ಒಟ್ಟು 5079 ಕಡೆಗಳಲ್ಲಿ , 129 ದಾಸರು , 3553 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶರಣು ಪೊಕ್ಕೆ ಮೊರೆಯ ಕೇಳೊಪರಮxmಟ veಡಿsioಟಿ='1.0' eಟಿಛಿoಜiಟಿg='%SಔUP-ಇಓಅಔಆIಓಉ%'ಕರುಣನಿಲಯ ನಿನ್ನಚರಣಕಮಲಯುಗಕೆ ನಮಿಪೆ ಕರುಣಿಸೆನ್ನನುಪವಾದಿರಾಜ ಗುರುವೆ ನಿನ್ನ ಪಾದಯುಗಳದಲ್ಲಿನಿತ್ಯಆದರಾತಿಶಯವನಿತ್ತುಮೋದಬಿಡಿಸಯ್ಯಾಖೇದಕೊಡುವ ಮಹತ್ತಾದ ಭಾಧೆ ಬಿಡಿಸಯ್ಯಾ1ದೇವಸ್ತೋಮವಂದ್ಯ ನಿನ್ನ ಸೇವೆಗಾಗಿ ಬಂದ ಎನ್ನಭಾವತಿಳಿದು ಶೀಘ್ರ ಫಲವ ಭಾವಿಸುವುದು ಕೋವಿದಾಢ್ಯಭಾವದಿಂದ ಭಜಿಪೆನಯ್ಯ ಭಾವಿಧಾತನೇ 2ದೂತನೆನಿಸೆ ಖ್ಯಾತನಾಗಿ ಮಾತೆ ಜನಕರಂತೆನಿತ್ಯದೂತ ನಾನು ನಿನಗೆ ಎನ್ನ ಮಾತು ಲಾಲಿಸೋ 3
--------------
ಗುರುಜಗನ್ನಾಥದಾಸರು
ಶರಣು ಭಾರತೀ ತಾಯೆ |ಕರವಬಿಡದಲೆ ಕಾಯೆ ||ಮರುತದೇವನ ರಮಣಿ | ಸುರ ನದಿಯ ಭಗಿನಿ ಪಪ್ರದ್ಯುಮ್ನ ದೇವಸುತೆ | ರುದ್ರಾದಿ ಸುರ ವಿನುತೆ ||ಭದ್ರ ವಿಗ್ರಹೆ ದಯಾ ಸ | ಮುದ್ರೆ ಕುಲಿಶೆ ||ಅದ್ರಿಯೋಪಮ ದೋಷ | ಕಿದ್ದ ದುರ್ಮತಿಕ್ಲೇಶ||ವೊದ್ದು ನಿನ್ನವನೆನ್ನು | ಬುದ್ಧಿ ಕೊಡು ಇನ್ನೂ 1ನೀರಜಾಂಬಕೆ ಯನಗೆ | ತೋರು ಸಾಧನ ಕುನಗೆ |ಜಾರಿಸು ಭಕುತಿಯನ್ನು | ತೋರು ಕರುಣಾ ||ವಾರಿಧಿಹರಿಯಪಾದ| ಆರಾಧಿಸಲುಮೋದ|ವಾರವಾರಕೆ ಈಯೇ |ವಾರಣಗಮನೆಯೇ 2ಪ್ರಾಣೇಶ ವಿಠಲನ | ಧ್ಯಾನದೊಳಗಿರಿಸು ಮನ |ವಾಣೀ ಪದವೈದುವಳೇ |ಮಾನನಿನ್ನದೆಲೆ ||ಹೀನ ವಿಷಯಗಳೊಲ್ಲೆ | ನೀನೇ ಸ್ವಾಂತದಿ ನಿಲ್ಲೆ |ಕ್ಷೋಣಿಯೊಳಗತಿ ಮಾನೀ | ಜ್ಞಾನೀ ಅಹಿವೇಣೀ 3
--------------
ಪ್ರಾಣೇಶದಾಸರು
ಶರಣು ಮಂಜುನಾಥಾ | ಪಾಲಿಸು || ಶರಣ ಜನರ ಪ್ರೀತಾ ||ಮರೆಯದೆ ನಿನ್ನಯ ಚರಣವ ನಂಬಿದ |ತರಳನ ಮೇಲ್ ದಯವಿರಿಸೈ ಜಯ ಜಯ 1ಧರ್ಮಾಧರ್ಮವನೂ ಶೋಧಿಪ | ಧರ್ಮದೇವ ನೀನು ||ಧರ್ಮ ಸುಕರ್ಮದ ಮರ್ಮವನರಿಯುತಾ ||ಧರ್ಮಸ್ಥಳದಲಿ ನೆಲಸಿದೆ ಜಯ ಜಯ 2ಕಪ್ಪಕಾಣಿಕೆಗಳನೂ | ದಿನ ದಿನ ತಪ್ಪದೆ ತರಿಸುವನೂ ||ಸರ್ಪಧರನೆ ನಿನ್ನಪ್ಪಣೆಯಿಂದ | ಣ್ಣಪ್ಪನು ನರರನು -ಒಪ್ಪಿಸಿ ಜಯ ಜಯ 3ದುಷ್ಟ ಜನರು ಬರಿದೇ | ಕೊಡುತಿಹ | ಕಷ್ಟವ ನಿನಗೊರೆದೇ |ಸೃಷ್ಟಿಪಾಲ ಯನ್ನ ರಕ್ಷಿಸಬೇಹುದು |ಕೆಟ್ಟೆನಯ್ಯಾ ನಿಟಿಲಾಕ್ಷನೆ ಜಯ ಜಯ 4ಚಂದ್ರಧರನೆ ಕಾಯೋ | ಕರುಣಾ-||ನಂದ ವರವನೀಯೋಮಂದರಧರಗೋ|ವಿಂದದಾಸನನಿಂದು |ಚಂದದಿ ಪಾಲಿಸು |ವಂದಿಪೆ ಜಯ ಜಯ 5
