ಒಟ್ಟು 661 ಕಡೆಗಳಲ್ಲಿ , 88 ದಾಸರು , 564 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮನೆಗೆ ಬಾರೋ ಕೃಷ್ಣ ಬೇಗನೆ ಪ ವನಿತೆಯರಕೋ ಓಡಿ ಬರುತಿಹರು ಅ.ಪ. ಕೊಳಲಿನ ಧನಿ ಕೇಳಿ ಹೆಂ_ಗಳು ನಲಿದು ಮೋಹತಾಳಿಸುಳಿದು ನಿನ್ನೆತ್ತಿಕೊಳುತಲೊಯ್ವರುಗಲ್ಲವ ಚುಂಬಿಸಿ ನುಗ್ಗು ಮಾಡುವರೊ 1 ಘಾಸಿ ಮಾಡಿ 2 ಚೆನ್ನಿಗ ಹೇಳುವೆನು ಎಂದುಗುನಿನ್ನನು ಬಿಟ್ಟರೇನುಉನ್ನತ ಗದುಗಿನ ವೀರನಾರಾಯಣಚೆನ್ನಾಗಿ ದಢದಢ ಹೆಜ್ಜೆಯನಿಕ್ಕುತಾ 3
--------------
ವೀರನಾರಾಯಣ
ಮನ್ನಿಸೊ ನೀ ಎನ್ನ ಮಧ್ವಮುನಿರನ್ನಚೆನ್ನಿಗ ಶ್ರೀಹರಿಪಾದ ಸೇವಕನೆ ಪ. ಅಂಜನೆಯ ಗರ್ಭ ಪರಿಪೂರ್ಣಚಂದ್ರಮನೆಕಂಜಪ್ರಿಯಸುತನಿಗೆ ಕಲ್ಪತರು ನೀನೆರÀಂಜಿಸುವೆ ಶ್ರೀರಾಮಚಂದ್ರನ್ನ ಸೇವಕನೆಸಂಜೀವಗಿರಿಯನು ತಂದ ಮಹಾತ್ಮನೆ 1 ಅರ್ಜುನನಿಗೆ ಅಣ್ಣನಾಗಿ ಅಖಿಲ ದಿಕ್ಕೆಲ್ಲವನುಲಜ್ಜೆಯನು ಕೆಡಿಸಿ ಷಡ್ರಥಿüಕರನು ಜರಿದೆಮೂಜಗವು ಮೆಚ್ಚಲು ಮಾಗಧನ ಸೀಳಿದೆಸಜ್ಜನಪ್ರಿಯ ಭೀಮಸೇನ ಉದಾರ2 ಕೂರ್ಮ ಸೇವಕನಾದಧೀರ ಮಧ್ವಾಚಾರ್ಯ ದೇಶದೊಳು ಮೆರೆದೆ 3
--------------
ವಾದಿರಾಜ
ಮನ್ನೀಸಯ್ಯಾ - ಮನಸಿಜನಯ್ಯಾ |ಮೌನಿಜನರ ಪ್ರಿಯ ಪಂಡರೀರಾಯಾ ಪ ಪರಿ | ಅನಘ ನೀ ಕರುಣಿಸಿ ಅ.ಪ. ಪರಿ ಏನಿದು ಹರಿಮೊರೆ ಕೇಳೆನನ್ನದು | ಪೊರೆವುದು ಜೀಯಾ 1 ಪರಿ ಗೋಪಿ ಜನರ ಪ್ರಿಯದ್ರೌಪತಿ ಗೋಪ್ತಾ | ಬಲು ಆಪ್ತಾ |ಕೈಪಿಡಿಯುವುದೀ | ಪಾಪಿಯಾದೆನ್ನನುಶ್ರೀಪತಿ ಶ್ರೀಹರೇ | ಮುರಾರೇ ||ಲೇಪಿಸು ಕೀರ್ತಿಕ | ಲಾಪಗಳ್ನಿನ್ನ ಸು-ರಾಪಗಪಿತ ಶ್ರೀ ಪಾವನ ಮೂರ್ತೇ 2 ಭವ ಶರ ನಿಧಿಯಲಿ | ಭವಣೆಯ ಪಡಲಾರೆಭವ ಜನಕನ ಪಿತಾ | ಹೇ ದಾತಾ |ಹವಣೆಯು ದಾವುದು | ಭವವನುತ್ತರಿಸಲುತವಪದ ಸ್ಮರಿಸುತಾ | ಸ್ಮರಿಸುತ್ತಾ ||ಸವನ ಮೂರರೊಳು | ಅವಶದಿ ಕೀರ್ತಿಸಿಬೆವರೆಂಬ ವಿರಜೆಯ | ಅವಗಾಹಿಸುವನುಭವವ ಕೊಡಿಸು ಹರಿ | ಅವನಿಜೆ ವಲ್ಲಭಪವನ ವಂದಿತ ಗುರು | ಗೋವಿಂದ ವಿಠಲಾ 3
--------------
ಗುರುಗೋವಿಂದವಿಠಲರು
ಮರೆಯೊಕ್ಕೆ ನಿನ್ನನು ಮರುಗಿ ರಕ್ಷಿಸಬೇಕು ಶಂಕರೇಶಾಗಿರಿಜೆಯಾಣ್ಮನೆದೇವ ಕೆರೆಗೋಡಿಪುರದೀಶ ಶಂಕರೇಶಾ ಪಮರಳಿ ಮರಳಿ ಗರ್ಭಕುರುಳಿ ನಾನೊಂದೆನುಪರಿಪರಿ ಕರ್ಮದ ಫಲಗಳನುಣಲಾಗಿದುರಿತ ತೊಲಗದೀವರೆಗು ನಾನೇಗೈವೆಕರುಣಾರಸ ನಿನಗೇತಕುದಿಸದಿದೆ 1ಸೂತ್ರಧಾರಕ ನೀನು ಸಕಲಜೀವರಿಗೆಲ್ಲಪಾತ್ರ ಕೃಪೆಗೆ ನಾನು ಪ್ರೇಮದಿಂ ನೋಡಿನ್ನುಗೋತ್ರಾರಾತಿ ವಂದಿತ ಪಾದಕಮಲನೆಸ್ತೋತ್ರವ ಮಾಳ್ಪುದ ಮೊದಲೆ ನಾನರಿಯೆನು2ಮರತಿ ಪುಟ್ಟದು ನಾನಾವಿಧ ಭವಸುಖದಲಿವರೆತರಿತೆನೆನಿಸಿದ ಕರ್ಮದ ಬಲುಹಿನಿಂಬೆರೆತು ಬಯಲ ಮೋಹದಲಿ ಮೋಸಹೋದೆನುಕುರಿತು ಕಾಮ್ಯವ ಭಜಿಸಿದೆನೊ ನಿನ್ನನು3ಉರಿಗಣ್ಣ ದೃಷ್ಟಿಯಿಂ ದುರಿತವ ದಹಿಸಿನ್ನುವರಶಶಿನೇತ್ರದಿಂ ನೋಡಿ ತಾಪವ ಪರಿಹರಿದಶ್ವನೇತ್ರದಿ ಜ್ಞಾನವನರುಹಿಸುಶರಣಾಗತನಪರಾಧವನೆಣಿಸದೆ 4 ಪರಾಕು ಶಂಕರೇಶಾ5
--------------
ತಿಮ್ಮಪ್ಪದಾಸರು
ಮಹಾಲಕ್ಷ್ಮಿ ಇಂದಿರೆ ಮಂದಿರದೊಳು ನಿಂದಿರೆ ಪ. ನಿತ್ಯ ಎನ್ನ ಆಹಾಗಂಧ ತುಳಸಿ ಅರವಿಂದ ಮಲ್ಲಿಗೆ ಪುಷ್ಪದಿಂದ ಪೂಜಿಸುವೆನು ಕುಂದುಗಳೆಣಿಸದೆ ಅ.ಪ. ಘಲು ಘಲು ಗೆಜ್ಜೆಯ ನಾದದಿಂದಫಳಫಳಿಸುವ ದಿವ್ಯಪಾದದೊಳುಪಿಲ್ಯ ಕಾಲುಂಗುರನಾದ ಅಂಘ್ರಿಚಲಿಸುವ ದಿವ್ಯಸುಸ್ವಾದ ಆಹಾಕಾಲಂದಿಗೆ ಗೆಜ್ಜೆ ಝಳಪಿಸುತ್ತ ನ-ಮ್ಮಾಲಯದೊಳು ನಿಲ್ಲೆ ಪಾಲವಾರಿಧಿಕನ್ನೆ 1 ಸಿರಿ ಅರಳೆಲೆ ಕುಂಕುಮಹೆರಳಗೊ[ಂ]ಡೆಗಳಿಂದ ಹರಿಯ ಮೋದಿಸುವೆ 2 ಜಯ ಜಯ ವಿಜಯಸಂಪೂರ್ಣೆ ಭಕ್ತಭಯನಿವಾರಣೆ ಎಣೆಗಾಣೆ ಎನ್ನಕಾಯುವರನ್ಯರ ಕಾಣೆ ಶೇಷ-ಶಯನನ್ನ ತೋರೆ ಸುಶ್ರೇಣೆ ಆಹಾಕೈಯ ಪಿಡಿದು ಭವಭಯವ ಪರಿಹರಿಸೆ ಸಿರಿಹಯವದನನ ದಯವ ಪಾಲಿಸೆ ಲಕ್ಷ್ಮಿ 3
--------------
ವಾದಿರಾಜ
ಮಹಿಷಿ ಎನಿಸಿಹಳೇ ಪ ವಸುದೇವ ಭಗಿನಿ ಕೈಕೆಯೀ ಉದರದಲಿಅಸುವ ನೀಧರಿಸುತ್ತ ಅವತರಿಸುತಾ |ವಸುಧೆಯೊಳು ಸುಗುಣ ಗಣಯುತೆಯು ನೀನಾಗಿಪೆಸರಾಂತೆ `ಭದ್ರೆ` ಎಂದೆನುತ ಅವನಿಯಲೀ 1 ಪಿತನು ನಳನೆಂಬನಿಗೆ ಪ್ರೀತಿಯಲಿ ನೀ ಪೇಳ್ದೆಹಿತವು ಶ್ರೀ ಹರಿಗೆಂದು ನುತಿಸುವ ಸುಕರ್ಮ |ಅತಿಶಯದೆ ಪೂಜೆಯಿಂದಧಿಕದಲಿ ಶ್ರೀ ಹರಿಯುನುತಿಗೆ ಪ್ರೀತಿಸುವನೆಂದೊರೆದೆ ಭಕುತಿಯಲೀ2 ಹರಿನಾಮ ಸ್ಮರಿಸುತ್ತ ಹರಿ ಚರಣ ನಮಿಸುವರದುರಿತರಾಶಿಗಳಿರದೆ ಪರಿಹಾರವೆನುತಾ |ಒರೆಯುತೀಪರಿ ನಮನ ಭಕ್ತಿಗೇ ಪ್ರಾಶಸ್ತ್ಯಪರಿಪರಿಯ ಪೇಳಿಹಳೆ ನಮಿಪೆ ನಿನ್ನಡಿಗೇ3 ಈ ಪರಿಯ ತಪಗೈದು ದ್ವಾಪರದ ಯುಗದಲ್ಲಿಶ್ರೀ ಪತಿಯ ದರ್ಶನದಿ ತಾಪತ್ರಯ ಕಳೆದೂ |ಆ ಪರಮ ಪುರುಷನ್ನ ಕೈ ಪಿಡಿದ ಮಹ ಭದ್ರೆಕಾಪುರುಷನಾದೆನ್ನ ಪಾಪ ಪರಿಹರಿಸೇ 4 ಭದ್ರಾಣಿ ಪತಿಗಿನ್ನು ಕಾದ್ರವೇಯನು ಮತ್ತೆಆದ್ರಿ ಮಂದಿರ ತಂದ ಅವಿಕಾರಿ ವಿಪಗೇ |ಸಿದ್ಧೈದು ಗುಣದಿಂದ ಹೀನಳೆಂದೆನಿಸುತ್ತಭದ್ರ ಗುರು ಗೋವಿಂದ ವಿಠಲ ಪ್ರಿಯೆ ಪಾಹೀ 5
--------------
ಗುರುಗೋವಿಂದವಿಠಲರು
ಮಾಡಬಾರದೆ ಹರಿಪಾದ ಪೂಜೆ ಪ ಮಾಡಬಾರದೇನೋ ಕೂಡುತಾ ಸನಾದಿಬೇಡಿದೊರವನೀವ ಗಾಡಿಕಾರನ ಪೂಜೆ ಅ.ಪ. ನರಜನ್ಮವು ಬರಿದೆ ಪೋಗುತಿದೆ ಗರುವತನದಿ ನೀಮೆರೆಯ ಬೇಡೆಲವೋ ಮಾರಜನಕ ಕೃಷ್ಣನನ್ನರಿತು ಪೂಜೆಯನು 1 ಪಾದ 2ಕರುಣಾಸಾಗರ ಕರಿವರದಾ ಕೃಷ್ಣ ದುರಿತಗಳನೆ ಕಳೆದುಪರಮಪದವನೀವ ಗರುಡಗಮನ ತಂದೆ ವರದ ವಿಠಲನ ಪೂಜೆ 3
--------------
ಸಿರಿಗುರುತಂದೆವರದವಿಠಲರು
