಬುವರು ನಿನ್ನದಾಸರು ರಾಮ ಎನದೆಂಬ ವಸ್ತುವೆಲ್ಲವು ನಿನ್ನದು 34 ನಿನ್ನ ನಂಬಿದಯನೆಗೆ ಪಾಪದಂಜಿಕೆಯಿಲ್ಲ ಪುಣ್ಯದಾಶೆಯು ಇಲ್ಲ ಪರಮಪುರುಷ ನಿನ್ನ ಪ್ರೇರಣೆಯಿಂದ ಯನಿ
--------------
ವರದೇಶವಿಠಲ
ಶ್ರೀಲೋಲ ಶ್ರೀನರಸಿಂಹ ಬಲಗೋಂಬೆನು ನಿನ್ನ ಪ. ಸಾರರಹಿತವಹ ಘೋರತರ ಸಂಸಾರದಿ ತೊಳಲುತ ಗಾರುಗೊಂಡಿಹೆನೈ ಶ್ರೀಲೋಲ ಅ.ಪ. ಚಿಣ್ಣನು ತಾ ಬಣ್ಣಿಸಿ ಕರೆಯೆ ಮನಕದ ತಂದು ಅನ್ಯದೈವಗಳ ಮರೆದು ತನ್ನನೆ ನೆನೆವ ಚಿಣ್ಣನಿಗಾಗಿ ಕಂಬದಿ ಬಂದು ಘನ್ನ ರೋಷದಿ ದೈತ್ಯನ ಸೆಳೆದು ಕುನ್ನಿಯ ಮುಡಿಯನು ಪಿಡಿದೆತ್ತಿ ಜಡಿದು ತನ್ನ ತೊಡೆಯೊಳಗಿರಿಸಿ ಖಳನುರ ವನ್ನು ಬಗೆದು ಕರುಳನು ಕೊರಳೊಳು ಧರಿಸಿದ 1 ಘೋರರೂಪಕೆ ನಡುಗುತಲಂದು ಸುರಗಣನಿಂದು ಶರಣೆಂದಾಕಂದನ ಕರೆದು ಪರಮಾದರದಿಂ ಶ್ರೀದೇವಿಯನೊಡಗೊಂಡು ಪರತರಾಭಯ ಹಸ್ತವ ನೀಡಿ ಸರಸದಿ ಕರೆದಾದರಗೂಡಿ ತರಳನೆ ಭಕ್ತಾಗ್ರೇ ಸರ ನೆನ್ನಿಸಿ ನೆರೆಸುಖಿಸೆಂದೊದವಿದ 2 ಚಾರು ಚರಿತ ಪ್ರಹ್ಲಾದನ ಆಲಿಸಿ ನಲವಿಂ ಸಾರಿತನ್ನನೇ ನೆನೆವರನೆಂದೆಂದು ಕೋರಿಕೆಗಳ ಸಲ್ಲಿಸಿ ಸಲಹುವನೆಂದು ಸಾರೆಬಂದಿಹೆ ನಿನ್ನೆಡೆಗಿಂದು ಸಾರಸಾಕ್ಷನೆ ನೀ ಕೃಪೆದೋರೆಂದು ಕೋರಿಭಜಿಪೆ ಶ್ರೀಶೇಷಗಿರಿವರ ದಯಾಸಿಂಧು 3
--------------
ನಂಜನಗೂಡು ತಿರುಮಲಾಂಬಾ
