ಒಟ್ಟು 529 ಕಡೆಗಳಲ್ಲಿ , 74 ದಾಸರು , 480 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಹರಿತ್ರಿವಿಕ್ರಮ ವ್ಯಾಸವಿಠಲ | ಪೊರೆ ಇವಳಾ ಪ ದುರಿತ ದುಷ್ಕøತವೆಲ್ಲ | ದೂರಮಾಡುತಲೀ ಅ.ಪ. ಸಾರ | ಪಠಿಸೆಂದು ಪೇಳ್ದಾ 1 ವರುಷ ಪೈಂಗಳ ಪುಷ್ಯ | ಆರಾಧನೆಯದಿನದಿಗುರುಗಳನು ಕಂಡೀಕೆ | ಅವರೆ ಇವರೆಂದುಭರದಿ ನಿಶ್ಚಯಿಸುತಲಿ | ಹರಿದಾಸ್ಯ ಕಾಂಕ್ಷಿಸುತಗುರುವೆಂದು ಎನ್ನ ಬಳಿ | ಪ್ರಾರ್ಥಿಸುತ್ತಿಹಳಾ 2 ಕಂಸಾರಿ ಕಳೆದು ಭವಸಂಸಕ್ತಳಾಗಿಸದೆ | ಉದ್ದರಿಸೊ ಇವಳಾಶಂಸಿಸೀ ತವಪಾದ | ಪಾಂಸುವನೆ ಧರಿಸಿ ನಿ-ಸಂಶಯದಿ ತವದಾಸ್ಯ | ಸಿದ್ದಿಸೊ ಹರಿಯೇ 3 ಪತಿತ ಪಾವನ ರಂಗ | ಪತಿವ್ರತೆಗೆ ಸುಜ್ಞಾನಭಕ್ತಿ ಹರಿಗುರುಗಳಲಿ | ಇತ್ತು ಅಧಿಕಧಿಕಾವತ್ತಿ ಬಹ ವಿಘ್ನಗಳ | ಹತ್ತಿಕ್ಕಿ ಪೊರೆಯೆಂದುಅರ್ಥಿಯಲಿ ಬಿನೈಪೆ | ಮರುತಂತರಾತ್ಮ 4 ದರ್ವಿ ಜೀವಿಯ ಪೊರೆಯೊ | ದುರ್ವಿಭಾವ್ಯನೆ ಹೃದಯಗಹ್ವರದಿ ತವರೂಪ | ತೋರ್ವ ಮನಮಾಡೀಸರ್ವತ್ರ ತವನಾಮ | ದಿವ್ಯ ಸಂಸ್ಕøತಿ ಈಯೊಸರ್ವೊತ್ತಮನೆ ಗುರು | ಗೋವಿಂದ ವಿಠಲಾ 5
--------------
ಗುರುಗೋವಿಂದವಿಠಲರು
ಹರಿಮುಖಿ ಹರಿವಾಣಿ ಹರಿವೇಣಿ ಹರಿಣಾಕ್ಷಿಹರಿಮಧ್ಯೆ ಹರಿಗಮನೆ ಪ ಹರಿಯ ನಂದನ ಸಖನೆನಿಪ ಅಹೋಬಲದಹರಿಯ ನೀ ತಂದು ತೋರೆ ಅ ಎರವಿನ ತಲೆಯವನಣ್ಣನಯ್ಯನಪರಮ ಸಖನ ಸುತನಹಿರಿಯಣ್ಣನಯ್ಯನ ಮೊಮ್ಮನ ಮಾವನತಂದೊಟ್ಟಿದನ ಹಗೆಯಗುರುವಿನ ಮುಂದೆ ಮುಂದಿಹ ಬಾಹನಕಿರಿಯ ಮಗನ ರಾಣಿಯದುರುಳತನದಿ ಸೆಳೆದುಕೊಂಡನ ಕೊಂದನತರಳೆ ನೀ ತಂದು ತೋರೆ 1 ಸೋಮನ ಜನಕನ ಸತಿಯ ಧರಿಸಿದನರೋಮ ಕೋಟಿಯೊಳಿಟ್ಟಹನಕಾಮಿನಿ ಸತಿಯ ಕಂದನ ತಮ್ಮಗೊಲಿದನಭಾಮೆ ನೀ ತಂದು ತೋರೆ 2 ಶ್ರುತಿಯನುದ್ಧರಿಸಿ ಭೂಮಿಯ ಪೊತ್ತು ಅಡವಿಯಪಥದೊಳು ತಿರುಗಿದನ ಅತಿಶಯ ನರಹರಿ ವಾಮನ ರೂಪಿನಪಿತನ ಮೋಹದ ರಾಣಿಯ ಹತ ಮಾಡಿ ಸತ್ಯಕ್ಕೆ ನಿಂತು ನಗವ ಹೊತ್ತುಪತಿವ್ರತೆಯರ ಭಂಗಿಸಿಕ್ಷಿತಿಯೊಳು ರಾಹುತನಾದ ಬಾಡದಾದಿಕೇಶವನ ತಂದು ತೋರೆ3
--------------
ಕನಕದಾಸ
ಹರಿಯ ಚರಣ ನಿರುತ ಸ್ಮರಿಸಲೊ ಮೂಢ ಮನುಜ ನಿತ್ಯ ಪಾಡಿ ಭಜಿಸು ನರಕಭಯ ವಿಮುಕ್ತನಾಗೆಲೋ ಪ ಹಿಂಡುಬಳಗ ಕೂಡಿಹಾಕಿದಿ ಆಸಕ್ತನಾಗಿ ಬಂಡಿಹೊನ್ನು ಘಳಿಸಿ ಹೊಳಿದಿ ಬಗೆಬಗೆಯಲಿಂಡು ಬಂಡÀ ಬೆಳಸಿ ತುಂಡಗ್ವಾಣದಿ ತುಂಡಿನೇಗ ಜವನಭಟರು [?] ಬೆನ್ನ ಬಿಡವು 1 ಪಗಲು ಹರಟಿಯೊಳಗೆ ಪೋದಿತು ಆಯುಷ್ಯದೊಳಗೆ ಮಿಗಿಲು ರಾತ್ರಿ ವಿಷಯಗಳೆಯಿತು ಸುಗಂಧದ್ರವ್ಯ ಸೊಗಸಿನಿಂದ ಮೈಯ್ಯ ಮುಸುಕಿತು ಜಗದಿ ಘೂಳೆಯಂತೆ ಮೆರೆದಿ ಸೊಗಸಿನಂಗ ತೊಲಗಿತಲ್ಲಿ 2 ದುಷ್ಟತನಕೆ ದಾರಿ ಕೊಡದಿರು ಲೋಕದಲಿ ನೀನು ಭ್ರಷ್ಟನಾಗದೆ ತುಷ್ಟಿಯಿಂದಿರು ಕಷ್ಟಸುಖಗಳ್ಹರಿಗೆಯರ್ಪಿಸಿ ಸೃಷ್ಟಿಪರ ನರಸಿಂಹವಿಠಲನಷ್ಟ ವಿಧದಿ ಪೂಜೆಗೈದು ಇಷ್ಟ ಮುಕ್ತಿ ಸುಖ ಪಡೆಯೋ 3
--------------
ನರಸಿಂಹವಿಠಲರು
ಹರೇ ಕೃಷ್ಣ ಲೋಕನಾಯಕ ಪಾಲಿಸೆನ್ನ ದೊರೆ ಸರ್ವ ಸೌಖ್ಯದಾಯಕ ಪ. ಮೂಢ ಚಿಂತೆ ಎಂಬುದೋಡಿಸು ಕರುಣವಿರಿಸು ಸದಾ ನಿನ್ನ ಸ್ಮøತಿಯ ನೀಡಿಸು ಉದಾಸೀನಭಾವದೂಡಿಸು ಭೂಪ ನಿನ್ನ ಪದಾಬ್ಜವನು ಶಿರದೋಳಾಡಿಸು 1 ಪರಮನೋವೃತ್ತಿ ತಿಳಿಯದೆ ನಿತ್ಯದಲ್ಲಿ ಕರಗಿ ಕಲ್ಮಶವನು ತಾಳಿದೆ ಮರುಗಿ ಮುಗ್ಗಿ ಮುಂದುಗಾಣದೆ ತತ್ವ ತಿಳಿಯ- ದಿರುವೆ ನಿಂತು ಕಂಪುಗೊಳ್ಳದೆ 2 ಈಶ ನೀನೊಬ್ಬನಲ್ಲದೆ ದಾಸನನ್ನು ಪೋಷಿಸುವರ ಕಾಣೆ ಲೋಕದಲಿ ಬೇರಿನ್ನು ಬೇಡವೆನ್ನಲಿ ವೆಂಕಟಾದ್ರಿ ಭೂಪ ಬೇಗ ಕಾಯೊ ಕರುಣದಿ 3
--------------
ತುಪಾಕಿ ವೆಂಕಟರಮಣಾಚಾರ್ಯ