ಮಾಡಿರೊ ಪಾಡಿರೊ | ಲೋಕದೊಳಗೆ ಇದೆ ಬೀರುತಾ ಸಾರುತಾ ಶ್ರೀಕಾಂತನ ವೊಲಿಸಿ ಪ ದಶಮಿ ಏಕಾದಶಿ ದ್ವಾದಶಿ ದಿನತ್ರಯ | ವಸುಧಿಯೊಳಗೆ ಮಹಾವ್ರತವೆಂದು ತಿಳಿದು ತ್ರಿ | ದಶರೆಲ್ಲ ಕೈ ಕೊಂಡು ಮಾಡಿದರಂದು ರಂ | ಜಿಸುವ ಸತ್ಕರ್ಮದಲ್ಲಿ | ಬಿಸಜನಾಭನು ಲಕುಮಿಗೆ ಪೇಳಿದ ವ್ರತ | ಹಸನಾಗಿ ಬೊಮ್ಮಗೆ ಅರಹು ಮಾಡಲು ದೇವ | ಋಷಿಗೆ ಅಜನು ಪೇಳಲಾ ಮುನಿ ಬೀರಿದಾ ದಶ ದಿಕ್ಕಿನೊಳಗೊಂದು 1 ಉದಯಕಾಲದೆಲೆದ್ದು ಸಂಸಾರಯಾತ್ರೆ ಎಂದು | ಬದಿಯಲ್ಲಿದ್ದವರೆಲ್ಲ ಹರಿದಾಸ ದಾಸಿಯರು ಹೃದಯದೊಳೀಪರಿ ಯೋಚಿಸಿ ಅಜ್ಞಾನ ಒಂದು ಕಡೆಗೆ ನೂಕಿ | ಸದಮಲನಾಗಿ ಸ್ನಾನಾದಿಯ ಮಾಡಿ ಮ ವಿಧಿ ಮುಗಿಸಿ ಶ್ರವಣ ಸಾರಾ ಹೃದಯರಿಂದಲಿ ಕೇಳಿ2 ಗೋವಿಂದನ ಚರಣಕೆ ಎತ್ತಿ ನಿರ್ಮಲ ಚಿತ್ತ | ದಿಂದಲಿ ನಲಿವುತ ಹಿಗ್ಗಿ ಹಾರೈಸಿ ಆನಂದ ವಾರಿಧಿಯಲ್ಲಿ | ಕುಂದದೆ ಸೂಸುತ ಗೆಳೆಯರ ಒಡಗೂಡಿ | ತಂದು ಪುಷ್ಪಗಳಿಂದ ಮಂಟಪವ ವಿರಚಿಸಿ | ಇಂದು ಸ್ಥಾಪಿಸಿ ತುತಿಸಿ 3 ಜ್ಞಾನಿಗಳೊಡನೆ ಕುಳ್ಳಿದ್ದು ಸುಜ್ಞಾನಿಗಳು ಶುದ್ಧ ಗಾ| ಆನನ ಕೂಗುತ ಹಾಡುತ ಪಾಡುತ | ಧ್ಯಾನವ ಗೈವುತಲಿ | ಕಾಣಬಾರದಂತೆ ಪ್ರಜೆದೊಳಗೆ ತೋರಿ | ಮಗುವಿನಂತೆ ಶ್ರೀನಿವಾಸನ ನೆನಸಿ 4 ಕೂಡಿ ಸೋಗು ವೈಯಾರದಿ | ಕಾಲಲಿ ಗೆಜ್ಜೆಯ ಕಟ್ಟಿ | ವಲಯಾಕಾರ | ಮೇಲು ಚಪ್ಪಳೆಯಿಂದ | ಬಾಲವೃದ್ಧರು ನಿಂದು ಕುಣಿಕುಣಿದಾಡಿ ಹಿ | ಯಾಲಲಿ ಹರಿಯ ಸಂಕೀರ್ತನೆ ಕೀರ್ತಿಸಿ | ಸೋಲದೆ ಘನಸ್ವರ ಸ್ವರದಿಂದಲಿ ಕೂಗಿ ವಿ | ಶಾಲ ಭಕುತಿ ಒಲಿಸಿ 5 ಕಿರಿಬೆವರೊದಕ ಮೊಗದಿಂದಿಳಿಯಲು | ಉರದಲಿ ಇದ್ದ ದೇವಗೆ ಅಭಿಷೇಚನೆ | ಪರವಶವಾಗಿ ಮೈಮರೆದು ತಮ್ಮೊಳು ತಾವು | ಕರದು ತರ್ಕೈಸುತಲಿ | ಕಿರಿನಗೆಯಿಂದ ತೋಳುಗಳು ಅಲ್ಲಾಡಿಸಿ | ಎರಡು ಭುಜವ ಚಪ್ಪರಿಸಿ ಏಕಾದಶಿ | ದುರಿತ ರಾಸಿಗೆ ಪಾವಕನೆಂದು ಕೂಗಿ ಬೊಬ್ಬಿರಿದು ಬಿರಿದು ಸಾರಿ6 ಮಧ್ಯ ಮಧ್ಯದಲಿ ಮಂಗಳಾರುತಿ ಎತ್ತಿ | ಮಧ್ವರಾಯರೆ ಮೂರು ಲೋಕಕೆ ಗುರುಗಳು | ಸಿದ್ಧಾಂತ ಮುನಿ ಸಮ್ಮತಾ | ಮಲ ಮೂತ್ರವನು ಕ್ರಿಮಿವ ಮನವು | ಮೆದ್ದಾ ಸದ್ದೋಷಿ ಚಂಡಾಲ ವೀರ್ಯಕ್ಕೆ ಬಿದ್ದವ ನಿಜವೆನ್ನಿ 7 ಸಾಗರ ಮೊದಲಾದ ತೀರ್ಥಯಾತ್ರೆಯ ಫಲ | ಭೂಗೋಳದೊಳಗುಳ್ಳ ದಾನ ಧರ್ಮದ ಫಲ | ಆಗಮ ವೇದಾರ್ಥ ಓದಿ ಒಲಿಸಿದ ಫಲ | ಯೋಗ ಮಾರ್ಗದ ಫಲವೊ | ಜಾಗರ ಮಾಡಿದ ಮನುಜನ ಚರಣಕ್ಕೆ ಬಾಗಿದವಗೆ ಇಂಥ ಫಲಪ್ರಾಪ್ತಿ ನಿರ್ದೋಷನಾಗುವ ವೈರಾಗ್ಯದಿ 8 ನಿತ್ಯಾ ನೈಮಿತ್ಯಕ ಮಾಡು ಮಾಡದಲಿರು | ಪೋಗಾಡದೆ ಸದಾಚಾರ ಸ್ಮøತಿಯಂತೆ ಅತ್ಯಂತ ಪಂಡಿತ ಪಾವನ್ನ | ಉತ್ತಮರೊಡಗೂಡಿ ಮೃಷ್ಟಾನ್ನ ಭುಂಜಿಸಿ | ಮೃತ್ಯು ಜೈಸಿ ಸದ್ಗತಿಗೆ ಸತ್ಪಥಮಾಡು | ಸತ್ಯ ಮೂರುತಿ ನಮ್ಮ ವಿಜಯವಿಠ್ಠಲರೇಯ | ನಿತ್ಯ ಬಿಡದೆ ಕಾವಾ 9