--------------
ಗೋವಿಂದದಾಸ
ಶರಣು ಶರಣು ಜಯ ಮುನಿರಾಯ ಸ್ವಾಮಿಶರಣಾಗತ ತಾತ್ವಿಕ ಪ್ರಿಯ ಪ.ಶ್ರೀ ಮಧ್ವಗುರು ದಯವನು ಪಡೆದು ಅದೇ ಮಹಿಮನ ಮನೆಯೊಳು ಬಂದುನೇಮದಿ ತುರ್ಯಾಶ್ರಮ ಬಲಿದೆ ಈಭೂಮಿಗಿಂದ್ರನಪರಿ1ಅಶ್ರುತ ಪ್ರಭೆ ಬುಧರೊಳು ಬೀರಿ ನಾನಾ ಶ್ರುತಿಯರ್ಥ ಪ್ರಕಟದೋರಿಶಾಶ್ವತಕ್ಷಾದಿ ತ್ರಿಪ್ರಮಾಣವ ನಿಜಾಶ್ರಿತರಿಗೆ ಪೇಳಿದೆ ಅನುವ 2ವೇದಾಂಬುಧಿಯೊಳು ಸುಧೆದೆಗೆದೆ ರಾಮಪಾದಕರ್ಪಿಸಿ ಬುಧಜನಕೆರೆದೆಕೈದುಗಳಂತೆ ಪ್ರಮೇಯಾರ್ಥವಿಡಿದೆ ಜಯನಾದದಿಂ ದುರ್ವಾದಿಗಳನ್ಯೆಚ್ಚಿದೆ 3ಮರುತಮತದ ವಿಬುಧರ ನೆರಹಿಸಿಮೂರೇಳರಿ ಬಲವ ಜರಿದಟ್ಟಿದೆಅವರಬಿರುದು ಸೀಳಿದೆ ಈ ಧರೆಯ ವೈಷ್ಣವರಭಯವ ಕಳೆದೆ4ಈ ಕ್ಷೋಣಿಯೊಳು ಪ್ರತಿವರ್ಜಿತನೆ ಶ್ರೀಅಕ್ಷಯಪ್ರಜÕ ಕೃಪಾನ್ವಿತನೆಅಕ್ಷೋಭ್ಯತೀರ್ಥರ ತನಯನೆವಿಶ್ವಕುಕ್ಷಿಪ್ರಸನ್ನವೆಂಕಟಪ್ರಿಯನೆ5
--------------
ಪ್ರಸನ್ನವೆಂಕಟದಾಸರು
ಶರಣು ಶರಣು ಶರಣ್ಯವಂದಿತ ಶಂಖಚಕ್ರಗದಾಧರ |ಶರಣು ಸರ್ವೇಶ್ವರ ಅಹೋಬಲ ಶರಣ ಸಲಹೋ ನರಹರಿ ಪ.ಶೀಲದಲಿ ಶಿಶು ನಿನ್ನ ನೆನೆಯಲುಕಾಲಲೋತ್ತುತ ಖಳರನು |ಲೀಲೆಯಿಂದಲಿ ಚಿಟಿಲು ಭುಗಿಭುಗಿ -ಲೆನುತ ಉಕ್ಕಿನ ಕಂಬದಿ ||ಖೂಳದೈತ್ಯನ ತೋಳಿನಿಂದಲಿ ಸೀಳಿಹೊಟ್ಟೆಯ ಕರುಳನು ||ಮಾಲೆಯನು ಕೊರಳೊಳಗೆ ಧರಿಸಿದಜ್ವಾಲನರಸಿಂಹಮೂರ್ತಿಗೆ 1ಖಳಖಳಾ ಖಳನೆಂದು ಕೂಗಲು ಕೋಟಿ ಸಿಡಿಲಿನ ರಭಸದಿ ||ಜಲಧಿ ಗುಳಗುಳನೆದ್ದು ಉಕ್ಕಲು ಜ್ವಲಿತ ಕುಲಗಿರಿ ಉರುಳಲು ||ನೆಲನು ಬಳಬಳನೆಂದು ಬಿರಿಯಲು ಕೆಳಗೆ ದಿಗ್ಗಜ ನಡುಗಲು ||ಥಳ ಥಳಾ ಥಳ ಹೊಳೆವ ಮಿಂಚಿನೊಲ್ಹೊಳೆವ ನರಸಿಂಹ ಮೂರ್ತಿಗೆ 2ಕೋರೆ ಕೆಂಜೆಡೆ ಕಣ್ಣು ಕಿವಿ ತೆರೆ -ಬಾಯಿ ಮೂಗಿನ ಶ್ವಾಸದಿ||ಮೇರುಗಿರಿ ಮಿಗಿಮಿಗಿಲು ಮಿಕ್ಕುವ ತೋರ ಕಿಡಿಗಳ ಸೂಸುತ ||ಸಾರಿಸಾರಿಗೆ ಹೃದಯರಕುತವ ಸೂರೆ ಸುರಿಸುರಿದೆರಗುತಘೋರರೂಪಗಳಿಂದ ಮೆರೆಯುವ ಧೀರ ನರಹರಿಮೂರ್ತಿಗೆ3ಹರನು ವಾರಿಜಭವನು ಕರಗಳ ಮುಗಿದು ಜಯಜಯವೆನುತಿರೆ ||ತರಳ ಪ್ರಹ್ಲಾದನಿಗೆ ತಮ್ಮಯ ಶರಿರಬಾಧೆಯ ಪೇಳಲು ||ಕರುಣಿ ಎನ್ನನು ಕರುಣಿಸೆನ್ನಲು ತ್ವರದಲಭಯವನೀಡುತ ||ಸಿರಿಬರಲು ತೊಡೆಯಲ್ಲಿ ಧರಿಸಿದ ಶಾಂತ ನರಹರಿಮೂರ್ತಿಗೆ4ವರವ ಬೇಡಿ ದನಿರುವ ತಂದೆಯ ಪರಿಯನೆಲ್ಲವ ಬಣ್ಣಿಸಿ ||ನಿರುತದಲಿ ನಿನ್ನೆರಡು ತೊಡೆಯಲಿ ಶರೀರವಿರಲೆಂದೆನುತಲಿ ||ಸುರರು ಪುಷ್ಪದ ವೃಷ್ಟಿಗರೆಯಲು ಸರಸಿಜಾಕ್ಷನು ಶಾಂತದಿ ||ಸಿರಿಯ ಸುಖವನು ಮರೆದಹೋಬಲವರದ ಪುರಂದರವಿಠಲಗೆ 5
--------------
ಪುರಂದರದಾಸರು
ಶರಣು ಶರಣು ಶೇಷಗಿರಿವರದ ದೇವಶರಣು ಶರಣು ಲಕ್ಷ್ಮೀವರ ಮುದದಶರಣಾಗತ ಭಯಸಂಹಾರ ಕಾರಣಕರುಣ ಕರಣ್ಯನಂತಕಿರಣಘವಾರಣ ಸುವಾರಣಉದ್ಧರಣಜಹರನುತಚರಣಪ.ಕೃತಸೇವ್ಯಾಮಲ ಅವ್ಯಾಕೃತಗಾತ್ರ ದೇವಪೃಥುರಾಜಪಾಲಾಂಬುಜಾಯತ ನೇತ್ರಯತಿ ಹೃದಯ ಗುಹ್ಯಾಂಗೀಕೃತೋತ್ತುಂಗಹೃತಕ್ಷಿತಿ ಜಾತ ಸತಿಪ್ರತತಿಗೃಹೀತಾವಿತಥÀಶ್ರುತಿಸ್ಮøತಿಗೀತ ಪ್ರೀತ ರತಿಪತಿಪಿತನೆ1ಸೋಮಕುಲಾಬ್ಧಿ ರಾಕಾಸೋಮಕಾಶ ದೇವಸಾಮಜಪಕ್ಷ ಸುರಸ್ತೋಮ ಪೋಷಕಕಾಮಿತಾರ್ಥಪ್ರದಾತ ಸ್ವಾಮಿತೀರ್ಥಧಾಮತ್ರಿಧಾಮ ಸುಮನಸಾಮೋದಪ್ರೇಮಧಿ ಶ್ರೀಮತ್ನಾಮ ನಿಸ್ಸೀಮ 2ಹನುಮನಿಮೇಷ ಋಷಿಗಾನಪ್ರಿಯ ದೇವಸನಕಸನಂದನ ಸನಾತನಧ್ಯೇಯಮಣಿಮಯಕನಕಭೂಷಣಾಂಕ ಭೂಮುನಿಜನ ಧ್ಯಾನ ಲೀನ ಅಣುರೇಣು ಪೂರ್ಣಪ್ರಸನ್ನವೆಂಕಟನಗಪಾ ಪುನಃಪುನಾನುದಿನ 3
--------------
ಪ್ರಸನ್ನವೆಂಕಟದಾಸರು
ಶರಣು ಶರಣುಪರಮಪುರುಷಶರಣು ಭಯಶರ ಖಂಡನಶರಣುಸಿರಿವಿಧಿಮರುತ ಪೂಜಿತಶರಣು ವೆಂಕಟನಾಯಕ ಪ.ಭಾಸಿತ ತಟಿತಮಕರಕುಂಡಲಭಾಸಕರ ಶಶಿಲೋಚನಸಾಸಿರಶತ ವೇದವಂದಿತವಾಸವಾರ್ಚಿತ ಪದಯುಗದೇಶಕಾಲ ಸುವ್ಯಾಪ್ತಾಜಾಂಡ ವಿಶೇಷಸ್ಥಿತಿಲಯಶೀಲನೆತೋಷಮಂದ ಸುಹಾಸವದನನೆಶೇಷಗಿರೀಶ ನಮೋ ಹರೆ 1ಶಂಖ ಚಕ್ರಗದೆ ಪದುಮ ವರಾಭಯಕಂಕಣಕರ ರಾಜಿತಕುಂಕುಮಮೃಗಮದತಿಲಕಧರಾತಂಕಕುಂಭಿಮೃಗಾಧಿಪಕಿಂಕರಾನತ ರಕ್ಷಕರಿಪುಶಂಖ ದೈತ್ಯ ವಿಶಿಕ್ಷಕಪಂಕಜಾನನ ಗರುಡವಾಹನಅಂಕಿತಾಖಿಳ ಭೂಷಣ 2ಜನನ ಮೃತ್ಯುವಿದೂರಅಚ್ಯುತಮುನಿಮನಾಲಯಮಾಧವಕನಕನೇತ್ರವಿದಾರಿ ಪೋತ್ರ್ಯಾಂಗನೆ ವಿಮಲಗುಣ ಪೂರ್ಣನೆದನುಜನಿಕರಾಟವಿ ದಾವಾನಲಸನಕಸನಂದನ ಸ್ತುತಿಪ್ರಿಯಅನವರತವರಸ್ವಾಮಿಪುಷ್ಕರಸನ್ನಿದ ಪ್ರಸನ್ವೆಂಕಟೇಶನೆ 3
