ಒಟ್ಟು 40875 ಕಡೆಗಳಲ್ಲಿ , 138 ದಾಸರು , 10069 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ದಿನದಿನದೊಳು ಬಿಡದೊನಜಾಕ್ಷ ಪಾದ ಭಜಿಸಿ ನೀ ಸುಖಿಯಾಗೊ ಮನವೆ ಪ ನಂಬುಗೆ ಕಾರಣ ಅಂಬುಜಾಕ್ಷನ ಶ್ರೀಪಾ ದಾಂಬುಜ ಒಲಿಸಲು ಕುಂಭಿಣಿಯೊಳಗೆ ನಂಬಿ ಪ್ರಹ್ಲಾದ ಕರೆಯೆ ಕಂಬದಿಂ ಬಂದವನ ಬೆಂಬಿಡದಲೆ ಕಾಯ್ದನೆಂಬೋಕ್ತಿ ಕೇಳಿ ತಿಳಿದು 1 ದುರಿತದ ತವರಿದು ನರಕಕ್ಕೆ ಬೇರೆಲೊ ಮರವೆಸಂಸಾರ ಮಹಸರಸಿನಸರೋವರ ಸುರಸಿನೊಳ್ ಸಿಲ್ಕಲು ತಿರುಗರೆಂಬುವ ಹರಿಶರಣರ್ವಾಕ್ಯಗಳು ಸ್ಥಿರನಂಬೀ ಅರಿತು 2 ಕಿರಿಕಿರಿ ಸಂಸಾರ ಪರಿಪರಿಬಾಧಿಪ ಉರಿಕಿನ ತಿಂಡಿಯಿದು ನೆರೆನಂಬಬೇಡ ಜರಸುಖವಿಲ್ಲದ ಎರವಿನ ಕಾಯಕ್ಕೆ ಹಿರಿಹಿರಿ ಹಿಗ್ಗಿ ಕೆಡದಿರು ವಿವರಿಸಿನೋಡಿ 3 ಸತಿಸುತರಿವರೆಲ್ಲ ಅತಿಭಾಗ್ಯ ಇರುವನಕ ಸತತ ನಿನ್ನಯ ಸೇವೆ ಹಿತದಿಂ ಮಾಳ್ಪರು ಗತಿಸಿ ಪೋಗಲು ಭಾಗ್ಯ ಸತಿಸುತರೆ ನಿನ ಗತಿವೈರಿಗಳು ಕಾಣೊ ಮತಿಹೀನ ಮನಸೆ 4 ಇರುಳು ಹಲವು ಪಕ್ಷಿ ನೆರೆದುಂಡು ವೃಕ್ಷದಿ ತಿರುಗಿ ಉದಯದೊಳು ಹಾರಿಹೋಗ್ವ ತೆರದಿ ಸರುವ ಅಸ್ಥಿರವೆಂದು ಅರಿತು ವಿಚಾರಿಸಿ ಸ್ಥಿರಸುಖವನು ಪಡೆಯೊ ಶ್ರೀರಾಮನಡಿಗ್ಹೊಂದಿ 5
--------------
ರಾಮದಾಸರು
ದಿನಮಣಿ ಕುಲಜಾತಾ ಪ್ರತಾಪ ಪ ಜನಕಸುತಾನ್ವಿತ ಮುನಿಕುಲಸನ್ನುತ ಶರಣಾಗತ ವರದಾತಾ ವಿನೀತಾ ಅ.ಪ ದುರುಳ ಖರಾರಿ | ಪಾವನ ಶೌರೀ | ದಶಕಂ ದರ ಮದಹಾರಿ | ಉದಾರೀ 1 ಜಗದಭಿರಾಮಾ ರಘುಕುಲ ಸೋಮಾ ಮರುತಾತ್ಮಜಮನಧಾಮ ಸುನಾಮ2 ಮಾಂಗಿರಿಮಂದಿರ ದೀನ ಕೃಪಾಕರ ಪೀತಾಂಬರಧರ ಮಾರಶರೀರಾ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ದಿನವೇ ಸುದಿನವು ಧ್ಯಾನ ಮಾಳ್ಪ ಜನವೇ ಸುಜನವು ಪ ಮಹಿಮೆಯ ಪಾಡುವ ಅ.ಪ. ಯುಕ್ತದಿ ಕೂಡಿ ಆಯುಕ್ತವಿರಕ್ತಿಯ ಮಾಡಿ ಭಕ್ತಿಗಾಗಲಿ ಭವಮುಕ್ತಿಗಾಗಲಿ ಹರಿಭಕ್ತರನೊಡಗೂಡಿ ರಕ್ತಿಲಿ ಪಾಡುವ ದಿನವೇ 1 ತಾಳ ತಂಬೂರಿಯ ತಪ್ಪದೆ ತಂದು ಮೈಳೈಸಿ-ಶ್ರುತಿಯ ಕಥೆಪೇಳವ ಕೇಳುವ 2 ಅರ್ಥಾಪೇಕ್ಷೆಯಲಿ ಕಾಲಗಳನ್ನು ವ್ಯರ್ಥಮಾಡದಲೆ ಪ್ರಾರ್ಥನೆ ಮಾಡುವ 3 ಕಾಮಕ್ರೋಧಗಳ ಕಳೆವ ರಘುರಾಮ ನಾಮಗಳ ಭವ ತಾಮಸ ಕಳೆಯುವ 4 ಹರಿವಾಸರವನು ಸಾಧಿಸಿ ಮುರುಹರ ನಾಮಗಳನು ಹರಿದಾಸರೊಡಗೂಡಿ ಹರುಷದಿಂದೆಚ್ಚತ್ತು ವರದ ವಿಠಲ ನರಹರಿಯೆಂದು ಪಾಡುವ ದಿನವೇ 5
--------------
ಸರಗೂರು ವೆಂಕಟವರದಾರ್ಯರು
ದಿನವೇ ಸುದಿನವು ಧ್ಯಾನಮಾಳ್ಪ ಜನವೇ ಸುಜನವು ಪ ಘನತರ ಹರಷದಿ ಮನದಣವಂದದಿ ಮನಸಿಜನಯ್ಯನ ಮಹಿಮೆಯ ಪಾಡುತ ಅ.ಪ ಯುಕ್ತದಿ ಕೂಡಿ ಅಯುಕ್ತ ವಿರಕ್ತಿಯ ಮಾಡಿ ಭುಕ್ತಿಗಾಗಲಿ ಭವಮುಕ್ತಿಗಾಲಿ ಹರಿ ಭಕ್ತರ ನೋಡಗೂಡಿ ರಕ್ತಿಲಿ ಪಾಡುವ 1 ತಾಳ ತಂಬೂರಿಯ ತಪ್ಪದೆ ತಂದು ಮೈಳೈಸಿಶ್ರುತಿಯ ಶ್ರೀಲಾಲಮನ ಕಥೆ ಪೇಳುವ ಕೇಳುವ 2 ಅರ್ಥಾಪೇಕ್ಷೆಯಲಿ ಕಾಲಗಳನು ವ್ಯರ್ಥಮಾಡದಲೆ ಪಾರ್ಥಸಾರಥಿಯನ್ನು ಪ್ರಾರ್ಥನೆ ಮಾಡುವ 3 ಕಾಮಕ್ರೋಧಗಳ ಕಳೆವ ರಘು ರಾಮ ನಾಮಗಳ ಪ್ರೇಮದಿಂ ಪಾಡುತ್ತ ರೋಮಾಂಚದೊಡಗೂಡಿ ಭವ ತಾಮಸ ಕಳೆಯುವ 4 ಹರಿವಾಸರವನು ಸಾಧಿಸಿ ಮುರಹರ ನಾಮಗಳು ಹರಿದಾಸರೊಡಗೂಡಿ ಹರಷದಿಂದೆಚ್ಚತ್ತು ವರದ ವಿಠಲ ನರಹರಿಯೆಂದು ಪಾಡುವ 5
