ಒಟ್ಟು 552 ಕಡೆಗಳಲ್ಲಿ , 88 ದಾಸರು , 502 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮರೆಯದಿರು ಹರಿಯಮರೆವರೆ ಮೂರು ಲೋಕದ ದೊರಿಯ ಪ ಮದಗಜ ಹರಿಯೆಂದು ಕರೆಯಲುಒದಗಿ ಆಕ್ಷಣ ಬಂದುಮುದದಿ ನಕ್ರನ ಕೊಂದು ಸಲ-ಹಿದ ಸದ್ಭಕ್ತರ ಬಂಧುಹದುಳ ಪ್ರಹ್ಲಾದನ ಹೆದರಿಸಿದಸುರನಉದರವ ಬಗೆದಂಥದುಭುತ ಮಹಿಮನ1 ನಾರಿಯು ತನ್ನ ಕರೆದ ಮಾತ್ರದಿಸೀರೆಯ ಮಳೆಗರೆದಕ್ರೂರ ಖಳನ ತರಿದು ಆ ಪಾಂಡವರಆರಣ್ಯದಿ ಪೊರೆದಗಾರಾದಜಮಿಳ ನಾರಗ ಎನಲುಪಾರಗಾಣಿಸಿದಪಾರ ಗುಣನಿಧಿಯ 2 ದುರಿತ ಭವ ಪಾಶಾ - ಅವಗೆಂದೆಂದಿಗಿಲ್ಲ ಕ್ಷೇಶಾತಂದೆ ಕದರುಂಡಲಗಿ ಹನುಮಯ್ಯನೊಡೆಯಚಂದಾದಿಕೇಶವನ ನೆನೆದವರೆಂದಿಗು ಧನ್ಯರು3
--------------
ಕನಕದಾಸ
ಮರೆವಾರೆ ಎನ್ನ ರಾಘವೇಂದ್ರ ಗುರುವೆ ಸಂಪನ್ನ ಕರೆದು ಕಾಮಿತಗಳ ಕರವೆ ನಾ ನಿನಗೆಂದು ಪ ದಾರಿಯ ತಪ್ಪಿ ಪೋಗುವ ಧೀರ ಫೋರನ್ನ ದಾರಿಯ ಪಿಡಿಸಿನ್ನು ಪುರವನ್ನೆ ತೋರಿಸೆ ಊರಿನವೊಳಗೆ ಅವನ ಆಗಾ ದೂರ ನೋಡುವರೆ ದೋಷಗಳ ವಿಚಾರಮಾಡುವರೆ ಧೀರರು ಆವ ಪರಿಯಲವನ ಪಾರಗಾಣಿಪರಲ್ಲದೆ 1 ಹಸಿದು ಪರರ ಕೇಳದ ದ್ವಿಜವರಿಯನ್ನ ಶಿಶುವಿನ ನೋಡಿ ದಯದಿಂದ ಕರದಿನ್ನು ಹಸಿದ್ಯಾಕೊ ಎಂದು ಪಾಕವ ಮಾಡಿ ಹಸನಾಗಿ ತಂದು ಬಡಿಸುವ ಅವಸರದಿ ನಿಂದು,ಅವನ ದೋಷ ಪಸರಿಸಿ ಉಣಿಸಿದ ಜನರುಂಟೆ ಧರೆಯೊಳು 2 ಜಲಪಾನಾತುರನಾಗಿ ಜಲವ ಕೇಳಿದ ವಿಪ್ರ- ಕುಲ ತರಳನನು ನೋಡಿ ಕೃಪೆಯಿಂದ ಸುರನದಿ ಜಲವನೀವೆನೆಂದು ಬ್ಯಾಗನೆ ದಿವ್ಯ ಕಲಶವ ತಂದು ಬಾರೆಲೊ ಬಲು ಆಲಸ್ಯವ್ಯಾಕೆಂದು ನಿನ್ನಯ ಪಂಕ ತೊಳಿಯ ಕೊಡುವೆನೆಂದು ತಡವ ಮಾಡುವರೆ 3 ಸುಶರೀರ ತನುವನು ಮನದಲಿ ಬಯಸಿ ತಾ ಉಸರದ ಮುನಿತನಯನ ಕಂಡು ತಾವಾಗಿ ಕುಶಲವ ಕೇಳಿ, ದೇವತ ವೈದ್ಯ ಅಸಮರೆಂದೇಳಿ, ರಸ ಮಾಡೆಂದೇಳಿ, ಅವಗೆ ದಿವ್ಯ ರಸವನು ಪೇಳಿ, ಪಸಿ ನಿನ್ನಲಿದ್ದಾ ಕಿಸರು ಪೋದರೆ ಕೊಡುವೆವೆಂದು ನಿಲುವರೆ 4 ಅರ್ತಿಯ ಭಕುತನ್ನ ನೋಡೀಗ ನಿನ ದಿವ್ಯ ಕೀರ್ತಿಯ ನೋಡಿಕೊ, ವಾಸುದೇವವಿಠಲನ ಮೂರ್ತಿಯ ಭಜಕ ಭಕ್ತರಾಭೀಷ್ಟ ಪೂರ್ತಿಗೆ ಜನಕ ನಿನ್ನಯ ಗುಣ ಸ್ಫೂರ್ತಿಗೆ ಜನಕ, ನಿನ್ನಯ ಗುಣ ಸ್ಫೂರ್ತಿ ಉಳ್ಳನಕ ಪಾಪದ ಲೇಶ ವಾರ್ತಿ ಎನಗೆ ಇಲ್ಲವೆಂದು ನಿಶ್ಚೈಸಿದೆ 5