ಹೊಂದಬೇಕು ನಿಜನೋಡಿ ತಂದೆ ಗುರುನಾಥ ಬೋಧ ಧ್ರುವ ಪರಧನ ಪರಸತಿಯರ ಬಿಟ್ಟರೆ ಸಾಕು ಹೇಸಿ ತೋರುವುದು ತನ್ನೊಳು ಪ್ರತ್ಯಕ್ಷ ವಾರಣಾಸಿ ಸುರಿಮಳೆಗರೆವುದು ಹೆಜ್ಜೆಜ್ಜಿಗೆ ಪುಣ್ಯದ ರಾಶಿ ಅರಿತು ಏಕರಸವಾಗಿ ಸದ್ಗುರು ಸ್ಮರಿಸಿ 1 ಜನ್ಮಕೆ ಬಂದ ಮ್ಯಾಲೆ ಪುಣ್ಯಪಥ ಸಾಧಿಸಿ ಸನ್ಮತ ಸುಖಸಾರದೊಳು ಮನಭೇದಿಸಿ ಉನ್ಮನವಾಗಿ ಜೀವನ ಸದ್ಗತಿಗೈದಿಸಿ ಜನ್ಮಕೆ ಬೀಳುವ ಭವಬಂಧನ ಛೇದಿಸಿ 2 ಸಾಯಾಸದಿಂದ ಸಾಧಿಸಬೇಕು ಸಾಧುಸಂಗ ಗುಹ್ಯಗುರುತ ನೋಡಲಿಬೇಕು ಅಂತರಂಗ ಬಾಹ್ಯಾಂತ್ರದೋರುತಿದೆ ಸದ್ಗುರು ಪ್ರಾಣಲಿಂಗ ಭವ ಭಂಗ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಹ್ಯಾಂಗಾದರ್ಹಾಂಗಾಗಲಿ ಎ- ನ್ನಿಂಗಿತವ ನೀ ಬಲ್ಲೆ ರಂಗಯ್ಯಪ ಮಂಗಳಾಂಗ ನೀ ಕೊಟ್ಟು ಸಲಹೋ ಶುಭಾಂಗ ಅ- ನಂಗಜನಕ ಭುಜಂಗಶಯನ ಮಾ- ತಂಗವರದ ಶ್ರೀ ರಂಗನಾಥನೇ1 ದೇವಾ ನಾ ಸದ್ಭಾವದಲ್ಲಿ ನಿನ್ನ ಪಾದ ಪದುಮ ನಿರುತ ಧೇನಿಸುವೆ ಪವಮಾನ ಜೀವೋತ್ತಮ ನೀ ಧರ್ಮೋತ್ತಮನೆನ್ನುವ ಭಾವ ಎನಗಾವಕಾಲದಿ ಇರಲಿ ಬೇಡೆನು ಇತರ ಸಂಪದವಾ 2 ಶ್ರೀಶಾ ಶ್ರೀ ವೆಂಕಟೇಶ ನಿರ್ದೋಷ ಗುಣ ವಾಸನೆ ನಿನ್ನ ದಾಸಜನಭವಪಾಶ ಕ್ಲೇಶ- ನಾಶನವ ಗೈಸಿ ಸಲಹುವುದು ಶೇಷಶಯನ ಶ್ರೀ ರಂಗಶಾಯಿ 3
--------------
ಉರಗಾದ್ರಿವಾಸವಿಠಲದಾಸರು
ಹ್ಯಾಗೆ ದರುಶನ ಪಾಲಿಸುವೆ ವಿಠ್ಠಲನೆ ಹ್ಯಾಗೆನ್ನ ಪೊರೆವೆ ವಿಠ್ಠಲನೆ ಪ. ನಾಗಶಯನನೆ ನಿನ್ನ ನೋಡಬೇಕೆಂದು ಮನ ಈಗ ತವಕಿಸುತಿಹುದು ಹ್ಯಾಗೆ ಮಾಡಲಿ ವಿಠಲ ಅ.ಪ. ಅರಿಯದಾ ದೇಶದಲಿ ಆಲ್ಪರಿದು ಅನ್ಯರಿಗೆ ಬರಿದಾಯ್ತು ಬಯಕೆ ವಿಠ್ಠಲನÉ ಪರಿ ಹರಿಯೆ ನೀನಲ್ಲದಲೆ ಪೊರೆಯುವರ ಕಾಣೆ ವಿಠ್ಠಲನÉ 1 ಕೈಯಲ್ಲಿ ಕಾಸಿಲ್ಲ ಮೈಯಲ್ಲಿ ಬಲವಿಲ್ಲ ಹ್ಯಾಗೆ ಬರಲಿನ್ನು ವಿಠ್ಠಲನೆ ನ್ಯಾಯದಿಂದಲಿ ಹಿಂದಿನಾ ಭಕ್ತರಂದದಲಿ ಕಾಯಬಾರದೆ ಎನ್ನ ಪೇಳೂ ವಿಠ್ಠಲನೆ 2 ಭಕ್ತ ಸುರಧೇನೆಂಬೊ ಬಿರುದು ಕೇಳೀ ಬಂದೆ ಚಿತ್ತಕ್ಕೆ ಬರದೆ ವಿಠ್ಠಲನೆ ಭಕ್ತರಾ ಕೂಟದಲಿ ಸೇರಲಿಲ್ಲವೆ ನಾನು ಭಕ್ತವತ್ಸಲನಲ್ಲವೇನೊ ವಿಠ್ಠಲನೆ 3 ತಂದೆ ತಾಯಿಯು ನೀನೆ ಬಂಧು ಬಳಗವು ನೀನೆ ಇಂದಿರೇಶನೆ ಕಾಯೊ ಸತತ ವಿಠ್ಠಲನೇ ಹಿಂದಿನವರನು ಪೊರೆದ ಕೀರ್ತಿ ಉಳಿಯಲು ಈಗ ಕುಂದನೆಣಿಸದೆ ಕಾಯಬೇಕೊ ವಿಠ್ಠಲನೇ 4 ಕರುಣಿ ಎನ್ನಯ್ಯ ಕಂಗೆಡಿಸದಲೆ ಕಾಪಾಡೊ ಚರಣವೇ ಗತಿ ಎಂದು ಬಂದೆ ವಿಠ್ಠಲನೆ ಗುರು ಅಂತರ್ಯಾಮಿ ಎನ್ನಭಿಮಾನ ನಿನದೈಯ್ಯ ಸಿರಿಯರಸ ಗೋಪಾಲಕೃಷ್ಣವಿಠ್ಠಲನೆ 5
--------------
ಅಂಬಾಬಾಯಿ
(ಈ) ಶಾಂತಭಾವ81ಆವ ನರನ ಬಂಡಿಯ ಬೋವನುದೇವ ಬಿಡದೆ ನಮ್ಮನು ಕಾವನು ಪ.ನಾಕಪತಿಯ ಮುದವಳಿಯಲು ಕೋಪದಿನಾಕು ಮೂರುದಿನ ಮಳೆಗರೆಯಲುಆ ಕಮಲಾಕ್ಷ ಕರುಣದಿ ಗಿರಿಯನೆತ್ತಿಗೋಕುಲವಿಸರ ಭಯವ ಕಳೆದಹರಿ1ದುಷ್ಟ ಸುಯೋಧನನನುಜ ಸಭೆಯೊಳು ಯುಧಿಷ್ಠಿರ ಸತಿಯ ಲಜ್ಜೆಯಕೆಡಿಸೆಕಷ್ಟಿಸಿ ದ್ವಾರಕೆಕೃಷ್ಣ ಪೊರೆಯೆನಲುಶಿಷ್ಟಳಿಗಂಬರವಿತ್ತಭಿಮಾನಿ 2ಅಹ:ಪತಿಯ ಸುತ ಬವರದೊಳಗೆ ಸಿತವಾಹನನ ಶಿರ ಕೆಡೆಯೆಸೆಯೆಮಹಾಮಹಿಮ ರಥವಿಳೆಗೊತ್ತಿ ಭಕ್ತನಸ್ನೇಹದಿ ತಲೆಯನುಳುಹಿದ ದಯಾನಿಧಿ 3ಕಲಶಜಭವ ವೈರಾಟೆಯ ಬಸುರಿಗೆನಳಿನಭವಾಸ್ತ್ತ್ರವ ಬಿಡೆ ಕಂಡುಅಳುಕದವೋಲರಿಯಿಂದ ನಿವಾರಿಸಿಸುಲಭದಿ ಮಗುವ ಸಲಹಿದ ಸರ್ವೋತ್ತಮ 4ತನ್ನ ನಂಬಿದರಿಗಿನಿತು ಕುಂದಾದರೆತನ್ನದೆಂದರಿದಾವ ಕಾಲದಲಿಮನ್ನಿಸಿ ಪೊರೆಉರಗಾದ್ರಿಯೊಳೆಸೆವ ಪ್ರಸನ್ನ ವೆಂಕಟ ಭೂವರಾಹಾನಂತರೂಪ 5
--------------
ಪ್ರಸನ್ನವೆಂಕಟದಾಸರು
(ಕೇಶವಾಯ ನಮಃ ದಿಂದ ಆರಂಭವಾಗುವ ಆಚಮನ ಸ್ತುತಿ)ಶ್ರೀನಿವಾಸಾಯ ನಮೋ ಪ.ಶ್ರೀನಿವಾಸಾಯ ಶತಭಾನುಪ್ರಕಾಶಾಯಶ್ರೀನಿವಾಸಾಯ ನಿಜ ಭಕ್ತಜನಪೋಷಾಯಶ್ರೀನಿವಾಸಾಯ ಪರಮಾನಂದಘೋಷಾಯ ಅ.ಪ.ದೋಷಗಂಧವಿದೂರ ಕೇಶಿಮುಖದಾನವ ವಿ-ನಾಶವಿಧಿಭವಸುಖನಿವಾಸ ವಾಸುಕಿಶಯನವಾಸವಾದ್ಯಮರಗಣಪೋಷ ಪಾವನವೇಷ ಶ್ರೀಶ ನಿರ್ಗತವಿಶೇಷದಾಸಜನಹೃದಯಾಬ್ಧಿಭೇಶ ಕೌಸ್ತುಭಮಣಿವಿ-ಭೂಷ ಭೂತಾತ್ಮ ಭವಪಾಶಹರ ಪರತರ ದ-ಯಾ ಸಮುದ್ರ ವಿನಿದ್ರ ಭೂಶಯನ ಭೂರಿಪ್ರದಕೇಶವಾಯ ನಮೋನಮಃ 1ಕ್ಷೀರಸಾಗರವಾಸ ಶ್ರೀರಮಾಪ್ರಾಣೇಶಸಾರಭೋಕ್ತøಸ್ವತಂತ್ರ ಚಾರುಷಡ್ಗುಣಭರಿತನಾರದಾದಿಮುನೀಂದ್ರವಾರಸನ್ನುತಪಾದನೀರರುಹದ್ವಂದ್ವನೆವಾರಿಜಾಸನಮುಖ್ಯಸುರರುತಿಳಿಯರು ನಿನ್ನಭೂರಿಮಹಿಮೆಗಳ ಸಾಕಾರವನು ಬಣ್ಣಿಸುವಧೀರನಾವನು