ಒಟ್ಟು 644 ಕಡೆಗಳಲ್ಲಿ , 94 ದಾಸರು , 559 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮಾವಿನಕೆರೆ 8 ರಂಗಗಿರಿಯನೇರಿಬರುವಾ ತಂಗಿ ಬರುವೆಯಾ ಪ ಅಂಗನೆಯರು ಕುಣಿದು ಮಣಿವ ಸಂಗದೊಳಿರುವಾ ಅ.ಪ ಅವನ ಪಾದದ ನಡಗೆ ಚಂದ | ಧವಳಹಂಸ ಮನಕಾನಂದಾ ಅವನ ನಲಿವು ನವಿಲಿಗಂದ | ಅವನ ಉಲಿವು ಕೋಗಿಲೆಯಂದಾ 1 ಅವನ ಕರದ ವೇಣುಗಾನ ಭುವನಕೆಲ್ಲ ಅಮೃತಪಾನ ಅವನ ನಗೆಯ ತೋರ್ಪ ಭವವ ಕಳೆವ ಪುಣ್ಯಸದನ 2 ವಾರಿವಾಹ ವರ್ಣದವನು ಹಾರಪದಕ ಧರಿಸಿದವನು ಚಾರುಸುಂದರ ಪೀತಾಂಬರನು 3 ಹಿಂದೆ ನೀನು ನೋಡಲಿಲ್ಲ ಮುಂದೆ ನಾನು ಕರೆವುದಿಲ್ಲ ಇಂದು ಬಂದೆಬರುವನಲ್ಲ ಸಂದೇಹ ಎಳ್ಳಷ್ಟೂ ಇಲ್ಲ 4 ಬೊಮ್ಮನಪ್ಪನವನೆ ನೀರೆ ನಮ್ಮ ಮಾಂಗಿರಿಗೊಪ್ಪುವ ತಾರೆ ಹೊಮ್ಮಿದಾ ಸಂಪ್ರೀತಿಯ ಬೀರೆ ಸುಮ್ಮನೆ ನನ್ನೊಡನೆ ಬಾರೆ 5
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಮುಕ್ತನಲ್ಲವೇ ಭವದಿ ಮುಕ್ತನಲ್ಲವೇ ಪ ಶಕ್ತನಾದ ಹರಿಯ ಪರಮ ಭಕ್ತಿಯಿಂದ ಭಜಿಪ ನರನು ಅ.ಪ. ಮಧುವಿರೋಧಿಯಮಲ ಗುಣವ ನಲಿದು ಪಾಡುವವನು 1 ಕೇಶವಗೆ ರಮಾಬ್ಜಭವ ಸದಾಶಿವ ಶಕ್ರಾದಿ ಸುರರು ದಾಸರು ಎವೆ ಇಡುವ ಶಕ್ತಿ ಲೇಶವಿಲ್ಲವೆಂಬ ನರನು 2 ಒಂದಧಿಕ ದಶೇಂದ್ರಿಯಗಳಿಗಿಂದಿರೇಶ ವಿಷಯವ ಸಮ ಬಂಧಗೈಸಿ ವೈಷಯಿಕ ಸುಖ ತಂದು ಕೊಡುವನೆಂಬ ನರನು 3 ಈ ಪರಿಯಲಿ ತಿಳಿದು ಪುಣ್ಯ ಪಾಪಕರ್ಮ ದುಃಖಸುಖ ಜ ಯಾಪಜಯ ಮಾನಾಪಮಾನ ಶ್ರೀಪ ಕೊಡುವನೆಂಬ ನರನು 4 ವೇದ ಶಾಸ್ತ್ರಗಳಲಿ ಇಹ ವಿರೋಧವಾಕ್ಯಗಳನು ಶ್ರೀ ಪ್ರ ಮೋದ ತೀರ್ಥರುಕ್ತಿಯಿಂದ ಶೋಧಿಸುತಲಿ ಸುಖಿಪ ನರನು 5 ಕರ್ಮ ವಿಹಿತ ಅಸಜ್ಜನರು ಮಾಳ್ಪ ವಿಹಿತವಾದ ಕಾಲಕದು ಅವಿಹಿತವೆಂದು ತಿಳಿಯುವವನು6 ಸ್ವರ್ಗ ಭೂಮಿ ಕರ್ಮ ಹರಿಸುವ ಹರಿಯೆಂಬ ನರನು7 ಪರಮ ಪುರುಷಗರ್ಪಿಸುತಲಿ ಹರುಷ ಬಡುತಲಿಪ್ಪ ನರನು 8 ಈ ಶರೀರದರಸು ಶ್ರೀನಿವಾಸಾ ಮಾತೆ ಪ್ರಾಣ ಪಾರ್ವ ತೀಶರಿಹರು ಎಂದೀ ದೇಹ ಪೋಷಿಸುತಲಿ ತೋಷಿಸುವನು 9 ಪ್ರಿಯ ವಸ್ತುಗಳೊಳಗೆ ಅನ್ನಮಯನೆ ಪ್ರೀಯನೆಂದು ಅನ್ಯ ಬಯಕೆಗಳನು ಜರಿದು ಹರಿಯ ದಯವ ಬಯಸುತಿಪ್ಪ ನರನ 10 ಶತ್ರುತಾಪಕನುಳಿದು ಅನ್ಯ ಮಿತ್ರರಿಲ್ಲವೆಂದು ಅಹೋ ರಾತ್ರಿಯಲ್ಲಿ ಬಿಡದೆ ಜಗದ್ಧಾತ್ರನ ಗುಣ ತುತಿಪ ನರನು11 ಬಿಂಬನೆನಿಸಿ ಸರ್ವರ ಹೃದಯಾಂಬರದೊಳಗಿದ್ದು ಜನವಿ ಡಂಬನಾರ್ಥ ಕರ್ಮಗಳ ಆರಂಭ ಮಾಳ್ಪೆನೆಂಬ ನರನು 12 ಅಕ್ಷರೇಢ್ಯ ಬ್ರಹ್ಮ ವಾಯು ತ್ರ್ಯಕ್ಷಸುರಪ ಸುರರೊಳಗ ಧ್ಯಕ್ಷ ಸರ್ವ ಕರ್ಮಗಳಿಗೆ ಸಾಕ್ಷಿಯೆಂದು ಸ್ಮರಿಸುವವನು 13 ಅಂಬುಜ ಭವಾಂಡದೊಳು ಮಹಾಂಬರವಿಪ್ಪಂತೆ ಶ್ರೀ ನಿ ತಂಬಿನಿ ಸಹ ಸರ್ವರೊಳಗೆ ತುಂಬಿಹನೆಂದರಿತ ನರನು 14 ಅದ್ವಿತೀಯನಪೇಕ್ಷ ಭಕ್ತ ಹೃದ್ವನಜ ನಿವಾಸಿಯೆನಿಸಿ ಕದ್ದೊಯ್ದವರಘವನುಣಿಪನದ್ವಯತನೆಂಬ ನರನು 15 ಜಾಂಬವತೀರಮಣ ವಿಷಯ ಹಂಬಲವನು ಬಿಡಿಸಿ ತನ್ನ ಕಾಂಬ ಸುಖವನಿತ್ತು ನಿಜ ಕುಟುಂಬದಿಡುವನೆಂಬ ನರನು 16 ಅಣು ಮಹತ್ಪದಾರ್ಥ ವಿಲಕ್ಷಣ ವಿಶೋಕ ಜೀವರೊಡನೆ ಜನಿಸಿ ಪುಣ್ಯ ಪಾಪ ಫಲಗುಳುಣದೆ ಉಣಿಪನೆಂಬ ನರನು 17 ಕರ್ಮ ಸುದತಿಯರೊಡಗೂಡಿ ಸಮಾ ಶೂನ್ಯ ಮಾಳ್ಪನೆಂದು ಪದೇ ಪದೆಗೆ ಸ್ಮರಿಸುವವನು18 ಸ್ವಾತಿವರುಷ ವಾರಿಕಣವ ಚಾತಕ ಹಾರೈಸುವಂತೆ ಶ್ವೇತವಾಹನ ಸಖನ ಕಥೆಯ ಪ್ರೀತಿಯಿಂದ ಕೇಳ್ಪ ನರನು 19 ಲೋಕಬಂಧು ಲೋಕನಾಥ ಲೋಕಮಿತ್ರ ಲೋಕರೂಪ ಲೋಕರಂತೆ ಲೋಕದೊಳು ವಿಶೋಕ ಮಾಳ್ಪನೆಂಬ ನರನು20 ಶಾತಕುಂಭವರ್ಣ ಜಗನ್ನಾಥ ವಿಠಲನೆಂಬ ಮಹ ದ್ಭೂತ ಬಡಕರಾವು ಇವನ ಭೀತಿ ಬಿಡದು ಎಂಬನರನು 21
--------------
ಜಗನ್ನಾಥದಾಸರು