--------------
ವ್ಯಾಸತತ್ವಜ್ಞದಾಸರು
ಮಹಾಲಕ್ಷ್ಮಿ ಇಂದಿರೆ ಮಂದಿರದೊಳು ನಿಂದಿರೆ ಪ. ನಿತ್ಯ ಎನ್ನ ಆಹಾಗಂಧ ತುಳಸಿ ಅರವಿಂದ ಮಲ್ಲಿಗೆ ಪುಷ್ಪದಿಂದ ಪೂಜಿಸುವೆನು ಕುಂದುಗಳೆಣಿಸದೆ ಅ.ಪ. ಘಲು ಘಲು ಗೆಜ್ಜೆಯ ನಾದದಿಂದಫಳಫಳಿಸುವ ದಿವ್ಯಪಾದದೊಳುಪಿಲ್ಯ ಕಾಲುಂಗುರನಾದ ಅಂಘ್ರಿಚಲಿಸುವ ದಿವ್ಯಸುಸ್ವಾದ ಆಹಾಕಾಲಂದಿಗೆ ಗೆಜ್ಜೆ ಝಳಪಿಸುತ್ತ ನ-ಮ್ಮಾಲಯದೊಳು ನಿಲ್ಲೆ ಪಾಲವಾರಿಧಿಕನ್ನೆ 1 ಸಿರಿ ಅರಳೆಲೆ ಕುಂಕುಮಹೆರಳಗೊ[ಂ]ಡೆಗಳಿಂದ ಹರಿಯ ಮೋದಿಸುವೆ 2 ಜಯ ಜಯ ವಿಜಯಸಂಪೂರ್ಣೆ ಭಕ್ತಭಯನಿವಾರಣೆ ಎಣೆಗಾಣೆ ಎನ್ನಕಾಯುವರನ್ಯರ ಕಾಣೆ ಶೇಷ-ಶಯನನ್ನ ತೋರೆ ಸುಶ್ರೇಣೆ ಆಹಾಕೈಯ ಪಿಡಿದು ಭವಭಯವ ಪರಿಹರಿಸೆ ಸಿರಿಹಯವದನನ ದಯವ ಪಾಲಿಸೆ ಲಕ್ಷ್ಮಿ 3
--------------
ವಾದಿರಾಜ
ಮಾಧವ ಪ ಕುಣಿಯುವೆ ಮುರಳಿ ಬಾರಿಸೊ ಮಾಧವಅ.ಪ ಭವದ ಸಂತಾಪವು ಕೊನೆಗಾಣಲಿ ಭುವಿಯೊಳು ಜೀವನ ಸವಿಯಾಗಲಿ ನವವಿಧ ಭಕುತಿಯು ಹರಿದಾಡಲಿ ಕಿವಿ ತುಂಬ ಕೇಳಿ ನಾ ನಲಿಯುವೆ ಶ್ರೀಕರ 1 ಅರಿಷಡ್ವರ್ಗಗಳೆಲ್ಲ ಮರೆಯಾಗಲಿ ಹರುಷ ಮಾನಸದಲಿ ಸೆರೆಯಾಗಲಿ ಮುರಳಿಯ ಧ್ವನಿಯು ತಾ ದೊರೆಯಾಗಲಿ ಪರಮ ವೈರಾಗ್ಯವೆ ಸಿರಿಯಾಗಲಿ ದೇವ 2 ಸಾಲೋಕ್ಯ ಸಾರೂಪ್ಯ ಸಾಯುಜ್ಯವು ಈ ಲೋಕದಲ್ಲೀಗ ಈ ಲಾಭವು ಶ್ರೀಲೋಲ ಗೋಪಾಲ ಬಾಲ ಪ್ರಸನ್ನನೆ ಮೇಲಾಯ್ತು ನರಜನ್ಮವಿರಲಿ ಎಂದೆಂದಿಗೂ 3
--------------
ವಿದ್ಯಾಪ್ರಸನ್ನತೀರ್ಥರು
ಮಾಧವ ಪ ಮಾಧವ ಅ.ಪ. ಪಾರುಗಾಣೆನಯ್ಯ ಸಂಸಾರ ಬಂಧನದಿಂದ ನಾನುಸಾರಾಸಾರಾ ವಿಚಾರವಿಲ್ಲವೊ ಗಡ ತೀರ ಅಲ್ಪನು ತಿಳಿ 1 ಜ್ಞಾನಹೀನನಾಗಿ ನಿನ್ನ ಧ್ಯಾನಮಾಡದಾದೆ ನಾನುಮಾನಾಪಮಾನಕ್ಕೆ ನೀ ಹೊಣೆಗಾರನು ದೀನಜನಪಾಲಕನೆ 2 ಆರು ಹಗೆಗಳೆನ್ನ ಮೈಯ್ಯ ಸೇರಿ ನಿನ್ನ ಭಜಿಸಗೊಡರುಬಾರೊ ನೀ ದಯವನು ತೋರೊ ಗದುಗಿನ ವೀರನಾರಾಯಣನೆ 3
--------------
ವೀರನಾರಾಯಣ