--------------
ವಿಜಯದಾಸ
ಮಾನವ ಶ್ರೀಗುರುಚರಣವ ಮಾಡುತ ಪೂಜೆಯ ತೋಷದಲಿ ಪ ಬೇಡುತ ನಿಜಸುಖ ಆಜ್ಞಾಚಕ್ರದೊ ಳಾಡುತ ಪರಮನೆ ನೀನಾಗಿ ಅ.ಪ ಸತ್ತು ಹುಟ್ಟಿ ಈ ಪೋಗುವದೇಹವ ನಿತ್ಯವು ಎನ್ನುತ ಪೋಷಿಸದೆ ಸತ್ಯಪ್ರಬಂಧವ ಶ್ರೀಹರಿಪಾದವ ನೆತ್ತಿಲಿ ಪೊತ್ತರ ಮಗನಾಗಿ 1 ಚಿತ್ತವ ಚಲಿಸದೆಸಿದ್ದಾಪುರದೊಳ ಗಿತ್ತರೆ ಬಂಧುರಸಿದ್ಧಿಗಳೂ ಅರ್ಥಿಯಿಂದ ಬಂದೊದಗುವ ಫಲಗಳ ವ್ಯರ್ಥವ ಮಾಡದೆ ಶೀಘ್ರದಲಿ 2 ಹರಿಯಜ ರುದ್ರರು ಈಶ ಸದಾಶಿವ ಪರತರಮೂರ್ತಿಯ ಧ್ಯಾನಿಸುತ ಗುರುವನೆ ಯಜಿಸುತ ಭಜಿಸುತ ಸರ್ವರು ಗುರುವೇಯಾಗಿಹ ತೆರದಲ್ಲಿ 3 ತತ್ವಮಸಿಯ ಬೋಧಾಮೃತ ಸೇವಿಸಿ ಮೃತ್ಯುವ ಜೇಸುತ ಧೈರ್ಯದಲಿ ಪೃಥ್ವಿಯೊಳೀಮಹದೇವನಪುರದೊಳು ಭಕ್ತರ ಪೊರೆಯುವ ದೊರೆಯನ್ನೆ 4
--------------
ರಂಗದಾಸರು
ಮಾನವಾತ್ಮರೆ ನಿಮ್ಮ ಮಾನಸ ಪೂಜೆಯಿಂಮಾನವನಿಗೆ ಮೋಕ್ಷ ಸಾಧಿಸೀರಿ ಪ ರತ್ನ ನಿರ್ಮಿತ ಸುಚರಿತ್ರ ಮಂಟಪವನ್ನುಸತ್ಯಭಾಮೆಯ ಪತಿಗಿತ್ತು ಪೂಜಿಸುವೆ1 ಆಸನ ನೀಡುವೆ ಶೇಷಶಯನನೆ ಇಲ್ಲಿವಾಸ ಮಾಡಿ ಎನ್ನ ಸೇವೆ ಸ್ವೀಕರಿಸು2 ಧ್ಯಾನ ಮಾಡುವೆ ನಿನ್ನ ಗಾನ ಮಾಡುವೆ ನಿನ್ನಜ್ಞಾನ ಭೂಷಣ ಶೋಭಿತಾನನಾಂಬುಜ 3 ಧೃತ ವೇಣುಗೋಪಾಲ ಬಾರೋ ಮನಸಿಗೆ ತೋರೊಮೂರುತಿ ನಿನ್ನಯ ಸಮೀರ ಸಂಸ್ತುತನೆ 4 ಅಘ್ರ್ಯ ನೀಡುವೆ ನಾನು ಅನಘ್ರ್ಯ ವಸ್ತುಗಳಿಂದಸ್ವಘ್ರ್ಯಗ್ರಹಣ ಮಾಡೋ ಭರ್ಗ ಸೇವಿತನೆ 5 ಪಾದ್ಯ ನೀಡುವೆ ವೇದ ವೇದ್ಯ ಮಹಿಮನೇ ಮುನ್ನಾವದ್ಯ ಕಳೆದು ಭವದಿಂದ ಉದ್ಧರಿಸೆನ್ನ 6 ಆಚಮನವ ನೀಡುವೆ ಹೇ ಚತುರಾನನೇಶವಾಚಾಮಗೋಚರ ಮೋಚಕ ಹೇತು 7 ಸುದತಿ ಮೋಹನ ತವಮಧುಪರ್ಕವನೀವೆ ಮುದದಿ ಸ್ವೀಕರಿಸು 8 ಮತ್ತೆ ಆಚಮನವನಿತ್ತು ಪೂಜಿಪೆ ಕರವೆತ್ತಿ ಮುಗಿವೆ ಸರ್ವಭಕ್ತ ಪೋಷಕನೆ 9 ಗಂಗೆ ಯಮುನೆ ಗೋದಾ ತುಂಗೆ ಜಲವ ತಂದಿಹೆ ಅ-ನಂಗ ಜನಕ ಮಾಡೋ ಅಭ್ಯಂಗ ಸ್ನಾನ 10 ನಿರಿಗೆಗಳನೆ ಹಾಕಿ ಜರದ ಪೀತಾಂಬರ ಗ-ರುಡವಾಹನ ನೀನು ಧರಿಸು ಮಧ್ಯದಲಿ 11 ಹಾರ ಕಿರೀಟ ಕಾಂಚಿ ನೀರ ನೂಪುರ ಸು-ಕೇಯೂರ ನೂಪುರನೀವೆ ಧಾರುಣಿಪತಿಗೆ 12 ಸ್ವರ್ಣ ರಚಿಸಿದ ಸೂತ್ರವನು ಕೊಡುವೆ ಲಕ್ಷ್ಮೀರನ್ನ ಸೌರಭ ಗಂಧವನು ಸ್ವೀಕರಿಸು 13 ವಾಸುದೇವನೆ ದಿವ್ಯ ನಾಸಿಕೇಂದ್ರಿಯದಿಂದಈಸು ಧೂಪದ ಗಂಧ ವಾಸನೆ ಗ್ರಹಿಸೋ 14 ಮರುಗು ಮಲ್ಲಿಗೆ ಜಾಜಿ ಸುರಗಿ ಸೇವಂತಿಗೆಸುಮಗಳ ಪರಿಮಳ ಧರಿಸೋ ಮಧ್ಯದಲಿ 15 ಹತ್ತು ಅಂಗಗಳಿಂದ ಉತ್ತಮ ಸುಧೂಪವಎತ್ತುವೆ ನಿನಗೆ ಸರ್ವೋತ್ತಮ ಹರಿಗೆ16 ಆಕಳ ಘೃತದ ಅನೇಕ ದೀಪಗಳ್ಹಚ್ಚಿಶ್ರೀಕರ ತವ ಮುಖಾವಲೋಕಿಸುತ್ತಿಹೆನು 17 ಏಕಾರತಿ ಗೋಪಿಪ್ರೀತನೆ ಬೆಳಗುವೆನಾಕ ನಾಯಕ ಸುರಲೋಕ ಸೇವಿತನೆ 18 ಆರು ವಿಧದ ಅನ್ನ ಸಾರು ಪಾಯಸ ಭಕ್ಷ್ಯಭೂರಿ ಶಾಕಗಳೀವೆ ನೀರಜಾಂಬಕನೆ 19 ಮಾರಜನಕನೆ ಮುತ್ತಿನಾರತಿ ಬೆಳಗುವೆಶ್ರೀರಾಮನೆ ನಿನ್ನ ಮೋರೆಯ ತೋರೊ20 ಛತ್ರ ಚಾಮರ ವ್ಯಜನ ದರ್ಪಣ ಪರ್ಯಂಕಕರ್ಪುರ ತಾಂಬೂಲವಿತ್ತು ಪೂಜಿಸುವೆ 21 ಹತ್ತಾರು ಉಪಚಾರ ಚಿತ್ರ ಚರಿತನೆ ನಿನಗೆಅರ್ಥಿಯಲಿ ಕೊಡುವೆನು ಮುಕ್ತಿ ನೀಡೆನಗೆ 22 ಇಂದಿರೇಶನೆ ನಿನ್ನ ಮುಂದೆ ತುತಿಪನೆ ನಿಂತುನಂದಬಾಲನೆ ಕೃಪೆಯಿಂದ ನೋಡೆನ್ನ 23
--------------
ಇಂದಿರೇಶರು
ಮಾನವಿ ದಾಸರ | ನಿ ಸೇರೋಹೀನ ಮನುಜ ನಿನ್ನಘವನೆ ನೀಗುವ ಪ ಕೃತ ಯುಗದಲಿ ಹಿರಣ್ಯಜನೆನಿಸೀವಿತತ ಮಹಿಮ ಹರಿಯನೆ ಭಜಿಸೀ ||ಸತತದಿ ಸುಜನರ ಸಂತವಿಸಿ ಸಿರಿಪತಿಯ ಸೇವಿಸೆ ಸಹ್ಲಾದ ನೆನಿಸಿದಾ 1 ಎರಡೊಂದ್ಯು ಯುಗದಲಿ ಶಲ್ಯನಾಗಿ ಜನಿಸೀಕುರುಪಗೆ ಋಣರೂಪ ಸೇವೆ ಸಲಿಸಿ ||ಉರುತರ ಭಕುತಿಲಿ ಶೌರಿಯ ನೆನೆಯುತಹರಿಪದ ಸೇರಿದ ನೃಪಕುಲ ಮೌಳೀ 2 ವರಕಲಿಯಲಿ ದ್ವಿಜನಾಗವತರಿಸೀನರಮೃಗಾಖ್ಯಸುತ ಶ್ರೀನಿವಾಸನೆನಿಸೀ ||ವರದೇಂದ್ರ ಯತಿಯಲಿ ತರ್ಕವ ಕಲಿತುದುರುಳರ ಮುರಿದತಿ ಗರ್ವದಿ ಮೆರೆದಾ 3 ಭೃಗ್ವಂಶಜ ವಿಜಯಾಖ್ಯ ದಾಸ ಬಂಧೂಋಗ್ವಿನುತನ ಪ್ರಾಕೃತದೊಳು ಪಾಡೆ ||ದಿಗ್ಗಜ ಗರ್ವದಿ ಗೆಜ್ಜೆಯ ಕಟ್ಟಿದಅಗ್ಗದ ನಟನಿವನೆನುತಲಿ ಜರೆದಾ 4 ದಾಸರ ನಿಂದ್ಯದಿ ಬಂದುದು ಅಪಮೃತ್ಯುದೋಷನೀಗೆ ಗೋಪಾಲರ ಭಜಿಸೆನ್ನ ||ಔಷಧ ಪೇಳಲು ದಾಸರ ನಾಲ್ದಶವರ್ಷಾಯುಷ್ಯವ ಪೊಂದಿದವರನಾ5 ಇಂದು ಭಾಗದಲಾನಂದದಿ ಮೀಯೇಬಂದೊದಗಿತು ಜಗನ್ನಾಥ ನಾಮಾ ||ಪೊಂದುತ ಅಂಕಿತ ಕುಣಿಯುತ ಪಾಡುತಇಂದಿರೆಯರಸನ ಛಂದದಿ ತುತಿಸಿದ 6 ಪಾವನತರ ಹರಿಕಥೆ ಸುಧೆ ರಚಿಸೀಪವನ ಮತದವರನ್ನುತ್ತರಿಸೀ ||ಪವನನ ಹೃತ್ಕಂಜದಿ ನೆಲೆಸಿಹ ಗುರುಗೋವಿಂದ ವಿಠಲ ಪದಾಬ್ಜವ ಸೇರಿದ 7
--------------
ಗುರುಗೋವಿಂದವಿಠಲರು
ಮಾನಸ ಪೂಜೆಯನು ಮಾಡು | ಧ್ಯಾನ ಪೂರ್ವದಿಂದ ಕುಳಿತು ಪ ಜ್ಞಾನ ಭಕುತಿಯ ವಿಡಿದು ಲಕುಮಿ | ಪ್ರಾಣನಾಥನ ಪ್ರೇರಣೆಯಿಂದ ಅ.ಪ ಕಾಮ ಕ್ರೋಧವ ಹಳಿದು ವಿಷಾದವೆಂಬೋ | ಸ್ತೋಮಗಳನು ತೊರೆದು ರಜೋ ಮೊದಲಾದ || ತಾಮಸದ ಬುದ್ಧಿ ಬಿಟ್ಟು ನೇಮನಿತ್ಯ ತೀರಿಸಿಕೊಂಡು | ಈ ಮನಸ್ಸು ಇಟ್ಟು 1 ಹೃದಯ ಪದುಮದೊಳಗೆ ಹರಿಯ ಪದುಮ ಪದಗಳಿಟ್ಟು | ದೇಹ ಕದಲದಂತೆ ಇದ್ದು ಜ್ಞಾನ ಉದಿತವಾದ ದೃಷ್ಟಿಯ || ಹದುಳದಿಂದ ತಿಳಿದು ಅಂತರವೆಲ್ಲವನು ನೋಡಿ | ಕದವ ತೆರೆದು ಕೊಟ್ಟ ಮುದದಿ ದೃಢವ ಸಂಪಾದಿಸಿ2 ನೀಲ ರತುನದಂತೆ ಹೊಳೆವ ಪಾಲಸಾಗರತನುಜೆ | ಮೇಲು ಮಂಗಳರಮಣನಾದ ಮೇಲುಗಿರಿಯ ತಿಮ್ಮನ || ತವಕ ಬೀಳದಲೆ ಪೂಜೆ ವಿಧಾ | ಸಾಲುಗಳನು ತಿಳಿದು ವಿಶಾಲ ಬುದ್ಧಿ ಯುಕುತಿಯಿಂದ 3 ವೇದ ಮಂತ್ರಗಳನು ಪೇಳಿ ಆದಿಯಲ್ಲಿ ಪೀಠಪೂಜೆ- | ಯಾದ ತರುವಾಯ ವಿನೋದದಿಂದಲಾವರಣ || ಆದರಣೆಯಿಂದ ಬಳಿಕ ಮಾಧÀವರಿಗೆ ಸಕಲ ಭೂಷ- | ಣಾದಿಗಳನು ರಚಿಸಿ ಪುಣ್ಯಹಾದಿಯನು ತಪ್ಪದೆ 4 ದೋಷರಾಶಿಗೆ ದ್ವೇಷನಾಗಿ ಈ ಶರೀರವÀ ಘಾಸಿಮಾಡದೆ | ಪಾದ || ಲೇಸಿನಿಂದ ಭಜನೆಗೈದು ವಾಸವಾಗು ಪದದಲ್ಲಿ | ಶ್ರೀಶ ವಿಜಯವಿಠ್ಠಲರನ್ನ ದಾಸ-ದಾಸರ ದಾಸನೆಂದು5
--------------
ವಿಜಯದಾಸ
ಮುಕ್ಕೋಟ ದ್ವಾದಶಿಯ ದಿವಸ (ಮಾರ್ಗಶಿರ ಶುದ್ಧ ದ್ವಾದಶಿಯ ಉತ್ಸವ) ರಂಭೆ : ಮತಿವಂತೆ ಪೇಳೀತನ್ಯಾರೆ ದೇವ ವ್ರತತಿಯಧಿಪನಂತೆ ನೀರೆ ತೋರ್ಪ ಅತಿಶಯಾಗಮ ಬಗೆ ಬ್ಯಾರೆ ರತ್ನ ದ್ಯುತಿಯಾಭರಣವ ಶೃಂಗಾರ ಆಹಾ ಶ್ರುತಗೊಲಿಸೆನಗೆ ಆಶ್ರಿತ ರಕ್ಷಾರ್ಥಿತನ ಸಂ- ಗತಿ ಸ್ಮøತಿ ತತಿಗಳ ಮತಿಗಗೋಚರನಂತೆ 1 ಊರ್ವಶಿ : ಲಾಲಿಪುದೆಲೆಗೆ ಪೇಳುವೆನು ನೂತನವ ಲೋಲ ಲೋಚನನ ನಾಟಕ ಸತ್ಕಥನವ ಮೇಲಾಗಿ ಜಗದಿ ಶೋಭಿಪ ಶೇಷಾದ್ರಿಯಲಿ ಬಾಲಾರ್ಕಸದೃಶನೀತನು ಇರ್ಪನಲ್ಲಿ ನೀಲನಿಭಾಂಗನು ನೆನೆವರ ಪಾಪವ ಘೋಲುಘಡಿಸಲೆಂದೆನುತಲಿ ಭಾರ್ಗವ ಕೋಲಿಂದೆಸಗಿದ ಧರಣಿಗೆ ಬಂದು ಸ- ಲೀಲೆಗಳೆಸಗುವ ಜಾಲವಿದೆಲ್ಲ 2 ಸರಸಿಜಗಂಧಿ ಕೇಳ್ ದಿಟದಿ ತನ್ನ ಅರಮನೆಯಿಂದ ಸದ್ವಿಧದಿ ಈರ್ವ- ರರಸಿಯರ್ ಸಹಿತ ಮಿನಿಯದಿ ಅತಿ ಭರದಿಂದ ಸೂರ್ಯನುದಯದಿ ಆಹಾ ಉರುತರ ಹೇಮಪಲ್ಲಂಕಿಯೊಳಡರಿ ತ್ವರಿತದಿ ಪೋಗುವ ಭರವಿದೆಲ್ಲಿಗೆ ಪೇಳೆ3 ಊರ್ವಶಿ : ಮದ್ದಾನೆಗಾತ್ರೆ ಲಾಲಿಸಿ ಕೇಳು ಮಾತ ಬದ್ಧ ನೀ ಪೇಳ್ದ ಮನದ ಶಂಕಾವ್ರಾತ ತಿದ್ದಿಪೆ ಕೇಳು ಮಾರ್ಗಶಿರ ಮಾಸದೊಳು ಸೂರ್ಯ ಉದಯ ಕಾಲದೊಳು ಭದ್ರಭವನವನು ಪೊರಟು ವಿನೋದದಿ ಅದ್ರಿಧರನು ಸಜ್ಜನರೊಡಗೂಡಿ ಉ- ಪದ್ರಿತ ಪಾಪವ ಛಿದ್ರಿಪ ಸ್ನಾನಕೆ ರೌದ್ರಿತ ರಾಮಸಮುದ್ರದ ಬಳಿಗೆ 4 ರಂಭೆ : ಆರರೆ ಆಶ್ಚರ್ಯವಾಯ್ತೆನಗೆ ಅತಿ ಪರಮ ಮಹಿಮೆನೆಂದ ಮೇರೆಗೆ ಘನ- ತರ ಸ್ನಾನವೇನಿದು ಕಡೆಗೆ ವೃತ ದಿರವೋ ಉತ್ಸವವೋ ಪೇಳೆನಗೆ ಆಹಾ ತರುಣಿ ರನ್ನಳೆ ನಿನ್ನ ಚರಣಕ್ಕೆ ನಮಿಪೆ ಈ ಪರಿಗಳ ಸಾಂಗದಿಂದರುಹಬೇಕೆನಗಿನ್ನು 5 ಊರ್ವಶಿ : ಅಕುಟಿಲೆ ಬಾಲೆ ಯೌವನವಂತೆ ಕೇಳೆ ಸಕಲಾಂತರ್ಯಾತ್ಮನೀತನು ಸತ್ಯಶೀಲೆ- ಪ್ರಕಟ ವ್ರತವಿದಲ್ಲ ಅಂಜನಾದ್ರಿಯಲಿ ಭಕುತವತ್ಸಲನು ಉತ್ಸವಿಸುವನಲ್ಲಿ ವಿಕಳಹೃದಯ ನರನಿಕರಕಸಾಧ್ಯವೆಂ ದ್ಯುಕುತದಿ ಈ ಧರೆಯಲ್ಲಿ ಪ್ರತ್ಯೇಕದಿ ಅಖಿಳೋತ್ಸವ ಮಸ್ತಕಕಿದು ವೆಗ್ಗಳ ಮುಕುಟೋತ್ಸವವೆಂದೆನುತಲಿ ರಚಿಸುವ 6 ರಂಭೆ : ನಳಿನಾಕ್ಷಿ ಲಾಲಿಪುದಿನ್ನು ಸ್ನಾನ ವೊಲವಿಂದ ಗೈದ ಮೇಲಿವನು ತನ್ನ ರಮಣಿಯರ್ಸಹಿತಂದಣವನು