--------------
ವೆಂಕಟವರದಾರ್ಯರು
ದಿಮ್ಮಾಕ ನಿನಗ್ಯಾಕೆ ಎಲೆ ಎಲೆ ಜಮ್ಮಾಸಿ ಜರ ತಿಳಿಕೊ ಪ ದಿಮ್ಮಾಕ ನಿನಗ್ಯಾಕೆ ಛೀಮಾರಿ ನಿನ್ನ ದಿಮ್ಮಾಕ ಮುರಿಲಿಕ್ಕೆ ಗುಮ್ಮವ್ವ ನಿಂತಾಳೆ ಅ.ಪ ಸೊಕ್ಕಿನಿಂದ ನಡೆವಿ ಮುಂದಿಂದು ಲೆಕ್ಕಕ್ಕೆ ತರದಿರುವಿ ಫಕ್ಕನೊಯ್ದೆಮನವರು ಉಕ್ಕಿನ ಪ್ರತಿಮೆಯ ತೆಕ್ಕೆಯೊಳಾನಿಸಿ ನಿನ್ನ ಒಕ್ಕಲಿಕ್ಕುವರವ್ವ 1 ತಾರತಿಗಡಿ ತುಸು ವಿ ಚಾರಮಾಡಿನೋಡು ಘೋರ ಯಮದೂತರು ಹಾರೆ ಕಾಸಿ ಯೋನಿ ದ್ವಾರದಿ ಸೇರಿಸಿ ಘೋರ ಬಡಿವರವ್ವ 2 ಪಾಮರಳಾದಲ್ಲೆ ಮುಂದಿನ ಕ್ಷೇಮವ ಮರೆತಲ್ಲೇ ಭೂಮಿಸುಖಕೆ ಮೆಚ್ಚಿ ತಾಮಸದಲಿ ಬಿದ್ದು ಸ್ವಾಮಿ ಶ್ರೀರಾಮನ ಪ್ರೇಮಕ್ಕೆ ದೂರಾದಿ 3
--------------
ರಾಮದಾಸರು
ದಿಮ್ಮಿ ಸಾಲೆ ರಂಗ ದಿಮ್ಮಿ ಸಾಲೆ ಪ. ದಿಮ್ಮಿ ಸಾಲೆನ್ನಿರೊ ಗೋಮಕ್ಕಳೆಲ್ಲ ನೆರೆದುಗೋಪಾಂಗನೇರÀ ಮೇ¯ ಒಪ್ಪಿ ಭಸ್ಮ ಸೂಸುತಅ.ಪ. ಶಂಖನಾದ ಕೊಳಲ ಭೇರಿ ಪೊಂಕದಿ ಪಂಚಮಹಾವಾದ್ಯದಿಅಂಕವತ್ಸಲನ ನಿರಾತಂಕದಿಂದ ಹಿಡಿವ ಬನ್ನಿ1 ಗಂಧ ಕಸ್ತೂರಿ ಪುನುಗು ಚೆಂದದಿಂದ ಲೇಪಮಾಡಿನಂದಗೋಪಸುತನ ಮೇಲೆ ತಂದು ಸೂಸಿ ಭಸ್ಮವ 2 ಎರಳೆಗಣ್ಣಿನ ಬಾಲೇರು ಹರುಷದಿಂದ ಬಂದು ನಿಂತುವರದ ಕೆÉೀಶವನ ಮೇಲೆ ಪರಿದು ಸೂಸಿ ಭಸ್ಮವ 3 ಮತ್ತೆ ಕುಶಲದ ಬಾಲೆಯರುಗಳಿತ್ತೆರದಲಿ ಬಂದು ನಿಂತುಚಿತ್ತಜನಯ್ಯನ ಮೇಲೆತ್ತಿ ಸೂಸಿ ಭಸ್ಮವ 4 ವಾದಿರಾಜಗೊಲಿದು ಬಂದು ಸೋದೆಪುರದಲ್ಲಿ ನಿಂದಮೋದಿ ಹಯವದನನ ಮೇಲೆ ಪರಿದು ಸೂಸಿ ಭಸ್ಮವ5