ಮುಟ್ಟು ದೋರಿತು ನಿನ್ನ ಗುಟ್ಟು ಹಾರಿತು ಪ ಸಿಟ್ಟುಗೊಳ್ಳಬೇಡವೆನ್ನ ದೃಷ್ಟಿಯಿಂದ ನೋಡಿ ಕಂಡೆ ಅಷ್ಟಸಿದ್ಧಿಗಳಿದ್ದರೂ ಒಂದಿಷ್ಟು ಕೊರತೆ ಕೃಷ್ಣನೆಂಬ ಅ.ಪ ಹೇಯಗುಣವಿಲ್ಲ ಮುನಿಗೇಯ ನಿನ್ನೊಳೆಂಬ ಜನರ ಬಾಯ ಮುಚ್ಚಿಸುವೆನೆಂದತ್ಯಾಯಸಪಡುವನೆಂಬ 1 ಸತ್ಯಕಾಮನಹುದು ನೀನು ಸತ್ಯಸಂಕಲ್ಪನು ನಿನಗೆ ಮಿಥ್ಯಾವಚನಿಲ್ಲವೆಂಬೊಂದಿತ್ಯಧಿಕ ಕೊರತೆಯೆಂಬ 2 ಜ್ಷಾನವಂತನೆಯ ಬಹುಮಾನವಂತನಾದರೂ ಅ ಜ್ಞಾನಶೂನ್ಯನೆಂಬ ದೊಡ್ಡ ಹಾನಿಯೊಂದಿರುವುದೆಂಬ3 ಎಲ್ಲ ವಸ್ತುಗಳುಂಟು ನಿನಗೆ ಪುಲ್ಲನಾಭ ನಿನ್ನ ಬಳಿಯೋ ಳಿಲ್ಲವೆಂಬ ಶಬ್ದಮಾತ್ರವಿಲ್ಲವೆಂಬ ಮಾತು ಬಂದಿಹ 4 ಪಾಪವೆಂಬ ಕತ್ತಲೆಗೆ ದೀಪನಾಗಿದ್ದರು ಜನರ ಪಾಪಗಳನಪಹರಿಪ ದೀಪನಾ ಬಿಡದು ಎಂಬ 5 ಜ್ಯೋತಿಗಳಿಗೆಲ್ಲ ಪರಂಜ್ಯೋತಿಯಾಗಿರಿವ ನಿನಗೆ ಆ ಜ್ಯೋತಿಗಳೆತ್ತಿದಾರತೀ ಪ್ರೀತಿಯೆಂದು ಜನರು ಪೇಳ್ವ 6 ಹಾನಿವೃದ್ಧಿ ಶೋಕಮೋಹ ಜ್ಞಾನ ನಿನ್ನೊಳಿಲ್ಲವೆಂಬ ಹೀನವಾಕ್ಯವ ಪೇಳ್ವರೆಲ್ಲ ಮಾನನಿಧಿಗಳೆಂತೆಂಬ 7 ನಿತ್ಯತೃಪ್ತನಾದರೂ ನಿಜ ಭೃತ್ಯರನು ಪಾಲಿಸುವ ನಿತ್ಯ ಕರ್ಮದಲ್ಲಿ ಕೃತಕೃತ್ಯನುನೀನಲ್ಲವೆಂಬ 8 ಕಷ್ಟಪಡಬೇಡವೆನ್ನೊಳೆಷ್ಟು ದುರ್ಗುಣಂಗಳಿಹ ವಷ್ಟನು ಒಪ್ಪಿಸಿ ನಿನಗಿಷ್ಟ ನಾಗಬೇಕೆಂಬ 9 ಕ್ಷೀರದಧಿನವನೀತ ಚೋರನಾಗಿರಲಿ ಗೋಪೀ ಜಾರನಾಗಿರಲಿ ಸಂಸಾರವೈರಿಯು ನೀನೆಂಬ 10 ಕೊರತೆಯೆಂಬಾ ಜನರಿಗೆಲ್ಲಾ ವರವನಿತ್ತು ಪೊರೆವೆನೆಂಬ ಸ್ಥಿರವಾಗಿ ಶ್ರೀ ವ್ಯಾಘ್ರಗಿರಿಯೊಳಿರುವ ವರದ ವಿಠಲನೆಂಬ11
--------------
ವೆಂಕಟವರದಾರ್ಯರು
ಮುದದಿ ಪಾಲಿಸೊ ಮುದತೀರಥರಾಯಾ ಸದ್ಭುಧ ಜನಗೇಯಾ ಪ ಪದುಮನಾಭ ಪದ ಪದುಮ ಮಧುಪ ಸದಯಾ ಸದಮಲ ಶುಭಕಾಯಾ ಅ.ಪ ವದಗಿ ರಾಮಕಾರ್ಯದಿ ನೀ ಮನಸಿಟ್ಟಿ ಲಂಕಾಪುರ ಮೆಟ್ಟಿ ಹೆದರದೆ ದಿತಿಜರನೆಲ್ಲ ಕೊಂದುಬಿಟ್ಟೆ ಪುಚ್ಛದಿ ಪುರಸುಟ್ಟ ಕದನದಿ ಭೀಮ ವೃಕೋದರ ಜಗಜಟ್ಟಿ ಸಂನ್ಯಾಸತೊಟ್ಟಿ1 ಸೀತಾಶೋಕ ವಿನಾಶನ ಮಹಂತಾ ಮಹಬಲಿ ಹನುಮಂತ ವಾತಜ ವಾರಿಜ ಜಾತನಾಗುವಂತಾ ಖ್ಯಾತಿಯುಳ್ಳ ವಂಥಾ ಜಯವಂತಯತಿನಾಥನೆ ಶಾಂತಾ 2 ಶಿರಿಗೋವಿಂದ ವಿಠಲನ ಪ್ರೀತಿ ಕಂದಾ ಭೀಮನೆ ಆನಂದಾಗರಿದು ಮುರಿದು ಪರಮತವನೆ ಆನಂದಾ ಮುನಿ ರೂಪದಲಿಂದ ಬದರಿಗೆ ನಡೆತಂದಾ 3