ಏರಿ ನಿಲುನಿಲುತ್ಯಾಕೆ ಬರುವನು ಆಹಾ ಪೊಳಲೊಳಗಿಹ ಜನನಿಳಯದ ದ್ವಾರದಿ ಕಳಕಳವೇನಿದ ತಿಳುಪೆನಗೀ ಹದ7 ಊರ್ವಶಿ : ಕುಂದರದನೆ ಬಾಲೆ ಚದುರೆ ಸೈ ನೀನು ಮಿಂದು ತೋಷದಿ ಅಂದಣವನ್ನೇರಿ ತಾನು ಇಂದೀ ಪುರದೊಳಿರ್ಪ ಜನರ ದೋಷಗಳ ಕುಂದಿಸಲೆಂದವರವರ ದ್ವಾರದೊಳು ನಿಂದಿರುತಲ್ಲಿಯದಲ್ಲಿ ಆರತಿಗಳ ಚಂದದಿ ಕೊಳುತೊಲವಿಂದ ಕಾಣಿಕೆ ಜನ- ವೃಂದದಿ ಕೊಡುತಾನಂದ ಸೌಭಾಗ್ಯವ ಒಂದಕನಂತವ ಹೊಂದಿಸಿ ಕೊಡುವ 8 ರಂಭೆ : ಸರಸಿಜಾನನೆ ಮತ್ತೇನಿದನು ತನ್ನ ಅರಮನೆಯಲ್ಲಿ ಭೂದ್ವಿಜನರನು ಸರ್ವ ಪುರಜನ ಸಹಿತೊಳಗಿವನು ನಾನಾ ತರದಿ ಮೆರೆವ ಭೋಜನವನು ಆಹಾ- ಕರಿಸಿ ಆಮೇಲೆ ರಾತ್ರಿಯಲಿ ಸಾಲಿನಲಿ ವಿ- ಸ್ತರದ ಲಾಜದ ರಾಸಿಗಿರದೆ ಪೂಜಿಪುದ್ಯಾಕೆ 9 ಊರ್ವಶಿ : ಮಂಗಲಾನನೆ ಲೇಸು ನುಡಿದೆ ಕೇಳ್ ನೀನು ಗಂಗಾಜನಕ ತನ್ನ ಗೃಹದಿ ವಿಪ್ರರನು ಹಿಂಗದೆ ಕರೆಸಿ ವಿಪ್ರರನೆಲ್ಲ ಬರಿಸಿ ಸಂಗಾತದಲಿ ಆರೋಗಣೆ ಗೈದು ಮೆರೆಸಿ ಅಂಗಣದಲಿ ರಾತ್ರೆಯಲಿ ವಿನೋದದಿ ಕಂಗೊಳಿಸುವ ಉರಿದರಳ ಸಮೂಹಕೆ ರಂಗಪೂಜೆಯನುತ್ತಂಗವಿಸುವ ನಿಗ- ಮಂಗಳೊಡೆಯನು ವಿಹಂಗಮಾರೂಢ 10 ರಂಭೆ : ಅಮಮ ಮತ್ತೇನಿದ ಪೇಳು ಶ್ವೇತ- ಕುಮುದಾಪ್ತ ಠಾವಿನ ವೋಲು ಬಂದು ಆದರಿಸಲಿದರ ಮಧ್ಯದೊಳು ತನ್ನ ರಮಣಿಯರ್ ಸಹಿತ ತೋಷದೊಳು ಆಹಾ ವಿಮಲವನ್ನೇರಿನ್ನೆಲ್ಲಿಗೈದುವನೆಂಬಾ- ಗಮವ ಪೇಳೆನೆಗೆ ನೀ ನಮಿಪೆ ನಿನ್ನಂಘ್ರಿಯ 11 ಊರ್ವಶಿ : ಥೋರ ಕನಕುಂಭಕುಚಭಾರೆ ಕೇಳೆ ಶ್ರೀ ರಮಾರಮಣ ಪೂಜೆಯಗೊಂಡಾ ಮೇಲೆ ಚಾರು ಈ ಹೂವಿನ ತೇರನೇರುತಲಿ ಕೇರಿ ಕೇರಿಯೊಳಾರತಿಗೊಳ್ಳುತಲಿ ಭೋರಿಡುತಿಹ ವಾದ್ಯಧ್ವನಿ ಘನತರ ಭೇರಿ ಮೃದಂಗಾದ್ಯಖಿಳ ವಿನೋದದಿ ಸ್ವಾರಿಗೆ ತೆರಳುವ ಕ್ರೂರ ನರರ ಆ- ಘೋರ ಪಾಪ ಜರ್ಝರಿಸಲೆಂದು 12 ರಂಭೆ : ಅರವಿಂದಾಕ್ಷಿಯೆ ಮತ್ತೇನಿದನು ತನ್ನ ಅರಮನೆಯಿದಿರು ರಥವನು ತಾನು ಭರದೊಳಗಿಳಿದಂದಣವನು ಏರಿ ಮೆರೆವಾಲಯದ ಸುತ್ತುಗಳನು ಆಹಾ ತಿರುಗುವನ್ಯಾಕೆ ಭೂದ್ವಿಜರ ಘೋಷದಿ ವಾದ್ಯ- ಭರಿತ ಗಾಯನ ಭೇರಿ ಧ್ವನಿಗಳೇನಿದ ಪೇಳೆ13 ಊರ್ವಶಿ : ಕೃಷ್ಣಾಂಕ ವದನೆ ಕೇಳೆಲೆ ಪೇಳ್ವೆ ನಿನಗೇ ದುಷ್ಟಮರ್ದನ ರಥವಿಳಿವುತ್ತಲಾಗೇ ಅಷ್ಟದಿಗ್ಭಾಗದಿ ಗೃಹಸುತ್ತಿನೊಳಗೆ ಅಷ್ಟಾವಧಾನವ ರಚಿಸುತ್ತ ಕಡೆಗೆ ಶ್ರೇಷ್ಠನು ರತ್ನಾಸನದಿ ಗ್ರಹದಿ ಪರ ಮೇಷ್ಟಜನಕೆ ಸಂತೋಷಾನಂದದಿ ಸೃಷ್ಟಿಯ ಜನರ ಅನಿಷ್ಟವ ತ್ಯಜಿಸುತ ಇಷ್ಟವನೀವ ಯಥೇಷ್ಟ ದಯಾಬ್ಧ 14 ರಂಭೆ : ಅರಿತೆನಾ ಸ್ವಚ್ಛ ಚಿತ್ತದಲಿ ಇನ್ನು ಹರಿ ಏಕರೂಪನೆನ್ನುತಲಿ ಲಕ್ಷ್ಮೀ ಕರವೆನಿಸುವ ಕಾರ್ಕಳದಲಿ ಭಾಗ್ಯೋ- ದಯ ದೇವಾಲಯದ ಮಧ್ಯದಲಿ ಆಹಾ ತ್ವರಿತದಿ ನುತಿಸಿರೊ ಗುರು ನಾರಸಿಂಹ ಶ್ರೀ- ಕರ ವೆಂಕಟೇಶನ ಚರಣಕಮಲಗಳ 15