--------------
ವಾದಿರಾಜ
ದೀನ ಪಾಲನೆ ಗಾನಲೋಲನೆ ಸುಜನ ಪ್ರಿಯನೇ ಪ ಈ ನರಜನ್ಮದ ಕಾನನದಲಿ ಬಲು ದೀನನಾಗಿ ಗುಣಗಾನ ಮಾಡುವೆನೊ ಅ.ಪ ದುಷ್ಟಭೋಗಗಳನುಭವಿಸುತ ಸದಾ ಭ್ರಷ್ಟನಾದೆ ನಾನು ಅಷ್ಟಿಷ್ಟಲ್ಲದೆ ಮರುಗುತಿರುವೆ ಪರ ಮೇಷ್ಟಿ ಜನಕ ಎನ್ನ ನಿಷ್ಠನ ಮಾಡೊ 1 ಜಪವ ಮಾಡಲಿಲ್ಲ ತಪವ ಮಾಡಲಿಲ್ಲ ಉಪವಾಸವ ಕಾಣೆ ತಪಿಸುತಿರುವೆ ಎನ್ನ ಅಪರಾಧಗಳಿಗೆ ಕುಪಿತನಾಗದಿರೊ ದ್ವಿಪ್ರವರ ವರದ 2 ಧರ್ಮವ ಬಿಟ್ಟು ಸತ್ಕರ್ಮವ ತ್ಯಜಿಸುತ ದುರ್ಮಾರ್ಗದಲಿ ಬಲು ಹೆಮ್ಮೆ ಮಾಡಿದ ನನ್ನ ಹಮ್ಮು ಮುರಿದಿಹುದು ಬೊಮ್ಮ ಜನಕ ಸುಪ್ರಸನ್ನನಾಗೆಲೊ 3
--------------
ವಿದ್ಯಾಪ್ರಸನ್ನತೀರ್ಥರು
ದೀನ ಬಂಧು ಕರುಣಾಸಿಂಧು ನೀನೆ ಬಂದು ರಕ್ಷಿಸೆಂದು ಪ. ನಿತ್ಯ ಮಂಗಳಾತ್ಮ ನಿಜ ಭೃತ್ಯಪೋಷಣ ಪರಾತ್ಮ ನಿತ್ಯ ಕಾರುಣ್ಯ ಚಿತ್ತಜನಯ್ಯನೆ ಈ ಜಗತ್ತಿನೊಳು ನಿನ್ನ ಪೋಲ್ಪ ಉತ್ತಮ ವಸ್ತುವ ಕಾಣೆ ಸತ್ಯಭಾಮಾ ವರ ನಿನ್ನಾಣೆ 1 ಸರಸಿಜಾಸನ ತಾನು ಪರಮ ಭಕುತಿಯಿಂದ ಸಿರಿವರ ನಿನ್ನ ನಾನಾ ಪರಿಯಿಂದಲಿ ಶರದೃತುವಿಲಿ ಬಹುಧರವಾಗಿ ಪೂಜಿಸುವ- ದರಿತು ಪಾಡುವೆನೀಗ ಕರುಣಿಸೆನ್ನ ನೀ ಬೇಗ 2 ಮತ್ಸಕೇತುಪಿತ ಭಕ್ತವತ್ಸಲ ವೆಂಕಟನಾಥ ತತ್ಸದೆಂಬೋ ಮಂತ್ರಾಗಮ್ಯ ಕುತ್ಸಿತಾಗಮ್ಯ ಉತ್ಸವ ಕಾಲದಲಿ ಸಿರಿವತ್ಸ ಬೆನ್ಹಾನಿನ್ನನು ನಿ- ರ್ಮತ್ಸರದಿ ನಂಬಿದೆ ಗೋವತ್ಸವೈದುವಂತೆ ಬಾರೊ 3
--------------
ತುಪಾಕಿ ವೆಂಕಟರಮಣಾಚಾರ್ಯ
ದೀನನಾಥ ನೀನೆ ಪ್ರಭು ಧ್ಯಾನಮಾಳ್ಪೆ ಕಾಯೊ ಕರುಣಿ ಪ ಜಾಹ್ನವೀಜನಕ ಜನಾರ್ದನ ಜಾನಕೀಪ್ರಿಯ ಜಗದೊಡೆಯ ವೇಣುಗೋಪಾಲ ನಿನ್ನ ಧ್ಯಾನಾನಂದ ಪಾಲಿಸಭವ 1 ಕವಿದುಕೊಂಡು ದಹಿಸುತಿರುವ ತಾಪ ಭಯವ ತರಿದು ಸುವಿಚಾರ ಸುಜನಸಂಗ ಜವದಿ ನೀಡಿ ದಯದಿ ಪೊರೆ 2 ವಿಷಯದ್ವಾಸನೆ ಪರಿಹರಿಸಿ ಅಸಮಜ್ಞಾನ ಸೌಖ್ಯವಿತ್ತು ಒಸೆದು ನಿಮ್ಮ ವಿಮಲಚರಣ ಕುಸುಮದಾಸನೆನಿಸು ಶ್ರೀರಾಮ 3
--------------
ರಾಮದಾಸರು
ದೀನಪಾಲನ ನಾರಿಮಾನರಕ್ಷಣ ಸಿರಿ ಪ್ರಾಣರಮಣ ಹರಿ ನಾರಾಯಣ ಪ ಸೋಮಕಾಸುರಹರ ಕಾಮಿತ ಪರಿಹರ ಭೂಮಿಜೆಜನಕಜಯ ಜನಾರ್ದನ ಸ್ವಾಮಿ ಗೋವಿಂದ ಮೇಘಶ್ಯಾಮ ಮುಕ್ಕುಂದ ಭಕ್ತ ಪ್ರೇಮ ಆನಂದ ಹರಿ ನಾರಾಯಣ 1 ಪಾಷಾಣಪಾವನ ದೋಷನಿವಾರಣ ನಾಶರಹಿತ ಸುಪ್ರಕಾಶನೆ ಶೇಷಶಯನ ಗಿರಿವಾಸ ದಾಸರ ಪ್ರಾಣೇಶ ಕೇಶವ ಹರಿ ನಾರಾಯಣ 2 ವಾರಿಧಿಮಥನ ನಾರದವಂದನ ಕಾರುಣ್ಯನಿಧಿ ಕರುಣಾಂತರ್ಗತ ನಾರಸಿಂಹ ದಿವ್ಯಾಪಾರಮಹಿಮ ಸುರ ಘೋರನಿವಾರ ಹರಿ ನಾರಾಯಣ 3 ಶಾಂತ ಶಾಂತಾಕಾರ ಶಾಂತಜನಾಧಾರ ಶಾಂತಿ ಸದ್ಗುಣಧಾಮ ಶುಕ್ಲಾಂಬರ ಶಾಂತಮೂರುತಿ ಭೂಕಾಂತ ಪರಮವೇ ದಾಂತಾತೀತ ಹರಿ ನಾರಾಯಣ 4 ನಾಥ ಜಾನಕೀಪ್ರಾಣ ಭೂತಳಪಾವನ ದಾಥ ಜಗನ್ನಾಥ ವಿಶ್ವಾಂಬರ ಪಾತಕಹರ ವಿಧಿತಾತನೆ ನಿಜಸುಖ ದಾತ ಶ್ರೀರಾಮ ಹರಿ ನಾರಾಯಣ 5
--------------
ರಾಮದಾಸರು
