ಒಟ್ಟು 7812 ಕಡೆಗಳಲ್ಲಿ , 132 ದಾಸರು , 3804 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಾಳೆ ಬರುವೆನೆಂದು ಹೇಳಿ ಮಧುರೆಗೆ ಪೋದ ಬ-ಹಳದಿನವಾಯಿತಲ್ಲೊ ಉದ್ಧವ ಪ.ಕೇಳಿದ್ಯಾ ನೀಬಾಹವೇಳೆಯಲಿ ಕೃಷ್ಣನಆಲೋಚನೆಯೊಳಿದ್ದೆವೊ ಅ.ಪ.ಪಳ್ಳಿವಾಸಿಗಳು ನಾವು ಪರಿಪರಿ ಅಲಂಕರಿಸಿ ಒಲಿಸಿಕೊಂಬುದನರಿಯೆವೊಗೊಲ್ಲ ಸತಿಯರು ಸದಾ ಗೋರಕ್ಷಕರು ಮೈಯ ಹೊಲೆತೊಳೆಯಲರಿಯೆವೊಬಲ್ಲಿದನ ಸಹವಾಸ ಮಾಡ್ಯವನ ಮಹಿಮೆಯನೆಲ್ಲ ತಿಳುಹಿಸಿಕೊಂಡೆವೊಚಲ್ಲೆಗಂಗಳ ಚಪಲೆಯರು ಮಧುರೆ ನಾರಿಯರ ಒಲಪಿಗೆ ನಾವೆದುರೇನೊ ? 1ಚೊಕ್ಕನಾದನಿತ್ಯತೃಪ್ತನಿಗೆ ಬೆಣ್ಣೆ ಕಳವಿಕ್ಕಿದೆವಲ್ಲವೊಸಿಕ್ಕಿಸಿಕೊಂಡು ರಾಸಕ್ರೀಡೆಯೊಳವಗೆ ಸೊಕ್ಕಿನುಕ್ತಿಯ ನುಡಿದೆವೊಕಕ್ಕುಲಾತಿಲಿ ಕಾಮಾಸಕ್ತರಿಗಿವ ನಮಗೆ ದಕ್ಕಿದನು ಎಂತಿದ್ದೆವೊವಕ್ರಗತಿಯಾಗಿ ಅಕ್ರೂರ ಬಂದ್ಯೆಮ್ಮ ಚಕ್ರಧರನಗಲಿಸಿದನೊ 2ಧೀರಸ್ವರಮಣದೋಷದೂರನ್ನ ಅಲ್ಪ ಬಹುಜಾರನೆಂದರಿತೆವಲ್ಲೊಆರಾರ ಮನಕಿನ್ನು ತೋರದವನ ನಮ್ಮ ಓರಗೆಯವನೆಂದರಿದೆವೊಮುರಾರಿಅಜಪರಿವಾರದೊಡೆಯನ ನಾವು ಪೋರನೆಂದಾಡಿಸಿದೆವೊನಾರಿಯರು ನಾವಲ್ಪ ದಾರಿದ್ರ್ಯ ದಷ್ಟರಿಗೆ ಶ್ರೀರಮಣನೆಂತೊದಗುವನೊ 3ನಿಧಿಯ ಬದಿಲಿದ್ದರು ವಿಧಿಸುವುದನರಿಯದೆ ಮದಡೆಯರಾದೆವೊಮದನನಾಟಕೆ ಮನವಿಕ್ಕಿ ಅವನಿಂದೊಂದು ತತ್ವ ತಿಳಿಯಲಿಲ್ಲೊಚದುರೆಯರು ನಮ್ಮ ಬಿಟ್ಟು ಕದಲನಿವನೆಂತೆಂಬ ಮದದಿ ಮೋಸಹೋದೆವೊಮಧುರೆಯಿಂದೆಮ್ಮ ತಮ್ಮ ಹೃದಯದೊಳಿಪ್ಪನೆಂದುಚದುರ ಪೇಳಿಹನಂತೆಲೊ 4ಮತಿ ತಪ್ಪಿದೆವೊ ನಾವು ಸತಿಯರೆಲ್ಲೊಂದಾಗಿ ರಥವ ನಿಲಿಸದೆ ಹೋದೆವೊಹಿತರಾರು ನಮಗೆಸಾರಥಿನಿನ್ನ ಸಹಾಯ ದೊರೆತರೆತನವ ಮಾಳ್ಪೆವೊಪಥವ ತೋರಿಸೊ ನಮಗೆ ಮುಂದೆಮ್ಮ ಚೆಲ್ವ ಶ್ರೀಪತಿಯು ಬಂದೊದಗುವಂತೆಗತಿಯಾರೊ ಅವನ್ಹೊರತು ಗೋಪಾಲವಿಠಲ ಅಚ್ಯುತನ ಮಹಿಮೆ ಕಾಣೆವೊ 5