ಶ್ರೀಶ ಕರುಣಾಭೂಷ ಶ್ರೀನಿವಾಸ ರಕ್ಷಿಸು ವೀಶಗಮನ ಪ. ತಂದೆ ತಾಯಿ ಸಹಜ ಮುಖ್ಯ ಬಂಧ ಬಳಗವೆಲ್ಲವು ನೀ- ಇಂದು ನಂಬಿದೆ ಇಂದಿರೇಶ ತನ್ನ ಮನಕೆ ಬಂದ ತೆರವ ಮಾಳ್ಪ ಭವ- ಸಿಂಧು ಪೊತ್ತ ನಿನ್ನ ದಾಸನೆಂದು ತಿಳಿದಾನಂದಗೊಳಿಸು 1 ನಿಗಮವೇದ್ಯ ನಿನ್ನೊಳಿರುವ ಅಘಟಿತಘಟನ ಶಕ್ತಿ ಬಗೆಯ ತೋರಿ ಪೊರೆವಿ ಎನ್ನ ಮಗುವಿನಂದದಿ ಅಗಣಿತಾನಂದ ಚಿದಾತ್ಮ ಜಗದಿ ನಿನ್ನ ಪೋಲ್ವ ಕರುಣಾ ಳುಗಳನೆಲ್ಯೂ ಕಾಣೆ ಶಕ್ರಾದಿಗಳು ಸೇರುವರು ನಿನ್ನನೆ 2 ಸರಸಿಜಾಕ್ಷ ಪಾದಪದ್ಮ ಸ್ಮರಣೆ ಮಾತ್ರದಿಂದ ಸರ್ವ ಪುರುಷಾರ್ಥಂಗಳೆಲ್ಲ ಸೇರಿ ಬರುವುದೆಂಬುದಾ ಅರಿಯದಂಥ ಮೂಢರೆಲ್ಲ ಬರಿದೆ ಬಯಲು ಭ್ರಾಂತಿಗೊಳಿಸುವ ಉರಗ ಶಿಖರವಾಸ ನೀನೆ ದೊರೆಯೆಂದು ನಾನೊರೆವೆ ಶ್ರೀಶ 3
--------------
ತುಪಾಕಿ ವೆಂಕಟರಮಣಾಚಾರ್ಯ
ಶ್ರೀಹರಿ ನಿನ್ನನ್ನೆ ಪಡೆವುದು ಭಾಗ್ಯ ಬಾಹಿರನೆನಿಸದೆ ಸೇರಿಸು ಯೋಗ್ಯ ಪ ಹೃದಯಾರವಿಂದದೆ ದೇವಿಯರುಸಹಿತ ಸದಯ ಸನ್ನಿಧಿ ಮಾಡು ಅದು ನನಗೆ ವಿಹಿತ 1 ಭಾಗವತ ಕೈಕಂರ್ಯ ಹಗಲಿರುಳು ಇರಲಿ ನಿತ್ಯ ಸಿದ್ಧಿಸಲಿ 2 ಇಡುದೇವ ಪದಕಮಲ ನನ್ನ ತಲೆಮೇಲೆ ಅನುದಿನ ಲೀಲೆ 3 ಕೊನೆಗಾಲದಲಿ ಬಂದು ನೆನೆವಂತೆ ನೀಡೈ ಮನಕೆ ಮಂಗಳರೂಪ ಧ್ಯಾನ ದಯಮಾಡೈ 4 ಅವತಾರಫಲಗಳ ಸ್ಮರಣೆ ಬರುತಿರಲಿ ಭವವೆಲ್ಲ ಕರಣಗಳು ನಿನ್ನ ಸೇವಿಸಲಿ 5 ದಾಸನ್ನ ಚರಣಾಂಬುಜದÀಡಿಯಿರಿಸು ಶ್ರೀಶನೆ ಪ್ರೇಮದ ಸವಿಯನುಣಬಡಿಸು 6 ಎಲ್ಲವು ನಿನ್ನದೆ ನನ್ನದೇನಿಲ್ಲ ಬಲ್ಲವನೆ ನೀನಾಗಿ ಮುಕ್ತಿಕೊಡು ನಲ್ಲ 7 ಹಿಂದೇಳು ಮುಂದೇಳು ತಲೆಮಾರಿನವರು ತಂದೆ ನಿನ್ನಂಘ್ರಿ ಶೇಷಾಂಕಮುದ್ರಿತರು 8 ಕುಲಧನವೆ ನೀನಮ್ಮಕುಲಕೋಟಿಯನ್ನ ಒಲಿದು ಕಾಪಾಡಯ್ಯ ಕರುಣಿ ಪ್ರಸನ್ನ 9 ಹೆಜ್ಜಾಜಿ ಕೇಶವ ಇದು ನಮ್ಮ ಮೋಕ್ಷ ಅರ್ಜುನಸಾರಥಿ ಕಾಣು ಪ್ರತ್ಯಕ್ಷ10