ಮಹಾ ವೀರ ವಿಶ್ವಾಧಾರನಾರಾಯಣಾಯ ನಮೋ 2ವೇದವೇದ್ಯನೆ ದುರಿತಶೋಧನೆ ದೈತ್ಯಗಣ-ಛೇದಕನೆ ಸುರಸುಪ್ರಸಾದಕನೆ ಭಕ್ತಜನ-ಮೋದದಾಯಕ ಸ್ವಗತ ಭೇದವರ್ಜಿತಸಮಾನಾಧಿಕ್ಯರಹಿತ ಸತತಆದಿತ್ಯ ಶತಕೋಟಿತೇಜೋವಿರಾಜ ಮಹ-ದಾದಿಕಾರಣ ಮಧುವಿರೋಧಿ ಮಂಗಲಸುಖಾಂ-ಬೋಧಿ ಪದ್ಮಾಲಯವಿನೋದಿ ರಾಧಾರಮಣಮಾಧವಾಯ ನಮೋನಮಃ 3ಇಂದಿರಾಹೃದಯಾಬ್ಧಿ ಚಂದ್ರ ಚಾರ್ವಂಗ ಮುಚು-ಕುಂದಾಪ್ತ ಸರ್ವಶ್ರುತಿವೃಂದಪ್ರತಿಪಾದ್ಯ ಸಾ-ನಂದ ಭರಿತ ಕಾಳಿಂದೀರಮಣ ರಾಮಚಂದ್ರಸನ್ನುತಮಹೇಂದ್ರವಂದಾರುಜನತ್ರಿದಶಮಂದಾರ ಕೋಮಲಿತವೃಂದಾವನವಿಹಾರ ಕಂದರ್ಪಜನಕ ಬಾ-ಳೇಂದುಶೇಖರಸಖ ಸನಂದನಾರ್ಚಿತ ಶ್ರೀಗೋವಿಂದಾಯತುಭ್ಯಂ ನಮಃ 4ಜಿಷ್ಣುರಥಸಾರಥಿ ತ್ರಿವಿಷ್ಟಪಸಭಾಧ್ಯಕ್ಷಮುಷ್ಟಿಕಾಸುರವೈರಿ ಮುನಿಜನಮನೋಹಾರಿಮುಟ್ಟಿ ಭಜಿಪರ ಮನೋಭೀಷ್ಟವ ಸಲ್ಲಿಸುವ ಶ್ರೇಷ್ಠ ಪೂರ್ಣಬ್ರಹ್ಮನೇಭ್ರಷ್ಟಸಂಸಾರದೊಳು ನಷ್ಟ ಬುದ್ಧಿಗಳಿಂಗೆತುಷ್ಟಿಯನು ನೀನಿತ್ತು ಸಲಹೊ ಸಾಮಜವರದಬೆಟ್ಟದೊಡೆಯನೆ ಕೃಪಾದೃಷ್ಟಿಯಿಂದಲಿನೋಡುವಿಷ್ಣವೇತುಭ್ಯಂ ನಮೋ 5ವಿಧಿಭವಾದಿ ಸಮಸ್ತ ತ್ರಿದಶಜನಸುಖದಾತಬುಧಜನಪ್ರಿಯ ಭೂತಭಾವನ ಜಗನ್ನಾಥಪದುಮಾಕ್ಷ ಪಾಂಡವಪ್ರತಿಷ್ಠಾಪನಾಚಾರ್ಯಮದನಕೋಟಿಸ್ವರೂಪವಿದುರನಾಲಯದಲ್ಲಿ ಪಾಲುಂಡ ಬ್ರಹ್ಮಾಂಡ-ಕಧಿಪತಿ ಕಲಿಮಲನಾಶ ಕವಿಜನಮನೋಲ್ಲಾಸವಿಧುಮಂಡಲಸ್ಥ ಸದ್‍ಹೃದಯಪಂಕಜವಾಸಮಧುಸೂದನಾಯ ನಮೋ 6ಅಕ್ರೂರವರದ ಸದತಿಕ್ರಮರ ಗೆಲಿದ ಹಯ-ವಕ್ತ್ರವೈಕುಂಠಾಖ್ಯ ಪುರವಾಸ ಜಗದೀಶಶುಕ್ರ ಶಿಷ್ಯರನೆಲ್ಲ ಪರಿಹರಿಸಿ ಪಾಲಿಸಿದೆ ಶಕ್ರಾದಿಸುರಗಣವನುಚಕ್ರ ಶಂಖ ಗದಾಬ್ಜಧರ ಚತುರ್ಭುಜ ದೇವ-ಚಕ್ರವರ್ತಿಯನಂತಕೀರ್ತಿ ಪಾವನಮೂರ್ತಿನಕ್ರಮದಹರನಾದ ಬ್ರಹ್ಮ ಗಂಗಾಪಿತತ್ರಿವಿಕ್ರಮಾಯ ನಮೋನಮಃ 7ರಾಮಣೀಯಕ ವಪು ನಿರಾಮಯ ನಿರಾಶ್ರಯ ಸು-ದಾಮಸಖ ಪರಿಪೂರ್ಣಕಾಮ ಕೈರವದಳ-ಶ್ಯಾಮ ಕಲ್ಯಾಣ ನಿಸ್ಸೀಮ ಮಹಿಮನೆಸುಜನಸ್ತೋಮಸುರಕಾಮಧೇನುಗೋಮಿನೀಪತಿ ಗೋಗಣಾನ್ವಿತನೆ ಗೋಪೀಲ-ಲಾಮ ಗೋವರ್ಧನೋದ್ಧಾರ ಗೋವಿದಾಂಪತಿ ವಿ-ರಾಮ ವಿಷ್ವಕ್ಸೇನ ವಿಶ್ವತೈಜಸಪ್ರಾಜÕವಾಮನಾಯ ನಮೋನಮಃ8ಆದಿಮಧ್ಯಾಂತವಿರಹಿತ ನಿಖಿಲಸಾರ್ಚಿತ ವಿ-ರಾಧಭಂಜನ ಭವಾಂಬೋಧಿಕುಂಭಜ ಭಜಕ-ರಾದವರನುದ್ಧರಿಪ ಬೋಧರೂಪನೆಚತುಷ್ಟಾದ ಪಾವನಚರಿತನೆಗಾಧಿಜಾಧ್ವರಪಾಲ ಗರುಡಧ್ವಜ ದಯಾಳುನಾದಬಿಂದು ಕಲಾತೀತ ರುಕ್ಮಿಣಿನಾಥಬಾದರಾಯಣನೆ ನಿರುಪಾಧಿ ಮಾಯಾತೀತಶ್ರೀಧರಾಯ ನಮೋನಮಃ 9ಪಾಶಧರನುತ ವೆಂಕಟೇಶ ಸರ್ವೇಂದ್ರಿಯಪ್ರ-ಕಾಶ ಪಾಲಿತನಿಖಿಳಭೂಸುರವ್ರಜ ಮಂದ-ಹಾಸಮುಖ ನವಕುಂದಭಾಸರದನವಿರಾಜದೂಷಣಾದ್ಯ ಸುರಹರನೆಈಶಪತಿಸೇವ್ಯಾಂಬರೀಶನೃಪವರದ ಪರ-ಮೇಶ ಕೋವಳಪೀತವಾಸ ಕರ್ದಮಶುಕಪ-ರಾಶರಾದ್ಯಮಿತಯೋಗೀಶರಕ್ಷಕಹೃಷೀಕೇಶಾಯ ತುಭ್ಯಂ ನಮೋ 10ಶುದ್ಧ ತ್ರಿಗುಣಾತೀತ ತ್ರಿವ್ರತ ತ್ರಿಜಗತ್ಪಾಲಪ್ರದ್ಯುಮ್ನ ಪ್ರಥಮಾಂಗದೊಡೆಯ ಪರಮಾತ್ಮ ಸುರ-ಸಿದ್ಧ ಪೂಜ್ಯ ಪುಂಡರೀಕದಳಾಕ್ಷಬುದ್ಧಬುಧಜನಸುಲಭಮಧ್ವವಲ್ಲಭ ಮಂತ್ರಮೂರ್ತಿ ಕ್ಷೀರಾಬ್ಧಿ ಶ್ವೇತದ್ವೀಪವೈಕುಂಠಮಂದಿರತ್ರಯ ಸಾಧು-ಹೃದ್ಯ ಭಕ್ತದ್ವೇಷಭಿದ್ಯ ನಿತ್ಯಾತ್ಮ ಶ್ರೀಪದ್ಮನಾಭಾಯ ನಮಃ11ಸಾಮಗಾನವಿನೋದ ಸಾಧುಜನಸುಖಬೋಧಕಾಮಿತಾರ್ಥಪ್ರದಾತ ಕಪಿಲಋಷಿ ಪ್ರಖ್ಯಾತವ್ಯೋಮಯಾನವರೂಥ ಓಂಕಾರಭರಿತ ರಘುರಾಮಸಮರಂಗ ಭೀಮನಾಮಧಾರಕರ ಪರಿಣಾಮರೂಪಕ ಸುಜನ-ಕ್ಷೇಮಪ್ರಾಪಕ ನೀಲಜೀಮೂತನಿಭವರ್ಣಭೌಮಪುರುಷೋತ್ತಮ ನಿಯಾಮಕನೆ ರಕ್ಷಿಸೈದಾಮೋದರಾಯ ನಮೋ 12ಶಂಕರಾಂತರ್ಯಾಮಿ ಶಾಙ್ರ್ಗಪಾಣಿ ಶರಣ್ಯವೆಂಕಟಾಚಲಸದಾಲಂಕಾರ ಶೇಷಪರಿ-ಯಂಕ ಪ್ರವಿತತನಿಷ್ಕಳಂಕಚಾರಿತ್ರ ಸುಸಂಕುಲಾರ್ಚಿತ ಪದಯುಗಲಂಕಾಧಿಪತ್ಯವ ವಿಭೀಷಣನಿಗೊಲಿದಿತ್ತಓಂಕಾರನಿಧನ ಸಾಮಕಭಕ್ತರಾನೇಕಸಂಕಟವ ಪರಿಹರಿಪ ಸತ್ಯ ಸಂಕಲ್ಪ ಶ್ರೀಸಂಕರ್ಷಣಾಯ ನಮೋ13ಈ ಸಮಸ್ತ ಜಗತ್ತು ನಿನ್ನುದರದೊಳಗಿಹುದುಈ ಸಕಲಜೀವರೊಳಗಿಹ ನಿತ್ಯನಿರ್ಮುಖ್ಯಸೂಸಿಬಹ ಸಂಸಾರಸಾಗರದಿ ಮುಳುಗಿದೆನುನೀ ಸಲಹೊ ದೇವದೇವಭೂಸಲಿಲಪಾವಕಾಕಾಶಾದಿ ಭೂತಾಧಿ-ವಾಸ ರಾಕ್ಷಸವನಹುತಾಶ ನಾನಾ ರೂಪ-ವೇಷಧಾರಕ ನರಾವೇಶ ಪಾಲಿಸು ಎನ್ನವಾಸುದೇವಾಯ ನಮೋ 14ಅದ್ವಿತೀಯನೆಯಮಿತವಿಕ್ರಮನೆ ಗುಣಕಾಲವಿದ್ಯಾಪ್ರವರ್ತಕನೆ ವಿಶ್ವಾದಿ ಸಾಹಸ್ರಸಿದ್ಧನಾಮ ನರನಾರಾಯಣಪರಾಯಣನೆ ಬುದ್ಧಿಪ್ರೇರಕಪ್ರೇರ್ಯನರುದ್ರರೂಪಪ್ರತಾಪ ಋಗ್ಯಜುಸ್ಸಾಮಶ್ರುತಿ-ವೇದ್ಯ ಬ್ರಹ್ಮಾಂಡಕೋಟಿಗಳ ಸಲೆ-ಬದ್ಧಕಮನೀಯರೂಪಸುತಪದುರಾಪಪ್ರದ್ಯುಮ್ನಾಯ ತುಭ್ಯಂ ನಮಃ 15ಉದ್ಧವಾದಿ ಸಮಸ್ತ ಭಾಗವತಜನಕಮಲ-ಮಧ್ಯಚರರಾಜಹಂಸಾಯ ಮಾನಸದಶ್ರದ್ಧೆಯಂ ಕೊಟ್ಟು ರಕ್ಷಿಸು ಧೊರೆಯೆಶ್ರೀಹರಿಯೆ ವೈದ್ಯನಾಥವಿಧಾತನೆಬದ್ಧನಾದೆನು ಕರ್ಮಪಾಶದಿಂದ ದೊರೆ ಸಿಕ್ಕಿ-ಬಿದ್ದೆ ಕೈಪಿಡಿದೆಬ್ಬಿಸೆನ್ನನೆಲೆದೇವ ಮರೆಹೊದ್ದಿದೆನು ಮೈದೋರು ಚಿನುಮಯಾತ್ಮಕನೆಅನಿರುದ್ಧಾಯ ತುಭ್ಯಂ ನಮಃ 16ಕ್ಷರ ಪುರುಷರೆಲ್ಲ ಬ್ರಹ್ಮಾದಿ ಜೀವರು ರಮಾಕ್ಷರಪುರುಷಳೆನಿಸುವಳು ನೀನೆ ಉತ್ತಮ ಪರುಷಪರತರಾವ್ಯಯಲೋಕಭರಿತಮಂಗಲರಿತ ಗುರುತಮ ಗುಣಧ್ಯಕ್ಷನೆಶರಧಿಸೇತುನಿಬದ್ಧ ಶಬರಿ ಹಣ್ಣನು ಮೆದ್ದಶರಭಂಗಮುನಿಪಾಲ ಶಮಿತದಾನವಜಾಲಧುರವಿಜಯ ವಿಜಯಮೈದುನ ಕೃಷ್ಣ ರಕ್ಷಿಸೈಪುರುಷೋತ್ತಮಾಯನ್ನಮೋ 17ಅಕ್ಷಯಾತ್ಮನೆ ವಿಶ್ವರಕ್ಷಕನೆ ವಿಶ್ವಭುಗ್-ವಿಶ್ವತೋಮುಖ ವಿಶ್ವತೋಬಾಹು ಕರುಣಾಕ-ಟಾಕ್ಷದಿಂ ನೋಡೆನ್ನಮ್ಯಾಲೆದಯಮಾಡು ಶ್ರೀವಕ್ಷಸ್ಥಲನಿವಾಸನೆಲಕ್ಷ್ಮಣಾಗ್ರಜನೆ ಸುವಿಲಕ್ಷಣನೆ ಸುಜ್ಞಾನ-ಮೋಕ್ಷದಾಯಕ ಯಜÕಮೂರ್ತಿ ರೂಪತ್ರಯ ಮ-ಹೋಕ್ಷಧ್ವಜನಂ ಮೋಹಿಸಿದ ಮೋಹಕಲ್ಪಅಧೋಕ್ಷಜಾಯ ನಮೋನಮಃ 18ಕ್ರೂರಕರ್ಮಿ ಹಿರಣ್ಯಕಶಿಪುವಂ ಕೊಂದ ದು-ರ್ವಾರದುರಿತಾಬ್ಧಿಬಾಡಬ ಭಕ್ತವತ್ಸಲ ಮ-ಹಾರವಕುಲಿಶ ಶತಕೋಟಿಸದೃಶನಶಿರಪ್ರಕರಧೀರ ಪ್ರಹ್ಲಾದಾಭಿವರದಭೂರೀಕರರೂಪ ಭೂಮಕೀರ್ತಿಕಲಾಪಸಾರವಜ್ರಸ್ತಂಭದಿಂ ಬಂದ ನಂದ ಸುಕು-ಮಾರಮಾರ್ಕಾಂಡೇಯವರದ ಲೋಕಶರಣ್ಯನಾರಸಿಂಹಾಯ ನಮೋ 19ನಿಶ್ಚಲಾತ್ಮ ನಿರೀಹ ನಿರ್ವಿಕಾರಾನಂತಪ್ರೋಚ್ಛ ಸರ್ವಗ ಸದಾನಂದ ಪರಿಪೂರ್ಣ ತ-ನ್ನಿಚ್ಛೆಯಿಂದಲಿ ಜಗವ ಪಾಲಿಸುವನಿರ್ಮಿಸುವ ಆಶ್ಚರ್ಯಕೃತಸಲೀಲಮುಚ್ಚುಮರೆ ಯಾಕಿನ್ನು ಮುಗಿದು ಬೇಡುವೆ ಕೈಯಸ್ವಚ್ಛತರ ಭಕ್ತಿಭಾಗ್ಯವನಿತ್ತು ಸಲಹೊ ಮಹ-ಕಚ್ಛಪನೆ ಕಾಳೀಯಮರ್ದನಮಹಿತಶ್ರೀಮದಚ್ಯುತಾಯ ನಮೋನಮಃ 20ಚೈದ್ಯಮಥನ ಮನೋಜÕಶುದ್ಧಾತ್ಮ ಸರ್ವಜÕಯುದ್ಧದಲಿ ಸೈಂಧವನ ಶಿರವ ಕೆಡಹಿಸಿ ಜಯವಹೊದ್ದಿಸಿದ ಪಾರ್ಥನಿಂಗೆಇದ್ದು ನೀ ಹೃದಯದೊಳು ತಿದ್ದೆನ್ನ ಮತಿಯ ಸ್ಮರ-ವಿದ್ದ ಮಾನಸವ ಪಾದದ್ವಯದೊಳಿರಿಸೈ ದ-ಯಾದ್ರ್ರಚಿತ್ತ ಸ್ವಭಕ್ತಸಂಸಾರಿ ಕಾಯೆಜನಾರ್ದನಾಯ ನಮೋನಮಃ 21ಮಂದಾಕಿನಿಯ ಪಡೆದ ಮಾತೆಯ ಶಿರವ ಕಡಿದನಂದಗೋಪನ ಕಂದನೆನಿಸಿ ಬಾಲಕತನದಚಂದಮಂ ತೋರಿಸಿದ ಕುಬುಜೆಗಂಧಕೆ ಒಲಿದಸುಂದರೀರಮಣ ಜಯತುತಂದೆತಾಯಿಯು ಸರ್ವ ಜೀವರ್ಗೆ ನೀನೆ ನಿಜ-ವೆಂದು ತಿಳಿಯದೆ ಮಾಯೆಯಿಂದ ಮಮಕರಿಸಿ ಪರ-ನಿಂದಾದಿ ದೋಷಗಳ ಮಾಡಿ ಬಳಲುತ್ತಿಹರ್ಉಪೇಂದ್ರಾಯ ತುಭ್ಯಂ ನಮಃ 22ಸ್ಥಿರಚರಾತ್ಮಕ ಧೇನುಚರ ದೇವಕೀಜಠರ-ಶರಧಿಗುರುರಾಜ ಭಾಸ್ಕರಮಂಡಲಾಂತಸ್ಥಪರಮತೇಜೋಮಯ ಪುರಾಣಪುರುಷೇಶ್ವರನೆದುರಿತದೂರ ಗಭೀರನೆನಿರತಿಶಯನಿಜನಿರ್ವಿಕಲ್ಪ ಕಲ್ಪಾಂತಸಾ-ಗರದಿ ವಟಪತ್ರಪುಟಶಯನ ಪುಣ್ಯಶ್ರವಣಪುರುಷನಾಮಕ ಪುಷ್ಕರಾಕ್ಷ ಶ್ರೀಕರನೆ ಜಯಹರಯೇ ನಮೋನಮಸ್ತೇ 23ವೃಷ್ಟಿಕುಲತಿಲಕ ಸರ್ವೇಷ್ಟದಾಯಕ ನಿಮಿತ-ಶಿಷ್ಟಜನಪರಿಪಾಲ ಶಿವಗೌರೀ ಗಣಪಗುಹ-ಸೃಷ್ಟಿಶಕ್ತಿಯನೀವ ಗೋವರ್ಧನಾಚಲವ ಬೆಟ್ಟಿನಿಂದೆತ್ತಿದ ಮಹಾದುಷ್ಟ ನರಕಾದಿದಾನವರ ಮರ್ದಿಸಿದ ಜಗ-ಜಟ್ಟಿ ಜನಿಮೃತಿಭಯವಿದೂರ ವಿಷಮಯಸರ್ಪ-ಶ್ರೇಷ್ಠನಂ ಘಾತಿಸಿದ ರಾಮಾನುಜನೆಹರೇ ಕೃಷ್ಣಾಯ ತುಭ್ಯಂ ನಮಃ 24ಅಕ್ಷೀಣ ಬಲಶಾಲಿಯಾಂಜನೇಯನಿಗಿತ್ತೆಅಕ್ಷಯದ ಬ್ರಹ್ಮಪದವಿಯ ಲೋಕದೊಳಗ್ಯಾವ-ದಕ್ಷಮರ್ದನ ನಿನಗೆ ಸರ್ವತಂತ್ರಸ್ವತಂತ್ರ ಪಕ್ಷೀಂದ್ರಭುಜವಿರಾಜಸಾಕ್ಷಿಚೈತನ್ಯರೂಪನೆ ಕಮಲನಾಭನೆ ಮು-ಮುಕ್ಷುಜನಧ್ಯಾನಗಮ್ಯನೆ ಗದಾಧರ ದನುಜ-ಶಿಕ್ಷಕ ಪರೀಕ್ಷಕನೆ ಪವನವಾಹನಲಕ್ಷ್ಮೀನಾರಾಯಣಾಯ ನಮೋ25