--------------
ಗೋಪಾಲದಾಸರು
ನಿಜವಿರಬೇಕು ಸಜ್ಜನರಿಗೆ ಒಂದು ಪಅಜಜನಕಾನೆ ಈ ತ್ರಿಜಗಕೆ ಒಡೆಯನೆಂದು ಅ.ಪಉದಯಾಸ್ತಮಾನ ಮಾಡುವ ವ್ಯಾಪಾರವುಪದುಮಾಕ್ಷ ಕೃಷ್ಣನ ಸೇವೆಯೆಂದುಸುದತಿಯೊಡನೆ ಕೂಡಿ ಮಧುರ ಮಾತುಗಳಾಡಿಮಧುವೈರಿಚರಿತೆಯ ಮುದದಿ ಕೇಳುವಂಥ1ಮಡದಿ ಮಕ್ಕಳು ತನ್ನ ಒಡಹುಟ್ಟಿದವರೆಲ್ಲಒಡೆಯನ ಅಡಿಗೆ ಸೇವಕರು ಎಂದುದೃಢದಿ ತಿಳಿದು ಮೃಡನೊಡೆಯನ ಪಾದವಬಿಡದೆ ಭಜಿಸುವಂಥ ದೃಢ ಬುದ್ಧಿ ಎಂಬುವ 2ಮಾತಾಪಿತರು ಸುತ ಭ್ರಾತರಿಷ್ಟಾಬಂಧುವ್ರಾತರೆಲ್ಲರು ಹರಿಗೆ ದೂತರೆಂದುಮಾತುಳಾಂತಕತಂದೆಮುದ್ದುಮೋಹನವಿಠಲಖ್ಯಾತಾನೆಂದು ಪ್ರೀತಿ ಪೊಂದುವುದಕ್ಕೆ 3
--------------
ತಂದೆ ಮುದ್ದುಮೋಹನ ವಿಠಲರು
ನಿತ್ಯಅಂಗ ಸಂಗ ಕೊಟ್ಟನೆ ದೇವಿಚಿತ್ತ ಹರುಷವ ಮಾಡಿ ಇಟ್ಟ£ ಪ.ಶಾಂತ ಧರ್ಮನಲ್ಲೆ ನಿಂತಾನೆನಿಜ ಕಾಂತೆ ರಮಿಸಿ ಸುಖವಂತನೆ 1ಭೀಮ ಕಾಮಿಸಿಯನ್ನ ಬೆರೆದಾನುಅತೀವಾನಂಗ ಸುಖ ಸುರಿದಾನೆ 2ವೀರ ಪಾರ್ಥನಲ್ಲೆ ಇರುವೋನುನಿಜ ನಾರಿಯ ರಮಿಸಿ ಸುಖಿಸುತಿಹನು 3ಸುಂದರ ನಕುಲ ನಲ್ಲಿರುವೋನೆಲೇಶಕುಂದು ಇಲ್ಲದವಳ ಬೆರೆಯೋನು 4ನೀತಿಲೆ ಸಹದೇವನಲ್ಲಿದ್ದನಿಜ ಪ್ರೀತಿ ಬಡಿಸಿದ ನಾರಿಗೆ ಮುದ್ದ 5ಭೀಮನ ಮಹಿಮೆ ಕೇಳುತಲಿದ್ದಜನ ಕಾಮಪೂರ್ಣರಾಗಿ ಹರಿಸಿದ 6ಮತ್ತೆ ಭೀಮ ದ್ರೌಪತಿರತಿಇದಕೆನಿತ್ಯರಾಮೇಶ ಆಗುವ ಬಹು ಪ್ರೀತಿ 7
--------------
ಗಲಗಲಿಅವ್ವನವರು
ನಿಂದಕರಿರಬೇಕಿರಬೇಕುಹಂದಿಯಿದ್ದರೆ ಕೇರಿ ಹೇಗೆ ಶುದ್ಧಿಯೋ ಹಾಗೇ ಪ.ಅಂದಂದು ಮಾಡಿದ ಪಾಪವೆಂಬ ಮಲತಿಂದು ಹೋಗುವರಯ್ಯ ನಿಂದಕರುವಂದಿಸಿ ಸ್ತುತಿಸುವ ಜನರೆಲ್ಲರು ನಮ್ಮಪೊಂದಿಗ ಪುಣ್ಯವನ್ನೆಯ್ಯುವರಯ್ಯ 1ದುಷ್ಠ ಜನರು ಈ ಸೃಷ್ಟಿಯೊಳಿದ್ದರೆಶಿಷ್ಟ ಜನರಿಗೆಲ್ಲ ಕೀರ್ತಿಗಳೂಇಷ್ಟಪ್ರದ ಶ್ರೀ ಕೃಷ್ಣನೆ ನಿನ್ನೊಳುಇಷ್ಟೇ ವರವನು ಬೇಡುವೆನಯ್ಯ 2ದುರುಳ ಜನಂಗಳು ಚಿರಕಾಲ ಇರುವಂತೆಕರವ ಮುಗಿದುವರ ಬೇಡುವೆನುಪರಿಪರಿ ತಮಾಸಿಗೆ ಗುರಿಯಿಲ್ಲದೆಪರಮದಯಾನಿಧಿ ಪುರಂದರವಿಠಲ3
--------------
ಪುರಂದರದಾಸರು
ನಿಂದ್ಯನಾಡಲಿಕ್ಕೆ ನೀನು ಬಂದೆಯೇನಯ್ಯ ಕೃಷ್ಣವಂದಿಸಿ ಭಕ್ತರು ಕರೆದರೂ ನೀನು ಹಿಂದಕ್ಕೆ ಹೋಗುವಿ ಪ.ಅಂದು ಅಹÀಲ್ಯಾದೇವಿ ಬಿಟ್ಟು ಒಂದೆರಡು ದಿವಸÀ ಕೃಷ್ಣಬಂದವನಲ್ಲೋ ತ್ವರೆಯಛಂದಾಗಿ ಹೇಳಯ್ಯ ನಮಗೆ 1ಒಂದಾರು ತಿಂಗಳದಿವಸ ಕಂದ ದಣಿಯೆ ಕರುಣಿಸಬಾರದೆಬಂದದ್ದೇನು ಇಂಥ ತ್ವರೆಯಚಂದಾಗಿ ಹೇಳಯ್ಯ ನಮಗೆ 2ಹಣ್ಣು ಹಸಿರು ಎಲೆ ತಿಂದು ಸಣ್ಣ ಮಾಡಿ ಶರೀರವನುಬಣ್ಣಿಸಿ ಭಕ್ತರು ಕರೆದರೆನೀನು ಕಣ್ಣಿಲೆ ನೋಡೆಲೋಅವರ3ಆನೆ ಜನ್ಮ ಬಂದು ರಾಯ ನಾನಾ ದುಃಖ ಬಡಲು ತಾನುನೀನು ಮುಂದೆ ನೋಡಿದೆ ಸಾವಿರ ವರುಷ ಇನ್ನೇನುದಯವಯ್ಯ ಅವನಿಗಿನ್ನೇನು ದಯವಯ್ಯ 4ತಂದೆ ರಾಮೇಶನ ಮನೆಗೆ ಬಂದಿದ್ದರೆ ಬಹಳ ದಯವುಒಂದು ನೆಗಳಿ ಸಾವಿರ ವರುಷಹಿಂದಕ್ಕೆ ದಣಿದೆಲ್ಲೊ ಕೃಷ್ಣ 5
--------------
ಗಲಗಲಿಅವ್ವನವರು