ಮಾನನಿಧಿ ಶ್ರೀಕೃಷ್ಣ ಮಧುರೆಗೈದುವನಂತೆಏನು ಪಥವಮ್ಮ ನಮಗೆ ಪ ಮಾನವೇನಿನ್ನಿದಕೆ ಮಾನಿನಿಯರೆಲ್ಲರುಆಣೆಯನು ಕಟ್ಟಿವನಿಗಡ್ಡ ನಿಲ್ಲುವ ಬನ್ನಿ ಅ.ಪ. ಕಳ್ಳತನವೇ ನಮ್ಮ ವಲ್ಲಭರು ಈ ಸುಳುವುಎಲ್ಲವನು ಬಲ್ಲರಮ್ಮಒಲ್ಲದಲೆ ನಮ್ಮ ಬಿಟ್ಟರೆ ಒಳಿತು ವನಜಾಕ್ಷಎಲ್ಲಿಗೈದಿದರೆ ನಾವಲ್ಲಿಗೈದುವ ಬನ್ನಿ1 ಇಂದುದಯದಿ ಮೊದಲು ಇಂದೀವರಾಕ್ಷಿಯರುಗೋವಿಂದನ ಬಳಿಗೈದುವಒಂದು ಕಡೆಯಲಿ ಕುಳಿತು [ವನಜಾಕ್ಷಿಯೋರ್ವ ಕೈಯಂದಲಲ್ಲಿಗೆ ಕಳುಹಿ] ಕೇಳ್ವೆವೇನು ಪೇಳುವನೋ 2 ಹರಿಣಾಂಕವದನೆಯರು ನೆರೆದು ಬರುತಿರೆ ಕಂಡುಪರಮ ಹರುಷದಲಿ ಬಂದುಸರಿ ರಾತ್ರಿಯೊಳು ಹೀಗೆ ಬರುವುದೇನೆಂದೆನಲುಎರಗಿ ಬಿನ್ನೈಸಿದರು ಅಂಬುಜದಳಾಕ್ಷನಿಗೆ3 ಶ್ಲೋಕ ಹಲವು ಕಾಲವು ನಿನ್ನ ಸ್ನೇಹ ಸುಖವ ಹಾರೈಸಿಕೊಂಡಿರುತಿಹಲಲನಾವ್ಯೂಹವ ಬಿಟ್ಟು ಅಕ್ರೂರನೊಡನೆ ನೀ ಮಧುರೆಗೆ ಪೋದರೆಕಳೆಯಲಾಪವೇ ಕಾಂತ ಕೇಳು ದಿನವ ಈ ಕಂತುವಿನ ಬಾಧೆಗೆಘಳಿಗೊಂದು ಯುಗವಾಗಿ ತೋರುತಿÀಹುದೋ ಜಲಜಾಕ್ಷ ನೀನಿಲ್ಲದೆ ಪದ ಮಾಧವ ಕೃಪಾಕರನೆ4 ಶ್ಲೋಕ ಬಾಲಭಾವದಲಿಂದಲಂಗಸುಖವ ಬಹುಬಗೆಯಲಿಂದುಳುಹಿದೆಲೋಲಲೋಚನೆ ನಿಮ್ಮ ಬಿಟ್ಟು ಪುರದ ನಾರೇರಿಗಾನೊಲಿದರೆನೀಲಕಂಠನು ಮೆಚ್ಚ ನೋಡು ನಿಜವ ನಿಮಗ್ಯಾತಕೀ ಸಂಶಯಕಾಲಕ್ಷೇಪವನಲ್ಲಿ ಮಾಡೆ ಕಿಂಚಿತ್ಕಾಲದೊಳಾನೈದುವೆ ಪದ ಪಾಲಿಸಿರೆನಗಪ್ಪಣೆಯ ಪಾಟಲ ಸುಗಂಧಿಯರೆಕಾಲಹರಣವ ಮಾಡದೆನಾಳೆ ಉದಯಕೆ ಪೋಗಿ ನಾಲ್ಕೆಂಟು ದಿನದೊಳುವ್ಯಾಳೆಗಿಲ್ಲಿಗೆ ಬರುವೆ ಕಾಳಾಹಿವೇಣಿಯರೆ 5 ಶ್ಲೋಕ ಮಾರನಯ್ಯನೆ ಕೇಳು ಅಲ್ಲಿರುತಿಹ ನಾರೇರು ಬಲು ನಿಪುಣರೋನೀರಜಾಂಬಕ ನೋಡು ನಿನ್ನ ಮನವ ನಿಮಿಷಾರ್ಧದೊಳುಸೆಳೆವರೋಮಾರಕೇಳಿಯ ಶಾಸ್ತ್ರಮರ್ಮವರಿದ ಆ ನಾರೇರು ನೆರೆಯಲುಗಾರು ಪಳ್ಳಿಯಲಿಪ್ಪ ಗೋಪಿಯರ ವಿಚಾರಂಗಳ ಸ್ಮರಿಪೆಯಾ ಪದ ಬಿಲ್ಲ ಹಬ್ಬವೆ ಸುಳ್ಳು ಬಿಸುರುಹಾಕ್ಷಿಯರಿಕ್ಷುಬಿಲ್ಲಿನುತ್ಸವಕೆ ನಿನ್ನಖುಲ್ಲ ಅಕ್ರೂರನನು ಕಳುಹಿ ಕರೆಸಿದರಲ್ಲಿವಲ್ಲಭೆಯರನ್ನು ನೆರೆವೆ ನಮ್ಮೆಲ್ಲರನು ಮರೆವೆ 6 ಶ್ಲೋಕ ನಾರೀಹಾರ ಕಿರೀಟ ಕುಂಡಲಯುಗ ಕೇಯೂರವಲಯಾದಿಗಳುಚಾರು ವಸ್ತ್ರ ಸುಗಂಧ ಪುಷ್ಪನಿಚಯ ಹಾರಂಗಳಂ ಧರಿಸದೆಮಾರ ಕೇಳಿಯ ಮಾತಿಲಿಂದಲವರ ಮನಸೆಮ್ಮೊಳೊಂದಾಗದೆನಾರೇರೊಲುಮೆಯುಂಟೆ ಲೋಕದೊಳಗೆ ನನ್ನ್ಯಾತಕೆ ದೂರ್ವಿರೇ ಪದ ಮಲ್ಲಯುದ್ಧವ ನೋಡಬೇಕೆನುತ ನಮ್ಮಾವಅಲ್ಲಿಗೆ ಕರೆಸಲದಕೆಇಲ್ಲದಪವಾದ ಈ ಸುಳ್ಳು ಸುದ್ದಿಗಳ ನೀ -ವೆಲ್ಲ ಸೃಜಿಸಿದಿರಿ ಸರಿಯಲ್ಲ ನಿಮಗಿಳೆಯೊಳಗೆ 7 ಶ್ಲೋಕ ವಾರಿಜಾಂಬಕ ವಾರಿಜಾರಿವದನ ವಾರಾಶಿಜಾವಲ್ಲಭವಾರಿವಾಹನಿಭಾಂಗ ವಾಸವನುತ ವಾಕೆಮ್ಮದೊಂದಾಲಿಸೋವಾರಿಜೋದ್ಭವನಯ್ಯ ನಿನ್ನ ವಿರಹ ವಾರಾಶಿಯೊಳು ಮುಳುಗಿಹನಾರೀನಿಚಯವ ಪಾರುಗಾಣಿಸು ಕೃಪಾನಾವೆಯಲಿಂದೆಮ್ಮನು ಪದ ಮಾರನೆಂಬುವನು ಬಲು ಕ್ರೂರ ನಮ್ಮಗಲಿ ನೀ ಊರಿಗ್ಹೋದುದನು ಕೇಳಿವಾರಿಜಾಸ್ತ್ರವನು ಎದೆಗೇರಿಸೆಮ್ಮನು ಬಿಡದೆಹೋರುವನು ಅಹÉೂೀ ರಾತ್ರಿಯಲಿ ತಪಿಸುತ 8 ಶ್ಲೋಕ ನೀಲಕುಂತಳೆ ಕೇಳು ನಿಮ್ಮ ಮನೆಯೊಳಾ ನೆಲುವಿನ ಮ್ಯಾಲಿನಪಾಲು ಬೆಣ್ಣೆಯ ಕದ್ದು ಮೆದ್ದು ಬಹಳ ಕಾಲಂಗಳಂ ಕಳೆದೆನೆಬಾಲೆ ಮನ್ಮಥಬಾಣದೆಚ್ಚು ತಪಿಸೆ ಬಹು ಬಗೆಯಲಿಂದುಳುಹಿದಲೋಲಲೋಚನೆ ನಿಮ್ಮೊಳಾನು ಬಹಳ ಜಾರತ್ವಮಂ ಮಾಳ್ಪೆನೇ ಪದ ಬಟ್ಟಗಂಗಳೆ ನಿಮ್ಮ ಬಿಟ್ಟು ಘಳಿಗಿರಲಾರೆದುಷ್ಟ ಕಂಸನು ಕರೆಸಲುಅಟ್ಟಿದರೆ ಪೋಗದಿರೆ ಸಿಟ್ಟಿನಿಂದಲಿ ವ್ರಜಕೆಅಟ್ಟುಳಿಯ ಮಾಡುವನು ಅಂಬುಜಸುಗಂಧಿಯರೆ 9 ಶ್ಲೋಕ ಪತಿ ಸುತ ಪಿತೃ ಮುಖ್ಯ ಭ್ರಾತೃ ಬಾಂಧವರು ಎಂಬಅತಿಶಯ ನಮಗಿಲ್ಲ ಆಲಿಸೋ ಮಾತನೆಲ್ಲರತಿಪತಿಪಿತ ನೀನೇ ರಾತ್ರಿಯೊಳು ಕೊಳಲನೂದೆಕ್ಷಿತಿಪತಿ ನಿನ್ನೆಡೆಗೆ ಕ್ಷಿಪ್ರದಿಂ ಬಂದೆವಲ್ಲೊ ಪದ ಬಾಲತನದಲಿ ಯಮುನಾ ತೀರದಲಿ ನೀ ವತ್ಸ-ಪಾಲನೆಯ ಮಾಡುತಿರಲು ಆಕಾಲ ಮೊದಲಾಗಿ ಈ ವ್ಯಾಳೆ ಪರಿಯಂತರವುಕಾಲುಘಳಿಗಗಲದಿಹ ಕಾಂತೆಯರ ತ್ಯಜಿಸುವರೆ10 ಶ್ಲೋಕ ಪರಿಪರಿಯಲಿ ನಿಮ್ಮ ಪಾಲಿಸಿ ನೋಡೆ ಮುನ್ನಕರುಣಕೆ ಕೊರತಿಲ್ಲ ಕಾಂತೆ ಕೇಳೆನ್ನ ಸೊಲ್ಲತ್ವರಿತದಿ ಬಾರದಲೆ ತಡೆದು ನಾ ನಿಂತರಲ್ಲೆಸರಸಿಜಭವ ಮಾರರಾಣೆ ಕಾಣೆ ಪ್ರವೀಣೆ ಪದ ಕ್ಲುಪ್ತ ಕಾಲಕೆ ಬಂದುನೆರೆಯದಿದ್ದರೆ ನಾನು ಪರಮ ಪುರುಷೋತ್ತಮನೆ11 ಶ್ಲೋಕ ಮಾರನೆಂಬುವನಂದೆ ಮಡಿದನು ಶಿವನ ಮೂರನೆ ಕಣ್ಣಿಲಿನಾರೇರಿಲ್ಲದೆ ನಾಭಿಯಿಂದ ಪಡೆದ ಆ ಬ್ರಹ್ಮನೆಂಬಾತನ ನಾರಿ ಈರ್ವ ಕುಮಾರರಾಣೆ ಹರಿಯು ತಾನಿಟ್ಟನೇನೆಂಬೆವೆಮಾರಿ ಹೊರಗಿನ ಹೊರಗೆ ಹೊಯಿತೆಂಬೊ ತೀರಾಯಿತೆ ಭಾವುಕಿ ಪದ ಹಲವು ಮಾತುಗಳ್ಯಾಕೆ ಜಲಜಾಕ್ಷ ನಿನ್ನ ಪದನಳಿನಗಳ ನೆರೆ ನಂಬಿಹಒಲುಮೆಯಲ್ಲಿರುತಿಪ್ಪ ಲಲನೆಯರನೆಲ್ಲರನುಸಲಹೊ ಸಲಹದೆ ಮಾಣು ರಂಗವಿಠಲರೇಯ12
--------------
ಶ್ರೀಪಾದರಾಜರು
ಮಾನವ ಗುರುಚರಣ ಸರೋಜವ ಪ ಶೇರಿದ ಶರಣರ ಘೋರ ಪಾತಕವೆಂಬೊ ವಾರಿದ ಗಣಕೆ ಸಮೀರ ಜಗನ್ನಾಥ ಸೂರಿವರ್ಯ ದಾಸಾರ್ಯರಂಘ್ರಿಯನುಅ.ಪ ತಾರತಮ್ಯವ ತಿಳಿಯದೀ ಕಲಿಯುಗದಿ ಮುಕ್ತಿ ದಾರಿಗಾಣದೆ ಭವದಿ ಬಿದ್ದ ಸಜ್ಜನೋ- ದ್ದಾರ ಮಾಡಲು ದಯದಿ ಬ್ಯಾಗವಾಟದಿ ನಾರ ಸಿಂಹಾಖ್ಯ ವಿಪ್ರಾಗಾರದೊಳುದ್ಭವಿಸಿ ಚಾರು ಸಾರವಧರೆಯೊಳು ಬೀರಿದಂಥವರ 1 ಮೇದಿನಿಯೊಳು ಚರಿಸಿ ವ್ಯಾಕ್ಯಾರ್ಥದಿ ಬಹುದು- ರ್ವಾದಿಗಳನೆ ಜಯಿಸಿ ಎನಿಸಿದರು ಪೂರ್ಣ ಭೋಧ ಮತಾಬ್ಧಿಗೆ ಶಶಿ ನೃಪಮಾನ್ಯರೆನಿಸಿ ಶ್ರೀದ ಪ್ರಹ್ಲಾದಾನುಜ ಸಲ್ಹಾದರೆ ಇವರೆಂದು ಪಾದ ಪಂಕಜಾ ರಾಧಕರಿಗೆಸುರ ಪಾದಪರೆನಿಪರ 2 ಕ್ಷೋಣಿ ವಿಬುಧ ಗಣದಿ ಸೇವೆಯಕೊಳುತ ಮಾನವಿಯೆಂಬೊ ಕ್ಷೇತ್ರದಿ ಮಂದಿರ ಮಧ್ಯ ಸ್ಥಾಣುವಿನೊಳು ಮುದದಿ ಕಾರ್ಪರವೆಂಬೊ ಕಾನನದಲಿ ಕೃಷ್ಣಾವೇಣಿ ಕೂಲದಿ ಮೆರೆವ ಶ್ರೀನಿಧಿ ನರ ಪಂಚಾನನಂಘ್ರಿಯುಗ ಧ್ಯಾನದಿ ಕುಳಿತ ಮಹಾನುಭಾವರನು 3
--------------
ಕಾರ್ಪರ ನರಹರಿದಾಸರು
ಮಾನವ ನಿರುತ ಶ್ರೀ ಸುಶೀಲೇಂದ್ರ ತೀರ್ಥಾರ ವರಹಜ ತಟವಾಸ ರಾಯರ ಕರುಣ ಪಾತ್ರರ ಪ ಭಾನುಜ ಸಮಾನ ದಾನಿ ದೀನ ಪಾಲರÀ | ಮಾನಿತ ಸನ್ಮೌನಿ ವರಿಯ ಜ್ಞಾನ ಶೀಲರ 1 ಪ್ರಾಣಪತಿಯ ಮತಾಬ್ಧಿಗೆ ಪಠೀಣರೆನಿಪರ ಕ್ಞೋಣಿ ತಳದಿ ಇವರಿಗೆ ಸರಿಗಾಣೆ ಜಾಣರ 2 ಶಾಮಸುಂದರವಿಠಲನ ನಿಸ್ಸೀಮ ಭಕುತರ ಸ್ವಾಮಿ ಸುವೃತೀಂದ್ರ ಕೋಮಲ ಕರಸಂಜಾತರ 3
--------------
ಶಾಮಸುಂದರ ವಿಠಲ
ಮಾನವ ಸಿಂಗನಾದನು ಪ ರಂಗಮಾನವ ಸಿಂಗನಾಗಲು ಭಂಗಾರ ಗಿರಿಯ ಶೃಂಗಗಳಲ್ಲಾಡೆ ಹಿಂಗದೆ ಎಂಟು ಮಾತಂಗ ಸಪುತ ದ್ವೀ- ಪಂಗಳು ಕಂಪಿಸೆ ವಿಗಡದಿ ಅ.ಪ. ವನಜ ಭವನಂದನರಾನಂದದಿ ವನಧಿಯೊಳಿದ್ದ ವನಜನಾಭನ ವನಜಾಂಘ್ರಿ ದರುಶನಕ್ಕೋಸುಗದಿ ಘನ ವೈಕುಂಠ ಪಟ್ಟಣ ಸಾರೆ ವಿನಯರಲ್ಲದ ಜಯನು ವಿಜಯನವ- ರನು ತಡೆಯಲು ಮುನಿದೀರ್ವರಿಗೆ ದನುಜಾಂಗದಿಂದ ಜನಿಸಿರೋ ಎಂದು ಮುನಿಗಳು ಶಾಪವನ್ನು ಈಯೆ 1 ದಿಕ್ಕು ಎಂಟರೊಳು ಕಕ್ಕಸರೆನಿಸಿ ದಿಕ್ಕು ಪಾಲಕರ ಲೆಕ್ಕಿಸದಲೇವೆ ಸೊಕ್ಕಿ ತಿರುಗುವ ರಕ್ಕಸರಾಗಲು ಮುಕ್ಕಣ್ಣ ಬಲದಿಂದಕ್ಕೆ ಜದಿ ನಕ್ಕು ಪರಿಹಾಸ್ಯಕಿಕ್ಕಿ ಸರ್ವರನು ಮುಕ್ಕಿ ಮುಣಿಗಿ ಧರ್ಮಕೆ ವಿರೋಧಿಸಿ ಸಿಕ್ಕದಂತಲ್ಲಲ್ಲಿ ತುಕ್ಕುತಿರೆ 2 ಇತ್ತ ಶಾಪದಿಂದಲಿತ್ತಲೀರ್ವರಿಗಾ ಪೊತ್ತ ಸುರಾಂಗದಲಿತ್ತಲೋರ್ವವನಿಯು ಕಿತ್ತು ಒಯ್ಯಲು ಬೆಂಬುತ್ತಿ ಹರಿಯು ಕೊಲ್ಲೆ ಇತ್ತ ಹಿರಣ್ಯನುನ್ಮತ್ತದಿಂದ ಸುತ್ತುತಿರುವಾಗ ಪುತ್ರನು ಭಾಗವ ತ್ತೋತ್ತಮನಾಗಿ ಸರ್ವೋತ್ತಮ ಬ್ರಹ್ಮನ ಕರವ ಲೋ- ಕತ್ರಯವರಿವಂತೆ ಬಿತ್ತಿದನು3 ಸೊಲ್ಲು ಕೇಳುತಲಿ ಎಲ್ಲೆಲೊ ನಿನ್ನ ದೈ- ವೆಲ್ಲೊ ಮತ್ತಾವಲ್ಲೆಲ್ಲಿಹನೆನುತಲಿ ನಿಲ್ಲದರ್ಭಕನ್ನ ಕಲ್ಲು ಕೊಳ್ಳಿ ಮುಳ್ಳು ಕರವಾಳ ಬಿಲ್ಲು ನಾನಾ ಎಲ್ಲ ಬಾಧೆಯನ್ನು ನಿಲ್ಲದೆ ಬಡಿಸೆ ಎಳ್ಳನಿತಂಜದೆ ಎಲ್ಲೆಲ್ಲಿಪ್ಪನೆಂದು ಸೊಲ್ಲನು ಬೇಗದಿ ಸಲ್ಲಿಸೆನೆ 4 ಏನು ಕರುಣಾಳೊ ಏನು ದಯಾಬ್ಧಿಯೊ ಏನು ಭಕ್ತರಾಧೀನನೊ ಏನೇನು ನಾನಾ ಮಹಿಮನೊ ಏನೇನೊ ಏನೊ-ಈ- ತನ ಲೀಲೆ ಕಡೆಗಾಣರಾರೊ ದಾನವಾಭಾಸನ ಮಾನಹಾನಿ ಗೈಯೆ ಸ್ಥಾಣು ಮೊದಲಾದ ಸ್ಥಾನದಲ್ಲಿ ಸರ್ವ ದೀನರಿಗೆ ದತ್ತ ಪ್ರಾಣನಾಗ 5 ತುಟಿಯು ನಡುಗೆ ಕಟ ಕಟ ಪಲ್ಲು ಕಟನೆ ಕಡಿದು ನೇಟನೆ ಚಾಚುತ ಪುಟಪುಟ ನಾಸಪುಟದ ರಭಸ ಕಠಿನ ಹೂಂಕಾರ ಘಟುಕಾರ ನಿಟಿಲನಯನ ಸ್ಫುಟಿತ ಕಿಗ್ಗಿಡಿ ಮಿಟಿಯೆ ಹುಬ್ಬಿನ ನಿಟಿಲ ರೋಷದಿ ಮಿಟಿಯೆ ಚಂಚು ಪುಟದಂತೆ ರೋಮ ಚಟುಲ ವಿಕ್ರಮುದ್ಧಟ ದೈವ 6 ನಡುಕಂಭದಿಂದ ಒಡೆದು ಮೂಡಿದ ಕಡು ದೈವವು ಸಂಗಡಲೆ ಚೀರಲು ಬಡ ಜೀವಿಗಳು ನಡುಗಿ ಭಯವ ಪಡುತಲಿ ಬಾಯ ಬಿಡುತಿರೆ ಕಡೆಯೆಲ್ಲೊ ಹೆಸರಿಡಬಲ್ಲವರಾರೊ ತುಡುಗಿ ದುಷ್ಟನ ಪಡೆದ ವರವ ಪಿಡಿದು ಅವನ ಕೆಡಿಸಿ ಹೊಸ್ತಿಲೊ- ಳಡಗೆಡಹಿದನು ಪವಾಡದಲಿ 7 ವೈರಿಯ ಪಿಡಿದು ಊರುಗಳಲ್ಲಿಟ್ಟು ಘೋರ ನಖದಿಂದ ಕೊರೆದು ಉದರವ ದಾರುಣ ಕರುಳಹಾರ ಕೊರಳಲ್ಲಿ ಚಾರುವಾಗಿರಲು ಮಾರಮಣ ಸಾರಿಗೆ ಭಕ್ತಗೆ ಕಾರುಣ್ಯಮಾಡಿ ಶ್ರೀ ನಾರೀಶನಾನಂದದಿ ತೋರುತಿರೆ ಸುರ- ವರರ್ನೆರೆದು ಅಪಾರ ತುತಿಸಿ ಪೂ- ಧಾರೆ ವರುಷ ವಿಸ್ತಾರೆರೆಯೆ 8 ನೃಕೇಸರಿಯಾಗೆ ಭಕುತಗೆ ಬಂದ ದುಃಖವ ಕಳೆದು ಸುಖವನೀವುತ್ತ ಅಕಳಂಕದೇವ ಲಕುಮಿಪತಿ ತಾ- ರಕ ಮಂತ್ರಾಧೀಶ ಸುಕುಮಾರ ಅಖಿಳ ಲೋಕಪಾಲಕ ಪ್ರಹ್ಲಾದಗೆ ಸಖನಾಗಿ ಇಪ್ಪ ಸಕಲ ಕಾಲದಿ ಭಂಜನ ವಿಜಯವಿಠ್ಠಲ ಮುಕುತಿ ಈವ ಭಜಕರಿಗೆ9
--------------
ವಿಜಯದಾಸ
ಮಾರಕೋಟಿ ರೂಪ ಮೈದೋರು ನೀಂ ಪ ಸೇರಿ ಸುಖಿಸಲೆಂದು ಕೋರಿ ಭಜಿಸುತಿಪರ ಪಾರಕಾಂಕ್ಷಿಯಾದೆನ್ನ ಪಾರಗಾಣಿಸೆ ಅ.ಪ ಮುನ್ನ ಭಕ್ತಬಾಲ ಧ್ರುವನು ಕಷ್ಟದೊಳಗೆ ಯನ್ನ ಕಾಯೊಯೆಂದು ಬಿನ್ನಹಂಗೈಯಲ್ ಚನ್ನರೂಪತೋರಿದೆನ್ನತಾತ ನೀ ನಿನ್ನೂ ಏಕೆ ಬಾರದಿರ್ಪೆ ಜಾಜಿಶ್ರೀಶಾ 1
--------------
ಶಾಮಶರ್ಮರು
ಮಾರಜನಕನ ಮಾರಿ ನೋಡುತಸುಖವ ಸೂರೆಗೊಂಡರೆನೀರೆ ದ್ವಾರಕಾಪುರದವರು ಪ. ದಟ್ಟಾದ ಬೀದಿಯಲಿ ಪಟ್ಟಾವಳಿಯ ಜವಳಿ ಇಟ್ಟು ಮಾರುವರು ಕಡೆಯಿಲ್ಲಇಟ್ಟು ಮಾರುವರು ಕಡೆಯಿಲ್ಲದ್ವಾರಕಾಶೆಟ್ಟರ ಭಾಗ್ಯ ಸರಿಗಾಣಿ1 ಅಚ್ಚ ಜರತಾರಿ ಹೆಚ್ಚಿನ ಜವಳಿಯಚಿತ್ರದ ಮಲ್ಲಿಗೆ ನಡುವಿಟ್ಟಚಿತ್ರದ ಮಲ್ಲಿಗೆ ನಡುವಿಟ್ಟು ಅಲ್ಲಲ್ಲಿಹಚ್ಚಿ ಮಾರುವವರು ಕಡೆಯಿಲ್ಲ 2 ಜವಳಿ ಅಂಗಡಿ ಮುಂದೆ ಹವಳಗಾರರು ಅಲ್ಲಿ ಕೊಳ್ಳುವ ನಾರಿಯರು ಕಡೆಯಿಲ್ಲ ಕೊಳ್ಳುವ ನಾರಿಯರು ಕಡೆಯಿಲ್ಲ ದ್ವಾರಕಾಕಳೆಯ ವರ್ಣಿಸಲು ವಶವಲ್ಲ 3 ಕಂಚು ಹಿತ್ತಾಳೆ ಮಾರುವ ಕಂಚುಗಾರರಂಗಡಿಸಂಚಿತವಾದ ನವಧಾನ್ಯಸಂಚಿತವಾದ ನವಧಾನ್ಯ ಅಲ್ಲಲ್ಲಿಹಚ್ಚಿಮಾರುವವರು ಕಡೆಯಿಲ್ಲ4 ರಂಗ ರಾಮೇಶನ ನಗರೀಲೆ ಬಂಗಾರ ಬೆಳ್ಳಿ ಬೆಲೆ ಮಾಡಿಬಂಗಾರ ಬೆಳ್ಳಿ ಬೆಲೆ ಮಾಡಿ ಮಾರುವ ರಂಗದುಟಿಯವರುಕಡೆಯಿಲ್ಲ 5
--------------
ಗಲಗಲಿಅವ್ವನವರು
ಮುದದಿ ನಕ್ರನ ಕೊಂದು ಸಲಹಿದ ಸದುಭಕುತರ ಬಂಧು 1 ನಾರಿಯು ತನ್ನ ಕರೆದಾ ಮಾತ್ರದಿ ಸೀರೆಯ ಮಳೆಗರೆದಾ ಕ್ರೂರ ಖಳರ ಮುರಿದಾ ಪಾಂಡವ- ರಾರಣ್ಯದಿ ಪೊರೆದಾ ನಾರಗೆ ಅಜಮಿಳ ನಾರಾಯಣನೆನೆ ಪಾರುಗಾಣಿಸಿದಪಾರಗುಣನಿಧಿಯಾ 2 ಒಂದು ಬಾರಿಗೆ ಶ್ರೀಶನ ನೆನೆದರೆ ದುರಿತ ನಾಶಾ ಬೆಂದದ್ದು ಬಹುಪಾಶಾ ಅವಗಿ- ನ್ನೆಂದಿಗಿಲ್ಲವೊ ಕ್ಲೇಶಾ ತಂದೆ ಕದರಂಡಲಗಿ ಹನುಮಯ್ಯನೊಡೆಯ ಗೋ- ವಿಂದನ ನೆನೆದವರೆಂದಿಗು ಧನ್ಯರು 3