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
139-6ಶ್ರೀ ರಮಣಿ ಕರಕಮಲ ಪೂಜಿತ ಪದಾಂಬೋಜಸರಸಿಜಾಸನ ಶಿವಾದ್ಯಮರ ಜನವಿನುತಉರುಗುಣಾರ್ಣವ ಜಗಜ್ಜನ್ಮಾದಿಕರ್ತ ನರ-ಹರಿಗೆ ಪ್ರಿಯ ಜಗನ್ನಾಥದಾಸಾರ್ಯ ಶರಣು ಪ.ಸ್ವರ್ಣಪುರಿಯಲಿ ಜಗತ್ ಪ್ರಖ್ಯಾತ ಸ್ವಾಮಿಗಳುಘನಮಹಿಮ ಸೂರಿವರ ಸತ್ಯಬೋಧಾರ್ಯರಸನ್ನಮಿಸಿ ಈ ಮಹಾಮೂರ್ತಿಗಳಾಹ್ವಾನದಿದಿನ ಕೆಲವು ನಿಂತರು ಜಗನ್ನಾಥ ಆರ್ಯ 1ಮೂರ್ಜಗವು ಅರಿವುದು ಸತ್ಯ ಬೋಧರ ಮಹಿಮೆವಾಜಿಮುಖ ಕೋಡ ನೃಹರಿ ರಾಮಪ್ರಿಯರುಪ್ರಜ್ವಲಿಪ ಸೂರ್ಯನ್ನ ರಾತ್ರಿಯಲಿ ತೋರಿಹರುಭಜಕರಸುರಧೇನುನಿವ್ರ್ಯಾಜ ಕರುಣೆ2ಶಿಷ್ಯರ ಸಹ ಜಗನ್ನಾಥದಾಸರು ತಮ್ಮನಿಯಮಗಳ ತಪ್ಪದೇ ಭಾಗವತಧರ್ಮಕಾಯವಾಙ್ಮನ ಶುದ್ಧಿಯಲಿ ಜ್ಞಾನ ಭಕ್ತಿಸಂಯುತದಿ ಮಾಳ್ಪುದು ಕಂಡರು ಮುನಿಗಳು 3ಹರಿದಾಸವರ ಜಗನ್ನಾಥದಾಸಾರ್ಯರಲಿಹರಿಯ ಒಲಿಮೆ ಅಪರೋಕ್ಷದ ಮಹಿಮೆನೇರಲ್ಲಿ ತಾ ಕಂಡು ಬಹುಪ್ರೀತಿ ಮಾಡಿದರುಹರಿಪ್ರಸಾದದ ಸವಿಯ ಅರಿತ ಆ ಗುರುಗಳು 4ಸ್ವರ್ಣಪುರಿಯಿಂದ ಜಗನ್ನಾಥದಾಸಾರ್ಯರುದಿಗ್ವಿಜಯದಿಂದಲಿ ಶಿಷ್ಯ ಜನಗುಂಪುಸೇವಕರ ಸಹ ಊರು ಊರಿಗೆ ಪೋದರುಆ ಎಲ್ಲ ಕ್ಷೇತ್ರದಲು ಧರ್ಮ ಪ್ರಚಾರ 5ಧರ್ಮ ಪ್ರಚಾರ ಹರಿಭಜನೆ ಪೂಜಾದಿಗಳುನಮಿಸಿ ಬೇಡುವವರ ಅನಿಷ್ಟ ಪರಿಹಾರಕರ್ಮಜ ದಾರಿದ್ರ್ಯಾದಿಗಳ ಕಳೆದು ಸಂಪದವಧರ್ಮ ಆಚರಣೆ ಬುದ್ಧಿಯ ಒದಗಿಸಿದರು 6ಸುರಪುರಾದಿ ಬಹು ಸ್ಥಳದಲ್ಲಿ ಪ್ರಮುಖರುಹರಿಭಕ್ತರು ಮಂಡಲೇಶ್ವರರು ಇವರಚರಣಕೆರಗಿ ಬಹು ಅನುಕೂಲ ಕೊಂಡರುಹರಿವಾಯು ಒಲಿಮೆ ಎಷ್ಟೆಂಬೆ ದಾಸರಲಿ 7ವರಪ್ರದ ವರದಾ ತೀರದಲಿ ಸಶಿಷ್ಯಧೀರೇಂದ್ರ ಯತಿವರ್ಯರ ಕಂಡು ನಮಿಸಿಆ ರಿತ್ತಿ ಕ್ಷೇತ್ರದಲಿ ವಾಸಮಾಡಿಹರುಧೀರೇಂದ್ರ ತೀರ್ಥರ ಅನುಗ್ರಹ ಕೊಂಡು 8ಸೂರಿಕುಲ ತಿಲಕರು ಉದ್ದಾಮ ಪಂಡಿತರುಧೀರೇಂದ್ರ ಗುರುಗಳು ಕಾರುಣ್ಯಶರಧಿಊರೊಳಗೆ ಹನುಮನ ಗುಡಿ ಇಹುದು ಪಾಶ್ರ್ವದಿಇರುವ ರಸ್ತೆಯ ಮೇಲೆ ದಾಸರ ಮನೆಯು 9ಸೋದಾಪುರ ಪೋಗೆ ತ್ರಿವಿಕ್ರಮ ದೇವರಮಂದಿರದ ಧ್ವಜಸ್ತಂಭದಲ್ಲಿವಾದಿರಾಜರು ಹಂಸಾರೂಢರಾಗಿರುವವರ್ಗೆವಂದಿಸಿ ತ್ರಿವಿಕ್ರಮರಾಯಗೆ ನಮಿಸಿದರು 10ಬದರಿಯಿಂದಲಿ ಈ ಸರಥ ತ್ರಿವಿಕ್ರಮನಭೂತರಾಜರ ಕೈಯಿಂದೆತ್ತಿ ತರಿಸಿಸೋದಾಪುರದಲ್ಲಿ ಪ್ರತಿಷ್ಠೆ ಮಾಡಿಹರುವಾದಿರಾಜರು ಭಾವಿಸಮೀರ ಲಾತವ್ಯ 11ಜಗನ್ನಾಥದಾಸರು ತ್ರಿವಿಕ್ರಮಗೆ ವಂದಿಸಿಅಗಾಧ ಸುಪವಿತ್ರೆ ಧವಳಗಂಗಾಸ್ನಾನಭಕುತಿಯಿಂ ಮಾಡಿ ಶಿವಹನುಮ ಕೃಷ್ಣರಿಗೆಬಾಗಿ ಅಶ್ವತ್ಥಸ್ಥರಿಗೆ ನಮಿಸಿದರು 12ಬಯಲಲ್ಲಿ ವೃಂದಾವನಗಳಲಿ ಗುರುಗಳಿಗೆವಿನಯದಿ ವಂದಿಸಿ ಭೂತನಾಥಗೆ ಬಾಗಿಶ್ರೀವ್ಯಾಸ ದೇವನಿಗೆ ಸನ್ನಮಿಸಿ ವೇದವೇದ್ಯರಿಗು ವಾದಿರಾಜರಿಗು ನಮಿಸಿದರು 13ಚತುದ್ರ್ವಾರ ಗೃಹದಲ್ಲಿ ಪಂಚವೃಂದಾವನವುಮಧ್ಯ ವೃಂದಾವನದಿ ಶ್ರೀವಾದಿರಾಜರುವೃಂದಾವನ ಮಹಿಮೆ ಚೆನ್ನಾಗಿ ತಿಳಿಯದಕೆಭಕ್ತಿ ಶ್ರದ್ಧೆಯಲಿ ನೋಡಿ ವೃಂದಾವನಾಖ್ಯಾನ 14ಹರಿಹರ ಕ್ಷೇತ್ರವು ಮದ್ದೂರು ಅಬ್ಬೂರುಪುರುಷೋತ್ತಮ ಬ್ರಹ್ಮಣ್ಯರ ವಂದಿಸಿಶ್ರೀರಂಗನಾಥನಿಗೆ ಎರಗಿ ಮಹಿಷೂರುಗರಳುಂಡ ಈಶ್ವರನ ಕ್ಷೇತ್ರಕ್ಕೆ ಪೋದರು 15ಕೇಶವನ ಪೂಜಿಸುತ ಪರ್ವತ ಗುಹೆಯಲ್ಲಿವಾಸಮಾಡುವ ಮಹಾ ಕರುಣಾಂಬುನಿಧಿಯುದಾಸಜನಪ್ರಿಯ ಶ್ರೀ ಪುರುಷೋತ್ತಮರಂಘ್ರಿಬಿ¸ಜಯುಗಳದಿ ನಾ ಶರಣು ಶರಣಾದೆ 16ಮಹಿಷೂರು ರಾಜ್ಯದ ಸರ್ಕಾರಿನಲ್ಲಿಮಹೋನ್ನತ ಸ್ಥಾನ ವಹಿಸಿದಧಿಕಾರಿಮಹಾಪಂಡಿತರುಗಳ ಸಭೆಯನ್ನು ಕೂಡಿಸಿವಿಹಿತದಿ ದಾಸರ ಪೂಜೆ ಮಾಡಿದನು 18ನಿರ್ಭಯದಿ ದಾಸರು ಘನತತ್ವ ವಿಷಯಗಳಸಭ್ಯರಿಗೆ ತಿಳಿಯದಿದ್ದವು ಸಹ ವಿವರಿಸಿದಸೊಬಗನ್ನು ಕಂಡು ವಿಸ್ಮಿತರು ಆದರು ಆಸಭೆಯಲ್ಲಿ ಕುಳಿತಿದ್ದ ದೊಡ್ಡ ಪಂಡಿತರು 19ಭಾಗವತಧರ್ಮದ ಪದ್ಧತಿ ಅನುಸರಿಸಿಭಗವಂತನ ಭಜನೆ ಸಭ್ಯರ ಮುಂದೆಆಗ ದಾಸರ ಅಪರೋಕ್ಷದ ಮಹಿಮೆರಂಗನೇ ಸಭ್ಯರಿಗೆ ತೋರಿಸಿಹನು 20ದಾಸರು ಶಿಷ್ಯರೊಡೆ ಯಾತ್ರೆ ಮಾಡಿದ್ದುಮೈಸೂರು, ಕೊಂಗು, ಕೇರಳ, ಚೋಳ, ಪಾಂಡ್ಯದೇಶಗಳು