ನಿನಗೆ ನಾ ಬಯ್ಯಲಿಲ್ಲೊ ಕೃಷ್ಣಯ್ಯಅಣುಗರು ಹುಯ್ಯಲಿಡುವರನು ಬಯ್ದೆ ಪ.ಮರುಳು ಮಗನೆ ನಿನಗೆ ಗೋಗಾಯ್ವದುರುಳರ ಸಂಗ ಸೊಬಗೆತರಳನಿನಗೆ ಕಳ್ಳ ಹರಳಿಗನೆಂದರೆಬೆರಳಿಟ್ಟೆ ಕಿವಿಯೊಳಗೆ ಹರಿಹರಿ 1ಠವಳಿಕಾರರು ನಾರೇರು ನಿನ್ನೊಳು ಕಂದಹವ್ವಳಿಸುತಿಹ ಜಾರೇರುಗೋವಳರಾಯನೆ ನಿನಗವರ ಸಂಗತಿ ಹೀನಪವಳ ಚೆಂದುಟಿಯ ಕೂಸೆ ಹರಿಹರಿ 2ಹುಸಿನುಡಿದರು ತಾರೊ ನನ್ನ ಕಂದಕೃಶನಾದೆ ಮುದ್ದು ತಾರೊನಸುನಗೆಯಲಿ ಮುನಿಯದೆ ಮನೆಯೊಳಗಿರೊಪ್ರಸನ್ವೆಂಕಟ ಕೃಷ್ಣಯ್ಯ ಹರಿಹರಿ 3
--------------
ಪ್ರಸನ್ನವೆಂಕಟದಾಸರು
ನಿನ್ನ ಕೊಳಲಿಗೆ ಮೋಹಿಸಿ ನಿನ್ನ ಕೊಳಲಿಗೆಅನ್ಯ ವಿಷಯಜರಿದುಬಂದರೆ ಇನ್ನು ಯಾತಕೆ ಬಂದಿರೆÉಂದಿಪ.ಅತ್ಯಂತ ಕಾಳ ರಾತ್ರಿಯೊಳುಮತ್ತೆ ಬಂದ ಬಾಲೆಯರಿಗೆಉತ್ತಮ ಉತ್ತಮವ ನೋಡಿಮತ್ತೆ ಮನೆಗೆ ಪೋಗಿರೆಂದಿ 1ಪ್ರೀತಿ ಪತಿಗಳ ಬಿಟ್ಟು ನೀವುಯಾತಕಿಲ್ಲೆ ಬಂದಿರೆಂದಿಮಾತುಗಳನು ಆಡಿ ಪೋಗಿರಿಘಾತುಕ ಪುರುಷನಯ್ಯ ಕೃಷ್ಣ 2ಭರದಿ ಬಂದ ಬಾಲೆಯರಿಗೆತಿರುಗಿ ಪೋಗಿರೆಂದು ನುಡಿದಿಕರಗಲಿಲ್ಲ ಕಠಿಣ ಹೃದಯಕರೆವರ್ಹ್ಯಾಂಗ ಪತಿಗಳವರ 3ಜಾರರಾಜ ನಿನಗೆ ಒಂದೂತೋರದಿದ್ದ ಭಾವವೇನುಯಾರ್ಯಾರ ಅಂಜಿಕೆ ಇಲ್ಲವೆಂದುನಾರಿಯರಿಗೆ ಖಿನ್ನ ಬಡಿಸಿದೆಲ್ಲೊ 4ಇಂದುರಾಮೇಶ ಬಿಟ್ಟರೆÉ ನೀನುಹೊಂದೋದಿಲ್ಲ ಪತಿಗಳ ಘನ್ನಚಂದಾಗಿ ಬೆರಿಯೆ ಚಕೋರನ್ನಇನ್ನರೆ ರಮಿಸಿದೆಲ್ಲೊ ಚನ್ನ 5
--------------
ಗಲಗಲಿಅವ್ವನವರು
ನಿನ್ನ ನಂಬಿದೆ ನೀರಜನಯನಎನ್ನ ಪಾಲಿಸೊಇಂದಿರೆರಮಣಪಮುನ್ನ ಪಾಂಚಾಲಿಯ ಮೊರೆಯ ಲಾಲಿಸಿ ಕಾಯ್ದಪನ್ನಗಶಯನ ನೀಪರಮಪುರುಷನೆಂದುಅ.ಪಹರಿಸರ್ವೋತ್ತಮನಹುದೆಂಬ ಬಾಲಕನಹಿರಣ್ಯಕಶಿವು ಪಿಡಿದು ಬಾಧಿಸಲು ||ನರಹರಿ ರೂಪಿಂದಲವನ ವಕ್ಷವ ಸೀಳ್ದೆಪರಮವಿಶ್ವಾತ್ಮಕನಹುದೆಂದು ಮೊರೆ ಹೊಕ್ಕೆ1ಪಾದವ ಪಿಡಿದು ನೀರೊಳಗೆಳೆದ ನಕ್ರನಬಾಧೆಗಾರದೆ ಕರಿಮೊರೆಯಿಡಲು ||ಆದಿ ಮೂರುತಿ ಚಕ್ರದಿಂದ ನಕ್ರನ ಕೊಂದವೇದಾಂತವೇದ್ಯ ಅನಾಥ ರಕ್ಷಕನೆಂದು 2ಇಳೆಗೊಡೆಯನ ತೊಡೆ ನಿನಗೇತಕೆಂದು ಆಲಲನೆಕೈ ಪಿಡಿದೆಳೆಯಲರ್ಭಕನ ||ನಳಿನಾಕ್ಷ ನಿನ್ನನೆದೆಯೊಳಿಟ್ಟು ತಪವಿರ್ದಬಲು ಬಾಲಕಗೆ ಧ್ರುವ ಪಟ್ಟಿಗಟ್ಟಿದನೆಂದು 3ಸುದತಿಗೌತಮಸತಿ ಮುನಿಶಾಪದಿಂದಲಿಪಢದಿ ಪಾಷಾಣವಾಗಿ ಬಿದ್ದಿರಲು ||ಮುದದಿಂದಲಾಕೆಯಮುಕ್ತಮಾಡಿದಯೋಗಿಹೃದಯ ಭೂಷಣ ನಿನ್ನ ಪದ ವೈಭವವ ಕಂಡು 4ಪರಮಪಾವನೆ ಜಗದೇಕಮಾತೆಯನುದುರುಳರಾವಣ ಪಿಡಿದು ಕೊಂಡೊಯ್ಯಲು ||ಶರಣೆಂದು ವಿಭೀಷಣ ಚರಣಕೆರಗಲಾಗಿಸ್ಥಿರಪಟ್ಟವನು ಕೊಟ್ಟ ಜಗದೀಶ ನೀನೆಂದು 5ಅಂಬರೀಷನೆಂಬನೃಪತಿದ್ವಾದಶಿಯನುಸಂಭ್ರಮದಿಂದ ಸಾಧಿಸುತಿರಲು ||ಡೊಂಬೆಯಿಂದದೂರ್ವಾಸಶಪಿಸಲಾಗಿಬೆಂಬಿಡದಲೆ ಚಕ್ರದಿಂದ ಕಾಯ್ದವನೆಂದು 6ಧರೆಯೊಳು ನಿಮ್ಮ ಮಹಿಮೆಯ ಪೊಗಳ್ವಡೆಸರಸಿಜೋದ್ಭವ-ಶೇಷಗಸದಳವು ||ಸ್ಮರಣೆಮಾತ್ರದಿ ಅಜಾಮಿಳಗೆ ಮೋಕ್ಷವನಿತ್ತಪುರಂದರವಿಠಲ ಜಗದೀಶ ನೀನೆಂದು7
--------------
ಪುರಂದರದಾಸರು
ನಿನ್ನ ನಂಬಿದೆನೊ ನೀಯೆನ್ನ ಸಲಹಯ್ಯಎನ್ನ ಗುಣದೋಷಗಳ ಎಣಿಸಬೇಡಯ್ಯ ಪಬಾಲ್ಯದಲಿ ಕೆಲವು ದಿನ ಬಿರಿದೆ ಹೋಯಿತು ಹೊತ್ತುಮೇಲೆ ಯೌವನಮದದಿ ಮುಂದರಿಯದೆ ||ಸ್ಥೂಲ ಸಂಸಾರದಲಿ ಸಿಲುಕಿ ಬಳಲಿದೆ ನಾನುಪಾಲಿಸೈ ಪರಮಾತ್ಮ ಭಕುತಿಯನು ಕೊಟ್ಟು 1ಆಸೆಯೆಂಬುದು ಅಜನ ಲೋಕ ಮುಟ್ಟುತಲಿದೆಬೇಸರದೆ ಸ್ತ್ರೀಯರಲಿ ಬುದ್ದಿಯೆನಗೆ ||ವಾಸುದೇವನೆ ನಿನ್ನ ಪೂಜೆಗೆಯ್ದವನಲ್ಲಕೇಶವನೆ ಕ್ಲೇಶವನು ನಾಶ ಮಾಡಯ್ಯ 2ಈ ತೆರದಿ ಕಾಲವನು ಕಳೆದೆ ನಾನಿಂದಿರೇಶಭೀತಿ ಮೋಹದಿ ಙ್ಞÕನರಹಿತನಾದೆ ||ಮಾತೆ ಶಿಶುವನು ಕರೆದು ಮನ್ನಿಸುವ ತೆರನಂತೆದಾತಶ್ರೀಪುರಂದರವಿಠಲ ದಯಮಾಡೈ3