--------------
ಪ್ರಸನ್ನವೆಂಕಟದಾಸರು
ಶಾಂತೇರಿ ಕಾಮಾಕ್ಷಿ ತಾಯೇ ಅ-ನಂತಪರಾಧವ ಕ್ಷಮಿಸು ಮಹಮಾಯೇ ಪ.ಸರ್ವಭೂತಹೃದಯಕಮಲ ನಿವಾಸಿನಿಶರ್ವರೀಶಭೂಷೆ ಸಲಹು ಜಗದೀಶೆ 1ಮೂಲ ಪ್ರಕೃತಿನೀನೆ ಮುನಿದು ನಿಂತರೆನ್ನಪಾಲಿಸುವವರ್ಯಾರುಪರಮಪಾವನ್ನೆ2ನಿನ್ನಾಧೀನವು ನಿಖಿಲ ಬ್ರಹ್ಮಾಂಡವುಮನ್ನಿಸು ಮಹಾದೇವಿ ಭಕ್ತಸಂಜೀವಿ 3ಗೋವೆಯಿಂದ ಬಂದೆ ಗೋವಿಂದಭಗಿನಿಸೇವಕಜನರಿಂದ ಸೇವೆ ಕೈಕೊಂಬೆ 4ಪೃಥ್ವಿಗುತ್ತಮ ಕುಮಟಕ್ಷೇತ್ರನಿವಾಸಿನಿಕರ್ತಲಕ್ಷ್ಮೀನಾರಾಯಣೀಕಲ್ಯಾಣಿ5
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಶಾರದೆ ಜಗದ್ಭರಿತೆ ಸರಸ್ವತೆ ||ಸಾರಸದ್ಗುಣಚರಿತೆವಾರಿಜೋದ್ಭವನ ಪಾದಾರವಿಂದಾರ್ಚಿತೆ |ತೋರೆ ದಯವ | ಕೀರವಾಣಿ ಕಲ್ಯಾಣಿಯೆ ||ಶುಭಕರೆ ಶುಭವದನೇ ಸರ್ವೇಶ್ವರಿ |ಪ್ರಭಾಕರ ಪ್ರಭಾವದನೆ ಪಇಭರಾಜಗಮನೆ| ಸದ್ಬುದ್ಧಿಪ್ರದಾಯಿನಿ |ಅಭಯನೀಯುತಲೆನ್ನ | ಸಲಹು ಸ್ತ್ರೀಸಭಾಶೋಭೆ 1ತಾಯೆ ಮಯೂರ ವಾಹಿನೀ | ಜಯ ಜಯ ಜಗ -|ನ್ಮಾಯೆ ಮೋಹನ ರೂಪಿಣೀ ||ತೋಯಜಕುಸುಮದಳಾಯತ | ಲೋಚನೆ |ಕಾಯೇ ದಯದಿಭವಹೇಯವಿದಾರಿಣಿ 2ನೀತೆ ಪರಮಪುನೀತೆ | ಪಾಲಿಸು ಲೋಕ |ಮಾತೆ ಪಾವನ ಚರಿತೆ |ದಾತೆ ತ್ರಿಲೋಕ | ವಿಖ್ಯಾತೆ ಬ್ರಹ್ಮನ ಪ್ರೀತೆ ಆತ್ಮರಕ್ಷಿಣಿ |
--------------
ಗೋವಿಂದದಾಸ
ಶಿರಿರಮಣ ದಯದಿಂದ ಮಂತ್ರಾಘ್ರ್ಯ ಕೊಡುವ ಬಗೆ |ಪರಮೇಷ್ಠಿಗೊಲಿದು ಪೇಳಿದನು ಇಂತೂ ಪಅಷ್ಟಾಕ್ಷರದಿ ಮಂತ್ರಾಘ್ರ್ಯ ಸಾಲಗ್ರಾಮ |ವಿಟ್ಟು ಸದ್ ಭಕ್ತಿಯಲಿ ಶಂಖದಿಂದಾ ||ಕೊಟ್ಟವಗೆ ಸಂತುಷ್ಟನಾಗಿ ಎನ್ನಯ ಸದನದೋ- |ಳಿಟ್ಟು ಸಂತೈಸುವೆನು ಬ್ರಹ್ಮ ಕೇಳೂ 1ಸತ್ಯಭಾಮಾದಿ ಮಿಕ್ಕಾದ ಮಂತ್ರಾಘ್ರ್ಯವನು |ಮತ್ಪಾದ ಜಲದಿಂದ ಪಾತ್ರಿಯಲ್ಲೀ ||ಹಸ್ತದಿಂ ಕೊಡಬೇಕು ಎನ್ನ ಪ್ರೀತಿ ಎಲೊ ಇದು |ಸತ್ಯಲೋಕಾಧಿಪನೆ ಕೇಳು ಮುದದೀ 2ಎನ್ನ ಮಂತ್ರಾಘ್ರ್ಯ ಹಸ್ತದಲಿ ಪಾತ್ರಿಯೊಳೀಯೆ |ಅನ್ಯಾಯವೆಷ್ಟೆಂದು ಪೇಳಲೀಗಾ ||ವನ್ನಜಾಸನ ಎನಗರಕ್ತವೆರದಂತಹದೊ |ಮುನ್ನವರ ಕ್ಲೇಶಕ್ಕೆಎಣಿಕೆಇಲ್ಲಾ 3ಅದರಿಂದ ತಿಳಿದು ಸಾಲಗ್ರಾಮವಿಟ್ಟು ಶಂ- |ಖದಲಿ ಕೊಡಬೇಕು ಎನ್ನಘ್ರ್ನಗಳನೂ ||ವಿಧಿಕಾಷ್ಟಗತವಹ್ನಿಮಥಿಸೆ ತೋರ್ವಂತೆ ಸ- |ರ್ವದ ತೋರ್ವೆ ನಾನು ಸಾಲಗ್ರಾಮದೀ 4ಶ್ರೀ ನಾರಿ ಪ್ರಮುಖ ಮಂತ್ರಾಘ್ರ್ಯ ಶಂಖದಲಿ ಕೊಡೆ |ನಾನೊಪ್ಪೆನವರ ಭಂಗವ ಬಡಿಸುವೇ ||ವಾಣೀಶ ತಿಳಿಯಂದು ಸ್ಮಿತ ವದನದಿಂದ ಶ್ರೀ |ಪ್ರಾಣೇಶ ವಿಠಲ ನಿರೂಪಿಸಿದನೂ 5
--------------
ಪ್ರಾಣೇಶದಾಸರು
ಶೋಭನವೇ ಶೋಭನವೇಶೋಭನ ಗುರುವಿಗೆ ಬಗಳಾಂಬಳಿಗೆಪಉರಿಬಿಟ್ಟಗ್ನಿಯು ಇಲ್ಲದಂತೆಉರಿಯು ಅಗ್ನಿಯು ಒಂದೆಂಬಂತೆಗುರುವು ಬಗಳಾಂಬನು ತಾನು ಕೂಡಿಯೆತರಣಿಶತಕೋಟಿಯಲಿ ಹೊಳೆಯುತಿದೆ1ಬಂಗಾರದಿ ಮಾಡಿಹ ಒಡವೆಗಳಂತೆಬಂಗಾರ ಒಡವೆ ಒಂದೆ ಎಂಬಂತೆಮಂಗಳಗುರುಬಗಳಾಂಬನು ಕೂಡಿಯೆತಿಂಗಳ ಶತಕೋಟಿಯಲಿ ಹೊಳೆಯುತಿದೆ2ತೆರೆ ಬಿಟ್ಟ ಉದಕವು ಇಲ್ಲದಂತೆತೆರೆ ಉದಕವು ಒಂದೆಂಬಂತೆಗುರುಚಿದಾನಂದ ಶ್ರೀ ಬಗಳೆ ಕೂಡಿಯೆಶರಣರ ಹೃದಯದಿ ಥಳಥಳಿಸುತಿರೆ3
--------------
ಚಿದಾನಂದ ಅವಧೂತರು
ಶೋಭನವೇ ಶೋಭನವೇಶೋಭನ ಚಿದಾನಂದ ಅವಧೂತಗೆಪರೇಚಕ ಪೂರಕ ಕುಂಭಕವರೇಚಿಪ ಪೂರಿಪ ಕ್ರಮದನುವಾಸೂಚನೆಯರಿದಾ ಸುಷುಮ್ನದನುಭವರೋಚಕವಾಗಿಹ ಕಳೆಸವಿವ1ಹೃದಯಾಕಾಶದಿ ಲಕ್ಷ್ಯವಿಟ್ಟುಮುದದಿ ತೋರಲು ಪ್ರಭೆಮಿಂಚಿಟ್ಟುಬುದು ಬುದುಕಳೆ ಪ್ರಕಾಶಗಳೆದುರಿಟ್ಟುಒದವೆ ನಾದಧ್ವನಿ ಇಂಪಿಟ್ಟು2ನಿರುಪಮ ನಿರ್ಗುಣ ನಿರ್ಭೀತನಿರವಯ ನಿಶ್ಚಲ ನಿಜದಾತಾವರಚಿದಾನಂದ ಸದ್ಗುರುಅವಧೂತಶರಣು ಜನಕಾವಪ್ರಖ್ಯಾತ3
--------------
ಚಿದಾನಂದ ಅವಧೂತರು
ಶ್ರೀ ಕಂಚಿ ಕಾಮಾಕ್ಷಿ82ಶರಣು ಶರಣು ಶರಣು ಶರಣು ಕಾಮಾಕ್ಷಿಶರಣು ಮೋಹಿನಿಮಾವಾಣಿಶರ್ವಾಣಿಪಹರಿಸಿರಿಸರಸ್ವತಿ ಸಹ ಪ್ರಜ್ವಲಿಸುವೆಗಿರಿಜೆ ಶರಣು ಕಂಚಿನಿಲಯೆ ಸತತಕಾಯೆ ಅ ಪಏಕಾತ್ಮಾನಂದಮಯನಿಖಿಳಗುಣಾರ್ಣವಜಗಜ್ಜನ್ಮಾದಿಗಳಿಗೆ ಮುಖ್ಯ ಕಾರಣೆ ವ್ಯಾಪ್ತೆಅಕಳಂಕ ಪುಂಸ್ತ್ರೀಗಾತ್ರೆ ಚಿನ್ಮಯೆ ವೃಂದಾರಕರಿಗೆಪೀಯೂಷಕರುಣಿಸಿ ಉಣಿಸಿದೆ1ಭಾಮಾ ರುಕ್ಮಿಣಿ ಸೀತಾ ಸೋಮಸೋದರಿ ರಮೆಕಮಲಾಸನಾದಿ ಸುಮನಸವಂದಿತೆ ತ್ರಾತೆಕಮಲನಾಭನ ಸೇವೆ ವನಮಾಲೆ ಚಾಮರಾದ್ಯಮಿತ ರೂಪದಿ ಮಾಳ್ಪ ಮಹಾಲಕ್ಷ್ಮೀ ನಮೋ ನಮೋ 2ಪಕ್ಷಿವಾಹನ ಸಾಕ್ಷಿ ಚೇತಾನಿರ್ಗುಣ ಅಧೋಕ್ಷಜ ಸರ್ವಾಂತರಾತ್ಮನ ತೀವ್ರಪ್ರೇಕ್ಷಿಸೊ ಜ್ಞಾನ ಭಕುತಿ ಮತಿ ಎನಗಿತ್ತುರಕ್ಷಿಸೆ ಸರಸ್ವತಿ ಫಣಿರ ಪಕ್ಷಿಪ ನುತೆ 3ಹೇಮಅಂಕುಶಪಾಶಇಕ್ಷುದಂಡವು ಪುಷ್ಪಕೋಮಲಹಸ್ತ 2 ನಾಲ್ಕಲ್ಲಿ ಶೋಭಿತವುಕಾಮಿತವರಪ್ರದೆ ಕಾತ್ಯಾಯನಿ ಉಮಾಹೈಮವತಿಯೆ ಶಿವೆ ದಯಮಾಡಿ ಪೊರೆಯೆನ್ನ 4ತತ್ರ ತತ್ರ ಸ್ಥಿತೋ ವಿಷ್ಣುಃ ತತ್ ತತ್ ಶಕ್ತಿ ಪ್ರದರ್ಶಯನ್ಸೂತ್ರವು ಮಣಿಗಳೊಳಂತೆ ಧಾರಕಹರಿವೃತತಿಜಪಿತ ವಿಷ್ಣು ಪ್ರಸನ್ನ ಶ್ರೀನಿವಾಸಗತಿಪ್ರಿಯತರೆ ಶಿವೆ ಸತತ ಪಾಲಿಸೆ ಎನ್ನ5
--------------
ಪ್ರಸನ್ನ ಶ್ರೀನಿವಾಸದಾಸರು
ಶ್ರೀ ಕಂಚೀಪುರ ನರಸಿಂಹ9ಶರಣಂ ಶರಣಂ ಪಾಲಯ ಮಾಂ ಪವರಕಂಚೀಪುರ ಯೋಗನೃಕೇಸರಿಪಾಲಯ ಮಾಂ ಅ .ಪಪೂರ್ಣ ಅದೋಷ ಸುಚಿನ್ಮಯ ನೃಹರೇಪೂರ್ಣಾನಂದ ಭೋ ಏಕಾತ್ಮ 1ಮತ್ಕುಲದೇವ ಶ್ರೀ ವೆಂಕಟಕೃಷ್ಣವರದ ಕೃಪಾಂಬುಧೆ ಪಾಲಯ ಮಾಂ 2ಯೋಗಕ್ಷೇಮಂ ಮಮವಹ ಸ್ವಾಮಿಕಾಮಿತಫಲದ ದಯಾನಿಧೆ ಭೂಮನ್ 3ಮೀನಾದಿದಶ ಅನಂತ ಸುರೂಪಅನುಪಮ ಸುಖಮಯ ಪಾಲಯ ಮಾಂ 4ಮಂದಜಭವಪಿತ ಪ್ರಸನ್ನ ಶ್ರೀನಿವಾಸಇಂದಿರಾಪತಿ ನರಸಿಂಹ ನಮಸ್ತೆ 5ಶ್ರೀ ಚಿಂತಲವಾಡಿ ನರಸಿಂಹ
--------------
ಪ್ರಸನ್ನ ಶ್ರೀನಿವಾಸದಾಸರು
ಶ್ರೀ ಕೇಶವ ತೀರ್ಥ ಸ್ತೋತ್ರ107ಸೂರಿಪ್ರಾಪ್ಯ ಘೃಣಿಶೌರಿಶ್ರೀರಮಾಪತಿ ಪ್ರಿಯರುಸೂರಿವರ ಬ್ರಹ್ಮಣ್ಯ ತೀರ್ಥ ಆರ್ಯರ ಸುಸರೋಜಕರಜಾತ ಜಗತ್ಖ್ಯಾತ ವ್ಯಾಸರಾಜಾರ್ಯರಹಸ್ತಸುವ್ರತ ನಿಜೋತ್ಪನ್ನ ಕೇಶವ ತೀರ್ಥಾರ್ಯರ್ಗೆ ವಂದೇ ಪಮುಖ್ಯಪ್ರಾಣಪವಮಾನ ಸುರಮಾತರೀಶ್ವಗುರುಪ್ರದ್ಯುಮ್ನ ಅನಿರುದ್ಧ ಪುರುಷ ನರಸಿಂಹ ಶ್ರೀಶಪ್ರಜ್ಯೋತಿರ್ಮಯ ಉಗ್ರವೀರ ವಿಶ್ವವ್ಯಾಪಿ ವಿಷ್ಣುವುಮೃತ್ಯು ಮೃತ್ಯು ಸ್ತಂಭದಿಂ ಬಂದು ಪ್ರಹ್ಲಾದನ್ನ ಪೊರೆದ 1ನರಸಿಂಹನಾಜೆÕಯಿಂ ಪ್ರಹ್ಲಾದ ಸಿಂಹಾಸನವೇರೆನೆರೆದಿದ್ದ ಸುಮನಸರು ಹರಿಭಕ್ತ ಜನರುಸೂರಿಗಳುಆ ವೈಭವ ಕಂಡುಕೇಳಿಜಯಪರಾಕ್ಪರಾಕೆಂಬ ದಿವ್ಯಾನುಭವಜ್ಞಾನಿಕೇಶವ ತೀರ್ಥ2ಹಿಂದಿನ ಪ್ರಹ್ಲಾದಇಂದುವ್ಯಾಸಮುನಿರಾಜರಾಗಿದುಸ್ತರ್ಕ ಧ್ವಂಸಕರ ತರ್ಕತಾಂಡವ ಬೋಧಿಸಿಹಿತಕರ ನ್ಯಾಯ ಪೀಯೂಷವ ಉಣಿಸಿ ಆಹ್ಲಾದಚಂದ್ರಿಕಾಸುಖ ನೀಡಿ ಯತ್ಯಾಶ್ರಮ ಇತ್ತರಿವರ್ಗೆ 3ಶ್ರೀವ್ಯಾಸರಾಯರು ಅನುಗ್ರಹಿಸಿ ಕೇಶವ ತೀರ್ಥದಿವ್ಯ ನಾಮಾಂಕಿತವ ಪ್ರಣವಾದಿ ಮಂತ್ರ ಉಪದೇಶನಿವ್ರ್ಯಾಜ ನಿಶ್ಚಲ ಭಕ್ತಿಮಾನ್ ವಿನಯಸಂಪನ್ನ ಈಶಿಷ್ಯನಿಗೆ ಕೊಟ್ಟದ್ದು ಸಜ್ಜನರು ಹೊಗಳಿದರು 4ಶ್ರೀರಂಗದಲಿ ಉತ್ತರಾರಣ್ಯ ಬೀದಿಯಲ್ಲಿಹಶ್ರೀ ಕೃಷ್ಣಮಂದಿರದಿ ಶ್ರೀವ್ಯಾಸರಾಯ ಮಠದಿಚಾರುತರ ಚತುರ್ವಿಂಶತ್ ವಿಷ್ಣು ಮೂರ್ತಿಗಳುಂಟುತತ್ರಗೋಲಕ ಕ್ರಮದಿ ಶ್ರೀಹರಿಯ ಚಿಂತಿಪರು 5ಬ್ರಹ್ಮ ಗಾಯತ್ರಿ ಮನು ಇಪ್ಪತ್ತು ನಾಲ್ಕಕ್ಷರದಲಿತಂ ಆದಿ ಯಾತ್ ಅಂತ ಒಂದೊಂದರಲಿ ಒಂದುಹರಿಯಅಮಲ ಸುಪೂರ್ಣ ಕೇಶವಾದಿ ಕೃಷ್ಣಾಂತರೂಪಆ ಮೊದಲು ತಂ ಅಲ್ಲಿ ತಾರಕೇಶವನು ಧ್ಯಾತವ್ಯ 6ಬಲದಕೆಳಗಿನ ಕರದಿಪದ್ಮ ಮೇಲೆ ಶಂಖಜ್ವಲಿಪ ಚಕ್ರವು ಮೇಲಿನ ಎಡದ ಹಸ್ತದಲ್ಲಿಕೆಳಗಿನ ಎಡಕರದಿ ಗದೆಯ ಹಿಡಿದಿಹಜಲಜಸಂಭವ ಭವಾದ್ಯರ ಸ್ವಾಮಿ ಕೇಶವನು 7ದಶಪ್ರಮತಿ ಸರಸೀರುಹನಾಭ ನರಹರಿಅಸಮಮಾಧವಅಕ್ಷೋಭ್ಯ ಜಯವಿದ್ಯಾಧಿರಾಜಅಸಚ್ಛಾಸ್ತ್ರಗಿರಿಕುಲಿಶ ರಾಜೇಂದ್ರ ಜಯಧ್ವಜಶ್ರೀಶವಶಿ ಪುರುಷೋತ್ತಮ ಬ್ರಹ್ಮಣ್ಯ ವ್ಯಾಸತೀರ್ಥ 8ಹಂಸವಿಧಿ ಸನಕಾದಿಗಳಾರಭ್ಯ ಸನಾತನಸುಶೀಲ ಈಗುರುಪರಂಪರೆಯಲಿ ವ್ಯಾಸಮುನಿಸರೋಜ ಕರಜಾತ ಕೇಶವ ತೀರ್ಥರು ಹೀಗೆಕೇಶವನ್ನ ಧ್ಯಾನಿಸಿ ಒಲಿಸಿ ಕೊಂಡದ್ದು ಸಹಜ 9ಹರಿಪ್ರೀತಿ ಸಮರ್ಪಕ ಯತ್ಯಾಶ್ರಮ ಧರ್ಮಗಳಚರಿಸುತಗುರುಸೇವಾರತರಾಗಿ ಇರುತಿಹಬರುವ ಶಿಷ್ಯರಿಗೆ ಸೌಲಭ್ಯ ವಾತ್ಸಲ್ಯ ನೀಡುತಸೇರಿದರು ಪರಮತಿ ವೇಲೂರೆಂಬ ಕ್ಷೇತ್ರವನ್ನು 10ಶಲ್ಯ ರಾಜನ್ನ ಜ್ಞಾಪಿಸುವ ಶುಕವನ ಕ್ಷೇತ್ರದಿಂಒಳ್ಳೆಯ ರಸ್ತೆ ಹದಿನೈದು ಕ್ರೋಶ ದೂರದಿ ಇಹುದುಪ್ರಹ್ಲಾದ ವರದ ನಾರಸಿಂಹ ನಾಮಗಿರಿ ದೇವಿಬಲಜ್ಞಾನರೂಪ ಮಾರುತಿ ಇರುವ ನಾಮಕಲ್ಲು 11ನಾಮಶೈಲದಿಂದ ರಂಗ ತಾನೇ ತೋರಿದ ವೇಂಕಟರಮಣ ಪಶುಪತಿಕ್ಷೇತ್ರ ಕರೂರಿಗೆ ಹೋಗುವರಮಣೀಯಮಾರ್ಗಮಧ್ಯದಲ್ಲಿಯೇ ಇರುತಿಹವುಪರಮತಿ ವೇಲೂರು