--------------
ಅಸ್ಕಿಹಾಳ ಗೋವಿಂದ
ಮುಯ್ಯಾ ತಿರುಗಿಸಿದ ಹಾಡುಗಳು ಕಾಲಕಾಲಕ್ಕೆ ಗುರುಗಳ ಕಾಲಿಗೆ ಎರಗುವೆ ಕೋಲೆನ್ನಿ ಕೆಲದೆಯರು ಕೋಲೆನ್ನಿರೆ ಪ. ಸೊಲ್ಲು ಸೊಲ್ಲಿಗೆ ನಮಿಸಿ 1 ವೀತ ದೋಷನೆಂಬೊ ನೂತನ ಪುಷ್ಪ ಮುಡಿದು ಪ್ರೀತಿ ಬಡುವಗುರುಗಳ ಮಾತು ಮಾತಿಗೆ ನಮಿಸಿ2 ಬಾಲೆ ಗುರುಗಳ ಹೃದಯ ಆಲಯ ವಶವಾದ ಬಾಲಗೋಪಾಲನೆಂಬೊನೀಲ ಮಾಣಿಕವೆ ಬಿಗಿದು 3 ನಿತ್ಯ ಮೂರುತಿ ಎಂಬೊಮುತ್ತು ಮಾಣಿಕವೆ ಬಿಗಿದು4 ಸಿರಿ ರಮೆಯರಸನೆÉಂಬೊ ಬರಿಯ ಮಾಣಿಕವೆ ಬಿಗಿದು5
--------------
ಗಲಗಲಿಅವ್ವನವರು
ಮೂರುತಿ ಪುಟ್ಟ ಮೂರುತಿ ಪ. ಸಾರುತಿ ಹರಿಗುಣ ಬೀರುತಿ ತ್ರಿಜಗದಿ ಅ.ಪ. ತ್ರೇತೆಯ ಯುಗದಲಿ ಜನಿಸಿ | ರಾಮ ದೂತಕಾರ್ಯಕೆ ಮನವಿರಿಸಿ ಪ್ರೀತಿಯೊಳ್ ರವಿಜನ ಉಳಿಸಿ | ಬಹು ಖ್ಯಾತಿಯ ವಾಲಿಯನಲ್ಲೇ ಅಳಿಸಿ ವಾತವೇಗದಿ ವನಧಿಯ ದಾಟಿ ಉಂಗುರ ಸೀತೆಗಿತ್ತು ಲಂಕೆ ವೀತಿಹೋತ್ರನಿಗಿತ್ತ 1 ದ್ವಾರಕಿನಿಲಯನ ಒಲಿಸಿ | ಬಲು ಧೀರ ಭೀಮಸೇನನೆನಿಸಿ ಸೋಮಕುಲದಲಿ ಜನಿಸಿ | ಬಲು ಕಾಮಿ ಕೀಚಕನನ್ನು ವರೆಸಿ ಕಾಮಿನಿಗೋಸುಗ ಕಾಮುಕ ಕುರುಕುಲ ಧೂಮವೆಬ್ಬಿಸಿದ ನಿಸ್ಸೀಮ ಸುಗುಣಧಾಮ 2 ಪುಟ್ಟಯತಿಯ ರೂಪತಾಳಿ | ಬಲು ಗಟ್ಟಿ ಗೋಪೀ ಗೆಡ್ಡೆ ಸೀಳಿ ಪುಟ್ಟ ಕೃಷ್ಣನ ಕಂಡು ತೋಳಿ | ನಿಂದ ನಿಷ್ಟೆಯೊಳ್ ನೆತ್ತಿಯೊಳ್ ತಾಳಿ ಕುಟ್ಟಿ ಕುಮತಗಳ ವೈಷ್ಣವಾಗ್ರಣಿಯಾದ 3 ಸಾಕಾಯಿತೇ ಸ್ವಾಮಿಕಾರ್ಯ | ಇಲ್ಲಿ ಬೇಕಾಯಿತೇ ಮೌನಚರ್ಯಾ ಆ ಕಾಲದ ಎಲ್ಲ ಶೌರ್ಯ ಉಡುಗಿ ಏಕಾಂತದಲಿ ಹರಿಚರ್ಯಾ ವಾಕು ಉಚ್ಚರಿಸದೆ ಈ ಕುಧರಜೆ ತೀರ ಏಕಾಂತವಾಸನೆ 4 ಅಪಾರಮಹಿಮನೆ ಹಂಪೆ | ಯಲ್ಲಿ ಪರಿ ಇರುವುದು ತಂಪೆ ಪತಿ ಪದಕಂಜ ಕಂಪೆ | ಇಲ್ಲಿ ನೀ ಪಾರಣೆಯೆ ಮಾಳ್ಪ ಸೊಂಪೆ ಗೋಪಾಲಕೃಷ್ಣವಿಠ್ಠಲದಾಸ ನಿನ್ನಲ್ಲಿ ಸ್ಥಾಪಿಸಿದರೆ ವ್ಯಾಸರೀಪರಿ ಯಂತ್ರದಿ 5