--------------
ಪುರಂದರದಾಸರು
ನಿನ್ನ ನಾಮದ ಸವಿ ಎಲ್ಲರರಿಯರಂತೆಬಲ್ಲವರೆ ಬಲ್ಲರಂತೆನಿನ್ನ ನಾಮದ ಸವಿ ಎಲ್ಲರರಿಯರಂತೆ ಪಸ್ಥಿರಪದವನುಭವಿ ಧ್ರುವನು ಬಲ್ಲನಂತೆಪರಮಕಂಟಕ ಗೆದ್ದವರಪ್ರಹ್ಲಾದ ನಾಮನೆಲೆ ತಿಳಿದನಂತೆಸ್ಥಿರಪಟ್ಟ ಪಡೆದಂಥ ವರವಿಭೀಷಣನುಸರಿಯಾಗಿ ನಾಮದ ಸವಿಯುಸುರಿದನಂತೆ 1ಅಂಬರೀಷನೆಂಬ ನೃಪನು ಬಲ್ಲನಂತೆಪರಮಪಾವನಪಾದಅಂಬುಜಾಕ್ಷಿಯಳಾದ ಅಹಲ್ಯೆ ಬಲ್ಲಳಂತೆಅಂಬುಜಾಕ್ಷನ ಪಾದಸಂಭ್ರಮದಸವಿಕುಂಭಿನಿಯೊಳುಕರಿತುಂಬಬಲ್ಲನಂತೆ2ಪರಮಜ್ಞಾನಿಯಾದ ವಿದುರ ಬಲ್ಲನಂತೆವರನಾಮದ ಸವಿತರುಣಿ ಪಾಂಚಾಲಿಯು ಅರಿತುಕೊಂಡಳಂತೆಪರಿಯಲಿಅವರಧರ್ಮಜನುನಿರುತ ನಾಮಾಮೃತ ಅರಿತುಸುರಿದನಂತೆ 3ತುಂಬುರಾದಿಮುನಿಸುರರು ಬಲ್ಲರಂತೆವಿಮಲನಾಮದ ಸವಿಅಂಬುಜಾಸನಕಂಡು ಪೊಗಳುತಿರುವನಂತೆಕುಂಭಿಜಾತೆಸಿರಿಅಂಬರೇಶನ ಸುತೆಎಂಬುವರು ನಿನ್ನ ಅಂದ ಬಲ್ಲರಂತೆ 4ಚರಣದೆಡೆಯಲ್ಲಿರ್ದ ಗರುಡ ಬಲ್ಲನಂತೆರಾಗರಹಿತನಾಗವರಹನುಮಂತನು ಪೂರ್ಣಬಲ್ಲನಂತೆಪರಿಯೇನಿರುವುದು ಅರಿತು ಭಜಿಪೆ ನಿನ್ನಕರುಣದೆನತು ತೋರು ರಾಮನಾಮದ ಸವಿ 5
--------------
ರಾಮದಾಸರು
ನಿನ್ನ ನಾಮವೆ ಎನಗೆ ಅಮೃತಾನ್ನವು |ಕೇಶವನೆಂಬ ನಾಮ ಕರಿದ ಹೂರಣಗಡಬು |ನಾರಾಯಣನ ನಾಮ ನೊರೆಹಾಲು ಸಕ್ಕರೆ |ಯದುಪತಿಯೆಂಬ ನಾಮ ಎಣ್ಣೂರಿಗೆಯ ರಾಶಿ |ದೇವಕಿಸುತನ ನಾಮ ವಧ್ಯನ್ನದಾ ಮುದ್ದೆ |ಗರುಡವಾಹನನ ನಾಮ ಘೃತಪಯೋದಧಿತಕ್ರ |ಈ ಪರಿಯ ನಾಮಾವಳಿಯನು ಸವಿದುಂಡು |
--------------
ಪುರಂದರದಾಸರು