--------------
ಕದರುಂಡಲಗಿ ಹನುಮಯ್ಯ
ಮುಂದೆ ಗಾಣದೆ ದಾರಿ ಮುದಿಗೆ ಬಿದ್ದು | ಹಿಂದು ನೋಡದೆಬಂದದ್ದು ಬರಲೆಂದು ತಾಳದೊ ಕಂದಗಳ ಪ್ಯಾಡುತಲಿದಿನ ಸುಖವೆಂದೆಂದಿಗೂ ಬೇಕೆಂದು ಬೆಂದ ಭವದಂದದಿಗೆ ನಾ ಕುಂದದೆ ನೊಂದೆ ನಿನಗೆ ವಂದಿಸದೆ 1 ದೇವ ಕಾಯಯ್ಯ ಆವ ದೈವಕ ಬಾಹದೆ | ದಯಾಭಾವಿಸಲ್ಯಾಕ ಭಾವಜಾನಯ್ಯ | ಕಾಮನ ಕಾಟಿಗೆ ಕಂಗೆಡಿಸುವದುರ್ಭಾವಗಳನು ಪರಿಹರಿಸೈ | ಹಾವಿನ ಹಗಿಹಗಳಲಿವಿಹರಿಸುತಿಹ ಜೀವದ ಜೀವನದೊಡೆಯ 2 ಕರ ವಿಡಿದಿಂದುದ್ಫಸದಿಹದು ಬಾಹಳರದು 3
--------------
ರುಕ್ಮಾಂಗದರು
ಮೂರ್ಖರ ವಡಂಬಡಿಸಲಾಗವದೆಂದೆಂದು ಪ ಮಳಲ ತಂದಿಕ್ಕಿ ಗಾಣದೊಳಗ ಸಾಯಸದಿಂದ | ಬಲಿದು ಎಣ್ಣೆಯ ತೆಗೆಯಲಿಬಹುದು 1 ಗಿರಿಗಳಂದದಿ ಬಹಥೆರೆಗಳ ಕಡಿಯುತ | ಶರಧಿಯದಾಟಿ ಹೋಗಲು ಬಹುದು 2 ಇಳೆಯೊಳು ತಿರುಗುತ ದೇಶ ದೇಶಗಳನು | ಮೊಲದಾ ಕೋಡವ ದೊರಕಿಸಬಹುದು 3 ತೋರುವ ಮೃಗಜಲ ಹಿಡಿದು ಪ್ರಾಶನ ಮಾಡಿ | ನೀರಡಕಿ ಶಾಂತ ಮಾಡಿಲಿಬಹುದು 4 ಮೊಸಳಿದಾಡಿಯೊಳಿಹ ಅಮೌಲಿಕ ರತ್ನ ತನ್ನ | ವಶವನೆ ಮಾಡಿಕೊಳ್ಳಲಿಬಹುದು 5 ಪರಿ | ಶಿರಸದಿ ಬೇಗ ಧರಿಸಲಿಬಹುದು 6 ಗುರುಮಹಿಪತಿಸುತ ಪ್ರಭು ಗುರುತಿಲ್ಲವರಾ | ನೆರಳಿಗೆ ದೂರ ಕೈ ಮುಗಿವನು 7
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಮೂರ್ತಿ ನೀ ಕರುಣಿಸೊ ಪ್ರಭುವೇ ಪ ಎಲ್ಲೆಲ್ಲಿ ನೋಡಲಲ್ಲಿಲ್ಲಿ ನಿಮ್ಮಯ ಕೀರ್ತಿಯನು ಮೊರೆಹೊಕ್ಕ ಸುಜನರ ಪೊರೆವರೆಂಬ ಬಿರುದು ಕೇಳಿ ತ್ವರಿತದಿಂದಲಿ ಬಂದೆನೋ ಭರದೀ ಹಾರೈಸು ಕರುಣಾ ಶರಧೀ 1 ಇಷ್ಟಾರ್ಥಗಳನಿತ್ತು ಸಲಹಿದೆ ತುಪ್ಪರಾಗುತಲವರ ಕಷ್ಟಗಳನೇ ಕಳೆದೆ ಉದ್ಧರಿಸಿದೆ ಅಷ್ಟ ಸೌಭಾಗ್ಯವ ಕೊಟ್ಟು ರಕ್ಷಿಸಿದೇ - ಕೈಬಿಡದೇ 2 ಅಡಿಗಳಿಗೆರಗುತಲಿ ನುಡಿ ನುಡಿಗೆ ತುತಿಸಲಿ ಬಿಡದೆ ನಿನ್ನನು ಕೊಂಡಾಡುತಲಿ ತಡಮಾಡದೆ ಯಡರುಗಳ ಪರಿಹರಿಸಿದೆ ನಿಮ್ಮ ಮಹಿಮೆಗೆ ಸರಿಗಾಣೆ ಭೂಮಂಡಲದೊಳಗೇ ಪ್ರಭವೇ 3
--------------
ರಾಧಾಬಾಯಿ