ದೀನಬಂಧು ನೀ ದಯಾಸಿಂಧು ಪ ಆಪನ್ನ ಜನರನು ಮನ್ನಿಸಿ ಸಲಹಿ ಪ್ರಸನ್ನನಾಗುವೆ 1 ಕಂಜಲೋಚನ ನಿನಗಂಜಲಿ ಮುಗಿಯುವೆ ಕುಂಜರ ವರದ ಭುಜಂಗ ಶಯನ 2 ಘನ್ನಮಹಿಮ ಪ್ರಾಣನಾಥ ವಿಠ್ಠಲರಾಯ ಮನ್ನಿಸಿ ಪ್ರಸನ್ನನಾಗಿ ಎನ್ನಸಲಹೋ ಸ್ವಾಮಿ 3
--------------
ಬಾಗೇಪಲ್ಲಿ ಶೇಷದಾಸರು
ದೀನಬಂಧೋ ಹೇ ಭಲಾ ನೀನೆ ಸೈ ಸೈಯಲಾ ಪ ಪಾಸಲೆ ಶರಣರ ಪೊರೆವದಕಿನ್ನು ಬ್ಯಾಸರೇನಿಲ್ಲಲಾ 1 ದುಷ್ಟರ ದಂಡಿಸಲಾ ಮನಸಿಗೆ ಹುಟ್ಟಿದೆ ಕಲಕಲಾ 2 ಬಿಡದೆ ಶ್ರೀವಿಠಲಾ ಎನ್ನೊಳು ಮಾಡಿದೆಲೋ ಛಲಾ 3
--------------
ಶ್ರೀದವಿಠಲರು
ದೀನರಕ್ಷಕ ದೈತ್ಯ ಶಿಕ್ಷಕ ಏನ ಪೇಳಲಿ ಎಂತು ತಾಳಲಿ ಪ. ಹಗಲು ರಾತ್ರೆಯು ಹಲವು ಚಿಂತೆಯು ದ್ವಿಗುಣವಾಯಿತು ಧೈರ್ಯ ಕುಂದಿತು ನಗುವ ವಿಧಿಯನು ನೆನೆಯದಾಸೆಯ ಬಿಗುವಿನಿಂದ ಬೆಂಡಾದೆ ಕೇಶವ 1 ಸಂದ ಕಾಲವು ಸುಮ್ಮಗ್ಹೋಯಿತು ಮುಂದಿನವಧಿಯ ಮರವು ಮುಸುಕಿತು ಸುಂದರ ಸ್ಮಿತಾನಂದ ಮೂರುತಿ ಇಂದಿರೇಶ ನೀ ಎಂದು ತೋರುತಿ 2 ಗಣನೆಯಿಲ್ಲದಗಾಧ ತಪ್ಪನು ಎಣಿಸಲಾರೆನು ಎಂತು ನುಡಿವೆನು ವನಜನಾಭ ನೀನಾವ ಯುಕ್ತಿಯ ನೆನಸಿ ಸಲಹುವೆ ಎಂಬುದರಿಯೆನು 3 ಅಂತವಿಲ್ಲದಾ ಚಿಂತೆ ಎನ್ನನು ಭ್ರಾಂತಿಗೊಳಿಪುದು ಭಂಡು ಮಾಳ್ಪುದು ಕಂತುಜನಕ ಭೂಕಾಂತ ಕರುಣಿಸು ಸ್ವಾಂತರಂಗದಿ ನಿಂತು ನಿಯಮಿಸು 4 ನಿತ್ಯ ಸಲಹುವ- ನೆಂಬ ಬಿರುದ ನಾನರಿತು ನುಡಿದೆನು ಶಂಭುವಂದ್ಯ ಶೇಷಾದ್ರಿನಾಥ ಪಾ- ದಾಂಬುಜಾಶ್ರಿತನೆನಿಸು ಎನ್ನನು 5
--------------
ತುಪಾಕಿ ವೆಂಕಟರಮಣಾಚಾರ್ಯ
ದೀನರಿಗೆಲ್ಲಾ ಬಂಧು ಕೇಶವ ತಂದೆ ದೀನರಿಗೆಲ್ಲಾ ಬಂಧು ಪ ದಾನವಾಂತಕÀ ನಿನ್ನ ನೇಮಾನುಯಾಯಿಗೆ ಮಾನವ ಕೊಟ್ಟು ರಕ್ಷಿಪ ಬಂಧು ನೀನೇ ಅ ದೀನ ದ್ರೌಪದಿ ದೇವಿಗೇ ಅಕ್ಷಯವಿತ್ತು ಮಾನವ ಕಾಯ್ದೆ ನೀನೇ ಪ್ರಾಣವು ಹಾರುವಾಗ ಜಮಿಳ ಸ್ಮರಿಸಲು ಯೇನನ ಸಲಹೆ ಮೋಕ್ಷವನಿತ್ತ ಹರಿಯೇ 1 ದೀನ ದೇವಿಕಿ ದೇವಿಯ ಗರ್ಭದಿ ಬಂದು ದೈನ್ಯಳ ಸಲಹಿತಿದೆಯೋ ಹೀನ ವಾಲ್ಮೀಕನು ನಾಮವ ಭಜಿಸಲು ಹೀನನಿಗೊಲಿದು ಬುದ್ಧಿಯನಿತ್ತ ಹರಿಯೇ 2 ಸನ್ನುತ ನಮಿಸುವಂಥ ದಾಸರಿಗೆಲ್ಲ ಸನ್ನುತ ಸ್ಮರಿಸುವಂಥ ನಿತ್ಯ ಭಜಿಪ ದೀನರಿಗೆಲ್ಲ ಚನ್ನಕೇಶವ ಸ್ವಾಮಿ ಪೊರೆವಂಥ ಬಂಧೂ 3
--------------
ಕರ್ಕಿ ಕೇಶವದಾಸ
ದೀಪವಿದ ಬೆಳಗುವೆನು ದೇವ ನೀ ನೋಡುವ್ಯಾಪಿಸಿದ ತಿಮಿರವನು ಪರಿಹರಿಸಿ ರಂಜಿಸುವ ಪಸಕಲ ದೇವಾತ್ಮಕದ ತಿಲ ತೈಲವಾಗಿರಲುಅಕಲುತ ವರ್ತಿುಂ ಮಿಳಿತವಾಗಿ ಪ್ರಕಟವಾಗಿರುವಗ್ನಿ ಪ್ರಭೆಯೊಡನೆ ಸ್ಫುಟವಾಗಿಮುಖ ಸಮೀಪದಿ ಮೂರು ಲೋಕಗಳ ಬೆಳಗುತಿಹ 1ಜ್ಞಾನವೇ ಗೋಘೃತವು ಮೂರ್ತಿಗಳೆ ವರ್ತಿಗಳುನೀನಿದಕೆ ಮೂಲ ಕಾರಣವಸ್ತುವೂಸಾನುಕೂಲದಿ ಗುಣಗಳೊಂದಾಗಿ ಚಿತ್ತಿನೊಳುಲೀನವಾಗಿರೆ ನಿರ್ಮಲಾಕೃತಿಯ ತಾಳಿರುವ 2ಎನ್ನ ಜೀವವೆ ದೀಪ ನಿನ್ನ ಪಾದವೆ ಬ್ರಹ್ಮಭಿನ್ನ ಭಾವವನುಳಿದು ಪೂರ್ಣರೂಪದಲಿನಿನ್ನೊಳಗೆ ನಿಲಿಸೆನ್ನ ಪುಣ್ಯತಮವೆಂದೆನಿಪಸ್ವರ್ಣಮಯ ತಿರುಪತಿಯ ವಾಸ ವೆಂಕಟರಮಣ 3 ಓಂ ಸಚ್ಚಿದಾನಂದವಿಗ್ರಹಾಯ ನಮಃ
--------------
ತಿಮ್ಮಪ್ಪದಾಸರು