ನಿನ್ನ ಬೆನ್ನುಬಿದ್ದು ಧನ್ಯನಾದೆನು ಪನ್ನಂಗಶಯನನಿನ್ನ ಬೆನ್ನುಬಿದ್ದು ಧನ್ಯನಾದೆನು ಪಇನ್ನು ಭವದೊಳು ಅನ್ಯರಂಜಿಕೆಯನ್ನು ತಪ್ಪಿಸಿನಿನ್ನ ಕರುಣವನು ತೋರಿದಿ ಸನ್ನುತಾಂಗರೂಢಿಯೊಳು ನಾನು ಮೂಢನಾದೆನು ಧೃಢದಿ ನಿನ್ನಗಾಢಮಹಿಮೆಯ ಅರಿಯದಲೆ ಇನ್ನು ಬಡಬಡಿಸಿಕೊಂಡುಕೇಡಿಗೊಳಗಾಗಿ ಕೆಡುತಲಿರ್ದೆನು ಬಿಡದೆ ಪರರನುಬೇಡಿ ಆಸೆಯಿಂ ಭಂಗಮಾಡುತ ಖೋಡಿಯಪ್ಪುದ ಕಂಡು ನೀನೆಮೂಢನೊಳು ದಯಮಾಡಿ ಕರುಣವನೀಡಿ ಕುರುಹನು ತೋರ್ದಿ ದೇವ 1ಹೊಂದಿಕೊಂಡೀ ಮಾಯಾಜಾಲವನು ಒಂದನರಿಯದೆಮಂದಮತಿಯಾಗಿ ಕೆಡುತಲಿ ನಾನುಬಂಧನದ ಭವದ ಸಿಂಧುವಿನೊಳಗಾಡುತಿರ್ದೆನುನೊಂದು ಬೆಂದೆನುಮಂದಭಾಗ್ಯನ ಮಂದಮತಿಗಳುಒಂದು ಉಳಿಯದಂತೆ ಮಾಡೆನ್ನ್ಹøದಯ ಮಂದಿರದೊಳುನಿಂದುನೀನೆ ಮುಂದಕ್ಹಾಕಿದಿ ಮಂದರೋದ್ಧಾರ2ಮರುಳತನವನು ದೂರಮಾಡಿದಿ ಹರಿಯೆ ಎನ್ನಸರುವ ದುರ್ಗುಣ ತರಿದು ಹಾಕಿದಿ ಕರುಣದೆನ್ನದುರಿತಪರ್ವತಮೂಲ ಕಿತ್ತಿದಿ ಮರೆವು ಹರಿಸಿದಿಪರಮಕರುಣಾಕರನೆ ನಿನ್ನುಪಕಾರ ಮರಿಯೆನಾವಕಾಲದಿಪರರ ಬೇಡದಪದವಿನೀಡಿದಿಶರಣಜನಪ್ರಿಯ ಸಿರಿಯರಾಮ 3
--------------
ರಾಮದಾಸರು
ನಿನ್ನ ಮಗನ ಮುದ್ದು ನಿನಗಾದರೆಗೋಪಿಆರಿಗೇನೆ? |ಎನ್ನ ಕೂಡ ಸರಸವಾಡಲು ಓರಗೆಯೇನೆ? ಪಹೆಚ್ಚಿನ ಸತಿಯರ ಕಚ್ಚೆಯ ಬಿಚ್ಚುವ ಹುಚ್ಚನೇನೆ?-ಅಮ್ಮ |ಇಚ್ಛೆಯರಿತು ನಮ್ಮ ಗಲ್ಲವ ಕಚ್ಚುವ ನೆಚ್ಚನೇನೆ? 1ಚೆಂಡೆಂದು ಮಿಂಡೆಯರು ದುಂಡು ಕುಚವ ಪಿಡಿವ ಗಂಡನೇನೆ? |ಕಂಡಕಂಡಲ್ಲಿ ಉದ್ದಂಡವ ಮಾಡುವ ಪುಂಡನೇನೆ 2ಹೊಸ ಕೂಟವರಿತು ಹಾಸಿಗೆಯನು ಹಾಕುವ ಶಿಶುವು ಏನೆ? |ಅಸಹಾಯ ಶೂರ ಶ್ರೀ ಪುರಂದರವಿಠಲರಾಯ ಕಾಣೆ 3