--------------
ಅಂಬಾಬಾಯಿ
ಯತಿಗಳೊಳಗೆ ಸದ್ಗತಿ ನೀನೇ ಗುರುವರಾ ಯತಿವರ ರಾಘವೇಂದ್ರ ಪ ವತಿಯಿಂದ ನಿನ್ನ ನಾಮವೇ ಗತಿಯೆನಿಪಗೆ ಮತಿಯಿತ್ತು ವಿರಸ ಸಂಸ್ಕøತಿಯಿದುದ್ಧರಿಪೆನೀ ಅ.ಪ. ಮಧ್ವಮುನಿಯ ಕರುಣಾಬ್ಧಿಯ ಚಂದ್ರನೆ ದಯಾರಸ ಸಾಂದ್ರನೆ ಶುದ್ಧ ಪಶುವೆನಿಸಿದೆ ತಿಳಿಯದೆ 1 ನಿನ್ನ ನಾಮವ ಪಠಿಪರಿಗೆ ಸರ್ವರೋಗಗಳಿಗೆ ಹಾವಳಿಗಳಿಗೆ 2 ಸರಸ ತೀರ್ಥ ಪ್ರಸಾದವೆ ಸದ್ಗತಿ ಮೃತ್ತಿಕೆಯೇ ಮುಕುತಿ ಪ್ರೀತಿ ನಿನ್ನಲಿ ಭಕ್ತಿ 3
--------------
ನರಸಿಂಹವಿಠಲರು
ಯಾಕೆ ಬೇಕು ಜನ್ಮವಾದರು ಲೋಕನಾಥನೆ ಪ ಜೋಕೆ ಮಾಡುತಲೆನ್ನ ಕಾಯದ ನೌಕ ನಾಯಕ ನೀ ಕರುಣ ಬಿಡೆ 1 ಮಾತೆ ಕರುಣದೊಳಾತ್ಮಜಗೆ ಸ್ತನವಿತ್ತು ಪೊರೆವಂತೆ ಪ್ರೀತಿಯಲಿ ತವಜಾತನೆಂದು ಆತುರದಿ ನೀನಾದರಿಸದಿರೆ 2 ವಾರಿಧರ ನೆರೆ ಚಾತಕಗೆ ನೀರಬಿಂದುವೀವಂತೆ ಧೀರ ನರಸಿಂಹವಿಠಲನೆ ಕರುಣಾರಸವೆನಗೆ ಬೀರದಿರ್ದೊಡೆ 3
--------------
ನರಸಿಂಹವಿಠಲರು
ಯಾತಕೆ ಮರೆತೆನ್ನ ಯತಿಕುಲ ತಿಲಕನೆ ಪ್ರೀತಿಯ ಬಯಸುತ ಬಂದೆ ಪ ವಾತಸುತಗತಿಪ್ರಿಯ ದೂತನೆ ನಾಥನೀನೆಂತೆಂದು ನಂಬಿದೆ ಖ್ಯಾತಗುರು ಶ್ರೀ ರಾಘವೇಂದ್ರನೆ ಅ.ಪ. ದೇಶದೇಶದಿ ಬರುವ ದಾಸಜನರÀಘ ನಾಶಗೈಸಿ ಪೊರೆವೊ ದಾಶರಥಿ ಕಿಂಕರಾ ಶೇಷಶಯನನ ದೋಷ ಜ್ಞಾನ ವಿಶೇಷದಿಂದಲಿ ನ್ಯಾಸಮಾಡಿದೆ ಭೂಸುರೋತ್ತಮ 1 ಛಲದಿ ಭಕ್ತಿಯ ಮಾಡಿ ಒಲಿಸಿ ಹರಿಯ ಪಾದ ಲಲಿತಕೀರ್ತಿಲಿ ಮೆರೆದೆ ಭಳಿರೆ ಭಳಿರೆ ಗುರುವೇ ಗೊಲ್ಲಕೃಷ್ಣನ ಚೆಲ್ವ ನಾಟ್ಯದಿ ನಿಲ್ಲಿಸಿದ ನಿನಗೆಲ್ಲಿ ಸರಿಯೈ ನಲ್ಲ ಯತಿವರ ಕಾಲಿಗೆರಗುವೆ ಶೀಲಭಕುತಿಯ ಪಾಲಿಸೀಗಲೆ 2 ವ್ಯಾಸಮುನಿಯು ಎನಿಸಿ ಶ್ವಾಸಮತವ ಮೆರೆಸಿ ದೋಷ ಹರಿಸಿ ಧೊರೆಗೆ ದಾಸ ದೀಕ್ಷೆಯ ತೋರ್ದೆ ಈಶದಾಸರ ಭೇದ ವಾದವ ಆಶುಕವಿತದಿ ವಿಶದಪಡಿಸಿದೆ ಶ್ರೀಶಶಯನನಾವೇಶ ಸಂಯುತ ಭೇಶಕಾಂತಿ ವಿಶಾಲಕರುಣಿಯೆ 3 ದಾತ ಈತನೆಂಬ ಖ್ಯಾತಿ ಬಿರುದು ನಿನಗೆ ಪ್ರೀತಿಯಿಲ್ಲವೇ ಗುರುವೇ ಜೋತು ಬಂದೆ ಅಡಿಗೇ ಬೋಧೆಯ ನೀತಿ ಪೇಳಿದೆ ಏತಕೀತಡ ಮಾತಲಾಲಿಸು ದೂತನಿನ್ನವ ಪೂತಕಾಯನೆ4 ಪರಮ ಭಕ್ತರ ವೃಂದ ನಿರುತ ನಮಿಪ ಚೆಂದ ಅರಿಯೆ ವರ್ಣನೆ ಎಂದ ಸುರಿಸು ಭಕ್ತಿಯ ಗಂಧ ಸೂರಿ ಬೀರಿಕರುಣವ ಭಾರತೀಶನ ಸಾರಶಾಸ್ತ್ರದಿ ತೋರು ತತ್ವಾರ್ಥ 5 ಲೋಕ ಹರಕೆ ನೀಡಿ ಸಾಕಿ ಸಲಹೆ ಹೆಜ್ಜೆ ನೂಕಿ ದುರಿತರಾಶಿ ಸಾಕುಹರಿಯ ತೋರಿ ಶ್ರೀಕರಾರ್ಚಿತ ಪಾದಪಲ್ಲವ ಪಾಕನಾಶನ ಏಕ ವೀರನ ನಾಕ ಋಷಿಗತಿಪ್ರಿಯ ಶಿಷ್ಯನೆ 6 ಪಾಹಿ ಜ್ಞಾನದ ಖಣಿಯೆ ಪಾಹಿ ಭಕ್ತರ ನಿಧಿಯೆ ಪಾಹಿ ಮತಿಮತಸ್ಥಂಭ ಪಾಹಿ ಶ್ರೀ ಹರಿಯ ದೂತ ಪಾಹಿಸುಗುಣೋದಾರ ಮಹಿಮನೆ ಪಾಹಿನತಜನ ಭಾರವಹಿಪನೆ ಪಾಹಿಜಯಮುನಿ ವಾಯುವಂತರ ಗೇಹ ಸಿರಿಕೃಷ್ಣವಿಠಲ ಭಜಕ 7
--------------
ಕೃಷ್ಣವಿಠಲದಾಸರು
ಯಾತಕೊ ಭಯ ಭೀತಿ ಚಪಲತೆಯು ನಿನ ಗ್ಯಾತಕೊ ಮೂಢಮಾನವ ಪ ಪಾತಕವಳಿ ಗುರುನಾಥನ ಕೃಪೆಯೊಳು ಭೂತಳದತಿಶಯದಾತನು ಕಾಣುವಾ ಅ.ಪ ಈತರದಿ ನೀ ಬಾರದಿರುವಿಯಲ ಮೂಢಮಾನವ ರಾತ್ರಿ ಬೆಳಕಿನೊಳೇಕವಾಗೋ ಭಲಾಸಿ ಶೀತೆಯ ಕೊಂಡೊಯ್ದಾತನ ತಮ್ಮಗೆ ಪ್ರೀತಿಲಿ ಸ್ಥಿರಪದವಿತ್ತನು ಚೀ ಚೀ ನಿನಗ್ಯಾತಕೋ 1 ಯಾತ್ರೆ ಮಾಡೆಲೊ ಕ್ಷೇತ್ರವನ್ನರಿತು ಮೂಢಮಾನವ ಸೂತ್ರ ಪಿಡಿದಲ್ಲಿ ಪಾತ್ರನಾಗೆಲೊ ಧಾತ್ರಿಯೊಳು ತುಲಶೀರಾಮನು ಮಾತ್ರ ತಾ ನಿಜ ಧೋತ್ರವ ತೊಡಿಸುವ ಯಾತಕೊ 2
--------------
ಚನ್ನಪಟ್ಟಣದ ಅಹೋಬಲದಾಸರು
ಯಾತರ ಭಯ ಶ್ರೀನಾಥನ ಪರಮ ಸುಪ್ರೀತಿಯ ಪಡೆದವಗೆ ಪ ವಿಧಿ ನಿಜಸುಖದಾತ ನೆಂದರಿತವಗೆ ಅ.