--------------
ಶಾಮಶರ್ಮರು
ಷಟ್ಪದಿ ಭೃಂಗ ದಿವಿಜ ಲಲಾಮ ಶುಭಗುಣ ಸಾಂದ್ರ ಗುರುವರನೇಸೇರಿಹೆನು ತವಶಿಷ್ಯ ಕೋಟಿಲಿ ಬೀರಿ ಕರುಣಾ ದೃಷ್ಟಿ ಶ್ರುತಿ ಭಂಡಾರ ಸೂರೆಯ ಮಾಡ್ವ ಹಾ ಹಾ ಕಾರದಿಂ ತಪಿಪ 1 ಬಾಲ ನೆನ್ನಯ ಶಿರವ ನಿಮ್ಮಯ ಶೀಲಕರದಿಂ ಭೂಷಿಸುತ ಕವಿತಾ ಲತಾಂಗಿಯ ತಾಂಡವಾಡಿಸಿ ಚಂದ್ರಮೌಳಿನುತಕಾಳಿಮನಕುಮುದೇಂದು ಜಗಸಂ ಚಾಲಕ ಪ್ರಭು ಮುಖ್ಯ ಪ್ರಾಣಗುಪಾಲಿಸುತ ಸತ್ತಾದಿ ಸಕಲವ ಪೊರೆದು ಮೆರವಂಥಾ 2 ಪತಿ ಮಾ ವಂದ್ಯ ನಿರುಪಮ ನಾರಸಿಂಹನುಅಂದು ನಿಮ್ಮನು ಕಾಯ್ದ ತೆರಪೊರೆ ಶ್ರೀ ಸುಧೀಂದ್ರ ಸುತ 3 ಏನಿದೇನಿದು ನಿಮ್ಮ ಮಹಿಮೆಯಮಾನವರಿಯಲು ಸುರರಿಗಾಗದುಮಾನವರ ಪಾಡೇನು ಶಿರತೂ ಗುತಿಹ ಫಣಿರಾಜಮಾನ್ಯ ಸುರ ಋಷಿ ಕರುಣ ಬಲವೋಮೇಣ್ಪರಿಸರನ ಕೃಪೆಯೊ ಕಾಣೆನುದಾನಿ ನರಹರಿ ವರದ ಫಲವೋ ಮೊತ್ತವೇ ಯೆಂಬೆ 4 ಜಂಭಾರಿ ಮೇಣಾಬಾಲ ಸುಬ್ರಹ್ಮಣ್ಯನೋ ಶಂಕಿಪುದು ಸುರನೀಕಾ 5ಸೂಕ್ಷ್ಮಮತಿಗಳೆ ಪೇಳಿ ಸರ್ವಾಧ್ಯಕ್ಷನವತಾರವನು ಯಾವ ಸುಲಕ್ಷಣ ಭಕುತಗೇನೆ ಮಾಡಿಹ ನಮ್ಮಗುರುವ ಬಿಡೆಪಕ್ಷ ವಹಿಸದೆ ಪೇಳಿ ಯಾವನು ಲಕ್ಷ್ಯ ಮಾಡದೆ ಕಷ್ಟ ಮಾತೆಯಕುಷಿಯಂ ಬಂದಿಹನು ಮುಮ್ಮುಡಿ ನಮ್ಮ ನುದ್ಧರಿಸೆ 6 ವ್ಯಾಜ ವಿಲ್ಲದಲೆದೈತ್ಯ ಪಿತತಾನಿತ್ತ ಬಾಧೆಗೆ ನಾಥ ನರಹರಿ ಬಂದುದಚ್ಚರಿಯಂತೆ ಭಾವಿಸೆ ಭಕ್ತವತ್ಸಲ ಬಿರುದು ಪೊಳ್ಳೆಬಿಡೆ 7 ಸತಿ ಸಂಹಾರ ಕಾಟವು ಮತ್ತೆ ಯತಿ ಯಂತಾಗೆ ಹಾಗೆಯೆನಿಂತಿರಲು ವೃಂದಾವನದಿ ಕಾಡುವರು ಶಿಷ್ಯಗಣಾ 8 ಸತಿಯ ಬೇಕೆಂದೊಬ್ಬ ನೀಡೈ ಸುತನ ದಂಪತಿ ವ್ಯಾಜ್ಯ ಹರಿಸಿರಿಜತನ ಮಾಡಿಸಿ ವೇತನವ ಹರಿಸಿನ್ನು ವ್ಯಾಧಿಗಳಪಥನ ವಾಯಿತು ಕೂಳುಕೊಡಿಸೈ ಸತತ ವೀತೆರ ಬಯಕೆ ವ್ರಾತದಿಸುತಪ ನೀನೆಂತಾಗೆ ಕುಪಿತನು ಬಲ್ಲ ಬತ ಹರಿಯೇ 9 ತಿರುಗುತಲಿಹರು ತಮ್ಮಯ ಹೀನ ನಡತೆಗಳಿಂದ ಸ್ತ್ರೀಯರು ವಿಧಿಯ ನಡೆಸುವರು ಚೆನ್ನ ಔಷಧ ವಿಹುದು ನಿನ್ನಲಿ ಹಣ್ಣಿನಾಶಯ ತೋರಿನೀ ಭವ ಹುಣ್ಣುವಳಿಯುವೆ ಎಷ್ಟು ಕರುಣಿಯೊ ಗುರುವೆ ಶರಣೆಂಬೆ 1 ಕಳತ್ರ ವೆಲ್ಲವನೆಂತೆನಲು ಬಲು ಹುಚ್ಚುತನವ ರ್ಣಿಸಲು ಮಿಕ್ಕುದುದಾಉಕ್ತಿ ಭಜಿಸುವಗೇನು ಪೇಳ್ವುದು ಮುಕ್ತಿಕರಗತ ವೇಕೆ ಸಂಶಯ ಶಾಸ್ತ್ರ ಭಾಗ್ಯವೆ ಸಾಕು ಕರುಣಿಸಿ ನಮಿಪೆ ಭೂಯಿಷ್ಠ 11 ಸೂತ್ರ ಖರೆ 12 ಪ್ರೀತಿತಮ ಇವನಂಥ ದಾತನ ಗ್ರಂಧ ನಿಚಯವ ಭೋಜ್ಯ ಕಿಡುತಲಿ ಸುತ್ತಿಗೆದ್ದಲು ಹುಳಕೆ ಮೆಚ್ಚುವ ನೇನು ಪಯ ಸುರಿಯೆಪುತ್ರರಿಗೆ ಮದ್ದಿಕ್ಕಿ ಪಿತನಿಗೆ ಮತ್ತೆ ಭೋಜನ ವಿಕ್ಕೆ ಬಹುಸುಪ್ರೀತಿ ಯಾದಂತಾಯ್ತು ಹರಿಹರೀ ಪಾಹಿಮಾಂ ಪಾಹೀ 13 ಶುಂಠನಾದರು ಪಠಿಸೆ ನಮ್ಮಯ ಕಂಠದಿಂ ಬಂದಂಧ ನುಡಿವೈಕುಂಠ ರಮಣನ ಕಾಂಬ ಪಂಡಿತ ನೆನೆಸಿ ಧರೆಯೊಳಗೆಕಂಟಕವ ನಿರಿದು ಭವದಲಿ ವಿಷ ಕಂಠ ಗಾತಪ್ರಿಯ ತನ್ನಯಭಂಟನನು ಮಾಡಿಕೊಳಲೆಂತೆಂದೆನ್ನ ಹರಿಸಿ ಪೊರೆ 14 ಏಳಿರೇಳಿರಿ ಸಂತ ಮಿತ್ರರೆ ಕೇಳಿ ಕೇಳಿದುದೆಲ್ಲ ನೀಡುವಪಾಲಕನು ಶ್ರೀ ರಾಘವೇಂದ್ರನು ಇಲ್ಲ ಮೆರೆಯುತಿರೆಕೇಳಿ ಭವಸುಖ ಮತ್ತೆ ಭವದಲಿ ಬೀಳುವರೆ ವಿಜ್ಞಾನ ಯಾಚಿಸಿಕೊಲ್ಲಿರೀ ಸಂಸಾರ ಬೀಜವ ಕಲಿಯು ಎಷ್ಠರವ15ನಾಲ್ಕುಶತ ಐವತ್ತು ವರುಷವೆ ವೋಲಗವ ಕೈಕೊಂಬ ಮುಂದಿವಅಲಸವ ಮಾಡಿದೆಡೆ ಸುರತರು ಬಿಟ್ಟತೆರವೇನೆಜಾಲ ಮಾತುಗಳೇಕೆ ಮುಂದಿನ ಶೀಲ ಮಾರ್ಗವ ನೋಡ್ವ ಜಾಣನುಪಾಲಿಸೈಧೋರೆ ಕೆಟ್ಟೆ ಕೆಟ್ಟೆನು ಎನ್ನ ಕೈ ಕೊಡುವ 16 ಏಕೆ ಭಯ ನಮಗಿನ್ನು ನರಕದ ಏಕೆ ಕಳವಳ ಅಶನ ವಸನÀಕೆಏಕೆ ಸಂಶಯ ಜ್ಞಾನ ವಿಶಯದಿ ಪಿಡಿಯೆ ಗುರುವರನೆನೂಕಿ ವಿಷಯದಿ ಬಯಕೆ ಬೇಗನೆ ಬೇಕು ಎನ್ನುತ ಜ್ಞಾನ ನಿಧಿಗಳಹಾಕಿ ದಂಡವ ಪಾಹಿ ಗುರುವರ ಪಾಹಿ ಯೆಂತೆನ್ನ 17 ಭುಕ್ತಿ ಹಾಗೆ ವಿರಕ್ತ ಭಕ್ತಿಯು ಭಕ್ತ ವೃಂದಕೆ ಭ್ರಷ್ಟ ಬಿಟ್ಟವನು 18 ಜಯ ಜಯವು ಗುರುಸಾರ್ವಭೌಮಗೆಜಯ ಜಯವು ಮಂತ್ರಾಲಯಸ್ಥಗೆಜಯ ಜಯವು ವಿಜಯೀಂದ್ರ ಪೌತ್ರಗೆ ವ್ಯಾಸರಾಜನಿಗೆಜಯ ಜಯ ಪರಿಮಳಾ ಪ್ರದಾತಗೆ ಜಯಜಯವು ಖಂಡಾರ್ಥ ನೀಡ್ದಗೆಜಯ ಜಯವು ಸಶರೀರ ಬೃಂದಾ ವನದಿ ಸೇರ್ದವಗೇ 19 ಜಯ ಜಯವು ಬಾಹ್ಲೀಕ ರಾಯಗೆ ಜಯ ಜಯವು ಶ್ರೀ ಸತ್ಯಸಂಧಗೆಜಯ ಜಯವು ಪ್ರಹ್ಲಾದರಾಜಗೆ ಶಿಷ್ಯ ವತ್ಸಲ್ಯಗೆಜಯ ಜಯವು ಶ್ರೀ ರಾಘವೇಂದ್ರಗೆಜಯ ಜಯವು ಮಂಗಳವ ಸುರಿಪಗೆಜಯ ಜಯವು ಜಯ ಮುನಿಯ ಪ್ರೀಯಗೆ ನಮ್ಮ ಗುರುವರಗೆ 20 ಮಾನನಿಧಿ ಜಯತೀರ್ಥ ರಾಯರಘನ್ನ ಹೃದಯಗ ವಾಯು ವಂತರಶ್ರೀ ನಿಲಯ ಶ್ರೀ ಕೃಷ್ಣವಿಠಲ ಪ್ರೀಯ ಗುರುರಾಜನಾನು ಪಾಮರ ಬಾಲ ನುಡಿಗಳ ನೀನೆ ತಿದ್ದುತ ಮನ್ನಿಪುದು ನಾನಿನ್ನ ದಾಸರ ದಾಸನೆಂದು ಸ್ವೀಕರಿಸು ಶರಣು 21
--------------
ಕೃಷ್ಣವಿಠಲದಾಸರು
ಸಂಗ ವಿಡಿ ವಿಡಿ ಸಾಧು ಸಂಗ ವಿಡಿ ವಿಡಿ | ಸಂಗ ವಿಡಿಯಂಗದೊಳಗ | ಮಂಗಳುತ್ಸಾಹ ದೋರುವರಾ ಪ ಹರಿಪದ ಪರಾಗ ನುಂಡು | ಹರುಷವೇರಿ ಭವಶರಧಿಗೆ | ಹರಿಯ ಭಕುತಿ ಸೇತುಗಟ್ಟಿ | ತೋರಿಸಿ ಜನರ ತಾರಿಸುವರ 1 ವೇದ ಶಾಸ್ತ್ರಸಾರವಾದ | ಬೋಧ ಸುಧೆಯ ವೆರದು ಮರದು | ಹಾದಿದೋರಿ ಮನಕ ಗತಿಯ | ಸಾಧನವನು ಬೀರುವರ 2 ಹ್ಯಾವ ಹೆಮ್ಮೆ ಬಿಡಿಸಿ ಸಮ್ಮತಿ | ಭಾವದಿಂದ ಮಹಿಪತಿ ಸ್ವಾಮಿಯಾ | ಸಾವಧಾನದಿಂದಲಿ ಜಗತೀ | ವಲಯದೊಳರಹಿಸುವರು 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಸಂಚಿತ ಪ್ರಾರಬ್ಧ ಕ್ರಿಯಮಾಣಾ | ಪ್ರಪಂಚದಿ ಈಡ್ಯಾಡೋ ಪ ಸ್ಥೂಲಕೆ ಭೋಗಕೆ ಸಾಕ್ಷಿಯು ಸೂಕ್ಷ್ಮವು | ಕಾರಣದಲಿ ಸಾಕ್ಷೀ || ಭೋಗಾಪೇಕ್ಷೆಯು ಸೂಕ್ಷ್ಮವು ನೀನಿತುದುಹ ಕಾರಣ ಲಕ್ಷೀ 1 ಸ್ಪರ್ಶದಿ ಶಬ್ದವು ಶಬ್ದಾಸ್ಪರ್ಶವಿದು | ರೂಪವು ತೋರಿತು ರೂಪವು ರಸದಲಿ || ಗಂಧದಿ ಕಾಣಿಸಿತೊ 2 ಕರ್ಮದಿ ರೂಪವು ರೂಪದಿ ಕರ್ಮವು | ಕರ್ಮರೂಪಕ್ಕೇ ||ವ್ಯಾಪಕ ಭವತಾರಕನೆಂದರಿಯದೆ ಕಲಾಪವ್ಯಾಕೀ ಮನಕೆ 3
--------------
ಭಾವತರಕರು
ಸಂತಸ ಕೊಡು ದೇವ ಈ ಮನಕೆ ಕಂತುಪಿತ ನಿಮ್ಮ ಧ್ಯಾನೆನ್ನಂತರಂಗಕ್ಕೆ ಇತ್ತು ಪ ಪರಮಪುರುಷ ತವ ಚರಣಸೇವೆಯ ನೀಡಿ ಪರಿಭವ ದು:ಖವ ಪರಿಹರಿಸಭವ1 ಶರಧಿಸಂಸಾರ ಸ್ಥಿರಮಾಯಕಾರ ತ್ವರಿದದಿಂದೆನ್ನೊಳು ಕರುಣವ ತೋರೊ 2 ದೋಷದೂರನೆ ಎನ್ನ ದೋಷ ವಿನಾಶಿನಿ ಶ್ರೀಶ ಶ್ರೀರಾಮ ನಿನ್ನ ದಾಸನೆನಿಸೊ ಎನ್ನ 3