ಎಲ್ಲೆಲ್ಲೂ ಮರ್ಯಾದೆ ಸ್ವೀಕರಿಸಿಈಶಾರ್ಪಣೆ ಸರ್ವ ವೈಭವವೆನ್ನುವರು 21ಶ್ರೀಪಾದರಾಜರ ನಮಿಸಿ ವೆಂಕಟಗಿರಿಸುಪವಿತ್ರ ಘಟಿಕಾದ್ರಿ ಶ್ರೀಕಂಚಿಉಡುಪಿಶ್ರೀಪನ ಇಂಥಾ ಕ್ಷೇತ್ರಗಳಿಗೆ ಪೋಗಿಸ್ವಪುರಕ್ಕೆ ತಿರುಗಿದರು ಪೂಜ್ಯ ದಾಸಾರ್ಯ 22ಶ್ರೀಪಾದರಾಜರು ಪವಿತ್ರ ವೃಂದಾವನದಿಶ್ರೀಪತಿ ನರಹರಿ ಶಿಂಶುಮಾರನ್ನರೂಪಗುಣ ಕ್ರಿಯಾಮಹಿಮೆ ಧ್ಯಾನಿಸುತ ಇಹರುತಿರುಪತಿಮಾರ್ಗನರಸಿಂಹ ತೀರ್ಥದಲಿ23ಪುರುಷೋತ್ತಮರ ಸುತ ಬ್ರಹ್ಮಣ್ಯರ ಕುವರಶ್ರೀಕೃಷ್ಣ ಪ್ರಿಯತರ ವ್ಯಾಸಯತಿರಾಜಸೂರಿಕುಲ ಶಿರೋರತ್ನ ಶ್ರೀಪಾದರಾಜರಲಿಭಾರಿವಿದ್ಯೆಕಲಿತು ಪ್ರಖ್ಯಾತರಾದರು24ಹರಿರೂಪ ಗುಣಕ್ರಿಯ ಮಹಿಮೆಗಳ ಚೆನ್ನಾಗಿಪರಿಪರಿ ಸುಸ್ವರ ರಾಗದಲಿ ಕೀರ್ತನೆಸಂರಚಿಸಿ ಪಂಡಿತರು ಪಾಮರರು ಸರ್ವರಿಗುವರಸಾಧು ತತ್ವ ಬೋಧಿಸಿಹರು ದಾಸರು25ವಾರಿಜಾಸನ ಪಿತನು ಪೂರ್ಣ ಪ್ರಜÕರ ಹೃತ್‍ಸ್ಥಶಿರಿ ಪ್ರಸನ್ನ ಶ್ರೀನಿವಾಸನಿಗೆ ಪ್ರಿಯತರರುಪುರಂದರವಿಜಯಗೋಪಾಲದಾಸಾರ್ಯರಚರಣರತ ಜಗನ್ನಾಥ ದಾಸಾರ್ಯ ಶರಣು 26- ಇತಿ ಸಪ್ತಮ ಕೀರ್ತನೆ ಸಂಪೂರ್ಣಂ -
--------------
ಪ್ರಸನ್ನ ಶ್ರೀನಿವಾಸದಾಸರು
139-7ಶ್ರೀ ರಮಣಿ ಕರಕಮಲ ಪೂಜಿತ ಪದಾಂಬೋಜಸರಸಿಜಾಸನ ಶಿವಾದ್ಯಮರ ಜನವಿನುತಉರುಗುಣಾರ್ಣವ ಜಗಜ್ಜನ್ಮಾದಿಕರ್ತ ನರ-ಹರಿಗೆ ಪ್ರಿಯ ಜಗನ್ನಾಥದಾಸಾರ್ಯ ಶರಣು ಪ.ಹಂಸನಾಮಕ ಪರಂಬ್ರಹ್ಮ ವಿಧಿಸನಕಾದಿವಂಶಜ ಗುರುಗಳಲಿ ಜಗದೇಕ ಗುರುವುದಶಪ್ರಮತಿ ಈ ಮಧ್ವ ಮುನಿಯ ಪೀಳಿಗೆ ಜಾತವ್ಯಾಸಮುನಿ ಯೋಗಿವರ್ಯರಿಗೆ ಆ ನಮಿಪೆ 1ವ್ಯಾಸರಾಯರ ಮುಖ ಕಮಲದಿಂದುಪದೇಶದಾಸತ್ವ ಹೊಂದಿದರು ಪುರಂದರದಾಸಾರ್ಯದಾಸಶ್ರೇಷ್ಠರು ದಯಾನಿಧಿಯು ಈಪುರಂದರದಾಸಾರ್ಯರೇ ನಾರದರ ಅವತಾರ 2ಪುರಂದರಾರ್ಯರಹಸ್ತಕಂಜಸಂಜಾತರುಧೀರ ಭೃಗು ಅವತಾರ ವಿಜಯದಾಸಾರ್ಯಹರಿದಾಸವರ ವಿಜಯದಾಸರ ಶಿಷ್ಯರುಸೂರಿಸುರವರ್ಯ ಗೋಪಾಲ ದಾಸಾರ್ಯ 3ವಿಶ್ವೋಪಾಸಕರು ವರಗಣೇಶಾಂಶರುಈಶಾನುಗ್ರಹಿ ಗೋಪಾಲ ದಾಸಾರ್ಯಬೇಸರವಿಲ್ಲದೆ ಸ್ಮರಿಪ ಸಜ್ಜನರ ಪಾಲಿಪರುದಾಸತ್ವ ಜಗನ್ನಾಥದಾಸರಿಗಿತ್ತವರು 4ಸೂರಿಕುಲತಿಲಕನು ಜಗನ್ನಾಥ ದಾಸಾರ್ಯಈರೆರಡು ಮುಖ್ಯ ಜನ್ಮವಕೊಂಡಹಿಂದೆಗುರುಯುಕ್ ಪುರಂದರಾರ್ಯರವತ್ಸಗುರುರಾಯ ಸೇವಾರತಮದ್ರದೇಶಾಧಿಪ ಈ ರೀತಿ ಮೂರು 5ಮಾರೀಚ ದಿತಿ ಪೌತ್ರ ಮೊದಲನೆಯದಲ್ಲಿಧೀರ ಪ್ರಹ್ಲಾದನಿಗೆ ಭ್ರಾತ ಸಂಹ್ಲಾದಹರಿಅಧೋಕ್ಷಜನ್ನೊಲಿಸಿ ಕೊಂಬ ಮಾರ್ಗವ ಅರಿತನಾರದಾನುಗ್ರಹಿಯು ಉಪದೇಶಕೇಳಿ6ಹರಿಯ ಸೇವಿಸುವುದಕೆ ಶಿಷ್ಯರುದ್ಧಾರಕ್ಕೆಪ್ರಾರಬ್ಧ ಕರ್ಮವು ತೇದು ಹೋಗಲಿಕೆಧರೆಯಲ್ಲಿ ಪುನರ್ಜನ್ಮ ಕೊಂಡನು ಬ್ಯಾಗವಟ್ಟನರಸಿಂಹ ದಾಸರ ಮಗನೆನಿಸಿಕೊಂಡು 7ಸೂರಿಕುಲ ಶಿರೋಮಣಿ ವರದೇಂದ್ರ ಯತಿವರರುಶ್ರೀರಾಘವೇಂದ್ರರ ಸ್ಮರಿಪುದಿವರಲ್ಲಿಭಾರಿಪಂಡಿತ ಶ್ರೀನಿವಾಸ ಇವರಲ್ಲೋದಿಪೌರ ವಿದ್ಯಾರ್ಥಿಗಳಿಗೆ ಪಾಠ ಪೇಳ್ದ 9ಗರುವಕೊಳಗಾಗಿ ಈ ಶ್ರೀನಿವಾಸಾಚಾರ್ಯಕರುಣಾಶಾಲಿಗಳು ವಿಜಯದಾಸರನ್ನಕ್ಷುದ್ರ ಮಾತುಗಳಾಡಿ ಸ್ವೋತ್ತಮಾಪರಾಧದಿಂಘೋರವ್ಯಾಧಿ ಕೊಂಡು ಕುಗ್ಗಿದನು ತೀವ್ರ 10ಪರಿಪರಿ ಔಷಧೋಪಚಾರಗಳು ಸೋತುಹರಿಗುರು ಕ್ಷೇತ್ರಾಟನ ಸೇವಾದಿಗಳುಹರಿವಾಯುಸ್ತುತಿಕ್ಷೀರಅಭಿಷೇಕಫಲದಿಂಅರಿತನು ಅಪರಾಧಕ್ಷಮೆಬೇಡೆ ಹೊರಟ11ತ್ವರಿತದಲಿ ವಿಜಯಾರ್ಯರಲ್ಲಿ ಶರಣಾಗಿಕರುಣದಿ ಕ್ಷಮಿಸಿ ಉದ್ಧರಿಸಬೇಕೆಂದಕರುಣಿಸಮ ಚಿತ್ತರು ಶರಣನಿಗೆ ಹೇಳಿದರುಗುರುಗಳು ಗೋಪಾಲದಾಸರ ಕಾಣೆಂದು 12ತನ್ನಲ್ಲಿ ಗುರುಗಳು ಕಳುಹಿಸಿ ಬಂದಿಹನುದೀನನು ನಿಜ ಶರಣಾಗಿಹನು ಎಂದುಘನಮೂಮಂತ್ರ ಸಹ ಧನ್ವಂತರಿ ಜಪಿಸಿಧನ್ವಂತರಿಗೆ ಬಿನ್ನೈಸಿದರು ದಾಸರು 13ವಿಜಯಗೋಪಾಲ ವೆಂಕಟ ಜಗನ್ನಾಥನ್ನಪೂಜಿಸಿ ನೈವೇದ್ಯಾನ್ನ ಜೋಳದರೊಟ್ಟಿಭುಜಿಪುದಕೆ ಕೊಡುತ ಹರಿಗುರುಗಳ ಸ್ಮರಿಸುನಿಜ ಭಕ್ತಾಯುಷ್ಪ್ರದ ಸತ್ಪತಿ ಎಂದು 14ದ್ರವ ಮಾತ್ರ ಕೊಂಬ ಆ ರೋಗಿ ತಿಂದನು ರೊಟ್ಟಿದ್ರಾವಿಕ ಆಯಿತು ರೋಗ ದಿನ ದಿನದಿದೈವಾನುಗ್ರಹವಾಯ್ತುಗುರುಅನುಗ್ರಹದಿಂದಶ್ರೀ ವೆಂಕಟ ಶೈಲಾಧಿಪನು ಒಲಿದ 15ರೋಗ ನಿವೃತ್ತ ಆಚಾರ್ಯ ದಾಸರ ಸಹಪೋಗಿ ವೆಂಕಟಗಿರಿಯಲ್ಲಿ ಶ್ರೀನಿಧಿಗೆಭಕುತಿಯಿಂ ಸನ್ನಮಿಸಿ ಮಲಗೆ ನಿತ್ರಾಣದಲಿಬೇಗ ಗಜವರದಹರಿಬಂದು ತಾ ಪೊರೆದ16ಶ್ರೀನಿಧಿಃ ಸರ್ವ ಭೂತಾನಾಂ ಭಯಕೃದ್ಭಯನಾಶನನು ವಿಜಯಾರ್ಯರ ರೂಪದಲಿ ಪೇಳೆದಾನ ಎರೆದರು ಗೋಪಾಲ ದಾಸಾರ್ಯರುತನ್ನ ಆಯುಷ್ಯದಲಿ ನಲವತ್ತು ವರ್ಷ 17ರೊಟ್ಟಿ ಕೊಟ್ಟಾಗಲೇಗುರುಪ್ರೇರಣೆಯಂತೆಕೊಟ್ಟಿದ್ದರು ಆಯುಷ್ಯ ಆಚಾರ್ಯಗೆದಿಟವಾಗಿ ಜಗಕೆ ತಿಳಿಸೆ ವೆಂಕಟ ಈಗಕೊಡಿಸಿದನು ಆಯುರ್ದಾನದ ಧಾರೆ 18ಘನ್ನ ಹರಿಗುರು ಭಕ್ತಿ ಶಿಷ್ಯ ವಾತ್ಸಲ್ಯವಏನೆಂಬೆ ನಮ್ಮಗುರುಗೋಪಾಲ ದಾಸರದಾನಕ್ಕೆ ಎಣೆಯುಂಟೆ ಎಲ್ಲಾದರೂ ಯಾರೂತನ್ನ ಆಯುಷ್ಯವ ಕೊಡುವರೆ ಅನ್ಯರಿಗೆ 19ಏನೆಂಬೆಅನಿಮಿತ್ತ ಬಂಧುವೆಂಕಟಪತಿಯದೀನ ದಯಾಳತ್ವ ಆಚಾರ್ಯನಿಗೆತಾನೇವೆ ಗೋಪಾಲದಾಸರ ರೂಪದಿತಂದುಅನ್ನ ಕೊಟ್ಟ ಆಯುಷ್ಯವ ಕೊಡಿಸಿದವ 20ಶ್ರೀನಿವಾಸಾಚಾರ್ಯ ಹರಿತನ್ನ ದಾಸರಿಗೆತಾನೆ ಬಂದೊಲಿವುದು ನೇರಲ್ಲಿ ಕಂಡುತನ್ನನ್ನು ಹರಿದಾಸರಲಿ ಓರ್ವ ಮಾಡೆಂದುವಿನಯದಿಂ ಗೋಪಾಲದಾಸರ ಬೇಡಿದನು 21ವಿಜಯಗೋಪಾಲನ್ನವಿಜಯದಾಸರ ಸ್ಮರಿಸಿನಿಜ ಶಿಷ್ಯಾಚಾರ್ಯನಿಗೆ ಉಪದೇಶಿಸಿದರುಅಜಪದಾರ್ಹನು ಮಧ್ವನಲ್ಲಿ ಜ್ವಲಿಸುವಶ್ರೀತಶ್ರೀ ಜಗನ್ನಾಥ ಎಂದು ಧ್ಯಾನಿಸು ಎಂದು 22ಪೋಗಿ ಪಂಢÀರಪುರ ಭೀಮರತಿಯಲ್ಲಿಸ್ವಗುರು ಆದಿ ಹನ್ನೆರಡು ಸ್ಮರಿಸುಬಾಗು ಮಧ್ವಾಂತಸ್ಥ ಹರಿಗೆಮಜ್ಜನಮಾಡುಜಗನ್ನಾಥ ಹರಿತೋರ್ವ ಪೊಳೆವ ಹರಿನಾಮ 23ಝಗಿ ಝಗಿಪ ತೇಜಸ್ಸು ಶಿರೋಪರಿ ಕಂಡನುಮೂಗಿನೊಂದೊಂದಡಿ ಶಿರದ ಮೇಲೆ&ಟಜquo;ಜಗನ್ನಾಥ ವಿಠಲ&ಡಿಜquo; ನಾಮ ಪ್ರಜ್ವಲಿಸಿತುಜಗನ್ನಾಥ ತನ್ನಿಚ್ಛೆಯಿಂದಲೇ ತೋರ್ದ 25ಜಡಜ ಭವಪಿತ ಡರಕ ಜಗನ್ನಾಥ ವಿಠಲನನೋಡಿದರು ಜಗನ್ನಾಥದಾಸ ಆಚಾರ್ಯಪೊಡವಿಗೊಡೆಯನುವಿಜಯಗೋಪಾಲ ಜಗನ್ನಾಥವಿಠ್ಠಲ ಪ್ರಸನ್ನನಾದನು ಶ್ರೀನಿವಾಸ 26ವೆಂಕಟಗಿರಿನಾಥ ಪಂಢರಿ ಜಗನ್ನಾಥಅಕಳಂಕ ಗುಣನಿಧಿ ವಿಠಲಪ್ರಸನ್ನನಾಗಿದಾಸರು ಮೂಲ ಮಂತ್ರಾದಿಗಳಿಂದಏಕಾಗ್ರ ಚಿತ್ತದಲಿ ಭಜಿಸಿ ಸ್ತುತಿಸಿದರು 27ಪುರಂದರದಾಸಾರ್ಯರ ವಂದಿಸಿ ಅವರಿಂದವಿರಚಿತ ಶ್ರೀಮಧ್ವ ರಮಣ ನಿನ್ನಭಾರಿತತ್ವವಕೊಂಡಕೀರ್ತನೆ ಹಾಡುತ್ತಶ್ರೀಕರ ವಿಠಲನ ಮಂದಿರದೊಳು ಪೊಕ್ಕರು 28ವಿಶ್ವವಿಷ್ಣು ವಷಟ್ಕಾರಾದಿ ನಾಮನುದಾಸಪ್ರಿಯಜನ ವಿಠ್ಠಲ ರುಕ್ಮಿಣಿಯಕೇಶವಾದಿಪಾದಾಂತ ಸಂಸ್ತುತಿಸಿ ನಮಿಸಿದರುದಾಸರು ಶರಣು ತಾನೆನ್ನುತ ಮುದದಿ 29ಏನೆಂಬೆ ವಿಠ್ಠಲನ ರುಕ್ಮಿಣಿಯ ವಾತ್ಸಲ್ಯಅನುಪಮ ಔತಣ ದಾಸರಿಗೆ ಮಾಡಿಅನುತ್ತಮ ಪ್ರಸಾದ ಮಾಲಾದಿಗಳ ಕೊಟ್ಟುಅನುಗ್ರಹಿಸಿ ಕಳಿಸಿದರು ದಾಸರ ಸ್ವಪುರಕೆ 30ಮಳಖೇಡ ಕೃಷ್ಣ ಮಂತ್ರಾಲಯಕೆ ಪೋಗಿಅಲ್ಲಿರುವಗುರುದೇವತಾ ನಮನ ಮಾಡಿಗೋಪಾಲದಾಸ ಉದ್ಧಾರಕರ ಬಳಿಬಂದುಕಾಲಿಗೆರಗಿದರು ಕೃತಕೃತ್ಯ ಭಾವದಲಿ 31ವಾಸುದೇವಗೆ ಪ್ರಿಯ ಐಜಿ ಮಹಾತ್ಮರುವ್ಯಾಸತತ್ವಜÕ ಹರಿದಾಸ ಯತಿವರರುಸಸೋದರ ಪರಿವಾರ ಗೋಪಾಲದಾಸಾರ್ಯರಬಿಸಜಾಂಘ್ರಿ ಸನ್ನಮಸಿ ಹೊರಟರಲ್ಲಿಂದ 32ಚೀಕಲ ಪರಿವಿಯಲಿ ಏಕಾತ್ಮ ನರಹರಿಯಅಕಳಂಕ ದೃಢಭಕ್ತಿಯಿಂದ ಪೂಜಿಸುವಆ ಕರುಣಿ ವಿಜಯದಾಸರ ಕಂಡು ನಮಿಸಿಚಿಕ್ಕಂದಿ ಸ್ವಪುರ ಮಾನವಿಯಯೈದಿದರು 33ಮನುತೀರ್ಥ ತಟದಲ್ಲಿ ಮೀಸಲಾಗಿವರಿಗೆಅನ್ಯರಾಕ್ರಮಿಸದೇ ರಕ್ಷಿಸಲ್ಪಟ್ಟಮನೆಯಲ್ಲಿ ನರಹರಿಯ ಹನುಮನ್ನ ಪೂಜಿಸುತದಿನದಿನದಿ ಪ್ರವಚನ ಭಜನೆ ಮಾಡಿದರ 34ವಾರಿಜಾಸನ ಪಿತನು ಪೂರ್ಣಪ್ರಜÕರ ಹೃತ್‍ಸ್ಥಶಿರಿಪ್ರಸನ್ನ ಶ್ರೀನಿವಾಸನಿಗೆ ಪ್ರಿಯತರರುಪುರಂದರವಿಜಯಗೋಪಾಲದಾಸಾರ್ಯರಚರಣರತ ಜಗನ್ನಾಥದಾಸಾರ್ಯ ಶರಣು 35- ಅಷ್ಟಮ ಕೀರ್ತನೆ ಸಂಪೂರ್ಣಂ -
--------------
ಪ್ರಸನ್ನ ಶ್ರೀನಿವಾಸದಾಸರು