--------------
ತುಪಾಕಿ ವೆಂಕಟರಮಣಾಚಾರ್ಯ
ಮುಂದೆನಗೆ ಗತಿಯೇನೋ ಇಂದಿರೇಶಾ ತಂದೆ ನೀನೆಂದೆನುತ ತಪ್ಪನೊಪ್ಪಿಸುವೇ ಪ ಶ್ರೀಕಾಂತನೇ ನಿನಗೆ ಅಭಿಷೇಕ ಮಾಡದೆಯೆ ನಾ ಕಂಠಪರಿಯಂತ ಕುಡಿದೆನೊ ಹಾಲ ಬೇಕೆಂದು ಹರಿವಾಸರಂಗಳಾಚರಿಸದೆಯೆ ಸಾಕೆಂಬವೊಲು ಸುಖವ ಸೂರೆಗೊಂಡೇ 1 ಅತಿಶಯದಿ ನಾನಿನ್ನ ಪೂಜೆಯನು ಮಾಡದೆಯೆ ಸತಿಸುತರೆ ಸರ್ವಸ್ವವೆಂದಿರ್ದೆನೋ ಹಿತಮಿತ್ರ ಬಾಂಧವರೊಳತಿ ವಂಚನೆಯಮಾಡಿ ಮತಿವಿಕಳನಾದೆನೋ ಪತಿತಪಾವನನೇ 2 ಕಲ್ಯಾಣ ಸಮಯದಲಿ ಕಲಹಗಳ ಹೂಡುತ್ತ ಉಲ್ಲಪದಿ ನಾಕುಳಿತು ನೋಡುತಿದ್ದೆ ಸಲ್ಲಲಿತ ವಾಕ್ಯಗಳನಾಡದೆಯೆ ಸರ್ವತ್ರ ಖುಲ್ಲುಮಾತುಗಳಾಡಿ ನೋಯಿಸಿದೆ ನರರ 3 ತಾರೆಂಬುದಕೆನಾನು ತೌರುಮನೆಯಾಗಿರುವೆ ಪಾರಮಾರ್ಥಕವಾಗಿ ಕೊಡುವುದರಿಯೆ ವೀರವೈಷ್ಣವರಲ್ಲಿ ವಂದಿಸದೆ ದೂಷಿಸುತ ಘೋರಪಾತಕಿಯಾಗಿ ಇರುವೆಯೀ ಜಗದಿ 4 ನರ್ಮದಾನದಿ ಸ್ನಾನ ನಿರ್ಮಲೋದಕಪಾನ ಧರ್ಮ ಮರ್ಮಗಳರಿತು ಮಾಡುವುದು ದಾನ ಪೆರ್ಮೆಯಂಶ್ರೀಹರಿಯ ಧ್ಯಾನ ನಿದಾನ ನೆಮ್ಮದಿಯ ಮಾರ್ಗದಿಂ ಪೊರೆ ನಾನು ದೀನ 5 ನಿತ್ಯ ಜೀವಿಸುವುದನ್ನು ಕಾಡದೆಯೆ ಕಡೆಯಲ್ಲಿ ಉಸಿರುಬಿಡುವುದನು ನೋಡುತ್ತ ಗುರುತರದ ಶ್ರೀಪತಿಯ ಪದಯುಗಕೆ ಗಾಢದಿಂ ಮುಡಿಯಿಕ್ಕಿ ಪಿಡಿವಂತೆ ಮಾಡು 6 ನೀನು ಒಲಿಯುವ ಪರಿಯದಾವುದನು ಮಾಡಿಲ್ಲ ಏನು ಮಾಡಲು ಎನಗೆ ಮನಸು ಬರದು ದೀನ ಪಾಲಕ ನಮ್ಮ ಹೆಜ್ಜಾಜಿ ಕೇಶವನೆ ಸಾನುರಾಗದಿ ನಿನ್ನ ಧ್ಯಾನಿಪುದ ನೀಡೈ7
--------------
ಶಾಮಶರ್ಮರು
ಮುದ್ದು ಕೃಷ್ಣಯ್ಯನ ನೋಡಾನ ಬನ್ನಿ ಪ ಕೃಷ್ಣಗೆ ಪೂಜೆಯ ಮಾಡಾನ ಬನ್ನಿ ಅ.ಪ ಚಿನ್ನದ ತೊಟ್ಟಿಲಲ್ಲಿ ಚೆನ್ನಾಗಿ ಕುಂತವ್ನೆ ಚೆನ್ನ ಚೆಲುವನಕ್ಕೋ ನಗುತವ್ನೇ ಕನ್ನೆ ರಾಧಮ್ಮಗೆ ಸನ್ನೆಯ ಮಾಡುತವ್ನೆ ಬನ್ನಿ ಬನ್ನಿ ಎಂದು ಕರಿತವ್ನೆ 1 ಹುಬ್ಬಹಾರಿಸ್ತವ್ನೆ ಮಬ್ಬ ತೋರಿಸ್ತವ್ನೆ ಅಬ್ಬಬ್ಬ ಇವನಾಟ ಬಲ್ ತಮಾಸೆ ಒಬ್ಬಿಟ್ಟು ಬೇಕಂತ ಕೈಲೇ ತೋರಿಸ್ತಾನೆ ಅಬ್ಬ ಇವ ಏಳೋದು ಒಂಥರ ಬಾಸೆ 2 ಎಂಥ ಮುದ್ದಿನ ಮೊಗ ಚೆಂದುಳ್ಳಿ ಚೆಲುವ ಇಂಥವ್ನ ನೀವೆಲ್ಲೂ ಕಂಡಿಲ್ಲ ಬನ್ರೋ ನಿಂತು ನೋಡಬೇಕಿವಗೆ ಆಲು ಮೊಸರು ಬೆಣ್ಣೆ ಹಣ್ ತುಂಬಿದ ಗಂಗಾಳ ತನ್ರೋ 3 ಕಿನ್ನರ ಗೆಜ್ಜೆ ಕೈಗೆ ಔಜುಬಂದಿ ತೊಟ್ಟವ್ನೆ ಕಣ್ಗೆ ಕಪ್ಪಾ ಹಚ್ಚಿ ನವಿಲ್ಗರಿ ತಲ್ಗಿಟ್ಟಿ ಹಣೆ ಉದ್ದಾದ ತಿಲಕ ಇಟ್ಟವ್ನೇ 4 ರಾಮ್ನೂ ನಾನೆಂತಾನೇ ಭೀಮ್ನೂ ನಾನೆಂತಾನೇ ಕಾಮ್ನಪ್ಪನೂ ನಾನೆ ನೋಡಂತಾನೆ ನಿಮ್ಮೂರ ದೇವ್ರಾಣೆ ನಾನೆ ಮಾಂಗಿರಿರಂಗ ನಿಮ್ನ ಕಾಯೋಕ್ಬಂದೆ ಅಂತಾನೆ 5
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್