--------------
ಪುರಂದರದಾಸರು
ನಿನ್ನ ಮಗನ ಮುದ್ದು ನೀನೆ ಲಾಲಿಸಮ್ಮಚಿನ್ನನೆಂದಾಡಿಸಮ್ಮಬಣ್ಣದ ಬಾಲೇರ ಭೋಗಿಪ ಚದುರತೆಸಣ್ಣವರ ಸರಸೇನಮ್ಮ ಪ.ತಾಳಬೇಕೆಷ್ಟೆಂದು ಗಾಡಿಕಾರನ ಮಾತಹೇಳಲಂಜುವೆವಮ್ಮ ನಮ್ಮಾಳುವ ಇನಿಯರ ವೇಡಿಸಿ ನಮ್ಮ ಲಜ್ಜೆಹಾಳುಮಾಡಿ ಹೋದನೆ 1ಕೃಷ್ಣ ಸಿಕ್ಕಿದನೆಂದು ನಮ್ಮ ಮಕ್ಕಳ ನಾವೆದಟ್ಟಿಸಿ ಕೊಲುವೆವಮ್ಮ ಈದೃಷ್ಟಿ ಮಾಯದಜಾಲನೋಡೆ ನಂದನರಾಣಿಸೃಷ್ಟೀಶರಿಗೆ ತೀರದು 2ಕನ್ನೆಯರೊಗ್ಗೂಡಿ ಕಳ್ಳನ ಕೈಕಟ್ಟಿನಿನ್ನೆಡೆಗೆ ತರುತಿದ್ದೆವೆಕಣ್ಣಿಯ ಕೊರಳಿನ ಕರುವೆಂದು ಜನವಾಡೆಖಿನ್ನರಾಗಿ ಹೋದೆವೆ 3ಆವಾವ ಕೇರೀಲಿಜಾರಚೋರನ ಮಾತುಆವಾವ ಮನೆಗಳಲ್ಲಿಭಾವೆಯರೆಳೆ ಮೊಲೆ ಮೂಗ ಚಿವುಟಿ ಜಾವಜಾವಕಂಜಿಸಿಕೊಂಬನೆ 4ನಾವು ಮಾಡಿದ ಸುಕೃತವೆಂತೊ ಗೋಪಾಲರೇಯಭಾವಕೆ ಮೆಚ್ಚಿದನೆದೇವರ ದೇವ ಪ್ರಸನ್ವೆಂಕಟೇಶಜೀವಕೆ ಹೊಣೆಯಾದನೆ 5
--------------
ಪ್ರಸನ್ನವೆಂಕಟದಾಸರು
ನಿನ್ನ ಮಗನ ಲೂಟಿ ಘನವಮ್ಮ-ಕರೆದು |ಚಿಣ್ಣಗೆ ಬುದ್ಧಿಯ ಹೇಳೇ ಗೋಪಮ್ಮ ಪಶಿಶುಗಳ ಕೈಲಿದ್ದ ಬೆಣ್ಣೆಗೆ ಉಳಿವಿಲ್ಲ |ಪಸು-ಕರುಗಳಿಗೆ ಮೀಸಲುಗಳಿಲ್ಲ ||ಮೊಸರ ಮಡಕೆಯಲಿಮಾರಿಹೊಕ್ಕಂತಾಯ್ತು |ಶಶಿಮುಖಿಯರು ಗೋಳಿಡುತಿಹರಮ್ಮ1ಮರೆತು ಮಲಗಿದ್ದವರ ಮೊಲೆಗಳ ತಾನುಂಬ |ಕಿರಿಯ ಮಕ್ಕಳಿಗೆ ಮೊಲೆಹಾಲಿಲ್ಲವೊ ||ಹೊರಗೆ ಲೂಟಿ ಒಳಗೆ ಈ ಲೂಟಿ-ಎ-|ಚ್ಚರದ ಬಟ್ಟೆಯ ಕಾಣೆವಮ್ಮ ಗೋಪಮ್ಮ 2ಊರೊಳಗಿರಲೀಸ ಊರ ಬಿಟ್ಟು ಹೋಗಲೀಸ |ಈರೇಳು ಭುವನಕೆ ಒಡೆಯನಂತೆ ||ವಾರಿಜನಾಭಶ್ರೀ ಪುರಂದರವಿಠಲನ |ಕೇರಿಯ ಬಸವನ ಮಾಡಿ ಬಿಟ್ಟೆಯಮ್ಮ 3
--------------
ಪುರಂದರದಾಸರು