--------------
ರಾಮದಾಸರು
ಸತ್ಯವೋ ಏನು ಮಿಥ್ಯವೋ ಚಿತ್ತಜಪಿತ ಭಕ್ತವತ್ಸಲನೆಂಬೋಕ್ತಿ ಪ ಕಷ್ಟನಿವಾರ ಭಕ್ತರಿಷ್ಟದಾಯಕನೆಂದು ಅಟ್ಟಹಾಸದಿ ವೇದ ಕಟ್ಟಳಿಲ್ಲದೆ ಕೂಗ್ವುದು 1 ಧಾತ್ರಿತ್ರಯಕೆ ತಾನೆ ಸೂತ್ರಧಾರಕನೆಂದು ಸ್ತೋತ್ರ ಪೊಗಳಿದು ಮನು ಗೋತ್ರರ್ವಚನಂಗಳು 2 ಭಕ್ತವತ್ಸಲ ನೀನು ಸತ್ಯವಾಗಿರ್ದೊಡೆ ಭೃತ್ಯನ ಮನಕೀಗ ಪ್ರತ್ರ್ಯಕ್ಷಾಗಲಿ ರಾಮ 3
--------------
ರಾಮದಾಸರು
ಸನ್ನುತ ಸತತ ಸದ್ಗುಣಪೂರ್ಣ ಪ್ರಥಮಾಂಗ ಸಂಪೂಜ್ಯ ಶರ್ವಮಿತ್ರ ಪ ಪ್ರತಿ ಪ್ರತಿ ಕ್ಷಣ ನಿನ್ನ ಪತಿತಪಾವನ ಪಾದ ಕ್ಕತಿ ದೈನ್ಯದಲ್ಲೆರಗಿ ಮೊರೆ ಇಡುವೆ ಪೊರೆಯೆಂದು ಅ.ಪ. ಕೋರಿದರೆ ಮನಕರಗಿ ಹಾರಿ ಬರುವಿಯೆಂದು ನಾರದರೆ ಮೊದಲಾದ ನಿಜಭಕ್ತರೆಲ್ಲ ಸಾರಿಹರು ಸರ್ವೇಶ ಸಾರತಮ ಸರ್ವರೊಳು ಘೋರ ಭವದಿಂದೆನ್ನ ಪೊರೆ ಎನಲು ಬರೆಯಂತೆ 1 ಕೃಪೆಯಿಂದ ನೀ ನೋಡೆ ಬ್ರಹ್ಮಾಂಡ ದೋಷಗಳು ಲುಪ್ತವಾಗುವುದಯ್ಯ ಒಂದೆ ಕ್ಷಣದಿ ನಿಪುಣನಾಗುವನವನು ಇಹಪರ ನಿಧಿ ಒದಗಿ ಅಪರಿಮಿತ ಸುಖ ಉಣುವ ಅಪ್ರತಿಮ ಕೀರ್ತಿಯು 2 ವಿಧಿ ಶಿವ ಶಕ್ತ ಸುರರಿಂದ ಸಂಸೇವ್ಯ ಜಯೇಶವಿಠಲ ಕೀರ್ತಿಪೂರ್ಣಾ ಪರಿ ದೋಷಗಳು ಪರಮ ಕೃಪೆ ವೀಕ್ಷಣದಿ ಪರಿಹರಿಸಿ ಬೆರೆ ಎನ್ನ ಪರಭಕ್ತಿ ನಿಧಿ ಇತ್ತು 3
--------------
ಜಯೇಶವಿಠಲ