ಸುಪುಣ್ಯ ಕಾವೇರಿಯು 12ಸರ್ವಸುಗುಣಾರ್ಣವನುಅನಘಸರ್ವೋತ್ತಮನುಸರ್ವಕರ್ತಾಗಮೋದಿತನು ಜಿಜ್ಞಾಸ ಜನ್ಯ ಜ್ಞಾನಸಂವೃದ್ಧಿ ಸಾಧನಾನುಕೂಲ ಚತುರ್ವೇದಿ ಮಂಗಳದಿವ್ಯ ಪರಮತಿಯು ಅಲ್ಲಿ ಲೌಕೀಕರೇ ತುಂಬ 13ಸಪರಮತಿ ಸಮೀಪದಲ್ಲೆ ಚನ್ನಕೇಶವ ವೇಲಿಪುರವುಂಟು ಅದನ್ನ ವೇಲೂರೆಂದು ಹೇಳುವರುಪರಮತಿ ವೇಲೂರು ಕಾವೇರಿ ಪೋಷಿತವು ತೀರಪರಮಭಾಗವತಋಷಿ ಸಂಚಾರ ವಾಸಸ್ಥಾನ14ರಸಪೂರಿತ ಮಾವು ತೆಂಗು ಕದಲೀಫಲವೃಕ್ಷಬಿಸಜಮಲ್ಲಿಗೆ ಜಾಜಿಕುಸುಮಪರಿಮಳವುಹಂಸ ಪಾರಾವತ ತಿತ್ತರಾಶುಕ ಇಂಥಾ ಸುಪಕ್ಷಿಶ್ರೀಶನಂಘ್ರಿ ಸಂಬಂಧಿ ವರಜಾಯುಕ್ ಕಾವೇರೀ ಸರಿತ 15ಶ್ರೀಮನೋರಮ ಕೇಶವನ್ನ ಆರಾಧಿಸಿ ಧ್ಯಾನಿಸಲುಈ ಮನೋಹರ ಶಾಂತ ಸುಪವಿತ್ರ ಕ್ಷೇತ್ರವೆಂದುತಮ್ಮಯ ಬಾಹ್ಯ ಚಟುವಟಿಕೆಗಳ ನಿರೋಧಿಸಿಸಮೀರಸ್ಥ ಶ್ರೀಹರಿಯ ಧ್ಯಾನಾದಿರತರಾದರು 16ಯುಕ್ತಕಾಲದಿ ಈ ಸಂನ್ಯಾಸರತ್ನ ಕೇಶವಾರ್ಯರುಭಕ್ತಿವೈರಾಗ್ಯ ಯುಕ್ ಜ್ಞಾನ ಸಂಪನ್ನ ಶ್ರೀಹರಿಯಚಿಂತಿಸುತ ತ್ರಿಧಾಮನ ಪುರವನ್ನ ಯೈದಿದರುವೃಂದಾವನದಲ್ಲಿ ಒಂದಂಶದಲಿ ಇರುತಿಹರು 17ಕಾಲಧೀರ್ಘದಲಿ ಗ್ರಾಮಜನ ಬದಲಾವಣೆಯಿಂಎಲ್ಲಿ ವೃಂದಾವನ ಸ್ಥಾನ ಇದೆ ಎಂದು ಸರಿಯಾಗಿಹೇಳುವವರು ಸುಲಭದಿ ದೊರಕುವುದು ಶ್ರಮತಿಳಿದವರ ಸಹಾಯದಿಂ ಗುರುದಯದಿ ಸಾಧ್ಯ 18ಸದಾಪಾಣಿ ಭೀಮಸೇನ ಆರಾಧ್ಯ ಶ್ರೀಕೃಷ್ಣನು ಮತ್ತುಪದ್ಮಾಲಯಾಪತಿ ಪುಂಡರೀಕಾಕ್ಷನ್ನು ಶ್ರೀವಿಶ್ವನ್ನುಮಧ್ವಸ್ಥ ಪರಮಾತ್ಮನ್ನು ಸ್ಮರಿಸಿ ವೃಂದಾವನವಸಂದರ್ಶನ ಮಾಡಿ ಸೇವಾ ಸ್ವಗುರೂಪದೇಶವಿಧಿ19ಸ್ಮರಣ ದರ್ಶನ ಪ್ರದಕ್ಷಿಣ ನಮನ ಕೀರ್ತನಶಾಸ್ತ್ರಾಧ್ಯಯನ ಪ್ರವಚನ ಭಕ್ತಿಯಿಂದಲಿ ಪೂಜಾಪರಿಶುದ್ಧ ನೈವೇದ್ಯ ಎಷ್ಟೆಷ್ಟು ಸಾಧ್ಯವು ಅಷ್ಟುಹರಿಗುರು ಪಾದೋದಕ ಶುಭದ ಸರ್ವಾಭೀಷ್ಟದ 20ಆದರದಿ ಈ ಸ್ತೋತ್ರ ಪಠನ ಶ್ರವಣ ಮಾಳ್ಪರ್ಗೆಭಕ್ತಿಮೇಧಆಯುಷ್ಯ ಆರೋಗ್ಯ ಸೌಭಾಗ್ಯಗಳೀವಪದ್ಮಜನಪಿತನು ಶ್ರೀ ಪ್ರಸ್ನನ ಶ್ರೀನಿವಾಸನುವಂದೇ ವಿಧಿಮಧ್ವ ವ್ಯಾಸಮುನಿ ಕೇಶವಾರ್ಯಾಂತಸ್ಥ 21|| ಶ್ರೀ ಶ್ರೀ ಕೇಶವ ತೀರ್ಥ ಸ್ತೋತ್ರ ಸಂಪೂರ್ಣಂ ||
--------------
ಪ್ರಸನ್ನ ಶ್ರೀನಿವಾಸದಾಸರು