4 ಲೋಕನೀತಿ294ಅಂದೇನಿಂದೇನಯ್ಯ ಶ್ರೀಅರವಿಂದನಾಭನ ಹಗೆಯವ ಅಸುರಎಂದಿಗೆ ಮತಿ ಕವಲಿಲ್ಲದೆ ಹರಿಪದಹೊಂದಿದಗೆ ಮುಕ್ತಿಯವಸರ ಪ.ಅಂದಿಗೆ ಹರಿಮಹಿಮೆಗಳನ್ನು ಆನಂದದಿಂದ ಕೇಳದವ ದ್ವೇಷಿಇಂದಿಗೆ ಹರಿಕಥೆ ತಾತ್ವಿಕ ಜನರನುನಿಂದಿಸುವವನೆ ನಿಜದ್ವೇಷಿ 1ಸರ್ವಹ ಕೃಷ್ಣಾಕೃತಿಗೆ ವೈರ್ಯಾಗಿ ಬಹುಗರ್ವಿಪ ಕಂಸನು ಅತಿತಾಮಸಉರ್ವಿಲಿ ನರಹರಿ ಚರಣವರ್ಚಿಸದೆಶರ್ವಸರ್ವೋತ್ತಮನೆಂಬವತಾಮಸ2ವಾಸುದೇವನ ಪಾಶದಿ ಬಿಗಿಸುವೆನೆಂದುಆಶಿಸಿ ಕೆಟ್ಟ ಕೌರವ ಕುಮತಿದೋಷ ಧರ್ಮವನೆಲ್ಲ ಸರಿಮಾಡಿ ಶಾಕ್ತನಾಗ್ಯಾಸುರಿ[ಯ] ಪೂಜಿಪ ಹೊಲೆ ಕುಮತಿ 3ರುಕ್ಮಿಣಿ ದೇವಿಯೆ ಲಕ್ಷ್ಮಿಯೆಂದು ತಿಳಿಯದರುಕ್ಮನು ಮದಸೊಕ್ಕಿದ ಪಾಪಿಲೆಕ್ಕವರಿಯದೆ ಜೀವೇಶರು ಸಮರೆಂದುಲೆಕ್ಕಿಸುವವ ನರರೊಳು ಪಾಪಿ 4ಕೃತಕ ಹಕ್ಕಿಯನೇರಿ ತಾ ವಾಸುದೇವನೆಂದುಅತಿಕ್ಲೇಶವುಂಡ ಪೌಂಡ್ರಕ ಕಲಿಯುಸಕಳ ಜಗದೊಡೆಯ ಪ್ರಸನ್ವೆಂಕಟೇಶನಭೃತ್ಯನಾಗದೆಯೆ ನಾನೆಂದವ ಕಲಿಯು 5
--------------
ಪ್ರಸನ್ನವೆಂಕಟದಾಸರು
93ಅಕ್ಕಟಕ್ಕಟೆಂನಗಂಡ ವೈಷ್ಣವನಾದ ಕಾರಣ |ರಕ್ಕಸಾಂತಕನ ಭಜಿಸಿರಚ್ಚೆ ಗೋಡಾಯಿತೆಂನ ಬದುಕು |ಅಕ್ಕಟಕ್ಕಟರೆಂನಗಂಡಪ.ಅಡ್ಡಗಂಧ ಹಚ್ಚುವಾಗ ರುದ್ರದೇವರ ಭಜಿಸಿಲಾಗಿ |ಬಡ್ಡಿವಾಸಿಂರೊಳಗೆ ನಾಉ ಸುಖದೊಳಿದ್ದೆವು | ಅಡ್ಡಗಂಧವನು ಬಿಟ್ಟು ಶ್ರೀ ಮುದ್ರೆಯನು ಧರಿಸಲಾಗಿ |ಬಡ್ಡಿವಾಸಿಯಲ್ಲ ಹೋಗಿ ಬಾಯೊಳ್ಗೆ ಬಿದ್ದಿಂತಾಯಿತವ್ವ, ಅಕ್ಕಟ 1ಹೇಡಿಗೆ ತುಂಬ ದೇವರು ನಮ್ಮ ಮನೆಯೊಳಿರುವಕಾಲದಲ್ಲಿ | ವಡವೆ ವಸ್ತು ಸೌಭಾಗ್ಯ ಸುಖದೊಳಿದ್ದೆವುಹಾದಿಯ ತುಂಬ ಕರಿದು ಬಿಳಿದು ಸಾಲಿಗ್ರಾಮಭಜಿಸಲಾಗಿ | ವಡವೆ ವಸ್ತು ಎಲ್ಲ ಹೋಗಿ ಬಾಯೊಳ್ಹುಡಿಯುಬಿದ್ದಂತಾಯಿತವ್ವ | ಅಕ್ಕಟ | 2ಕಾಲಿಝಂಣಕಾಲದಲ್ಲಿ ಮೂಲಂಗಿ ಬೊಳ್ಳಳ್ಳಿಗೆಡ್ಡೆ ತಂದುಕೊಟ್ಟರೆ ದೇವಸುಖವ ಕೊಡುವನೂ |ವೀರವಿಷ್ಣುವಿಗೆ ಕೊಟ್ಟುತ್ರಾಹಿ ತ್ರಾಹಿ ಎನ್ನಲಾಗಿಪಚ್ಚೆ ಕರ್ಪೂರದಂತ ಬದುಕು ನಿಸ್ತುತವಾಗಿಹೋಯಿತವ್ವ | ಅಕ್ಕಟ3ಅತ್ತೆ ಕೇಳೆ ಹಿಂದೆನಂಮ ಮದುವೆ ಮುಂಜಿಕಾಲದಲ್ಲಿ | ಆರ್ತಿಗಾದರು ಒಮ್ಮೆ ಕಚ್ಚೆಕಟ್ಟಿದ್ದೇವೊಅರ್ಥಿಕಚ್ಚೆಯಂನು ಬಿಟ್ಟುನಿತ್ಯ ಕಚ್ಚೆ ಉಡೆಯಲಾಗಿವಿತ್ತಬದುಕುಯೆಲ್ಲ ಹೋಗಿ ವ್ಯರ್ಥವಾಗಿಹೋಯಿತವ್ವ | ಅಕ್ಕಟ4ಅತ್ತೆ ಮಾವ ಸತ್ತ ದಿವಸ ಪಿತ್ರುಕಾರ್ಯನಡಸಲಾಗಿ | ಕತ್ತೆ ನಾಯಿಹೊರಳಿದಂತೆ ನಂಟುನಂಟರಿಷ್ಟರೂ | ಶ್ರೀ ಪುರಂದರವಿಠಲನಭಜಿಸಲಾಗಿ | ತುತ್ತ ಗೊಂಬುದೊಂದು ಕೂಳುಬೆಲ್ಲದಹಾಗೆ ಆಯಿತವ್ವ5
--------------
ಪುರಂದರದಾಸರು
ಅನುದಿನಭವಾಬ್ಧಿಯಲ್ಲಿ ಭವತರಂಗ ರಾಶಿಯಲ್ಲಿಮುಳುಗುತಿಹೆ ಕೈಯ ಪಿಡಿಯೊ ಜನಕ ಕೃಷ್ಣಯ್ಯ ಪ.ಶ್ರೀನಿವಾಸ ನಿನ್ನ ಭಕ್ತಿ ಮಾಡದ ಅಘವಂತನೆಂದುಹೀನ ಜನರ್ಪಾಳಕಿಟ್ಟರೇನ ಹೇಳಲೊನೀನು ಪಾಲಿಪ ರಾಜ್ಯದಲ್ಲಜ್ಞಾನಿ ದೇಶಿಗನೊಬ್ಬ ಕೆಡಲುಹಾನಿ ಹೆಚ್ಚಳ ನಿನ್ನದಲ್ಲೆ ದೀನದಯಾಳು 1ಚಿತ್ತವೇಗಕ್ಕವಧಿ ಇಲ್ಲ ಹೊತ್ತುಕೊಂಡು ಕಂಡ ಕಡೆಗೆಸುತ್ತುತಿದೆ ತನ್ನ ದಳವ ಕೂಡಿ ರಂಗಯ್ಯಕರ್ತನಿನ್ನ ಪಾದದೆಡೆಯೆ ಒತ್ತಿ ನೀನಿದನಾಳಬೇಕುಹೆತ್ತ ತಾಯಿ ನೀನೆ ಗಡಾನೆತ್ತಿಕೊಳ್ಳಯ್ಯ 2ಹಳುವಗಳು ದಾರಿಕಾಣೆ ಸೆಳವಿನೊಳಾಶ್ರಯ ಕಾಣೆನಳಿನನೇತ್ರ ನೀನೆ ಕಾಯೊ ಸುಲಭರೊಡೆಯನೆಲೆಯ ತೋರಾತಂಕಹಾರಿ ಒಲಿದು ವರಾಭಯವ ಬೀರಿಒಲಿಯೊ ಪ್ರಸನ್ವೆಂಕಟಾದ್ರಿನಿಲಯ ಉದಾರಿ 3
--------------
ಪ್ರಸನ್ನವೆಂಕಟದಾಸರು
ಆಗಬಲ್ಲದೆ ಹೀಗಾಗಬಲ್ಲದೆಯೋಗಿಜನವಂದ್ಯನವರಿಗ್ಹೀಗೆ ಯಮನ ಮನೆಯ ಬಾಧೆ ಪ.ಕಾಮನಯ್ಯನರಮನೆಯಪ್ರೇಮದ ದಾಸಿಗೆ ಮಹಾಪಾಮರರಾಕ್ಷಸ ಕ್ರೂರಕಾಮುಕರ ಸಂಯೋಗವಾಗಬಲ್ಲದೆ 1ಸಜ್ಜನರರಸನÀ ಮನೆಯವಜ್ರಪಂಜರದ ಗಿಣಿಯುಮಜ್ಜಿಗೆ ಕಾಣದ ಮುದಿಮಾರ್ಜಾಲನ ಬಾಯಿತುತ್ತಿಗಾಗಬಲ್ಲದೆ 2ರಾಜಾಧಿರಾಜನ ಮನೆಯರಾಜಹಂಸವು ಕುಣಪಭೋಜಕನಾದ ವೃಕನಭೋಜಕನ ಅನುಕೂಲವಾಗಬಲ್ಲದೆ 3ಹರಿಯ ಬೇಂಟೆಯ ಮನೆಯಹರಿಣಗಣಗಳಿಗೆಗಿರಿಯ ಹಳುವದ ಹುಲಿಯಗರಜರದ ಘಸಣೆಯಾಗಬಲ್ಲದೆ 4ಪ್ರಸನ್ನವೆಂಕಟನ ಮನೆಯಕಸಕಡ್ಡಿಯೆಲ್ಲವುವಜ್ರವಿಷಮ ಯಮಬಂಟರೆಂಬಮುಸಲಕೆ ಹುಡಿ ಹಿಟ್ಟು ಆಗಬಲ್ಲದೆ 5
--------------
ಪ್ರಸನ್ನವೆಂಕಟದಾಸರು