ಪ ಬಂಧು ಜನರು ತನಗೊಂದಿಸಿದಾಕ್ಷಣ ಬಂದ ಭಾಗ್ಯವೇನೊ ಹಿಂದೆ ಮುಂದೆ ತನ್ನ ನಿಂದಿಸಿ ನುಡಿಯಲು ಕುಂದಾದದ್ದೇನೊ ಮಂದಿರದಲಿ ತಂದಿಟ್ಟಿರುವವಗೆ 1 ದುಸುಮುಸುಗುಟ್ಟುವ ಸತಿಸುತರಿಂದಲಿ ಹಸಗೆಟ್ಟದ್ದೇನೋ ಅಶನಾಚ್ಛಾದನ ತರಲಿಲ್ಲವೆನುತಲಿ ವ್ಯಸನ ಪಡುವುದೇನೊ ವಸುದೇವನಸುತನೊಶದೊಳಗಿರುವವಗೆ 2 ಘಾಸಿಯಿಂದಲಾಯಾಸ ಪಡುತ ಅವಾಸದೊಳಿದ್ದೇನೋ ಕಾಶಿ ಕಂಚಿ ಕಾಳಹಸ್ತಿ ಮೊದಲಾದ ದೇಶ ತಿರುಗಲೇನೋ ಸಂತೋಷದಲ್ಲಿರುವವನಿಗೆ 3
--------------
ಜಗನ್ನಾಥದಾಸರು
ಯಾತವರ ನಾನಲ್ಲವೊ ಹರಿ ಬರಿದೆ ಖ್ಯಾತಿಯನು ತಂದಿತ್ತಿಯ ಪ ಮಾತುಗಳು ನಾಲುಕಾಡಿ ಸಭೆಯೊಳಗೆ ಪ್ರೀತಿ ಬಡಿಸುವೆನೊ ನರರ ರೀತಿಯಲಿ ಶ್ರುತಿ ಸ್ಮøತಿಗಳ ಪಠಿಸಿ ಶ್ರೀ- ನಾಥ ನಿನ್ನ ತೋಷಿಸಿದೆನೆ 1 ಜಪಮಣಿಗಳನು ತಿರುಹಿಸಿ | ಲೋಕರನ ಕಪಟಗೊಳಿಸುವೆನಲ್ಲದೆ ತಪ ಮಾಡಿದೆನೆ ಮನದಲಿ | ನಿನ್ನಯ ಕೃಪೆಯು ಉದಿಸುವ ತೆರದಲಿ 2 ದಾಸ ವೇಷವ ಧರಿಸಿದೆ ಕನಕದಾ- ವಾಸನೆಯಿಂದಲ್ಲದೆ ವಾಸುದೇವವಿಠಲ ಶರಣ ತಾ ಲೇಶವರಿಯೆನು ಕರುಣಿಸೊ 3
--------------
ವ್ಯಾಸತತ್ವಜ್ಞದಾಸರು
ರಕ್ಷಿಸೆನ್ನನು ಶಾರದಾಂಬೆ ನೀನುಪಕ್ಷಿವಾಹನ ಸುತ ಮನಃಪ್ರತಿಬಿಂಬೆ ಪಆದಿಮಧ್ಯಾಂತರ'ತಳೆ ಅನಾದಿ ವಸ್ತು'ನಲ್ಲಿ ಭೇದರ'ತಳೆವಾದಿಜನರಿಗಗೋಚರಳೆ ನಿನ್ನ ಪಾದವೆ ಗತಿಯೆಂದರಾದರಿಸುವಳೆ 1ಚಿದ್ರೂಪೆಯಾಗಿಪ್ಪೆ ನಿಜದಿ ಹರಿ ಮುದ್ರಿತೆಯಾಗಿ ನಾದದಿ ತೋರ್ಪೆ ಮುದದಿ ಇದ್ದು ನೀ ಚಕ್ರಸಪ್ತಕದಿ ನಾಲ್ಕ ಹೊದ್ದಿ ನಾಮವನದ ಪ್ರPಟಿಪೆ ಕ್ರಮದಿ 2ಪರವೆಂದು ನಾಭಿಯಲಿರುವೆ ಮತ್ತೆ ಮೆರೆವೆ ಹೃದಯದಲ್ಲಿ ಪಶ್ಯಂತಿ ಭಾವೆಕೊರಳಲ್ಲಿ ಬಿಡದಿರುತಿರುವೆ ಮಧ್ಯಮೆವರ ನಾಮ ವೈಖರಿುಂದ ತೋರಿಸುವೆ 3ಗೀತೆ ಭಾಗವತರೂಪಿನಲಿ ನೀನು ಮಾತೆಯಂದದಲರ್ಥಗಳನು ಪ್ರೀತಿಯಲಿ ಮಾತು ಬೋಧಿಸಿ ಪರಮನಲಿ ನಿತ್ಯ ಪ್ರೀತಿಯನುಂಟು ಮಾಡಿದೆ ಮನಸಿನಲಿ 4ಮಂದಬುದ್ಧಿಯ ನೆರೆ ಬಿಡಿಸು 'ಂದೆ ಬಂಧಿಸಿ ಬಂದಕರ್ಮವ ಕಡೆಗೊಳಿಸುತಂದೆ ಕೃಷ್ಣನ ಮುಂದೆ ನಿಲಿಸು ುನ್ನೂ ಸಂದೇಹವೇಕೆ ನೀನೇ ಬಂದು ನೆಲಸು 5ತೋರಿಸು ಮತಿಗೆ ಜ್ಞಾನವನು ಇದು ಜಾರದಂದದಲರ್ಥಗಳನು ಪ್ರೀತಿಯನುಸೇರಿ ಚಿತ್ತದಲಿನ್ನು ನೀನು ಮಂದ ಬಾರದ ಹಾಗೆ ಮಾಡೆನ್ನ ಮುಕ್ತನನು 6ಕರುಣಾಪೂರಿತದ್ಟೃುಂದ ನಿನ್ನ ಚರಣದಲಿಂಬಿಟ್ಟು ಕೊಳಲದರಿಂದನೆರೆ ಧನ್ಯನಹೆನು ನಿನ್ನಿಂದ ಕೂಡೆ ತಿರುಪತಿ ವೆಂಕಟನೊಲವದರಿಂದ 7ಓಂ ಕಮಲಾನಾಥಾಯ ನಮಃ || 2 ||ಗುರುಸ್ತುತಿಗಳು:
--------------
ತಿಮ್ಮಪ್ಪದಾಸರು
ರಧವವೇರಿದ ಚಂದ್ರಾ ರಾಘವೇಂದ್ರನೋಡು ಪಾಡು ಕುಣಿದಾಡಿ ಭಜನೆಮಾಡುಬೇಡಿದ ವರವ ಕೊಡುವಾ ಪಖಂಬದಿ ನರಹರಿ ಬರಿಸಿದ ಕಂಡಾಕುಂಭಿಣಿಪತಿ ಕುಹಯೋಗವ ಕಳೆದಾನಂಬಿದವರ ಪೊರೆವಾ 1ಆದ್ಯ ಸತ್ಯಾಗ್ರ' ಭಕ್ತ ಶಿರೋಮಣಿಉದ್ಗ್ರಂಥಗಳನು ರಚಿಸಿದ ದಿನಮಣಿಮಧ್ವಮತೋದ್ಧಾರಾ2ಭೂಪತಿ - 'ಠ್ಠಲಗೆ ಪ್ರೀತಿ 'ಖ್ಯಾತಾಆಪದ್ಬಾಂಧವ ಅನಾಥನಾಥಾರಥೋತ್ಸವದಿ ಮೆರೆವಾ 3
--------------
ಭೂಪತಿ ವಿಠಲರು
ರಮಾವಿನುತ ವಿಠಲ ಪೊರೆಯಬೇಕೊ ಇವಳ ಪ ಕ್ರಮಾನುಸಾರ ತವದಾಸ್ಯ ಕಾಂಕ್ಷಿಪಳ ಅ.ಪ. ಪತಿಸುತರು ಹಿತರಲ್ಲಿ ವ್ಯತಿರೇಕ ಮತಿ ಕೊಡದೆಅತುಳ ಪ್ರೀತಿಯಲಿ ಅವರಂತರಾತ್ಮಕನಾ |ಹಿತ ಸೇವೆಯೆಂಬ ಸನ್ಮತಿಯನೇ ಕರುಣಿಸುತಕೃತ ಕಾರ್ಯಳೆಂದೆನಿಸೊ ಕ್ಷಿತಿರಮಣ ಹರಿಯೇ 1 ಭವಶರಧಿ ದಾಟಿಸುವ ಪ್ಲವವೆನಿಪ ತವನಾಮಸ್ತವನಗಳ ಸರ್ವತ್ರ ಸರ್ವಕಾರ್ಯದಲಿಹವಣಿಸುತ ನೀನಾಗಿ ಪ್ರವರ ಸಾಧನಗೈಸೊಪವಮಾನ ಸನ್ನಿಹಿತ ಭುವನ ಮೋಹನನೇ 2 ಪ್ರಾಚೀನ ಕರ್ಮಗಳ ಯೋಚಿಸಲು ಎನ್ನಳವೇಕೀಚಕಾರಿಪ್ರೀಯ ಮೋಚಕೇಚ್ಛೆಯನುಸೂಚಿಸುವುದೋ ಸವ್ಯಸಾಚಿಸಖ ಶ್ರೀಹರಿಯೆನೀಚೋಚ್ಚ ತರತಮವ ತಿಳಿಸಿ ಪೊರೆ ಇವಳಾ 3 ನಂದ ಗೋಪನ ಕಂದ ಇಂದಿರೇಶನೆ ಹೃದಯಮಂದಿರದಿ ತವರೂಪ ಸಂದರುಶನಾ |ನಂದವನೆ ಇತ್ತಿವಳ ಅಂದದಲಿ ಸಲಹೆಂದುಕಂದರ್ಪಪಿತ ನಿನ್ನ ವಂದಿಸುತ ಬೇಡ್ವೆ4 ಅನಿರುದ್ಧ ರೂಪಾತ್ಮಮಧ್ವಗುರು ಗೋವಿಂದ ವಿಠಲ ಪ್ರಾರ್ಥಿಸುವೆ 5
--------------
ಗುರುಗೋವಿಂದವಿಠಲರು